Homeಕರ್ನಾಟಕಉತ್ತರ ಕನ್ನಡದ ‘ಅನರ್ಹ’ ರಾಜಕಾರಣ: ಜಿಲ್ಲಾ ಕೇಂದ್ರಕ್ಕಾಗಿ ಶಿರಸಿ, ಯಲ್ಲಾಪುರ ಕಿತ್ತಾಟ...

ಉತ್ತರ ಕನ್ನಡದ ‘ಅನರ್ಹ’ ರಾಜಕಾರಣ: ಜಿಲ್ಲಾ ಕೇಂದ್ರಕ್ಕಾಗಿ ಶಿರಸಿ, ಯಲ್ಲಾಪುರ ಕಿತ್ತಾಟ…

- Advertisement -
- Advertisement -

ಉತ್ತರ ಕನ್ನಡದ ಘಟ್ಟದ ಮೇಲಿನ ಖಾಲಿಬರಡು ರಾಜಕಾರಣ ಅದ್ಯಾಕೋ ಅನರ್ಹ-ಅಯೋಗ್ಯ ಶಾಸಕ ಶಿವರಾಮ್ ಹೆಬ್ಬಾರ್ ಸುತ್ತಲೆ ಗಿರಗಿಟ್ಲೆ ಹೊಡೆಯುತ್ತಿದೆ. ಯಲ್ಲಾಪುರ ಉಪಚುನಾವಣೆಗೆ ರಂಗ ತಾಲೀಮು, ಬನವಾಸಿ ಅಪಹರಿಸಲು ಸಿಎಂ ಯಡ್ಡಿ ಕುಟುಂಬ ಕರಾಮತ್ತು ಮಾಡುತ್ತಿದ್ದರೂ ಹೆಬ್ಬಾರ್ ಉದಾಸೀನದಿಂದ ಇದ್ದಾರೆ. ಶಿರಸಿ ಜಿಲ್ಲೆ ರಚನೆ ಹೋರಾಟ ದಿಕ್ಕೆಡಿಸಲು ಹೆಬ್ಬಾರ್ ಹಿಕಮತ್ತು ನೇಡಸಿದ್ದನೆಂಬ ಭಾವನೆ ಜನರಲ್ಲಿದೆ. ಮತ್ತು ಹೆಬ್ಬಾರ್‌ಗೆ ಬಿಜೆಪಿ ಟಿಕೆಟ್ ಸಿಗದಂತೆ ಅಡ್ಡಗಾಲು ಹಾಕುವ ಮಾಜಿ ಶಾಸಕ ವಿ.ಎಸ್.ಪಾಟೀಲ್‍ಗೆ ಪುಟಗೋಸಿ ನಿಗಮದ ಕಾರು ಇನಾಮಾಗಿ ದಕ್ಕಿರುವುದು ಇಡೀ ಉತ್ತರಕನ್ನಡದಲ್ಲಿ ಬಿಸಿ ಬಿಸಿ ಚರ್ಚೆ ಹುಟುಹಾಕಿದೆ..

ಬನವಾಸಿಗೆ ಅವಿನಾ ಸಂಭಂದ ಶಿರಸಿಗಿದೆ. ಈ ಕನ್ನಡದ ಮೊದಲ ರಾಜಧಾನಿ ಜತೆ ಘಟ್ಟದ ಮೇಲಿನವರಿಗಷ್ಟೇ ಅಲ್ಲ ಉತ್ತರ ಕನ್ನಡದ ಕರಾವಳಿ ಭಾಗಕ್ಕೂ ಭಾವನಾತ್ಮಕ ನಂಟು ಅಂಟಿಕೊಂಡಿದೆ. ಇಂತ ಬನವಾಸಿಯನ್ನು ಯಡ್ಡಿ ಮತ್ತವರ ಮಗ ಶಿವಮೊಗ್ಗದ ಸಂಸದ ರಾಘವೇಂದ್ರ ತಮ್ಮ ರಾಜಕೀಯ ಫಾಯ್ದೆಗಾಗಿ ಅಪಹರಿಸಲು ಹವಣಿಸುತ್ತಿದ್ದಾರೆಂದು ಇಡೀ ಜಿಲ್ಲೆ ಕೆಂಡವಾಗಿದೆ. ಆದರೆ ಮೊನ್ನೆ ಮೊನ್ನೆಯವರೆಗೂ ಈ ಬನವಾಸಿ ಸೀಮೆಯ ಶಾಸಕನಾಗಿದ್ದ ಅನರ್ಹ ಹೆಬ್ಬಾರ್ ಇದೆಲ್ಲಾ ಕಂಡು ಕಾಣದಂತಿದ್ದಾನೆ. ಜನರು ಬನವಾಸಿಗಾಗಿ ಬೀದಿಗಿಳಿದು ಬೊಬ್ಬೆ ಹೊಡೆದಾಗ ಬೆಚ್ಚಿಬಿದ್ದ ಹೆಬ್ಬಾರ್ ಅಂಥ ಪ್ರಯತ್ನವೇ ನಡೆದಿಲ್ಲ ಎಂದು ಸುಳ್ಳು ಸಬೂಬು ಹೇಳುತ್ತಿದ್ದಾನೆ. ಯಡ್ಡಿಯ ಕೆಂಗಣ್ಣಿಗೆ ತುತ್ತಾಗುವ ಭಯದಿಂದ ಹೆಬ್ಬಾರ್ ಬಯಲಾಟ ಆಡುತ್ತಿದ್ದಾನೆಂಬುದು ಯಲ್ಲಾಪುರ-ಶಿರಸಿ ಏರಿಯಾದಲ್ಲಿ ಎಲ್ಲರಿಗೂ ಗೊತ್ತಾಗಿದೆ.

