Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿಈ ನವಿಲುಗಳನ್ನು ಓಡಿಸುವುದೇ ರೈತರಿಗೆ ದೊಡ್ಡ ಕೆಲಸವಾಗಿದೆ!

ಈ ನವಿಲುಗಳನ್ನು ಓಡಿಸುವುದೇ ರೈತರಿಗೆ ದೊಡ್ಡ ಕೆಲಸವಾಗಿದೆ!

ನಮ್ಮ ತೋಟದಲ್ಲಿ ಕೇವಲ ಹತ್ತು ವರ್ಷಗಳ ಹಿಂದೆ ನವಿಲುಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಈಗ ಅದು ನವಿಲುಗಳ ವಾಸಸ್ಥಾನ, ಜನ್ಮಸ್ಥಾನ ಎಲ್ಲವೂ ಆಗಿದೆ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ… ಭಾಗ-8

  • ಕೃಷ್ಣಮೂರ್ತಿ ಬಿಳಿಗೆರೆ

ಬಯಲು ಸೀಮೆಯ ಭಾಗದಲ್ಲೀಗ ನವಿಲುಗಳ ಸುಗ್ಗಿ. ನಾವು ಸಣ್ಣ ಹುಡುಗರಾಗಿದ್ದಾಗ ಇವುಗಳನ್ನು ಝೂಗಳಲ್ಲಿ ಮಾತ್ರ ನೋಡುವುದು ಸಾಧ್ಯವಾಗುತ್ತಿತ್ತು. ಮಲೆನಾಡಿನ ಭಾಗಕ್ಕೆ ಶಾಲಾ ಟೂರ್‌ ಹೋದಾಗ ನವಿಲುಗಳ ದರ್ಶನವಾಗುತ್ತಿದ್ದ ನೆನಪು.

ಈಗ ನಮ್ಮ ತೋಟ – ಹೊಲಗಳಿಂದ ಈ ನವಿಲುಗಳನ್ನು ಓಡಿಸುವುದು ರೈತರಿಗೆ ಕಷ್ಟವಾಗಿದೆ ಎಂದರೆ ಇವುಗಳ ಸಂಖ್ಯೆ ಎಷ್ಟು ಅತಿಯಾಗಿದೆ ಎಂಬುದನ್ನು ಊಹಿಸಬಹುದು. ಹೊಲಗಳಲ್ಲಿ ಬಿತ್ತನೆಯಾದ ಬೀಜಗಳು ಮೊಳಕೆಯೊಡೆಯುವ ಮುನ್ನವೇ ನವಿಲುಗಳು ಸಾಲು ಹಿಡಿದು ನುಂಗಿಹಾಕುತ್ತಿವೆ. ಚಿಗುರೊಡೆದ ಅಲ್ಪಸ್ವಲ್ಪ ಬೆಳೆಗಳ ಪೈರುಗಳನ್ನು ತಿನ್ನದೆ ಬಿಡುತ್ತಿಲ್ಲ. ಹಾಗೆ ನೋಡಿದರೆ ತೋಟಗಳಲ್ಲಿ ಅವುಗಳ ಹಾವಳಿ ಕಡಿಮೆ ಎಂದೇ ಹೇಳಬೇಕು. ಅವು ಈಗ ತೆಂಗಿನ ಕಾಯಿಗಳನ್ನು ಕುಕ್ಕಿ ತಿನ್ನುವುದನ್ನು ರೂಢಿ ಮಾಡಿಕೊಂಡಿವೆ ಎಂಬ ಆಪಾದನೆಯಿದೆಯಾದರೂ ಅದಿನ್ನೂ ಸಾಬೀತಾಗಿಲ್ಲ.

