Homeಮುಖಪುಟತಾಂತ್ರಿಕತೆ, ಸಿನಿಮಾ ಅಭಿವ್ಯಕ್ತಿಗೆ ಅಡ್ಡಿಯೇ??

ತಾಂತ್ರಿಕತೆ, ಸಿನಿಮಾ ಅಭಿವ್ಯಕ್ತಿಗೆ ಅಡ್ಡಿಯೇ??

- Advertisement -
- Advertisement -

ಕ್ಯಾಮೆರಾ ಎಲ್ಲಿ ಇಡಬೇಕು?’
‘ಝೂಮ್ ಮಾಡಬೇಕಾ ಅಥವಾ ಡಾಲಿ ಮಾಡಬೇಕಾ?’
‘ಯಾವ ಲೆನ್ಸ್ ಹಾಕಬೇಕು?’
‘ಡೆಪ್ತ್ ಆಫ್ ಫೀಲ್ಡ್ ಎಷ್ಟಿರಬೇಕು?’
‘ಸಬ್ಜೆಕ್ಟ್ ಮೂವ್ ಮಾಡ್ತಿಲ್ಲ, ಸ್ಟ್ಯಾಟಿಕ್ ತಗೋಬೇಕಾ ಅಥವಾ ಟ್ರಾಲಿ ಬಳಸೋದಾ?’
‘ಒಂದು ಮಾಸ್ಟರ್ ಆಯ್ತಲ್ಲ, ಈಗ ಎಲ್ಲಾರದೂ ಒಂದೊಂದು ಕ್ಲೋಸ್ ಅಪ್ ತೊಗೊಂಡ್ರೆ ಸಾಕಲ್ವಾ?’
‘ಫಿಲ್ಟರ್ ಯಾವುದು ಹಾಕಬೇಕು? ಸೀರಿಯಸ್ ದೃಶ್ಯ, ಕೆಂಪು ಹಾಕುವಾ?’

ಹೀಗೆ ಹತ್ತಾರು ಪ್ರಶ್ನೆಗಳು ಚಿತ್ರ ನಿರ್ದೇಶನ ಮಾಡುವಾಗ ಕೊರೆಯುತ್ತವೆ. “ಇವುಗಳೆಲ್ಲ ತಾಂತ್ರಿಕ ಪ್ರಶ್ನೆಗಳು, ಡಿಓಪಿ ಇವನ್ನೆಲ್ಲಾ ನೋಡಿಕೊಳ್ಳುತ್ತಾನೆ. ಒಳ್ಳೇ ಡಿಓಪಿ ಇದ್ರೆ ಸಾಕು. ನಿರ್ದೇಶಕ ಕಲಾತ್ಮಕ ಅಂಶಗಳ ಮೇಲೆ ಕಾನ್ಸಂಟ್ರೇಟ್ ಮಾಡಿದರೆ ಸಾಕು, ಕಲೆಯ ಅಭಿವ್ಯಕ್ತಿಗೆ ತಾಂತ್ರಿಕತೆ ಅಡ್ಡಿಯಾಗಬಾರದು” ಹೌದಾ?