ಘಟ್ಟದ ಮೇಲಿನ ಆರೇಳು ತಾಲ್ಲೂಕು ಉತ್ತರ ಕನ್ನಡದಿಂದ ಬೇರ್ಪಡಿಸಿ ಹೊಸ ಶಿರಸಿ ಜಿಲ್ಲೆ ರಚಿಸಬೇಕೆಂದು ಕೂಗೆದ್ದಿದೆ. ಶಿರಸಿಯೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವೆಂಬುದು ಜನಾಭಿಪ್ರಾಯ. ವಾಣಿಜ್ಯ, ರಾಜಕೀಯ, ಜಿಲ್ಲಾಮಟ್ಟದ ಹಲವು ಕಛೇರಿ, ಕಾಲೇಜು, ಅರಣ್ಯ -ತೋಟಗಾರಿಕೆಯಂತಹ ಮಹತ್ವದಿಂದ ಶಿರಸಿ ಜಿಲ್ಲಾ ಕೇಂದ್ರವಾಗಲಿ ಎಂದೆಲ್ಲರೂ ಇದುವರೆಗೆ ಹೇಳುತ್ತಿದ್ದರು. ಆದರೆ ಸ್ಪಿಕರ್ ಕಾಗೇರಿಯಂತಹ ಸಿನಿಯರ್ ಶಾಸಕರಿಂದ ಹಿಡಿದು ತ್ರಿಶಂಕು ಜೂನಿಯರ್ ಶಾಸಕ ಹೆಬ್ಬಾರ್‍ವರೆಗಿನ ಘಟ್ಟದ ಮೇಲಿನ ಜನಪ್ರತಿನಿಧಿಗಳ್ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ.್ಲ ಮೂವತ್ತು ವರ್ಷದಿಂದ ಆಯಾಕಟ್ಟಿನ ಅಧಿಕಾರ ಅನುಭವಿಸಿದ ತಲೆ ಮಾಸಿದ ದೇಶಪಾಂಡೆಯೂ ಇತ್ತ ತಲೆಹಾಕಲಿಲ್ಲ. ಎಂಪಿ ಎಮ್ಮೆಲ್ಲೆ ಮಿನಿಸ್ಟರ್‍ಗಳ ರಾಜಕೀಯ ಹೇತ್ಲಾಂಡಿತನದಿಂದ ಶಿರಸಿ ಜಿಲ್ಲೆ ರಚನೆ ಆಗುತ್ತಿಲ್ಲ.

