Homeಕರ್ನಾಟಕಉತ್ತರ ಕನ್ನಡದ ‘ಅನರ್ಹ’ ರಾಜಕಾರಣ: ಜಿಲ್ಲಾ ಕೇಂದ್ರಕ್ಕಾಗಿ ಶಿರಸಿ, ಯಲ್ಲಾಪುರ ಕಿತ್ತಾಟ...

ಉತ್ತರ ಕನ್ನಡದ ‘ಅನರ್ಹ’ ರಾಜಕಾರಣ: ಜಿಲ್ಲಾ ಕೇಂದ್ರಕ್ಕಾಗಿ ಶಿರಸಿ, ಯಲ್ಲಾಪುರ ಕಿತ್ತಾಟ…

- Advertisement -
- Advertisement -

ಉತ್ತರ ಕನ್ನಡದ ಘಟ್ಟದ ಮೇಲಿನ ಖಾಲಿಬರಡು ರಾಜಕಾರಣ ಅದ್ಯಾಕೋ ಅನರ್ಹ-ಅಯೋಗ್ಯ ಶಾಸಕ ಶಿವರಾಮ್ ಹೆಬ್ಬಾರ್ ಸುತ್ತಲೆ ಗಿರಗಿಟ್ಲೆ ಹೊಡೆಯುತ್ತಿದೆ. ಯಲ್ಲಾಪುರ ಉಪಚುನಾವಣೆಗೆ ರಂಗ ತಾಲೀಮು, ಬನವಾಸಿ ಅಪಹರಿಸಲು ಸಿಎಂ ಯಡ್ಡಿ ಕುಟುಂಬ ಕರಾಮತ್ತು ಮಾಡುತ್ತಿದ್ದರೂ ಹೆಬ್ಬಾರ್ ಉದಾಸೀನದಿಂದ ಇದ್ದಾರೆ. ಶಿರಸಿ ಜಿಲ್ಲೆ ರಚನೆ ಹೋರಾಟ ದಿಕ್ಕೆಡಿಸಲು ಹೆಬ್ಬಾರ್ ಹಿಕಮತ್ತು ನೇಡಸಿದ್ದನೆಂಬ ಭಾವನೆ ಜನರಲ್ಲಿದೆ. ಮತ್ತು ಹೆಬ್ಬಾರ್‌ಗೆ ಬಿಜೆಪಿ ಟಿಕೆಟ್ ಸಿಗದಂತೆ ಅಡ್ಡಗಾಲು ಹಾಕುವ ಮಾಜಿ ಶಾಸಕ ವಿ.ಎಸ್.ಪಾಟೀಲ್‍ಗೆ ಪುಟಗೋಸಿ ನಿಗಮದ ಕಾರು ಇನಾಮಾಗಿ ದಕ್ಕಿರುವುದು ಇಡೀ ಉತ್ತರಕನ್ನಡದಲ್ಲಿ ಬಿಸಿ ಬಿಸಿ ಚರ್ಚೆ ಹುಟುಹಾಕಿದೆ..

ಬನವಾಸಿಗೆ ಅವಿನಾ ಸಂಭಂದ ಶಿರಸಿಗಿದೆ. ಈ ಕನ್ನಡದ ಮೊದಲ ರಾಜಧಾನಿ ಜತೆ ಘಟ್ಟದ ಮೇಲಿನವರಿಗಷ್ಟೇ ಅಲ್ಲ ಉತ್ತರ ಕನ್ನಡದ ಕರಾವಳಿ ಭಾಗಕ್ಕೂ ಭಾವನಾತ್ಮಕ ನಂಟು ಅಂಟಿಕೊಂಡಿದೆ. ಇಂತ ಬನವಾಸಿಯನ್ನು ಯಡ್ಡಿ ಮತ್ತವರ ಮಗ ಶಿವಮೊಗ್ಗದ ಸಂಸದ ರಾಘವೇಂದ್ರ ತಮ್ಮ ರಾಜಕೀಯ ಫಾಯ್ದೆಗಾಗಿ ಅಪಹರಿಸಲು ಹವಣಿಸುತ್ತಿದ್ದಾರೆಂದು ಇಡೀ ಜಿಲ್ಲೆ ಕೆಂಡವಾಗಿದೆ. ಆದರೆ ಮೊನ್ನೆ ಮೊನ್ನೆಯವರೆಗೂ ಈ ಬನವಾಸಿ ಸೀಮೆಯ ಶಾಸಕನಾಗಿದ್ದ ಅನರ್ಹ ಹೆಬ್ಬಾರ್ ಇದೆಲ್ಲಾ ಕಂಡು ಕಾಣದಂತಿದ್ದಾನೆ. ಜನರು ಬನವಾಸಿಗಾಗಿ ಬೀದಿಗಿಳಿದು ಬೊಬ್ಬೆ ಹೊಡೆದಾಗ ಬೆಚ್ಚಿಬಿದ್ದ ಹೆಬ್ಬಾರ್ ಅಂಥ ಪ್ರಯತ್ನವೇ ನಡೆದಿಲ್ಲ ಎಂದು ಸುಳ್ಳು ಸಬೂಬು ಹೇಳುತ್ತಿದ್ದಾನೆ. ಯಡ್ಡಿಯ ಕೆಂಗಣ್ಣಿಗೆ ತುತ್ತಾಗುವ ಭಯದಿಂದ ಹೆಬ್ಬಾರ್ ಬಯಲಾಟ ಆಡುತ್ತಿದ್ದಾನೆಂಬುದು ಯಲ್ಲಾಪುರ-ಶಿರಸಿ ಏರಿಯಾದಲ್ಲಿ ಎಲ್ಲರಿಗೂ ಗೊತ್ತಾಗಿದೆ.

