Homeಮುಖಪುಟಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ನಿರ್ದೇಶಕ ಅಲ್ಪಾಂಸೋ ಕ್ವಾರೋನ್

- Advertisement -
- Advertisement -

ಕೆಲವು ಚಿತ್ರಗಳನ್ನು ನೋಡಿದಾಗ ಒಂದಿಷ್ಟು ಪ್ರಶ್ನೆಗಳು ಮೂಡುತ್ತವೆ; ನನಗ್ಯಾಕೆ ಈ ಚಿತ್ರ ಇಷ್ಟವಾಯಿತು? ನನಗೆ ನಿಜವಾಗಿಯೂ ಇಷ್ಟವಾಗಿದೆಯಾ ಅಥವಾ ಸುಮ್ನೆ ಹಾಗೆ ಅಂತಿದೀನಾ? ಒಂದು ವೇಳೆ ಈ ಚಿತ್ರದ ಕಥೆಯನ್ನು ನನಗೆ ಯಾರೋ ಹೇಳಿದ್ದಲ್ಲಿ ನನಗೆ ಇಷ್ಟವಾಗುತ್ತಿತ್ತಾ? ಯಾಕೆ ಈ ಚಿತ್ರ ಮಾಡಿದ ನಿರ್ದೇಶಕ?

ರೋಮಾ ಎಂಬ ಚಿತ್ರ ನೋಡಿದ ನಂತರ ಮೂಡಿದ ಕೆಲವ ಪ್ರಶ್ನೆಗಳು ಹೀಗೆಯೆ ಇದ್ದವು. ಈ ಚಿತ್ರ, ಈ ಚಿತ್ರದ ಹಿಂದಿರುವ ದೀರ್ಘ ಪ್ರಯಾಣವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲೆನಿಸಿತು. ಚಿತ್ರದ ಬಗ್ಗೆ ಹೇಳುವುದಾದರೆ; ಮೆಕ್ಸಿಕೋದ ಒಂದು ನಗರದಲ್ಲಿ ಉಚ್ಚ ಮಧ್ಯಮ ವರ್ಗದ ಮನೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಯುವಕಿಯ ಕಥೆ. ಅದರೊಂದಿಗೆ ಅವಳನ್ನು ಕೆಲಸಕ್ಕಿಟ್ಟುಕೊಂಡಿರುವ ಕುಟುಂಬದ ಕಥೆಯೂ ಹೌದು. 70ರ ದಶಕದಲ್ಲಿಯ ಕಥೆಯಾದ ಇದನ್ನು ಆ ಕಾಲದಲ್ಲಿ ಮೆಕ್ಸಿಕೋದಲ್ಲಿ ಮನೆಗೆಲಸ ಮಾಡುವವರ ವ್ಯಥೆ ಅಥವಾ ಸಂಕಷ್ಟಗಳನ್ನು ತೋರಿಸಲು ಮಾಡಿದ ಚಿತ್ರವಲ್ಲ. ಈ ಚಿತ್ರ ಅಲ್ಪಾಂಸೋ ಕ್ವಾರೋನ್ ಎಂಬ ಖ್ಯಾತ ನಿರ್ದೇಶಕನ ನೆನಪುಗಳ ಚಿತ್ರಣ.

ಯಾವುದೇ ಚಿತ್ರ ಇಷ್ಟವಾದಾಗ ಅದರ ಸ್ಟ್ರಕ್ಚರ್ ಗಟ್ಟಿಯಾಗಿತ್ತು, ಪಾತ್ರಗಳು ಜೀವಂತವಾಗಿದ್ದವು, ಚಿತ್ರ ಪ್ರತಿ ಫ್ರೇಮ್‌ನಲ್ಲೂ ಕಥೆಯನ್ನು ಮುಂದುವರೆಸುತ್ತಿತ್ತು, ಮುಂದೇನಾಗುವುದೋ ಎನ್ನುವ ಕಾತುರ ಹುಟ್ಟಿಸುತ್ತಿತ್ತು ಎಂದೆಲ್ಲಾ ನಾವು ತಿಳಿದಿದ್ದೆವು. ಇಲ್ಲಿ ಅವೆಲ್ಲ ಗೌಣ. ಆ ಆಯಾಮಗಳ ಪೋಸ್ಟ್ ಮಾರ್ಟಮ್ ಮಾಡುವ ಯಾವ ಅವಶ್ಯಕತೆ ಕಾಣುವುದಿಲ್ಲ. ಈ ಚಿತ್ರವನ್ನು ನೋಡುವುದೊಂದು ಅನುಭವ. ನಿರ್ದೇಶಕನ ನೆನಪುಗಳ, ಅವನ ಬಾಲ್ಯದ ಜಗತ್ತಿನ ಪಾತ್ರಗಳ, ಘಟನೆಗಳ ಅನುಭವ. ಅದೇ ನನ್ನ ಮುಂದಿನ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.

