ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿಯನ್ನು ನಿನ್ನೆ ಮಾಧ್ಯಮಗಳು ನಡೆಸಿಕೊಂಡ ರೀತಿ ನಿಜಕ್ಕೂ ಅಸಹನೀಯವಾದದ್ದು. ಯಾವುದೇ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಗೌರವಗಳಿರುತ್ತವೆ. ಆದರೆ ನಿನ್ನೆ ರಿಯಾ ವಿಚಾರಣೆಗೆ ಆಗಮಿಸಿದಾಗ ಮಾಧ್ಯಮಗಳು ತಮ್ಮ ಮಿತಿಯನ್ನು ಉಲ್ಲಂಘಿಸಿದವು. ನೂರಾರು ಜನ ಗಂಡಸರು ಒಮ್ಮೆಲೇ ಆಕೆಯ ಮೇಲೆ ಮುಗಿಬಿದ್ದದ್ದು ಯಾವ ದೌರ್ಜನ್ಯಕ್ಕಿಂತ ಕಡಿಮೆಯಲ್ಲ.
ರಿಯಾ ಆರೋಪಿಯೇ ನಿಜ. ಹಾಗೆಂದ ಮಾತ್ರಕ್ಕೆ ಆಕೆಯನ್ನೂ ಅಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ಯಾವ ಮಾಧ್ಯಮದವರಿಗೂ ಇಲ್ಲ. ತಮ್ಮ ಚಾನೆಲ್ಗಳ ಟಿಆರ್ಪಿ, ನಾವೇ ಮೊದಲು ಎಂಬುದು ಮಾತ್ರ ಗಮನದಲ್ಲಿರಿಸಿಕೊಳ್ಳುವ ಮಾಧ್ಯಮ ಮಿತ್ರರು ತಾವೊಂದು ಹೆಣ್ಣಿನ ಜೊತೆ ಹೇಗೆ ವರ್ತಿಸಬೇಕೆಂಬ ಕನಿಷ್ಠ ಜ್ಞಾನ ಇಲ್ಲದೇ ಹೋದದ್ದು ವಿಷಾದನೀಯ.
ಭಾರತದಲ್ಲಿ ಮಹಿಳೆ ಪ್ರತಿ ದಿನ ತನ್ನ ಹಕ್ಕುಗಳಿಗಾಗಿ ಹೋರಾಡುತ್ತಲೇ ಇದ್ದಾಳೆ. ನಟಿ ರಿಯಾಳ ತನ್ನ ಖಾಸಗಿ ಸಮಯ, ತನ್ನದೇ ದೇಹದ ಮೇಲಿನ ಹಕ್ಕುಗಳು ಕೂಡ ಆಕೆಯಿಂದ ಕಿತ್ತುಕೊಳ್ಳಲಾಯಿತು. ಕ್ಯಾಮೆರಾ, ಚಾನೆಲ್ ಲೋಗೋ ಅಷ್ಟೇ ಏಕೆ ವರದಿಗಾರರ ಕೈಗಳು ಆಕೆಯ ದೇಹವನ್ನು ಚುಚ್ಚುತ್ತಿದ್ದವು. ಇದ್ಯಾವೂದು ದೌರ್ಜನ್ಯ ಅಂತ ಅಲ್ಲಿದ್ದವರಿಗೆ ಅನ್ನಿಸಲೇ ಇಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಹದ್ದುಗಳಂತೆ ಆಕೆಯ ಮೇಲೆ ದಾಳಿ ನಡೆಸಿದ್ದಾರೆ.
ದೇಶದ ಪ್ರಧಾನ ಮಂತ್ರಿಗಳು, ರಾಜಕಾರಣಿಗಳು ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಮುಖ್ಯ ಎಂದು ಭಾಷಣಗಳನ್ನು ಮಾತ್ರ ಮಾಡುತ್ತಾರೆ. ಹೊಸ ಹೊಸ ಕಾನೂನು ಜಾರಿ ಮಾಡುತ್ತಾರೆ ಆದರೆ ಇಂತಹ ಘಟನೆಗಳು ನಡೆದಾಗ ಅದರ ವಿರುದ್ಧ ಯಾರೂ ಸೊಲ್ಲೆತ್ತುವುದಿಲ್ಲ.
