Homeಕರ್ನಾಟಕಅಂಕೋಲೆಗೆ ನುಗ್ಗಲಿದೆ ಯುದ್ಧ ವಿಮಾನ: ಅದರ ಹೆಸರು ಮಾತ್ರ ನಾಗರಿಕ ಏರ್‌ಪೋರ್ಟ್..

ಅಂಕೋಲೆಗೆ ನುಗ್ಗಲಿದೆ ಯುದ್ಧ ವಿಮಾನ: ಅದರ ಹೆಸರು ಮಾತ್ರ ನಾಗರಿಕ ಏರ್‌ಪೋರ್ಟ್..

- Advertisement -
- Advertisement -

“ಜೀವವನ್ನಾದರೂ ಬಿಟ್ಟೇವು, ತುತ್ತು ನೀಡುತ್ತಿರುವ ಭೂಮಿ ಬಿಡಲಾರೆವು” ಎನ್ನುತ್ತಿದ್ದಾರೆ ಅಂಕೋಲಾ ತಾಲ್ಲೂಕಿನ ಅಲಗೇರಿ ಮತ್ತದರ ಆಚೀಚೆಯ ಹಳ್ಳಿಗರು ಒಕ್ಕೊರಳಲ್ಲಿ!! ಎಷ್ಟೆಂತ ತ್ಯಾಗ ಮಾಡೋದು? ಈ ಮಂದಿ ನೌಕಾನೆಲೆ, ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ನಮ್ಮ ಬದುಕಿಗಾಧಾರವಾದ ಭೂಮಿಯನ್ನು ಕಳೆದುಕೊಂಡಿದ್ದಾರೆ. ಈಗ ಮತ್ತೆ ವಿಮಾನ ನಿಲ್ದಾಣಕ್ಕಾಗಿ ಜಮೀನು ಕೊಡಿ, ಮನೆ-ಮಠ ಬಿಡಿಯೆಂದರೆ ಹೇಗೆ? ಬದುಕುವುದಾದರೂ ಹೇಗೆ? ಸದ್ರಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಅಲಗೇರಿ ಅಂಕೋಲೆಯ ಭೂಪಟದಿಂದ ಅಳಿಸಿ ಹೋಗುತ್ತದೆ!

ಸಹಜವಾಗೇ ಅಲಗೇರಿಯ ಆತಂಕಿತ ಜನರೀಗ ಕೆರಳಿ ಕೆಂಡವಾಗಿದ್ದಾರೆ. ಆಡಳಿತಗಾರರು ಗುಪ್ತವಾಗಿ ಸರ್ವೆ ನಡೆಸುತ್ತಿರುವುದು ಹಳ್ಳಿಗರನ್ನು ದಿಕ್ಕೆಡಿಸಿಬಿಟ್ಟಿದೆ. ಹಾಗೊಮ್ಮೆ ಆಳುವವರು ಹಠದಿಂದ ನಮ್ಮ ಭೂಮಿ ಕಸಿದುಕೊಳ್ಳುತ್ತಾರೆಂದರೆ, ವಿಮಾನ ನಿಲ್ದಾಣ ನಮ್ಮೂರಿನ ಸಮಾಧಿ ಮೇಲೆ ಆಗಲಿ ಎಂದಬ್ಬರಿಸುತ್ತಿದ್ದಾರೆ. ದಿವಂಗತ ರೈತ-ಕಾರ್ಮಿಕ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ನೆಚ್ಚಿ ದಾಖಲಾಗಿರುವ ವಿಶಿಷ್ಟ ಗ್ರಾಮ ಇದು. ವಿಪರ್ಯಾಸ ನೋಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರೀಗ ಅತಂತ್ರರಾಗುವಂತಾಗಿದೆ! ಸಂತ್ರಸ್ತರಾಗುವ ಸಂಕಟದಲ್ಲಿರುವ ಅಲಗೇರಿ ಭಾಗದವರು ಹೋರಾಟ-ಪ್ರತಿಭಟನೆಗೆ ಅಣಿಯಾಗಿದ್ದಾರೆ.

