Homeಚಳವಳಿಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

ಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

- Advertisement -
- Advertisement -

ಈ ತಿಂಗಳು ಜುಲೈ ಎರಡನೇ ತಾರೀಕು ಕೈರುನ್ನಿಸಾ ತೀರಿಕೊಂಡರು. ಅವರ ಬಗ್ಗೆ ಹೊರಗಿನ ಪಪಂಚಕ್ಕ್ರೆ ಹೆಚ್ಚಿಗೆ ಗೊತ್ತಿಲ್ಲದಿರಬಹುದು. ಆದರೆ ಆಕೆಗೆ ಈ ಪ್ರಪಂಚದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿತ್ತು. ಸೆಕ್ಯುಲರ್ ಜೀವನ ವಿಧಾನದಿಂದ ಹಿಡಿದು ಕ್ರಾಂತಿಕಾರಿ ರಾಜಕೀಯದವರೆಗೆ ಆಕೆ ವಿಶಾಲ ಮೈದಾನವನ್ನು ಕಂಡಿದ್ದರು. ಆ ಮೈದಾನದಲ್ಲಿ ಒಂದಷ್ಟು ದೂರ ಸಾಗಿದ್ದರು.
ಕೈರುನ್ನಿಸಾ ಆಂಧ್ರದ ರಾಯಲಸೀಮಾ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ರಾಯಲಸೀಮ ಫ್ಯಾಕ್ಷನಿಸಂ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಿದೆ. ಆದರೆ ದೇಶಾದ್ಯಂತ ಕೋಮುವಾದಿ ಗಲಭೆಗಳು ನಡೆಯುತ್ತಿದ್ದರೂ ರಾಯಲಸೀಮದಲ್ಲಿ ಈ ಪಿಡುಗಿನ ಪ್ರಭಾವ ಬಹಳ ಕಡಿಮೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರ ನಡುವೆ ನೆಲೆಸಿರುವ ಸಾಮಾಜಿಕ ಸಾಮರಸ್ಯ ಬಹಳ ವಿಶೇಷವಾದುದು. ಕೋಮುವಾದಿ ಗಲಭೆಗಳ ಕೊಚ್ಚಿ ಹೋಗುತ್ತಿರುವ ನಮ್ಮ ದೇಶಕ್ಕೆ ರಾಯಲಸೀಮೆಯ ಅನುಭವದಲ್ಲಿ ಒಂದಷ್ಟು ಪರಿಹಾರ ಕಾಣಬಹುದು. ಕೈರುನ್ನೀಸಾ ಅವರ ವ್ಯಕ್ತಿತ್ವದ ಮೇಲೆ ಈ ಸೀಮೆಯ ಧಾರ್ಮಿಕ ಸಾಮರಸ್ಯದ ಪ್ರಭಾವ ಗಾಡವಾಗಿತ್ತು.
ಆಕೆಯ ತಮ್ಮ ಹೇಳುವ ಪ್ರಕಾರ ಆಕೆ ಚಿಕ್ಕಂದಿನಿಂದಲೂ ರೆಬೆಲ್ ಮನಸ್ಥಿತಿಯ ಹುಡುಗಿ. ತಾನು ಇತರರ ಆಸರೆಯಿಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಆಕೆಯದು. ತನ್ನ ಕೌಟುಂಬಿಕ ಪರಿಸರ ಓದಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ ಅವರು ವಿಶಾಖಪಟ್ಟಣದಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ, ಬೆಂಗಳೂರಿನ ಎಚ್‍ಎಎಲ್‍ನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬುದು ಆಕೆಯ ದೃಡವಾದ ನಿಲುವಾಗಿತ್ತು. ಆಕೆ ನರ್ಸಿಂಗ್ ಕೋರ್ಸ್‍ನಲ್ಲಿದ್ದಾಗಲೇ ಬಾಬಯ್ಯನವರ ಸ್ನೇಹವಾಗಿ, ನಂತರ ಅವರ ಬಾಳ ಸಂಗಾತಿಯೂ ಆದರು. ಬಾಬಯ್ಯನವರಿಗೆ ಚಿಕ್ಕಂದಿನಲ್ಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದಾಗಿ ಕೆಲವು ವರ್ಷಗಳು ಅವರ ಜೀವನ ದಾರವಿಲ್ಲದ ಗಾಳಿಪಟದಂತಾಗಿತ್ತು. ಆದರೆ ಕೈರುನ್ನಿಸಾ ಅವರ ಪರಿಚಯವಾಗಿದ್ದು, ಆಗಲೇ ಆಕೆ ಉದ್ಯೋಗ ಮಾಡುತ್ತಿದ್ದುದರಿಂದ ಬಾಬಯ್ಯನವರ ಉನ್ನತ ವ್ಯಾಸಂಗಕ್ಕೆ ಆಕೆ ಬೆಂಬಲವಾಗಿ ನಿಂತರು.
