Homeಮುಖಪುಟರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

ರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

- Advertisement -
- Advertisement -

ನಿಮ್ಮ ಫೋನಿನ ಹೃದಯದೊಳಗ ಇರೋ ವಾಟ್ಸಪ್ಪು ಯುನಿವರ್ಸಿಟಿಯೊಳಗ ನಿಮಗೊಂದು ಜೋಕು ಬಂದಿರಲಿಕ್ಕೇ ಬೇಕು. “ಈ ದೇಶದಾಗ ಒಂಬತ್ತು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಅಂತ ಒಂದು ಕಾನೂನು ಇದೆ. ಇಂತಹ ಬ್ರಿಟಿಷರು ಮಾಡಿದ ಕಾನೂನುಗಳನ್ನು ನಮಗೆ ಬೇಡ. ಇಂತಹ ಅನೇಕ ಕಾನೂನುಗಳನ್ನು ತಿದ್ದಲೆಂದೇ ನಾವು ಬಂದಿದ್ದೇವೆ” ಅಂತ.

ಇದನ್ನ ನೋಡಿದಾಗ ನಿಮಗೂ ಅನ್ನಿಸಿರಬಹುದು. ‘ಹೌದಲ್ಲಾ ಅ ಬ್ರಿಟಿಷ್ ನನ ಮಕ್ಕಳು ಏನೇನು ಮಾಡಿ ಹೋಗ್ಯಾರ. ಇದನ್ನೆಲ್ಲಾ ಬದಲಾಯಿಸಬೇಕು. ಅದಕ್ಕೊಬ್ಬ ಸೂಪರ್ ಹೀರೋ ಬೇಕು’ ಅಂತ. ಆದರ ಅದರ ಹಿಂದಿನ ತಥ್ಯವನ್ನು ನೋಡೋಣ.

ಭಾರತದ ಸಂವಿಧಾನದಾಗ 12 ನೇ ಕಲಂ ಅಂತ ಒಂದು ಮೂರು ಸಾಲಿನ ಒಂದು ಪ್ಯಾರಾ ಐತಿ.
ಅದೇನಪಾ ಅಂದರ ರಾಜ್ಯ ಅಂದರ ಏನು ಅನ್ನೋದರ ವ್ಯಾಖ್ಯಾನ.

ಸಂವಿಧಾನದ ಭಾಷಾದಾಗ ರಾಜ್ಯ ಅಂದ್ರ ಕರ್ನಾಟಕ, ತಮಿಳುನಾಡು, ಕಾಶ್ಮೀರ ಅಂತ ಅವ ಅಲ್ಲಾ, ಹಿಂತಾ ರಾಜ್ಯ ಅಲ್ಲ. ಅದರ ಪ್ರಕಾರ ರಾಜ್ಯ ಅಂದ್ರ ಅಕೆಡೆಮಿಕ್ ಭಾಷಾದಾಗ ಪ್ರಭುತ್ವ. ’ಹಂಗಂದರ ಏನು ಮತ್ತ ಎಲ್ಲಿ ಸಿಗತದ’ ಅಂತ ನೀವು ಜವಾರಿ ಭಾಷಾದಾಗ ಕೇಳಿದರ ಅದಕ್ಕ ನಿಮಗ 12ನೇ ಕಲಂ ನೋಡು ಅಂತ ಉತ್ತರ ಸಿಗಬಹುದು.

