Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಭೂಮಿ ಹಂಚಿಕೆಯಾಗಿ ಹಿಡುವಳಿಗಳು ಚಿಕ್ಕದಾಗುತ್ತಿರುವ ಮತ್ತು ನೆಲವೆಲ್ಲ ಸೈಟಾಗುತ್ತಿರುವ ಕಾಲದಲ್ಲಿ ಇದು ಅನಿವಾರ್ಯ.

- Advertisement -
- Advertisement -

ಮೊದಲೆ ಹೇಳಿಬಿಡುವುದು ಒಳ್ಳೆಯದು. ನಮ್ಮದು ಫುಕುವೋಕಾ ಮಾದರಿಯ ಸಹಜ ಕೃಷಿ ಅಲ್ಲ. ಅವನದು ಅಷ್ಟೆ, ಅದನ್ನೂ ಪೂರ್ಣ ಸಹಜ ಕೃಷಿಯೆಂದು ಒಪ್ಪಲಾಗದು, ಮನುಷ್ಯರು ಈಗ ಸಿಕ್ಕಾಪಟ್ಟೆ ಮನುಷ್ಯರಾಗಿ ಅಸಹಜಗೊಂಡಿರುವುದು ನಿಜ ತಾನೆ. ಫುಕುವೋಕಾ ಎಲ್ಲರಂತೆ ಮಾರುಕಟ್ಟೆ, ಬೆಲೆ, ಒಂದಿಷ್ಟು ಸಲಕರಣೆಗಳು, ಒಂದಿಷ್ಟು ಗೊಬ್ಬರ, ಬೂದಿ, ಕಳೆ ನಿಯಂತ್ರಣ, ಕೊಯ್ಲು, ಒಕ್ಕಣೆ ಹೀಗೆ ಅವನೂ ಈ ಮನುಷ್ಯ ಜಗತ್ತಿನ ಕೂಸೇ.

ಆದರೆ ಅವನ ಕೃಷಿ ವಿಧಾನಗಳು ಸರಳ, ಪ್ರಕೃತಿಗೆ ಹತ್ತಿರ ಹತ್ತಿರ. ಅವನ ಬದುಕಿನ ವಿಧಾನಗಳು  ಅಷ್ಟೆ. ನಾವೆಲ್ಲ ಅವನ ಹಾದಿಯಲ್ಲಿರುವವರಷ್ಟೆ, ಅವನ ಹತ್ತಿರವೂ ಹೋಗಲಾಗಿಲ್ಲ. ಆದರೆ ಕ್ರಮಿಸಿರುವಷ್ಟು ದೂರ ನಮಗೆ ಒಳ್ಳೆಯದನ್ನು ತೋರಿಸಿದೆ.

ಮೊದ ಮೊದಲು ಕೆಲವರು ನಮ್ಮ ತೋಟ ನೋಡಿ ಈ ಬಗೆಯ ಕೃಷಿಯನ್ನು ನಿಮ್ಮಂತ ನಿಗಧಿತ ಸಂಬಳ ಬರುವವರು ಮಾತ್ರ ಮಾಡಲು ಸಾಧ್ಯ ಎನ್ನುತ್ತಿದ್ದರು. ನಿಜಕ್ಕೂ ಇಂಥ ಕಡಿಮೆ ಖರ್ಚಿನ, ಮರಾಧಾರಿತ, ಮಿಶ್ರ ಬೆಳೆಗಳ ಸಾಂದ್ರ ಬೇಸಾಯ ಪದ್ದತಿಯನ್ನು ಅನುಸರಿಸಬೇಕಾದವರು ನಿಜ ರೈತರು. ಐವತ್ತು ವರ್ಷಗಳ ಹಿಂದೆ ಈ ಬಗೆಯ ಬೇಸಾಯ ಮಾಡುತ್ತಿದ್ದವರು ಅವರೆ. ಬೆಲೆ, ಮಾರುಕಟ್ಟೆ, ನೀರಿನ ಕೊರತೆ, ರೋಗ ರುಜಿನಗಳು, ಪ್ರಾಣಿಗಳ ಕಾಟ, ಪ್ರಕೃತಿ ವಿಕೋಪ ಇವೇ ಮುಂತಾದ ನೂರಾರು ಸಂಕಷ್ಟಗಳಿಂದ ನರಳುತ್ತಿರುವ, ಮಾರುಕಟ್ಟೆ ಚೋರರ ಗರಗಸಕ್ಕೆ, ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ರೈತರು ಈ ಬಗೆಯ ಕೃಷಿ ಮಾಡಬೇಕಾಗಿರುವುದು.

PC : Expo 2015, (ಫುಕುವೋಕಾ)

ಇರುವಷ್ಟು ನೆಲವನ್ನು, ಲಭ್ಯವಿರುವ ನೀರನ್ನು, ನಮ್ಮ ಶ್ರಮವನ್ನು ಸಾರ್ಥಕವಾಗಿ ಬಳಸಿಕೊಂಡು ಕೃಷಿ ಮಾಡುವುದು ಇಂದಿನ ತುರ್ತು. ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಭೂಮಿ ಹಂಚಿಕೆಯಾಗಿ ಹಿಡುವಳಿಗಳು ಚಿಕ್ಕದಾಗುತ್ತಿರುವ ಮತ್ತು ನೆಲವೆಲ್ಲ ಸೈಟಾಗುತ್ತಿರುವ ಕಾಲದಲ್ಲಿ ಇದು ಅನಿವಾರ್ಯ.

