Homeಅಂಕಣಗಳುಪುಟಕ್ಕಿಟ್ಟ ಪುಟಗಳುಲಿಪಿ, ಲಿಪಿಕಾರನ ಇತಿಹಾಸ ಹಿಡಿದಿಡುವ ಷ. ಶೆಟ್ಟರ್ ಅವರ ’ಹಳಗನ್ನಡ’

ಲಿಪಿ, ಲಿಪಿಕಾರನ ಇತಿಹಾಸ ಹಿಡಿದಿಡುವ ಷ. ಶೆಟ್ಟರ್ ಅವರ ’ಹಳಗನ್ನಡ’

- Advertisement -
- Advertisement -

ಬಿಸಿಲಿಳಿದು ಕತ್ತಲಾಗುತ್ತಿದ್ದಾಗ ತಮ್ಮ ಎದುರಿಗೆ ಕುಳಿತಿದ್ದ ಇಬ್ಬರು ಶಾಲಾ ಮಕ್ಕಳಿಗೆ ಪೆನ್, ಪೆನ್ಸಿಲ್ ಮತ್ತು ಸ್ಕೆಚ್ ಪೆನ್ನುಗಳನ್ನು ಕೊಟ್ಟು ಮುಂದೆ ಏನು ಓದುತ್ತೀರಿ ಎಂದು ಇತಿಹಾಸಕಾರ ಷ. ಶೆಟ್ಟರ್ ಕೇಳಿದರು.

ಒಬ್ಬಳು ಹೋಂ ಸೈನ್ಸ್ ಎಂದರೆ, ಮತ್ತೊಬ್ಬಳು ಸೋಶಿಯಲ್ ಸೈನ್ಸ್ ಎಂದಳು. “ನೀವಿಬ್ಬರೂ ಜಾಣರಿದ್ದೀರಿ” ಎಂದು ನಕ್ಕ ಷ. ಶೆಟ್ಟರ್, “ನಾನೊಬ್ಬ ದಡ್ಡ” ಎಂದು ಮಕ್ಕಳಿಗೆ ಹೇಳುತ್ತಿದ್ದರು.

“ಸೈನ್ಸ್ ಮತ್ತು ಕಾಮರ್ಸ್ ಬಹಳ ಜಾಣರು ಮತ್ತು ಜಾಣರು ತೆಗೆದುಕೊಂಡ ಮೇಲೆ, ಇವೆರಡೂ ಸಿಗದಿದ್ದಾಗ ಆರ್ಟ್ಸ್ ತೆಗೆದುಕೊಳ್ಳುವ ದಡ್ಡ ವಿದ್ಯಾರ್ಥಿಗಳಲ್ಲಿ ನಾನೊಬ್ಬನಾಗಿದ್ದೆ. ಹಾಗೇ ನಮ್ಮ ಮನೆಯವರು ಮತ್ತು ನೆರೆಹೊರೆಯವರು ತಿಳಿದುಕೊಂಡಿದ್ದು. ಆದರೆ, ನನಗೆ ಯಾವುದು ಬೇಕೋ ಅದನ್ನೇ ತೆಗೆದುಕೊಂಡಿದ್ದೆ. ಅದಕ್ಕೆ ಸ್ಕೋಪ್ ಇದೆ, ಇದಕ್ಕೆ ಸ್ಕೋಪ್ ಇಲ್ಲ ಎನ್ನುವವರು ದಡ್ಡರು. ನೀವು ಯಾವುದೇ ವಿಷಯವನ್ನು ತೆಗೆದುಕೊಳ್ಳಿ, ಅದರಲ್ಲಿ ಆಳ ಎತ್ತರಗಳಿಗೆ ನೀವು ಹೋಗಬಲ್ಲಿರಿ. ದಡ್ಡರು ತೆಗೆದುಕೊಳ್ಳುವ ಆರ್ಟ್ಸ್ ತೆಗೆದುಕೊಂಡೇ ನಾನು ಸಂಶೋಧನೆಗಳನ್ನು ಮಾಡಿದೆ. ಬಹಳ ಮುಖ್ಯವಾದ ಅಧ್ಯಯನಗಳನ್ನು ಮಾಡಿದೆ. ದೇಶ ವಿದೇಶಗಳನ್ನು ಸುತ್ತಿದೆ. ಚೆನ್ನಾಗಿ ಸಂಪಾದನೆಯನ್ನೂ ಮಾಡಿದೆ. ಮುಖ್ಯವಾಗಿ, ಹೌದು, ಏನೋ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ.”