ಅಂಕೋಲ-ಕಾರವಾರ ನಡುವೆ ಏಷ್ಯಾದಲ್ಲೇ ಅತ್ಯಂತ ದೊಡ್ಡ ನೌಕಾನೆಲೆ ತಲೆಯೆತ್ತಿದೆ. ಅಂದರೆ ಅಲಗೇರಿ ಅಂಚಿನಲ್ಲಿ ನಿಂತಿದೆ. ಈ ಕದಂಬ ನೌಕಾನೆಲೆಗೆ ಯುದ್ಧ ವಿಮಾನ ನಿಲ್ದಾಣ ಜರೂರ್ ಬೇಕಾಗಿದೆ. ಯುದ್ಧ ವಿಮಾನ ನಿಲ್ದಾಣ ಎಂದರೆ ಜನ ತಿರುಗಿ ಬೀಳಬಹುದೆಂಬ ಲೆಕ್ಕಾಚಾರ ಹಾಕಿರುವ ಪ್ರಭುತ್ವ ಪಂಡಿತ ಶಿಖಾಮಣಿಗಳು ಈ ವಿಮಾನ ನಿಲ್ದಾಣ ಟೂ ಇನ್ ಒನ್ ಎನ್ನುತ್ತಿದ್ದಾರೆ. ಈ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ನಾಗರಿಕ ಯಾನ ಏರ್‌ಪೋರ್ಟ್‌ಗೂ ಅವಕಾಶವಿದೆ ಅಂತಿದ್ದಾರೆ. ಅಲಗೇರಿ, ಭಾವಿಕೇರಿ, ಬೆಲೇಕೇರಿ ಏರಿಯಾದ ಬರೋಬ್ಬರಿ 202 ಎಕರೆ ಭೂಸ್ವಾಧೀನಕ್ಕೆ ರಕ್ಷಣಾ ಇಲಾಖೆ ಸ್ಕೆಚ್ ಹಾಕಿದೆ. ಅದಕ್ಕಾಗಿ ಅಲಗೇರಿಯ 160 ಎಕರೆ, ಭಾವಿಕೇರಿಯ 12 ಎಕರೆ ಮತ್ತು ಬೇಲೇಕೇರಿಯ 30 ಎಕರೆ ಭೂ ಪ್ರದೇಶದಲ್ಲಿ ಸರ್ವೆ ಕೂಡ ಮಾಡಿಮುಗಿಸಿಲಾಗಿದೆ.

1983ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೌಕಾನೆಲೆಗೆ ಅಡಿಗಲ್ಲು ಇಡುವಾಗಿ “ನಿರಾಶ್ರಿತರಾಗುವ ಮಂದಿಯ ಕಣ್ಣಲ್ಲಿ ಒಂದೇ ಒಂದು ಹನಿ ನೀರು ಬರದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದರು. ಆದರೆ ನೌಕಾನೆಲೆ ಕಾಮಗಾರಿ ಶುರುವಾಗುತ್ತಿದ್ದಂತೆಯೇ ಕಾರವಾರ-ಅಂಕೋಲೆಯಲ್ಲಿ ಸಂತ್ರಸ್ತರ ಕಂಬನಿಯ ಕೋಡಿಯೇ ಮೂರು ದಶಕಗಳ ಕಾಲ ಹರಿದಿದೆ!! ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡ ರಕ್ಷಣಾ ಇಲಾಖೆ ನಿಗದಿ ಪಡಿಸಿದ ಪರಿಹಾರ ಮೊತ್ತ ಎಷ್ಟು ಗೊತ್ತೇ? ಪ್ರತಿ ಗುಂಟೆಗೆ ಕೇವಲ 150ರೂ!!!

ಅಮಾಯಕ ನಿರಾಶ್ರಿತರನ್ನು ಬೆಳೆ ತೆಗೆಯಲಾಗದ, ಕುಲಕಸುಬು ಕಟ್ಟಿಕೊಳ್ಳಲಾಗದ ಬರಡು ಪುನರ್ವಸತಿ ಕೇಂದ್ರಕ್ಕೊಯ್ದು ಬಿಡಲಾಗಿತ್ತು. ಅಕ್ಷರಶಃ ನೀರಿಂದ ತೆಗೆದು ದಂಡೆಗೊಗೆದ ಮೀನಿನಂತಾಗಿದ್ದ ಈ ನಿರಾಶ್ರಿತರ ನೆರವಿಗೆ ಯಾವ ಅಧಿಕಾರಸ್ಥ ಪುಢಾರಿಯೂ ಬರಲಿಲ್ಲ. ಮನೆಗೊಂದು ಉದ್ಯೋಗ, ಸೂಕ್ತ ಪರಿಹಾರ, ನಿರಾಶ್ರಿತರ ಕೋಟಾ ಘೋಷಣೆ ಮಾಡಿದ್ದ ನಾಲಾಯಕ್ ಜನಪ್ರತಿನಿಧಿಗಳು, ಹೊಣೆಗೇಡಿ ಅಧಿಕಾರಗಳು ನಾಪತ್ತೆಯಾಗಿದ್ದರು. ದೇಶ ಕಟ್ಟಲಿಕ್ಕೇ ಹುಟ್ಟಿದ್ದೇನೆಂಬಂತೆ ಪೊಕ್ಕು ವೀರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗಂತೂ ಈ ನೆಲೆ ಕಳಕೊಂಡವರ ಗೋಳು ಕೊನೆವರೆಗೂ ಕೇಳಿಸಲಿಲ್ಲ.

