Homeಮುಖಪುಟಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ‘ಅಮ್ಮ’

- Advertisement -
- Advertisement -

ದಶಕಗಳ ಹಿಂದೆ ಅಮ್ಮ ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇರುವಂತಹ ಸಿನಿಮಾಗಳು ತಯಾರಾಗುತ್ತಿದ್ದವು. ಅಂತಹ ಪಾತ್ರಗಳು ಇಂದಿಗೂ ನಮಗೆ ನೆನಪಾಗುತ್ತವೆ. ಇದೀಗ ಗ್ಲಾಮರ್ ಮಧ್ಯೆ ಅಮ್ಮನ ಪಾತ್ರಗಳು ಕಣ್ಮರೆ ಆಗುತ್ತಿವೆ. ಅಮ್ಮನ (10) ದಿನದ ನಿಮಿತ್ತ ಒಂದು ವಿಶೇಷ ಲೇಖನ.

ಮೊನ್ನೆಯವರೆಗೂ ಸ್ಯಾಂಡಲ್‍ವುಡ್‍ನಲ್ಲಿ ಮಚ್ಚು ಮತ್ತು ಮದರ್ ಸೆಂಟಿಮೆಂಟ್ ಚಿತ್ರಗಳು ಚಾಲ್ತಿಯಲ್ಲಿದ್ದವು. ಬಾಲಿವುಡ್‍ಗೆ ಹೋಲಿಸಿದಲ್ಲಿ ಇಲ್ಲಿ ಅಮ್ಮನ ಪಾತ್ರಕ್ಕೆ ಹೆಚ್ಚಿನ ನಷ್ಟವಾಗಿಲ್ಲ ನಿಜ. ಆದರೆ ಪಾತ್ರದ ಚಿತ್ರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿರಾಸೆಯಾಗುವುದು ಹೌದು. ವರ್ಷದಲ್ಲಿ ತೆರೆಕಾಣುವ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಮ್ಮ ಕಾಣಿಸುವುದು ಬೆರಳೆಣಿಕೆಯ ಪಾತ್ರಗಳಲ್ಲಿ ಮಾತ್ರ. ಅವೂ ಕೂಡ ಬಹುಕಾಲ ನೆನಪಿನಲ್ಲುಳಿಯುವುದಿಲ್ಲ ಎನ್ನುವುದು ವಿಪರ್ಯಾಸ.

ದಕ್ಷಿಣ ಭಾರತದ ಇತರೆ ಪ್ರಾದೇಶಿಕ ಭಾಷಾ ಚಿತ್ರಗಳೂ ಇದಕ್ಕೆ ಹೊರತಲ್ಲ. ದೊಡ್ಡ ಸದ್ದು ಮಾಡಿದ ‘ಕೆಜಿಎಫ್’ನಲ್ಲಿ ಅಮ್ಮನ ಕುರಿತಾದ ಸುಂದರ ಗೀತೆ, ಚಿತ್ರಣವಿದ್ದರೂ ಪಾತ್ರ ಬಹುಕಾಲ ನೆನಪಿನಲ್ಲುಳಿಯದು. ಆದರೆ ಕಳೆದ ದಶಕದಿಂದೀಚಿನ ಕೆಲವು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ‘ತಾಯಿ’ಗೆ ಮಹತ್ವದ ಪಾತ್ರಗಳಿದ್ದವು. ಗಟ್ಟಿಗಿತ್ತಿಯಾಗಿ ನೆಲದ ಗುಣದ ಜೊತೆ ಬೆಸೆದುಕೊಂಡಂತಹ ಚಿತ್ರಣಗಳು ಅಲ್ಲಿ ಕಾಣಿಸಿದವು.

