ಬಾಲಿವುಡ್ ನಟಿ ಕಂಗನಾ ರಾಣಾವತ್ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಟ್ವಿಟ್ಟರ್ನಲ್ಲಿ ಸಾರ್ವಜನಿಕರು, ರಾಜಕಾರಣಿಗಳು ಸೇರಿದಂತೆ ನಟ, ನಟಿಯರು ರಾಣಾವತ್ ಪರ-ವಿರುದ್ಧ ಮುಗಿಬಿದ್ದಿದ್ದಾರೆ.
ಮರಾಠಿ ಚಲನಚಿತ್ರೋದ್ಯಮ ಮತ್ತು ಬಾಲಿವುಡ್ ಚಿತ್ರರಂಗದವರು ಕೂಡ ನಟಿಯ ಹೇಳಿಕೆಗೆ ಬಲವಾದ ಪ್ರತಿರೋಧ ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ಮಹಾರಾಷ್ಟ್ರದ ಸಾರ್ವಜನಿಕರು ಮತ್ತು ಮಹಾ ವಿಕಾಸ್ ಅಘಾಡಿ ಬೆಂಬಲಿಗರು ಸೇರಿ ರಾಣಾವತ್ ಹೇಳಿಕೆ ಉಲ್ಲೇಖಿಸಿ #AmchiMumbai ಮತ್ತು #ILoveMumbai ಹ್ಯಾಶ್ಟ್ಯಾಗ್ಗಳನ್ನು ಬಳಸಿ ಟ್ರೆಂಡಿಂಗ್ ಮಾಡಿದ್ದಾರೆ.
मुंबई हिंदुस्तान है।
— Riteish Deshmukh (@Riteishd) September 3, 2020
Maharashtra is cultural n intellectual face of India..land of Great Shivaji maharaj. Mumbai has fed millions of Indians n given them Name Fame n Glory.Only ungrateful can compare it with POK..Shocked n disgusted #EnoughIsEnough #आमचीमुंबई #mumbaimerijaan #जयमहाराष्ट्र ❤️
— Urmila Matondkar (@UrmilaMatondkar) September 3, 2020
ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್ಗೊಂದು ಪತ್ರ
ಇತ್ತ ಉದ್ಧವ್ ಠಾಕ್ರೆ ಸಂಪುಟದಲ್ಲಿ ಕೆಲವು ಹಿರಿಯ ಮಂತ್ರಿಗಳು, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಸೇರಿ ಹಲವರು ಕಂಗನಾ ಟ್ವೀಟ್ಗಳನ್ನು ಟೀಕಿಸಿದ್ದಾರೆ.
If that girl (Actor Kangana Ranaut) will apologise to Maharashtra, then I will think about it (of apologising). She calls Mumbai a mini Pakistan. Does she have the courage to say the same about Ahmedabad?: Shiv Sena MP Sanjay Raut pic.twitter.com/GnUBd0ZTFO
— ANI (@ANI) September 6, 2020
ಇಂದು ಮುಂಬೈ ಮತ್ತು ಮಹಾರಾಷ್ಟ್ರ ನಮ್ಮ ಪೊಲೀಸರಿಂದ ಸುರಕ್ಷಿತವಾಗಿದೆ. ಇದು ಸುರಕ್ಷಿತವಲ್ಲ ಎಂದು ಭಾವಿಸುವವರಿಗೆ ಇಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಅನಿಲ್ ದೇಶ್ಮುಖ್ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ಹಲವರು ನನಗೆ ಮುಂಬೈಗೆ ಬಾರದಂತೆ ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ ನಾನು ಸೆಪ್ಟಂಬರ್ 9 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೇನೆ. ಧೈರ್ಯವಿದ್ದರೆ ತಡೆಯಲಿ ನೋಡೋಣ. ಮತ್ತು ನಾನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯವನ್ನು ಪೋಸ್ಟ್ ಮಾಡುತ್ತೇನೆ ಎಂದು ಕಂಗನಾ ಸವಾಲು ಹಾಕಿದ್ದಾರೆ.
