Homeಮುಖಪುಟತಾಂತ್ರಿಕತೆ, ಸಿನಿಮಾ ಅಭಿವ್ಯಕ್ತಿಗೆ ಅಡ್ಡಿಯೇ??

ತಾಂತ್ರಿಕತೆ, ಸಿನಿಮಾ ಅಭಿವ್ಯಕ್ತಿಗೆ ಅಡ್ಡಿಯೇ??

- Advertisement -
- Advertisement -

ಕ್ಯಾಮೆರಾ ಎಲ್ಲಿ ಇಡಬೇಕು?’
‘ಝೂಮ್ ಮಾಡಬೇಕಾ ಅಥವಾ ಡಾಲಿ ಮಾಡಬೇಕಾ?’
‘ಯಾವ ಲೆನ್ಸ್ ಹಾಕಬೇಕು?’
‘ಡೆಪ್ತ್ ಆಫ್ ಫೀಲ್ಡ್ ಎಷ್ಟಿರಬೇಕು?’
‘ಸಬ್ಜೆಕ್ಟ್ ಮೂವ್ ಮಾಡ್ತಿಲ್ಲ, ಸ್ಟ್ಯಾಟಿಕ್ ತಗೋಬೇಕಾ ಅಥವಾ ಟ್ರಾಲಿ ಬಳಸೋದಾ?’
‘ಒಂದು ಮಾಸ್ಟರ್ ಆಯ್ತಲ್ಲ, ಈಗ ಎಲ್ಲಾರದೂ ಒಂದೊಂದು ಕ್ಲೋಸ್ ಅಪ್ ತೊಗೊಂಡ್ರೆ ಸಾಕಲ್ವಾ?’
‘ಫಿಲ್ಟರ್ ಯಾವುದು ಹಾಕಬೇಕು? ಸೀರಿಯಸ್ ದೃಶ್ಯ, ಕೆಂಪು ಹಾಕುವಾ?’

ಹೀಗೆ ಹತ್ತಾರು ಪ್ರಶ್ನೆಗಳು ಚಿತ್ರ ನಿರ್ದೇಶನ ಮಾಡುವಾಗ ಕೊರೆಯುತ್ತವೆ. “ಇವುಗಳೆಲ್ಲ ತಾಂತ್ರಿಕ ಪ್ರಶ್ನೆಗಳು, ಡಿಓಪಿ ಇವನ್ನೆಲ್ಲಾ ನೋಡಿಕೊಳ್ಳುತ್ತಾನೆ. ಒಳ್ಳೇ ಡಿಓಪಿ ಇದ್ರೆ ಸಾಕು. ನಿರ್ದೇಶಕ ಕಲಾತ್ಮಕ ಅಂಶಗಳ ಮೇಲೆ ಕಾನ್ಸಂಟ್ರೇಟ್ ಮಾಡಿದರೆ ಸಾಕು, ಕಲೆಯ ಅಭಿವ್ಯಕ್ತಿಗೆ ತಾಂತ್ರಿಕತೆ ಅಡ್ಡಿಯಾಗಬಾರದು” ಹೌದಾ?