ಕೇವಲ ನೆನಪುಗಳು ಒಂದು ಕಥೆಯಾಗಬಲ್ಲವೇ? ನೆನಪಿಡಿ, ಇಲ್ಲಿ ನೆನಪು ಅಂದರೆ ಒಂದು ಸ್ವಾರಸ್ಯಕರ ಅಥವಾ ಭೀಕರ ಘಟನೆಯ ನೆನಪಲ್ಲ. ನೆನಪೆಂದರೆ, ತಾನು ಬೆಳೆದ ಓಣಿಯಲ್ಲಿ ಬೀಳಿತ್ತಿದ್ದ ಬಿಸಿಲನ ನೆನಪು, ಪ್ರತಿಭಟನೆಯೊಂದು ನಡೆದಾಗ ಹಿಂಸೆಯಾಗಿ ಆ ಸುದ್ದಿ ಪತ್ರಿಕೆಯಲ್ಲಿ ಬಂದಾಗ, ಅಲ್ಲಿ ರಸ್ತೆಯ ಮೇಲೆ ನಡೆಯುತ್ತಿರುವ ಗಲಭೆಯ ಚಿತ್ರದ ಹಿನ್ನೆಲೆಯಲ್ಲಿ ಒಂದು ಫರ್ನಿಚರ್ ಅಂಗಡಿಯ ಕಿಟಕಿಯಿಂದ ಜನರು ಇಣುಕಿ ನೋಡುತ್ತಿದ್ದಾರೆ, ಅದರ ನೆನಪು, ಆ ಸದ್ದುಗಳು, ಬಣ್ಣಗಳ ನೆನಪು. ಬಣ್ಣಗಳು ಹುಟ್ಟಿಸುವ ಭಾವನೆಗಳ ನೆನಪು, ಗತಿಸಿ ಹೋದ ಕಾಲದ, ಸಂಬಂಧಗಳ ನೆನಪುಗಳು. ಅತ್ಯಂತ ಖಾಸಗಿಯಾದ ನೆನಪುಗಳನ್ನು ಕಥೆಯನ್ನಾಗಿಸುವುದು, ಅದನ್ನು ನಿಜವಾಗಿಯೂ ಪರದೆಯ ಮೇಲೆ ತರುವುದಾದರೂ ಹೇಗೆ?