ಇದು ಷ. ಶೆಟ್ಟರ್ ಲೋಕಾಭಿರಾಮವಾಗಿ ಮಕ್ಕಳೊಂದಿಗೆ ಮಾತಾಡುತ್ತಾ ಇದ್ದದ್ದು.

ಅವರ ಹಳಗನ್ನಡ ಎಂಬ ಕೃತಿಯು ಲಿಪಿ, ಲಿಪಿಕಾರ ಮತ್ತು ಲಿಪಿ ವ್ಯವಸಾಯದ ಸಂಶೋಧನೆ ಮತ್ತು ವಿಸ್ತೃತ ಅಧ್ಯಯನವನ್ನು ಆಸಕ್ತರಿಗೆ ತೆರೆದಿಡುತ್ತದೆ. ಆರಂಭದಲ್ಲಿ ಕೃತಿಯೇ ಹೇಳಿಕೊಳ್ಳುವಂತೆ ಇದು ’ಸಾಹಿತ್ಯ ಚರಿತ್ರೆಯ ಒಂದು ಓದು, ಸಾಮಾಜಿಕ ಚರಿತ್ರೆಯ ಮರು ಓದು’ ಎಂಬುದಂತೂ ನಿಜ. ಅಶೋಕನ ಕಾಲದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷಾ ಶಾಸನಗಳಿಂದ ಪ್ರಾರಂಭವಾಗುವ ಈ ಅಧ್ಯಯನ, ನಮ್ಮ ದೇಶದ ಪ್ರಪ್ರಥಮ ಲಿಪಿಯನ್ನು ಮತ್ತು ಲಿಪಿಕಾರನಾಗಿರುವ ಚಪಡ ಎಂಬುವನನ್ನು ಕರ್ನಾಟಕದಲ್ಲಿ ಶೆಟ್ಟರ್ ಗುರುತಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ ಮೂರು ಸ್ಥಳಗಳಲ್ಲಿ ಅಶೋಕನ ಶಾಸನ ಬರೆದ ಇವನು ಇಂದಿನ ಅಫ್ಘಾನಿಸ್ತಾನಕ್ಕೆ ಸೇರಿದ ಅಂದಿನ ಗಾಂಧಾರ ದೇಶದವನು. ಭರತಖಂಡದ ಲಿಪಿಕಾರರ ಇತಿಹಾಸ ಆರಂಭವಾಗುವುದೇ ಇಲ್ಲಿಂದ, ಇವನಿಂದ ಎನ್ನುತ್ತಾರೆ.

ಡಾ. ಎಂ.ಎಂ ಕಲಬುರ್ಗಿ ಅವರು ಬರೆದ ಮುನ್ನುಡಿಯಲ್ಲಿ ಗಮನಕ್ಕೆ ತರುವಂತೆ, ನಾವು ಶಿಲ್ಪಗಳನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ ಎಂದು ಎಚ್ಚರಿಸುವ ಶೆಟ್ಟರ್ ನಮ್ಮ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತೆ ಪೂರ್ಣ ಅಭ್ಯಾಸವನ್ನು ಪೂರೈಸಿದ್ದಾರೆ.

