Homeಮುಖಪುಟಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು...

ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು…

- Advertisement -
- Advertisement -

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನುಸರಿಸಲಾದ ಲಾಕ್‌ಡೌನ್ ಇಡೀ ಜಗತ್ತನ್ನು ಸ್ತಬ್ದಗೊಳಿಸಿದೆ. ಇಂಥ ಸಂದರ್ಭವನ್ನು ಆರ್ಥಿಕವಾಗಿ ಸುಸ್ಥಿರವಾಗಿರುವ ಕುಟುಂಬಗಳು ಸಣ್ಣ ಅನಿಸ್ಚಿತತೆಯಲ್ಲೇ ಕಳೆಯುತ್ತಿವೆ. ಆದರೆ ಅಂದೇ ದುಡಿದು ಬದುಕುವ ಜನರ ಜೀವನ ಅತಂತ್ರವಾಗಿದೆ! ಈ ಹೊತ್ತಿನಲ್ಲಿ ಅವರಿಗೆ ನೆರವಾಗುವ ಮೂಲಕ ಧೈರ್ಯ ತುಂಬಾ ಬೇಕಾಗಿತ್ತು ಪ್ರತಿಯೊಬ್ಬರ ಜವಾಬ್ದಾರಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಉಳ್ಳವರ ಸಂವೇದನಾರಹಿತ ವರ್ತನೆ ಈ ದೇಶದ ಶತಮಾನಗಳ ತಾರತಮ್ಯವನ್ನು ಸ್ಪಷ್ಟವಾಗಿ ಎತ್ತಿ ಹಿಡಿಯಿತು.

ಜನಪ್ರಿಯ ಹಾಸ್ಯ ಕಲಾವಿದ ವರುಣ್ ಗ್ರೋವರ್ ಇತ್ತೀಚೆಗೆ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡರು. ಲಾಕ್‌ಡೌನ್ ಸಂದರ್ಭದಲ್ಲಿ ತರಕಾರಿಕೊಳ್ಳುವಾಗ ತಮ್ಮ ಮುಂದೆ ನಿಂತಿದ್ದ ಸ್ಥಿತಿವಂತ ದಂಪತಿಗಳು 315 ರೂ.ಗಳಿಗೆ ತರಕಾರಿ ಕೊಂಡು, ವ್ಯಾಪಾರಿಗೆ 300 ಕೊಟ್ಟು, ‘ಅಷ್ಟೇ ಅಷ್ಟೇ’ ಎಂದು ಕೈಯಾಡಿಸಿ ಹೊರಟರಂತೆ. ತರಕಾರಿ ರೇಟು ಹೆಚ್ಚಿರದೇ ಇದ್ದರೂ, ಅವರು ಚೌಕಾಸಿ ಮಾಡಿದ ರೀತಿ ಬೇಸರ ಹುಟ್ಟಿಸಿತೆಂದು ಗ್ರೋವರ್ ಬರೆದುಕೊಂಡಿದ್ದರು. ಕಡೆಗೂ ವ್ಯಾಪಾರಿ ಪಟ್ಟು ಬಿಡದೇ ಇದ್ದುದಕ್ಕೆ ಬೈದುಕೊಂಡೆ 10 ರೂ. ಕೊಟ್ಟು ಹೋದರಂತೆ! ಅಂದರೆ ಇನ್ನೂ 5 ರೂ.ಗಳನ್ನು ಕೊಡದೆ ಹೋದರು!

ಇದೇ ಖರೀದಿಯನ್ನು ಅಮೆಜಾನ್, ಬಿಗ್‌ಬ್ಯಾಸ್ಕೆಟ್ ಮೂಲಕ ಮಾಡಿದ್ದರೆ, ಹೀಗೆ ಚೌಕಾಸಿ ಮಾಡುತ್ತಿದ್ದರೆ ಎಂಬ ಪ್ರಶ್ನೆ ಟ್ವೀಟ್ ಓದಿವರೆಲ್ಲಾ ಕೇಳಿದ್ದರು.

