Homeಮುಖಪುಟಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ನಿರ್ದೇಶಕ ಅಲ್ಪಾಂಸೋ ಕ್ವಾರೋನ್

- Advertisement -
- Advertisement -

ಕೆಲವು ಚಿತ್ರಗಳನ್ನು ನೋಡಿದಾಗ ಒಂದಿಷ್ಟು ಪ್ರಶ್ನೆಗಳು ಮೂಡುತ್ತವೆ; ನನಗ್ಯಾಕೆ ಈ ಚಿತ್ರ ಇಷ್ಟವಾಯಿತು? ನನಗೆ ನಿಜವಾಗಿಯೂ ಇಷ್ಟವಾಗಿದೆಯಾ ಅಥವಾ ಸುಮ್ನೆ ಹಾಗೆ ಅಂತಿದೀನಾ? ಒಂದು ವೇಳೆ ಈ ಚಿತ್ರದ ಕಥೆಯನ್ನು ನನಗೆ ಯಾರೋ ಹೇಳಿದ್ದಲ್ಲಿ ನನಗೆ ಇಷ್ಟವಾಗುತ್ತಿತ್ತಾ? ಯಾಕೆ ಈ ಚಿತ್ರ ಮಾಡಿದ ನಿರ್ದೇಶಕ?

ರೋಮಾ ಎಂಬ ಚಿತ್ರ ನೋಡಿದ ನಂತರ ಮೂಡಿದ ಕೆಲವ ಪ್ರಶ್ನೆಗಳು ಹೀಗೆಯೆ ಇದ್ದವು. ಈ ಚಿತ್ರ, ಈ ಚಿತ್ರದ ಹಿಂದಿರುವ ದೀರ್ಘ ಪ್ರಯಾಣವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲೆನಿಸಿತು. ಚಿತ್ರದ ಬಗ್ಗೆ ಹೇಳುವುದಾದರೆ; ಮೆಕ್ಸಿಕೋದ ಒಂದು ನಗರದಲ್ಲಿ ಉಚ್ಚ ಮಧ್ಯಮ ವರ್ಗದ ಮನೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಯುವಕಿಯ ಕಥೆ. ಅದರೊಂದಿಗೆ ಅವಳನ್ನು ಕೆಲಸಕ್ಕಿಟ್ಟುಕೊಂಡಿರುವ ಕುಟುಂಬದ ಕಥೆಯೂ ಹೌದು. 70ರ ದಶಕದಲ್ಲಿಯ ಕಥೆಯಾದ ಇದನ್ನು ಆ ಕಾಲದಲ್ಲಿ ಮೆಕ್ಸಿಕೋದಲ್ಲಿ ಮನೆಗೆಲಸ ಮಾಡುವವರ ವ್ಯಥೆ ಅಥವಾ ಸಂಕಷ್ಟಗಳನ್ನು ತೋರಿಸಲು ಮಾಡಿದ ಚಿತ್ರವಲ್ಲ. ಈ ಚಿತ್ರ ಅಲ್ಪಾಂಸೋ ಕ್ವಾರೋನ್ ಎಂಬ ಖ್ಯಾತ ನಿರ್ದೇಶಕನ ನೆನಪುಗಳ ಚಿತ್ರಣ.

ಯಾವುದೇ ಚಿತ್ರ ಇಷ್ಟವಾದಾಗ ಅದರ ಸ್ಟ್ರಕ್ಚರ್ ಗಟ್ಟಿಯಾಗಿತ್ತು, ಪಾತ್ರಗಳು ಜೀವಂತವಾಗಿದ್ದವು, ಚಿತ್ರ ಪ್ರತಿ ಫ್ರೇಮ್‌ನಲ್ಲೂ ಕಥೆಯನ್ನು ಮುಂದುವರೆಸುತ್ತಿತ್ತು, ಮುಂದೇನಾಗುವುದೋ ಎನ್ನುವ ಕಾತುರ ಹುಟ್ಟಿಸುತ್ತಿತ್ತು ಎಂದೆಲ್ಲಾ ನಾವು ತಿಳಿದಿದ್ದೆವು. ಇಲ್ಲಿ ಅವೆಲ್ಲ ಗೌಣ. ಆ ಆಯಾಮಗಳ ಪೋಸ್ಟ್ ಮಾರ್ಟಮ್ ಮಾಡುವ ಯಾವ ಅವಶ್ಯಕತೆ ಕಾಣುವುದಿಲ್ಲ. ಈ ಚಿತ್ರವನ್ನು ನೋಡುವುದೊಂದು ಅನುಭವ. ನಿರ್ದೇಶಕನ ನೆನಪುಗಳ, ಅವನ ಬಾಲ್ಯದ ಜಗತ್ತಿನ ಪಾತ್ರಗಳ, ಘಟನೆಗಳ ಅನುಭವ. ಅದೇ ನನ್ನ ಮುಂದಿನ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.

ಕೇವಲ ನೆನಪುಗಳು ಒಂದು ಕಥೆಯಾಗಬಲ್ಲವೇ? ನೆನಪಿಡಿ, ಇಲ್ಲಿ ನೆನಪು ಅಂದರೆ ಒಂದು ಸ್ವಾರಸ್ಯಕರ ಅಥವಾ ಭೀಕರ ಘಟನೆಯ ನೆನಪಲ್ಲ. ನೆನಪೆಂದರೆ, ತಾನು ಬೆಳೆದ ಓಣಿಯಲ್ಲಿ ಬೀಳಿತ್ತಿದ್ದ ಬಿಸಿಲನ ನೆನಪು, ಪ್ರತಿಭಟನೆಯೊಂದು ನಡೆದಾಗ ಹಿಂಸೆಯಾಗಿ ಆ ಸುದ್ದಿ ಪತ್ರಿಕೆಯಲ್ಲಿ ಬಂದಾಗ, ಅಲ್ಲಿ ರಸ್ತೆಯ ಮೇಲೆ ನಡೆಯುತ್ತಿರುವ ಗಲಭೆಯ ಚಿತ್ರದ ಹಿನ್ನೆಲೆಯಲ್ಲಿ ಒಂದು ಫರ್ನಿಚರ್ ಅಂಗಡಿಯ ಕಿಟಕಿಯಿಂದ ಜನರು ಇಣುಕಿ ನೋಡುತ್ತಿದ್ದಾರೆ, ಅದರ ನೆನಪು, ಆ ಸದ್ದುಗಳು, ಬಣ್ಣಗಳ ನೆನಪು. ಬಣ್ಣಗಳು ಹುಟ್ಟಿಸುವ ಭಾವನೆಗಳ ನೆನಪು, ಗತಿಸಿ ಹೋದ ಕಾಲದ, ಸಂಬಂಧಗಳ ನೆನಪುಗಳು. ಅತ್ಯಂತ ಖಾಸಗಿಯಾದ ನೆನಪುಗಳನ್ನು ಕಥೆಯನ್ನಾಗಿಸುವುದು, ಅದನ್ನು ನಿಜವಾಗಿಯೂ ಪರದೆಯ ಮೇಲೆ ತರುವುದಾದರೂ ಹೇಗೆ?