ಕಳೆದ ನೂರು ವರ್ಷಗಳಿಂದ ಕನ್ನಡನಾಡಿನ ಶಾಸನಗಳನ್ನು ಬಳಸಿಕೊಂಡು ಮರುವ್ಯಾಖ್ಯಾನಗಳನ್ನು ಮಾಡಿ ಹೊಸ ಸಂಶೋಧನೆಯನ್ನು ಮುಂದಿಟ್ಟಿದ್ದಾರೆ. ವಾಸ್ತುಶಿಲ್ಪಿಗಳನ್ನು ಬಿಟ್ಟರೆ ನಮಗೆ ಲಿಪಿಶಿಲ್ಪಿಗಳ ಬಗ್ಗೆ ಒಂದು ಸ್ಥೂಲ ಕಲ್ಪನೆ ಇದೆ. ಇವರನ್ನುದ್ದೇಶಿಸಿ ಬಳಸುತ್ತಿದ್ದ ಓಜ, ಆಚಾರ್ಯ, ತ್ವಷ್ಟ, ವಿಶ್ವಕರ್ಮ ಪದಗಳ ಅರಿವಿದೆ. ಆದರೆ ಈ ಲಿಪಿಶಿಲ್ಪಿಗಳ ಸಮಾಜದ ಸ್ಪಷ್ಟ ಕಲ್ಪನೆ ಇಲ್ಲ. ಆರಂಭ ಕಾಲದಲ್ಲಿ ಶಾಸನಕ್ಕೆ ಪಠ್ಯರಚಿಸುವವನೂ ಅದನ್ನು ಕಂಡರಿಸುವವನೂ ಒಬ್ಬನೇ ಆಗಿರುತ್ತಿದ್ದನು. ಎಂಟನೆಯ ಶತಮಾನದ ನಂತರ ಈ ಕೆಲಸವನ್ನು ಹಂಚಿಕೊಳ್ಳುವ ರೂಢಿ ಆರಂಭವಾಯಿತು. ಸಂಸ್ಕೃತಭಾಷೆಯ ಮೇಲಿನ ಪ್ರಭುತ್ವ ಬ್ರಾಹ್ಮಣರಿಗಿದ್ದರೂ ಶಾಸನಗಳನ್ನು ಸಂಯೋಜಿಸಿ ಕಂಡರಿಸುವಲ್ಲಿ ಅವರ ಪಾತ್ರ ವಾಸ್ತವವಾಗಿ ಅತ್ಯಲ್ಪವಾಗಿತ್ತು. ಈ ಕ್ಷೇತ್ರದಿಂದ ಬ್ರಾಹ್ಮಣರನ್ನು ದೂರವಿಟ್ಟು ವೃತ್ತಿನಿರತ ಬ್ರಾಹ್ಮಣೇತರ ಲಿಪಿಕಾರರಾದ ತ್ವಷ್ಟರು, ವಿಶ್ವಕರ್ಮಿಗಳು ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದ ಕತೆಯು ಕುತೂಹಲಕರವಾಗಿದೆ.

PC : Ruthumana, (ಷ. ಶೆಟ್ಟರ್)

