Homeಮುಖಪುಟಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ‘ಅಮ್ಮ’

- Advertisement -
- Advertisement -

ದಶಕಗಳ ಹಿಂದೆ ಅಮ್ಮ ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇರುವಂತಹ ಸಿನಿಮಾಗಳು ತಯಾರಾಗುತ್ತಿದ್ದವು. ಅಂತಹ ಪಾತ್ರಗಳು ಇಂದಿಗೂ ನಮಗೆ ನೆನಪಾಗುತ್ತವೆ. ಇದೀಗ ಗ್ಲಾಮರ್ ಮಧ್ಯೆ ಅಮ್ಮನ ಪಾತ್ರಗಳು ಕಣ್ಮರೆ ಆಗುತ್ತಿವೆ. ಅಮ್ಮನ (10) ದಿನದ ನಿಮಿತ್ತ ಒಂದು ವಿಶೇಷ ಲೇಖನ.

ಮೊನ್ನೆಯವರೆಗೂ ಸ್ಯಾಂಡಲ್‍ವುಡ್‍ನಲ್ಲಿ ಮಚ್ಚು ಮತ್ತು ಮದರ್ ಸೆಂಟಿಮೆಂಟ್ ಚಿತ್ರಗಳು ಚಾಲ್ತಿಯಲ್ಲಿದ್ದವು. ಬಾಲಿವುಡ್‍ಗೆ ಹೋಲಿಸಿದಲ್ಲಿ ಇಲ್ಲಿ ಅಮ್ಮನ ಪಾತ್ರಕ್ಕೆ ಹೆಚ್ಚಿನ ನಷ್ಟವಾಗಿಲ್ಲ ನಿಜ. ಆದರೆ ಪಾತ್ರದ ಚಿತ್ರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿರಾಸೆಯಾಗುವುದು ಹೌದು. ವರ್ಷದಲ್ಲಿ ತೆರೆಕಾಣುವ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಮ್ಮ ಕಾಣಿಸುವುದು ಬೆರಳೆಣಿಕೆಯ ಪಾತ್ರಗಳಲ್ಲಿ ಮಾತ್ರ. ಅವೂ ಕೂಡ ಬಹುಕಾಲ ನೆನಪಿನಲ್ಲುಳಿಯುವುದಿಲ್ಲ ಎನ್ನುವುದು ವಿಪರ್ಯಾಸ.

ದಕ್ಷಿಣ ಭಾರತದ ಇತರೆ ಪ್ರಾದೇಶಿಕ ಭಾಷಾ ಚಿತ್ರಗಳೂ ಇದಕ್ಕೆ ಹೊರತಲ್ಲ. ದೊಡ್ಡ ಸದ್ದು ಮಾಡಿದ ‘ಕೆಜಿಎಫ್’ನಲ್ಲಿ ಅಮ್ಮನ ಕುರಿತಾದ ಸುಂದರ ಗೀತೆ, ಚಿತ್ರಣವಿದ್ದರೂ ಪಾತ್ರ ಬಹುಕಾಲ ನೆನಪಿನಲ್ಲುಳಿಯದು. ಆದರೆ ಕಳೆದ ದಶಕದಿಂದೀಚಿನ ಕೆಲವು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ‘ತಾಯಿ’ಗೆ ಮಹತ್ವದ ಪಾತ್ರಗಳಿದ್ದವು. ಗಟ್ಟಿಗಿತ್ತಿಯಾಗಿ ನೆಲದ ಗುಣದ ಜೊತೆ ಬೆಸೆದುಕೊಂಡಂತಹ ಚಿತ್ರಣಗಳು ಅಲ್ಲಿ ಕಾಣಿಸಿದವು.