ಒಂದು ಚಿತ್ರ ರಚಿಸುವಲ್ಲಿ ತಾಂತ್ರಿಕ ಅಂಶಗಳೇ ಅಡ್ಡಿಯಾಗಬಲ್ಲವೇ? ಕೆಲವೊಂದು ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಎದ್ದುಕಾಣುತ್ತವೆ. ಕೆಲವು ಚಿತ್ರಗಳಲ್ಲಿ ಕಂಡುಬರುವ ತಾಂತ್ರಿಕ ದೋಷಗಳು ನೋಡುಗರಿಗೆ ಕಿರಿಕಿರಿ ಉಂಟುಮಾಡಿದರೂ, ಆ ಚಿತ್ರ ಇಷ್ಟವಾದರೆ ಅವುಗಳನ್ನು ಕ್ಷಮಿಸಲಾಗುತ್ತದೆ. ಆದರೆ, ಚಿತ್ರ ನಿರ್ದೇಶಕರಿಗೆ ತಾಂತ್ರಿಕ ಅಂಶಗಳು ಎಂದಿಗೂ ಅಡ್ಡಿಯಾಗಲಾರವು. ಚಲನಚಿತ್ರ ರಚಿಸುವುದು ಕಲೆಯ ಇತರ ಕಲೆಯ ಮಾಧ್ಯಮಗಳಂತೆ ನಮ್ಮ ಭಾವನೆಗಳ, ಕಥೆಗಳ, ಜೀವನದ ಮತ್ತು ಈ ಜಗತ್ತಿನ ಪ್ರಶ್ನೆಗಳ ಹುಡುಕಾಟ ಹಾಗೂ ಅದರ ಅಭಿವ್ಯಕ್ತಿಯ ಮಾಧ್ಯಮವೆಷ್ಟೋ, ಅಷ್ಟೇ ಸಂಕೀರ್ಣ ತಾಂತ್ರಿಕತೆಯ ಮಾಧ್ಯಮವೂ ಹೌದು. ತಾಂತ್ರಿಕತೆಯನ್ನು ಅಭಿವ್ಯಕ್ತಿಯಲ್ಲಿ ಅಡ್ಡಿ ಎಂದು ಭಾವಿಸುವುದು ಅಥವಾ ಅದನ್ನು ಕಡೆಗಣಿಸುವುದು ಒಬ್ಬ ಕಲಾವಿದ ತನ್ನ ಕುಂಚ ತನ್ನ ಕ್ಯಾನ್ವಾಸ್‍ನ್ನು ತಾನು ಬಿಡಿಸಬಯಸುವ ಚಿತ್ರಕ್ಕೆ ಅಡ್ಡಿ ಎಂದಹಾಗೆ. ಬರಹಗಾರನಿಗೆ ತನ್ನ ಭಾಷೆ ಮತ್ತು ಪದಗಳೇ ಅಡ್ಡಿಯಾದ ಹಾಗೆ.

ಸಿನೆಮಾ ಎಂದರೆ ಕತೆ ಹೇಳುವ ಮಾಧ್ಯಮ ಎಂದು ನಾವೀಗಾಗಲೇ ತಿಳಿದಿದ್ದೇವೆ; ಸಿನೆಮಾದ ಕಥೆ ಎಂದರೆ ಅದಕ್ಕೆ ತನ್ನದೇ ಆದ ಮಿತಿಗಳಿರುತ್ತವೆ ಹಾಗೂ ಅ ಮಿತಿಗಳನ್ನೇ ಚಿತ್ರದ ಸಾಮಥ್ರ್ಯಗಳೆಂದೂ ಪರಿಗಣಿಸಬಹುದಾಗಿದೆ. ಈ ವಿಷಯದ ಬಗ್ಗೆ ಮುಂಚೆ ಬರೆಯಲಾಗಿದೆ ಹಾಗಾಗಿ ಅದನ್ನು ವಿಸ್ತರಿಸುತ್ತಿಲ್ಲ.

ತಾಂತ್ರಿಕವಾಗಿ ಗಟ್ಟಿಯಾಗಿರುವ ಚಿತ್ರ ಎಂದರೆ ಹಾಲಿವುಡ್‍ನ ಸಾಹಸ ಚಿತ್ರಗಳಲ್ಲ, ಹೆಲಿಕಾಪ್ಟರ್‍ನಿಂದ ತೆಗೆದ ಶಾಟ್‍ಗಳಲ್ಲ, ಪರ್ವತದ, ಅನ್ಯಗ್ರಹಗಳ ಅದ್ಭುತ ಶಾಟ್‍ಗಳನ್ನು ಹೊಂದಿದ ಚಿತ್ರವಲ್ಲ, ಚಾಣಾಕ್ಷತೆಯಿಂದ ಮಾಡಿದ ಸಂಕಲನವಲ್ಲ. ಒಂದು ಸರಳವಾದ ದೃಶ್ಯವನ್ನು ಅಷ್ಟೇ ಸರಳವಾಗಿ ಪರದೆಯ ಮೇಲೆ ತೋರಿಸಿದರೂ ಅದನ್ನು ತಾಂತ್ರಿಕವಾಗಿ ಗಟ್ಟಿಯಾಗಿರುವ ದೃಶ್ಯ ಎನ್ನಬಹುದು.