ಗ್ಲ್ಯಾಮರ್ ಅಮ್ಮ

ಮಚ್ಚಿನ ಚಿತ್ರಗಳಿಗೆ ಮದರ್ ಸೆಂಟಿಮೆಂಟ್ ಜೋಡಿಸಿದ ಕೀರ್ತಿ, ನಿರ್ದೇಶಕ ಪ್ರೇಮ್‍ಗೆ ಸಲ್ಲುತ್ತದೆ. ಅವರ ಸೂಪರ್‌‌‌ಹಿಟ್ `ಜೋಗಿ’ ಚಿತ್ರದಲ್ಲಿ ಅಮ್ಮನ (ಆರುಂಧತಿ ನಾಗ್) ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇತ್ತು. ಅಮ್ಮನ ಪ್ರೀತಿಯ ಜೊತೆಗೆ ಮಚ್ಚಿನ ಆರ್ಭಟಕ್ಕೂ ಅಲ್ಲಿ ಸಮಪಾಲು. ಅಮ್ಮನನ್ನು ನೆನಪಿಸುವಲ್ಲಿ ಪ್ರೇಮ್ ಯಶಸ್ವಿಯಾದರೂ, ಪ್ರೇಕ್ಷಕರು ಮಚ್ಚಿನ ಕಥೆಯೆಂದೇ ಮಾತನಾಡಿಕೊಂಡರು. ಇದಕ್ಕೂ ಮುನ್ನ ಅವರೇ ನಿರ್ದೇಶಿಸಿದ್ದ `ಎಸ್‌ಕ್ಯೂಸ್ ಮಿ’ ಚಿತ್ರದಲ್ಲೂ ಅಮ್ಮ (ಸುಮಲತಾ) ಇದ್ದಳು. ಮಾತೃಭಾವಕ್ಕಿಂತ ಮಿಗಿಲಾಗಿ ಅಲ್ಲಿ ನಟಿಯ ಲಿಪ್‍ಸ್ಟಿಕ್ ಮಿರುಗಿದ್ದು ಬದಲಾದ ಚಿತ್ರಣಕ್ಕೆ ಕೈಗನ್ನಿಡಿ!

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಸುಮಲತ

`ಜೋಗಿ’ ಚಿತ್ರದ ಯಶಸ್ಸಿನೊಂದಿಗೆ `ಮಚ್ಚು ಮತ್ತು ಮದರ್ ಸೆಂಟಿಮೆಂಟ್’ ಕಾಂಬಿನೇಷನ್‍ನಲ್ಲಿ ಸಾಕಷ್ಟು ಚಿತ್ರಗಳು ತೆರೆಕಂಡವು. ಮಚ್ಚು ಬೀಸುವ ಭರದಲ್ಲಿ ನಿರ್ದೇಶಕರು ಅಮ್ಮನ ಪಾತ್ರಗಳನ್ನು ಜೋಕರ್‌ಗಳಂತೆ ಚಿತ್ರಿಸಿ ಪ್ರೇಕ್ಷಕರಿಗೆ ಬೇಸರ ಉಂಟುಮಾಡಿದ್ದೂ ಇದೆ. ನಾಯಕನ ಇಮೇಜು ಹೆಚ್ಚಿಸಲು ಅಮ್ಮನನ್ನು ಅತಿ ಭಾವುಕತನ, ಕಣ್ಣೀರಧಾರೆಯಲ್ಲಿ ತೋರಿಸುವ ಪರಿಪಾಠ ಜಾರಿಗೆ ಬಂತು.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಅರುಂದತಿ ನಾಗ್

