Homeಮುಖಪುಟಜನಪರ ಹೋರಾಟಗಳ ಸಂಗಾತಿ ಮೈಸೂರಿನ ಮರಿದಂಡಯ್ಯ ಬುದ್ಧ ನಿಧನ

ಜನಪರ ಹೋರಾಟಗಳ ಸಂಗಾತಿ ಮೈಸೂರಿನ ಮರಿದಂಡಯ್ಯ ಬುದ್ಧ ನಿಧನ

- Advertisement -
- Advertisement -

ಚಳವಳಿಗಳು ನದಿಯಂತೆ. ಕಾಲದ ಅಡೆತಡೆಗಳನ್ನು ಎದುರಿಸುತ್ತ ನಿಲ್ಲದೇ ಹರಿಯುತ್ತಿರಬೇಕು. ಚಳವಳಿ ಎಂದೂ ನಿಂತ ನೀರಲ್ಲ. ಧುಮ್ಮಿಕ್ಕಿ ಹರಿವ ವರ್ಷಧಾರೆ. ನಿರಂತರ ಹರಿವ ಹೋರಾಟದ ನದಿಯಲ್ಲಿ ಸಹಸ್ರ ಸಹಸ್ರ ಮಂದಿ ಈಜಿದ್ದಾರೆ. ಗುರಿ ಮುಟ್ಟುವ ಮುನ್ನವೇ ಅರ್ಧದಲ್ಲಿಯೇ ನಿರ್ಗಮಿಸಿದ ಚಳವಳಿಗಾರರೇ ಬಹುತೇಕರು. ಅಂತವರ ಸಾಲಿಗೆ ಮತ್ತೊಬ್ಬ ಹೋರಾಟಗಾರ ಸೇರಿದ್ದಾರೆ. ಮೂರುವರೆ ದಶಕಗಳು ಸಾಮಾಜಿಕ ಶುದ್ಧೀಕರಣ ಕ್ರಿಯೆಯಲ್ಲಿ ನಿರತರಾಗಿದ್ದ ಮೈಸೂರಿನ ಜನಪರ ಚಳವಳಿಗಳ ಸಂಗಾತಿ ಮರಿದಂಡಯ್ಯ ಬುದ್ಧ, ಮಧ್ಯದಲ್ಲಿಯೇ ನಿರ್ಗಮಿಸಿ ಸಂಗಾತಿಗಳಲ್ಲಿ ಶೂನ್ಯಭಾವ ತುಂಬಿದ್ದಾರೆ.

ಮೈಸೂರಿನ ಎಲ್ಲಾ ಮಾದರಿಯ ಚಳವಳಿಗಳಲ್ಲಿ, ಎಡಪಂಥೀಯ, ಪ್ರಗತಿಪರ ನಿಲುವಿನ ಸಮಾರಂಭಗಳಲ್ಲಿ ಕಾಣುತ್ತಿದ್ದವರು ಮರಿದಂಡಯ್ಯ ಬುದ್ಧ. ಪತ್ರಿಕಾ ಕಚೇರಿಗಳಿಗೆ ಒಂದಿಲ್ಲೊಂದು ಪತ್ರಿಕಾ ಹೇಳಿಕೆ ಹಿಡಿದು ಬರುತ್ತಿದ್ದ ಅವರು ಮಿತಭಾಷಿ. ಸಾರ್ವಜನಿಕ ವೇದಿಕೆಗಳಲ್ಲಿ ಮಾತಾಡಿದ್ದು ಇಲ್ಲವೇ ಇಲ್ಲ. ಪ್ರಚಾರಕ್ಕೆಂದೂ ಹಪಾಹಪಿಸಿದವರಲ್ಲ. ಪ್ರತಿಭಟನೆಗಳಲ್ಲಿ ತಮ್ಮ ಹೆಸರು ಬರೆದುಕೊಳ್ಳುವಂತೆ ಒಮ್ಮೆಯೂ ಹೇಳಿದವರಲ್ಲ. ಆದರೆ ಮೈಸೂರಿನ ಎಲ್ಲಾ ಚಳವಳಿಗಳಲ್ಲಿ ಅವರ ದನಿ ಇದ್ದೇ ಇರುತ್ತಿತ್ತು.