ಇನ್ನು ಹತ್ತಾರು ಜನ ಸೇರಿ ಮಾಡುವ ಪ್ರತಿಭಟನೆಗಳಲ್ಲೇ ದೊಂಬಿ, ಗಲಾಟೆ ಎನ್ನುವ ಪೊಲೀಸರು ಆಕೆಯ ಹಕ್ಕುಗಳನ್ನು ಉಲ್ಲಂಘಿಸಿದಕ್ಕಾಗಿ ಸ್ವಯಂ ಪ್ರೇರಿತರಾಗಿ ಕೇಸ್ ದಾಖಲಿಸಬಹುದಾಗಿತ್ತು ಆದರೆ ಅದು ಆಗಲಿಲ್ಲ. ಚಿಂತಕರು, ಮಹಿಳಾಪರ ಹೋರಾಟಗಾರರು, ಮಾನವ ಹಕ್ಕುಗಳ ಆಯೋಗ ಕೂಡ ಇದರ ಬಗ್ಗೆ ದನಿ ಎತ್ತಬಹುದಾಗಿತ್ತು ಆದರೇ ಆರೋಪಿಯೆಂಬ ಕಾರಣಕ್ಕೆ ಇಷ್ಟೇಲ್ಲಾ ಸಹಿಸಬೇಕಾಯಿತು ಆ ಹೆಣ್ಣು.
ಆದರೂ ಕೆಲವು ಪ್ರಜ್ಞಾವಂತರು ಆಕೆಯ ಪರವಾಗಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
I think that, it was not right, today i saw a woman #RiyaChakraborty is surrounded by media mob, even she can't go from their, that's not right. Media do it just for TRP and brake all rules. This is not a right way of 4rth piller of democracy if they do it continue …… pic.twitter.com/UkIAqt4rfo
— SURENDER SINGH SHARMA (@SunnySh90775466) September 6, 2020
ಟಿಆರ್ಪಿಗಾಗಿ ಮಾದ್ಯಮ ತನ್ನೆಲ್ಲಾ ರೂಲ್ಸ್ಗಳನ್ನು ಬ್ರೇಕ್ ಮಾಡಿಮಾಡಿದೆ ಎಂದು ಸುರೇಂದ್ರ ಸಿಂಗ್ ಶರ್ಮಾ ಎಂಬುವರು ಟ್ವೀಟ್ ಮಾಡಿದ್ದಾರೆ.
A hundred men, their cameras touching her, violating her space, her body. This could be you tomorrow. But you will choose silence because watching this is fun right now. She is the villain of your amoral world. A country whose Prime Minister claims to champion womens rights pic.twitter.com/P4M8zOHeXh
— Rana Ayyub (@RanaAyyub) September 7, 2020
ಪತ್ರಕರ್ತೆ ರಾಣಾ ಆಯುಬ್ ತಮ್ಮ ಟ್ವೀಟ್ನಲ್ಲಿ “ನೂರಾರು ಪುರುಷರು, ಅವರ ಕ್ಯಾಮೆರಾಗಳು ಅವಳನ್ನು, ಅವಳ ದೇಹವನ್ನು ಮುಟ್ಟುತ್ತವೆ, ಅವಳಿಗೆ ಜಾಗ ನೀಡದೆ ಕಾನೂನು ಉಲ್ಲಂಘಿಸುತ್ತಿದ್ದವು. ಇದು ನಾಳೆ ನಿಮ್ಮ ಮೇಲೆಯೂ ನಡೆಯಬಹುದು. ಆದರೆ ಈಗ ನೀವು ಮೌನವಾಗಿ ಇದನ್ನು ನೋಡುತ್ತಾ ಖುಷಿ ಪಡುತ್ತಿರುತ್ತಿರಿ. ಏಕೆಂದರೆ ಅವಳು ನಿಮ್ಮ ಅನೈತಿಕ ಪ್ರಪಂಚದ ಕಣ್ಣಿಗೆ, ಮಹಿಳೆಯರಿಗೆ ಭದ್ರತೆ ನೀಡಿದ್ದೇವೆ ಎನ್ನುವ ಪ್ರಧಾನಿಯ ದೇಶದ ಖಳನಾಯಕಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
— Shabbeer Syed (@shabby_Rabu) September 7, 2020
My Simple Question to all of you?
