Homeಮುಖಪುಟಚಲನಚಿತ್ರಗಳಲ್ಲಿ ವಿಕಲಾಂಗ ವ್ಯಕ್ತಿಗಳ 'ಸ್ಟೀರಿಯೊಟೈಪಿಂಗ್' ಅವರ ಘನತೆಗೆ ವಿರುದ್ಧವಾಗಿದೆ: ಸುಪ್ರೀಂ ಕೋರ್ಟ್‌

ಚಲನಚಿತ್ರಗಳಲ್ಲಿ ವಿಕಲಾಂಗ ವ್ಯಕ್ತಿಗಳ ‘ಸ್ಟೀರಿಯೊಟೈಪಿಂಗ್’ ಅವರ ಘನತೆಗೆ ವಿರುದ್ಧವಾಗಿದೆ: ಸುಪ್ರೀಂ ಕೋರ್ಟ್‌

- Advertisement -
- Advertisement -

ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಸೇರಿದಂತೆ ದೃಶ್ಯ ಮಾಧ್ಯಮಗಳಲ್ಲಿ ವಿಕಲಾಂಗ ವ್ಯಕ್ತಿಗಳ (ಪಿಡಬ್ಲ್ಯುಡಿ) ಕುರಿತ ಸ್ಟೀರಿಯೊಟೈಪಿಂಗ್ ಮತ್ತು ತಾರತಮ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸುಪ್ರೀಂ ಕೋರ್ಟ್ ಸಮಗ್ರ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಈ ತೀರ್ಪು “ಅಂಗವಿಕಲರ ಸೂಕ್ಷ್ಮ ಮತ್ತು ನಿಖರವಾದ ಪ್ರಾತಿನಿಧ್ಯದ ಪ್ರಾಮುಖ್ಯತೆ”ಯನ್ನು ಒತ್ತಿಹೇಳಿದೆ.

ವಿಕಲ ಚೇತನರ ಕುರಿತು ‘ಸ್ಟೀರಿಯೊಟೈಪಿಂಗ್’ ಪ್ರಸ್ತುತಿಯು, ಅವರ ಘನತೆಗೆ ವಿರುದ್ಧವಾಗಿದೆ; ತಾರತಮ್ಯಕ್ಕೆ ಕಾರಣವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಹೇಳಿತು. “ದೈಹಿಕ ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಮಾತ್ರವಲ್ಲದೆ, ಅಂಗವೈಕಲ್ಯದ ಸಂಕೀರ್ಣ ರೂಪಗಳನ್ನು ಪರಿಹರಿಸುವಲ್ಲಿ ನ್ಯಾಯಾಂಗದ ವಿಕಸನ ಪಾತ್ರವನ್ನು ಎತ್ತಿ ತೋರಿಸುತ್ತದೆ; ಲಿಂಗ ಮತ್ತು ಮಾನಸಿಕ ಆರೋಗ್ಯ, ಸಮಾನತೆಯ ಕುರಿತಾದ ಪ್ರವಚನವನ್ನು ಪುಷ್ಟೀಕರಿಸುವುದು ಮತ್ತು ಎಲ್ಲ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವುದನ್ನು ಖಾತ್ರಿಪಡಿಸಬೇಕು” ಎಂದು ಹೇಳಿದರು.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, “ಅಂಗವೈಕಲ್ಯದ ಬಗ್ಗೆ ಸಾಂಪ್ರದಾಯಿಕ ಬುದ್ಧಿವಂತಿಕೆಗೆ ಸವಾಲು ಹಾಕುವ, ವಿಕಲಾಂಗ ಹಾಸ್ಯದಿಂದ ವ್ಯಕ್ತಿಗಳನ್ನು ಅವಮಾನಿಸುವ ಹಾಸ್ಯವನ್ನು ನಾವು ಪ್ರತ್ಯೇಕಿಸಬೇಕು. ಅಂಗವೈಕಲ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು ಪ್ರಯತ್ನಿಸುತ್ತಿರುವಾಗ, ಹಾಸ್ಯವು ಅದನ್ನು ನಿರಾಕರಿಸುತ್ತದೆ… ದೃಶ್ಯ ಮಾಧ್ಯಮದಲ್ಲಿ ವಿಕಲಾಂಗ ವ್ಯಕ್ತಿಗಳ ಚಿತ್ರಣದ ಚೌಕಟ್ಟನ್ನು ಒದಗಿಸಲು ನಾವು ಈ ಅವಕಾಶವನ್ನು ಬಳಸುತ್ತೇವೆ; ಅದು ಸಂವಿಧಾನ ಹಾಗೂ ವಿಕಲಚೇತನರ ಹಕ್ಕುಗಳಾದ ತಾರತಮ್ಯ ವಿರೋಧಿ ಮತ್ತು ಘನತೆಯನ್ನು ದೃಢಪಡಿಸುವ ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತದೆ” ಎಂದು ಹೇಳಿದರು.