ಬೆಟ್ಟಗುಡ್ಡ, ಕಾಡುಮೇಡು, ಹಳ್ಳಕೊಳ್ಳಗಳಲ್ಲಿ ಹೇಗೋ ಹಾಗೆ ಬದುಕಿಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದ ಈ ರಾಷ್ಟ್ರಪಕ್ಷಿ ಈಗ ಊರೊಳಕ್ಕೆ ನುಗ್ಗಿ ಮನೆಯಾಚೆಯಲ್ಲಿ ಇರಿಸುವ ಮುಸುರೆಯನ್ನು ಕದ್ದು ಕುಡಿಯುವ ಸ್ಥಿತಿಗೆ ಬಂದಿದೆ. ಅವೀಗ ಜನರೊಂದಿಗೆ ಬದುಕುವ ಪರಿಪಾಠ ರೂಢಿಸಿಕೊಳ್ಳುತ್ತಿವೆ. ತೋಟ, ಹೊಲಗಳನ್ನು ಬಿಟ್ಟು ಕದಲುತ್ತಿಲ್ಲ. ಹದ್ದು ಮೀರಿದ ಗಣಿಗಾರಿಕೆ, ಕಲ್ಲು ಕ್ವಾರಿ ಡೈನಮೈಟ್‌ ಆರ್ಭಟ, ಕಾಡುಮೇಡು, ಹುಲ್ಲುಗಾವಲು, ಹಳ್ಳಕೊಳ್ಳಗಳ ಒತ್ತುವರಿ ಮುಂತಾದ ಮನುಷ್ಯ ಕೇಡಿಗ ಕೆಲಸಗಳು ಆನೆ, ನವಿಲು, ಚಿರತೆ, ಕರಡಿ, ತೋಳ ಮತ್ತಿತರ ಕಾಡು ಜೀವಿಗಳನ್ನು ನಿರಾಶ್ರಿತರಾಗಿ ಅಲೆಯುವಂತೆ ಮಾಡಿದೆ. ವಿಚಿತ್ರವೆಂದರೆ ಈ ಎಲ್ಲ ಕಾಡು ಜೀವಿಗಳು ಏನೂ ತಪ್ಪು ಮಾಡದ ರೈತರ ಹೊಲ ತೋಟಗಳಿಗೆ ಲಗ್ಗೆ ಇಟ್ಟು ಕಾಡುತ್ತಿವೆ. ಅಲ್ಲದೆ ಮನೆ ಬಾಗಿಲಿಗೆ ಬಂದು ನೀವೇ ಸಾಕಿ ಎನ್ನುತ್ತಿವೆ. ಕೆಲವು ಪ್ರಾಣಿಗಳಂತೂ ರೈತರನ್ನು ಬಲಿತೆಗೆದುಕೊಳ್ಳುತ್ತಿವೆ. ಯಾರೋ ಮಾಡಿದ ತಪ್ಪಿಗೆ ರೈತರು ದಂಡ ತೆರಬೇಕಾಗಿದೆ. ಇದರಲ್ಲಿ ರೈತರ ಪಾಲು ಇಲ್ಲವೇ ಇಲ್ಲ ಎನ್ನುವುದು ಸಾಧ್ಯವಿಲ್ಲವಾದರೂ ಪ್ರಮಾಣ ಅಲ್ಪ ಪ್ರಮಾಣದ್ದು. ಇರಲಿ ನಾವೀಗ ನವಿಲಿನ ಕಡೆ ಬರೋಣ.

Photo Courtesy: Vijaya Karnataka

ನಮ್ಮ ತೋಟದಲ್ಲಿ ಕೇವಲ ಹತ್ತು ವರ್ಷಗಳ ಹಿಂದೆ ನವಿಲುಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಈಗ ಅದು ನವಿಲುಗಳ ವಾಸಸ್ಥಾನ, ಜನ್ಮಸ್ಥಾನ ಎಲ್ಲವೂ ಆಗಿದೆ.

ತೋಟಕ್ಕೆ ಪ್ರವೇಶಿಸಿದ ತಕ್ಷಣ ನವಿಲುಗಳ ನಾನಾ ಬಗೆಯ ದರ್ಶನವಾಗುತ್ತದೆ. ಅದು ದಶರೂಪ ದರ್ಶನ. ಕೀಟ ಆಯುವ, ಕಷ್ಟ ಪಟ್ಟು ಹಾರಿ ಮರದ ಮೇಲಕ್ಕೆ ಹೋಗಿ ಕೂರುವ, ಹೆಣ್ಣು ನವಿಲು ಒಲಿಸಲು ಕುಣಿಯುವ, ಹಾವಿನ ಮೇಲೆ ಆಕ್ರಮಣ ಮಾಡುವ, ತಮ್ಮ ಸಹಚರರಿಗೆ ಅಪಾಯದ ಸೂಚನೆ ಕೊಡಲು ಕೂಗುವ, ಮೊಟ್ಟೆಗಳಿಗೆ ಕಾವು ಕೊಡುವ ಹೀಗೆ…

