Homeಮುಖಪುಟಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ದಿ ವೈರ್ ಸಂದರ್ಶನ| ನಾಗರಿಕರಲ್ಲಿ ಭಯವನ್ನು ಸೃಷ್ಟಿಸಲು ದೇಶದ್ರೋಹ ಕಾನೂನನ್ನು ಸರ್ಕಾರಗಳು ಬಳಸುತ್ತಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -
- Advertisement -

ಅದರ ದುರುಪಯೋಗದ ಪ್ರಕರಣಗಳು “ಘಾತೀಯವಾಗಿ” (ವಿಪರೀತ ಪ್ರಮಾಣದಲ್ಲಿ) ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ- ದೇಶದ್ರೋಹದ ಕಾನೂನನ್ನು “ತಕ್ಷಣವೇ ರದ್ದುಗೊಳಿಸಬೇಕು” ಎಂದು ಗುಪ್ತಾ ಹೇಳಿದ್ದಾರೆ. ಭಿನ್ನಮತವನ್ನು ತಡೆಗಟ್ಟಲು ಅಥವಾ ತಡೆಯಲು, ನಾಗರಿಕರಲ್ಲಿ ಭಯವನ್ನು ಸೃಷ್ಟಿಸಲು ಇದನ್ನು ಸರ್ಕಾರಗಳು ಬಳಸುತ್ತಿವೆ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಹೇಳಿದ್ದಾರೆ.

ಸುಮಾರು 60 ವರ್ಷಗಳ ಹಿಂದೆ 1962 ರಲ್ಲಿ ಕೇದಾರ ನಾಥ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 124 ಎ ಅನ್ನು ಉಲ್ಲೇಖಿಸಿದೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಇದ್ದಲ್ಲಿ ಮಾತ್ರ ಇದು ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್‌ ರ್‍ಯಾಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ!

ಆರೋಪ ಹೊರಿಸಲು ಹಿಂಸಾಚಾರಕ್ಕೆ ಪ್ರಚೋದನೆಯ ವಿಷಯ ಅಗತ್ಯವಾದ ಘಟಕಾಂಶವಾಗಿದೆ ಮತ್ತು ಆ ಪ್ರಚೋದನೆಯಿಲ್ಲದೆ ಸೆಕ್ಷನ್ 124 ಎ ಅಂದರೆ ದೇಶದ್ರೋಹ ಕಾನೂನನ್ನು ಬಳಸಲಾಗುವುದಿಲ್ಲ. ಆದಾಗ್ಯೂ, ದೇಶಾದ್ಯಂತ ಬಹುಪಾಲು ಮ್ಯಾಜಿಸ್ಟ್ರೇಟ್‌ಗಳಿಗೆ ಈ ಅಂಶ ತಿಳಿದಂತಿಲ್ಲ ಅಥವಾ ಅದನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಪದೇ ಪದೇ ಈ ಓದುವಿಕೆಯನ್ನು ( 1962 ರ ಉಲ್ಲೇಖ) ಪುನರುಚ್ಚರಿಸಿದೆ ಮತ್ತು ಸುಪ್ರೀಂ ಕೋರ್ಟ್‌ನ ನಿಲುವಿನ ಬಗ್ಗೆ ಯಾವುದೇ ಸಂದೇಹ ಅಥವಾ ಗೊಂದಲಗಳಿಲ್ಲ. ಇದರರ್ಥ ಸೆಕ್ಷನ್ 124 ಎ ಮುದ್ರಣದಲ್ಲಿ ಇರುವಂತೆ ಇರಲಾರದು. ಇದನ್ನು ತೀರಾ ವಿರಳವಾಗಿ ಬಳಸಬೇಕು ಎಂಬುದು ಕೂಡ ಸತ್ಯ ಎಂದು ಗುಪ್ತಾ ಹೇಳಿದ್ದಾರೆ.

ದಿ ವೈರ್‌ಗಾಗಿ ಕರಣ್ ಥಾಪರ್‌ಗೆ ನೀಡಿದ 36 ನಿಮಿಷಗಳ ಸಂದರ್ಶನದಲ್ಲಿ, ನ್ಯಾಯಮೂರ್ತಿ ಗುಪ್ತಾ, ತಮ್ಮ ಮೊದಲ ಆದ್ಯತೆಯೆಂದರೆ ದೇಶದ್ರೋಹದ ಕಾನೂನನ್ನು ತಕ್ಷಣವೇ ರದ್ದುಪಡಿಸುವುದು, ಎರಡನೆಯದು ಪೊಲೀಸರು ಆರೋಪವನ್ನು ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಬೇಕು. ಅದನ್ನು ತೆಗೆದುಕೊಳ್ಳುವ ಮೊದಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೌಂಟರ್‌ಸೈನ್ ಮಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಇಂತಹ ಮಾರ್ಗಸೂಚಿಗಳನ್ನು ರೂಪಿಸುತ್ತದೆ ಎಂದು ಅವರು ಆಶಿಸಿದರು.

