Homeಕರ್ನಾಟಕಉತ್ತರ ಕನ್ನಡದ ರಾಜಕೀಯ ಜಗಲಿಯಲ್ಲಿ ಅದಲು ಬದಲು

ಉತ್ತರ ಕನ್ನಡದ ರಾಜಕೀಯ ಜಗಲಿಯಲ್ಲಿ ಅದಲು ಬದಲು

- Advertisement -
- Advertisement -

ಉತ್ತರ ಕನ್ನಡದ ರಾಜಕಾರಣದ ಸೂತ್ರ ಸಮೀಕರಣ ನಿಧಾನಕ್ಕೆ ಬದಲಾಗತೊಡಗಿದೆ. ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಹೊನ್ನಾವರದ ಕೆರೆಯಲ್ಲಿ ಬಿದ್ದು ಅಸುನೀಗಿದ ಮೀನುಗಾರರ ಪರೇಶ್ ಮೇಸ್ತನನ್ನು ಸಾಬರೇ ಕೊಂದೆಸೆದಿದ್ದಾರೆಂದು ಹುಯಿಲೆಬ್ಬಿಸಿ ಬಿಜೆಪಿ ಭೂಪರು ಭರ್ಜರಿ ಗೆಲವು ಸಾಧಿಸಿದ್ದರು! ಆದರೆ ಬಿಜೆಪಿ ಬುಡವೀಗ ಮೊದಲಿನಷ್ಟು ಭದ್ರವಾಗುಳಿದಿಲ್ಲ. ಯಲ್ಲಾಪುರದ ಕಾಂಗ್ರೆಸ್ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಬಿಜೆಪಿ ಪಾರ್ಟಿಗೆ ನೆಗೆದು ಉಸ್ತುವಾರಿ ಮಂತ್ರಿಯಾದ ಬಳಿಕವಂತೂ ಜಿಲ್ಲೆಯ ಕೇಸರಿ ಪಾಳೆಯ ಬಣ್ಣಗೆಡುತ್ತಿದೆ. ಮುಗಿದ ಗ್ರಾಪಂ ಇಲೆಕ್ಷನ್‌ನಲ್ಲಿ ಬಿಜೆಪಿ ಬೀಗುವಂಥ ದಿಗ್ವಿಜಯವೂ ಸಾಧ್ಯವಾಗಿಲ್ಲ!!