ಹೆಚ್ಚುವರಿ ಪರಿಹಾರಕ್ಕಾಗಿ ಸಂತ್ರಸ್ತರು 35 ವರ್ಷ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರೆ. ಈಗ ಪರಿಹಾರ ಪಡೆಯುತ್ತಿದಾರೆ. ಈ ಕ್ರೆಡಿಟ್ ತಮ್ಮದೆಂದು ಸಂಸದ ಮಾಣಿ, ಮಾಜಿ ಮಂತ್ರಿ ದೇಶಪಾಂಡೆ ಹಲಬುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದೇ ಸಮುದಾಯವನ್ನು ವಿಮಾನ ನಿಲ್ದಾಣದ ಗುಮ್ಮ ಕಾಡತೊಡಗಿದೆ. ವಿಮಾನ ನಿಲ್ದಾಣಕ್ಕೆ 500 ಎಕರೆ ಭೂಮಿ ಬೇಕು. ಒಂದು ಗುಂಟೆ ಜಾಗದಲ್ಲಿ ಎರಡು-ಮೂರು ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಬದುಕುತ್ತಿವೆ. ಫಲವತ್ತಿದ ಕೃಷಿ ಭೂಮಿ, ತೆಂಗಿನ ಮರಗಳ ತೋಟವಿದೆ. ಕೂಲಿ ನಾಲಿ ಮಾಡಿ, ಮೀನುಗಾರಿಕೆ ನಡೆಸಿ, ಸಣ್ಣ-ಪುಟ್ಟ ಉದ್ಯಮ ನಡೆಸಿ ತಲತಲಾಂತರದಿಂದ ಜನ ಜೀವಿಸುತ್ತಿದ್ದಾರೆ. ಇದನ್ನೆಲ್ಲಾ ವಿಮಾನ ನಿಲ್ದಾಣ ಆಪೋಷನ ಪಡೆಯಲಿದೆ.

ಈ ವಿಮಾನ ನಿಲ್ದಾಣದ ಬಗ್ಗೆ ಯಾವ ವರದಿ, ಯೋಜನೆ ನಕ್ಷೆ ಸ್ವಾಧೀನವಾಗುವ ಭೂಮಿ ಬಗ್ಗೆ ಯಾವ ವಿವರವನ್ನೂ ಆಳುವವರು ಮತ್ತವರ ಅಧಿಕಾರ ಗ್ಯಾಂಗು ಬಹಿರಂಗ ಪಡಿಸುತ್ತಿಲ್ಲ. ಜಿಲ್ಲಾಡಳಿತ ಅಧ್ಯಯನ ವರದಿಯನ್ನು ಜನರ ಮುಂದಿಡುತ್ತಿಲ್ಲ. ಎಲ್ಲವೂ ಗುಪ್ತ ಗುಪ್ತ ಏಕೆ? ಕೃಷಿಯನ್ನೇ ನಂಬಿ ಬದುಕಿರುವ ಜನರ ಬೀದಿಪಾಲು ಮಾಡುವ ಈ ಪ್ರಳಯಾಂತಕ ಯೋಜನೆ ಬಂದರೆ 500 ಎಕರೆ ಪ್ರದೇಶದಲ್ಲಿ ಕಾಂಕ್ರಿಟ್ ಮೈದಾನ ಆಗುತ್ತದೆ. ಮಳೆಗಾಲದಲ್ಲಿ ನೀರಿಂಗಲು ಅವಕಾಶವೇ ಇರದು. ಈಗ ಬೀಳುವ ಮಳೆಗೆ ಕೇಣಿ ಹಳ್ಳ, ಬಾಳೆಗುಳಿ ಹೊಳೆಗೆ ಪ್ರವಾಹ ಬಂದು ಸುತ್ತಲಿನ ಊರು-ಕೇರಿ ಮುಳುಗುತ್ತದೆ. ವಿಮಾನ ನಿಲ್ದಾಣವಾದರೆ ಅಂಕೋಲೆಯಲ್ಲಿ ಜಲಪ್ರಳಯ ಗ್ಯಾರಂಟಿ.

ಹಲವು ಹಾನಿಗೆ ಕಾರಣವಾಗುವ ಈ ಸದ್ರಿ ವಿಮಾನ ನಿಲ್ದಾಣ ಬೇಡವೆಂದು ಜನ ಪ್ರತಿಭಟನೆಗೆ ಇಳಿದಿದ್ದಾರೆ. ಶಾಂತವಾಗಿರುವ ಅಂಕೋಲೆಯಲ್ಲಿ ಕ್ರಾಂತಿ ಆಗುವ ಮೊದಲೆ ಜಿಲ್ಲಾಡಳಿತ, ಸ್ಥಳೀಯ ಶಾಸಕಿ ರೂಪಾಲಿಯಮ್ಮ ಎಚ್ಚೆತ್ತುಕೊಳ್ಳುವರಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...