ನಾವು ಸಣ್ಣವರಾಗಿದ್ದಾಗ ಒಂದೇ ಒಂದು ಎಸಳು ನವಿಲುಗರಿಗಾಗಿ ನಾವು ಪರಿತಪಿಸುತ್ತಿದ್ದೆವು. ಪುಸ್ತಕದೊಳಗೆ ಅದು ಮರಿಹಾಕುವ ಕನಸುಗಳನ್ನು ನಮ್ಮೊಳಗೆ ಅದ್ಯಾರು ಬಿತ್ತಿದ್ದರೋ ಗೊತ್ತಿಲ್ಲ, ಈಗ ನೋಡಿದರೆ ನವಿಲುಗರಿಗಳು ತೋಟದ ಅನೇಕ ಭಾಗಗಳಲ್ಲಿ ಅನಾಥವಾಗಿ ಬಿದ್ದು ಒದ್ದಾಡುತ್ತಿವೆ.

ನವಿಲಿನ ಮೊಟ್ಟೆಗಳ ಬಗೆಗೆ ಇನ್ನೂ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬೇಕು. ಈ ಸಲ ಮುಂಗಾರು ಮಳೆಯ ಪುಣ್ಯ ಸ್ನಾನಕ್ಕೆ ಬಂಡೆದ್ದು ಹುಟ್ಟಿದ ಮಾಮೇರಿ ಹುಲ್ಲು ಎದೆಯುದ್ದ ಬೆಳೆದು ನಿಂತಾಗ ತೆಂಗಿನ ಕಾಯಿ ಕೆಡವುವ ಕಾಯಕದ ಆನಂದಯ್ಯ ಕಾಯಿ ಕೆಡವಲು ಈ ಹುಲ್ಲು ನೆಪಮಾಡಿ ನಿರಾಕರಿಸಿದಾಗ ಕತ್ತರಿಸುವುದು ಅನಿವಾರ್ಯವಾಯ್ತು. ಗ್ರಾಸ್‌ ಕಟರ್‌ ಮಿಷನಿನ್ನಿಂದ ಹುಲ್ಲು ಹೊಡೆಯುತ್ತಾ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಮುಷ್ಟಿ ಗಾತ್ರದ ತನ್ನ ಬರೋಬರಿ ಐದು ಮೊಟ್ಟೆಗಳಿಗೆ ಕಾವು ಕೂತಿದ್ದ ನವಿಲು ಪಕ್ಷಿ ಹಾರಿ ಕಣ್ಮರೆಯಾಯಿತು. ಅಷ್ಟೊಂದು ಸದ್ದಿನೊಂದಿಗೆ ನಾನು ತೀರಾ ಹತ್ತಿರ ಹೋಗುವವರೆಗೂ ಆ ನವಿಲು ತನ್ನ ಅಂಡ ರೂಪಿ ಜೀವಗಳನ್ನು ಅವುಚಿಕೊಂಡು ಕುಂತೇ ಇದ್ದದ್ದು ಅದರ ಬದ್ಧತೆಗೆ ಸಾಕ್ಷಿಯಾಗಿತ್ತು. ಆದರೆ ತಾನು ಈ ಮನುಷ್ಯನ ಕೈಗೇ ಸಿಕ್ಕಿಬಿಡುವ ಜೀವಭಯದಿಂದ ತನ್ನ ಕುಡಿಗಳನ್ನು ಕಡೆಗಣಿಸಿ ಹಾರಿಹೋಯಿತು.

