Homeಮುಖಪುಟಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು...

ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು…

- Advertisement -
- Advertisement -

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನುಸರಿಸಲಾದ ಲಾಕ್‌ಡೌನ್ ಇಡೀ ಜಗತ್ತನ್ನು ಸ್ತಬ್ದಗೊಳಿಸಿದೆ. ಇಂಥ ಸಂದರ್ಭವನ್ನು ಆರ್ಥಿಕವಾಗಿ ಸುಸ್ಥಿರವಾಗಿರುವ ಕುಟುಂಬಗಳು ಸಣ್ಣ ಅನಿಸ್ಚಿತತೆಯಲ್ಲೇ ಕಳೆಯುತ್ತಿವೆ. ಆದರೆ ಅಂದೇ ದುಡಿದು ಬದುಕುವ ಜನರ ಜೀವನ ಅತಂತ್ರವಾಗಿದೆ! ಈ ಹೊತ್ತಿನಲ್ಲಿ ಅವರಿಗೆ ನೆರವಾಗುವ ಮೂಲಕ ಧೈರ್ಯ ತುಂಬಾ ಬೇಕಾಗಿತ್ತು ಪ್ರತಿಯೊಬ್ಬರ ಜವಾಬ್ದಾರಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಉಳ್ಳವರ ಸಂವೇದನಾರಹಿತ ವರ್ತನೆ ಈ ದೇಶದ ಶತಮಾನಗಳ ತಾರತಮ್ಯವನ್ನು ಸ್ಪಷ್ಟವಾಗಿ ಎತ್ತಿ ಹಿಡಿಯಿತು.

ಜನಪ್ರಿಯ ಹಾಸ್ಯ ಕಲಾವಿದ ವರುಣ್ ಗ್ರೋವರ್ ಇತ್ತೀಚೆಗೆ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡರು. ಲಾಕ್‌ಡೌನ್ ಸಂದರ್ಭದಲ್ಲಿ ತರಕಾರಿಕೊಳ್ಳುವಾಗ ತಮ್ಮ ಮುಂದೆ ನಿಂತಿದ್ದ ಸ್ಥಿತಿವಂತ ದಂಪತಿಗಳು 315 ರೂ.ಗಳಿಗೆ ತರಕಾರಿ ಕೊಂಡು, ವ್ಯಾಪಾರಿಗೆ 300 ಕೊಟ್ಟು, ‘ಅಷ್ಟೇ ಅಷ್ಟೇ’ ಎಂದು ಕೈಯಾಡಿಸಿ ಹೊರಟರಂತೆ. ತರಕಾರಿ ರೇಟು ಹೆಚ್ಚಿರದೇ ಇದ್ದರೂ, ಅವರು ಚೌಕಾಸಿ ಮಾಡಿದ ರೀತಿ ಬೇಸರ ಹುಟ್ಟಿಸಿತೆಂದು ಗ್ರೋವರ್ ಬರೆದುಕೊಂಡಿದ್ದರು. ಕಡೆಗೂ ವ್ಯಾಪಾರಿ ಪಟ್ಟು ಬಿಡದೇ ಇದ್ದುದಕ್ಕೆ ಬೈದುಕೊಂಡೆ 10 ರೂ. ಕೊಟ್ಟು ಹೋದರಂತೆ! ಅಂದರೆ ಇನ್ನೂ 5 ರೂ.ಗಳನ್ನು ಕೊಡದೆ ಹೋದರು!

ಇದೇ ಖರೀದಿಯನ್ನು ಅಮೆಜಾನ್, ಬಿಗ್‌ಬ್ಯಾಸ್ಕೆಟ್ ಮೂಲಕ ಮಾಡಿದ್ದರೆ, ಹೀಗೆ ಚೌಕಾಸಿ ಮಾಡುತ್ತಿದ್ದರೆ ಎಂಬ ಪ್ರಶ್ನೆ ಟ್ವೀಟ್ ಓದಿವರೆಲ್ಲಾ ಕೇಳಿದ್ದರು.