Isn't Woman safe In New India?#RheaChakraborthy pic.twitter.com/YYKkO4bruL
— Aabid Mir Magami عابد میر ماگامی (Athlete) (@AabidMagami) September 6, 2020
No caption required…#mediatrial #mediamafia #medialynching #RiyaChakraborty pic.twitter.com/YpQsj5c1Tz
— Suhas Birhade (@Suhas_News) September 7, 2020
#SushantSinghRajputDeathCase @RiyaChakravort3 #RiyaChakraborty #RiyaChakravarti @aajtak @Republic_Bharat @republic @timesofindia @indiatvnews @chitraaum @ANI @BBCHindi pic.twitter.com/ZzeoTcGt8z
— Abhay Pratap Singh (@Abhaysi19) September 7, 2020
This image is disturbing on so many levels…. Every citizen, man or woman, has right to their space… to be pushed around like this is just inhuman…. ?? #RiyaChakraborty pic.twitter.com/NxUEgmcn7w
— Rahulraj (@RahulrajRout) September 7, 2020
Centre approves Y level security for #KangnaRanaut ! What about #RiyaChakraborty pic.twitter.com/axiOBQqny6
— Azmath sultan ??INC (@sultan_azmath) September 7, 2020
ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮಿರಕ್ಕೆ ಹೋಲಿಸಿದ್ದ ನಟಿ ಕಂಗನಾ ರಾಣಾವತ್ಗೆ ಕೇಂದ್ರ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ, ಆದರೆ ರಿಯಾ ಚಕ್ರವರ್ತಿಗೆ? ಎಂದು ಟ್ವೀಟ್ ಒಂದರಲ್ಲಿ ಪ್ರಶ್ನಿಸಲಾಗಿದೆ.
ಆಕೆ ತಪ್ಪು ಮಾಡಿದ್ದಾಳೆ, ಹಾಗಾಗಿ ಆಕೆಯ ಜೊತೆಗೆ ಹಾಗೇಯೇ ನಡೆದುಕೊಳ್ಳಬೇಕು ಎಂಬುದು ನಿಮ್ಮ ಅಭಿಪ್ರಾಯವಾದರೆ, ಆಕೆ ಆರೋಪಿಯಷ್ಟೇ ಎಂಬುದನ್ನು ನೀವು ನೆನಪಲ್ಲಿ ಇಟ್ಟುಕೊಳ್ಳಬೇಕು. ಕಾನೂನು ಪ್ರಕಾರ ತನಿಖೆ ನಡೆದು ತಪ್ಪು ಸರಿ ನಿರ್ಣಯವಾಗುತ್ತದೆ. ಆಗ ಒಂದು ವೇಳೆ ಆಕೆ ಅಪರಾಧಿಯೇ ಆದರೂ ಸಹ ನಿಮಗೆ ಆಕೆಯೊಂದಿಗೆ ಹೀನಾಯವಾಗಿ ವರ್ತಿಸುವ ಹಕ್ಕಿರುವುದಿಲ್ಲ. ಹೆಣ್ಣಿಗೆ ಗೌರವ ಕೊಡುವುದು ಎಂದರೆ ಎಲ್ಲಾ ಹೆಣ್ಣುಮಕ್ಕಳನ್ನೂ ಗೌರವದಿಂದ ಕಾಣುವುದೆ ಆಗಿದೆ.
ಸುಶಾಂತ್ ಸಿಂಗ್ ರಾಜ್ಪೂತ್ಗೆ ನ್ಯಾಯ ದೊರಕಬೇಕಿರುವುದು ಸರಿಯೇ. ಆದರೆ ಇನ್ನೊಬ್ಬ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದು ಕೂಡ ಅನ್ಯಾಯ ಎಂಬುದನ್ನು ಮೊದಲು ಪರಿಗಣಿಸಬೇಕು. ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಹಕ್ಕು ಯಾವ ಮಾಧ್ಯಮಗಳಿಗೂ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಳ್ಳುವ ಮಾಧ್ಯಮಗಳ ಈ ನಡೆ ನಿಜಕ್ಕೂ ಅವಹೇಳನಕಾರಿಯಾದದ್ದು.
ಇದನ್ನೂ ಓದಿ: ಮುಂಬೈಯನ್ನು ಪಿಒಕೆಗೆ ಹೋಲಿಕೆ ವಿಚಾರ: ಟ್ವಿಟ್ಟರ್ನಲ್ಲಿ ಕಂಗನಾ ವಿರುದ್ಧ ಆಕ್ರೋಶ