Homeಮುಖಪುಟಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಮಿಸ್ ರಣಾವತ್, ನೀವು ಎಂದಾದರೂ ನಿಮ್ಮ ಮನೆಯ ಚರಂಡಿಯನ್ನು ಸ್ವಚ್ಚಗೊಳಿಸುವವರ ಜಾತಿ ಕೇಳಿದ್ದೀರಾ? ನಾನು ಹೇಳುತ್ತೇನೆ ಕೇಳಿ, ಅವರೆಲ್ಲರೂ ದಲಿತರೇ...

- Advertisement -
- Advertisement -

ಪ್ರೀತಿಯ ಕಂಗನಾ,

ಈ ಪತ್ರವು ನಿನಗೆ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಿನ್ನ ಟ್ವೀಟ್‌ಗೆ ಪ್ರತಿಕ್ರಿಯಿಸಲು ಬಯಸಿದ್ದೇನೆ.

ಆಗಸ್ಟ್ 23 ರಂದು ’ದಿ ಪ್ರಿಂಟ್’ ನ ಸಂಸ್ಥಾಪಕ ಶೇಖರ್ ಗುಪ್ತರವರು ಪತ್ರಕರ್ತ ದಿಲೀಪ್ ಮಂಡಲ್‌ರವರ ಲೇಖನ ‘oprah winfrey sent a book on caste to 100 US CEO’s but Indians still wont talk about it’ ಅನ್ನು ಹಂಚಿಕೊಂಡಿದ್ದರು.

ನೀನದಕ್ಕೆ ಪ್ರತಿಕ್ರಿಯಿಸುತ್ತಾ ಜಾತಿಪದ್ಧತಿಯನ್ನು ಆಧುನಿಕ ಭಾರತೀಯರು ತಿರಸ್ಕರಿಸಿದ್ದು, ಅದನ್ನು ಕಾನೂನು ಮತ್ತು ಸುವ್ಯವಸ್ಥೆ ಒಪ್ಪಿಕೊಳ್ಳುವುದಿಲ್ಲವೆಂಬುದು ಸಣ್ಣ ಪಟ್ಟಣದ ಪ್ರತಿಯೊಬ್ಬರಿಗೂ ತಿಳಿದಿದೆ ಹಾಗೂ ಅದು ಕೆಲವರಿಗಷ್ಟೇ ವಿಕೃತಿ ಆನಂದವನ್ನು ನೀಡುತ್ತಿದೆ. ನಮ್ಮ ಸಂವಿಧಾನ ಮಾತ್ರ ಮೀಸಲಾತಿಯ ವಿಷಯದಲ್ಲಿ ಅದನ್ನು ಹಿಡಿದಿಟ್ಟುಕೊಂಡಿದೆ, ಅದನ್ನು ಹೋಗಲು ಬಿಟ್ಟು ಅದರ ಬಗ್ಗೆ ಮಾತನಾಡೋಣ ಎಂದು ಬರೆದಿರುವೆ. ಮುಂದುವರೆದು ವಿಶೇಷವಾಗಿ ವೈದ್ಯರು, ಇಂಜಿನಿಯರ್, ಪೈಲಟ್ ವೃತ್ತಿಗಳಿಗೆ ಹೆಚ್ಚು ಅರ್ಹರಾದ ವ್ಯಕ್ತಿಗಳು ಮೀಸಲಾತಿಯಿಂದಾಗಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಂದು ರಾಷ್ಟ್ರವಾಗಿ ನಾವು ಕಳಪೆ ಮತ್ತು ಚುರುಕುತನ ಎರಡರಿಂದಲೂ ಬಳಲುತ್ತಾ ಇಷ್ಟವಿಲ್ಲದಿದ್ದರೂ ಯುನೈಟೆಡ್ ಸ್ಟೇಟ್ಸ್‌ಗೆ ಓಡಿಹೋಗುತ್ತಿದ್ದೇವೆ.. ನಾಚಿಕೆಗೇಡು.. ಎಂದಿರುವೆ.

ಕಂಗನಾ
Image Courtesy: Dhruv Rathee Facebook

ನಾನು ದಲಿತ ಸಮುದಾಯದಿಂದ ಬಂದವಳಾಗಿದ್ದೇನೆ. ನನ್ನ ಕುಟುಂಬದಲ್ಲಿ ವಿದ್ಯಾಭ್ಯಾಸದ ಜೊತೆಗೆ ಎಂ.ಫಿಲ್ ಮಾಡಿದವರಲ್ಲಿ ನಾನೇ ಮೊದಲಿಗಳು. ನನ್ನ ಪೋಷಕರು ಪೌರ ಕಾರ್ಮಿಕರು. ಈಗಲೂ ನನ್ನ ತಾಯಿ ಅದನ್ನು ಮುಂದುವರೆಸಿದ್ದಾರೆ. ಕೆಂಡದಂತೆ ಉರಿಯುತ್ತಿರುವ ಬೇಸಿಗೆಯ ಬಿಸಿಲಿನಲ್ಲಿ ಅವರು ಬಹಳಷ್ಟು ಮರಳು ಮತ್ತು ಕಲ್ಲುಗಳನ್ನು ಕಟ್ಟಡದ ಕೆಲಸಗಳಿಗಾಗಿ ಹೊರುತ್ತಾರೆ. ನನ್ನ ತಂದೆ ತಾಯಿಯು ವಿದ್ಯಾಭ್ಯಾಸ ಮಾಡಿದವರಲ್ಲ, ಆದರೆ ತಮ್ಮ ಮಕ್ಕಳಿಗಾಗಿ ವಿದ್ಯೆಯನ್ನು ಕಲಿಸಲು ಯಾವುದಾದರೂ ಒಂದು ದಾರಿಯನ್ನು ಖಚಿತವಾಗಿ ಹುಡುಕಿಕೊಡುತ್ತಾರೆ.