I see many people are threatening me to not come back to Mumbai so I have now decided to travel to Mumbai this coming week on 9th September, I will post the time when I land at the Mumbai airport, kisi ke baap mein himmat hai toh rok le ? https://t.co/9706wS2qEd
— Kangana Ranaut (@KanganaTeam) September 4, 2020
ಮುಂಬೈ ಮತ್ತು ಮಹಾರಾಷ್ಟ್ರದ ಬಗ್ಗೆ ಕಂಗನಾ ರನೌತ್ ಅವರ ಹೇಳಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ. ಕಂಗನಾ ರಾಣಾವತ್ ಮಹಾರಾಷ್ಟ್ರಕ್ಕೆ ಏನನ್ನೂ ಕಲಿಸಲು ಪ್ರಯತ್ನಿಸಬಾರದು. ಅಲ್ಲದೆ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕಂಗನಾ ಮೂಲಕ ಬಿಜೆಪಿಯನ್ನು ಆಕ್ರಮಣ ಮಾಡಲು ಯಾರೂ ಪ್ರಯತ್ನಿಸಬಾರದು ಎಂದು ಬಿಜೆಪಿಯ ಹಿರಿಯ ಮುಖಂಡ ಆಶಿಶ್ ಶೆಲಾರ್ ಟ್ವೀಟ್ ಮಾಡಿದ್ದಾರೆ. ಆದರೆ ಈ ಎಲ್ಲಾ ಘಟನೆಗಳಿಂದ, ಕಾಮೆಂಟ್ಗಳಿಂದ ಬಿಜೆಪಿ ದೂರವೇ ಉಳಿದಿದೆ.
कंगना राणावत ने महाराष्ट्र और मुंबई के बारे में जो भी कहा है, उससे भाजप सहमत नहीं है। सुशांत सिंह राजपूत के केस में अंजाम तक आने से पहले उसे भ्रमित करने का प्रयास कुछ लोग कर रहे हैं। pic.twitter.com/zLKCk8zeiC
— Adv. Ashish Shelar – ॲड. आशिष शेलार (@ShelarAshish) September 4, 2020
ಇತ್ತ ನಟಿ ರಾಣಾವತ್ ಬೆಂಬಲಿಗರು ಸಹ ಅವರ ಪರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಕಂಗನಾ ನಿಜ ಹೇಳಿದ್ದಾರೆ. ಭಾರತ ಸುರಕ್ಷಿತವಲ್ಲ ಎಂದು ಶಾರುಖ್ ಖಾನ್, ಅಮೀರ್ ಖಾನ್ ಹೇಳಿದರೆ ಸುಮ್ಮನಿರುತ್ತೀರಿ, ಕಂಗನಾ ಮುಂಬೈ ಸೇಫ್ ಅಲ್ಲ ಎಂದರೆ ಹೀಗೆ ಆಕ್ರಮಣ ಮಾಡುತ್ತೀರಿ ಎಂದಿದ್ದಾರೆ.
Nothing more apt than this#KanganaVsSena pic.twitter.com/LIO1J7kfxp
— Yashi?✨ (@itsYashi_) September 5, 2020
ರಾಣಾವತ್ ಅಭಿಮಾನಿಗಳು #KanganaVsSena ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಮಾಡಿದ್ದಾರೆ. ಮರಾಠಿ ಸಂಸ್ಕೃತಿ ಮತ್ತು ಶಿವಾಜಿ ಮಹಾರಾಜರನ್ನು ಕಂಗನಾ ಎಲ್ಲಿ ಅವಮಾನಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
#KanganaVsSena
When did she @KanganaTeam speak against Marathi Culture or against Shivaji Maharaj ?? Or this man @rautsanjay61 think himself as Shivaji Maharaj.
What shiv sena has turned itself into…Really miss Balasaheb ?— Ashish_Bhardwaj?? (@Ashish59822645) September 5, 2020
She Does It On & Off Camera
Check this out#KanganaVsSena pic.twitter.com/MPtlt63cKf— Rajiv Karia (@KariaRajiv) September 5, 2020
ಒಟ್ಟಾರೆ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮುಗಿಬಿದ್ದು, ಮುಂಬೈ ಬಗ್ಗೆ ಕಂಗನಾ ಮಾಡಿದ ಟ್ವೀಟ್ ಮರಾಠಿ, ಬಾಲಿವುಡ್, ಮಹಾರಾಷ್ಟ್ರದಲ್ಲಿ ಕಿಡಿ ಹಚ್ಚಿರುವುದಂತೂ ಸುಳ್ಳಲ್ಲ. ಈಗಲೂ ನಟಿಯ ಹೇಳಿಕೆ ವಿರುದ್ಧ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಸೆ.9ರಂದು ಮುಂಬೈಗೆ ಬರುತ್ತೇನೆ ಎಂದು ಕಂಗನಾ ಹೇಳಿದ್ದಾರೆ. ಅವರು ವಿರುದ್ಧ ಅಂದು ಏನೇನು ಘಟನೆಗಳು ನಡೆಯುತ್ತವೆಯೋ ಎಂಬುದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.