ಅದರ ಪ್ರಕಾರ ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳು ಪ್ರಭುತ್ವದಾಗ ಬರತಾವ. ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಭುತ್ವದಾಗ ಬರತಾವ. ಈವಲ್ಲದನ, ನಗರ ಸಭೆ, ಪಂಚಾಯಿತಿ ಮುಂತಾದ ಸ್ಥಳೀಯ ಸಂಸ್ಥೆಗಳನ್ನು ಸಹ ಇದರಾಗ ಕೂಡಿಸ್ಯಾರ. ಮಜಾ ಏನಂದರ ಸರಕಾರದ ಸಂಸ್ಥೆಗಳು ಅಥವಾ ಸರಕಾರದಿಂದ ನಿಯಂತ್ರಿತವಾದ ಸಂಸ್ಥೆಗಳು ಇವೆಲ್ಲವೂ ಪ್ರಭುತ್ವ ಎನ್ನಿಸಿಕೊಳ್ಳುತ್ತವೆ ಎನ್ನುವುದು ಇದರ ಸಾರಾಂಶ.

ಈ ಪ್ರಭುತ್ವದ ಮುಖ್ಯ ಕೆಲಸ ಏನಪಾ ಅಂದ್ರ ರಾಷ್ಟ್ರ ರಕ್ಷಣೆ, ಶಾಂತಿ ಕಾಪಾಡುವಿಕೆ, ನ್ಯಾಯ ನಿರ್ಣಯ, ಜನ ಕಲ್ಯಾಣ ಹಾಗೂ ದಿನನಿತ್ಯದ ಆಡಳಿತ. ಬರಬರತಾ ಸರಕಾರಗಳ ಕೆಲಸ ಜಾಸ್ತಿ ಆಗಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವ್ಯಾಪಾರ ವ್ಯವಹಾರ -(ಅದು ಸರಕಾರಿ ಸಂಸ್ಥೆ ಇರಬಹುದು ಅಥವಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆ ಇರಬಹುದು) ದೊಳಗನ ಹೆಚ್ಚಿನ ಟೈಂ ಹೋಗಲಿಕ್ಕೆ ಹತ್ತೇದ. ಈಗಿನ ಕೇಂದ್ರ ಸರಕಾರ ಮಾತ್ರ ತಮ್ಮ ಕೆಲಸ ಬ್ಯಾರೆ ಏನೂ ಅಲ್ಲ, ಬರೇ ರಕ್ಷಣೆ ಒಂದ ಅಂತ ನಮಗ ಹೇಳಲಿಕ್ಕೆ ಹತ್ತೇದ. ಒಬ್ಬ ವಿದ್ಯಾರ್ಥಿ ಪರೀಕ್ಷೆಯೊಳಗ ಹತ್ತರೊಳಗ ಬರೇ ಒಂದ ಪ್ರಶ್ನೆ ಉತ್ತರ ಬರದು ನನಗ ಮೊದಲನೆ ದರ್ಜೆ ಕೊಡರಿ ಅಂತ ಹೇಳಿದಂಗ!. ಇರಲಿ ಅದು ಬೇರೆ.

ಹಿಂದಿನ ಕಾಲದ ಚಕ್ರವರ್ತಿಗಳಿಗೆ ಶಾಸನ ಮಾಡೋದು, ಜಾರಿ ಮಾಡೋದು, ಕಾನೂನು ಪಾಲಿಸದವರಿಗೆ ಶಿಕ್ಷಾ ಕೊಡೋದು ಇವೆಲ್ಲಾ ಅಧಿಕಾರ ಇತ್ತು. ಇತ್ತೋ ಅಥವಾ ಅವರಾಗೇ ತೊಗೊಂಡಿದ್ದರೋ ಅದು ಬ್ಯಾರೆ. ಆದರ ಆಧುನಿಕ ದಿನಮಾನದಾಗ ಇಂತಹ ಪ್ರಭುತ್ವಕ್ಕ ಮೂರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಎಲ್ಲಾ ಶಕ್ತಿ ಕೊಡಬಾರದು ಅಂತ ಒಂದು ಥಿಯರಿ ಅದ. ಅದರ ಪ್ರಕಾರ ನಮ್ಮ ಜನಸತ್ತಾದೊಳಗ ಈ ಮೂರು ಜವಾಬ್ದಾರಿಗಳನ್ನು ಬೇರೆ ಬೇರೆ ಅಂಗಗಳಿಗೆ ಹಂಚ್ಯಾರ.