ಲಾಕ್‌ಡೌನ್ ಎಷ್ಟೋ ಜನರ ಬದುಕನ್ನು ಸವಾಲಿಗೆ ಒಡ್ಡಿಕೊಳ್ಳುವಂತೆ ಮಾಡಿದೆ. ಅಂತಹ ಸವಾಲಿಗೆ ಮುಖಮಾಡಿ ವ್ಯಾಪಾರಿ ಮಾಡುತ್ತಿರುವ ಸಾಮಾನ್ಯ ತರಕಾರಿ ವ್ಯಾಪಾರಿಗೆ ಇಂತಹ ಸಂಕಷ್ಟದ ಕಾಲದಲ್ಲಿ ಐದು ರೂ ಕೊಡದೇ ಹೋದದ್ದು, ಕೇವಲ ಹಣದ ವಿಷಯವಷ್ಟೇ ಅಲ್ಲ, ನಮ್ಮೊಳಗೇ ಸತ್ತು ಹೋಗಿರುವ ಸಂವೇದನೆ, ವಿವೇಚನೆ ಎಂಬ ಗುಣಗಳ ಕೊರತೆಯ ಸೂಚಕ. ತರಕಾರಿ ಕೊಂಡವರಿಗೆ ಹಣದ ಕೊರತೆಯೇನು ಇರಲಿಲ್ಲ. ಚೌಕಾಸಿ ಮಾಡಿ ಉಳಿಸಿದ್ದೂ ದೊಡ್ಡ ಮೊತ್ತವೂ ಅಲ್ಲ. ಆದರೆ ಮಾರುವ ಸಾಮಾನ್ಯನ ಬಗ್ಗೆ ಇದ್ದ ಉಪೇಕ್ಷೆಯ, ಸಂವೇದನೆಗಳಿಲ್ಲದ ಮನಸ್ಥಿತಿ.

ವರುಣ್‌ಗೆ ಸಿಕ್ಕ ಸ್ಥಿತಿವಂತ ದಂಪತಿಯಂತೇ, ಸಾರ್ವಜನಿಕ ಜೀವನದಲ್ಲಿರುವ, ತಮ್ಮ ಪ್ರತಿಭೆಗಾಗಿ ಮೆಚ್ಚುಗೆಗೆ ಪಾತ್ರರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜನರ ಅಸೂಕ್ಷ್ಮ ವರ್ತನೆಯನ್ನೂ ಈ ಲಾಕ್‌ಡೌನ್ ಅನಾವರಣ ಮಾಡಿತು.

ಇವರೆಲ್ಲರೂ ದಿನವೂ ತಮ್ಮನ್ನು ಮೆಚ್ಚುವ ಜನರ ನಡುವೆ ಪ್ರತಿ ದಿನ ಒಡನಾಡುವವರು. ಯಾವುದೋ ಪಾರ್ಟಿ, ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅಲ್ಲಿನ ಕ್ಷಣಗಳನ್ನು ವಿಡಿಯೋ, ಫೋಟೋ ರೂಪದಲ್ಲಿ ಹಂಚಿಕೊಳ್ಳುವುದು, ತಮ್ಮ ವೈಭವದ ಉಡುಗೆ ತೊಡುಗೆಗಳ ಬಗ್ಗೆ ಮಾತನಾಡುವುದು, ಚೆಂದದ, ವೈಭವದ ಬದುಕನ್ನೇ ಪ್ರದರ್ಶಿಸುತ್ತಾ ಇರುವುದು ಪ್ರತಿ ನಿತ್ಯದ ವಿಧಿ.

ಇವರ ಪಾಲಿಗೆ ಈ ಲಾಕ್‌ಡೌನ್ ಒಂದು ರೀತಿಯ ಬಂಧನವಾಗಿತ್ತು. ಆದರೆ ಸೋಷಿಯಲ್ ಮೀಡಿಯಾ ಇಂಥವರ ಪಾಲಿಗೆ ಅದೃಷ್ಟದ ಕಿಟಕಿಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ತಮ್ಮ ಖಾಸಗಿಯಾದ ಬದುಕಿನ, ತಾವು ಹಿಂದೆಂದೂ ಹಂಚಿಕೊಳ್ಳದ ಕ್ಷಣಗಳನ್ನು ಅಭಿಮಾನಿಗಳ ಮುಂದೆ ಅನಾವರಣ ಮಾಡಲಾರಂಭಿಸಿದರು. ಯಾವ ಕ್ಷಣಗಳು!? ಪಾತ್ರೆ ತೊಳೆಯುವುದು, ಕಸ ಹೊಡೆಯುವುದು, ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವರ್ಕ್ಔಟ್ ಮಾಡುವುದು ಇಂಥದ್ದೇ ವಿಡಿಯೋಗಳು ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಹಂಚಿಕೊಳ್ಳುತ್ತಾ, ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕರೀನಾ ಕಪೂರ್ ಅಡುಗೆ ಮಾಡಿ ತಿಂದಿದ್ದು, ಮಲೈಕಾ ಅರೋರಾ ಬೇಸನ್ ಉಂಡೆ ಮಾಡಿದ್ದು, ವಿಕ್ಕಿ ಕೌಶಲ್ ಫ್ಯಾನ್ ಕ್ಲೀನ್ ಮಾಡಿದ್ದು, ಇವೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡವು!

