ಮಲಯಾಳಂ ಚಿತ್ರರಂಗದಲ್ಲಿ ಭೂಗೆಲಿದ್ದಿರುವ ಲೈಂಗಿಕ ಕಿರುಕುಳದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಿವಿನ್ ಪೌಲಿ ಅವರನ್ನು ಇಂದು ವಿಚಾರಣೆಗೆ ಒಳಪಡಿಸಿದೆ.
ಕೋತಮಂಗಲಂನ ಯುವ ನಟಿ ನೀಡಿದ ದೂರಿನ ಆಧಾರದ ಮೇಲೆ ಎಸ್ಐಟಿ ತಂಡ ಮಂಗಳವಾರ ಬೆಳಗ್ಗೆ ಕೊಚ್ಚಿಗೆ ಆಗಮಿಸಿ ವಿಚಾರಣೆ ನಡೆಸಿತು.
ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ನೀಡುವುದಾಗಿ ನಂಬಿಸಿ ದುಬೈನಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯ ದೂರಿನ ಪ್ರಕಾರ, ಡಿಸೆಂಬರ್ 14 ಮತ್ತು ಡಿಸೆಂಬರ್ 15, 2023 ರಂದು ಹೋಟೆಲ್ ಕೋಣೆಯಲ್ಲಿ ಹಲ್ಲೆ ನಡೆದಿದೆ.
ತ್ರಿಶೂರ್ ನಿವಾಸಿಯಾದ ಶ್ರೇಯಾ ತನ್ನನ್ನು ದುಬೈಗೆ ಕರೆದೊಯ್ದು ಅಲ್ಲಿ ನಿವಿನ್ ಪೌಲಿ ಮತ್ತು ಆತನ ಸಹಚರರಿಂದ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಹಲ್ಲೆಕೋರರು ತನಗೆ ಬ್ಲ್ಯಾಕ್ಮೇಲ್ ಮಾಡಲು ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಎರ್ನಾಕುಲಂನ ಓನ್ನುಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತ್ರಿಶೂರ್ನ ಚಲನಚಿತ್ರ ನಿರ್ಮಾಪಕ ಎ ಕೆ ಸುನಿಲ್ ಮತ್ತು ಬಿನು, ಬಶೀರ್ ಮತ್ತು ಕುಟ್ಟನ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ನಿವಿನ್ ಪೌಲಿ ಅವರನ್ನು ಆರನೇ ಆರೋಪಿಯನ್ನಾಗಿ ಪಟ್ಟಿ ಮಾಡಲಾಗಿದೆ.
ಆದರೆ, ನಿವಿನ್ ಪೌಲಿ ಆರೋಪವನ್ನು ನಿರಾಕರಿಸಿದ್ದು, ದೂರಿನ ಹಿಂದೆ ಪಿತೂರಿ ಇದೆ ಎಂದು ಹೇಳಿದ್ದಾರೆ. ನಿವಿನ್ ಅವರ ಹೇಳಿಕೆಯನ್ನು ನಿರ್ದೇಶಕ ಮತ್ತು ಗಾಯಕ ವಿನೀತ್ ಶ್ರೀನಿವಾಸನ್ ಬೆಂಬಲಿಸಿದ್ದಾರೆ. ಘಟನೆ ನಡೆದಿದೆ ಎನ್ನಲಾದ ದಿನದಂದು ಅವರು ಕೊಚ್ಚಿಯಲ್ಲಿ ತಾಣು ನಿರ್ದೇಶಿಸಿದ ಚಿತ್ರದ ಸೆಟ್ನಲ್ಲಿದ್ದರು ಎಂದು ವಿನೀತ್ ಸಾಕ್ಷ್ಯ ನೀಡಿದ್ದಾರೆ.