ಗ್ಲ್ಯಾಮರ್ ಅಮ್ಮ

ಮಚ್ಚಿನ ಚಿತ್ರಗಳಿಗೆ ಮದರ್ ಸೆಂಟಿಮೆಂಟ್ ಜೋಡಿಸಿದ ಕೀರ್ತಿ, ನಿರ್ದೇಶಕ ಪ್ರೇಮ್‍ಗೆ ಸಲ್ಲುತ್ತದೆ. ಅವರ ಸೂಪರ್‌‌‌ಹಿಟ್ `ಜೋಗಿ’ ಚಿತ್ರದಲ್ಲಿ ಅಮ್ಮನ (ಆರುಂಧತಿ ನಾಗ್) ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇತ್ತು. ಅಮ್ಮನ ಪ್ರೀತಿಯ ಜೊತೆಗೆ ಮಚ್ಚಿನ ಆರ್ಭಟಕ್ಕೂ ಅಲ್ಲಿ ಸಮಪಾಲು. ಅಮ್ಮನನ್ನು ನೆನಪಿಸುವಲ್ಲಿ ಪ್ರೇಮ್ ಯಶಸ್ವಿಯಾದರೂ, ಪ್ರೇಕ್ಷಕರು ಮಚ್ಚಿನ ಕಥೆಯೆಂದೇ ಮಾತನಾಡಿಕೊಂಡರು. ಇದಕ್ಕೂ ಮುನ್ನ ಅವರೇ ನಿರ್ದೇಶಿಸಿದ್ದ `ಎಸ್‌ಕ್ಯೂಸ್ ಮಿ’ ಚಿತ್ರದಲ್ಲೂ ಅಮ್ಮ (ಸುಮಲತಾ) ಇದ್ದಳು. ಮಾತೃಭಾವಕ್ಕಿಂತ ಮಿಗಿಲಾಗಿ ಅಲ್ಲಿ ನಟಿಯ ಲಿಪ್‍ಸ್ಟಿಕ್ ಮಿರುಗಿದ್ದು ಬದಲಾದ ಚಿತ್ರಣಕ್ಕೆ ಕೈಗನ್ನಿಡಿ!

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಸುಮಲತ

`ಜೋಗಿ’ ಚಿತ್ರದ ಯಶಸ್ಸಿನೊಂದಿಗೆ `ಮಚ್ಚು ಮತ್ತು ಮದರ್ ಸೆಂಟಿಮೆಂಟ್’ ಕಾಂಬಿನೇಷನ್‍ನಲ್ಲಿ ಸಾಕಷ್ಟು ಚಿತ್ರಗಳು ತೆರೆಕಂಡವು. ಮಚ್ಚು ಬೀಸುವ ಭರದಲ್ಲಿ ನಿರ್ದೇಶಕರು ಅಮ್ಮನ ಪಾತ್ರಗಳನ್ನು ಜೋಕರ್‌ಗಳಂತೆ ಚಿತ್ರಿಸಿ ಪ್ರೇಕ್ಷಕರಿಗೆ ಬೇಸರ ಉಂಟುಮಾಡಿದ್ದೂ ಇದೆ. ನಾಯಕನ ಇಮೇಜು ಹೆಚ್ಚಿಸಲು ಅಮ್ಮನನ್ನು ಅತಿ ಭಾವುಕತನ, ಕಣ್ಣೀರಧಾರೆಯಲ್ಲಿ ತೋರಿಸುವ ಪರಿಪಾಠ ಜಾರಿಗೆ ಬಂತು.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಅರುಂದತಿ ನಾಗ್

ಸ್ನೇಹಿತೆಯಂಥ ಅಮ್ಮ

`ಮುಂಗಾರುಮಳೆ’ ಸ್ಯಾಂಡಲ್‍ವುಡ್‍ನ ಟ್ರೆಂಡ್ ಸೆಟರ್ ಸಿನೆಮಾ. ಇಲ್ಲಿ ನಿರ್ದೇಶಕ ಯೋಗರಾಜ್ ಭಟ್, ಅಮ್ಮನ ಪಾತ್ರವನ್ನು ವಾಸ್ತವಕ್ಕೆ ಕರೆತಂದಿದ್ದರು. ಬೇರೊಬ್ಬನನ್ನು ಮದುವೆಯಾಗುತ್ತಿರುವ ಹುಡುಗಿಯನ್ನು ಪ್ರೀತಿಸುವ ಮಗನ ಕೆನ್ನೆಗೆ ಹೊಡೆದು ಬುದ್ಧಿ ಹೇಳುವ ಅಮ್ಮನ ಪಾತ್ರವದು. ಆಧುನಿಕ ಮನೋಭಾವದ ಸ್ನೇಹಿತೆಯಂಥ ಅಮ್ಮನನ್ನು ಪ್ರೇಕ್ಷಕರೂ ಪ್ರೀತಿಯಿಂದ ಒಪ್ಪಿಕೊಂಡರು. ಆದರೆ `ಮಳೆ’ ಸ್ಪೂರ್ತಿಯಿಂದ ನಂತರದಲ್ಲಿ ತಯಾರಾದ ಹಲವಾರು ಚಿತ್ರಗಳಲ್ಲಿ ಅಮ್ಮನ ಪಾತ್ರಗಳು ಸೊರಗಿದವು.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ 'ಅಮ್ಮ'
ಸುಧಾ ಬೆಳವಾಡಿ

 

`ವಂಶಿ’ (ಅಮ್ಮನಾಗಿ ಲಕ್ಷ್ಮಿ ನಟಿಸಿದ್ದರು) ಸೇರಿದಂತೆ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ ಇತ್ತೀಚಿನ ಚಿತ್ರಗಳಲ್ಲಿ ಅಮ್ಮ ಪ್ರೇಕ್ಷಕರನ್ನು ತಲುಪಲೇ ಇಲ್ಲ. ನಂತರ ಒಂದಷ್ಟು ವರ್ಷ ನಿರ್ದೇಶಕ ಅಪ್ಪ-ಮಗನ ಸೆಂಟಿಮೆಂಟಿಗೆ ಹೊರಳಿದ್ದರು! `ಮುಂಗಾರುಮಳೆ’ಯ ಅಮ್ಮ ಸುಧಾ ಬೆಳವಾಡಿ ಬದಲಾದ ಟ್ರೆಂಡ್ ಬಗ್ಗೆ ಬೇಸರದಿಂದಲೇ ಮಾತನಾಡುತ್ತಾರೆ.

`ಯೋಗರಾಜ್ ಭಟ್ಟರ ಚಿತ್ರದಲ್ಲಿ ಅಮ್ಮನ ಪಾತ್ರಕ್ಕೊಂದು ಭದ್ರ ನೆಲೆಯಿತ್ತು. ಇಲ್ಲಿಯವರೆಗೂ ನನಗೆ ಅಂಥ ಮತ್ತೊಂದು ಪಾತ್ರ ಸಿಕ್ಕಿಲ್ಲ. ಈಗಿನವರು ಸೃಷ್ಟಿಸುವ ಅಮ್ಮನ ಪಾತ್ರಕ್ಕೆ ಸ್ವಂತ ನಿಲುವು, ವ್ಯಕ್ತಿತ್ವವೇ ಇರೋಲ್ಲ. ಹೊಸ ಟ್ರೆಂಡ್‍ನ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸತ್ವಯುತ ಅಮ್ಮನ ಪಾತ್ರ ಸೃಷ್ಟಿಸುವಲ್ಲಿ ನಮ್ಮವರು ವಿಫಲರಾಗುತ್ತಿದ್ದಾರೆ’ ಎನ್ನುತ್ತಾರೆ ಅವರು.

