Homeಚಳವಳಿಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

ಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

- Advertisement -
- Advertisement -

ಈ ತಿಂಗಳು ಜುಲೈ ಎರಡನೇ ತಾರೀಕು ಕೈರುನ್ನಿಸಾ ತೀರಿಕೊಂಡರು. ಅವರ ಬಗ್ಗೆ ಹೊರಗಿನ ಪಪಂಚಕ್ಕ್ರೆ ಹೆಚ್ಚಿಗೆ ಗೊತ್ತಿಲ್ಲದಿರಬಹುದು. ಆದರೆ ಆಕೆಗೆ ಈ ಪ್ರಪಂಚದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿತ್ತು. ಸೆಕ್ಯುಲರ್ ಜೀವನ ವಿಧಾನದಿಂದ ಹಿಡಿದು ಕ್ರಾಂತಿಕಾರಿ ರಾಜಕೀಯದವರೆಗೆ ಆಕೆ ವಿಶಾಲ ಮೈದಾನವನ್ನು ಕಂಡಿದ್ದರು. ಆ ಮೈದಾನದಲ್ಲಿ ಒಂದಷ್ಟು ದೂರ ಸಾಗಿದ್ದರು.
ಕೈರುನ್ನಿಸಾ ಆಂಧ್ರದ ರಾಯಲಸೀಮಾ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ರಾಯಲಸೀಮ ಫ್ಯಾಕ್ಷನಿಸಂ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಿದೆ. ಆದರೆ ದೇಶಾದ್ಯಂತ ಕೋಮುವಾದಿ ಗಲಭೆಗಳು ನಡೆಯುತ್ತಿದ್ದರೂ ರಾಯಲಸೀಮದಲ್ಲಿ ಈ ಪಿಡುಗಿನ ಪ್ರಭಾವ ಬಹಳ ಕಡಿಮೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರ ನಡುವೆ ನೆಲೆಸಿರುವ ಸಾಮಾಜಿಕ ಸಾಮರಸ್ಯ ಬಹಳ ವಿಶೇಷವಾದುದು. ಕೋಮುವಾದಿ ಗಲಭೆಗಳ ಕೊಚ್ಚಿ ಹೋಗುತ್ತಿರುವ ನಮ್ಮ ದೇಶಕ್ಕೆ ರಾಯಲಸೀಮೆಯ ಅನುಭವದಲ್ಲಿ ಒಂದಷ್ಟು ಪರಿಹಾರ ಕಾಣಬಹುದು. ಕೈರುನ್ನೀಸಾ ಅವರ ವ್ಯಕ್ತಿತ್ವದ ಮೇಲೆ ಈ ಸೀಮೆಯ ಧಾರ್ಮಿಕ ಸಾಮರಸ್ಯದ ಪ್ರಭಾವ ಗಾಡವಾಗಿತ್ತು.
ಆಕೆಯ ತಮ್ಮ ಹೇಳುವ ಪ್ರಕಾರ ಆಕೆ ಚಿಕ್ಕಂದಿನಿಂದಲೂ ರೆಬೆಲ್ ಮನಸ್ಥಿತಿಯ ಹುಡುಗಿ. ತಾನು ಇತರರ ಆಸರೆಯಿಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಆಕೆಯದು. ತನ್ನ ಕೌಟುಂಬಿಕ ಪರಿಸರ ಓದಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ ಅವರು ವಿಶಾಖಪಟ್ಟಣದಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ, ಬೆಂಗಳೂರಿನ ಎಚ್‍ಎಎಲ್‍ನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬುದು ಆಕೆಯ ದೃಡವಾದ ನಿಲುವಾಗಿತ್ತು. ಆಕೆ ನರ್ಸಿಂಗ್ ಕೋರ್ಸ್‍ನಲ್ಲಿದ್ದಾಗಲೇ ಬಾಬಯ್ಯನವರ ಸ್ನೇಹವಾಗಿ, ನಂತರ ಅವರ ಬಾಳ ಸಂಗಾತಿಯೂ ಆದರು. ಬಾಬಯ್ಯನವರಿಗೆ ಚಿಕ್ಕಂದಿನಲ್ಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದಾಗಿ ಕೆಲವು ವರ್ಷಗಳು ಅವರ ಜೀವನ ದಾರವಿಲ್ಲದ ಗಾಳಿಪಟದಂತಾಗಿತ್ತು. ಆದರೆ ಕೈರುನ್ನಿಸಾ ಅವರ ಪರಿಚಯವಾಗಿದ್ದು, ಆಗಲೇ ಆಕೆ ಉದ್ಯೋಗ ಮಾಡುತ್ತಿದ್ದುದರಿಂದ ಬಾಬಯ್ಯನವರ ಉನ್ನತ ವ್ಯಾಸಂಗಕ್ಕೆ ಆಕೆ ಬೆಂಬಲವಾಗಿ ನಿಂತರು.