ನನ್ನ ಒಡಹುಟ್ಟಿದವರಲ್ಲಿ ನಾನೇ ಹೆಚ್ಚು ಓದಿರುವುದು. ಚಿಕ್ಕವಯಸ್ಸಿನಲ್ಲಿಯೇ ನನನಗೆ ಭರವಸೆಯಿತ್ತು, ಎಲ್ಲಿಯವರೆಗೆ ಅವಕಾಶವಾಗುತ್ತದೆಯೋ ಅಲ್ಲಿಯವರೆಗೆ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆಂದು. ಆದರೆ ದಿನಗಳು ಕಳೆಯುತ್ತಾ ನನಗೆ ತಿಳಿಯಿತು. ನನ್ನ ಜೀವನದಲ್ಲಿ ಏರುತ್ತಿರುವ ಏಣಿಯು ಮುಳ್ಳು ಹಾಗೂ ಸಿಕ್ಕುಗಳಿಂದ ಕೂಡಿಕೊಂಡಿದೆ ಎಂದು. ನೀನು ನಂಬಿರುವೆ, ಆಧುನಿಕ ಭಾರತೀಯರು ಜಾತಿಪದ್ಧತಿಯನ್ನು ನಿರಾಕರಿಸಿದ್ದಾರೆಂದು. ಆದರೆ ಇಂದಿಗೂ ಕೂಡ ಪ್ರಗತಿಪರ-ಉದಾರವಾದಿ ಅಂತಾರಾಷ್ಟ್ರೀಯ ಮಾದ್ಯಮ ಸಂಸ್ಥೆಗಳಲ್ಲಿನ ಆಧುನಿಕ ಭಾರತೀಯರು ಜಾತಿಪದ್ಧತಿಯನ್ನು ಆಚರಿಸುತ್ತಾರೆ. ಒಂದೇ ತಂಡದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರು ನನ್ನನ್ನು ಸಮಾನಳಾಗಿ ಕಾಣಲಾರರು. ಆದ್ದರಿಂದ ಅಲ್ಲಿ ನಾನು ಹೆಚ್ಚು ಕಾಲ ಕೆಲಸ ಮಾಡಲಾರೆ. ಏಕೆಂದರೆ ನಾನು ’ದಲಿತೆ’ ಎಂಬುದನ್ನು ನಂಬುತ್ತೇನೆ.

ಸಿನೆಮಾ ರಂಗದಲ್ಲಿ ಒಂದೇ ಒಂದು ತಳಸಮುದಾಯದ ಎದ್ದುಕಾಣುವ ಹೆಸರಿಲ್ಲ. ಆಧುನಿಕ ಭಾರತೀಯರು ಜಾತಿಪದ್ಧತಿಯನ್ನು ತಿರಸ್ಕರಿಸಿದ್ದರೆ ಅದೇಕೆ ಹೀಗಾಗುತ್ತಿತ್ತು?

ಕಂಗನಾ, ಜಾತಿಯನ್ನು ತಿರಸ್ಕರಿಸುವುದು ಎಂದರೇನು? ಇದನ್ನೊಮ್ಮೆ ಅರ್ಥ ಮಾಡಿಕೊಳ್ಳೋಣ. ಮೊದಲು ನೀನು ನಿನ್ನ ರಜಪೂತ ಹಿರಿಮೆಯನ್ನು ತಿರಸ್ಕರಿಸು. ನಿನ್ನಂತೆ ತಮ್ಮ ಅಸ್ಮಿತೆಗಳಿಗೆ ಹೆಮ್ಮೆ ಪಡುವವರು ಮತ್ತೊಂದು ಸಮುದಾಯದ ಹೆಸರನ್ನೇ ಬೈಗುಳವನ್ನಾಗಿ ಬಳಸುತ್ತಿರುತ್ತಾರೆ. ನಿನಗಿದು ನೆನಪಿದೆಯೇ ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಮತ್ತು ಯುವರಾಜ್ ಸಿಂಗ್‌ನಂತಹ ಆಧುನಿಕ ಭಾರತೀಯರು ’ಭಂಗಿ’ಯಂತೆ ಕಾಣುತ್ತೇನೆಂದು ಹೇಳಿಕೊಂಡಿದ್ದರು. ನಿಜವಾಗಿಯೂ ಆ ಹೆಸರಿನ ