Homeಮುಖಪುಟಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ಭಾರತವೆಂದರೇನು? ಭಾರತೀಯರೆಂದರೆ ಯಾರು ಎನ್ನುವ ಸಂಕೀರ್ಣತೆ ಎಲ್ಲಿಯೂ ಇತಿಹಾಸವಾಗದಂತೆ ಎಚ್ಚರ ವಹಿಸಿರುವ ಶೂಜಿತ್ ನಿಜಕ್ಕೂ ಅತ್ಯಂತ ಮಹತ್ವದ ಸಿನಿಮಾ ಕೊಟ್ಟಿದ್ದಾನೆ.

- Advertisement -
- Advertisement -

(ಈ ಲೇಖನ ಹೊಸ ಬರಹದಲ್ಲಿದೆ. ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

‘ಮದ್ರಾಸ್ ಕೆಫೆ’ಯಲ್ಲಿ ಸೋತಿದ್ದ ಶೂಜಿತ್ ಸರ್ಕಾರ್ ‘ಸರ್ದಾರ್ ಉದಮ್’ ನಲ್ಲಿ ಗೆದ್ದಿದ್ದಾನೆ.
ವಿಕಿ ಡೋನರ್, ಪಿಕು ನಂತಹ ಪಕ್ಕಾ ಮಧ್ಯಮವರ್ಗದ, ನಗರ ಪ್ರಜ್ಞೆಯ ಸಿನಿಮಾಗಳಲ್ಲಿ ತೇಲುತ್ತಿದ್ದ ಶೂಜಿತ್ ನಿಂದ ಇಂತಹ ರಾಜಕೀಯ ಸಿನಿಮಾ ಮಾಡುತ್ತಾನೆ ಎನ್ನುವ ನಿರೀಕ್ಷೆ ಇರಲಿಲ್ಲ.

ಮತ್ತು ‘ಉರಿ’ ಸಿನಿಮಾದ ಮೂಲಕ ಎಲ್ಲೋ ಒಂದೆಡೆ ಬಲಪಂಥೀಯನಂತೆ ವರ್ತಿಸುತ್ತಿದ್ದ ನಟ ವಿಕಿ ಕೌಸಲ್ ಇದರ ಪ್ರೊಟಗಾನಿಸ್ಟ್ ಆಗಿರುವುದೂ ಸಹ ನನಗೆ ಈ ಸಿನಿಮಾ ಅಂತಹ ಉತ್ಸಾಹ ಮೂಡಿಸಿರಲಿಲ್ಲ. ಆದರೆ ‘ಉದಮ್’ ಸಿನಿಮಾ ಚೆನ್ನಾಗಿದೆ.

ಚಿತ್ರಕತೆ ಬರೆದ ರಿತೇಶ್ ಶಾ ಮತ್ತು ಶುಬೇಂದು ಭಟ್ಟಾಚಾರ್ಯ ಈ ಸಿನಿಮಾದ ಗೆಲುವಿನ ಮುಖ್ಯ ರೂವಾರಿಗಳು. ಚಾರಿತ್ರಿಕ ಸಿನಿಮಾಗಳಿಗೆ ಒಂದು ಫಾರ್ಮ್, ನಿರಂತರ ಹರಿವು, ಕತೆಯ ಲಹರಿ ಮತ್ತು ಬಿಗಿಯಾದ ಬಂಧವನ್ನು ಕಟ್ಟಿಕೊಡಲು non – linear ಚಿತ್ರಕತೆ ಅಗತ್ಯ.

‘ಉದಮ್’ ನ ಆ non – linear ಚಿತ್ರಕತೆ ಇಡೀ ಸಿನಿಮಾವನ್ನು ಎಲ್ಲಿಯೂ ಜಾಳು ಜಾಳಾಗದಂತೆ ಪಾರು ಮಾಡಿದೆ. ಮತ್ತು ಈ ಸಿನಿಮಾದ ಬಹುಮುಖ್ಯ ಘಟ್ಟ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದೃಶ್ಯಕ್ಕಾಗಿ ಪ್ರೇಕ್ಷಕ ಕಾತರಿಸುತ್ತಿದ್ದಾಗ ಅದನ್ನು ಕ್ಲೈಮ್ಯಾಕ್ಸ್ ನಲ್ಲಿ ತಂದು ದೀರ್ಘವಾದ ಶಾಟ್ ನ ಮೂಲಕ ಭಾವುಕತೆಯನ್ನು (ಚಾರಿತ್ರಿಕ ಸಿನಿಮಾಗಳಿಗೆ ಇದರಿಂದ ಮುಕ್ತಿಯಿಲ್ಲ) ತುಂಬಿರುವುದು ಸಹ ಚಿತ್ರಕತೆಯ ಯಶಸ್ಸು.

ಎರಡೂವರೆ ಗಂಟೆ ಗಾಢವಾದ ವಿಶಾದ ಮತ್ತು ನಿರ್ವಾತವನ್ನು ಮೀರುವ ತುಡಿತವನ್ನು ಉಂಟುಮಾಡುವ ಹಿನ್ನೆಲೆ ಸಂಗೀತ ಇಲ್ಲಿನ ಮುಖ್ಯ ಅಂಶ ಮತ್ತು ಬೆನ್ನೆಲುಬು.

ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು, ಕ್ರಾಂತಿಕಾರಿಗಳನ್ನು ಮನುಶ್ಯರಂತೆ ನಿರೂಪಿಸದೆ ಬದಲಿಗೆ ಅತ್ಯುನ್ನತ ಹೀರೋ ಎನ್ನುವ ವೈಬವೀಕರಣದ ಮೂಲಕ ಒಂದು ಬಲಪಂಥೀಯ ಸಂಕೇತವನ್ನು ನಿರ್ಮಿಸಿ ಬಿಡುವ ಅಪಾಯದಿಂದ ‘ಉದಮ್’ ಸಿನಿಮಾ ಪಾರಾಗಿದೆ. ಇದು ಶೂಜಿತ್ ನ ಗೆಲುವು ಮತ್ತು ಆ ಮೂಲಕ ಪ್ರಜಾಪ್ರಬುತ್ವದ ಗೆಲುವು.

ತೋಳ್ಬಲದ ದೇಶಪ್ರೇಮದ ಮೂಲಕ ಹೀರೋನನ್ನು ವಿಜೃಂಬಿಸಿ ಮಧ್ಯಮವರ್ಗದ ಆ ದ್ವೇಶದ ತೃಶೆಯನ್ನು ಹಿಂಗಿಸುವ ನಿರೂಪಣೆಯನ್ನು ಶೂಜಿತ್ ತಿರಸ್ಕರಿಸಿ ಉದಮ್ ಎನ್ನುವ ವ್ಯಕ್ತಿ ಮತ್ತು ಆ ಕಾಲಘಟ್ಟದ ಯಥಾವತ್ತಾದ ನಿರ್ಲಿಪ್ತ ನಿರೂಪಣೆ ಈ ಸಿನಿಮಾವು ಮತ್ತೊಂದು ಎದೆತಟ್ಚಿಕೊಳ್ಳುವ ಹುಸಿ ದೇಶಪ್ರೇಮಿಗಳ ಸಿನಿಮಾವಾಗುವುದರಿಂದ ಬಚಾವ್ ಮಾಡಿದೆ. ಇಂದಿನ ಫ್ಯಾಸಿಸಂ ಸಂದರ್ಬದಲ್ಲಿ ಜನಪರ ಸಿನಿಮಾದ ನಿಜ ಮಾದರಿಯನ್ನು ತೋರಿಸಿಕೊಟ್ಟಿದೆ.
ಕ್ರಾಂತಿಕಾರಿ ಮತ್ತು ಅವನ /ಅವಳ ಸಿದ್ದಾಂತ, ಅವರ ಸಂಗಾತಿಗಳು, ಅವರ ಖಾಸಗಿ ಬದುಕು ಎಲ್ಲವನ್ನೂ ಒಂದು ಸ್ಥಿತಪ್ರಜ್ಞತೆಯಲ್ಲಿ ನಿರೂಪಿತವಾಗಿದೆ.

ಭಾವುಕತೆಯೂ ಹುಸಿಯಾಗದಂತೆ ಮತ್ತು ಮುಖ್ಯವಾಗಿ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತಾತ್ವಿಕತೆಗೆ ಬದ್ದರಾಗಿ non – linear ಚಿತ್ರಕತೆ ಬರೆದ ಶಾ ಮತ್ತು ಶುಬೇಂದು ಇಬ್ಬರಿಗೆ ಶರಣು. They done the job. ಮತ್ತು ಮುಖ್ಯವಾಗಿ ಇತಿಹಾಸದ ಗ್ರಹಿಕೆ, ನಿರ್ವಹಣೆ ಎರಡೂ ಹಳಿ ತಪ್ಪದಿರುವುದು ಈ ಸಿನಿಮಾದ ಶಕ್ತಿ.

ರೇಮಂಡ್ ವಿಲಿಯಮ್ ‘ವಿಚಾರಗಳಿಗೆ ಇತಿಹಾಸವಿದೆ ಎನ್ನುವುದು ಅಶ್ಟು ಸತ್ಯವಲ್ಲ. ಸಮಾಜಗಳಿಗೆ ಇತಿಹಾಸವಿದೆ. ಆಗ ವಿರುದ್ಧವಾಗಿರುವ ವಿಚಾರಗಳು ಕೊನೆಗೆ ಒಂದೇ ಸಾಮಾಜಿಕ ಪ್ರಕ್ರಿಯೆಯ ಬಾಗವಾಗುತ್ತವೆ’ ಎಂದು ಹೇಳುತ್ತಾನೆ. ‘ಉದಮ್’ ಸಿನಿಮಾದ ವಿಶಯದಲ್ಲಿಯೂ ಇದು ನಿಜವಾಗಿದೆ ಮತ್ತು ಇದು ಸಮಾಧಾನಕರ ಅಂಶ.

ಕ್ರಾಂತಿ ಎಂಬುದು ಅಂಹಿಸೆಯೂ ಅಥವಾ ಹಿಂಸೆಯೋ? ವೈರುದ್ಯಗಳಿವೆ. ಆದರೆ ಆ ವಿಚಾರಗಳು ಎಂದಿಗೂ ಇತಿಹಾಸವಲ್ಲ. ಭಗತ್ ಸಿಂಗ್, ಉದಮ್, ಗಾಂಧಿ, ನೆಹರೂ ಮುಂತಾದವರ ಆ ಸ್ವಾತಂತ್ರ್ಯ ಹೋರಾಟದ ಎಲ್ಲಾ ಪ್ರಕ್ರಿಯೆಗಳು ಮಾತ್ರ ಇತಿಹಾಸ. ಅವರ ವಿಚಾರಗಳಲ್ಲ.
ಆದರೆ ಬಲಪಂಥೀಯ ಮತಾಂದರು ವಿಚಾರಗಳನ್ನು ಇತಿಹಾಸ ಎಂದು ಬಿಂಬಿಸುವ ಆ ವಿನಾಶಕಾರಿ ಧೋರಣೆಯನ್ನು ತಬ್ಬಿಕೊಂಡಿದ್ದ ಬಾಲಿವುಡ್ ಸಿನಿಮಾಗಳಿಗಿಂತ ಸಂಪೂರ್ಣವಾಗಿ ಬಿನ್ನವಾಗಿ ನಿಲ್ಲುವ ‘ಸರ್ದಾರ್ ಉದಮ್’ ಈ ಕಾರಣಕ್ಕಾಗಿ ಮಹತ್ವದ ಸಿನಿಮಾ.

ಇತಿಹಾಸವನ್ನು ವ್ಯಕ್ತಿಯ ಮೂಲಕ ನೋಡದೆ ವ್ಯಕ್ತಿ ಮತ್ತು ಘಟನೆಗಳ ಕೊಲಾಜ್ ಮೂಲಕ ಗ್ರಹಿಸಿ ಶೂಜಿತ್ ನಮಗೆ ದೊಡ್ಡ ಉಪಕಾರ ಮಾಡಿದ್ದಾನೆ.