ಕೇವಲ ಸಿನಿಮಾ ತಾರೆಗಳಷ್ಟೇ ಅಲ್ಲ, ಸ್ಥಿತಿವಂತ, ಸೌಲಭ್ಯವುಳ್ಳ ಬಹಳಷ್ಟು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿರುವ ಗಣ್ಯರು ತಮ್ಮ ಐಷಾರಾಮದ, ಆತಂಕ ರಹಿತ ಬದುಕಿನ ಕ್ಷಣಗಳನ್ನು ಹಂಚಿಕೊಂಡರು. ಸಂವೇದನೆ ಇರುವ ಯಾವುದೇ ವ್ಯಕ್ತಿ ಇಂಥ ಹೊತ್ತಲ್ಲಿ ಸಂಭ್ರಮವನ್ನು ಹಂಚಿಕೊಳ್ಳುವುದಿಲ್ಲ ಎಂಬ ಟೀಕೆಯೂ ವ್ಯಕ್ತವಾಯಿತು.

ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರ ಬದುಕು ಅಂತ್ರವಾಗಿದೆ. ತಿನ್ನುವುದಕ್ಕೆ ಅನ್ನ ಇಲ್ಲದೆ, ಇರುವುದಕ್ಕೆ ನೆಲೆಯೂ ಇಲ್ಲದೆ ಕಂಗಾಲಾಗಿರುವಾಗ ಈ ವಿಡಿಯೋಗಳನ್ನು, ಫೋಟೋಗಳನ್ನು ವೈರಲ್ ಮಾಡುತ್ತಿದ್ದರು.

ತಾರೆಗಳ ಈ ವರ್ತನೆಯನ್ನು ಕಂಡ ನಿರ್ದೇಶಕ ಕರಣ್ ಜೊಹರ್ ಟ್ವೀಟ್‌ವೊಂದನ್ನು ಹಂಚಿಕೊಳ್ಳುತ್ತಾ, ನಾನೂ ಅಸೂಕ್ಷ್ಮವಾಗಿ ನಡೆದುಕೊಂಡಿರಬಹುದು ಎಂದು ಕ್ಷಮೆಯಾಚಿಸಿದರು. ಬೆನ್ನಲ್ಲೇ ನಿರ್ದೇಶಕಿ ಫಹಾ ಖಾನ್ ಕೂಡ ಖಾರವಾಗಿ ನಟ-ನಟಿಯರಿಗೆ ತರಾಟೆಗೆ ತೆಗೆದುಕೊಂಡಿದ್ದರು.

ಸಾರ್ವಜನಿಕ ಆರೋಗ್ಯದ ರಕ್ಷಣೆಯ ಹಿನ್ನೆಲೆಯಲ್ಲಿ ವರ್ಕ್ಔಟ್‌ಗಳ ವಿಡಿಯೋಗಳನ್ನುಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ. ನೀವೆಲ್ಲರೂ ಸೌಲಭ್ಯವುಳ್ಳವರು, ನಿಮಗೆ ಈ ಜಾಗತಿಕ ಸೋಂಕಿನ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ನಾನು ಬಲ್ಲೆ. ಆದರೆ ಈ ಹೊತ್ತಿನಲ್ಲಿ ಬಹಳಷ್ಟು ಜನರಿಗೆ ಸಂಕಷ್ಟಕಾಲವಾಗಿದೆ. ಹಾಗಾಗಿ ದಯವಿಟ್ಟು ವಿಡಿಯೋಗಳನ್ನು ಹಂಚಿಕೊಳ್ಳುವುದು ನಿಲ್ಲಿಸಿ. ಇಲ್ಲವಾದರೆ ನಾನು ನಿಮ್ಮನ್ನು ಅನ್‌ಫಾಲೋ ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ’ ಎಂದು ವಿಡಿಯೋ ಹಂಚಿಕೊಂಡಿದ್ದರು.

ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್‌ಡೌನ್ ಅಗತ್ಯವಾಗಿತ್ತು. ಆದರೆ ಸೌಲಭ್ಯವುಳ್ಳವರಿಗೆ ಇದು ಆತಂಕದ ವಿಷಯವಾಗಿರಲಿಲ್ಲ. ಇದನ್ನು ಒಂದು ರಜೆಯಂತೆ ಸಂಭ್ರಮಿಸುವುದಕ್ಕೆ ಅವಕಾಶವಾಗಿ ಒದಗಿಬಂತು. ಮನೆಯಲ್ಲಿ ರುಚಿ ರುಚಿಯಾಗಿ ಮಾಡಿಕೊಂಡು ತಿನ್ನುವುದು, ಕುಟುಂಬದೊಂದಿಗೆ ಆಡುವುದು ತರಹೇವಾರಿಯಾಗಿ ಕಾಲ ಕಳೆಯುವುದಕ್ಕೆ ಅವಕಾಶವೂ ಆಯಿತು. ವೈಯಕ್ತಿಕವಾದ ಈ ಬದುಕನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಸೂಕ್ಷ್ಮತೆಯೇ ಅನೇಕರಲ್ಲಿ ಆಕ್ರೋಶಕ್ಕೂ ಕಾರಣವಾಯಿತು. ಬೀದಿಯಲ್ಲಿ ಮನೆಯೂ ಇಲ್ಲದೆ, ತಿನ್ನುವುದಕ್ಕೆ ಅನ್ನವೂ ಇಲ್ಲದೆ ಅನಿಶ್ಚಿತತೆಯಲ್ಲಿರುವ ಲಕ್ಷಾಂತರ ಜನರ ಇರುವಾಗ, ಸಿರಿತನದ ಅಮಲಿನಲ್ಲಿರುವ ಜನ ಮೃಷ್ಟಾನ್ನದ ಕತೆಗಳನ್ನು ಹಂಚಿಕೊಳ್ಳುವುದು ಯಾವ ರೀತಿಯ ಮನುಷ್ಯತ್ವವಾಗಬಹುದು?

ಎಲ್ಟನ್ ಜಾನ್‌ನಂತಹ ಅನೇಕ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಲೈವ್ ಕಾನ್ಸರ್ಟ್ಗಳನ್ನು ನಡೆಸಿ, ಹಣ ಸಂಗ್ರಹಿಸಿ ಅಗತ್ಯವಿರುವವರಿಗೆ ನೆರವಾದ ಉದಾಹರಣೆಗಳು ಇವರಾರಿಗೂ ಕಾಣದೇ ಹೋಗಿದ್ದು ಅಚ್ಚರಿ!

ಲಾಕ್‌ಡೌನ್‌ಅನ್ನು ಮುಕ್ತವಾಗಿ ಸ್ವಾಗತಿಸಿದ ಈ ಮಂದಿ ಇದರಿಂದ ಯಾರಿಗೆ ಅನಾನುಕೂಲವಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಲ್ಲವೇನೊ! ಸೋಂಕು ನಿಯಂತ್ರಿಸುವುದಕ್ಕೆ ತಮ್ಮ ಉದ್ಯೋಗ, ಉಳಿಸಿಕೊಂಡಿದ್ದ ಹಣ, ತಮ್ಮ ಘನತೆ, ಆರೋಗ್ಯ, ಸಾಮಾಜಿಕ ಭದ್ರತೆ ಎಲ್ಲವನ್ನೂ ತ್ಯಾಗ ಮಾಡಬೇಕಾಗಿ ಬಂದದ್ದು ಬಡ ಜನರಿಗೆ. ಬದುಕು ಅಸಹನೀಯವಾಗಿದ್ದ ಕಾಲದಲ್ಲಿ ಪೊಲೀಸರಿಂದ ಒದೆ ತಿಂದಿದ್ದು, ಇದೇ ದನಿ ಎತ್ತಲಾಗದ ಜನ. ಇವರ ನೆರವಿಗೆ ನಿಲ್ಲಲಾಗದಿದ್ದರೂ, ಇವರ ಕಷ್ಟಕ್ಕೆ ನೆರವಾಗದಿದ್ದರೂ, ಕಷ್ಟಕ್ಕೆ ಮಾನವೀಯವಾಗಿ ಸ್ಪಂದಿಸದೇ ಹೋಗಿದ್ದು, ಈ ಕಾಲದ ದುರಂತ!


ಇದನ್ನೂ ಓದಿ: ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...