ವಿಶ್ವಕರ್ಮಾಚಾರ್ಯನೆಂಬ ಲಿಪಿಕಾರನೊಬ್ಬ ಕನಿಷ್ಟ ಆರುತಾಮ್ರಪಟಗಳನ್ನು ಬರೆದು, 20 ಖಂಡುಗ ಬೀಜದ ವ್ರೀಹಿ, 10 ಖಂಡುಗ ಬೀಜದ ಕಂಗು ಕ್ಷೇತ್ರಗಳನ್ನಲ್ಲದೆ, ಬಹುಶಃ 12 ನಿವರ್ತನ ವಾಪಿ, 12 ನಿವರ್ತನ ಎರೆಭೂಮಿ ಮತ್ತು ಮೂರು ಗ್ರಾಮಗಳನ್ನು ಬ್ರಹ್ಮದೇಯ ಕ್ರಮೇಣ ಪಡೆದುಕೊಂಡ ನಿದರ್ಶನವಿದೆ. ಇಷ್ಟೊಂದು ಆಸ್ತಿಯನ್ನು ರಾಜರಿಂದ ಸಂಪಾದಿಸಿದ ವೈದಿಕ ಬ್ರಾಹ್ಮಣರ ಉದಾಹರಣೆಗಳಿಲ್ಲ. ಬ್ರಾಹ್ಮಣರೊಡನೆ ಸ್ಪರ್ಧೆಯಲ್ಲಿದ್ದ ಲಿಪಿಕಾರರು ಅಂದು ತಮ್ಮ ವೃತ್ತಿಗೊಪ್ಪುವ ಗೋತ್ರಗಳನ್ನು ಹೊಸದಾಗಿ ತಾವೇ ಸೃಷ್ಟಿಸಿಕೊಂಡಿರುವುದೂ ಉಂಟು. ಒಟ್ಟಾರೆ ಬ್ರಾಹ್ಮಣ ಮತ್ತು ಕ್ಷತ್ರಿಯರ ಸುತ್ತ ಹೆಣೆದಿದ್ದ ಇತಿಹಾಸವನ್ನು ಮಧ್ಯಮ ಮತ್ತು ಕೆಳಸ್ತರದವರೆಗೂ ವಿಸ್ತರಿಸಿ, ಸಮಾಜಕ್ಕಾಗಿ ಜೀವ ತೆತ್ತ ಗೌಡ, ಮಾದಿಗ, ಚರ್ಮಕಾರ, ಇನ್ನಿತರ ಶೂದ್ರರಿಗೆ ಇತಿಹಾಸದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ ಶೆಟ್ಟರ್. ಅವರ ಎರಡು ಹೊಸ ವಾದಗಳೆಂದರೆ, “ಎಂಟನೆಯ ಶತಮಾನದವರೆಗೆ ಆಳಿದ ಬಹುತೇಕ ಅರಸು ಮನೆತನಗಳು ತಮ್ಮ ಶೂದ್ರ ಹಾಗೂ ಬುಡಕಟ್ಟಿನ ಹಿನ್ನೆಲೆಯನ್ನು ಉದಾತ್ತೀಕರಿಸಿಕೊಳ್ಳುವ ಅವಸರದಲ್ಲಿ ಉತ್ತರದ ಅಹಿಚ್ಛತ್ರ ಹಾಗೂ ಗಂಗಾತೀರದ ಬ್ರಾಹ್ಮಣರನ್ನು ಬರಮಾಡಿಕೊಂಡು ಅವರಿಗೆ ಬ್ರಹ್ಮದೇಯಗಳನ್ನು ಪೂರೈಸಿ, ತಾವು ಆಳುತ್ತಿದ್ದ ನೆಲಕ್ಕೆ ಪಾವಿತ್ರ್ಯವನ್ನುಂಟು ಮಾಡಿಕೊಳ್ಳುವ ಭ್ರಮೆಯಲ್ಲಿದ್ದವು. ಸುಮಾರು ಎಂಟನೆಯ ಶತಮಾನದಲ್ಲಿ ಇದು ಬದಲಾಗಿ, ತಮ್ಮ ರಾಜ್ಯವನ್ನು ಉಳಿಸಿ ಬೆಳೆಸಲು ವೈದಿಕ ಯಜ್ಞಯಾಗಾದಿಗಳ ಮಂತ್ರಶಕ್ತಿಗಿಂತ ನೆರಳಿನಂತೆ ತಮ್ಮೊಡನಿರುವ ಶ್ರಮಿಕ-ಶೂದ್ರರ ದೈಹಿಕ ಮತ್ತು ನೈತಿಕ ಶಕ್ತಿ ಮುಖ್ಯವೆಂಬುದನ್ನು ಮನಗಂಡು, ಬ್ರಾಹ್ಮಣರನ್ನಲ್ಲದೆ ಇವರನ್ನೂ ಗೌರವಿಸತೊಡಗಿದ್ದರು.