ನಿರ್ದೇಶಕ ಅಲ್ಫಾಂಸೋ ಕ್ವಾರೋನ್ ಕೂಡ ಚಿತ್ರದಲ್ಲಿ ತೋರಿಸಿದತಹ ಉಚ್ಚ ಮಧ್ಯಮ ವರ್ಗದಲ್ಲಿ ಬೆಳದವನು. ತಾನು ಬೆಳೆಯುತ್ತಿರುವಾಗ ಚಿತ್ರದಲ್ಲಿ ಇರುವ ಕ್ಲಿಯೋ ಹಾಗೆ ಅವನನ್ನೂ ಒಬ್ಬ ಸಹಾಯಕಿ ಲಿಬೋ ನೋಡಿಕೊಂಡಿದ್ದಳು. ಎಪ್ಪತ್ತರ ಮೊದಲರ್ಧದಲ್ಲಿ ಮೆಕ್ಸಿಕೋ ಕಷ್ಟದ ಕಾಲದಿಂದ ಹೋಗುತ್ತಿತ್ತು. ಆ ಸಹಾಯಕಿ, ಮೆಕ್ಸಿಕೋ ದೇಶದ ಆ ಕಾಲದ ನೆನಪುಗಳನ್ನು ದಶಕಗಟ್ಟಲೇ ಚಿಂತಿಸಿ, ಮನದಲ್ಲಿ ಒಂದು ಅಸ್ಪಷ್ಟ ರೂಪ ಮೂಡಿದಾಗ ಈ ಚಿತ್ರವನ್ನು ಪ್ರಾರಂಭಿಸಿದ. ಈ ಚಿತ್ರದ ಬಗ್ಗೆ ಯೋಚಿಸಿದಾಗೆಲ್ಲ, ತನ್ನ ನೆನಪುಗಳನ್ನೆಲ್ಲ ಕೆದಕಿದಾಗ ಅವೆಲ್ಲವುಗಳನ್ನು ಕಪ್ಪುಬಿಳುಪಿನಲ್ಲೇ ಕಂಡಿದ್ದರಿಂದ ಇದು ಕಲರ್ ಚಿತ್ರವಲ್ಲ. ತನ್ನ ಮುಂಚಿನ ಚಿತ್ರಗಳಲ್ಲಿ ಛಾಯಾಗ್ರಾಹಕನಾಗಿದ್ದ ಇಮ್ಯಾನುಯೆಲ್ ಲುಬೆಜ್ಕಿ ಅನ್ನು ಬಿಟ್ಟು ತಾನೇ ಕ್ಯಾಮರ ಹಿಡಿದ. ಪ್ರತಿಯೊಂದು ದೃಶ್ಯಗಳನ್ನು ತನ್ನ ನೆನಪಿನಾಳದಲ್ಲಿ ಮೂಡಿದ ಚಿತ್ರಗಳಂತೆ ಪರೆದಯ ಮೇಲೆ ಮೂಡಿಸಲು ಪ್ರಯತ್ನಿಸಿದ.

ತನ್ನ ನೆನಪುಗಳ ಪ್ರಾಮಾಣಿಕತೆಯನ್ನು ಮೂಡಿಸಲು ಕಠಿಣ ಶ್ರಮದೊಂದಿಗೆ ಸಿನೆಮಾ ಎಂಬ ಕಲೆಯ ಟೆಕ್ನಿಕ್‌ಗಳ ಸಹಾಯವೂ ಬೇಕು. ತನ್ನ ಆ ನೆನಪುಗಳು ಬಿಡಿ ಬಿಡಿ ಶಾಟ್‌ಗಳಲ್ಲಿ ಕಾಣಲಿಲ್ಲವಾದುದರಿಂದ ಚಿತ್ರದಲ್ಲಿ ಲಾಂಗ್‌ಶಾಟ್‌ಗಳು ಹೆಚ್ಚು ಕಾಣುತ್ತವೆ. ಆಗ ಇನ್ನಷ್ಟು ಶ್ರಮ ಬೇಕು. ಆಯಾ ದೀರ್ಘ ಶಾಟ್‌ಗಳಲ್ಲಿ ಕಂಡುವರುವ ಎಲ್ಲಾ ವಸ್ತುಗಳು ಆ ಸಮಯಕ್ಕೆ ತಕ್ಕಂತೆ ಇರಬೇಕು, ಪ್ರತಿಯೊಂದು ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾಮರಾದ ಚಲನೆ ಮಾಡಬೇಕು, ಹೀಗೆ ಹತ್ತಾರು ವಿಷಯಗಳನ್ನು ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಂದು ಶಾಟ್ ಅನ್ನು ತೆಗೆಯಬೇಕಾಗುತ್ತದೆ.