“ಈ ನ್ಯಾಯಾಲಯವು ತಾರತಮ್ಯ ಮತ್ತು ಮೂಲಭೂತ ಹಕ್ಕುಗಳ ಅನುಭೋಗದ ಮೇಲೆ ಸ್ಟೀರಿಯೊಟೈಪ್‌ಗಳ ಪ್ರಭಾವದ ಬಗ್ಗೆ ಅರಿವು ಹೊಂದಿದೆ. ಘನತೆ ಮತ್ತು ಸಮಾನತೆಯ ಹಕ್ಕನ್ನು ರಕ್ಷಿಸುವ ತಾರತಮ್ಯ ವಿರೋಧಿ ಸಂಹಿತೆ ಮತ್ತು ಆರ್ಟಿಕಲ್ 15 ರ ಅಡಿಯಲ್ಲಿ ನಾವು ಸ್ಟೀರಿಯೊಟೈಪಿಂಗ್ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ರೂಪಿಸಿದ್ದೇವೆ” ಎಂದು ಪೀಠ ಹೇಳಿದೆ.

ಅಂಗವೈಕಲ್ಯವನ್ನು ವಿವಿಧ ಅಂಶಗಳಿಂದ ರೂಪುಗೊಂಡ ಸೂಕ್ಷ್ಮವಾದ, ವೈಯಕ್ತಿಕ ಪರಿಕಲ್ಪನೆಯಾಗಿ ನೋಡುವ ಅಗತ್ಯವನ್ನು ಒತ್ತಿಳಿದ ಪೀಠವು, ವಿಕಲಾಂಗ ವ್ಯಕ್ತಿಗಳ ವಿರುದ್ಧ ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವ ಪ್ರಾಮುಖ್ಯತೆಯನ್ನು ಅಂಗೀಕರಿಸಿದೆ, ಅವರ ಗುರುತು ಮತ್ತು ಘನತೆಯ ಪ್ರಜ್ಞೆಯ ಮೇಲೆ ಆಳವಾದ ಪ್ರಭಾವವನ್ನು ಗುರುತಿಸಿದೆ.

ದೃಶ್ಯ ಮಾಧ್ಯಮದಲ್ಲಿ ವಿಕಲಾಂಗ ವ್ಯಕ್ತಿಗಳ ಚಿತ್ರಣಕ್ಕಾಗಿ ಸುಪ್ರೀಂ ಕೋರ್ಟ್ ಹಲವಾರು ಪ್ರಮುಖ ಮಾರ್ಗಸೂಚಿಗಳನ್ನು ಹಾಕಿತು, “ಸಂಭಾಷಣೆಯ ಭಾಷೆಯು ಅನ್ಯಮಾರ್ಗದ ಬದಲು, ಎಲ್ಲರನ್ನೂ ಒಳಗೊಳ್ಳಬೇಕು, ಅಂಗವಿಕಲ ವ್ಯಕ್ತಿಗಳ ಪ್ರಾತಿನಿಧ್ಯವನ್ನು ಪರಿಗಣಿಸಬೇಕು” ಎಂದು ಹೇಳಿದೆ.

