Homeಕರೋನಾ ತಲ್ಲಣರೋಗಲಕ್ಷಣಗಳು ಇರುವವರು, ಇಲ್ಲದವರು ಕೊರೊನಾ ಪರೀಕ್ಷೆ ಮಾಡಿಸಬೇಕೆ, ಬೇಡವೇ?

ರೋಗಲಕ್ಷಣಗಳು ಇರುವವರು, ಇಲ್ಲದವರು ಕೊರೊನಾ ಪರೀಕ್ಷೆ ಮಾಡಿಸಬೇಕೆ, ಬೇಡವೇ?

- Advertisement -
- Advertisement -

ಚೀನಾದಲ್ಲಿ ಹುಟ್ಟಿಕೊಂಡಿತು ಎನ್ನಲಾಗಿರುವ ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿ ಸರ್ವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೊರೊನಾ ಹೊಡೆತದಿಂದ ವಿಶ್ವವನ್ನು ಹೊರತರಬೇಕು ಎಂದು ಹಲವಾರು ವಿಜ್ಞಾನಿಗಳು ಅದಕ್ಕೆ ಲಸಿಕೆ ಕಂಡುಹಿಡಿಯುವ ಸ್ಫರ್ಧೆಗೆ ಇಳಿದಿದ್ದಾರೆ.

ಭಾರತದಂತಹ ಜನಸಾಂದ್ರತೆ ಹೊಂದಿರುವ ದೇಶದಲ್ಲಿ ವಿಶ್ವದ ಅತೀ ದೀರ್ಘವಾದ ಲಾಕ್‌ಡೌನ್ ಹಾಕಿದ ಪರಿಣಾಮ ದೇಶದ ಕೋಟ್ಯಾಂತರ ಜನರು ದೇಶದ ಹೆದ್ದಾರಿಗಳಲ್ಲಿ ರಕ್ತದ ಮೆರವಣಿಗೆ ನಡೆಸಿದರು. ಅಂದು ಹೇರಲ್ಪಟ್ಟ ಲಾಕ್‌ಡೌನ್ ಇನ್ನೂ ಸಹ ಸಂಪೂರ್ಣವಾಗಿ ತೆರವುಗೊಂಡಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರೂ ನೂರಾರು ಗೊಂದಲಗಳಲ್ಲಿ ಸಿಕ್ಕಿ ನಲುಗುತ್ತಿದ್ದಾರೆ. ಈ ಗೊಂದಲ ನಿವಾರಿಸಲು ಸರ್ಕಾರ ಮಾಡಿದ್ದೇನು? ಧೀರ್ಘ ಅವಧಿಯ ಲಾಕ್‌ಡೌನ್ ಘೊಷಿಸುವ ಸಂಧರ್ಭದಲ್ಲೇ ಮುಂದಾಲೋಚನೆ ಮಾಡದ ಸರ್ಕಾರ ಈಗ ಮಾಡುತ್ತದೆಯೇ? ಉತ್ತರ ಶೂನ್ಯ.

ದಿಲ್ಲಿ ಮತ್ತು ನೊಯಿಡಾದಿಂ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ಕುರಿತು ಕಲಾವಿದೆ ಲಬಾನಿ ಜಾಂಗಿ ಅವರ ವರ್ಣಚಿತ್ರ

ದೇಶದಲ್ಲಿ ಕೊರೊನಾ ಪ್ರಾರಂಭವಾಗಿ 7 ತಿಂಗಳಾದರೂ ಸರ್ಕಾರದಿಂದ ಏರ್ಪಟ್ಟ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಸರ್ಕಾರಗಳೇ ಗೊಂದಲ ಉಂಟುಮಾಡಿದರೆ ಅದರಿಂದ ಕಷ್ಟಪಡುವುದು ಸಾಮಾನ್ಯ ಜನರು. ಈಗಾಗಲೆ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆಗೆ ಒಳಗಾಗಿದ್ದಾರೆ. ಇನ್ನೊಂದು ಕಡೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಒತ್ತಡದಲ್ಲಿ ಸಿಲುಕಿದ್ದಾರೆ. ಈ ವೈದ್ಯರಿಗೆ, ಕೊರೊನಾ ನೋಡಲ್ ಅಧಿಕಾರಿಗಳಿಗೆ ಸರ್ಕಾರವೆ ದಿನಕ್ಕೆ ಇಂತಿಷ್ಟು ಕೊರೊನಾ ಪರೀಕ್ಷಗಳನ್ನು ನಡೆಸಿ ಎಂದು ಟಾರ್ಗೆಟ್ ಕೊಡುತ್ತಿದೆ. ಏಕೆ ಟಾರ್ಗೆಟ್? ಇದರಿಂದ ಏನು ಪ್ರಯೋಜನ ಎಂದು ಮಾತ್ರ ಸರ್ಕಾರ ಹೇಳುತ್ತಿಲ್ಲ.

