Homeಕರ್ನಾಟಕನಾಡ ಉಳಿಸಿ ಸಮಾವೇಶ: 'ನಿಮ್ಮ ಭೂಮಿ ಉಳಿಸುವ ಹೋರಾಟ ಇಡೀ ದೇಶಕ್ಕೆ ಸ್ಪೂರ್ತಿ' - ಡಾ....

ನಾಡ ಉಳಿಸಿ ಸಮಾವೇಶ: ‘ನಿಮ್ಮ ಭೂಮಿ ಉಳಿಸುವ ಹೋರಾಟ ಇಡೀ ದೇಶಕ್ಕೆ ಸ್ಪೂರ್ತಿ’ – ಡಾ. ವಿಜು ಕೃಷ್ಣನ್ ಶ್ಲಾಘನೆ!

- Advertisement -
- Advertisement -

ಬೆಂಗಳೂರು: “ಚನ್ನರಾಯಪಟ್ಟಣದ ಧೀರ ಹೋರಾಟಗಾರರಿಗೆ ಸಲಾಂ! ಮೂರು ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಈ ಹೋರಾಟ ಇಡೀ ಭಾರತದ ರೈತರಿಗೆ ಹೊಸ ಹುಮ್ಮಸ್ಸು ತುಂಬುವ ಹೋರಾಟ,” ಎಂದು ಅಖಿಲ ಭಾರತ ಕಿಸಾನ್ ಸಭಾ (AIKS) ಜಂಟಿ ಕಾರ್ಯದರ್ಶಿ ಡಾ. ವಿಜು ಕೃಷ್ಣನ್ ದೇವನಹಳ್ಳಿ ಭೂ ಹೋರಾಟಗಾರರನ್ನು ಶ್ಲಾಘಿಸಿದರು. ಇಂದು (ಜುಲೈ 4) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ **’ನಾಡ ಉಳಿಸಿ ಸಮಾವೇಶ’**ದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಇತರೆ ಭೂ ಹೋರಾಟಗಳಿಗಿಂತ ದೇವನಹಳ್ಳಿ ರೈತರ ಪ್ರತಿಭಟನೆ ಹೇಗೆ ಭಿನ್ನ ಮತ್ತು ಮಹತ್ವದ್ದು ಎಂಬುದನ್ನು ವಿವರಿಸಿದರು.

‘ಕೃಷಿ ಭೂಮಿ ಉಳಿಸುವ ಅಪ್ರತಿಮ ಹೋರಾಟ’: “ಭಾರತದಲ್ಲಿ ಸಾವಿರ ಕಡೆ ಬಲವಂತದ ಭೂ ಸ್ವಾಧೀನ ವಿರೋಧಿ ಹೋರಾಟಗಳು ನಡೆಯುತ್ತಿವೆ. ಹೆಚ್ಚಿನ ಹೋರಾಟಗಳು ಪರಿಹಾರ ಹೆಚ್ಚಿಸಲು ಆಗ್ರಹಿಸಿದ ಹೋರಾಟಗಳಾಗಿವೆ. ಆದರೆ, ನಿಮ್ಮದು ಕೃಷಿ ಭೂಮಿಯನ್ನು ಉಳಿಸುವ ಹೋರಾಟವಾಗಿದೆ. ಇದು ಇಡೀ ದೇಶಕ್ಕೆ ಮಾದರಿ,” ಎಂದು ಡಾ. ವಿಜು ಕೃಷ್ಣನ್ ಒತ್ತಿ ಹೇಳಿದರು. ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ಈಗ ನಮ್ಮೊಂದಿಗಿಲ್ಲದ ಬಯ್ಯಾರೆಡ್ಡಿ ಅವರಿಗೆ ಈ ಹೋರಾಟದ ಗೆಲುವೇ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಅವರು ಭಾವುಕರಾದರು.

‘ವಿರೋಧದಲ್ಲಿದ್ದಾಗ ಬೆಂಬಲ, ಈಗ ಮಾತ ಮರೆತಿದ್ದಾರೆ’: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ ದೇವನಹಳ್ಳಿ ಭೂ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು ಎಂಬುದನ್ನು ಕೃಷ್ಣನ್ ನೆನಪಿಸಿದರು. “ಆದರೆ, ಈಗ ಮಾತ ಮರೆತಿದ್ದಾರೆ. ರೈತರು ಹೋರಾಟ ಮಾಡಿದಾಗ ಪೊಲೀಸರಿಂದ ದೌರ್ಜನ್ಯ ನಡೆಸಿದರು. ಸಂಯುಕ್ತ ಕಿಸಾನ್ ಮೋರ್ಚಾ (SKM) ರೈತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ‘ಕರಾಳ ಕೃಷಿ ಕಾಯ್ದೆ’ ವಿರುದ್ಧದ ಗೆಲುವು ನೆನಪು: 2020ರ ಜೂನ್‌ನಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ರೈತರು, ಕಾರ್ಮಿಕರನ್ನು ಬಂಧನದಲ್ಲಿಟ್ಟು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಂದಿದ್ದನ್ನು ಡಾ. ಕೃಷ್ಣನ್ ಸ್ಮರಿಸಿದರು. “ಅದರ ವಿರುದ್ಧ ಹಸಿರು, ನೀಲಿ, ಕೆಂಪು ಶಾಲುಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿದವು. ಆಗ ಪ್ರಧಾನಿ ಮೋದಿ, ಕಾರ್ಪೊರೇಟ್ ಮಾಧ್ಯಮಗಳು ರೈತ ಹೋರಾಟಗಾರರನ್ನು ‘ತಾಲಿಬಾನ್’, ‘ಪಾಕಿಸ್ತಾನ್’, ‘ಖಲಿಸ್ತಾನ್’ ಎಂದು ಹಣೆಪಟ್ಟಿ ಕಟ್ಟಿದವು. ‘ಮೋದಿ ‘ಆಂದೋಲನ ಜೀವಿಗಳು’ ಎಂದರು. ಆದರೆ, ಕೊನೆಗೆ ಏನಾಯಿತು? ರೈತರು ಒಂದಿಂಚು ಹಿಂದೆ ಸರಿಯಲಿಲ್ಲ. ನಮ್ಮ ಒಗ್ಗಟ್ಟಿನ ಕಾರಣ ನರೇಂದ್ರ ಮೋದಿ ಸರ್ಕಾರ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಿತು. ಅದು ನಮ್ಮ ಒಗ್ಗಟ್ಟಿನ ಹೋರಾಟದ ವಿಜಯ,” ಎಂದು ದೆಹಲಿ ಹೋರಾಟದ ಯಶಸ್ಸನ್ನು ವಿವರಿಸಿದರು.