ಬಾಬಯ್ಯನವರ ಬಾಲ್ಯದ ಬಗ್ಗೆ ಕೇಳಿದರೆ ಮಕ್ಸಿಂಗಾರ್ಕಿಯವರ ಬಾಲ್ಯ ನೆನಪಾಗುತ್ತದೆ. ಬಹಳ ಸಣ್ಣ ವಯಸ್ಸಿನಲ್ಲೇ ಯಾರದೋ ಮನೆಯಲ್ಲಿ ಏನೇನೋ ಚಾಕರಿ ಮಾಡುತ್ತಾ ಬೆಳೆದರೂ ಗಾರ್ಕಿಯಂತೆಯೇ ಜೀವನವನ್ನು ತೀಕ್ಷ್ಣವಾಗಿ ಅವಲೋಕಿಸುತ್ತಾ ಅವರಲ್ಲಿ ಮಾನವೀಯ ಗುಣಗಳು ಮೈದುಂಬಿವೆ. ಮಾನವೀಯ ಸಂಬಂಧಗಳಿಗೆ ಅಡ್ಡಗೋಡೆಯಾಗಿರುವ ಜಾತಿ, ಧರ್ಮ, ವರ್ಗಗಳನ್ನು ಮೀರುವ ಹಾದಿಯಲ್ಲಿ ಕೈರುನ್ನಿಸಾ ಅವರನ್ನು ವಿವಾಹವಾಗಿದ್ದು ಅತ್ಯಂತ ಸಹಜವಾಗಿತ್ತು. ಇವರದು ಅಂತರ್‍ಧರ್ಮೀಯ ಸೆಕ್ಯುಲರ್ ಮದುವೆ. ಕೈರುನ್ನಿಸಾ ಅವರ ರೆಬೆಲ್ ಸ್ವಭಾವಕ್ಕೂ ಬಾಬಯ್ಯನವರ ಮಾನವೀಯ ಸ್ವಭಾವಕ್ಕೂ ಮಧ್ಯೆ ಏರ್ಪಟ್ಟ ಅನುಬಂಧ ಇದು.
ಈ ಇಬ್ಬರ ದೃಡ ನಿರ್ಧಾರದ ಈ ಮದುವೆ ಅರ್ಧ ಶತಮಾನದ ಹಿಂದೆ ಯಾವುದೇ ವಿವಾದವಿಲ್ಲದೆ, ನಿರಾಡಂಬರವಾಗಿ ನಡೆಯಿತು. ಆಗ ದೇಶದ ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಜಾತಿ ಧರ್ಮಗಳು ಹುಟ್ಟುವ ಮುಂಚಿನಿಂದಲೂ ನಾವೆಲ್ಲರೂ ಮನುಷ್ಯರು ಎಂಬ ಸತ್ಯವನ್ನು ಮನುಷ್ಯರು ಮರೆಯುತ್ತಿದ್ದಾರೆ. ಧರ್ಮ ಎಂಬುದು ಒಂದು ವ್ಯಕ್ತಿಗತ ನಂಬಿಕೆ, ಅದನ್ನು ಮೀರಿ ಧರ್ಮ ಮನುಷ್ಯ ಸಂಬಂಧಗಳ ನಡುವೆ ವಿಷಸರ್ಪವಾಗಿ ಬದಲಾಗಬಾರದು. ಈ ಇಬ್ಬರ ಮದುವೆ ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿ, ಸ್ಪೂರ್ತಿಯಾಗಿ ನಿಲ್ಲಬೇಕು.