ಸ್ನೇಹಿತೆಯಂಥ ಅಮ್ಮ

`ಮುಂಗಾರುಮಳೆ’ ಸ್ಯಾಂಡಲ್‍ವುಡ್‍ನ ಟ್ರೆಂಡ್ ಸೆಟರ್ ಸಿನೆಮಾ. ಇಲ್ಲಿ ನಿರ್ದೇಶಕ ಯೋಗರಾಜ್ ಭಟ್, ಅಮ್ಮನ ಪಾತ್ರವನ್ನು ವಾಸ್ತವಕ್ಕೆ ಕರೆತಂದಿದ್ದರು. ಬೇರೊಬ್ಬನನ್ನು ಮದುವೆಯಾಗುತ್ತಿರುವ ಹುಡುಗಿಯನ್ನು ಪ್ರೀತಿಸುವ ಮಗನ ಕೆನ್ನೆಗೆ ಹೊಡೆದು ಬುದ್ಧಿ ಹೇಳುವ ಅಮ್ಮನ ಪಾತ್ರವದು. ಆಧುನಿಕ ಮನೋಭಾವದ ಸ್ನೇಹಿತೆಯಂಥ ಅಮ್ಮನನ್ನು ಪ್ರೇಕ್ಷಕರೂ ಪ್ರೀತಿಯಿಂದ ಒಪ್ಪಿಕೊಂಡರು. ಆದರೆ `ಮಳೆ’ ಸ್ಪೂರ್ತಿಯಿಂದ ನಂತರದಲ್ಲಿ ತಯಾರಾದ ಹಲವಾರು ಚಿತ್ರಗಳಲ್ಲಿ ಅಮ್ಮನ ಪಾತ್ರಗಳು ಸೊರಗಿದವು.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಸುಧಾ ಬೆಳವಾಡಿ

 

`ವಂಶಿ’ (ಅಮ್ಮನಾಗಿ ಲಕ್ಷ್ಮಿ ನಟಿಸಿದ್ದರು) ಸೇರಿದಂತೆ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ ಇತ್ತೀಚಿನ ಚಿತ್ರಗಳಲ್ಲಿ ಅಮ್ಮ ಪ್ರೇಕ್ಷಕರನ್ನು ತಲುಪಲೇ ಇಲ್ಲ. ನಂತರ ಒಂದಷ್ಟು ವರ್ಷ ನಿರ್ದೇಶಕ ಅಪ್ಪ-ಮಗನ ಸೆಂಟಿಮೆಂಟಿಗೆ ಹೊರಳಿದ್ದರು! `ಮುಂಗಾರುಮಳೆ’ಯ ಅಮ್ಮ ಸುಧಾ ಬೆಳವಾಡಿ ಬದಲಾದ ಟ್ರೆಂಡ್ ಬಗ್ಗೆ ಬೇಸರದಿಂದಲೇ ಮಾತನಾಡುತ್ತಾರೆ.

`ಯೋಗರಾಜ್ ಭಟ್ಟರ ಚಿತ್ರದಲ್ಲಿ ಅಮ್ಮನ ಪಾತ್ರಕ್ಕೊಂದು ಭದ್ರ ನೆಲೆಯಿತ್ತು. ಇಲ್ಲಿಯವರೆಗೂ ನನಗೆ ಅಂಥ ಮತ್ತೊಂದು ಪಾತ್ರ ಸಿಕ್ಕಿಲ್ಲ. ಈಗಿನವರು ಸೃಷ್ಟಿಸುವ ಅಮ್ಮನ ಪಾತ್ರಕ್ಕೆ ಸ್ವಂತ ನಿಲುವು, ವ್ಯಕ್ತಿತ್ವವೇ ಇರೋಲ್ಲ. ಹೊಸ ಟ್ರೆಂಡ್‍ನ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸತ್ವಯುತ ಅಮ್ಮನ ಪಾತ್ರ ಸೃಷ್ಟಿಸುವಲ್ಲಿ ನಮ್ಮವರು ವಿಫಲರಾಗುತ್ತಿದ್ದಾರೆ’ ಎನ್ನುತ್ತಾರೆ ಅವರು.