ಇದನ್ನೂ ಓದಿ: ಮೋದಿ-ಆದಿತ್ಯನಾಥ್ ವಿರುದ್ದ ಟೀಕೆ: 293 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!

ಈ ವಿಷಯವನ್ನು ಚರ್ಚಿಸುವ ಅಧಿಕಾರ ಹೊಂದಿರುವ ಮುಖ್ಯ ನ್ಯಾಯಮೂರ್ತಿ, ಸೆಕ್ಷನ್ 124 ಎ ಗೆ ಸಂಬಂಧಿಸಿದ ಅವಳಿ ಸಮಸ್ಯೆಗಳನ್ನು ಎತ್ತಬೇಕು: ಅದನ್ನು ದುರುಪಯೋಗಪಡಿಸಿಕೊಳ್ಳುವ ರೀತಿ ಮತ್ತು ತೀವ್ರವಾಗಿ ಹೆಚ್ಚುತ್ತಿರುವ ದುರುಪಯೋಗದ ಪ್ರಕರಣಗಳು- ಈ ವಿಷಯಗಳನ್ನು ಮುಖ್ಯ ನ್ಯಾಯಮೂರ್ತಿ ಎತ್ತಿಕೊಳ್ಳಬೇಕು. ಈ ವಿಷಯವನ್ನು ಪರಿಶೀಲಿಸಲು ಮುಖ್ಯ ನ್ಯಾಯಾಧೀಶರು ತಮ್ಮ ಸು-ಮೋಟು ಅಧಿಕಾರವನ್ನು ಬಳಸುತ್ತಾರೆ ಎಂದು ನಾನು ನಂಬಲಾರೆ. ಈ ವಿಷಯ ಕುರಿತು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಅಥವಾ ಸವಾಲನ್ನು ಸಲ್ಲಿಸುವವರೆಗೆ ಕಾಯಬೇಕಾಗಿದೆ ಮತ್ತು ಅದು ಈ ವಿಷಯಕ್ಕೆ ಹೋಗಲು ಸರಿಯಾದ ಮಾರ್ಗವಾಗಿದೆ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.

ತಾವು ಮುಖ್ಯ ನ್ಯಾಯಮೂರ್ತಿಯಾಗಿದ್ದರೆ, ಕಾನೂನನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಂಬಿದ್ದರೂ ಸಹ, ದೇಶದ್ರೋಹದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಲು ಕಚೇರಿಯ ಸು-ಮೋಟು ಅಧಿಕಾರವನ್ನು ಬಳಸುವುದಿಲ್ಲ ಎಂದು ಹೇಳಿದರು.

ದಿ ವೈರ್ ಸಂದರ್ಶನದಲ್ಲಿ, ನ್ಯಾಯಮೂರ್ತಿ ಗುಪ್ತಾ ಅವರನ್ನು ಇತ್ತೀಚೆಗೆ ದೇಶದ್ರೋಹದ ಆರೋಪಕ್ಕೆ ಒಳಪಡಿಸಿದ ಮೂರು ಪ್ರಕರಣಗಳ ಬಗ್ಗೆ ಪ್ರಶ್ನಿಸಲಾಯಿತು.

ಮೊದಲು, ದಿಶಾ ರವಿ ಪ್ರಕರಣ. ಟೂಲ್ಕಿಟ್ ಸಂಪಾದಿಸಲು ಅಥವಾ ಅದರ ವಿಷಯಗಳನ್ನು ಟ್ವೀಟ್ ಮಾಡುವುದು ಖಂಡಿತವಾಗಿಯೂ ದೇಶದ್ರೋಹವಲ್ಲ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ. ತಾನು ಟೂಲ್ಕಿಟ್ ಅನ್ನು ಪರಿಶೀಲಿಸಿದ್ದೇನೆ ಮತ್ತು ಅದರ ವಿಷಯದಲ್ಲಿ ದೇಶದ್ರೋಹಿ ಅಂಶ ಅಥವಾ ಅಪರಾಧವೂ ಇಲ್ಲ ಎಂದು ಅವರು ಹೇಳಿದರು. ದಿಶಾ ರವಿ ಅವರು ಪೋಯೆಟಿಕ್ ಜಸ್ಟೀಸ್ ಫೌಂಡೇಶನ್‌ನ ಸದಸ್ಯರೊಂದಿಗೆ ವೆಬ್‌ನಾರ್‌ನಲ್ಲಿ ಭಾಗಿಯಾಗುವುದು ದೇಶದ್ರೋಹ ಅಥವಾ ಅಪರಾಧವಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?

ಈ ಸಂಬಂಧದಲ್ಲಿ, ಖಲಿಸ್ತಾನವನ್ನು ಚಾಂಪಿಯನ್ ಮಾಡುವ ಅಥವಾ ನಿಷೇಧಿತ ಸಂಘಟನೆಯ ಸದಸ್ಯರಾಗಿರುವ ಯಾರೊಂದಿಗಾದರೂ ಮಾತನಾಡುವುದು ದೇಶದ್ರೋಹ ಅಥವಾ ಅಪರಾಧವೇ ಎಂದು ನ್ಯಾಯಮೂರ್ತಿ ಗುಪ್ತಾ ಅವರನ್ನು ಕೇಳಲಾಯಿತು. ಅವರ ಸ್ಪಷ್ಟ ಉತ್ತರವೆಂದರೆ ಅದು ದೇಶದ್ರೋಹವಲ್ಲ ಮತ್ತು ಅಪರಾಧವಲ್ಲ.