ಸತೀಶ್ ಸೈಲ್

ಬಿಜೆಪಿಯ ಎಂಪಿ, ಎಂಎಲ್‌ಎ, ಮಂತ್ರಿಗಳು ಜನರ ವಿಶ್ವಾಸ ಕಳೆದುಕೊಳ್ಳಲು ಎರಡು ಕಾರಣ. ಒಂದು, ಸಿಬಿಐಗೆ ವಹಿಸಲಾಗಿದ್ದರೂ ಪರೇಶ ಮೇಸ್ತನ ಸಾವಿನ ಪ್ರಕರಣದ ತನಿಖೆ ತ್ವರಿತವಾಗಿ, ಪ್ರಾಮಾಣಿಕವಾಗಿ ಮಾಡದಿರುವುದು. ಹಾಗೊಮ್ಮೆ ಸರಿಯಾದ ತನಿಖೆ ನಡೆದರೆ ತಮ್ಮ ಬಂಡವಾಳ ಬಯಲಾಗುತ್ತದೆಂಬ ಆತಂಕ ಕಟ್ಟರ್ ಹಿಂದುತ್ವವಾದಿ ಸೂತ್ರಧಾರರಿಗೆ ಕಾಡುತ್ತಿದೆ ಎಂಬುದು ಜನರಿಗೆ ಖಾತ್ರಿಯಾಗಿಹೋಗಿದೆ. ಮತ್ತೊಂದು ಕಾರಣ, ಕಿಕ್‌ಬ್ಯಾಕ್, ಪರ್ಸೆಂಟೇಜ್ ದಂಧೆಯಿಂದ ಜನಸಾಮಾನ್ಯರು ರೋಸತ್ತು ಹೋಗಿದ್ದಾರೆ. ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ವಿರುದ್ಧ ಆಡಳಿತ ವಿರೋಧಿ ಆಕ್ರೋಶ ಎದ್ದಿದೆ! ಹೀಗಾಗಿಯೇ ಸಂಘಟನೆ, ನಾಯಕತ್ವ ಇಲ್ಲದಿದ್ದರೂ ಕಾಂಗ್ರೆಸ್ ಕಳೆದ ಗ್ರಾಪಂ ಇಲೆಕ್ಷನ್‌ನಲ್ಲಿ ಬಿಜೆಪಿಗೆ ಬೆವರಿಳಿಸಿದೆ. ವಲಸಿಗ ಮಂತ್ರಿ ಹೆಬ್ಬಾರ್‌ನಿಂದ ಬಿಜೆಪಿ ಬೆಳವಣಿಗೆಗೆ ಪೈಸೆ ಪ್ರಯೋಜನವೂ ಆಗುತ್ತಿಲ್ಲ. ಬದಲಿಗೆ ಹೆಬ್ಬಾರರ ಯಲ್ಲಾಪುರ, ಮುಂಡಗೋಡ ಕ್ಷೇತ್ರದಲ್ಲೇ ಮೂಲ ಬಿಜೆಪಿ ಬಸವಳಿದು ಹೆಬ್ಬಾರ್ ಬಿಜೆಪಿ ತಲೆಯೆತ್ತಿರುವುದು ಸಂಘಪರಿವಾರದ ಕಣ್ಣು ಕೆಂಪು ಮಾಡಿಸಿದೆ.