“ತಪ್ಪು ಮಾಹಿತಿ ಮತ್ತು ಸ್ಟೀರಿಯೊಟೈಪ್‌ಗಳನ್ನು ತಡೆಗಟ್ಟಲು ವೈದ್ಯಕೀಯ ಪರಿಸ್ಥಿತಿಗಳ ನಿಖರವಾದ ಪ್ರಾತಿನಿಧ್ಯಕ್ಕಾಗಿ ಚಿತ್ರ ರಚನೆಕಾರರು ಶ್ರಮಿಸಬೇಕು. ತಪ್ಪುದಾರಿಗೆಳೆಯುವ ಚಿತ್ರಣವು ಸ್ಥಿತಿಯ ಬಗ್ಗೆ ತಪ್ಪು ಮಾಹಿತಿಯನ್ನು ಶಾಶ್ವತಗೊಳಿಸುತ್ತದೆ ಮತ್ತು ಅಂತಹ ದುರ್ಬಲತೆ ಹೊಂದಿರುವ ವ್ಯಕ್ತಿಗಳ ಬಗ್ಗೆ ಸ್ಟೀರಿಯೊಟೈಪ್‌ಗಳನ್ನು ಪ್ರಭಾವಿಸುತ್ತದೆ” ಎಂದು ಪೀಠ ಹೇಳಿದೆ.

“ದೃಶ್ಯ ಮಾಧ್ಯಮವು ವಿಕಲಾಂಗ ವ್ಯಕ್ತಿಗಳ ವೈವಿಧ್ಯಮಯ ನೈಜತೆಯನ್ನು ಚಿತ್ರಿಸಲು ಶ್ರಮಿಸಬೇಕು, ಅವರ ಸವಾಲುಗಳನ್ನು ಮಾತ್ರವಲ್ಲದೆ ಅವರ ಯಶಸ್ಸು, ಪ್ರತಿಭೆ ಮತ್ತು ಸಮಾಜಕ್ಕೆ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಕುರುಡರು ತಮ್ಮ ಹಾದಿಯಲ್ಲಿರುವ ವಸ್ತುಗಳಿಗೆ ಬಡಿದುಕೊಳ್ಳುವಂತಹ ಮಿಥ್ಯೆಗಳ ಆಧಾರದ ಮೇಲೆ ಅವರನ್ನು ನಿರ್ಲಕ್ಷಿಸಬಾರದು; ಅಸಾಧಾರಣ ಸಾಮರ್ಥ್ಯಗಳೊಂದಿಗೆ ಅವರನ್ನು ‘ಸೂಪರ್-ಅಂಗವಿಕಲರು’ ಎಂದು ಪ್ರಸ್ತುತಪಡಿಸಬಾರದು” ಎಂದು ಹೇಳಿದೆ.

ಚಲನಚಿತ್ರದ ವಿಷಯವನ್ನು ನಿರ್ಣಯಿಸುವ ಮೊದಲು ಸನ್ನಿವೇಶ, ಉದ್ದೇಶ ಮತ್ತು ಒಟ್ಟಾರೆ ಸಂದೇಶವನ್ನು ಪರಿಗಣಿಸಬೇಕು ಎಂದು ಪೀಠವು ಹೇಳಿದೆ. ಅಂಗವೈಕಲ್ಯದ ಬಗ್ಗೆ ಸಾಂಪ್ರದಾಯಿಕ ಬುದ್ಧಿವಂತಿಕೆಗೆ ಸವಾಲು ಹಾಕುವ ಹಾಸ್ಯದಿಂದ ಅಂಗವಿಕಲರನ್ನು ಕೀಳಾಗಿಸುವಂತಹ ಹಾಸ್ಯವನ್ನು ನಿಷ್ಕ್ರಿಯಗೊಳಿಸಬೇಕು ಎಂದು ಸೂಚಿಸಿದೆ.