ಅದೊಂದು ಕಾಲವಿತ್ತು…

ಈ ಕ್ಷಣವೂ ಅಮ್ಮನ ಪಾತ್ರವೆಂದರೆ ಕನ್ನಡಿಗರ ಕಣ್ತುಂಬುವುದು ಪಂಡರೀಭಾಯಿ. ಸುಂದರ, ಸೌಮ್ಯ ಮುಖದ ಕರುಣಾಮಯಿ ಭಾವದ ಕಲಾವಿದೆ ಅಮ್ಮನ ಪಾತ್ರಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಸ್ವಭಾವತಃ ಮಾತೃಹೃದಯಿ ಪಂಡರೀಭಾಯಿ ತೆರೆಯ ಮೇಲೆ ಕೂಡ ಹಾಗೆಯೇ ಕಾಣಿಸಿದರು ಎಂದು ಅವರನ್ನು ಬಲ್ಲ ಕಲಾವಿದರು, ತಂತ್ರಜ್ಞರು `ಅಮ್ಮ’ನನ್ನು ನೆನಪುಮಾಡಿಕೊಳ್ಳುತ್ತಾರೆ. ಆದವಾನಿ ಲಕ್ಷ್ಮಿದೇವಿ, ಸಾವಿತ್ರಿ, ಎಂ.ವಿ.ರಾಜಮ್ಮ, ಸಾಹುಕಾರ ಜಾನಕಿ ಇತರರು ಅಮ್ಮನ ಪಾತ್ರಗಳಿಗೆ ಜೀವ ತುಂಬಿದ ಅಂದಿನ ಶ್ರೇಷ್ಠ ಕಲಾವಿದೆಯರು. ನಟಿ ಲೀಲಾವತಿ ವೈವಿಧ್ಯಮಯ ತಾಯಿ ಪಾತ್ರಗಳನ್ನು ಪೊರೆದವರು. ಕೆಲವು ಚಿತ್ರಗಳಲ್ಲಿ ಗಯ್ಯಾಳಿ, ಹಠಮಾರಿ ಅಮ್ಮನಾಗಿ ಪ್ರೇಕ್ಷಕರ ನೆನಪಿನಲ್ಲುಳಿದಿದ್ದಾರೆ.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ಅಮ್ಮ
ಪಂಡರಿ ಭಾಯಿ

80ರ ದಶಕದ ಅಂತ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಹಲವಾರು ಮಾರ್ಪಾಡುಗಳಾಗಿದ್ದವು. ಕೌಟುಂಬಿಕ ಕಥೆಗಳ ಜೊತೆಗೆ ಆಗ ರಾಜಕೀಯ ಸಿನೆಮಾಗಳೂ ತಯಾರಾಗುತ್ತಿದ್ದವು. ಚಿತ್ರದ ನಾಯಕನನ್ನು ಮಣಿಸುವ ಸಲುವಾಗಿ ಖಳನಾಯಕರು ಅಮ್ಮನನ್ನು ಬಂಧನದಲ್ಲಿಟ್ಟು ಹಿಂಸಿಸುತ್ತಿದ್ದರು. ಕಾಂಚನ, ಲೀಲಾವತಿ, ಸರೋಜಾದೇವಿ, ಜಯಂತಿ, ಆರತಿ ಇತರರು ಈ ಪಾತ್ರಗಳಿಗೆ ಜೀವ ತುಂಬಿದರು. ರಮಾದೇವಿ, ಉಮಾಶಿವಶಂಕರ್, ಸತ್ಯಭಾಮಾ, ಕಮಿನಿಧರನ್, ಆಶಾಲತಾ, ಶೋಭಾ ಶಿವಶಂಕರ್, ಹೇಮಾಚೌಧರಿ ಗಯ್ಯಾಳಿ ಅಮ್ಮಂದಿರಾಗಿ ಪ್ರೇಕ್ಷಕರ ಹುಸಿಕೋಪಕ್ಕೆ ಗುರಿಯಾಗುತ್ತಿದ್ದರು.