ಪ್ರಶಾಂತ ದೇಶಪಾಂಡೆ

ಕೇಸರಿ ಕೋಟೆ ಕಂಗೆಡುತ್ತಿರುವ ಈ ಕಾಲಘಟ್ಟದಲ್ಲಿ ಕಾಂಗ್ರೆಸ್ ಫಿನಿಕ್ಸ್‌ನಂತೆ ಬೂದಿಯಿಂದ ಮೇಲೇಳುತ್ತಿದೆ. ಕಾಂಗ್ರೆಸ್‌ನ ವಯೋವೃದ್ಧ ಮುಖಂಡ ಆರ್.ವಿ ದೇಶಪಾಂಡೆ ತಮ್ಮ ಕುಲಕಂಠೀರವ ಪ್ರಶಾಂತ ದೇಶಪಾಂಡೆಯನ್ನು ಉತ್ತರಾಧಿಕಾರಿಯಾಗಿಸಿ ಜಿಲ್ಲಾ ರಾಜಕಾರಣ ಆಖಾಡಕ್ಕೆ ಬಿಟ್ಟಿದ್ದಾರೆ. ಒಮ್ಮೆ ಲೋಕಸಭಾ ಇಲೆಕ್ಷನ್‌ಗೆ ಸ್ಪರ್ಧಿಸಿ ಸೋತ ನಂತರ ರಾಜಕಾರಣದ ಉಸಾಬರಿಯೇ ಬೇಡವೆಂಬಂತಿದ್ದ ಪ್ರಶಾಂತ್ ಈಗ ಕಾಂಗ್ರೆಸ್ ಕಟ್ಟಲು ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಹಿಂದುತ್ವದ ಸೋಂಕಿಲ್ಲದ ಹಿರಿ-ಮರಿ ನೇತಾಗಳ ಸೆಳೆಯಲು ಸ್ಕೆಚ್ ಹಾಕಿಕೊಂಡು ಹೊರಟಿದ್ದಾರೆ. ಅತ್ತ ಹಳಿಯಾಳದಲ್ಲಿ ದೊಡ್ಡ ದೇಶಪಾಂಡೆ ಸಾಹೇಬರು ಮಗ್ಗಲು ಮುಳ್ಳಾಗಿರುವ ಶಿಷ್ಯ ಕಂ ಎಂಎಲ್‌ಸಿ ಶ್ರೀಕಾಂತ ಘೋಟನೇಕರ್‌ರನ್ನು ಮಟ್ಟಹಾಕಲು ನೋಡುತ್ತಿದ್ದಾರೆ. ತನ್ನಿಂದಲೇ ಎರಡು ಬಾರಿ ಎಂಎಲ್‌ಸಿಯಾದರೂ, ಈಗ ತನ್ನ ಎಂಎಲ್‌ಎ ಕುರ್ಚಿ ಮೇಲೆ ಕಣ್ಣು ಹಾಕಿರುವ ಘೋಟನೇಕರ್ ಬಿಜೆಪಿ ಮಂತ್ರಿಯೂ ಮಾಜಿ ಕಾಂಗ್ರೆಸಿಗನೂ ಆಗಿರುವ ಶಿವರಾಮ ಹೆಬ್ಬಾರ್‌ರ ಗಳಸ್ಯಕಂಠಸ್ಯ ಸಖನಾಗಿರುವುದರಿಂದ, ಮಾತೃ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆಂದು ಹೈಕಮಾಂಡ್ ಮಟ್ಟಲ್ಲಿ ದೇಶಪಾಂಡೆ ಬಿಂಬಿಸುತ್ತಿದ್ದಾರೆ! ಘೋಟನೇಕರ್‌ರನ್ನು ಖಳನಾಯಕನಾಗಿ ಬಿಂಬಿಸಲು, ಅವರು ಗ್ರಾಪಂ ಇಲೆಕ್ಷನ್ ಸಂದರ್ಭದಲ್ಲಿ ಹೆಬ್ಬಾರರ ಯಲ್ಲಾಪುರ-ಮುಂಡಗೋಡದ ಕಾಂಗ್ರೆಸ್ ಉಸ್ತುವಾರಿಯಿಂದ ನುಣುಚಿಕೊಂಡಿದ್ದು, ದೇಶಪಾಂಡೆಯವರಿಗೆ ನೆರವಾಗಿದೆ.

ಎಸ್.ಎಲ್ ಘೋಟನೇಕರ್

ಘೋಟನೇಕರ್ ಮತ್ತು ಕಾರವಾರದ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಬಿಜೆಪಿ ಸೇರಲು ಸರ್ಕಸ್ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಸದ್ಯಕ್ಕೆ ಜೆಡಿಎಸ್‌ನಲ್ಲಿರುವ ಕಾರಾವಾರದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಇಲ್ಲಿರುವುದು ಸುಮ್ಮನೆ; ಎಲ್ಲಿರುವುದೋ ನನ್ನ ಮನೆ ಎಂದು ಹಾಡುತ್ತಿದ್ದಾರೆ. ಪಾಪ! ಕಳೆದ ಲೋಕಸಭಾ ಇಲೆಕ್ಷನ್‌ನಲ್ಲಿ ಜೆಡಿಎಸ್ ಕಾಂಗ್ರೆಸ್ ಜಂಟೀ ಅಭ್ಯರ್ಥಿಯಾಗಿದ್ದ ಅಸ್ನೋಟಿಕರ್ ಹಿಂದುತ್ವದ ಬೂಟಾಟಿಕೆ ಮತ್ತು ಸಂಸದ ಅನಂತ ಹೆಗಡೆಯ ಸೋಗಲಾಡಿತನ ಬಯಲುಗೊಳಿಸಿದ್ದರು. ಆದರೂ ಬಿಜೆಪಿಗೆ ನುಸುಳಲು ಮಂತ್ರಿ ಈಶ್ವರಪ್ಪರನ್ನು ಹಿಡಿದು ವಿಫಲ ತಿಪ್ಪರಲಾಗ ಹಾಕಿದ್ದಾರೆ. ಅಸ್ನೋಟಿಕರ್‌ಗೆ ಬಿಜೆಪಿ ಸೇರಲು ಅನಂತ್‌ಹೆಗಡೆ ಮತ್ತು ಕಾಂಗ್ರೆಸ್ ಹೊಕ್ಕಲು ದೇಶಪಾಂಡೆ ಅಡ್ಡಗಾಲು ಹಾಕಿ ಕುಂತಿದ್ದಾರೆ. ಒಂದು ಸುದ್ದಿಯ ಪ್ರಕಾರ ದೇಶಪಾಂಡೆಗೆ ಅಸ್ನೋಟಿಕರ್ ಮೇಲಿನ ಸಿಟ್ಟು ಕೊಂಚ ಕಡಿಮೆ ಆಗಿದೆಯಂತೆ. ಹೀಗಾಗಿ ಅಸ್ನೋಟಿಕರ್ ಒಂದು ಕಡೆಯಿಂದ ಪ್ರಶಾಂತ ದೇಶಪಾಂಡೆ ಮತ್ತೊಂದು ಕಡೆಯಿಂದ ಮಧುಬಂಗಾರಪ್ಪರ ಮೂಲಕ ಕಾಂಗ್ರೆಸ್‌ಗೆ ಎಂಟ್ರಿ ಹೊಡಲು ತಿಣುಕಾಡುತ್ತಿದ್ದಾರೆ.