ಕೈರುನ್ನಿಸಾ ವೈಯುಕ್ತಿಕವಾಗಿ ತನ್ನ ಧಾರ್ಮಿಕ ನಂಬಿಕೆಯನ್ನು ತೊರೆದುಕೊಳ್ಳಲಿಲ್ಲ. ಪ್ರತಿನಿತ್ಯ ಮನೆಯಲ್ಲೇ ನಮಾಜು ಮಾಡುತ್ತಿದ್ದರು. ತನ್ನ ಉಳಿತಾಯದ ಹಣದಿಂದ ಒಂದು ಮಸೀದಿಗೆ ದೇಣಿಗೆಯನ್ನೂ ಕೊಟ್ಟಿದ್ದರು. ಹಾಗೆಂದು ತನ್ನ ಧಾರ್ಮಿಕ ನಂಬಿಕೆಯನ್ನು ತನ್ನ ಗಂಡನ ಮೇಲಾಗಲಿ, ತನ್ನ ಮೂವರು ಮಕ್ಕಳ ಮೇಲಾಗಲಿ ಹೇರಿಕೆ ಮಾಡುವ ಆಲೋಚನೆ ಎಂದಿಗೂ ಆಕೆಗೆ ಬರಲಿಲ್ಲ. ಒಂದು ಸಂದರ್ಭದಲ್ಲಿ ಆಕೆ ತನ್ನ ಹೆಸರನ್ನು ರಾಧ ಎಂದು ಬದಲಾಯಿಸಿಕೊಳ್ಳಬೇಕು ಅಂದುಕೊಂಡರು. ಆಗಾಗ ಹಣೆ ಮೇಲೆ ಬೊಟ್ಟನ್ನೂ ಇಡುತ್ತಿದ್ದರು. ಆ ಬೊಟ್ಟು ಅಲಂಕಾರಿಕವಾಗಿತ್ತೆ ಹೊರತು ಹಿಂದು ಧಾರ್ಮಿಕ ಸಂಕೇತವೆಂದು ಆಕೆಗೆ ಅನಿಸಲಿಲ್ಲ.
ಬಾಬಯ್ಯ ಕೈರುನ್ನಿಸಾ ಮಧ್ಯೆ ಸ್ನೇಹಭಾವವಿತ್ತು ಅಂದರೆ ಭೀನ್ನಾಭಿಪ್ರಾಯಗಳಿರಲಿಲ್ಲ ಎಂದರ್ಥವಲ್ಲ. ಬಾಬಯ್ಯನವರ ಚಳವಳಿಗಳ ಒಡನಾಟದ ಪರಿಣಾಮವಾಗಿ,
ಅದೆಷ್ಟೋ ಕ್ರಾಂತಿಕಾರಿಗಳು ಬಾಬಯ್ಯ ಕೈರುನ್ನಿಸಾ ಕುಟುಂಬದ ಆಸರೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಕ್ರಾಂತಿಕಾರಿ ರಾಜಕೀಯದ ಸಹವಾಸ ಕೈರುನ್ನಿಸಾ ಅವರಲ್ಲಿ ಸ್ವಲ್ಪಮಟ್ಟಿನ ಅಭದ್ರತೆಯ ಭಾವಕ್ಕೆ ಕಾರಣವಾಗಿತ್ತು. ಇದು ಅವರ ವ್ಯಕ್ತಿಗತ ಸಮಸ್ಯೆಯಾಗಿರಲಿಲ್ಲ; ಸಾಮಾಜಿಕ ಬದಲಾವಣೆಗಾಗಿ ನಡೆಯುವ ರಾಜಿರಹಿತ ಹೋರಾಟಕ್ಕೂ ಕುಟುಂಬ ಸಂಬಂಧಗಳಿಗೂ ನಡುವೆ ಸದಾಕಾಲ ತಿಕ್ಕಾಟ ಇದ್ದೇ ಇರುತ್ತದೆ. ಇಂಥಾ ಸಾಮಾಜಿಕ ವ್ಯವಸ್ಥಾಗತ ಸಮಸ್ಯೆಗಳನ್ನು ಒಂದಲ್ಲಾ ಒಂದು ಕುಟುಂಬ ಎದುರಿಸಲೇಬೇಕಾಗುತ್ತೆ. ಕೈರುನ್ನಿಸಾ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಲೇ ನಮ್ಮೆಲ್ಲರನ್ನೂ ಗೌರವಿಸುತ್ತಿದ್ದರು. ಆಂಧ್ರದ ಪ್ರಸಿದ್ಧ ಮಾನವಹಕ್ಕು ಹೋರಾಟಗಾರ ಪ್ರೊ.