“ವಿಕಲಾಂಗ ವ್ಯಕ್ತಿಗಳನ್ನು ಅವಹೇಳನ ಮಾಡುವ, ಅವರನ್ನು ಮತ್ತಷ್ಟು ಕಡೆಗಣಿಸುವ ಮತ್ತು ಅಂತಹ ಚಿತ್ರಣದ ಒಟ್ಟಾರೆ ಸಂದೇಶದ ವಿಮೋಚನೆಯ ಗುಣಮಟ್ಟವಿಲ್ಲದೆ, ಅವರ ಸಾಮಾಜಿಕ ಭಾಗವಹಿಸುವಿಕೆಯಲ್ಲಿ ಅಡೆತಡೆಗಳನ್ನು ನಿಷ್ಕ್ರಿಯಗೊಳಿಸುವುದರೊಂದಿಗೆ ಪೂರಕವಾದ ಭಾಷೆಯನ್ನು ಎಚ್ಚರಿಕೆಯಿಂದ ಸಂಪರ್ಕಿಸಬೇಕು. ಅಂತಹ ಪ್ರಾತಿನಿಧ್ಯವು ಸಮಸ್ಯಾತ್ಮಕವಾಗಿದೆ. ಏಕೆಂದರೆ, ಅದು ವ್ಯಕ್ತಿನಿಷ್ಠ ಭಾವನೆಗಳನ್ನು ಕೆರಳಿಸುತ್ತದೆ” ಎಂದು ನ್ಯಾಯಾಲಯವು ಒತ್ತಿಹೇಳಿತು.

“ಅಂಗವೈಕಲ್ಯ ವಕಾಲತ್ತು ಗುಂಪುಗಳೊಂದಿಗೆ ತೊಡಗಿಸಿಕೊಳ್ಳುವುದು ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ ಮತ್ತು ನಿಖರವಾದ ಮತ್ತು ಗೌರವಾನ್ವಿತ ಚಿತ್ರಣಗಳನ್ನು ಖಚಿತಪಡಿಸುತ್ತದೆ” ಎಂದು ಪೀಠವು ಹೇಳಿದೆ. ಕಥಾ ರಚನೆಕಾರರು ಅಂಗವಿಕಲರ ಘನತೆ ಮತ್ತು ಹಕ್ಕುಗಳ ಮೇಲೆ ತಮ್ಮ ಕೆಲಸದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ತರಬೇತಿ ಮತ್ತು ಸಂವೇದನೆ ಕಾರ್ಯಕ್ರಮಗಳಿಗೆ ಒಳಗಾಗಬೇಕು ಎಂದು ಕೋರ್ಟ್‌ ಸಲಹೆ ನೀಡಿದೆ.

ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ನಿರ್ಮಿಸಿದ “ಆಂಖ್ ಮಿಚೋಲಿ” ಚಿತ್ರದ ವಿರುದ್ಧ ದೂರು ನೀಡಿದ ಅಂಗವಿಕಲ ಹಕ್ಕುಗಳ ಕಾರ್ಯಕರ್ತ ನಿಪುನ್ ಮಲ್ಹೋತ್ರಾ ಅವರು ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಅಂಗವಿಕಲರ ಬಗ್ಗೆ ಅವಹೇಳನಕಾರಿ ಮತ್ತು ತಾರತಮ್ಯದ ಹೇಳಿಕೆಗಳಿವೆ ಎಂದು ವಾದಿಸಿದರು.

ಮಲ್ಹೋತ್ರಾ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಂಜೋಯ್ ಘೋಸ್ ಅವರು ಚಿತ್ರದಲ್ಲಿ ನಿರ್ದಿಷ್ಟ ನಿದರ್ಶನಗಳನ್ನು ಹೈಲೈಟ್ ಮಾಡಿದ್ದಾರೆ. ಅಲ್ಲಿ ಮಾತಿನ ವಿಕಲಾಂಗರನ್ನು “ಅಟ್ಕಿ ಹುಯಿ ಕ್ಯಾಸೆಟ್‌” (ಅಂಟಿಕೊಂಡಿರುವ ಕ್ಯಾಸೆಟ್‌ಗಳು) ಮತ್ತು ನೆನಪಿನ ಸಮಸ್ಯೆಗಳಿರುವ ವ್ಯಕ್ತಿಯನ್ನು “ಭುಲಕ್ಕಡ್ ಬಾಪ್” (ಮರೆವಿನ ತಂದೆ) ಎಂದು ಉಲ್ಲೇಖಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದನ್ನೂ ಓದಿ; 45 ಶಾಸಕರ ಬೆಂಬಲ; ಜಾರ್ಖಂಡ್ ವಿಧಾನಸಭೆಯಲ್ಲಿ ‘ವಿಶ್ವಾಸಮತ’ ಗೆದ್ದ ಹೇಮಂತ್ ಸೊರೇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...