ಆದರೂ ಸರಕಾರಗಳು ಮೂರೂ ರೀತಿಯ ಅಧಿಕಾರಗಳನ್ನ ಬಳಸತಾವು. ಉದಾಹರಣೆಗೆ ಪೊಲೀಸರನ್ನು ನೇಮಕ ಮಾಡೋದು ಪ್ರಭುತ್ವ, ಅವರಿಗೆ ಕೆಲಸ ಹೇಳೋದು ಸರಕಾರ. ನ್ಯಾಯಾಲಯಗಳನ್ನು ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅವರ ಮುಂದೆ ಕೇಸು ತೊಗೊಂಡು ಹೋಗೋದು ಪ್ರಭುತ್ವ. ಹಿಂಗಿದ್ದಾಗ ನ್ಯಾಯಾಲಯಗಳಲ್ಲಿ ಬರೇ ಸರಕಾರದ ದನಿ ಕೇಳಿ ಗರೀಬ ಆರೋಪಿತರ ದನಿ ಅಡುಗಿಹೋಗಬಾರದು ಅಂತ ಕೆಲವು ನಿಯಮ ಅವ. ಅವಕ್ಕ ಪ್ರಕ್ರಿಯಾ ಕಾನೂನು ಅಂತ ಹೆಸರು. ಉದ್ದೇಶದ ಜೊತೆ ಪ್ರಕ್ರಿಯಾನೂ ಸರಿ ಇರಬೇಕು ಅಂತ ಅದರ ನೇಮ.

ಅವು ಯಾಕ ಬೇಕಂದ್ರ ಸರಕಾರ ಅನ್ನೋದು ಸರ್ವಾಧಿಕಾರ ಆಗಬಾರದು ಅಂತ.

ಅದು ಯಾವಾಗ ಆಗಬಹುದಪಾ ಅನ್ನಲಿಕ್ಕೆ ಕೆಲವು ಉದಾಹರಣೆ ನೋಡೋಮು.

ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ ಚೌಟಾಲಾ ಅವರ ಮೊಮ್ಮಗ ಅಜಯ ಚೌಟಾಲಾ ಅವರಿಗೆ ಎರಡು ವಾರದ ಸಜಾ ಕಾಲದ ರಜೆ ಸಿಕ್ಕದ. ಅದರ ಹಿಂದಿನ ದಿವಸ ಅಜಯ ಅವರ ಮಗ ದುಷ್ಯಂತ ಚೌಟಾಲಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿ ಹಂಗಾಗಿದ್ದ ಹರಿಯಾಣಾ ವಿಧಾನಸಭೆಯನ್ನು ಹಂಗ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇರಬಹುದು ಅನ್ನುಕೊಳ್ಳುವುದು ಅಂದುಕೊಂಡವರ ಚಿತ್ತ. ಸಜಾ ಕಾಲದ ರಜೆ (ಫರಲೋ) ಹಾಗೂ ಸಜಾ ಕಾಲದ ಬಿಡುಗಡೆ ( ಪರೋಲ್) ಗೂ ಫರ್ಕು ಏನಪಾ ಅಂದರ ಫರಲೋ ಅನ್ನುವುದು ಒಬ್ಬ ಕೈದಿಯ ಹಕ್ಕು. ಪರೋಲ್ ಅನ್ನುವುದು ಹಕ್ಕಲ್ಲ. ಅದು ಸರಕಾರದ ಹಾಗೂ ನ್ಯಾಯಾಲಯದ ಚಿತ್ತ. ಜಂಬೂ ದ್ವೀಪದ ಮಹಾನ್ ನಾಯಕ ಸಂಜೂ ಬಾಬಾ ಅವರು ಸುಮಾರು 39 ಸರೆ ಫರಲೋ ಹಾಗೂ ಪರೋಲ್ ಸೌಭಾಗ್ಯ ಪಡೆದಿದ್ದರು. ಅವರು ಪಡೆದು ಬಂದವರು.

ಜನರ ಸಲುವಾಗಿ ಹೋರಾಟ ಮಾಡೋ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಆಗೇದ. ಅವರನ್ನ 25 ವರ್ಷ ಹಳೆಯ ಕೇಸೊಂದರಲ್ಲಿ ಭಾಗಿಯಾಗಿದ್ದ ವಿನೋದ ಎನ್ನುವ ವ್ಯಕ್ತಿಯೆಂದರೆ ಇವನೇ ಅಂತ ಹೇಳಿ ರಾಯಚೂರು ಪೊಲೀಸರು ಹಿಡಕೊಂಡು ಹೋಗ್ಯಾರ. ಹಂಗಂತ ಅವರೇನು ಬೆಂಗಳೂರ ತನಾ ಬಂದು ಅವರನ್ನ ಹಿಡಕೊಂಡು ಹೋಗಿಲ್ಲ. ರಾಯಚೂರು ಕಾರ್ಯಕ್ರಮಕ್ಕ ಹೋದಾಗ ಪೊಲೀಸ್ ಟೇಸನಕ್ಕ ಬರ್ರಿ ಅಂತ ಹೇಳಿ ಕರಿಸಿಕೊಂಡು ಅರೆಸ್ಟು ಮಾಡ್ಯಾರ

ಬೆಂಗಳೂರಾಗ ಎಲ್ಲಾರ ಎದುರಿಗೆ ಖುಲ್ಲಂಖುಲ್ಲಾ ಓಡಾಡಿಕೊಂಡು ಇದ್ದ ಈ ಮನುಷ್ಯ 25 ವರ್ಷ ತಲೆ ಮರೆಸಿಕೊಂಡಿದ್ದ ಅಂತ ಪೊಲೀಸರು ಕತಿ ಹೇಳ್ಯಾರ. ಅದಕ್ಕ ಅವರಿಗೆ ಸರಿಯಾದ ಸಾಕ್ಷಿ ಇಲ್ಲ. ಅವರಿಗೆ ಇರೋ ಸಾಕ್ಷಿ ಅಂದರ ಒಬ್ಬ ಮಾಜಿ ಪೊಲೀಸ್ ಸಿಬ್ಬಂದಿಯ ನೆನಪಿನ ಶಕ್ತಿ. ಇದು ಭಾರತೀಯ ದಂಡಸಂಹಿತೆ ಹಾಗೂ ಸಂವಿಧಾನದ ಪ್ರಕಾರ ಲಾಗೂ ಆಗೋದಿಲ್ಲ. ಆದರೆ ಅದು ನ್ಯಾಯಾಧೀಶರ ಎದುರಿಗೆ ವಾದಕ್ಕ ಬಂದಾಗಿನ ಮಾತು. ಅಲ್ಲಿ ತನಕಾ ಸರಕಾರದ ಮಾತೇ ಸರಿ.

ಗುಜರಾತು ಪೊಲೀಸರು ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರನ್ನು 13 ತಿಂಗಳ ಹಿಂದೆ ಬಂಧಿಸಿದ್ದಾರೆ. ಅವರಿಗೆ ಇನ್ನೂ ಬೇಲು ಸಿಕ್ಕಿಲ್ಲ. ಅವರು 22 ವರ್ಷದ ಹಿಂದ ಪೊಲೀಸ ಅಧೀಕ್ಷಕರಾಗಿದ್ದಾಗ ತಮ್ಮ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಅಧಿಕಾರ ದುರ್ಬಳಕೆ ಪ್ರಸಂಗವೊಂದರಲ್ಲಿ ಅವರನ್ನು ಆರೋಪಿ ಅಂತ ಮಾಡ್ಯಾರ. ಮೂವತ್ತು ವರ್ಷ ಸಂವಿಧಾನ, ನ್ಯಾಯ ಪ್ರಕ್ರಿಯೆ, ಸರಕಾರಿ ಕಾನೂನುಗಳಿಗೆ ತಕ್ಕಂತ ನೌಕರಿ ಮಾಡಿದ ಮನಿಷಾಗ ಕಾನೂನಿನ ಬಗ್ಗೆ ನಂಬಿಕಿ ಇಲ್ಲಾ ಅಂತ ಹೇಳಿ ಸರಕಾರ ಅವರಿಗೆ ಬೇಲು ಕೊಡಿಸಿಲ್ಲ.