‘ದೆಹಲಿ ಹೋರಾಟಕ್ಕೂ ಮೀರಿ ನಿಮ್ಮ ಹೋರಾಟ’: “ದೆಹಲಿಯ ಹೋರಾಟಕ್ಕೂ ಮೀರಿ ನೀವು (ದೇವನಹಳ್ಳಿ ರೈತರು) ಹೋರಾಟ ಮಾಡಿದಿರಿ,” ಎಂದು ದೇವನಹಳ್ಳಿ ರೈತರ ತಾಳ್ಮೆ ಮತ್ತು ದೃಢ ಸಂಕಲ್ಪವನ್ನು ಕೃಷ್ಣನ್ ಶ್ಲಾಘಿಸಿದರು.

ಸರ್ಕಾರ ಈಗ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟಿದೆ ಎಂದು ಪ್ರಸ್ತಾಪಿಸಿದ ಅವರು, “ಪ್ರೀಪೇಡ್ ಸ್ಮಾರ್ಟ್ ಮೀಟರ್ ಅತ್ಯಂತ ಭ್ರಷ್ಟ ಯೋಜನೆ. ಚಂಡೀಗಢದಲ್ಲಿ ಇದರ ವಿರುದ್ಧ ಹೋರಾಟ ಮಾಡಿ ತಾರ್ಕಿಕ ಅಂತ್ಯ ಕಾಣಲಾಗಿದೆ. ಈಗ ಉತ್ತರ ಪ್ರದೇಶದಲ್ಲಿಯೂ ಅಂತಹದ್ದೇ ಹೋರಾಟ ನಡೆಯುತ್ತಿದೆ,” ಎಂದು ಹೋರಾಟದ ಮಹತ್ವವನ್ನು ವಿವರಿಸಿದರು.

“ದೆಹಲಿಯ ಹೋರಾಟದಲ್ಲಿ ಸರ್ಕಾರ ‘ಬಗ್ಗುವುದಿಲ್ಲ’ ಎಂದಿತ್ತು. ಆದರೆ, ನಮ್ಮ ಒಗ್ಗಟ್ಟಿನ ಮುಂದೆ ಸರ್ಕಾರ ಸೋತಿತು. ದೆಹಲಿ ಹೋರಾಟದಲ್ಲಿ ಆರಂಭದಲ್ಲಿ ಪಂಜಾಬ್ ರೈತರು ಮಾತ್ರ ಇದ್ದರು. ಬಳಿಕ ಇಡೀ ದೇಶದಿಂದ ರೈತರು ಬೆಂಬಲ ಸೂಚಿಸಿದ್ದರು. ನೀವು ಈಗ ನಡೆಸುತ್ತಿರುವ ಹೋರಾಟಕ್ಕೆ ಗೆಲುವು ಖಚಿತ ಎಂದು ನನಗೆ ವಿಶ್ವಾಸವಿದೆ. ಗೆಲ್ಲುವವರೆಗೆ ಹೋರಾಟ ನಿಲ್ಲಬಾರದು, ನಿಮ್ಮ ಜೊತೆ ಸಂಯುಕ್ತ ಕಿಸಾನ್ ಮೋರ್ಚಾ ಇದೆ,” ಎಂದು ಡಾ. ವಿಜು ಕೃಷ್ಣನ್ ರೈತರಲ್ಲಿ ಭರವಸೆ ಮೂಡಿಸಿದರು.

‘ಸಿದ್ದರಾಮಣ್ಣೋವ್ರೇ, ಏನಾದ್ರೂ ಮಾಡಿ ನಮ್ಮ ಭೂಮಿನ ಉಳಿಸಿ ಕೊಡಿ!’ – ‘ನಾಡ ಉಳಿಸಿ ಸಮಾವೇಶ’ದಲ್ಲಿ ಚನ್ನರಾಯಪಟ್ಟಣ ರೈತ ಮಹಿಳೆಯ ಕಳಕಳಿಯ ಮೊರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...