ಬಿಜೆಪಿ ಸರ್ಕಾರ ಸ್ಥಾಪನೆಗೆ “ತ್ಯಾಗ” ಮಾಡಿರುವ ಮಂತ್ರಿಗಿರಿ ಬೋಗಾಭಿಲಾಷಿ ಹೆಬ್ಬಾರ್ ಮನಸ್ಸು ಮಾಡಿದರೆ ಶಿರಸಿ ಜಿಲ್ಲೆ ಸ್ಥಾಪನೆಗೆ ಚಾಲನೆ ನೀಡಬಹುದೆಂದು ಜನರಾಡಿಕೊಳ್ಳುತ್ತಿದ್ದಾರೆ. ಯಡ್ಡಿ ಆಸ್ಥಾನದಲ್ಲಿ ಹೆಬ್ಬಾರ್ ಮಾತಿಗೆ ವಜನಿದೆ: ತನ್ನನ್ನು ಸಿಎಂ ಮಾಡಿದ ಅನರ್ಹ ಗ್ಯಾಂಗಿನ ಮುಂಚೂಣಿ ಸದಸ್ಯ ಹೆಬ್ಬಾರ್ ಎಂಬ “ಗೌರವ” ಯಡ್ಡಿಗಿದೆ. ಬಳ್ಳಾರಿಯ ಆನಂದ್‍ಸಿಂಗ್ ಮನದಿಚ್ಛೆಯಂತೆ ವಿಜಯನಗರ ಜಿಲ್ಲೆ ರಚನೆಗೆ ರಡಿಯಾಗಿರುವ ಯಡ್ಡಿ ಏಕಾಏಕಿ ಹೆಬ್ಬಾರ್ ಬೇಡಿಕೆ ತಿರಸ್ಕರಿಸಲು ಹೇಗೆ ಸಾಧ್ಯ? ಅವಕಾಶವಿದ್ದರೂ ಹೆಬ್ಬಾರ್‍ಗೆ ಇಚ್ಛಾಶಕ್ತಿ ಇಲ್ಲ ಎಂದು ಜನ ಹೇಳುತ್ತಿದ್ದಾರೆ.

ಹೆಬ್ಬಾರ್ ತನ್ನ ಯಲ್ಲಾಪುರ ಕ್ಷೇತ್ರ ಒಳಗೊಂಡ ಶಿರಸಿ ಜಿಲ್ಲೆ ರಚನೆಗೆ ಪ್ರಯತ್ನಿಸುವುದಿರಲಿ, ಜಿಲ್ಲಾ ರಚನಾ ಹೋರಾಟವನ್ನೇ ಹಾಳುಮಾಡುವ ಕುತಂತ್ರ ನಡೆಸಿದ್ದಾನೆ. ಶಿರಸಿ ಜಿಲ್ಲಾ ಕೇಂದ್ರ ಆಗೋದು ಬೇಡ; ಯಲ್ಲಾಪುರ ಜಿಲ್ಲಾ ಕೇಂದ್ರಕ್ಕೆ ಸೂಕ್ತವೆಂಬ ಹೊಸ ವರಾತ ಈಚೆಗೆ ಶುರುವಾಗಿದ್ದೇ ಹೆಬ್ಬಾರ್ ಕಿತಾಪತಿಯಿಂದ ಎಂದು ಘಟ್ಟದ ಮೇಲಿನವರ ಅಭಿಪ್ರಾಯ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉದುರಿಸುವ ದೂರಾಲೋಚನೆ ಹೆಬ್ಬಾರ್‍ದು. ಹಾಗೊಮ್ಮೆ ಯಲ್ಲಾಪುರ ಜಿಲ್ಲಾ ರಾಜಧಾನಿಯಾದರೆ ಆ ಕ್ರೆಡಿಟ್ ತನಗೆ ಬರುತ್ತದೆ. ಈ ವಿವಾದದಲ್ಲಿ ಜಿಲ್ಲಾ ರಚನೆ ನೆನೆಗುದಿಗೆ ಬಿದ್ದರೆ ಅಖಂಡ ಉತ್ತರಕನ್ನಡದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕಾರುಬಾರು ನೆಡೆಸಬಹುದೆಂಬ ಲೆಕ್ಕಾಚಾರ ಹೆಬ್ಬಾರ್‍ದು. ಅಧಿಕಾರದ ತೆವಲಿಗೆ ಬಿದ್ದಿರುವ ಹೆಬ್ಬಾರ್‍ಗೆ ಹೊಸಜಿಲ್ಲೆ, ಹಳೆಜಿಲ್ಲೆ, ಕ್ಷೇತ್ರ, ಬನವಾಸಿ ಹೀಗೆ ಜನರ ಬೇಕು ಬೇಡುಗಳೆಲ್ಲವು ಜುಜುಬಿಯೇ..