ನಿರ್ದೇಶಕ ಅಲ್ಫಾಂಸೋ ಕ್ವಾರೋನ್ ಕೂಡ ಚಿತ್ರದಲ್ಲಿ ತೋರಿಸಿದತಹ ಉಚ್ಚ ಮಧ್ಯಮ ವರ್ಗದಲ್ಲಿ ಬೆಳದವನು. ತಾನು ಬೆಳೆಯುತ್ತಿರುವಾಗ ಚಿತ್ರದಲ್ಲಿ ಇರುವ ಕ್ಲಿಯೋ ಹಾಗೆ ಅವನನ್ನೂ ಒಬ್ಬ ಸಹಾಯಕಿ ಲಿಬೋ ನೋಡಿಕೊಂಡಿದ್ದಳು. ಎಪ್ಪತ್ತರ ಮೊದಲರ್ಧದಲ್ಲಿ ಮೆಕ್ಸಿಕೋ ಕಷ್ಟದ ಕಾಲದಿಂದ ಹೋಗುತ್ತಿತ್ತು. ಆ ಸಹಾಯಕಿ, ಮೆಕ್ಸಿಕೋ ದೇಶದ ಆ ಕಾಲದ ನೆನಪುಗಳನ್ನು ದಶಕಗಟ್ಟಲೇ ಚಿಂತಿಸಿ, ಮನದಲ್ಲಿ ಒಂದು ಅಸ್ಪಷ್ಟ ರೂಪ ಮೂಡಿದಾಗ ಈ ಚಿತ್ರವನ್ನು ಪ್ರಾರಂಭಿಸಿದ. ಈ ಚಿತ್ರದ ಬಗ್ಗೆ ಯೋಚಿಸಿದಾಗೆಲ್ಲ, ತನ್ನ ನೆನಪುಗಳನ್ನೆಲ್ಲ ಕೆದಕಿದಾಗ ಅವೆಲ್ಲವುಗಳನ್ನು ಕಪ್ಪುಬಿಳುಪಿನಲ್ಲೇ ಕಂಡಿದ್ದರಿಂದ ಇದು ಕಲರ್ ಚಿತ್ರವಲ್ಲ. ತನ್ನ ಮುಂಚಿನ ಚಿತ್ರಗಳಲ್ಲಿ ಛಾಯಾಗ್ರಾಹಕನಾಗಿದ್ದ ಇಮ್ಯಾನುಯೆಲ್ ಲುಬೆಜ್ಕಿ ಅನ್ನು ಬಿಟ್ಟು ತಾನೇ ಕ್ಯಾಮರ ಹಿಡಿದ. ಪ್ರತಿಯೊಂದು ದೃಶ್ಯಗಳನ್ನು ತನ್ನ ನೆನಪಿನಾಳದಲ್ಲಿ ಮೂಡಿದ ಚಿತ್ರಗಳಂತೆ ಪರೆದಯ ಮೇಲೆ ಮೂಡಿಸಲು ಪ್ರಯತ್ನಿಸಿದ.

ತನ್ನ ನೆನಪುಗಳ ಪ್ರಾಮಾಣಿಕತೆಯನ್ನು ಮೂಡಿಸಲು ಕಠಿಣ ಶ್ರಮದೊಂದಿಗೆ ಸಿನೆಮಾ ಎಂಬ ಕಲೆಯ ಟೆಕ್ನಿಕ್‌ಗಳ ಸಹಾಯವೂ ಬೇಕು. ತನ್ನ ಆ ನೆನಪುಗಳು ಬಿಡಿ ಬಿಡಿ ಶಾಟ್‌ಗಳಲ್ಲಿ ಕಾಣಲಿಲ್ಲವಾದುದರಿಂದ ಚಿತ್ರದಲ್ಲಿ ಲಾಂಗ್‌ಶಾಟ್‌ಗಳು ಹೆಚ್ಚು ಕಾಣುತ್ತವೆ. ಆಗ ಇನ್ನಷ್ಟು ಶ್ರಮ ಬೇಕು. ಆಯಾ ದೀರ್ಘ ಶಾಟ್‌ಗಳಲ್ಲಿ ಕಂಡುವರುವ ಎಲ್ಲಾ ವಸ್ತುಗಳು ಆ ಸಮಯಕ್ಕೆ ತಕ್ಕಂತೆ ಇರಬೇಕು, ಪ್ರತಿಯೊಂದು ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾಮರಾದ ಚಲನೆ ಮಾಡಬೇಕು, ಹೀಗೆ ಹತ್ತಾರು ವಿಷಯಗಳನ್ನು ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಂದು ಶಾಟ್ ಅನ್ನು ತೆಗೆಯಬೇಕಾಗುತ್ತದೆ.