ಕಾರ್ಮಿಕ ಮುಖಂಡರಾದ ಸುಧಾ ಭಾರದ್ವಾಜ ಮತ್ತು 10 ಜನ ಜನನಾಯಕರನ್ನು ಒಳಗ ಹಾಕಿ 14 ತಿಂಗಳ ಆತು. ಅದರೊಳಗ ಒಬ್ಬರ ಮನಿಯೊಳಗ ’ವಾರ್ ಆಂಡ್ ಪೀಸ್’ ಅನ್ನೋ ಕಾದಂಬರಿ ಇತ್ತು ಅದು ಅಲ್ಯಾಕ ಇತ್ತು ಅನ್ನೋದು ಭಾರಿ ಸುದ್ದಿ ಆಗಿತ್ತು. ಇದರಾಗೂನು ಅವರ ವಿಚಾರಣೆ ಅನ್ನೋದು ಸುರೂನ ಆಗಿಲ್ಲ. ಅಧಿಕೃತವಾಗಿ ಸರಕಾರದ ತನಿಖೆ ಮುಗದೇ ಇಲ್ಲ.

ಪ್ರಭುತ್ವ ಅನ್ನುವುದು ಸರ್ವಾಧಿಕಾರ ಆಗಬಾರದು. ಯಾಕಂದ್ರ ಭಾರತದೊಳಗ ಆಳುವ ಪಕ್ಷ, ವಿರೋಧ ಪಕ್ಷ ಅಂತ ಯಾವೂ ಇಲ್ಲ. ಇಲ್ಲಿ ಇರೋದು ಇವತ್ತಿನ ಆಳುವ ಪಕ್ಷ, ನಿನ್ನೆಯ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಅಷ್ಟ. ಅವರು ಮಾಡ್ಯಾರ ಅಂತ ಇವರು ತಿನ್ನೋದು ಇವರಿಬ್ಬರೂ ಮಾಡ್ಯಾರ ಅಂತ ಮೂರನೆಯವರು ಮಾಡೋದು ಸರಿ ಅಲ್ಲ. ಇವತ್ತು ಆಳುವವರು ನ್ಯಾಯ ನಿಷ್ಟುರತೆ, ಪಾರದರ್ಶಕ ನೀತಿ ಹಾಗೂ ನಿಷ್ಪಕ್ಷಪಾತ ನಡೆ ಯನ್ನು ಪಾಲಿಸದಿದ್ದರೆ ನಾಳೆ ಬಂದವರೂ ಪಾಲಿಸಲಿಕ್ಕಿಲ್ಲ. ಆವಾಗ ಇವರು ಝಗಳಾ ತಗೀಲಿಕ್ಕೆ ಬರೋದಿಲ್ಲ. ನೀವು ಹಿಂಗ ಮಾಡಿದಿರಿ ಅಂದರ ನೀವು ಮಾಡಿಲ್ಲೇನು ಅಂತ ಅವರು ಅನ್ನಬಹುದು.
ಅದರ ಜನರಿಗೆ ಇವು ಯಾವುವೂ ಬ್ಯಾಡ. ಸಮಾನತೆ ಹಾಗೂ ಶಾಂತಿ ಬೇಕು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...