ಎರಡನೆಯದಾಗಿ, ರಿಪಬ್ಲಿಕ್ ದಿನದಂದು ಪ್ರತಿಭಟನಾಕಾರರೊಬ್ಬರು ಗುಂಡು ಹಾರಿಸಲ್ಪಟ್ಟ ಕಾರಣ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರು ಟ್ವೀಟ್ ಮಾಡುವುದು ದೇಶದ್ರೋಹವಲ್ಲ ಎಂದು ಹೇಳಿದರು, ಟ್ವೀಟ್‌ನ ವಿಷಯ ತಪ್ಪಾಗಿದ್ದರೂ ಅದು ದೇಶದ್ರೋಹ ಅಥವಾ ಅಪರಾಧವಲ್ಲ ಎಂದು ಹೇಳಿದರು. ಇದು ಕಳಪೆ ಪತ್ರಿಕೋದ್ಯಮವಾಗಬಹುದು, ಆದರೆ ಅದು ಅಪರಾಧವಲ್ಲ ಎಂದು ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.

1995 ರಲ್ಲಿ ಸುಪ್ರೀಂ ಕೋರ್ಟ್ ಬಲ್ವಂತ್ ಸಿಂಗ್ ಪ್ರಕರಣದಲ್ಲಿ ’ಖಲಿಸ್ತಾನ್ ಜಿಂದಾಬಾದ್’ ಎಂದು ಕೂಗುವುದು ದೇಶದ್ರೋಹವಲ್ಲ ಎಂದು ತೀರ್ಪು ನೀಡಿತ್ತು. ಜೆಎನ್‌ಯು ವಿದ್ಯಾರ್ಥಿಗಳು, ’ಭಾರತ್ ತೇರೆ ತುಕ್ಡೆ ತುಕ್ಡೆ ಹೊಂಗೆ ಇನ್ಸಾ ಅಲ್ಲಾ ಇನ್ಸಾ ಅಲ್ಲಾ’ ಎಂದು ಘೋಷಣೆ ಕೂಗಿದ್ದು ದೇಶದ್ರೋಹವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಗುಪ್ತಾ, ಘೋಷಣೆಯನ್ನು ಹಿಂಸಾಚಾರಕ್ಕೆ ಪೊಲೀಸರು ನೇರವಾಗಿ ಲಿಂಕ್ ಮಾಡಲು ಸಾಧ್ಯವಾದರೆ ಅದು ದೇಶದ್ರೋಹ ಎಂದು ಹೇಳಿದ್ದಾರೆ. ಮೂರು ವರ್ಷಗಳು ಕಳೆದಿವೆ. ಅಂತಹ ಯಾವುದೇ ಪುರಾವೆಗಳು ಮುಂದೆ ಬಂದಿಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಇದು ದೇಶದ್ರೋಹವಾಗುವ ಸಾಧ್ಯತೆಯಿದೆ ಎಂದು ತಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಗುಪ್ತಾ ಮಂಡಿಸಿದ ಪ್ರಮುಖ ಅಂಶವೆಂದರೆ, ’ಭಾರತ್ ತೇರೆ ತುಕ್ಡೆ ತುಕ್ಡೆ ಹೊಂಗೆ ಇನ್ಸಾ ಅಲ್ಲಾ ಇನ್ಸಾ ಅಲ್ಲಾ’ ಎಂಬ ಘೋಷಣೆ ದೇಶದ್ರೋಹವಲ್ಲ ಮತ್ತು ಇದು ಹಿಂಸಾಚಾರಕ್ಕೆ ಪ್ರಚೋದನೆ ಎಂದು ಪೊಲೀಸರು ಸಾಬೀತುಪಡಿಸಿದರೆ ಮಾತ್ರ ದೇಶದ್ರೋಹವಾಗುತ್ತದೆ.
ಕಳೆದ ತಿಂಗಳು ದಿಶಾ ರವಿ ಅವರಿಗೆ ಜಾಮೀನು ನೀಡುತ್ತಿದ್ದಾಗ, “ಸರ್ಕಾರಗಳ ಗಾಯಗಳನ್ನು ಮುಚ್ಚಿಕೊಳ್ಳಲು ದೇಶದ್ರೋಹದ ಕಾನೂನನ್ನು ಬಳಸಲಾಗುತ್ತಿದೆ’’ ಎಂದು ಕಿರಿಯ ನ್ಯಾಯಾಧೀಶರು ಹೇಳಿದ್ದನ್ನು ತಾನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ನ್ಯಾಯಮೂರ್ತಿ ಗುಪ್ತಾ ದಿ ವೈರ್‌ಗೆ ತಿಳಿಸಿದರು.

ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...