ಒಂದು ಚಿತ್ರ ರಚಿಸುವಲ್ಲಿ ತಾಂತ್ರಿಕ ಅಂಶಗಳೇ ಅಡ್ಡಿಯಾಗಬಲ್ಲವೇ? ಕೆಲವೊಂದು ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಎದ್ದುಕಾಣುತ್ತವೆ. ಕೆಲವು ಚಿತ್ರಗಳಲ್ಲಿ ಕಂಡುಬರುವ ತಾಂತ್ರಿಕ ದೋಷಗಳು ನೋಡುಗರಿಗೆ ಕಿರಿಕಿರಿ ಉಂಟುಮಾಡಿದರೂ, ಆ ಚಿತ್ರ ಇಷ್ಟವಾದರೆ ಅವುಗಳನ್ನು ಕ್ಷಮಿಸಲಾಗುತ್ತದೆ. ಆದರೆ, ಚಿತ್ರ ನಿರ್ದೇಶಕರಿಗೆ ತಾಂತ್ರಿಕ ಅಂಶಗಳು ಎಂದಿಗೂ ಅಡ್ಡಿಯಾಗಲಾರವು. ಚಲನಚಿತ್ರ ರಚಿಸುವುದು ಕಲೆಯ ಇತರ ಕಲೆಯ ಮಾಧ್ಯಮಗಳಂತೆ ನಮ್ಮ ಭಾವನೆಗಳ, ಕಥೆಗಳ, ಜೀವನದ ಮತ್ತು ಈ ಜಗತ್ತಿನ ಪ್ರಶ್ನೆಗಳ ಹುಡುಕಾಟ ಹಾಗೂ ಅದರ ಅಭಿವ್ಯಕ್ತಿಯ ಮಾಧ್ಯಮವೆಷ್ಟೋ, ಅಷ್ಟೇ ಸಂಕೀರ್ಣ ತಾಂತ್ರಿಕತೆಯ ಮಾಧ್ಯಮವೂ ಹೌದು. ತಾಂತ್ರಿಕತೆಯನ್ನು ಅಭಿವ್ಯಕ್ತಿಯಲ್ಲಿ ಅಡ್ಡಿ ಎಂದು ಭಾವಿಸುವುದು ಅಥವಾ ಅದನ್ನು ಕಡೆಗಣಿಸುವುದು ಒಬ್ಬ ಕಲಾವಿದ ತನ್ನ ಕುಂಚ ತನ್ನ ಕ್ಯಾನ್ವಾಸ್‍ನ್ನು ತಾನು ಬಿಡಿಸಬಯಸುವ ಚಿತ್ರಕ್ಕೆ ಅಡ್ಡಿ ಎಂದಹಾಗೆ. ಬರಹಗಾರನಿಗೆ ತನ್ನ ಭಾಷೆ ಮತ್ತು ಪದಗಳೇ ಅಡ್ಡಿಯಾದ ಹಾಗೆ.

ಸಿನೆಮಾ ಎಂದರೆ ಕತೆ ಹೇಳುವ ಮಾಧ್ಯಮ ಎಂದು ನಾವೀಗಾಗಲೇ ತಿಳಿದಿದ್ದೇವೆ; ಸಿನೆಮಾದ ಕಥೆ ಎಂದರೆ ಅದಕ್ಕೆ ತನ್ನದೇ ಆದ ಮಿತಿಗಳಿರುತ್ತವೆ ಹಾಗೂ ಅ ಮಿತಿಗಳನ್ನೇ ಚಿತ್ರದ ಸಾಮಥ್ರ್ಯಗಳೆಂದೂ ಪರಿಗಣಿಸಬಹುದಾಗಿದೆ. ಈ ವಿಷಯದ ಬಗ್ಗೆ ಮುಂಚೆ ಬರೆಯಲಾಗಿದೆ ಹಾಗಾಗಿ ಅದನ್ನು ವಿಸ್ತರಿಸುತ್ತಿಲ್ಲ.

ತಾಂತ್ರಿಕವಾಗಿ ಗಟ್ಟಿಯಾಗಿರುವ ಚಿತ್ರ ಎಂದರೆ ಹಾಲಿವುಡ್‍ನ ಸಾಹಸ ಚಿತ್ರಗಳಲ್ಲ, ಹೆಲಿಕಾಪ್ಟರ್‍ನಿಂದ ತೆಗೆದ ಶಾಟ್‍ಗಳಲ್ಲ, ಪರ್ವತದ, ಅನ್ಯಗ್ರಹಗಳ ಅದ್ಭುತ ಶಾಟ್‍ಗಳನ್ನು ಹೊಂದಿದ ಚಿತ್ರವಲ್ಲ, ಚಾಣಾಕ್ಷತೆಯಿಂದ ಮಾಡಿದ ಸಂಕಲನವಲ್ಲ. ಒಂದು ಸರಳವಾದ ದೃಶ್ಯವನ್ನು ಅಷ್ಟೇ ಸರಳವಾಗಿ ಪರದೆಯ ಮೇಲೆ ತೋರಿಸಿದರೂ ಅದನ್ನು ತಾಂತ್ರಿಕವಾಗಿ ಗಟ್ಟಿಯಾಗಿರುವ ದೃಶ್ಯ ಎನ್ನಬಹುದು.