`ಪುಟ್ನಂಜಿ’ ಚಿತ್ರದ ಉಮಾಶ್ರೀ ಪಾತ್ರಕ್ಕೆ `ಒಡಲಾಳ’ ನಾಟಕದ ಸಾಕವ್ವ ಪ್ರೇರಣೆ. ಇಲ್ಲಿ ಅಮ್ಮನ ಪಾತ್ರಕ್ಕೆ ಮತ್ತೊಂದು ಆಯಾಮ ಸಿಕ್ಕಿದ್ದು ಹೌದು. `ಅಣ್ಣಯ್ಯ’ ಸಿನೆಮಾದಲ್ಲಿ ಹಿಂದಿ ನಟಿ ಅರುಣಾ ಇರಾನಿ ನೆಗೆಟಿವ್ ಶೇಡ್‍ನಲ್ಲಿ ಗಮನ ಸೆಳೆದಿದ್ದರು. ಈ ಮಧ್ಯೆ ತಾಯಿಯ ಆಂತರ್ಯದ ಹೋರಾಟದ ಕಥಾವಸ್ತುವಿನ ಕೆಲವು ಭಿನ್ನ ಅಲೆಯ ಚಿತ್ರಗಳು ತಯಾರಾದವು. `ತಾಯಿಸಾಹೇಬ’, `ತಾಯಿ’, `ಅವ್ವ’ ಕೆಲವು ಉದಾಹರಣೆ. ಎಂದಿನಂತೆ ಈ ಚಿತ್ರಗಳು ಕಲೆಯ ಚೌಕಟ್ಟನ್ನು ದಾಟಲಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಕನ್ನಡ ಚಿತ್ರಗಳಲ್ಲಿ `ಅಮ್ಮ’ ಸೊರಗುತ್ತಿದ್ದಾಳೆ. ಕಾಲದ ತಿರುಗಣೆಯಲ್ಲಿ ಮತ್ತೆ ಅಮ್ಮ ನಗೆ ಬೀರುವಳೇ?

ಸ್ಯಾಂಡಲ್‍ವುಡ್‍ನ ಜನಪ್ರಿಯ ಅಮ್ಮಂದಿರು

ಪಂಡರೀಭಾಯಿ (ಪುರಂದರದಾಸ, ಸತ್ಯಹರಿಶ್ಚಂದ್ರ, ಅನುರಾಗ ಅರಳಿತು), ಆದವಾನಿ ಲಕ್ಷ್ಮಿದೇವಿ (ಗಂಧದ ಗುಡಿ), ಎಂ.ವಿ.ರಾಜಮ್ಮ (ಬಂಗಾರದ ಪಂಜರ), ಲೀಲಾವತಿ (ತಾಯಿಯ ಮಡಿಲಲ್ಲಿ, ನಾಗರಹಾವು, ಯಾರದು), ಕಾಂಚನ (ಶಂಕರ್‍ಗುರು, ದಾರಿ ತಪ್ಪಿದ ಮಗ), ಸರೋಜಾದೇವಿ (ಭಾಗ್ಯವಂತರು), ಆರತಿ (ಕಲಿಯುಗ), ಅರುಣಾ ಇರಾನಿ (ಅಣ್ಣಯ್ಯ), ಉಮಾಶ್ರೀ (ಪುಟ್ನಂಜಿ), ಭಾರತಿ (ದೊರೆ), ಸುಮಿತ್ರಾ (ರಾಮಾಚಾರಿ), ಸುಮಲತಾ (ಎಕ್ಸ್‍ಕ್ಯೂಸ್ ಮಿ), ಅರುಂಧತಿ ನಾಗ್ (ಜೋಗಿ), ಲಕ್ಷ್ಮಿ (ಅಮ್ಮ, ಹೂವು-ಹಣ್ಣು, ವಂಶಿ), ಸುಧಾ ಬೆಳವಾಡಿ (ಮುಂಗಾರು ಮಳೆ), ತಾರಾ (ಡೆಡ್ಲಿ ಸೋಮ), ರ‍್ಚನಾ ಜೋಯಿಸ್ (ಕೆಜಿಎಫ್)


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್


ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...