ಘಟ್ಟದ ಮೇಲಿನ ಆರೇಳು ತಾಲ್ಲೂಕು ಉತ್ತರ ಕನ್ನಡದಿಂದ ಬೇರ್ಪಡಿಸಿ ಹೊಸ ಶಿರಸಿ ಜಿಲ್ಲೆ ರಚಿಸಬೇಕೆಂದು ಕೂಗೆದ್ದಿದೆ. ಶಿರಸಿಯೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವೆಂಬುದು ಜನಾಭಿಪ್ರಾಯ. ವಾಣಿಜ್ಯ, ರಾಜಕೀಯ, ಜಿಲ್ಲಾಮಟ್ಟದ ಹಲವು ಕಛೇರಿ, ಕಾಲೇಜು, ಅರಣ್ಯ -ತೋಟಗಾರಿಕೆಯಂತಹ ಮಹತ್ವದಿಂದ ಶಿರಸಿ ಜಿಲ್ಲಾ ಕೇಂದ್ರವಾಗಲಿ ಎಂದೆಲ್ಲರೂ ಇದುವರೆಗೆ ಹೇಳುತ್ತಿದ್ದರು. ಆದರೆ ಸ್ಪಿಕರ್ ಕಾಗೇರಿಯಂತಹ ಸಿನಿಯರ್ ಶಾಸಕರಿಂದ ಹಿಡಿದು ತ್ರಿಶಂಕು ಜೂನಿಯರ್ ಶಾಸಕ ಹೆಬ್ಬಾರ್‍ವರೆಗಿನ ಘಟ್ಟದ ಮೇಲಿನ ಜನಪ್ರತಿನಿಧಿಗಳ್ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ.್ಲ ಮೂವತ್ತು ವರ್ಷದಿಂದ ಆಯಾಕಟ್ಟಿನ ಅಧಿಕಾರ ಅನುಭವಿಸಿದ ತಲೆ ಮಾಸಿದ ದೇಶಪಾಂಡೆಯೂ ಇತ್ತ ತಲೆಹಾಕಲಿಲ್ಲ. ಎಂಪಿ ಎಮ್ಮೆಲ್ಲೆ ಮಿನಿಸ್ಟರ್‍ಗಳ ರಾಜಕೀಯ ಹೇತ್ಲಾಂಡಿತನದಿಂದ ಶಿರಸಿ ಜಿಲ್ಲೆ ರಚನೆ ಆಗುತ್ತಿಲ್ಲ.