ತಾಂತ್ರಿಕವಾಗಿ ಗಟ್ಟಿಯಾಗಿರುವ ನಾವೆಲ್ಲರೂ ನೋಡಿದ ಒಂದು ಕನ್ನಡ ಚಿತ್ರವನ್ನು ಹೆಸರಿಸಬೇಕಾದರೆ, ನನಗೆ ಮೊದಲು ಹೊಳೆಯುವುದು ರಾಮ್ ರೆಡ್ಡಿ ನಿರ್ದೇಶಿಸಿದ ‘ತಿಥಿ’. ಹೌದು, ತಾಂತ್ರಿಕವಾಗಿಯೂ ಅದೊಂದು ಅದ್ಭುತ ಚಿತ್ರ. ಆ ಚಿತ್ರದಲ್ಲಿ ಅದ್ಭುತ ಎನ್ನಿಸಬಹುದಾದ ಯಾವುದೇ ಶಾಟ್‍ಗಳಿಲ್ಲ; ಸಾಹಸ ದೃಶ್ಯಗಳಿಲ್ಲ, ಹಳ್ಳಿಗಾಡಿನ, ಪರಿಸರದ, ನದಿ ಬೆಟ್ಟದ ಮನಮೋಹಕ ಚಿತ್ರಣಗಳಿಲ್ಲ. ಚಿತ್ರದಲ್ಲಿ ಅದ್ಭುತವಾದ ಕ್ಯಾಮೆರಾ ಮೂವ್‍ಮೆಂಟ್‍ಗಳೂ ಕಾಣಿಸಿಕೊಳ್ಳುವುದಿಲ್ಲ ಆದರೂ ಅದೊಂದು ತಾಂತ್ರಿಕವಾಗಿ ಅದ್ಭುತ ಚಿತ್ರ. ತನ್ನ ಕಥೆಯನ್ನು ಹೇಳಲು ಏನು ಬೇಕಾಗುತ್ತದೆಯೋ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಆ ಚಿತ್ರ ನೋಡುವಾಗ ನೋಡುಗರು ಅದರಲ್ಲಿ ಬರುವ ಪಾತ್ರಗಳು, ಆಯಾ ಪಾತ್ರಗಳ ತೊಳಲಾಟ, ಕಥೆಯಲ್ಲಿ ಮುಂದೇನಾಗುತ್ತದೆ ಎನ್ನುವುದರ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು ಕ್ಯಾಮರಾ ಚಳಕದ ಕಡೆ ಅಲ್ಲ.

ಆದರೆ ಅದು ಸುಮ್ಮನೇ ಆಗಿದ್ದಲ್ಲ. ಪ್ರತಿಯೊಂದು ದೃಶ್ಯಕ್ಕೂ ಅದರ ತಿರುಳು ಅಥವಾ ಆತ್ಮ ಎಂಬುದೊಂದಿರುತ್ತದೆ. ಆ ತಿರುಳು ಅಥವಾ ಆತ್ಮವನ್ನು ಸಮರ್ಪಕವಾಗಿ ಸೆರೆ ಹಿಡಿಯಬೇಕೆಂದರೆ, ಯಾವ ಲೆನ್ಸ್ ಬಳಸಬೇಕು, ಫಿಲ್ಟರ್ ಬಳಸಬೇಕಾ, ಫೋಕಸ್ ಯಾರ ಮೇಲಿರಬೇಕು, ಆ ಒಂದು ದೃಶ್ಯಕ್ಕೆ ಎಷ್ಟು ಮತ್ತು ಯಾವ್ಯಾವ ಶಾಟ್ ತೆಗೆದುಕೊಳ್ಳಬೇಕು, ಆಯಾ ಶಾಟ್‍ನಲ್ಲಿ ಕ್ಯಾಮರ ಚಲಿಸಬೇಕೇ ಅಥವಾ ಒಂದೇ ಕಡೆ ಇರಬೇಕೇ ಎನ್ನುವ ಹಲವಾರು ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಆಗ ಮಾತ್ರ ಆ ದೃಶ್ಯದ ಜೀವವು, ನಿರ್ದೇಶಕನು ಬಯಸಿದಂತೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬರಹಗಾರರಿಗೆ ತನ್ನ ಭಾಷೆ, ಗಾಯಕನಿಗೆ ತನ್ನ ಕಂಠವು, ನಟನಿಗೆ ತನ್ನ ಇಡೀ ದೇಹ ತಾನು ಹೇಳುವುದನ್ನು ಮುಟ್ಟಿಸುವ ಸಾಧನವಾದ ಹಾಗೆ ಚಲನಚಿತ್ರ ನಿರ್ದೇಶಕರಿಗೆ ಸಿನೆಮಾದ ತಾಂತ್ರಿಕತೆಯೇ ಸಾಧನ. ಸಿನೆಮಾ ಮಾಧ್ಯಮವು ಸಂಕೀರ್ಣವೆನಿಸುವುದು ಇದೇ ಕಾರಣಕ್ಕಾಗಿ. ಸ್ಟೀವನ್ ಸ್ಪೀಲ್‍ಬರ್ಗ್‍ನಿಂದ ಹಿಡಿದು ವಿಶ್ವದ ಬಹುತೇಕ ನಿರ್ದೇಶಕರು, ತಮ್ಮ ಚಿಕ್ಕವಯಸ್ಸಿನಿಂದಲೇ ಕ್ಯಾಮೆರ ಜೊತೆಗೆ ಆಟವಾಡಿದರು; ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದರು, ಕ್ಯಾಮರಾದ, ಚಿತ್ರ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಕಂಡು ಬೆರಗುಗೊಂಡರು. ಅವರಲ್ಲಿ ಹೆಚ್ಚಿನವು ತಾವು ಹೇಳಬಯಸಬಹುದಾದ ಕಥೆಗಳಿಗಿಂತಲೂ ಕ್ಯಾಮರ ಸೃಷ್ಟಿಸುವ ಮ್ಯಾಜಿಕ್ ಅನ್ನು ಪ್ರೀತಿಸಿದವರು. ಹಾಗಾಗಿಯೇ ಅವರ ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ಕೇವಲ ತಾಂತ್ರಿಕ ಶ್ರೇಷ್ಠತೆಯೂ ಕಾಣಿಸಿಕೊಳ್ಳುವುದಿಲ್ಲ.