ಬಾಬಯ್ಯನವರ ಬಾಲ್ಯದ ಬಗ್ಗೆ ಕೇಳಿದರೆ ಮಕ್ಸಿಂಗಾರ್ಕಿಯವರ ಬಾಲ್ಯ ನೆನಪಾಗುತ್ತದೆ. ಬಹಳ ಸಣ್ಣ ವಯಸ್ಸಿನಲ್ಲೇ ಯಾರದೋ ಮನೆಯಲ್ಲಿ ಏನೇನೋ ಚಾಕರಿ ಮಾಡುತ್ತಾ ಬೆಳೆದರೂ ಗಾರ್ಕಿಯಂತೆಯೇ ಜೀವನವನ್ನು ತೀಕ್ಷ್ಣವಾಗಿ ಅವಲೋಕಿಸುತ್ತಾ ಅವರಲ್ಲಿ ಮಾನವೀಯ ಗುಣಗಳು ಮೈದುಂಬಿವೆ. ಮಾನವೀಯ ಸಂಬಂಧಗಳಿಗೆ ಅಡ್ಡಗೋಡೆಯಾಗಿರುವ ಜಾತಿ, ಧರ್ಮ, ವರ್ಗಗಳನ್ನು ಮೀರುವ ಹಾದಿಯಲ್ಲಿ ಕೈರುನ್ನಿಸಾ ಅವರನ್ನು ವಿವಾಹವಾಗಿದ್ದು ಅತ್ಯಂತ ಸಹಜವಾಗಿತ್ತು. ಇವರದು ಅಂತರ್‍ಧರ್ಮೀಯ ಸೆಕ್ಯುಲರ್ ಮದುವೆ. ಕೈರುನ್ನಿಸಾ ಅವರ ರೆಬೆಲ್ ಸ್ವಭಾವಕ್ಕೂ ಬಾಬಯ್ಯನವರ ಮಾನವೀಯ ಸ್ವಭಾವಕ್ಕೂ ಮಧ್ಯೆ ಏರ್ಪಟ್ಟ ಅನುಬಂಧ ಇದು.
ಈ ಇಬ್ಬರ ದೃಡ ನಿರ್ಧಾರದ ಈ ಮದುವೆ ಅರ್ಧ ಶತಮಾನದ ಹಿಂದೆ ಯಾವುದೇ ವಿವಾದವಿಲ್ಲದೆ, ನಿರಾಡಂಬರವಾಗಿ ನಡೆಯಿತು. ಆಗ ದೇಶದ ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಜಾತಿ ಧರ್ಮಗಳು ಹುಟ್ಟುವ ಮುಂಚಿನಿಂದಲೂ ನಾವೆಲ್ಲರೂ ಮನುಷ್ಯರು ಎಂಬ ಸತ್ಯವನ್ನು ಮನುಷ್ಯರು ಮರೆಯುತ್ತಿದ್ದಾರೆ. ಧರ್ಮ ಎಂಬುದು ಒಂದು ವ್ಯಕ್ತಿಗತ ನಂಬಿಕೆ, ಅದನ್ನು ಮೀರಿ ಧರ್ಮ ಮನುಷ್ಯ ಸಂಬಂಧಗಳ ನಡುವೆ ವಿಷಸರ್ಪವಾಗಿ ಬದಲಾಗಬಾರದು. ಈ ಇಬ್ಬರ ಮದುವೆ ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿ, ಸ್ಪೂರ್ತಿಯಾಗಿ ನಿಲ್ಲಬೇಕು.