ತಾಂತ್ರಿಕವಾಗಿ ಗಟ್ಟಿಯಾಗಿರುವ ನಾವೆಲ್ಲರೂ ನೋಡಿದ ಒಂದು ಕನ್ನಡ ಚಿತ್ರವನ್ನು ಹೆಸರಿಸಬೇಕಾದರೆ, ನನಗೆ ಮೊದಲು ಹೊಳೆಯುವುದು ರಾಮ್ ರೆಡ್ಡಿ ನಿರ್ದೇಶಿಸಿದ ‘ತಿಥಿ’. ಹೌದು, ತಾಂತ್ರಿಕವಾಗಿಯೂ ಅದೊಂದು ಅದ್ಭುತ ಚಿತ್ರ. ಆ ಚಿತ್ರದಲ್ಲಿ ಅದ್ಭುತ ಎನ್ನಿಸಬಹುದಾದ ಯಾವುದೇ ಶಾಟ್‍ಗಳಿಲ್ಲ; ಸಾಹಸ ದೃಶ್ಯಗಳಿಲ್ಲ, ಹಳ್ಳಿಗಾಡಿನ, ಪರಿಸರದ, ನದಿ ಬೆಟ್ಟದ ಮನಮೋಹಕ ಚಿತ್ರಣಗಳಿಲ್ಲ. ಚಿತ್ರದಲ್ಲಿ ಅದ್ಭುತವಾದ ಕ್ಯಾಮೆರಾ ಮೂವ್‍ಮೆಂಟ್‍ಗಳೂ ಕಾಣಿಸಿಕೊಳ್ಳುವುದಿಲ್ಲ ಆದರೂ ಅದೊಂದು ತಾಂತ್ರಿಕವಾಗಿ ಅದ್ಭುತ ಚಿತ್ರ. ತನ್ನ ಕಥೆಯನ್ನು ಹೇಳಲು ಏನು ಬೇಕಾಗುತ್ತದೆಯೋ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಆ ಚಿತ್ರ ನೋಡುವಾಗ ನೋಡುಗರು ಅದರಲ್ಲಿ ಬರುವ ಪಾತ್ರಗಳು, ಆಯಾ ಪಾತ್ರಗಳ ತೊಳಲಾಟ, ಕಥೆಯಲ್ಲಿ ಮುಂದೇನಾಗುತ್ತದೆ ಎನ್ನುವುದರ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು ಕ್ಯಾಮರಾ ಚಳಕದ ಕಡೆ ಅಲ್ಲ.

ಆದರೆ ಅದು ಸುಮ್ಮನೇ ಆಗಿದ್ದಲ್ಲ. ಪ್ರತಿಯೊಂದು ದೃಶ್ಯಕ್ಕೂ ಅದರ ತಿರುಳು ಅಥವಾ ಆತ್ಮ ಎಂಬುದೊಂದಿರುತ್ತದೆ. ಆ ತಿರುಳು ಅಥವಾ ಆತ್ಮವನ್ನು ಸಮರ್ಪಕವಾಗಿ ಸೆರೆ ಹಿಡಿಯಬೇಕೆಂದರೆ, ಯಾವ ಲೆನ್ಸ್ ಬಳಸಬೇಕು, ಫಿಲ್ಟರ್ ಬಳಸಬೇಕಾ, ಫೋಕಸ್ ಯಾರ ಮೇಲಿರಬೇಕು, ಆ ಒಂದು ದೃಶ್ಯಕ್ಕೆ ಎಷ್ಟು ಮತ್ತು ಯಾವ್ಯಾವ ಶಾಟ್ ತೆಗೆದುಕೊಳ್ಳಬೇಕು, ಆಯಾ ಶಾಟ್‍ನಲ್ಲಿ ಕ್ಯಾಮರ ಚಲಿಸಬೇಕೇ ಅಥವಾ ಒಂದೇ ಕಡೆ ಇರಬೇಕೇ ಎನ್ನುವ ಹಲವಾರು ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಆಗ ಮಾತ್ರ ಆ ದೃಶ್ಯದ ಜೀವವು, ನಿರ್ದೇಶಕನು ಬಯಸಿದಂತೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬರಹಗಾರರಿಗೆ ತನ್ನ ಭಾಷೆ, ಗಾಯಕನಿಗೆ ತನ್ನ ಕಂಠವು, ನಟನಿಗೆ ತನ್ನ ಇಡೀ ದೇಹ ತಾನು ಹೇಳುವುದನ್ನು ಮುಟ್ಟಿಸುವ ಸಾಧನವಾದ ಹಾಗೆ ಚಲನಚಿತ್ರ ನಿರ್ದೇಶಕರಿಗೆ ಸಿನೆಮಾದ ತಾಂತ್ರಿಕತೆಯೇ ಸಾಧನ. ಸಿನೆಮಾ ಮಾಧ್ಯಮವು ಸಂಕೀರ್ಣವೆನಿಸುವುದು ಇದೇ ಕಾರಣಕ್ಕಾಗಿ. ಸ್ಟೀವನ್ ಸ್ಪೀಲ್‍ಬರ್ಗ್‍ನಿಂದ ಹಿಡಿದು ವಿಶ್ವದ ಬಹುತೇಕ ನಿರ್ದೇಶಕರು, ತಮ್ಮ ಚಿಕ್ಕವಯಸ್ಸಿನಿಂದಲೇ ಕ್ಯಾಮೆರ ಜೊತೆಗೆ ಆಟವಾಡಿದರು; ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದರು, ಕ್ಯಾಮರಾದ, ಚಿತ್ರ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಕಂಡು ಬೆರಗುಗೊಂಡರು. ಅವರಲ್ಲಿ ಹೆಚ್ಚಿನವು ತಾವು ಹೇಳಬಯಸಬಹುದಾದ ಕಥೆಗಳಿಗಿಂತಲೂ ಕ್ಯಾಮರ ಸೃಷ್ಟಿಸುವ ಮ್ಯಾಜಿಕ್ ಅನ್ನು ಪ್ರೀತಿಸಿದವರು. ಹಾಗಾಗಿಯೇ ಅವರ ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ಕೇವಲ ತಾಂತ್ರಿಕ ಶ್ರೇಷ್ಠತೆಯೂ ಕಾಣಿಸಿಕೊಳ್ಳುವುದಿಲ್ಲ.