ಚಿತ್ರ ನಿರ್ದೇಶನಕ್ಕೆ ಕ್ಯಾಮರ ಚಳಕ ಮಾತ್ರ ತಾಂತ್ರಿಕ ಅಂಶವಲ್ಲ. ಅದರೊಂದಿಗೆ ಚಿತ್ರದ ಕಲಾ ನಿರ್ದೇಶನ (ಆರ್ಟ್ ಡೈರೆಕ್ಷನ್), ಹಿನ್ನೆಲೆ ಸಂಗೀತ, ಸಂಕಲನ, ಸ್ಪೆಷಲ್ ಎಫೆಕ್ಟ್ಸ್ ಮುಂತಾದ ಹಲವಾರು ತಾಂತ್ರಿಕ ಅಂಶಗಳಿರುತ್ತವೆ. ಅವೆಲ್ಲವೂ ಆ ಚಿತ್ರದ ಜೀವಕ್ಕೆ, ಆಯಾ ದೃಶ್ಯದ ಜೀವಕ್ಕೆ ಹೇಗೆ ಪೂರಕವಾಗಿಸಬಹುದು ಮತ್ತು ಅವುಗಳೇ ದೃಶ್ಯದ ಜೀವವನ್ನು ಮೀರಿ ನೋಡುಗರು ಆ ತಾಂತ್ರಿಕ ಅಂಶಗಳನ್ನೇ ಮೆಚ್ಚಬಹುದಾದ ಸನ್ನಿವೇಶ ಹೇಗೆ ತಡೆಯಬೇಕು ಎನ್ನುವುದನ್ನೂ ಆಯಾ ವಿಭಾಗಗಳ ತಾಂತ್ರಿಕತೆಯನ್ನು ಅಭ್ಯಸಿಸಿದಾಗ ಮಾತ್ರ ತಿಳಿಯುವುದು.

ಈ ಎಲ್ಲ ತಾಂತ್ರಿಕತೆಗಳನ್ನು ತಾನು ಹೇಳಬೇಕಾದ ಕಥೆಯನ್ನು ತಾಂತ್ರಿಕತೆ ಎದ್ದುಕಾಣದಂತೆ, ತಾಂತ್ರಿಕ ದೋಷಗಳಂತೂ ನುಸುಳದಂತೆ ಸರಳವಾಗಿ ಹೇಳಲು ಬಳಸಿಕೊಂಡಿರುವುದಕ್ಕೆ ತಿಥಿ ಎಂಬ ಚಿತ್ರ ಒಂದು ಒಳ್ಳೆಯ ಉದಾಹರಣೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...