ಲಾಕ್‌ಡೌನ್ ಎಷ್ಟೋ ಜನರ ಬದುಕನ್ನು ಸವಾಲಿಗೆ ಒಡ್ಡಿಕೊಳ್ಳುವಂತೆ ಮಾಡಿದೆ. ಅಂತಹ ಸವಾಲಿಗೆ ಮುಖಮಾಡಿ ವ್ಯಾಪಾರಿ ಮಾಡುತ್ತಿರುವ ಸಾಮಾನ್ಯ ತರಕಾರಿ ವ್ಯಾಪಾರಿಗೆ ಇಂತಹ ಸಂಕಷ್ಟದ ಕಾಲದಲ್ಲಿ ಐದು ರೂ ಕೊಡದೇ ಹೋದದ್ದು, ಕೇವಲ ಹಣದ ವಿಷಯವಷ್ಟೇ ಅಲ್ಲ, ನಮ್ಮೊಳಗೇ ಸತ್ತು ಹೋಗಿರುವ ಸಂವೇದನೆ, ವಿವೇಚನೆ ಎಂಬ ಗುಣಗಳ ಕೊರತೆಯ ಸೂಚಕ. ತರಕಾರಿ ಕೊಂಡವರಿಗೆ ಹಣದ ಕೊರತೆಯೇನು ಇರಲಿಲ್ಲ. ಚೌಕಾಸಿ ಮಾಡಿ ಉಳಿಸಿದ್ದೂ ದೊಡ್ಡ ಮೊತ್ತವೂ ಅಲ್ಲ. ಆದರೆ ಮಾರುವ ಸಾಮಾನ್ಯನ ಬಗ್ಗೆ ಇದ್ದ ಉಪೇಕ್ಷೆಯ, ಸಂವೇದನೆಗಳಿಲ್ಲದ ಮನಸ್ಥಿತಿ.

ವರುಣ್‌ಗೆ ಸಿಕ್ಕ ಸ್ಥಿತಿವಂತ ದಂಪತಿಯಂತೇ, ಸಾರ್ವಜನಿಕ ಜೀವನದಲ್ಲಿರುವ, ತಮ್ಮ ಪ್ರತಿಭೆಗಾಗಿ ಮೆಚ್ಚುಗೆಗೆ ಪಾತ್ರರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜನರ ಅಸೂಕ್ಷ್ಮ ವರ್ತನೆಯನ್ನೂ ಈ ಲಾಕ್‌ಡೌನ್ ಅನಾವರಣ ಮಾಡಿತು.

ಇವರೆಲ್ಲರೂ ದಿನವೂ ತಮ್ಮನ್ನು ಮೆಚ್ಚುವ ಜನರ ನಡುವೆ ಪ್ರತಿ ದಿನ ಒಡನಾಡುವವರು. ಯಾವುದೋ ಪಾರ್ಟಿ, ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅಲ್ಲಿನ ಕ್ಷಣಗಳನ್ನು ವಿಡಿಯೋ, ಫೋಟೋ ರೂಪದಲ್ಲಿ ಹಂಚಿಕೊಳ್ಳುವುದು, ತಮ್ಮ ವೈಭವದ ಉಡುಗೆ ತೊಡುಗೆಗಳ ಬಗ್ಗೆ ಮಾತನಾಡುವುದು, ಚೆಂದದ, ವೈಭವದ ಬದುಕನ್ನೇ ಪ್ರದರ್ಶಿಸುತ್ತಾ ಇರುವುದು ಪ್ರತಿ ನಿತ್ಯದ ವಿಧಿ.

ಇವರ ಪಾಲಿಗೆ ಈ ಲಾಕ್‌ಡೌನ್ ಒಂದು ರೀತಿಯ ಬಂಧನವಾಗಿತ್ತು. ಆದರೆ ಸೋಷಿಯಲ್ ಮೀಡಿಯಾ ಇಂಥವರ ಪಾಲಿಗೆ ಅದೃಷ್ಟದ ಕಿಟಕಿಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ತಮ್ಮ ಖಾಸಗಿಯಾದ ಬದುಕಿನ, ತಾವು ಹಿಂದೆಂದೂ ಹಂಚಿಕೊಳ್ಳದ ಕ್ಷಣಗಳನ್ನು ಅಭಿಮಾನಿಗಳ ಮುಂದೆ ಅನಾವರಣ ಮಾಡಲಾರಂಭಿಸಿದರು. ಯಾವ ಕ್ಷಣಗಳು!? ಪಾತ್ರೆ ತೊಳೆಯುವುದು, ಕಸ ಹೊಡೆಯುವುದು, ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವರ್ಕ್ಔಟ್ ಮಾಡುವುದು ಇಂಥದ್ದೇ ವಿಡಿಯೋಗಳು ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಹಂಚಿಕೊಳ್ಳುತ್ತಾ, ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕರೀನಾ ಕಪೂರ್ ಅಡುಗೆ ಮಾಡಿ ತಿಂದಿದ್ದು, ಮಲೈಕಾ ಅರೋರಾ ಬೇಸನ್ ಉಂಡೆ ಮಾಡಿದ್ದು, ವಿಕ್ಕಿ ಕೌಶಲ್ ಫ್ಯಾನ್ ಕ್ಲೀನ್ ಮಾಡಿದ್ದು, ಇವೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡವು!