ಬಳ್ಳಾರಿ ರೆಡ್ಡಿ ರಾಮುಲುಗಳ ಸಂಗಡ ನಿಕಟ ನಂಟಿರುವ ಸತೀಶ್ ಸೈಲ್ ಬಿಜೆಪಿಗೆ ಹೋಗಲು ಬಹಳ ದಿನಗಳಿಂದ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಸಂಘಪರಿವಾರದ ಸೂತ್ರಧಾರರಿಗೆ ಹಾಲಿ ಶಾಸಕಿ ರೂಪಾಲಿನಾಯ್ಕ್ ಬೇಡವಾಗುತ್ತಿದ್ದಾರೆ. ಹೀಗಾಗಿ ಸೈಲ್ ಬಿಜೆಪಿಗೆ ಹೋದರೆ ಆನಂದ ಅಸ್ನೋಟಿಕರ್‌ಗೆ ಕಾಂಗ್ರೆಸ್ ನೆಗೆತ ಸಲೀಸಾಗುತ್ತದೆ! ಕಾಂಗ್ರೆಸ್ ಸೇರಲು ಸನ್ನದ್ಧವಾಗಿರುವ ಜೆಡಿಎಸ್‌ನ ಕಾರ್ಯಾಧ್ಯಕ್ಷ ಮಧುಬಂಗಾರಪ್ಪ ತನ್ನೊಂದಿಗೆ ಈ ಅಸ್ನೋಟಿಕರ್ ಮತ್ತು ಸಿದ್ದಾಪುರದ ಶಶಿಭೂಷಣ ಹೆಗಡೆಯನ್ನು ಕರೆದೊಯ್ದು ತಾಕತ್ತು ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಸ್ವಜಾತಿ ದೀವರು ಹೆಚ್ಚಿರುವ ಉತ್ತರಕನ್ನಡದಲ್ಲಿ, ಅವರ ತಂದೆ ದಿವಂಗತ ಬಂಗಾರಪ್ಪನವರ ದೊಡ್ಡ ಅಭಿಮಾನಿ ಬಳಗವಿದೆ. ಹಾಗಾಗಿ ಉತ್ತರಕನ್ನಡದಲ್ಲಿ ಮಧು ವರ್ಚಸ್ಸು ಒಂದು ಲೇವಲ್‌ಗೆ ಬೆಳೆದಿದೆ.