ಬಾಲಗೋಪಾಲ್ ಕಾನೂನು ಶಿಕ್ಷಣವನ್ನು ಈ ಮನೆಯಲ್ಲಿದ್ದುಕೊಂಡೇ ಪಡೆದುಕೊಂಡರು. ಹಾಗೆ ನೋಡಿದರೆ ತೆಲುಗುನಾಡಿನ ಬಹುತೇಕ ಖ್ಯಾತನಾಮರಿಗೆ, ಅವರ ಕುಟುಂಬಗಳಿಗೆ ಈ ಮನೆ ಆತ್ಮೀಯ ತಾಣವಾಗಿತ್ತು.
ಅವರ ಮೂರೂ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಮಾಡಿ, ಘನತೆಯ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಕೈರುನ್ನಿಸಾ ಅವರ ಅಪಾರ ಶ್ರಮವಿದೆ. ಹಿರಿ ಮಗಳು ಪ್ರಣವ ದೆಹಲಿಯಲ್ಲಿ ಅಧ್ಯಾಪಕಿಯಾಗಿದ್ದಾಳೆ, ಕಿರಿ ಮಗಳು ಜಗತಿ ವೈದ್ಯೆಯಾಗಿದ್ದು ಹೈದರಾಬಾದ್‍ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಗ ಭಾನುತೇಜ್ ಪತ್ರಕರ್ತರಾಗಿ ಹೆಸರು ಗಳಿಸಿದ್ದಾರೆ. ಇಲ್ಲಿ ಒಂದು ವಿಶೇಷವನ್ನು ಹೇಳಲೇಬೇಕು. ಈ ಮೂವರೂ ಮಕ್ಕಳು ಅಂತರ್‍ಜಾತೀಯ ಮದುವೆಯಾಗಿದ್ದಾರೆ. ಹೀಗೆ ಈ ಕುಟುಂಬ ನಮ್ಮನ್ನು ಆವರಿಸಿರುವ ಜಾತಿ ಧರ್ಮಗಳ ಗೋಡೆಯನ್ನು ಕೆಡವಿಹಾಕಿದೆ.
ಕೈರುನ್ನಿಸಾ ಸೆಕ್ಯುಲರ್ ದೃಷ್ಟಿಕೋನದ ಕಾರಣಕ್ಕಾಗಿಯೇ ಇರಬಹುದು, ತಮ್ಮ ಮಗ ಮತ್ತು ಹೆಣ್ಣು ಮಕ್ಕಳಲ್ಲಿ ಯಾವುದೇ ಬೇಧವಿಲ್ಲದಂತೆ ಸಮಾನವಾಗಿ ನೋಡಿಕೊಂಡರು. ತನ್ನ ಉಳಿತಾಯದ ಹಣವನ್ನು ಮೂವರಿಗೂ ಸಮಾನವಾಗಿ ಹಂಚಿದ್ದರು. ‘ಅಣ್ಣಾ, ನನಗೆ ಹೆಣ್ಣು ಮಕ್ಕಳಾದರೂ, ಗಂಡು ಮಕ್ಕಳಾದರೂ ಒಂದೇ, ಅದಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೇನೆ’ ಅಂತ ಬಹಳ ಹೆಮ್ಮೆಯಿಂದ ಹೇಳಿದ್ದರು. ಆಕೆಯ ಕೊನೆಗಾಲದಲ್ಲಿ ಉಳಿದ ಆಸ್ತಿಪಾಸ್ತಿಯನ್ನು ತಮ್ಮ ಮೊಮ್ಮಕ್ಕಳಿಗೆ ಹಂಚಬೇಕೆಂದು ತೀರ್ಮಾನಿಸಿದ್ದರು. ಇದು ಅವರ ದೂರದೃಷ್ಟಿ ಕೂಡ.
