Homeಮುಖಪುಟಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು...

ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು…

- Advertisement -
- Advertisement -

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನುಸರಿಸಲಾದ ಲಾಕ್‌ಡೌನ್ ಇಡೀ ಜಗತ್ತನ್ನು ಸ್ತಬ್ದಗೊಳಿಸಿದೆ. ಇಂಥ ಸಂದರ್ಭವನ್ನು ಆರ್ಥಿಕವಾಗಿ ಸುಸ್ಥಿರವಾಗಿರುವ ಕುಟುಂಬಗಳು ಸಣ್ಣ ಅನಿಸ್ಚಿತತೆಯಲ್ಲೇ ಕಳೆಯುತ್ತಿವೆ. ಆದರೆ ಅಂದೇ ದುಡಿದು ಬದುಕುವ ಜನರ ಜೀವನ ಅತಂತ್ರವಾಗಿದೆ! ಈ ಹೊತ್ತಿನಲ್ಲಿ ಅವರಿಗೆ ನೆರವಾಗುವ ಮೂಲಕ ಧೈರ್ಯ ತುಂಬಾ ಬೇಕಾಗಿತ್ತು ಪ್ರತಿಯೊಬ್ಬರ ಜವಾಬ್ದಾರಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಉಳ್ಳವರ ಸಂವೇದನಾರಹಿತ ವರ್ತನೆ ಈ ದೇಶದ ಶತಮಾನಗಳ ತಾರತಮ್ಯವನ್ನು ಸ್ಪಷ್ಟವಾಗಿ ಎತ್ತಿ ಹಿಡಿಯಿತು.

ಜನಪ್ರಿಯ ಹಾಸ್ಯ ಕಲಾವಿದ ವರುಣ್ ಗ್ರೋವರ್ ಇತ್ತೀಚೆಗೆ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡರು. ಲಾಕ್‌ಡೌನ್ ಸಂದರ್ಭದಲ್ಲಿ ತರಕಾರಿಕೊಳ್ಳುವಾಗ ತಮ್ಮ ಮುಂದೆ ನಿಂತಿದ್ದ ಸ್ಥಿತಿವಂತ ದಂಪತಿಗಳು 315 ರೂ.ಗಳಿಗೆ ತರಕಾರಿ ಕೊಂಡು, ವ್ಯಾಪಾರಿಗೆ 300 ಕೊಟ್ಟು, ‘ಅಷ್ಟೇ ಅಷ್ಟೇ’ ಎಂದು ಕೈಯಾಡಿಸಿ ಹೊರಟರಂತೆ. ತರಕಾರಿ ರೇಟು ಹೆಚ್ಚಿರದೇ ಇದ್ದರೂ, ಅವರು ಚೌಕಾಸಿ ಮಾಡಿದ ರೀತಿ ಬೇಸರ ಹುಟ್ಟಿಸಿತೆಂದು ಗ್ರೋವರ್ ಬರೆದುಕೊಂಡಿದ್ದರು. ಕಡೆಗೂ ವ್ಯಾಪಾರಿ ಪಟ್ಟು ಬಿಡದೇ ಇದ್ದುದಕ್ಕೆ ಬೈದುಕೊಂಡೆ 10 ರೂ. ಕೊಟ್ಟು ಹೋದರಂತೆ! ಅಂದರೆ ಇನ್ನೂ 5 ರೂ.ಗಳನ್ನು ಕೊಡದೆ ಹೋದರು!

ಇದೇ ಖರೀದಿಯನ್ನು ಅಮೆಜಾನ್, ಬಿಗ್‌ಬ್ಯಾಸ್ಕೆಟ್ ಮೂಲಕ ಮಾಡಿದ್ದರೆ, ಹೀಗೆ ಚೌಕಾಸಿ ಮಾಡುತ್ತಿದ್ದರೆ ಎಂಬ ಪ್ರಶ್ನೆ ಟ್ವೀಟ್ ಓದಿವರೆಲ್ಲಾ ಕೇಳಿದ್ದರು.