ಇದನ್ನೂ ಓದಿ: 6ನೇ ತರಗತಿ ‘ವೇದ ಕಾಲದ ಸಂಸ್ಕೃತಿ’ ಪಾಠ ಮಾಡದಂತೆ ಶಿಕ್ಷಣ ಸಚಿವರ ಆದೇಶ: ಅಂಥದ್ದೇನಿದೆ ಪಾಠದಲ್ಲಿ?

ಕಳೆದ ವಾರವಷ್ಟೆ ಮೈಸೂರಿನ ಸರ್ಕಾರಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಕಾರಣ ’ಕೊರೊನಾ ಟೆಸ್ಟ್ ಟಾರ್ಗೆಟ್’ ಕೊಡುತ್ತಿದ್ದದ್ದೇ ಎಂದು ಅವರ ಕುಟುಂಬ ಸದಸ್ಯರು ದೂರಿದ್ದಾರೆ. ಇದರಲ್ಲೂ ಹುರುಳಿಲ್ಲದಿಲ್ಲ. ರ್‍ಯಾಪಿಡ್ ಟೆಸ್ಟ್, ಆರ್‌‌‌ಟಿ ಪಿಸಿಆರ್ ಟೆಸ್ಟ್‌‌ಗಳು ಎಂದೆಲ್ಲ ಹಲವಾರು ಟೆಸ್ಟ್‌ಗಳನ್ನು ಸರ್ಕಾರ ಟಾರ್ಗೆಟ್ ಕೊಟ್ಟು ಮಾಡಿಸುತ್ತಿದೆ. ಹೆಚ್ಚಿನ ವೈದ್ಯರು ರೋಗ ಲಕ್ಷಣಗಳಿದ್ದರಷ್ಟೆ ಆಸ್ಪತ್ರೆಗೆ ಹೋಗಿ, ಬೇಕಾಬಿಟ್ಟಿ ಟೆಸ್ಟ್‌ಗಳು ಅಗತ್ಯವಿಲ್ಲ ಎಂದು ಹೇಳುತ್ತಿದ್ದರೂ, ಸರ್ಕಾರ ಮಾತ್ರ ಜಿದ್ದಿಗೆ ಬಿದ್ದು ಇಂತಿಷ್ಟು ಟೆಸ್ಟ್‌ಗಳು ಆಗಲೆಬೇಕು ಎಂದು ಹಠ ಹಿಡಿದಿದೆ.

ಮೈಸೂರಿನ ವೈದ್ಯ ಡಾ. ನಾಗೇಂದ್ರ

ಈ ಟೆಸ್ಟ್ ಟಾರ್ಗೆಟ್ ಹಿಂದೆ ಭ್ರಷ್ಟಾಚಾರದ ವಾಸನೆಯಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ. ಇಲ್ಲದಿದ್ದರೆ ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇರುವವರನ್ನು ತಂದು ಪರೀಕ್ಷೆ ಮಾಡುವ ಜರೂರತ್ತಾದರೂ ಏನು?  ಬೆಂಗಳೂರಿನಲ್ಲಿ ಸಾಮಾನ್ಯವಾಗಿರು ದೃಶ್ಯವೆಂದರೆ ಬೀದಿ ಬೀದಿಯಲ್ಲಿ ಪರೀಕ್ಷಾ ಮಾದರಿ ಸಂಗ್ರಹಿಸಿವ ಟೆಂಟ್ ಹಾಕಿ ಹಾದಿ ಬೀದಿಯಲ್ಲಿ ಹೋಗುವವರನ್ನು ಕರೆದು, ಮನೆ ಮನೆ ತೆರಳಿ “ಉಚಿತ ಟೆಸ್ಟ್ ಮಾಡಿಸಿಕೊಳ್ಳಿ” ಎನ್ನುವುದರಲ್ಲಿ ಯಾರ ಹಿತಾಸಕ್ತಿ ಅಡಗಿದೆ? ಒಟ್ಟಿನಲ್ಲಿ ಲಕ್ಷಗಟ್ಟಲೇ ಟೆಸ್ಟ್‌ ಕಿಟ್‌ಗಳನ್ನು ತರಿಸುವ, ಅದರಲ್ಲಿ ಕಿಕ್‌ ಬ್ಯಾಕ್ ಪಡೆಯುವ ಉದ್ದೇಶ ಬಿಟ್ಟರೆ ಇದರಲ್ಲಿ ಬೇರೇನಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ಜನರು ಕೊರೊನಾ ಪರೀಕ್ಷೆ ಮಾಡಿಸಬೇಕೆ? ಬೇಡವೇ? ರೋಗ ಲಕ್ಷಣಗಳಿರುವವರ ಮಾತ್ರ ಮಾಡಿಸಿದರೆ ಸಾಕೇ ಇತ್ಯಾದಿ ಗೊಂದಲಗಳು ಸಾರ್ವಜನಿಕರಲ್ಲಿ ಮೂಡಿವೆ. ಒಂದು ಕಡೆ ಸರ್ಕಾರದ ಟಾರ್ಗೆಟ್, ಇನ್ನೊಂದು ಕಡೆ ಸೋಂಕು ಇಲ್ಲದಿದ್ದರೂ ಪರೀಕ್ಷಾ ತಪ್ಪಿನಿಂದಾಗಿ ಪಾಸಿಟಿವ್ ಬಂದುಬಿಡಬಹುದೆಂಬ ಭಯ ಜನರನ್ನು ಕಾಡುತ್ತಿದೆ.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಮಂಜುನಾಥ್ ಪ್ರಸಾದ್‌ರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ರ್‍ಯಾಪಿಡ್‌ ಟೆಸ್ಟ್‌ ಎಲ್ಲರಿಗೂ ಮಾಡುವುದಿಲ್ಲ. ಕೊರೊನಾ ರೋಗಿಗಳ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಹೊಂದಿರುವವರಿಗೆ, ಕಂಟೈನ್‌ಮೆಂಟ್ ಪ್ರದೇಶದಲ್ಲಿವವರಿಗೆ, SARI (ತೀವ್ರವಾದ ಉಸಿರಾಟದ ಸೋಂಕು) ಇರುವವರಿಗೆ, ವೈದ್ಯರು ಶಿಫಾರಸ್ಸು ಮಾಡಿದವರಿಗೆ ಮಾತ್ರ ಪರೀಕ್ಷೆ ಮಾಡುತ್ತೇವೆ. ಅದು ಬಿಟ್ಟು ಸಿಕ್ಕಸಿಕ್ಕವರನ್ನು ತಂದು ಪರೀಕ್ಷೆ ಮಾಡಿದರೆ, ಟೆಸ್ಟ್‌ ಕಿಟ್‌ಗಳು ವ್ಯರ್ಥವಾಗುತ್ತವೆ ಅಷ್ಟೇ. ಅದರಿಂದ ಏನೂ ಪ್ರಯೋಜನವಿಲ್ಲ” ಎಂದಿದ್ದಾರೆ.

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್ ಪ್ರಸಾದ್‌

ಬೆಂಗಳೂರಿನಲ್ಲಿ ಮನೆಮನೆಗೆ ಹೋಗಿ ’ಫ್ರೀ ಟೆಸ್ಟ್ ಮಾಡಿಸಿ’ ಎಂಬ ಅಭಿಯಾನ ನಡೆಯುತ್ತಿರುವುದರ ಬಗ್ಗೆ ಆಯುಕ್ತರ ಗಮನಕ್ಕೆ ತಂದಾಗ, “ಮನೆಮನೆ ಸರ್ವೆ ಮಾಡುತ್ತಿರುವಾಗ ಯಾರಿಗಾದರು SARI ಲಕ್ಷಣಗಳು ಕಂಡು ಬಂದರೆ, ಕೊಮೋರ್ಬಿಡ್ ಇದ್ದರೆ ಅಂತವರಿಗೆ ಟೆಸ್ಟ್ ಮಾಡಿಸುವುದು ಒಳ್ಳಯದೆ ಮತ್ತು ಅಂತವರಿಗೆ ಮಾತ್ರ ಟೆಸ್ಟ್ ಮಾಡಿಸುತ್ತಿದ್ದೇವೆ” ಎಂದರು.

ಇದನ್ನೂ ಓದಿ: NEET, JEE ಪರೀಕ್ಷೆ ವಿಳಂಬ ವಿದ್ಯಾರ್ಥಿಗಳ ಭವಿಷ್ಯ ಮುಂದೂಡಿದಂತೆ: ಪರೀಕ್ಷೆಗೆ ಒತ್ತಾಯಿಸಿ ಮೋದಿಗೆ ಪತ್ರ

ಈ ಬಗ್ಗೆ ಮಾತನಾಡಿದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, “ಸೋಂಕಿನ ಗುಣಲಕ್ಷಣ ಹೊಂದಿರುವವರು ಮನೆಯಲ್ಲೇ ಇರಿ ಎಂದು ಸರ್ಕಾರವೆ ಹೇಳುತ್ತಿದೆ. ಅಂದರೆ ಇದರ ಉದ್ದೇಶ ಇದಕ್ಕೆ ಪರೀಕ್ಷೆಯು ಬೇಕಾಗಿಲ್ಲ ಎಂದಲ್ಲವೆ?. ಆದರೆ ಮನೆಯಲ್ಲೆ ಇರಲು ಹೇಳುವ ಸರ್ಕಾರ ಮತ್ತೊಂದೆಡೆ ಟೆಸ್ಟ್‌ ಮಾಡಿಸಲು ಹೇಳುತ್ತಿದೆ. ಸರ್ಕಾರಕ್ಕೆ ಕಾಯಿಲೆಯನ್ನು ನಿಯಂತ್ರಿಸುವ ಆಸಕ್ತಿ ಇದ್ದರೆ ಜನರನ್ನು ಮನೆಯಲ್ಲೇ ಇದ್ದು, ಅಲ್ಲಿಂದಲೆ ಆರೋಗ್ಯದ ಮಾಹಿತಿಯನ್ನು ನೀಡಲು ಕೇಳಬಹುದಿತ್ತು. ಆದರೆ ಅದನ್ನು ಸರ್ಕಾರ ಮಾಡುತ್ತಿಲ್ಲ. ಅದಲ್ಲದೆ ಎಲ್ಲರಿಗೂ ಪರೀಕ್ಷೆಗಳು ನಡೆಸಿದರೆ ಕೋಟ್ಯಾಂತರ ರೂಪಾಯಿಗಳು ಬೇಕಾಗುತ್ತದೆ. ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳುವ ಸರ್ಕಾರಕ್ಕೆ ಸ್ಪಷ್ಟ ಯೋಜನೆಯಿಲ್ಲ” ಎಂದು ಹೇಳಿದರು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ

“ನಿಜವಾಗಿಯೂ ಕೊರೊನಾ ಪರೀಕ್ಷೆಗಳನ್ನು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾರಿಗೆ ಕೊರೊನಾ ಲಕ್ಷಣಗಳಿವೆಯೋ ಅವರು ಸಹ ಪರೀಕ್ಷೆ ಮಾಡಿಸಬೇಕಾಗದ ಅಗತ್ಯವಿಲ್ಲ. ಅವರು ಮನೆಯಲ್ಲೇ ಐಸೋಲೇಷನ್‌ಗೆ ಒಳಗಾದರೆ ಯಾವುದೇ ಸಮಸ್ಯೆ ಆಗುವುದಿಲ್ಲ, ಮಕ್ಕಳು, ವೃದ್ದರು ಮತ್ತು ಇತರ ರೋಗಗಳಿಂದ ಬಳಲುತ್ತಿರುವವರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಜನರಿಗೆ ಚಿಕಿತ್ಸೆಯ ಅಗತ್ಯವು ಇರುವುದಿಲ್ಲ. ನಿಮ್ಮ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಪರೀಕ್ಷಿಸುತ್ತಾ ಅದರಲ್ಲಿ 95% ಕ್ಕಿಂತ ಕಡಿಮೆ ಬಂದರೆ ಮಾತ್ರ ಆಸ್ಪತ್ರೆಗಳಿಗೆ ಹೋಗಬೇಕು” ಎಂದು ಡಾ. ಕಕ್ಕಿಲ್ಲಾಯ ಮಾಹಿತಿ ನೀಡಿದರು.

ಗುಣಮಟ್ಟ ಸರಿಯಾಗಿಲ್ಲ ಎಂದು ಹೇಳುತ್ತಾ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲು ಭಯಪಡುತ್ತಿದ್ದ ಜನರು ಇತ್ತ ಲಕ್ಷಗಟ್ಟಲೆ ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳಿಗೂ ಹೋಗಲು ಹೆದರುತ್ತಿದ್ದಾರೆ. ಸರ್ಕಾರ ಕೂಡಾ ದಿನಕ್ಕೊಂದು ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸುತ್ತಾ ಜನರನ್ನು ಮತ್ತಷ್ಟು ಗೊಂದಲಕ್ಕೆ ದೂಡುತ್ತಿದೆ. ಮಾಸ್ಕ್‌ ಕಡ್ಡಾಯದ ವಿಚಾರದಲ್ಲಾಗಲಿ, ಸೀಲ್‌ಡೌನ್‌ ಮಾಡಬೇಕೇ, ಬೇಡವೇ ಎನ್ನುವ ವಿಚಾರದಲ್ಲಾಗಲಿ ಸರ್ಕಾರಕ್ಕೆ ಇನ್ನೂ ಸಹ ಸರಿಯಾದ ನಿರ್ಧಾರಕ್ಕೆ ಬರಲಾಗಿಲ್ಲ.


ಇದನ್ನೂ ಓದಿ: ವೀರ ಹೋರಾಟಗಾರ ’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ: ಬಿಜೆಪಿ ನಾಯಕ ವಿಶ್ವನಾಥ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...