ಕೈರುನ್ನಿಸಾ ಜಾತಿ ಮತ ಬೇಧಗಳನ್ನು ವಿರೋಧಿಸಿದ್ದರೆಂಬುದು ಮಾತ್ರವಲ್ಲ; ಲಿಂಗ ತಾರತಮ್ಯವನ್ನೂ ವಿರೋಧಿಸುತ್ತಿದ್ದರು. ಅದು ಬಾಯಿಮಾತಿನಲ್ಲಿ ಮಾತ್ರವಲ್ಲ. ತಮ್ಮ ನಿಜ ಜೀವನದ ಉದಾಹರಣೆ ಮೂಲಕ. ಮನುಷ್ಯರು ಮನುಷ್ಯರಾಗಿ ಬದಲಾದರೆ ಎಷ್ಟೋ ಸಂಕುಚಿತ ಸಂಬಂಧಗಳನ್ನು ಮೀರಬಹುದೆಂಬ ಸತ್ಯವನ್ನು ಕೈರುನ್ನಿಸಾ ನೋಡಿ ಕಲಿಯಬಹುದು. ತನ್ನ ಅಂತ್ಯಸಂಸ್ಕಾರದ ಬಗ್ಗೆ ಆಕೆ ಕೈಗೊಂಡ ತೀರ್ಮಾನ ಇವೆಲ್ಲವನ್ನೂ ಮೀರಿದ್ದು. ಅವರು ಸ್ವಲ್ಪವೂ ಹಿಂಜರಿಕೆಯಿಲ್ಲದೆ, ತನ್ನ ದೇಹವನ್ನು ತನ್ನದೇ ವೃತ್ತಿಯಾದ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಇದು ಆಕೆಯ ಸೆಕ್ಯುಲರ್ ಪ್ರಪಂಚ ದೃಷ್ಟಿಯ ಪರಾಕಾಷ್ಠೆ.
ಬಾಬಯ್ಯ ಕೈರುನ್ನಿಸಾ ಕುಟಂಬ ಇಂದಿನ ಕೋಮುವಾದಿ ಕಲುಷಿತ ವಾತಾವರಣಕ್ಕೆ ಒಂದು ದಿಟ್ಟ ಪರಿಹಾರ. ಆನರೇ ಚರಿತ್ರೆಯ ನಿರ್ಮಾಪಕರು ಎಂದು ಮಾಕ್ರ್ಸ್ ಹೇಳಿದಂತೆ, ಚರಿತ್ರೆ ನಿರ್ಮಾಣದಲ್ಲಿ ಯಾವುದೇ ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಪಾಲಿಸುವ ಜೀವನದ ಆಚರಣೆಗಳೇ ಸಾಮಾಜಿಕ ಬದಲಾವಣೆಗೆ ಮಾರ್ಗದರ್ಶಿ ಸೂತ್ರಗಳಂತೆ ಕೆಲಸ ಮಾಡುತ್ತವೆ. ಸಾಮಾನ್ಯ ಮನುಷ್ಯರಲ್ಲಿ ಕೆಲವರು ಅಸಾಮಾನ್ಯವಾಗಿ ಜೀವಿಸುತ್ತಾರೆ ಎಂದರೆ ಇದೇ ಅನಿಸುತ್ತೆ.

– ಪ್ರೊ.ಹರಗೋಪಾಲ್
ಕನ್ನಡಕ್ಕೆ : ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...