ಅದೆಷ್ಟೇ ಅಡ್ಡ ಸರ್ಕಸ್ ಮಾಡಿದರೂ ಹೆಬ್ಬಾರ್‌ಗೆ ನಿದ್ದೆ ಬೀಳುತ್ತಿಲ್ಲ. ಅತ್ತ ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹತೆ ವಿಚಾರಣೆ ನಡೆಯುತ್ತಿದೆ. ಇತ್ತ ಉಪಚುನಾವಣೆ ಎದೆಮೆಲೆ ಬಂದು ಕೂತಿದೆ. ಬಿಜೆಪಿ ಟಿಕೆಟ್ ತರಲು ತೊಂದರೆ ಕೊಡುವ ಸ್ಥಳೀಯ ಮಾಜಿ ಶಾಸಕ ವಿ.ಎಸ್.ಪಾಟೀಲ್‍ಗೆ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷತೆ ಯಡ್ಡಿಯಿಂದ ಕೊಡಿಸಿ ಪಳಗಿಸಲು ಹೆಬ್ಬಾಳ್ ಪ್ರಯತ್ನಿಸುತ್ತಿದ್ದಾನೆ. ಸುಪ್ರೀಮ್ ತನ್ನ ಅನರ್ಹತೆ ಪಕ್ಕಾ ಮಾಡಿದರೆ ತನ್ನ ಮಗ ಅಥವಾ ಹೆಂಡತಿಗೆ ಬಿಜೆಪಿ ಕ್ಯಾಂಡಿಡೇಟ್ ಮಾಡುವ ಆಸೆ ಹೆಬ್ಬಾರ್‍ಗೆ. ತನ್ನ ಎ ಪ್ಲಾನ್‍ಗಷ್ಟೇ ಅಲ್ಲ ಪ್ಲಾನ್ ಬಿಗೂ ಪಾಟೀಲ್ ಅಪಸ್ವರ ಎತ್ತಬಾರದೆಂದು ಹೆಬ್ಬಾರ್ ಒತ್ತಾಯಿಸುತ್ತಿದ್ದಾನೆ.

ಆದರೆ ಪಾಟೀಲ್ ಅರ್ಧ ಪಳಗಿದ್ದಾರಷ್ಟೆ. ಸಾರಿಗೆ ನಿಗಮದ ಅಧ್ಯಕ್ಷತೆ ವಹಿಸಿಕೊಂಡ ಕ್ಷಣವೇ “ನಾನು ಬಿಜೆಪಿ ಸರ್ಕಾರಕ್ಕಾಗಿ ತ್ಯಾಗ ಮಾಡಿದ ಹೆಬ್ಬಾರ್‍ಗೆ ಕ್ಷೇತ್ರ ತ್ಯಾಗ ಮಾಡಿದ್ದೆನೆ..,. ಆದರೆ ಹೆಬ್ಬಾರ್ ಹೊರತಾಗಿ ಬೇರ್ಯಾರಾದರು ಬಿಜೆಪಿ ಕೇಳಿದರೆ, ನನ್ನ ಕ್ಲೇಮು ಇದ್ದೇ ಇದೆ” ಎಂದು ಹೆಬ್ಬಾರ್ ಪರಿವಾರಕ್ಕೆ ಶಾಕ್ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಒಲ್ಲದ ಮನಸ್ಸಿನಿಂದ ಇದೆ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದ ಹೆಬ್ಬಾರ್ ವಿದ್ರೋಹ ನಿಲ್ಲಿಸಿರಲಿಲ್ಲ. ಅಂಥದ್ದೇ ಪರಿಸ್ಥಿತಿ ಈಗ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಪಾಟೀಲ್ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದರೂ ಯಲ್ಲಾಪುರ ಬೈ ಇಲೆಕ್ಷನ್‍ನಲ್ಲಿ ಸ್ಪರ್ಧಿಸುವ ಉಮೇದು ಬಿಟ್ಟಿಲ್ಲ. ಆಕಸ್ಮಾತ್ ಹೆಬ್ಬಾರ್ ಮಗ ಅಥವಾ ಹೆಂಡತಿಯಾದರೆ ಪಾಟೀಲ್ ಕಾಂಗ್ರೆಸ್ ಕ್ಯಾಂಡಿಡೇಟಾಗೋದು ಖಾತ್ರಿ. ಕಾಂಗ್ರೆಸ್ ಕಿಂಗ್‍ಗಳ ಜೊತೆ ಪಾಟೀಲ್ ರಹಸ್ಯ ಸಂಪರ್ಕ ಚಲೋ ಇಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...