ಕೈರುನ್ನಿಸಾ ವೈಯುಕ್ತಿಕವಾಗಿ ತನ್ನ ಧಾರ್ಮಿಕ ನಂಬಿಕೆಯನ್ನು ತೊರೆದುಕೊಳ್ಳಲಿಲ್ಲ. ಪ್ರತಿನಿತ್ಯ ಮನೆಯಲ್ಲೇ ನಮಾಜು ಮಾಡುತ್ತಿದ್ದರು. ತನ್ನ ಉಳಿತಾಯದ ಹಣದಿಂದ ಒಂದು ಮಸೀದಿಗೆ ದೇಣಿಗೆಯನ್ನೂ ಕೊಟ್ಟಿದ್ದರು. ಹಾಗೆಂದು ತನ್ನ ಧಾರ್ಮಿಕ ನಂಬಿಕೆಯನ್ನು ತನ್ನ ಗಂಡನ ಮೇಲಾಗಲಿ, ತನ್ನ ಮೂವರು ಮಕ್ಕಳ ಮೇಲಾಗಲಿ ಹೇರಿಕೆ ಮಾಡುವ ಆಲೋಚನೆ ಎಂದಿಗೂ ಆಕೆಗೆ ಬರಲಿಲ್ಲ. ಒಂದು ಸಂದರ್ಭದಲ್ಲಿ ಆಕೆ ತನ್ನ ಹೆಸರನ್ನು ರಾಧ ಎಂದು ಬದಲಾಯಿಸಿಕೊಳ್ಳಬೇಕು ಅಂದುಕೊಂಡರು. ಆಗಾಗ ಹಣೆ ಮೇಲೆ ಬೊಟ್ಟನ್ನೂ ಇಡುತ್ತಿದ್ದರು. ಆ ಬೊಟ್ಟು ಅಲಂಕಾರಿಕವಾಗಿತ್ತೆ ಹೊರತು ಹಿಂದು ಧಾರ್ಮಿಕ ಸಂಕೇತವೆಂದು ಆಕೆಗೆ ಅನಿಸಲಿಲ್ಲ.
ಬಾಬಯ್ಯ ಕೈರುನ್ನಿಸಾ ಮಧ್ಯೆ ಸ್ನೇಹಭಾವವಿತ್ತು ಅಂದರೆ ಭೀನ್ನಾಭಿಪ್ರಾಯಗಳಿರಲಿಲ್ಲ ಎಂದರ್ಥವಲ್ಲ. ಬಾಬಯ್ಯನವರ ಚಳವಳಿಗಳ ಒಡನಾಟದ ಪರಿಣಾಮವಾಗಿ,
ಅದೆಷ್ಟೋ ಕ್ರಾಂತಿಕಾರಿಗಳು ಬಾಬಯ್ಯ ಕೈರುನ್ನಿಸಾ ಕುಟುಂಬದ ಆಸರೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಕ್ರಾಂತಿಕಾರಿ ರಾಜಕೀಯದ ಸಹವಾಸ ಕೈರುನ್ನಿಸಾ ಅವರಲ್ಲಿ ಸ್ವಲ್ಪಮಟ್ಟಿನ ಅಭದ್ರತೆಯ ಭಾವಕ್ಕೆ ಕಾರಣವಾಗಿತ್ತು. ಇದು ಅವರ ವ್ಯಕ್ತಿಗತ ಸಮಸ್ಯೆಯಾಗಿರಲಿಲ್ಲ; ಸಾಮಾಜಿಕ ಬದಲಾವಣೆಗಾಗಿ ನಡೆಯುವ ರಾಜಿರಹಿತ ಹೋರಾಟಕ್ಕೂ ಕುಟುಂಬ ಸಂಬಂಧಗಳಿಗೂ ನಡುವೆ ಸದಾಕಾಲ ತಿಕ್ಕಾಟ ಇದ್ದೇ ಇರುತ್ತದೆ. ಇಂಥಾ ಸಾಮಾಜಿಕ ವ್ಯವಸ್ಥಾಗತ ಸಮಸ್ಯೆಗಳನ್ನು ಒಂದಲ್ಲಾ ಒಂದು ಕುಟುಂಬ ಎದುರಿಸಲೇಬೇಕಾಗುತ್ತೆ. ಕೈರುನ್ನಿಸಾ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಲೇ ನಮ್ಮೆಲ್ಲರನ್ನೂ ಗೌರವಿಸುತ್ತಿದ್ದರು. ಆಂಧ್ರದ ಪ್ರಸಿದ್ಧ ಮಾನವಹಕ್ಕು ಹೋರಾಟಗಾರ ಪ್ರೊ.