ಚಿತ್ರ ನಿರ್ದೇಶನಕ್ಕೆ ಕ್ಯಾಮರ ಚಳಕ ಮಾತ್ರ ತಾಂತ್ರಿಕ ಅಂಶವಲ್ಲ. ಅದರೊಂದಿಗೆ ಚಿತ್ರದ ಕಲಾ ನಿರ್ದೇಶನ (ಆರ್ಟ್ ಡೈರೆಕ್ಷನ್), ಹಿನ್ನೆಲೆ ಸಂಗೀತ, ಸಂಕಲನ, ಸ್ಪೆಷಲ್ ಎಫೆಕ್ಟ್ಸ್ ಮುಂತಾದ ಹಲವಾರು ತಾಂತ್ರಿಕ ಅಂಶಗಳಿರುತ್ತವೆ. ಅವೆಲ್ಲವೂ ಆ ಚಿತ್ರದ ಜೀವಕ್ಕೆ, ಆಯಾ ದೃಶ್ಯದ ಜೀವಕ್ಕೆ ಹೇಗೆ ಪೂರಕವಾಗಿಸಬಹುದು ಮತ್ತು ಅವುಗಳೇ ದೃಶ್ಯದ ಜೀವವನ್ನು ಮೀರಿ ನೋಡುಗರು ಆ ತಾಂತ್ರಿಕ ಅಂಶಗಳನ್ನೇ ಮೆಚ್ಚಬಹುದಾದ ಸನ್ನಿವೇಶ ಹೇಗೆ ತಡೆಯಬೇಕು ಎನ್ನುವುದನ್ನೂ ಆಯಾ ವಿಭಾಗಗಳ ತಾಂತ್ರಿಕತೆಯನ್ನು ಅಭ್ಯಸಿಸಿದಾಗ ಮಾತ್ರ ತಿಳಿಯುವುದು.

ಈ ಎಲ್ಲ ತಾಂತ್ರಿಕತೆಗಳನ್ನು ತಾನು ಹೇಳಬೇಕಾದ ಕಥೆಯನ್ನು ತಾಂತ್ರಿಕತೆ ಎದ್ದುಕಾಣದಂತೆ, ತಾಂತ್ರಿಕ ದೋಷಗಳಂತೂ ನುಸುಳದಂತೆ ಸರಳವಾಗಿ ಹೇಳಲು ಬಳಸಿಕೊಂಡಿರುವುದಕ್ಕೆ ತಿಥಿ ಎಂಬ ಚಿತ್ರ ಒಂದು ಒಳ್ಳೆಯ ಉದಾಹರಣೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...