ಶಶಿಭೂಷಣ ಹೆಗಡೆ

ಮಧು ಜತೆಯಲ್ಲಿ ಕಾರವಾರದಲ್ಲಿ ಪ್ರಬಲನಾಗಿರುವ ಆನಂದ ಅಸ್ನೋಟಿಕರ್ ಮತ್ತು ಶಿರಸಿಯ ಪ್ರಭಾವಿ ಯುವ ನಾಯಕ ಶಶಿಭೂಷಣ ಹೆಗಡೆ ಜೆಡಿಎಸ್‌ಗೆ ಬೈಹೇಳಿ ಕಾಂಗ್ರೆಸ್ ಪಾಲಾಗುತ್ತಾರೆಂಬ ಸುದ್ದಿ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಶಶಿಭೂಷಣ ಹೆಗಡೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ. ಈ ಕಾಣಕ್ಕೆ ಜಿಲ್ಲೆಯ ಬಹುಸಂಖ್ಯಾತ ಹವ್ಯಕ ಬ್ರಾಹ್ಮಣರ ಒಂದು ವರ್ಗ ಶಶಿ ಹಿಂದಿದೆ. ಕ್ರೀಯಾಶೀಲತೆ, ವಿನಯವಂತಿಕೆ ಮತ್ತು ಜಿಲ್ಲೆಯ ಬೇಕು ಬೇಡಗಳ ತಿಳುವಳಿಕೆಯಿರುವ ಶಶಿ ತೀರಾ ಸಣ್ಣ ಅಂತರದಲ್ಲಿ ನಾಲ್ಕು ಬಾರಿ ಸೋತಿರುವುದರಿಂದ ಸಿಂಪಥಿಯೂ ಪಡೆದಿದ್ದಾರೆ. ಅವರು ಎರಡು ಬಾರಿ ಕುಮಟಾದಲ್ಲಿ ಬಿಜೆಪಿಯಿಂದ ಎರಡು ಬಾರಿ ಜೆಡಿಎಸ್‌ನಿಂದ ಶಿರಸಿಯಲ್ಲಿ ಸೋತಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಬಂ ಮತ್ತು ಹೆಗಡೆಜೀ ನಾಮ ಮಹಿಮೆ ಇವತ್ತಿಗೂ ಇರುವುದರಿಂದ ಶಶಿ ಕಾಂಗ್ರೆಸ್‌ಗೆ ಮಧು ತಂಡದೊಂದಿಗೆ ಬಂದರೆ ಶಾಸಕನಾಗುವ ಛಾನ್ಸ್ ಜಾಸ್ತಿಯೆಂಬುದು ರಾಜಕೀಯ ಪಂಡಿತರ ತರ್ಕ!!