ಅದೊಂದು ಕಾಲವಿತ್ತು…

ಈ ಕ್ಷಣವೂ ಅಮ್ಮನ ಪಾತ್ರವೆಂದರೆ ಕನ್ನಡಿಗರ ಕಣ್ತುಂಬುವುದು ಪಂಡರೀಭಾಯಿ. ಸುಂದರ, ಸೌಮ್ಯ ಮುಖದ ಕರುಣಾಮಯಿ ಭಾವದ ಕಲಾವಿದೆ ಅಮ್ಮನ ಪಾತ್ರಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಸ್ವಭಾವತಃ ಮಾತೃಹೃದಯಿ ಪಂಡರೀಭಾಯಿ ತೆರೆಯ ಮೇಲೆ ಕೂಡ ಹಾಗೆಯೇ ಕಾಣಿಸಿದರು ಎಂದು ಅವರನ್ನು ಬಲ್ಲ ಕಲಾವಿದರು, ತಂತ್ರಜ್ಞರು `ಅಮ್ಮ’ನನ್ನು ನೆನಪುಮಾಡಿಕೊಳ್ಳುತ್ತಾರೆ. ಆದವಾನಿ ಲಕ್ಷ್ಮಿದೇವಿ, ಸಾವಿತ್ರಿ, ಎಂ.ವಿ.ರಾಜಮ್ಮ, ಸಾಹುಕಾರ ಜಾನಕಿ ಇತರರು ಅಮ್ಮನ ಪಾತ್ರಗಳಿಗೆ ಜೀವ ತುಂಬಿದ ಅಂದಿನ ಶ್ರೇಷ್ಠ ಕಲಾವಿದೆಯರು. ನಟಿ ಲೀಲಾವತಿ ವೈವಿಧ್ಯಮಯ ತಾಯಿ ಪಾತ್ರಗಳನ್ನು ಪೊರೆದವರು. ಕೆಲವು ಚಿತ್ರಗಳಲ್ಲಿ ಗಯ್ಯಾಳಿ, ಹಠಮಾರಿ ಅಮ್ಮನಾಗಿ ಪ್ರೇಕ್ಷಕರ ನೆನಪಿನಲ್ಲುಳಿದಿದ್ದಾರೆ.

ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ಅಮ್ಮ
ಪಂಡರಿ ಭಾಯಿ

80ರ ದಶಕದ ಅಂತ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಹಲವಾರು ಮಾರ್ಪಾಡುಗಳಾಗಿದ್ದವು. ಕೌಟುಂಬಿಕ ಕಥೆಗಳ ಜೊತೆಗೆ ಆಗ ರಾಜಕೀಯ ಸಿನೆಮಾಗಳೂ ತಯಾರಾಗುತ್ತಿದ್ದವು. ಚಿತ್ರದ ನಾಯಕನನ್ನು ಮಣಿಸುವ ಸಲುವಾಗಿ ಖಳನಾಯಕರು ಅಮ್ಮನನ್ನು ಬಂಧನದಲ್ಲಿಟ್ಟು ಹಿಂಸಿಸುತ್ತಿದ್ದರು. ಕಾಂಚನ, ಲೀಲಾವತಿ, ಸರೋಜಾದೇವಿ, ಜಯಂತಿ, ಆರತಿ ಇತರರು ಈ ಪಾತ್ರಗಳಿಗೆ ಜೀವ ತುಂಬಿದರು. ರಮಾದೇವಿ, ಉಮಾಶಿವಶಂಕರ್, ಸತ್ಯಭಾಮಾ, ಕಮಿನಿಧರನ್, ಆಶಾಲತಾ, ಶೋಭಾ ಶಿವಶಂಕರ್, ಹೇಮಾಚೌಧರಿ ಗಯ್ಯಾಳಿ ಅಮ್ಮಂದಿರಾಗಿ ಪ್ರೇಕ್ಷಕರ ಹುಸಿಕೋಪಕ್ಕೆ ಗುರಿಯಾಗುತ್ತಿದ್ದರು.