ಬಿಜೆಪಿ ಸರ್ಕಾರ ಸ್ಥಾಪನೆಗೆ “ತ್ಯಾಗ” ಮಾಡಿರುವ ಮಂತ್ರಿಗಿರಿ ಬೋಗಾಭಿಲಾಷಿ ಹೆಬ್ಬಾರ್ ಮನಸ್ಸು ಮಾಡಿದರೆ ಶಿರಸಿ ಜಿಲ್ಲೆ ಸ್ಥಾಪನೆಗೆ ಚಾಲನೆ ನೀಡಬಹುದೆಂದು ಜನರಾಡಿಕೊಳ್ಳುತ್ತಿದ್ದಾರೆ. ಯಡ್ಡಿ ಆಸ್ಥಾನದಲ್ಲಿ ಹೆಬ್ಬಾರ್ ಮಾತಿಗೆ ವಜನಿದೆ: ತನ್ನನ್ನು ಸಿಎಂ ಮಾಡಿದ ಅನರ್ಹ ಗ್ಯಾಂಗಿನ ಮುಂಚೂಣಿ ಸದಸ್ಯ ಹೆಬ್ಬಾರ್ ಎಂಬ “ಗೌರವ” ಯಡ್ಡಿಗಿದೆ. ಬಳ್ಳಾರಿಯ ಆನಂದ್‍ಸಿಂಗ್ ಮನದಿಚ್ಛೆಯಂತೆ ವಿಜಯನಗರ ಜಿಲ್ಲೆ ರಚನೆಗೆ ರಡಿಯಾಗಿರುವ ಯಡ್ಡಿ ಏಕಾಏಕಿ ಹೆಬ್ಬಾರ್ ಬೇಡಿಕೆ ತಿರಸ್ಕರಿಸಲು ಹೇಗೆ ಸಾಧ್ಯ? ಅವಕಾಶವಿದ್ದರೂ ಹೆಬ್ಬಾರ್‍ಗೆ ಇಚ್ಛಾಶಕ್ತಿ ಇಲ್ಲ ಎಂದು ಜನ ಹೇಳುತ್ತಿದ್ದಾರೆ.

ಹೆಬ್ಬಾರ್ ತನ್ನ ಯಲ್ಲಾಪುರ ಕ್ಷೇತ್ರ ಒಳಗೊಂಡ ಶಿರಸಿ ಜಿಲ್ಲೆ ರಚನೆಗೆ ಪ್ರಯತ್ನಿಸುವುದಿರಲಿ, ಜಿಲ್ಲಾ ರಚನಾ ಹೋರಾಟವನ್ನೇ ಹಾಳುಮಾಡುವ ಕುತಂತ್ರ ನಡೆಸಿದ್ದಾನೆ. ಶಿರಸಿ ಜಿಲ್ಲಾ ಕೇಂದ್ರ ಆಗೋದು ಬೇಡ; ಯಲ್ಲಾಪುರ ಜಿಲ್ಲಾ ಕೇಂದ್ರಕ್ಕೆ ಸೂಕ್ತವೆಂಬ ಹೊಸ ವರಾತ ಈಚೆಗೆ ಶುರುವಾಗಿದ್ದೇ ಹೆಬ್ಬಾರ್ ಕಿತಾಪತಿಯಿಂದ ಎಂದು ಘಟ್ಟದ ಮೇಲಿನವರ ಅಭಿಪ್ರಾಯ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉದುರಿಸುವ ದೂರಾಲೋಚನೆ ಹೆಬ್ಬಾರ್‍ದು. ಹಾಗೊಮ್ಮೆ ಯಲ್ಲಾಪುರ ಜಿಲ್ಲಾ ರಾಜಧಾನಿಯಾದರೆ ಆ ಕ್ರೆಡಿಟ್ ತನಗೆ ಬರುತ್ತದೆ. ಈ ವಿವಾದದಲ್ಲಿ ಜಿಲ್ಲಾ ರಚನೆ ನೆನೆಗುದಿಗೆ ಬಿದ್ದರೆ ಅಖಂಡ ಉತ್ತರಕನ್ನಡದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕಾರುಬಾರು ನೆಡೆಸಬಹುದೆಂಬ ಲೆಕ್ಕಾಚಾರ ಹೆಬ್ಬಾರ್‍ದು. ಅಧಿಕಾರದ ತೆವಲಿಗೆ ಬಿದ್ದಿರುವ ಹೆಬ್ಬಾರ್‍ಗೆ ಹೊಸಜಿಲ್ಲೆ, ಹಳೆಜಿಲ್ಲೆ, ಕ್ಷೇತ್ರ, ಬನವಾಸಿ ಹೀಗೆ ಜನರ ಬೇಕು ಬೇಡುಗಳೆಲ್ಲವು ಜುಜುಬಿಯೇ..

ಅದೆಷ್ಟೇ ಅಡ್ಡ ಸರ್ಕಸ್ ಮಾಡಿದರೂ ಹೆಬ್ಬಾರ್‌ಗೆ ನಿದ್ದೆ ಬೀಳುತ್ತಿಲ್ಲ. ಅತ್ತ ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹತೆ ವಿಚಾರಣೆ ನಡೆಯುತ್ತಿದೆ. ಇತ್ತ ಉಪಚುನಾವಣೆ ಎದೆಮೆಲೆ ಬಂದು ಕೂತಿದೆ. ಬಿಜೆಪಿ ಟಿಕೆಟ್ ತರಲು ತೊಂದರೆ ಕೊಡುವ ಸ್ಥಳೀಯ ಮಾಜಿ ಶಾಸಕ ವಿ.ಎಸ್.ಪಾಟೀಲ್‍ಗೆ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷತೆ ಯಡ್ಡಿಯಿಂದ ಕೊಡಿಸಿ ಪಳಗಿಸಲು ಹೆಬ್ಬಾಳ್ ಪ್ರಯತ್ನಿಸುತ್ತಿದ್ದಾನೆ. ಸುಪ್ರೀಮ್ ತನ್ನ ಅನರ್ಹತೆ ಪಕ್ಕಾ ಮಾಡಿದರೆ ತನ್ನ ಮಗ ಅಥವಾ ಹೆಂಡತಿಗೆ ಬಿಜೆಪಿ ಕ್ಯಾಂಡಿಡೇಟ್ ಮಾಡುವ ಆಸೆ ಹೆಬ್ಬಾರ್‍ಗೆ. ತನ್ನ ಎ ಪ್ಲಾನ್‍ಗಷ್ಟೇ ಅಲ್ಲ ಪ್ಲಾನ್ ಬಿಗೂ ಪಾಟೀಲ್ ಅಪಸ್ವರ ಎತ್ತಬಾರದೆಂದು ಹೆಬ್ಬಾರ್ ಒತ್ತಾಯಿಸುತ್ತಿದ್ದಾನೆ.

ಆದರೆ ಪಾಟೀಲ್ ಅರ್ಧ ಪಳಗಿದ್ದಾರಷ್ಟೆ. ಸಾರಿಗೆ ನಿಗಮದ ಅಧ್ಯಕ್ಷತೆ ವಹಿಸಿಕೊಂಡ ಕ್ಷಣವೇ “ನಾನು ಬಿಜೆಪಿ ಸರ್ಕಾರಕ್ಕಾಗಿ ತ್ಯಾಗ ಮಾಡಿದ ಹೆಬ್ಬಾರ್‍ಗೆ ಕ್ಷೇತ್ರ ತ್ಯಾಗ ಮಾಡಿದ್ದೆನೆ..,. ಆದರೆ ಹೆಬ್ಬಾರ್ ಹೊರತಾಗಿ ಬೇರ್ಯಾರಾದರು ಬಿಜೆಪಿ ಕೇಳಿದರೆ, ನನ್ನ ಕ್ಲೇಮು ಇದ್ದೇ ಇದೆ” ಎಂದು ಹೆಬ್ಬಾರ್ ಪರಿವಾರಕ್ಕೆ ಶಾಕ್ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಒಲ್ಲದ ಮನಸ್ಸಿನಿಂದ ಇದೆ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದ ಹೆಬ್ಬಾರ್ ವಿದ್ರೋಹ ನಿಲ್ಲಿಸಿರಲಿಲ್ಲ. ಅಂಥದ್ದೇ ಪರಿಸ್ಥಿತಿ ಈಗ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಪಾಟೀಲ್ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದರೂ ಯಲ್ಲಾಪುರ ಬೈ ಇಲೆಕ್ಷನ್‍ನಲ್ಲಿ ಸ್ಪರ್ಧಿಸುವ ಉಮೇದು ಬಿಟ್ಟಿಲ್ಲ. ಆಕಸ್ಮಾತ್ ಹೆಬ್ಬಾರ್ ಮಗ ಅಥವಾ ಹೆಂಡತಿಯಾದರೆ ಪಾಟೀಲ್ ಕಾಂಗ್ರೆಸ್ ಕ್ಯಾಂಡಿಡೇಟಾಗೋದು ಖಾತ್ರಿ. ಕಾಂಗ್ರೆಸ್ ಕಿಂಗ್‍ಗಳ ಜೊತೆ ಪಾಟೀಲ್ ರಹಸ್ಯ ಸಂಪರ್ಕ ಚಲೋ ಇಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...