ವಿಶ್ವೇಶ್ವರ ಹೆಗಡೆ ಕಾಗೇರಿ

ದುರಂತ ನಾಯಕ ಎಂದೇ ಜಿಲ್ಲೆಯಲ್ಲಿ ಚಿರಪರಿಚಿತನಾಗಿರುವವರು ಶಶಿ ಹೆಗಡೆ. 2004ರಲ್ಲಿ ಬಿಜೆಪಿ ಪ್ರಭಾವಿ ಮುಖಂಡರಾಗಿದ್ದ ಮಾಜಿ ಶಾಸಕ ಡಾ ಎಂ.ಪಿ ಕರ್ಕಿಯನ್ನು ಮೂಲೆಗೆ ತಳ್ಳುವ ಉದ್ದೇಶದಿಂದ, ಸಂಘಪರಿವಾರದಲ್ಲಿ ಬೇರು ಬಿಟ್ಟಿದ್ದ ಇಂದಿನ ಸ್ಪೀಕರ್ ಕಾಗೇರಿ ನಾಜೂಕಾಗಿ, ಶಶಿ ಕುಮಟಾದಲ್ಲಿ ಬಿಜೆಪಿ ಕ್ಯಾಂಡಿಡೇಟಾಗುವಂತೆ ನೋಡಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಮಂತ್ರಿಗಿರಿ ಡಾ. ಕರ್ಕಿ ಪಾಲಾಗುತ್ತದೆಂಬ ದೂ(ದು)ರಾಲೋಚನೆಯಿಂದ ಕಾಗೇರಿ ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದರು. ಆ ನಂತರ ಸ್ವಜಾತಿ ಹವ್ಯಕ ವಲಯದಲ್ಲಿ ಶಶಿ ತನಗೆ ಪ್ರತಿಸ್ಪರ್ಧಿಯಾಗುತ್ತಾರೆಂದು ಹೆದರಿ ಆತ ಬಿಜೆಪಿಯಿಂದ ಹೊರಹೋಗುವಂಥ ಸಂದಿಗ್ಧ ಸೃಷ್ಟಿಸಿದ್ದೂ ಇದೇ ಕಾಗೇರಿ! ಇದರಿಂದ ಕೆರಳಿದ ಶಶಿ ತವರು ಕ್ಷೇತ್ರ ಶಿರಸಿಗೇ ಬಂದು ಕಾಗೇರಿ ವಿರುದ್ಧವೇ ಸ್ಪರ್ಧಿಸಿದ್ದರು. ಅದೆಂಥ ರೋಚಕ ಜಿದ್ದಾಜಿದ್ದಿಯಾಗಿತ್ತೆಂದರೆ ಕಾಗೇರಿ ಬರೀ ಎರಡೇ ಸಾವಿರ ಮತದಂತರದಿಂದ ಗೆದ್ದೂ ಸೋತಂತಾಗಿತ್ತು! ಎರಡನೇ ಬಾರಿ ಪರೇಶ್ ಮೇಸ್ತನ ಸಾವಿನ ಧರ್ಮೋನ್ಮಾದ ಅಲೆಯಲ್ಲೂ ಶಶಿ ಶಿರಸಿಯಲ್ಲಿ ಕಾಗೇರಿಗೆ ಬೆವರಿಳಿಸಿದ್ದರು.

ಇಂಥ ಶಶಿ ಕಾಂಗ್ರೆಸ್ ಸೇರಿದರೆ ಸ್ವಜಾತಿ ಹವ್ಯಕ ಮತ ಮತ್ತು ಮಧುಬಂಗಾರಪ್ಪರಿಂದ ದೀವರ ಓಟು ಬಂದು ಕಾಗೇರಿ ಮಾಜಿಯಾಗುತ್ತಾರೆಂಬುದು ಸರಳ ಗಣಿತದ ಲೆಕ್ಕಾಚಾರ. ಆರು ಬಾರಿ ಶಾಸಕನಾದರೂ ಕಾಗೇರಿಯಿಂದ ಅಭಿವೃದ್ಧಿಯೇನೂ ಆಗಿಲ್ಲ. ಒಂದಂತೂ ಖರೆ; ಶಶಿ ಕಾಂಗ್ರೆಸ್ ಪ್ರವೇಶವಾದರೆ ಕ್ಷೇತ್ರದಲ್ಲಿ ಹಿಡಿತ ಕಳಕೊಂಡಿರುವ ಕಾಗೇರಿಗೆ ಗಂಡಾಂತರ ಖಂಡಿತ!!


ಇದನ್ನೂ ಓದಿ: ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?- ಕುಮಾರಸ್ವಾಮಿ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...

ಭಾರತೀಯರ ಅಡುಗೆ ಮನೆ ತಲುಪಿದ ಯುದ್ಧದ ಪರಿಣಾಮ : ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಲ್ಬಣ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ಪ್ರಧಾನಿ ಮೋದಿಯವರ ಕೈಯಲ್ಲಿ ಭದ್ರವಾಗಿದೆ ಎಂದು ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿರುವಾಗಲೇ,...

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...