ಲಾಕ್‌ಡೌನ್ ಎಷ್ಟೋ ಜನರ ಬದುಕನ್ನು ಸವಾಲಿಗೆ ಒಡ್ಡಿಕೊಳ್ಳುವಂತೆ ಮಾಡಿದೆ. ಅಂತಹ ಸವಾಲಿಗೆ ಮುಖಮಾಡಿ ವ್ಯಾಪಾರಿ ಮಾಡುತ್ತಿರುವ ಸಾಮಾನ್ಯ ತರಕಾರಿ ವ್ಯಾಪಾರಿಗೆ ಇಂತಹ ಸಂಕಷ್ಟದ ಕಾಲದಲ್ಲಿ ಐದು ರೂ ಕೊಡದೇ ಹೋದದ್ದು, ಕೇವಲ ಹಣದ ವಿಷಯವಷ್ಟೇ ಅಲ್ಲ, ನಮ್ಮೊಳಗೇ ಸತ್ತು ಹೋಗಿರುವ ಸಂವೇದನೆ, ವಿವೇಚನೆ ಎಂಬ ಗುಣಗಳ ಕೊರತೆಯ ಸೂಚಕ. ತರಕಾರಿ ಕೊಂಡವರಿಗೆ ಹಣದ ಕೊರತೆಯೇನು ಇರಲಿಲ್ಲ. ಚೌಕಾಸಿ ಮಾಡಿ ಉಳಿಸಿದ್ದೂ ದೊಡ್ಡ ಮೊತ್ತವೂ ಅಲ್ಲ. ಆದರೆ ಮಾರುವ ಸಾಮಾನ್ಯನ ಬಗ್ಗೆ ಇದ್ದ ಉಪೇಕ್ಷೆಯ, ಸಂವೇದನೆಗಳಿಲ್ಲದ ಮನಸ್ಥಿತಿ.

ವರುಣ್‌ಗೆ ಸಿಕ್ಕ ಸ್ಥಿತಿವಂತ ದಂಪತಿಯಂತೇ, ಸಾರ್ವಜನಿಕ ಜೀವನದಲ್ಲಿರುವ, ತಮ್ಮ ಪ್ರತಿಭೆಗಾಗಿ ಮೆಚ್ಚುಗೆಗೆ ಪಾತ್ರರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜನರ ಅಸೂಕ್ಷ್ಮ ವರ್ತನೆಯನ್ನೂ ಈ ಲಾಕ್‌ಡೌನ್ ಅನಾವರಣ ಮಾಡಿತು.

ಇವರೆಲ್ಲರೂ ದಿನವೂ ತಮ್ಮನ್ನು ಮೆಚ್ಚುವ ಜನರ ನಡುವೆ ಪ್ರತಿ ದಿನ ಒಡನಾಡುವವರು. ಯಾವುದೋ ಪಾರ್ಟಿ, ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅಲ್ಲಿನ ಕ್ಷಣಗಳನ್ನು ವಿಡಿಯೋ, ಫೋಟೋ ರೂಪದಲ್ಲಿ ಹಂಚಿಕೊಳ್ಳುವುದು, ತಮ್ಮ ವೈಭವದ ಉಡುಗೆ ತೊಡುಗೆಗಳ ಬಗ್ಗೆ ಮಾತನಾಡುವುದು, ಚೆಂದದ, ವೈಭವದ ಬದುಕನ್ನೇ ಪ್ರದರ್ಶಿಸುತ್ತಾ ಇರುವುದು ಪ್ರತಿ ನಿತ್ಯದ ವಿಧಿ.

ಇವರ ಪಾಲಿಗೆ ಈ ಲಾಕ್‌ಡೌನ್ ಒಂದು ರೀತಿಯ ಬಂಧನವಾಗಿತ್ತು. ಆದರೆ ಸೋಷಿಯಲ್ ಮೀಡಿಯಾ ಇಂಥವರ ಪಾಲಿಗೆ ಅದೃಷ್ಟದ ಕಿಟಕಿಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ತಮ್ಮ ಖಾಸಗಿಯಾದ ಬದುಕಿನ, ತಾವು ಹಿಂದೆಂದೂ ಹಂಚಿಕೊಳ್ಳದ ಕ್ಷಣಗಳನ್ನು ಅಭಿಮಾನಿಗಳ ಮುಂದೆ ಅನಾವರಣ ಮಾಡಲಾರಂಭಿಸಿದರು. ಯಾವ ಕ್ಷಣಗಳು!? ಪಾತ್ರೆ ತೊಳೆಯುವುದು, ಕಸ ಹೊಡೆಯುವುದು, ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವರ್ಕ್ಔಟ್ ಮಾಡುವುದು ಇಂಥದ್ದೇ ವಿಡಿಯೋಗಳು ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಹಂಚಿಕೊಳ್ಳುತ್ತಾ, ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕರೀನಾ ಕಪೂರ್ ಅಡುಗೆ ಮಾಡಿ ತಿಂದಿದ್ದು, ಮಲೈಕಾ ಅರೋರಾ ಬೇಸನ್ ಉಂಡೆ ಮಾಡಿದ್ದು, ವಿಕ್ಕಿ ಕೌಶಲ್ ಫ್ಯಾನ್ ಕ್ಲೀನ್ ಮಾಡಿದ್ದು, ಇವೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡವು!