ಇದರ ಪರಿಣಾಮವಾಗಿ ಎಂಟನೆಯ ಶತಮಾನಕ್ಕಿಂತ ಮುಂಚೆ ಅಪರೂಪವಾಗಿದ್ದ ವೀರಗೊಡುಗೆಗಳು, ಅಧಿಕಾರ ಕೊಡುಗೆಗಳು ಅನಂತರ ಹೆಚ್ಚುಗೊಂಡಿದ್ದನ್ನು ಇವರು ತೋರಿಸಿಕೊಟ್ಟಿರುವರು. ರಾಜ್ಯರಕ್ಷಣೆ, ಸಮಾಜರಕ್ಷಣೆ, ಪಶುರಕ್ಷಣೆಗೆ ಮತ್ತು ಒಡೆಯನ ಉಪ್ಪಿನ ಋಣ ತೀರಿಸಲು ದೇಹ ತೆತ್ತ ವೀರರನ್ನು ಸನ್ಮಾನಿಸಿ ಅವರ ಕುಟುಂಬಕ್ಕೆ ನೆತ್ತರ್ಪ್ಪಟ್ಟಿ, ಬಾಳ್ಗಚ್ಚು, ಕಲ್ನಾಟು, ಮೆಚುಗೊಡುಗೆ, ಪೆರ್ಜ್ಜರಪು ಮುಂತಾದ ಕೊಡುಗೆಗಳು ಜಾರಿಗೆ ಬಂದವು. ರಾಷ್ಟ್ರಕೂಟರು ಬ್ರಾಹ್ಮಣರಿಗೆ ಭೂದತ್ತಿ ಕೊಡುವುದನ್ನು ಕಡಿಮೆ ಮಾಡಿ ವೀರರನ್ನು ಪ್ರೋತ್ಸಾಹಿಸತೊಡಗಿದರು. ಹೀಗೆ ಕರ್ನಾಟಕದ ಶಾಸನ ಲಿಪಿವ್ಯವಸಾಯವನ್ನು ಕೇಂದ್ರವಾಗಿಟ್ಟುಕೊಂಡಿದ್ದರೂ ಲಿಪಿಗೆ ಸಂಬಂಧಿಸಿದ ಭಾಷೆ, ಭಾಷೆಗೆ ಸಂಬಂಧಿಸಿದ ಪಠ್ಯ, ಪಠ್ಯವನ್ನು ನಿಯಂತ್ರಿಸಿದ ಧರ್ಮ ಮತ್ತು ರಾಜಧರ್ಮ, ಇವೆಲ್ಲವುಗಳಿಗೆ ನೆಲೆಯಾದ ಸಮಾಜ ಇತ್ಯಾದಿಗಳನ್ನು ತನ್ನ ತೆಕ್ಕೆಗೆ ತಬ್ಬಿಕೊಳ್ಳುವ ಮೂಲಕ ಈ ಗ್ರಂಥ ಹಲವು ಶಿಸ್ತುಗಳ ಸಂಗಮವಾಗಿಬೆಳೆದಿದೆ ಎಂದು ಎಂಎಂ ಕಲಬುರ್ಗಿ ಅಭಿಪ್ರಾಯ ಪಡುತ್ತಾರೆ.

ಯಾವ ರೋಚಕ ಕಾದಂಬರಿಗೂ ಕಡಿಮೆ ಇಲ್ಲದಂತಹ ನಿರೂಪಣಾ ಶೈಲಿ ಶೆಟ್ಟರ್ ಅವರದು.

ಕ್ರಿ.ಪೂ. ಮೂರನೇ ಶತಮಾನದಲ್ಲಿ ಪೂರ್ವಭಾರತದ ಪಾಟಲೀಪುತ್ರದಿಂದ ಆಳುತ್ತಿದ್ದ ಮೌರ್ಯ ಚಕ್ರವರ್ತಿ ಅಶೋಕನು ಲಿಪಿಕಾರನೊಬ್ಬನನ್ನು ರಾಜ್ಯದ ದಕ್ಷಿಣ ಗಡಿಗೆ ಕಳಿಸಿ, ತನ್ನ ಸಾಮಾಜಿಕ ಸಂದೇಶವನ್ನು ಬಂಡೆಗಲ್ಲುಗಳ ಮೇಲೆ ಕೊರೆಸಿದನು. ಬ್ರಾಹ್ಮೀಲಿಪಿ, ಪ್ರಾಕೃತಭಾಷೆ ಮತ್ತು ಕಂಡರಣೆಯ ಕಲೆ, ಒಗ್ಗೂಡಿಕೊಂಡು ಇಂದಿನ ಕರ್ನಾಟಕವನ್ನು ಪ್ರವೇಶಿಸಿದ್ದು ಹೀಗೆ; ಎಂದು ಶೆಟ್ಟರ್ ಪ್ರವೇಶಿಕೆ ಒದಗಿಸುತ್ತಾರೆ.