`ಪುಟ್ನಂಜಿ’ ಚಿತ್ರದ ಉಮಾಶ್ರೀ ಪಾತ್ರಕ್ಕೆ `ಒಡಲಾಳ’ ನಾಟಕದ ಸಾಕವ್ವ ಪ್ರೇರಣೆ. ಇಲ್ಲಿ ಅಮ್ಮನ ಪಾತ್ರಕ್ಕೆ ಮತ್ತೊಂದು ಆಯಾಮ ಸಿಕ್ಕಿದ್ದು ಹೌದು. `ಅಣ್ಣಯ್ಯ’ ಸಿನೆಮಾದಲ್ಲಿ ಹಿಂದಿ ನಟಿ ಅರುಣಾ ಇರಾನಿ ನೆಗೆಟಿವ್ ಶೇಡ್‍ನಲ್ಲಿ ಗಮನ ಸೆಳೆದಿದ್ದರು. ಈ ಮಧ್ಯೆ ತಾಯಿಯ ಆಂತರ್ಯದ ಹೋರಾಟದ ಕಥಾವಸ್ತುವಿನ ಕೆಲವು ಭಿನ್ನ ಅಲೆಯ ಚಿತ್ರಗಳು ತಯಾರಾದವು. `ತಾಯಿಸಾಹೇಬ’, `ತಾಯಿ’, `ಅವ್ವ’ ಕೆಲವು ಉದಾಹರಣೆ. ಎಂದಿನಂತೆ ಈ ಚಿತ್ರಗಳು ಕಲೆಯ ಚೌಕಟ್ಟನ್ನು ದಾಟಲಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಕನ್ನಡ ಚಿತ್ರಗಳಲ್ಲಿ `ಅಮ್ಮ’ ಸೊರಗುತ್ತಿದ್ದಾಳೆ. ಕಾಲದ ತಿರುಗಣೆಯಲ್ಲಿ ಮತ್ತೆ ಅಮ್ಮ ನಗೆ ಬೀರುವಳೇ?

ಸ್ಯಾಂಡಲ್‍ವುಡ್‍ನ ಜನಪ್ರಿಯ ಅಮ್ಮಂದಿರು

ಪಂಡರೀಭಾಯಿ (ಪುರಂದರದಾಸ, ಸತ್ಯಹರಿಶ್ಚಂದ್ರ, ಅನುರಾಗ ಅರಳಿತು), ಆದವಾನಿ ಲಕ್ಷ್ಮಿದೇವಿ (ಗಂಧದ ಗುಡಿ), ಎಂ.ವಿ.ರಾಜಮ್ಮ (ಬಂಗಾರದ ಪಂಜರ), ಲೀಲಾವತಿ (ತಾಯಿಯ ಮಡಿಲಲ್ಲಿ, ನಾಗರಹಾವು, ಯಾರದು), ಕಾಂಚನ (ಶಂಕರ್‍ಗುರು, ದಾರಿ ತಪ್ಪಿದ ಮಗ), ಸರೋಜಾದೇವಿ (ಭಾಗ್ಯವಂತರು), ಆರತಿ (ಕಲಿಯುಗ), ಅರುಣಾ ಇರಾನಿ (ಅಣ್ಣಯ್ಯ), ಉಮಾಶ್ರೀ (ಪುಟ್ನಂಜಿ), ಭಾರತಿ (ದೊರೆ), ಸುಮಿತ್ರಾ (ರಾಮಾಚಾರಿ), ಸುಮಲತಾ (ಎಕ್ಸ್‍ಕ್ಯೂಸ್ ಮಿ), ಅರುಂಧತಿ ನಾಗ್ (ಜೋಗಿ), ಲಕ್ಷ್ಮಿ (ಅಮ್ಮ, ಹೂವು-ಹಣ್ಣು, ವಂಶಿ), ಸುಧಾ ಬೆಳವಾಡಿ (ಮುಂಗಾರು ಮಳೆ), ತಾರಾ (ಡೆಡ್ಲಿ ಸೋಮ), ರ‍್ಚನಾ ಜೋಯಿಸ್ (ಕೆಜಿಎಫ್)


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್


ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...