ಇದೊಂದು ಖಾಸಗಿ ಚಿತ್ರವಾದುದರಿಂದ ಚಿತ್ರದ ಸ್ಕ್ರಿಪ್ಟ್ ನಿರ್ದೇಶಕನಿಗೆ ಮಾತ್ರ ತಿಳಿದಿತ್ತು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಜಲಿಟ್ಸಾ ಅಪಾರೆಸಿಒ ಸೇರಿ ಬಹುತೇಕ ನಟರು ವೃತ್ತಿಪರ ನಟರಲ್ಲ. ಚಿತ್ರದಲ್ಲಿ ನೈಜತೆಯನ್ನು ತರಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳಲಾಯಿತು. ಪ್ರತಿದಿನ ಚಿತ್ರೀಕರಣ ಶುರುವಾಗುವ ಮುನ್ನ ಎಲ್ಲಾ ನಟರಿಗೂ ಪ್ರತ್ಯೇಕವಾಗಿ ದೃಶ್ಯಗಳನ್ನು ವಿವರಿಸಿ (ಕೆಲವೊಮ್ಮೆ ಬೇರೆ ಬೇರೆ ನಟರಿಗೆ ಒಂದೇ ದೃಶ್ಯದ ಬೇರೆ ಬೇರೆ ವಿವರಣ ನೀಡಿ) ಕ್ಯಾಮೆರ ಚಾಲನೆ ನೀಡುತ್ತಿದ್ದರು; ದೃಶ್ಯ ತನ್ನಿಂತಾನೆ ರೂಪಗೊಳ್ಳಲಿ ಎಂದು.

ಚಿತ್ರದಲ್ಲಿ ಇದ್ದ ಕೆಲವು ವೃತ್ತಿಪರ ನಟರಿಗೆ ಇದು ಗಲಿಬಿಲಿ (ಪ್ರಾರಂಭದಲ್ಲಿ) ಮಾಡಿಸಿದರೆ, ಮೊದಲನೇ ಬಾರಿ ನಟಿಸುವವರು ಲೀಲಾಜಾಲವಾಗಿ ನಟಿಸುವಂತೆ ಮಾಡಿತು. ಆಸ್ಪತ್ರೆಯ ದೃಶ್ಯದಲ್ಲಿ ನಿಜವಾದ ವೈದ್ಯರು ಮತ್ತು ಆರೋಗ್ಯಕರ್ಮಿಗಳನ್ನೇ ಬಳಸಿ ಚಿತ್ರೀಕರಣ ಮಾಡಿದರು.

ಕ್ಯಾಮೆರ ಮೂವಮೆಂಟ್ ಅಥವಾ ಛಾಯಾಗ್ರಹಣದ ಪ್ರಶ್ನೆ ಬಂದಾಗ ಎಷ್ಟೇ ಸುಂದರವಾದ ಶಾಟ್ ಬರುತ್ತಿದ್ದರೂ ಈ ಮುಂಚೆ ಬಳಸಲಾಗುವ ರೆಫರನ್ಸ್ ಶಾಟ್‌ಗಳನ್ನು ಬಳಸಬಾರದು ಎನ್ನುವ ಹಟಕ್ಕೆ ಬಿದ್ದಿದ್ದರು ನಿರ್ದೇಶಕ ಅಲ್ಫಾಂಸೋ. ಪ್ರತಿಯೊಂದು ಶಾಟ್ ಕೂಡ ಹೊಸದಾಗಿ, ತನ್ನ ನೆನಪಿನ ಚಿತ್ರಕ್ಕೆ ಪೂರಕವಾಗಿರುವಂತೆ ನೋಡಿಕೊಂಡರು. ಅದರಿಂದ ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ. ಗ್ಯ್ರಾವಿಟಿ, ಯಿ ತು ಮಾಮಾ ತಾಂಬಿಯನ್, ಚಿಲ್ಡ್ರನ್ ಆಫ್ ಮೆನ್ ಮುಂತಾದ ವಿಶ್ವವಿಖ್ಯಾತ ಚಿತ್ರಗಳನ್ನು ನೀಡಿದ್ದರೂ, ರೋಮಾ ಎಂಬ ಈ ಚಿತ್ರ ತನ್ನ ಮೊದಲ ಚಿತ್ರ ಎಂದೇ ಅಂದುಕೊಳ್ಳುತ್ತಾನೆ ಅಲ್ಫಾಂಸೋ ಕ್ವಾರೋನ್.


ಇದನ್ನೂ ಓದಿ: ’’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...