PC : Pinterest

ತಾನಿದ್ದರೆ ಇಂಥ ಮೊಟ್ಟೆಗಳನ್ನು ಇನ್ನೊಮ್ಮೆ ಇಟ್ಟು ಸೃಷ್ಟಿಸಿಕೊಳ್ಳಬಹುದೆಂಬ ‍ಪ್ರಕೃತಿ ಸಹಜ ಪ್ರವೃತ್ತಿಯಿಂದ ಅದು ತನ್ನ ಮೊಟ್ಟೆಗಳ ಆಸೆಯನ್ನು ತ್ಯಜಿಸಿ ಹಾರಿಹೋಗಿರಬೇಕು. ಇಂಥ ಅದೆಷ್ಟೋ ಮೊಟ್ಟೆಗಳನ್ನು ಅದು ಕಳೆದುಕೊಂಡಿರಬೇಕು… ಆದರೆ ನಾನು ಮೊಟ್ಟೆಗಳನ್ನು ಹತ್ತಿರದಿಂದ ನೋಡಿ ದಿಗ್ಬ್ರಮೆಗೊಂಡೆ. ಅವು ಮೌನವಾಗಿಯೂ ದಿಟ್ಟವಾಗಿಯು ಇರುವಂತೆ ನನಗೆ ಅನಿಸಿತು. ಆ ಮೊಟ್ಟೆಗಳು ರುಚಿಕರ ಆಹಾರವಾಗಿ ಗೋಚರಿಸದೇ ಕರುಣಾಜನಕ ಜೀವಗಳಾಗಿ ಕಂಡವು. ಮಾಂಸಾಹಾರ ಸಸ್ಯಾಹಾರಗಳಲ್ಲಿ ವ್ಯತ್ಯಾಸವರಿಯದ ನನಗೆ ಆ ಮೊಟ್ಟೆಗಳನ್ನು ಮಾತ್ರ ಬೇಯಿಸಿ ತಿನ್ನುವ ಮನಸ್ಸಾಗಲಿಲ್ಲ. ಆ ಮೊಟ್ಟೆಗಳು ಓಡಿಹೋಗುವ ಶಕ್ತಿ ಪಡೆದಿದ್ದರೆ ನಾನೂ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಿದ್ದೆನೋ ಏನೋ…

ಅಂತೂ ಆ ಮೊಟ್ಟೆಗಳ ಸಹವಾಸಕ್ಕೆ ಹೋಗಲಿಲ್ಲ. ನಾನು ತೋಟ ಬಿಟ್ಟು ತೊಲಗುವುದನ್ನೇ ನಿರೀಕ್ಷಿಸಿ ಆ ತಾಯಿ ನವಿಲು ತನ್ನ ಮೊಟ್ಟೆಗಳಿಗೆ ಒದಗಿರಬಹುದಾದ ದುರ್ಗತಿಯನ್ನು ಊಹಿಸಿ ಅಲ್ಲಿಗೆ ಧಾವಿಸಿರಬಹುದು. ಮೊಟ್ಟೆಗಳು ಅಪಹರಿಸಲ್ಪಡದೆ ಸ್ವಸ್ಥಾನದಲ್ಲೇ ಇರುವುದನ್ನು ಕಂಡು ಆಶ್ಚರ್ಯಗೊಂಡು ಕಾವು ಕೂರುವ ಧ್ಯಾನಕ್ಕೆ ಇಳಿದಿರಬಹುದು. ಈ ಮಧ್ಯೆ ಅಣಬೆಗಳನ್ನು ನವಿಲಿನ ಮೊಟ್ಟೆಗಳನ್ನೂ, ಜೊತೆಗೆ ಮೊಲ ಮತ್ತು ಕಾಡು ಹಂದಿಗಳ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಓಡಾಡುವವರು ಯಾಕೋ ಅಪರೂಪವಾಗಿದ್ದಾರೆ ಎನಿಸುತ್ತಿದೆ… ಸುಲಭ ದರದಲ್ಲಿ ಸಿಕ್ಕುತ್ತಿರುವ ಬಾಯಲರ್‌ ಕೋಳಿಗಳ ಮೆತ್ತನೆ ಮಾಂಸವೇನಾದರೂ ಇದಕ್ಕೆ ಕಾರಣವಾಗಿರಬಹುದೇ?

***

(ಕೃಷ್ಣಮೂರ್ತಿ ಬಿಳಿಗೆರೆಯವರು ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...