ಇದೊಂದು ಖಾಸಗಿ ಚಿತ್ರವಾದುದರಿಂದ ಚಿತ್ರದ ಸ್ಕ್ರಿಪ್ಟ್ ನಿರ್ದೇಶಕನಿಗೆ ಮಾತ್ರ ತಿಳಿದಿತ್ತು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಜಲಿಟ್ಸಾ ಅಪಾರೆಸಿಒ ಸೇರಿ ಬಹುತೇಕ ನಟರು ವೃತ್ತಿಪರ ನಟರಲ್ಲ. ಚಿತ್ರದಲ್ಲಿ ನೈಜತೆಯನ್ನು ತರಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳಲಾಯಿತು. ಪ್ರತಿದಿನ ಚಿತ್ರೀಕರಣ ಶುರುವಾಗುವ ಮುನ್ನ ಎಲ್ಲಾ ನಟರಿಗೂ ಪ್ರತ್ಯೇಕವಾಗಿ ದೃಶ್ಯಗಳನ್ನು ವಿವರಿಸಿ (ಕೆಲವೊಮ್ಮೆ ಬೇರೆ ಬೇರೆ ನಟರಿಗೆ ಒಂದೇ ದೃಶ್ಯದ ಬೇರೆ ಬೇರೆ ವಿವರಣ ನೀಡಿ) ಕ್ಯಾಮೆರ ಚಾಲನೆ ನೀಡುತ್ತಿದ್ದರು; ದೃಶ್ಯ ತನ್ನಿಂತಾನೆ ರೂಪಗೊಳ್ಳಲಿ ಎಂದು.

ಚಿತ್ರದಲ್ಲಿ ಇದ್ದ ಕೆಲವು ವೃತ್ತಿಪರ ನಟರಿಗೆ ಇದು ಗಲಿಬಿಲಿ (ಪ್ರಾರಂಭದಲ್ಲಿ) ಮಾಡಿಸಿದರೆ, ಮೊದಲನೇ ಬಾರಿ ನಟಿಸುವವರು ಲೀಲಾಜಾಲವಾಗಿ ನಟಿಸುವಂತೆ ಮಾಡಿತು. ಆಸ್ಪತ್ರೆಯ ದೃಶ್ಯದಲ್ಲಿ ನಿಜವಾದ ವೈದ್ಯರು ಮತ್ತು ಆರೋಗ್ಯಕರ್ಮಿಗಳನ್ನೇ ಬಳಸಿ ಚಿತ್ರೀಕರಣ ಮಾಡಿದರು.

ಕ್ಯಾಮೆರ ಮೂವಮೆಂಟ್ ಅಥವಾ ಛಾಯಾಗ್ರಹಣದ ಪ್ರಶ್ನೆ ಬಂದಾಗ ಎಷ್ಟೇ ಸುಂದರವಾದ ಶಾಟ್ ಬರುತ್ತಿದ್ದರೂ ಈ ಮುಂಚೆ ಬಳಸಲಾಗುವ ರೆಫರನ್ಸ್ ಶಾಟ್‌ಗಳನ್ನು ಬಳಸಬಾರದು ಎನ್ನುವ ಹಟಕ್ಕೆ ಬಿದ್ದಿದ್ದರು ನಿರ್ದೇಶಕ ಅಲ್ಫಾಂಸೋ. ಪ್ರತಿಯೊಂದು ಶಾಟ್ ಕೂಡ ಹೊಸದಾಗಿ, ತನ್ನ ನೆನಪಿನ ಚಿತ್ರಕ್ಕೆ ಪೂರಕವಾಗಿರುವಂತೆ ನೋಡಿಕೊಂಡರು. ಅದರಿಂದ ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ. ಗ್ಯ್ರಾವಿಟಿ, ಯಿ ತು ಮಾಮಾ ತಾಂಬಿಯನ್, ಚಿಲ್ಡ್ರನ್ ಆಫ್ ಮೆನ್ ಮುಂತಾದ ವಿಶ್ವವಿಖ್ಯಾತ ಚಿತ್ರಗಳನ್ನು ನೀಡಿದ್ದರೂ, ರೋಮಾ ಎಂಬ ಈ ಚಿತ್ರ ತನ್ನ ಮೊದಲ ಚಿತ್ರ ಎಂದೇ ಅಂದುಕೊಳ್ಳುತ್ತಾನೆ ಅಲ್ಫಾಂಸೋ ಕ್ವಾರೋನ್.


ಇದನ್ನೂ ಓದಿ: ’’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...

ಕ್ಷುಲ್ಲಕ ಕಾರಣಕ್ಕೆ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಿರಿಯ ವಯಸ್ಕರು ಸೇರಿದಂತೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ದುಷ್ಕರ್ಮಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 15ರಂದು ಜಿಲ್ಲೆಯ ರುದಾಯನ್ ಪಟ್ಟಣದಲ್ಲಿ...

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...