ಬಾಲಗೋಪಾಲ್ ಕಾನೂನು ಶಿಕ್ಷಣವನ್ನು ಈ ಮನೆಯಲ್ಲಿದ್ದುಕೊಂಡೇ ಪಡೆದುಕೊಂಡರು. ಹಾಗೆ ನೋಡಿದರೆ ತೆಲುಗುನಾಡಿನ ಬಹುತೇಕ ಖ್ಯಾತನಾಮರಿಗೆ, ಅವರ ಕುಟುಂಬಗಳಿಗೆ ಈ ಮನೆ ಆತ್ಮೀಯ ತಾಣವಾಗಿತ್ತು.
ಅವರ ಮೂರೂ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಮಾಡಿ, ಘನತೆಯ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಕೈರುನ್ನಿಸಾ ಅವರ ಅಪಾರ ಶ್ರಮವಿದೆ. ಹಿರಿ ಮಗಳು ಪ್ರಣವ ದೆಹಲಿಯಲ್ಲಿ ಅಧ್ಯಾಪಕಿಯಾಗಿದ್ದಾಳೆ, ಕಿರಿ ಮಗಳು ಜಗತಿ ವೈದ್ಯೆಯಾಗಿದ್ದು ಹೈದರಾಬಾದ್‍ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಗ ಭಾನುತೇಜ್ ಪತ್ರಕರ್ತರಾಗಿ ಹೆಸರು ಗಳಿಸಿದ್ದಾರೆ. ಇಲ್ಲಿ ಒಂದು ವಿಶೇಷವನ್ನು ಹೇಳಲೇಬೇಕು. ಈ ಮೂವರೂ ಮಕ್ಕಳು ಅಂತರ್‍ಜಾತೀಯ ಮದುವೆಯಾಗಿದ್ದಾರೆ. ಹೀಗೆ ಈ ಕುಟುಂಬ ನಮ್ಮನ್ನು ಆವರಿಸಿರುವ ಜಾತಿ ಧರ್ಮಗಳ ಗೋಡೆಯನ್ನು ಕೆಡವಿಹಾಕಿದೆ.
ಕೈರುನ್ನಿಸಾ ಸೆಕ್ಯುಲರ್ ದೃಷ್ಟಿಕೋನದ ಕಾರಣಕ್ಕಾಗಿಯೇ ಇರಬಹುದು, ತಮ್ಮ ಮಗ ಮತ್ತು ಹೆಣ್ಣು ಮಕ್ಕಳಲ್ಲಿ ಯಾವುದೇ ಬೇಧವಿಲ್ಲದಂತೆ ಸಮಾನವಾಗಿ ನೋಡಿಕೊಂಡರು. ತನ್ನ ಉಳಿತಾಯದ ಹಣವನ್ನು ಮೂವರಿಗೂ ಸಮಾನವಾಗಿ ಹಂಚಿದ್ದರು. ‘ಅಣ್ಣಾ, ನನಗೆ ಹೆಣ್ಣು ಮಕ್ಕಳಾದರೂ, ಗಂಡು ಮಕ್ಕಳಾದರೂ ಒಂದೇ, ಅದಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೇನೆ’ ಅಂತ ಬಹಳ ಹೆಮ್ಮೆಯಿಂದ ಹೇಳಿದ್ದರು. ಆಕೆಯ ಕೊನೆಗಾಲದಲ್ಲಿ ಉಳಿದ ಆಸ್ತಿಪಾಸ್ತಿಯನ್ನು ತಮ್ಮ ಮೊಮ್ಮಕ್ಕಳಿಗೆ ಹಂಚಬೇಕೆಂದು ತೀರ್ಮಾನಿಸಿದ್ದರು. ಇದು ಅವರ ದೂರದೃಷ್ಟಿ ಕೂಡ.