ಅಶೋಕನು ಕಳಿಸಿದ ಲಿಪಿಕಾರನ ಹೆಸರು ಚಪಡ. ಅವನು ಹುಟ್ಟಿ ಬೆಳೆದದ್ದು ಗಾಂಧಾರ ನಾಡಿನಲ್ಲಿ; ಎಂದು ಪ್ರಾರಂಭವಾಗುವ ಕತೆ ಮುಂದೆ ಸುಮಾರು ನಾನೂರು ಪುಟಗಳ ಸುದೀರ್ಘ ಕಥನವಾಗುತ್ತದೆ.

ಅಭಿನವ ಪ್ರಕಾಶನದ ಪ್ರಕಟಣೆಯಾದ ಈ ’ಹಳಗನ್ನಡ’ ಪುಸ್ತಕ ಅಕ್ಷರ ಪ್ರಸಾರದಲ್ಲಿ ಬೌದ್ಧರ ಪಾತ್ರವನ್ನೂ ತೆರೆದಿಡುತ್ತದೆ. ಬರೆದರೆ ಅನರ್ಹರೊಡನೆ ಅರಿವನ್ನು ಹಂಚಿಕೊಳ್ಳಬೇಕಾಗುವುದೆಂಬ ಆತಂಕದಲ್ಲಿದ್ದ ಅಂದಿನ ಒಂದು ವರ್ಗವು ಅರಿವಿನ ಕೀಲಿಯನ್ನು ಕಂಠ ಸರಳುಗಳ ಹಿಂದೆ ಅಡಗಿಸಿಟ್ಟಿತ್ತು. ಇದನ್ನು ಬಿಡುಗಡೆ ಮಾಡಿ ಬರೆಯುತ್ತಾ ಬೆಳೆಯುವ ಮಾರ್ಗವನ್ನು ತಿಳಿಸಿಕೊಟ್ಟವರಲ್ಲಿ ಬೌದ್ಧರು ಮೊದಲಿಗರು ಎನ್ನುತ್ತಾರೆ ಶೆಟ್ಟರ್.

ಲಿಪಿಕಾರರ ತಾಂತ್ರಿಕ ಮತ್ತು ತಾತ್ವಿಕ ವ್ಯಾಪ್ತಿಯನ್ನು ಅನಾವರಣ ಮಾಡುತ್ತಾ ಹೋಗುವ ಲೇಖಕರು, ಆಗಿನ ರಾಜನ ನೇಮಗಳನ್ನು ಸ್ಪಷ್ಟಪಡಿಸುತ್ತಾ ಕುತೂಹಲ ಕೆರಳಿಸುತ್ತಾರೆ. ಅನಿಶ್ಚಿತ ಆಶೆ ಆಮಿಷ ಉಳ್ಳವನು ಪೂರ್ಣವಿರಲಿ ಭಾಗಶಃ ಕೂಡಾ ಏನನ್ನು ಸಾಧಿಸಲಾರ ಎಂದು ಸ್ಪಷ್ಟ ನುಡಿಯ ಎಚ್ಚರಿಕೆ ಅಶೋಕನದಿತ್ತು. ಸಂದೇಶಗಳನ್ನು ಸ್ವತಃ ಕೊಡುತ್ತಿದ್ದ ಅಶೋಕನು ಇವನ್ನು ಬದಲಿಸುವ ಸ್ವಾತಂತ್ರ್ಯವನ್ನು ಯಾರಿಗೂ ಕೊಟ್ಟಿರಲಿಲ್ಲ. ಮಹಾಮಾತ್ರರು ಮಾತ್ರ ಇವನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿದ್ದರು.

ಹಾಗೆ ಭಾಷೆಯ ಬೆಳವಣಿಗೆ ಮತ್ತು ವ್ಯಾಕರಣದ ವಿಸ್ತಾರದ ಕತೆಯೂ ಜೊತೆಜೊತೆಗೆ ಮಿಳಿತವಾಗುತ್ತಾ ಇಡೀ ಕೃತಿಯು ಒಂದು ಬೆರಗಿನ ಪ್ರತಿಮೆಯಾಗಿ ನಿಲ್ಲುತ್ತದೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು; ಜೋಸೆಫ್ ಕ್ಯಾಂಬಲ್ ಅವರ ‘ಮಿಥಿಕದ ಶಕ್ತಿ’: ಪುರಾಣಗಳ ಶಕ್ತಿಯ ಶೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...