ಎತ್ತರ ನಿಲುವು, ಪೈಲ್ವಾನನ ದೇಹಾಕೃತಿ, ಸದಾ ಬಿಳಿಯ ಜುಬ್ಬಾ ಧರಿಸುತ್ತಿದ್ದ ಅವರ ಹೆಸರೇ ವಿಚಿತ್ರ ಅನಿಸಿತ್ತು. ಮರಿದಂಡಯ್ಯ ಬುದ್ಧ ಅವರ ಹೆಸರು. ಮಾನವತಾವಾದಿ ಬುದ್ಧನ ಹೆಸರನ್ನು ತಮ್ಮ ಹೆಸರ ಜೊತೆ ಇಟ್ಟುಕೊಂಡಿದ್ದ ಅವರು ಸಮಾಜದ ತರತಮಗಳ ಬಗೆಗೆ ನೋಯುತ್ತ ಮೌನಿಯಾಗಿರುವಂತೆ ಕಾಣುತ್ತಿದ್ದರು. ಅನ್ಯಾಯದ ವಿರುದ್ಧದ ಹೆಜ್ಜೆ ಹಾಕುತ್ತಿದ್ದ ಎಲ್ಲರೊಂದಿಗೂ ನಡೆದರು. ನಡೆಯುತ್ತ ನಡೆಯುತ್ತ ದಣಿದು ಅನಾರೋಗ್ಯ ಪೀಡಿತರಾಗಿ ತಮ್ಮ ನಡಿಗೆ ನಿಲ್ಲಿಸಿಬಿಟ್ಟರು.

ಇತ್ತೀಚೆಗೆ ಗುರುಗಳಾದ ನಾ.ದಿವಾಕರ ಅವರು ‘ಮರಿದಂಡಯ್ಯ ಬುದ್ಧ ತೀವ್ರ ಅನಾರೋಗ್ಯದಲ್ಲಿದ್ದಾರೆ ಎಂದು ತಿಳಿಸಿದ್ದರು. ಅದಾಗಿ ಎರಡು ದಿನಗಳಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಸಮಾಜದ ತರಮತಗಳ ವಿರುದ್ಧ ಹೋರಾಡುತ್ತಿದ್ದ ಅವರು ತಮ್ಮ ದೇಹದ ವಿರುದ್ಧ ಹೋರಾಡಿ ಗೆಲ್ಲಲಾಗದಿದ್ದು ನೋವಿನ ಸಂಗತಿ.

“ದಲಿತ ಚಳುವಳಿಯಲ್ಲಿ, ಕಮ್ಯುನಿಸ್ಟ್ ಚಳುವಳಿಯಲ್ಲಿ, ಮಾನವ ಹಕ್ಕು ಹೋರಾಟಗಳಲ್ಲಿ, ಎಲ್ಲ ರೀತಿಯ ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿದ್ದ ಮರಿದಂಡಯ್ಯ ಬುದ್ಧ ತಮ್ಮ ಸರಳ ಜೀವನದಿಂದಲೇ ಜನಾನುರಾಗಿಯಾಗಿದ್ದರು. ಕೂಲಿಕಾರ್ಮಿಕ ಸಂಘದ ಮೂಲಕ ಮೈಸೂರಿನ ಸಾವಿರಾರು ಕೂಲಿ ಕಾರ್ಮಿಕರಿಗೆ, ಪೌರ ಕಾರ್ಮಿಕರಿಗೆ ಆಸರೆಯಾಗಿದ್ದ ಮರಿದಂಡಯ್ಯ ಬುದ್ಧ ಕಾಯಕ ಜೀವಿ. ನಡೆದಾಡುವ ಚೇತನ. ಸ್ವಂತ ವಾಹನ ಇಲ್ಲದೆಯೇ ಅಗತ್ಯವಿದ್ದೆಡೆ, ಅವಶ್ಯಕತೆ ಇದ್ದವರಿಗೆ ಸಹಾಯ ಹಸ್ತ ನೀಡುತ್ತಲೇ ತಮ್ಮ ಬದುಕು ಸವೆಸಿದ ಬುದ್ಧ ಸಾಂಸಾರಿಕ ಜೀವನಕ್ಕಿಂತಲೂ ಸಮಾಜಮುಖಿಯಾಗಿಯೇ ಬದುಕಲು ಇಚ್ಚಿಸಿದವರು” ಎಂದು ಚಿಂತಕರಾದ ನಾ ದಿವಾಕರ್‌ರವರು ನುಡಿನಮನ ಸಲ್ಲಿಸಿದ್ದಾರೆ.

‘ಓಹೊ… ದಿನಾ ನೋಡ್ತಾ ಇದ್ದೆ ಇವರನ್ನ ಒಂದು ಜುಬ್ಬ ಹಾಕೊಂಡು ಓಡಾಡೋರು, ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುವವರು’ ಎಂದು ಗೆಳೆಯ ರಂಗಕರ್ಮಿ ಶಿರಾ ಸೋಮಶೇಖರ್ ನೆನಪಿಸಿಕೊಳ್ಳುತ್ತಾನೆ. ಅವರನ್ನು ಮೈಸೂರಿನ ರಸ್ತೆಗಳಲ್ಲಿ ಮುಂದೆ ಎಂದೆಂದೂ ಕಾಣಲಾಗುವುದಿಲ್ಲ. ಹೋರಾಟಗಾರರ ಎದೆಯಲ್ಲಿ ಅವರು ಸದಾ ಜೀವಂತ.

ವಿನೋದ್ ಮಹದೇವಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...