ವ್ಯಕ್ತಿಯನ್ನು iconicಗೊಳಿಸುವ, ದೇಶಪ್ರೇಮ ಭಾವುಕವಾಗುವ ದೃಶ್ಯಗಳಲ್ಲಿ ‘ಬ್ರೆಕ್ಟೇರಿಯನ್’ ತಂತ್ರ ಹೆಣೆದ ಶೂಜಿತ್ ಆ ಮೂಲಕ ಇಡೀ ಸಿನಿಮಾವನ್ನು ಎಲ್ಲರೂ ಒಂದಾಗಿ ಬಾಳುವ ದಡಕ್ಕೆ ತಂದಿದ್ದಾನೆ. ಇದೂ ಸಹ ಮುಖ್ಯ.

ಉದಾಹರಣೆಗೆ ಸ್ವಾತಂತ್ರ್ಯ ಬಂದ ನಂತರ ನೀನು ಏನು ಮಾಡುತ್ತೀ ಎಂದು ಪ್ರಶ್ನಿಸಿದಾಗ ಭಗತ್ ಸಿಂಗ್ ‘ನಾನು ಮೊದಲು ಚಾರ್ಲಿ ಚಾಪ್ಲಿನ್ ಸಿನಿಮಾ ನೋಡತೀನಿ, ವೈನ್ ಕುಡೀತೀನಿ, ಉಣತೀನಿ, ಮಲಗತೀನಿ’ ಅಂತಾನೆ. ಇದು ಬ್ರೆಕ್ಟೇರಿಯನ್ ತಂತ್ರ. ಒಬ್ಬ ಕ್ರಾಂತಿಕಾರಿ ನಮ್ಮಂತಿದ್ದಾನಲ್ಲ ಎನ್ನುವುದೇ ನಮಗೆ ಹೃದಯಂಗಮವಾಗಿ ತಟ್ಟುತ್ತದೆ. ಈ ಸಿನಿಮಾದಲ್ಲಿ ಇಂತಹ ಹಲವು ಬ್ರೆಕ್ಟೇರಿಯನ್ ದೃಶ್ಯಗಳಿವೆ.

ಇತಿಹಾಸವನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಾಗ ಅದರ ಸಂಕೀರ್ಣತೆ, ವೈರುದ್ಯಗಳು, ಮತ್ತು ಸಾಂದರ್ಭಿಕ ಸನ್ನಿವೇಶಗಳನ್ನು ವಸ್ತುನಿಶ್ಟವಾಗಿ ನಿರೂಪಿಸಿರುವ ಶೂಜಿತ್ ಅನೇಕ ಮಿತಿಗಳ ನಡುವೆಯೂ ಗೆದ್ದಿದ್ದಾನೆ. ಮತ್ತು ಬಲಪಂಥೀಯರಿಗೆ ಎದೆ ತಟ್ಟಿಕೊಳ್ಳುವ ಅಥವಾ ದಾಳಿ ಮಾಡುವ ಎರಡೂ ಅವಕಾಶಗಳನ್ನು ಕೊಟ್ಟಿಲ್ಲ. ಇದೇನು ಕಡಿಮೆ ಸಾದನೆಯಲ್ಲ.

ಭಾರತವೆಂದರೇನು? ಭಾರತೀಯರೆಂದರೆ ಯಾರು ಎನ್ನುವ ಸಂಕೀರ್ಣತೆ ಎಲ್ಲಿಯೂ ಇತಿಹಾಸವಾಗದಂತೆ ಎಚ್ಚರ ವಹಿಸಿರುವ ಶೂಜಿತ್ ನಿಜಕ್ಕೂ ಅತ್ಯಂತ ಮಹತ್ವದ ಸಿನಿಮಾ ಕೊಟ್ಟಿದ್ದಾನೆ. ಅವನಿಗೆ ಥ್ಯಾಂಕ್ಸ್.

(ಈ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದೆ)


ಇದನ್ನೂ ಓದಿ: ಲೈಂಗಿಕ ವೃತ್ತಿಯಿಂದ ಲೇಖಕಿಯಾಗಿ ಬದಲಾದ ನಳಿನಿ ಜಮೀಲಾಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...