ಕೇವಲ ಸಿನಿಮಾ ತಾರೆಗಳಷ್ಟೇ ಅಲ್ಲ, ಸ್ಥಿತಿವಂತ, ಸೌಲಭ್ಯವುಳ್ಳ ಬಹಳಷ್ಟು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿರುವ ಗಣ್ಯರು ತಮ್ಮ ಐಷಾರಾಮದ, ಆತಂಕ ರಹಿತ ಬದುಕಿನ ಕ್ಷಣಗಳನ್ನು ಹಂಚಿಕೊಂಡರು. ಸಂವೇದನೆ ಇರುವ ಯಾವುದೇ ವ್ಯಕ್ತಿ ಇಂಥ ಹೊತ್ತಲ್ಲಿ ಸಂಭ್ರಮವನ್ನು ಹಂಚಿಕೊಳ್ಳುವುದಿಲ್ಲ ಎಂಬ ಟೀಕೆಯೂ ವ್ಯಕ್ತವಾಯಿತು.

ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರ ಬದುಕು ಅಂತ್ರವಾಗಿದೆ. ತಿನ್ನುವುದಕ್ಕೆ ಅನ್ನ ಇಲ್ಲದೆ, ಇರುವುದಕ್ಕೆ ನೆಲೆಯೂ ಇಲ್ಲದೆ ಕಂಗಾಲಾಗಿರುವಾಗ ಈ ವಿಡಿಯೋಗಳನ್ನು, ಫೋಟೋಗಳನ್ನು ವೈರಲ್ ಮಾಡುತ್ತಿದ್ದರು.

ತಾರೆಗಳ ಈ ವರ್ತನೆಯನ್ನು ಕಂಡ ನಿರ್ದೇಶಕ ಕರಣ್ ಜೊಹರ್ ಟ್ವೀಟ್‌ವೊಂದನ್ನು ಹಂಚಿಕೊಳ್ಳುತ್ತಾ, ನಾನೂ ಅಸೂಕ್ಷ್ಮವಾಗಿ ನಡೆದುಕೊಂಡಿರಬಹುದು ಎಂದು ಕ್ಷಮೆಯಾಚಿಸಿದರು. ಬೆನ್ನಲ್ಲೇ ನಿರ್ದೇಶಕಿ ಫಹಾ ಖಾನ್ ಕೂಡ ಖಾರವಾಗಿ ನಟ-ನಟಿಯರಿಗೆ ತರಾಟೆಗೆ ತೆಗೆದುಕೊಂಡಿದ್ದರು.

ಸಾರ್ವಜನಿಕ ಆರೋಗ್ಯದ ರಕ್ಷಣೆಯ ಹಿನ್ನೆಲೆಯಲ್ಲಿ ವರ್ಕ್ಔಟ್‌ಗಳ ವಿಡಿಯೋಗಳನ್ನುಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ. ನೀವೆಲ್ಲರೂ ಸೌಲಭ್ಯವುಳ್ಳವರು, ನಿಮಗೆ ಈ ಜಾಗತಿಕ ಸೋಂಕಿನ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ನಾನು ಬಲ್ಲೆ. ಆದರೆ ಈ ಹೊತ್ತಿನಲ್ಲಿ ಬಹಳಷ್ಟು ಜನರಿಗೆ ಸಂಕಷ್ಟಕಾಲವಾಗಿದೆ. ಹಾಗಾಗಿ ದಯವಿಟ್ಟು ವಿಡಿಯೋಗಳನ್ನು ಹಂಚಿಕೊಳ್ಳುವುದು ನಿಲ್ಲಿಸಿ. ಇಲ್ಲವಾದರೆ ನಾನು ನಿಮ್ಮನ್ನು ಅನ್‌ಫಾಲೋ ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ’ ಎಂದು ವಿಡಿಯೋ ಹಂಚಿಕೊಂಡಿದ್ದರು.

ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್‌ಡೌನ್ ಅಗತ್ಯವಾಗಿತ್ತು. ಆದರೆ ಸೌಲಭ್ಯವುಳ್ಳವರಿಗೆ ಇದು ಆತಂಕದ ವಿಷಯವಾಗಿರಲಿಲ್ಲ. ಇದನ್ನು ಒಂದು ರಜೆಯಂತೆ ಸಂಭ್ರಮಿಸುವುದಕ್ಕೆ ಅವಕಾಶವಾಗಿ ಒದಗಿಬಂತು. ಮನೆಯಲ್ಲಿ ರುಚಿ ರುಚಿಯಾಗಿ ಮಾಡಿಕೊಂಡು ತಿನ್ನುವುದು, ಕುಟುಂಬದೊಂದಿಗೆ ಆಡುವುದು ತರಹೇವಾರಿಯಾಗಿ ಕಾಲ ಕಳೆಯುವುದಕ್ಕೆ ಅವಕಾಶವೂ ಆಯಿತು. ವೈಯಕ್ತಿಕವಾದ ಈ ಬದುಕನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಸೂಕ್ಷ್ಮತೆಯೇ ಅನೇಕರಲ್ಲಿ ಆಕ್ರೋಶಕ್ಕೂ ಕಾರಣವಾಯಿತು. ಬೀದಿಯಲ್ಲಿ ಮನೆಯೂ ಇಲ್ಲದೆ, ತಿನ್ನುವುದಕ್ಕೆ ಅನ್ನವೂ ಇಲ್ಲದೆ ಅನಿಶ್ಚಿತತೆಯಲ್ಲಿರುವ ಲಕ್ಷಾಂತರ ಜನರ ಇರುವಾಗ, ಸಿರಿತನದ ಅಮಲಿನಲ್ಲಿರುವ ಜನ ಮೃಷ್ಟಾನ್ನದ ಕತೆಗಳನ್ನು ಹಂಚಿಕೊಳ್ಳುವುದು ಯಾವ ರೀತಿಯ ಮನುಷ್ಯತ್ವವಾಗಬಹುದು?

ಎಲ್ಟನ್ ಜಾನ್‌ನಂತಹ ಅನೇಕ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಲೈವ್ ಕಾನ್ಸರ್ಟ್ಗಳನ್ನು ನಡೆಸಿ, ಹಣ ಸಂಗ್ರಹಿಸಿ ಅಗತ್ಯವಿರುವವರಿಗೆ ನೆರವಾದ ಉದಾಹರಣೆಗಳು ಇವರಾರಿಗೂ ಕಾಣದೇ ಹೋಗಿದ್ದು ಅಚ್ಚರಿ!

ಲಾಕ್‌ಡೌನ್‌ಅನ್ನು ಮುಕ್ತವಾಗಿ ಸ್ವಾಗತಿಸಿದ ಈ ಮಂದಿ ಇದರಿಂದ ಯಾರಿಗೆ ಅನಾನುಕೂಲವಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಲ್ಲವೇನೊ! ಸೋಂಕು ನಿಯಂತ್ರಿಸುವುದಕ್ಕೆ ತಮ್ಮ ಉದ್ಯೋಗ, ಉಳಿಸಿಕೊಂಡಿದ್ದ ಹಣ, ತಮ್ಮ ಘನತೆ, ಆರೋಗ್ಯ, ಸಾಮಾಜಿಕ ಭದ್ರತೆ ಎಲ್ಲವನ್ನೂ ತ್ಯಾಗ ಮಾಡಬೇಕಾಗಿ ಬಂದದ್ದು ಬಡ ಜನರಿಗೆ. ಬದುಕು ಅಸಹನೀಯವಾಗಿದ್ದ ಕಾಲದಲ್ಲಿ ಪೊಲೀಸರಿಂದ ಒದೆ ತಿಂದಿದ್ದು, ಇದೇ ದನಿ ಎತ್ತಲಾಗದ ಜನ. ಇವರ ನೆರವಿಗೆ ನಿಲ್ಲಲಾಗದಿದ್ದರೂ, ಇವರ ಕಷ್ಟಕ್ಕೆ ನೆರವಾಗದಿದ್ದರೂ, ಕಷ್ಟಕ್ಕೆ ಮಾನವೀಯವಾಗಿ ಸ್ಪಂದಿಸದೇ ಹೋಗಿದ್ದು, ಈ ಕಾಲದ ದುರಂತ!


ಇದನ್ನೂ ಓದಿ: ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...