ಕೈರುನ್ನಿಸಾ ಜಾತಿ ಮತ ಬೇಧಗಳನ್ನು ವಿರೋಧಿಸಿದ್ದರೆಂಬುದು ಮಾತ್ರವಲ್ಲ; ಲಿಂಗ ತಾರತಮ್ಯವನ್ನೂ ವಿರೋಧಿಸುತ್ತಿದ್ದರು. ಅದು ಬಾಯಿಮಾತಿನಲ್ಲಿ ಮಾತ್ರವಲ್ಲ. ತಮ್ಮ ನಿಜ ಜೀವನದ ಉದಾಹರಣೆ ಮೂಲಕ. ಮನುಷ್ಯರು ಮನುಷ್ಯರಾಗಿ ಬದಲಾದರೆ ಎಷ್ಟೋ ಸಂಕುಚಿತ ಸಂಬಂಧಗಳನ್ನು ಮೀರಬಹುದೆಂಬ ಸತ್ಯವನ್ನು ಕೈರುನ್ನಿಸಾ ನೋಡಿ ಕಲಿಯಬಹುದು. ತನ್ನ ಅಂತ್ಯಸಂಸ್ಕಾರದ ಬಗ್ಗೆ ಆಕೆ ಕೈಗೊಂಡ ತೀರ್ಮಾನ ಇವೆಲ್ಲವನ್ನೂ ಮೀರಿದ್ದು. ಅವರು ಸ್ವಲ್ಪವೂ ಹಿಂಜರಿಕೆಯಿಲ್ಲದೆ, ತನ್ನ ದೇಹವನ್ನು ತನ್ನದೇ ವೃತ್ತಿಯಾದ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಇದು ಆಕೆಯ ಸೆಕ್ಯುಲರ್ ಪ್ರಪಂಚ ದೃಷ್ಟಿಯ ಪರಾಕಾಷ್ಠೆ.
ಬಾಬಯ್ಯ ಕೈರುನ್ನಿಸಾ ಕುಟಂಬ ಇಂದಿನ ಕೋಮುವಾದಿ ಕಲುಷಿತ ವಾತಾವರಣಕ್ಕೆ ಒಂದು ದಿಟ್ಟ ಪರಿಹಾರ. ಆನರೇ ಚರಿತ್ರೆಯ ನಿರ್ಮಾಪಕರು ಎಂದು ಮಾಕ್ರ್ಸ್ ಹೇಳಿದಂತೆ, ಚರಿತ್ರೆ ನಿರ್ಮಾಣದಲ್ಲಿ ಯಾವುದೇ ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಪಾಲಿಸುವ ಜೀವನದ ಆಚರಣೆಗಳೇ ಸಾಮಾಜಿಕ ಬದಲಾವಣೆಗೆ ಮಾರ್ಗದರ್ಶಿ ಸೂತ್ರಗಳಂತೆ ಕೆಲಸ ಮಾಡುತ್ತವೆ. ಸಾಮಾನ್ಯ ಮನುಷ್ಯರಲ್ಲಿ ಕೆಲವರು ಅಸಾಮಾನ್ಯವಾಗಿ ಜೀವಿಸುತ್ತಾರೆ ಎಂದರೆ ಇದೇ ಅನಿಸುತ್ತೆ.

– ಪ್ರೊ.ಹರಗೋಪಾಲ್
ಕನ್ನಡಕ್ಕೆ : ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...