ಇದೆಲ್ಲಾ ಇರಲಿ ನಮ್ಮ ರೈತರು ದುಡಿದದ್ದೆಲ್ಲಾ ಅವರ ಬಡತನ್ನಕ್ಕೆ ಜಮಾ ಆಗುವುದಾದರೆ, ಎಷ್ಟು ಹೆಚ್ಚು ಉತ್ಪಾದನೆ ಮಾಡಿದರೂ ಅದರ ಉತ್ಪದನಾ ವೆಚ್ಚವೇ ಜಾಸ್ತಿಯಾಗುವುದಾದರೆ, ಹೆಚ್ಚು ಉತ್ಪಾದನೆ ಯಾಕೆ ಮಾಡಬೇಕು? ಇನ್ನೂ ಬಡವರಾಗಲೆಂದೇ, ಅಥವ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಲೆಂದೇ?

ಇಂಥ ಹೊತ್ತಲ್ಲಿ ರೈತರು ತಮ್ಮನ್ನು ರಕ್ಷಿಸಿಕೊಳ್ಳುವ ಹೊಸ ಕೃಷಿ ಮಂತ್ರಗಳನ್ನು ಕಲಿಯಲೇಬೇಕಿದೆ. ಆ ನಿಟ್ಟಿನಲ್ಲಿ ಯೋಚಿಸಿ ಕಾರ್ಯಕ್ಷೇತ್ರಕ್ಕೆ ಇಳಿದವರನ್ನಿಲ್ಲಿ ಸ್ಮರಿಸಲೇ ಬೇಕು, ಚೇರ್ಕಾಡಿ ರಾಮಚಂದ್ರ ರಾಯರು, ಭರಮಗೌಡರು, ಪುರಷೋತ್ತಮರಾಯರು, ಜಿ.ಎನ್‌.ಎಸ್‌ ರೆಡ್ಡಿ, ನಾರಾಯಣ ರೆಡ್ಡಿ, ಶಿವನಂಜಯ್ಯ ಬಾಳೆಕಾಯಿ, ಶಿವರಾಜ ಪಾಟೀಲ್‌, ಎ.ಪಿ ಚಂದ್ರಶೇಖರ್‌, ಕೈಲಾಸ ಮೂರ್ತಿ, ವಿಜಯ ಅಂಗಡಿ, ಬಸವರಾಜು, ಸದಾಶಿವಪ್ಪ, ಮಹಲಿಂಗಪ್ಪ ಈ ರೈತರಿಗೆ ಪೂರಕವಾಗಿ ನಿಂತು ಈ ಬಗೆಗೆ ಬರೆದ, ಕೃಷ್ಣ ಪ್ರಸಾದ್‌, ಶ್ರೀಪಡ್ರೆ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದ ತೀರ್ಥ ಪ್ಯಾಟಿ, ಶಿವರಾಂ ಪೈಲೂರು, ಗಾಣಧಾಳು ಶ್ರೀಕಂಠ, ಅನಿತಾ, ಶಿವಾನಂದ ಕಳವೆ ಮುಂತಾದವರು, ಇವರಿಗೆ ಒತ್ತಾಸೆಯಾಗಿ ನಿಂತ ಸಿರಿಸಮೃದ್ಧಿ (ಬಳಗ) ಅಡಿಕೆ ಪತ್ರಿಕೆ, ಸುಜಾತ, ಲೀಸಾ ಇಂಡಿಯ, ಸಹಜ ಸಾಗುವಳಿ ಮುಂತಾದ ಪ್ರತ್ರಿಕೆಗಳು, ಸಂಘಟನೆಗಳು ಪರ್ಯಾಯ ಕೃಷಿ ವಿಧಾನಗಳ ಬಗೆಗೆ ಬಹುವಾಗಿ ತಲೆಕೆಡಿಸಿಕೊಂಡ ಪರಿಣಾಮ ಸಾವಿರಾರು ರೈತರ ಸ್ವಾವಲಂಬಿ ಬದುಕಿಗೆ ಕಾರಣವಾಗಿದೆ.

ಅದಕ್ಕೆ ಈ ಕಡಿಮೆ ಖರ್ಚಿನ, ಮಿಶ್ರ ಬೆಳೆಗಳ ಮರಾಧಾರಿತ, ಬಹುಮಹಡಿಯ ಕೃಷಿ ಪದ್ದತಿ ಹಬ್ಬಬೇಕು. ವೈಜ್ಞಾನಿಕೆ ಬೇಸಾಯದ ಹೆಸರಿನಲ್ಲಿ ಉಗ್ರ ಬೇಸಾಯ ಮಾಡಿ ಮಣ್ಣು ನೀರು ಜೀವಗಳನ್ನು ಕಳೆದುಕೊಳ್ಳುವುದಲ್ಲ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...