ಕೇವಲ ಸಿನಿಮಾ ತಾರೆಗಳಷ್ಟೇ ಅಲ್ಲ, ಸ್ಥಿತಿವಂತ, ಸೌಲಭ್ಯವುಳ್ಳ ಬಹಳಷ್ಟು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿರುವ ಗಣ್ಯರು ತಮ್ಮ ಐಷಾರಾಮದ, ಆತಂಕ ರಹಿತ ಬದುಕಿನ ಕ್ಷಣಗಳನ್ನು ಹಂಚಿಕೊಂಡರು. ಸಂವೇದನೆ ಇರುವ ಯಾವುದೇ ವ್ಯಕ್ತಿ ಇಂಥ ಹೊತ್ತಲ್ಲಿ ಸಂಭ್ರಮವನ್ನು ಹಂಚಿಕೊಳ್ಳುವುದಿಲ್ಲ ಎಂಬ ಟೀಕೆಯೂ ವ್ಯಕ್ತವಾಯಿತು.

ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರ ಬದುಕು ಅಂತ್ರವಾಗಿದೆ. ತಿನ್ನುವುದಕ್ಕೆ ಅನ್ನ ಇಲ್ಲದೆ, ಇರುವುದಕ್ಕೆ ನೆಲೆಯೂ ಇಲ್ಲದೆ ಕಂಗಾಲಾಗಿರುವಾಗ ಈ ವಿಡಿಯೋಗಳನ್ನು, ಫೋಟೋಗಳನ್ನು ವೈರಲ್ ಮಾಡುತ್ತಿದ್ದರು.

ತಾರೆಗಳ ಈ ವರ್ತನೆಯನ್ನು ಕಂಡ ನಿರ್ದೇಶಕ ಕರಣ್ ಜೊಹರ್ ಟ್ವೀಟ್‌ವೊಂದನ್ನು ಹಂಚಿಕೊಳ್ಳುತ್ತಾ, ನಾನೂ ಅಸೂಕ್ಷ್ಮವಾಗಿ ನಡೆದುಕೊಂಡಿರಬಹುದು ಎಂದು ಕ್ಷಮೆಯಾಚಿಸಿದರು. ಬೆನ್ನಲ್ಲೇ ನಿರ್ದೇಶಕಿ ಫಹಾ ಖಾನ್ ಕೂಡ ಖಾರವಾಗಿ ನಟ-ನಟಿಯರಿಗೆ ತರಾಟೆಗೆ ತೆಗೆದುಕೊಂಡಿದ್ದರು.

ಸಾರ್ವಜನಿಕ ಆರೋಗ್ಯದ ರಕ್ಷಣೆಯ ಹಿನ್ನೆಲೆಯಲ್ಲಿ ವರ್ಕ್ಔಟ್‌ಗಳ ವಿಡಿಯೋಗಳನ್ನುಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ. ನೀವೆಲ್ಲರೂ ಸೌಲಭ್ಯವುಳ್ಳವರು, ನಿಮಗೆ ಈ ಜಾಗತಿಕ ಸೋಂಕಿನ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ನಾನು ಬಲ್ಲೆ. ಆದರೆ ಈ ಹೊತ್ತಿನಲ್ಲಿ ಬಹಳಷ್ಟು ಜನರಿಗೆ ಸಂಕಷ್ಟಕಾಲವಾಗಿದೆ. ಹಾಗಾಗಿ ದಯವಿಟ್ಟು ವಿಡಿಯೋಗಳನ್ನು ಹಂಚಿಕೊಳ್ಳುವುದು ನಿಲ್ಲಿಸಿ. ಇಲ್ಲವಾದರೆ ನಾನು ನಿಮ್ಮನ್ನು ಅನ್‌ಫಾಲೋ ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ’ ಎಂದು ವಿಡಿಯೋ ಹಂಚಿಕೊಂಡಿದ್ದರು.

ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್‌ಡೌನ್ ಅಗತ್ಯವಾಗಿತ್ತು. ಆದರೆ ಸೌಲಭ್ಯವುಳ್ಳವರಿಗೆ ಇದು ಆತಂಕದ ವಿಷಯವಾಗಿರಲಿಲ್ಲ. ಇದನ್ನು ಒಂದು ರಜೆಯಂತೆ ಸಂಭ್ರಮಿಸುವುದಕ್ಕೆ ಅವಕಾಶವಾಗಿ ಒದಗಿಬಂತು. ಮನೆಯಲ್ಲಿ ರುಚಿ ರುಚಿಯಾಗಿ ಮಾಡಿಕೊಂಡು ತಿನ್ನುವುದು, ಕುಟುಂಬದೊಂದಿಗೆ ಆಡುವುದು ತರಹೇವಾರಿಯಾಗಿ ಕಾಲ ಕಳೆಯುವುದಕ್ಕೆ ಅವಕಾಶವೂ ಆಯಿತು. ವೈಯಕ್ತಿಕವಾದ ಈ ಬದುಕನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಸೂಕ್ಷ್ಮತೆಯೇ ಅನೇಕರಲ್ಲಿ ಆಕ್ರೋಶಕ್ಕೂ ಕಾರಣವಾಯಿತು. ಬೀದಿಯಲ್ಲಿ ಮನೆಯೂ ಇಲ್ಲದೆ, ತಿನ್ನುವುದಕ್ಕೆ ಅನ್ನವೂ ಇಲ್ಲದೆ ಅನಿಶ್ಚಿತತೆಯಲ್ಲಿರುವ ಲಕ್ಷಾಂತರ ಜನರ ಇರುವಾಗ, ಸಿರಿತನದ ಅಮಲಿನಲ್ಲಿರುವ ಜನ ಮೃಷ್ಟಾನ್ನದ ಕತೆಗಳನ್ನು ಹಂಚಿಕೊಳ್ಳುವುದು ಯಾವ ರೀತಿಯ ಮನುಷ್ಯತ್ವವಾಗಬಹುದು?

ಎಲ್ಟನ್ ಜಾನ್‌ನಂತಹ ಅನೇಕ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಲೈವ್ ಕಾನ್ಸರ್ಟ್ಗಳನ್ನು ನಡೆಸಿ, ಹಣ ಸಂಗ್ರಹಿಸಿ ಅಗತ್ಯವಿರುವವರಿಗೆ ನೆರವಾದ ಉದಾಹರಣೆಗಳು ಇವರಾರಿಗೂ ಕಾಣದೇ ಹೋಗಿದ್ದು ಅಚ್ಚರಿ!

ಲಾಕ್‌ಡೌನ್‌ಅನ್ನು ಮುಕ್ತವಾಗಿ ಸ್ವಾಗತಿಸಿದ ಈ ಮಂದಿ ಇದರಿಂದ ಯಾರಿಗೆ ಅನಾನುಕೂಲವಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಲ್ಲವೇನೊ! ಸೋಂಕು ನಿಯಂತ್ರಿಸುವುದಕ್ಕೆ ತಮ್ಮ ಉದ್ಯೋಗ, ಉಳಿಸಿಕೊಂಡಿದ್ದ ಹಣ, ತಮ್ಮ ಘನತೆ, ಆರೋಗ್ಯ, ಸಾಮಾಜಿಕ ಭದ್ರತೆ ಎಲ್ಲವನ್ನೂ ತ್ಯಾಗ ಮಾಡಬೇಕಾಗಿ ಬಂದದ್ದು ಬಡ ಜನರಿಗೆ. ಬದುಕು ಅಸಹನೀಯವಾಗಿದ್ದ ಕಾಲದಲ್ಲಿ ಪೊಲೀಸರಿಂದ ಒದೆ ತಿಂದಿದ್ದು, ಇದೇ ದನಿ ಎತ್ತಲಾಗದ ಜನ. ಇವರ ನೆರವಿಗೆ ನಿಲ್ಲಲಾಗದಿದ್ದರೂ, ಇವರ ಕಷ್ಟಕ್ಕೆ ನೆರವಾಗದಿದ್ದರೂ, ಕಷ್ಟಕ್ಕೆ ಮಾನವೀಯವಾಗಿ ಸ್ಪಂದಿಸದೇ ಹೋಗಿದ್ದು, ಈ ಕಾಲದ ದುರಂತ!


ಇದನ್ನೂ ಓದಿ: ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...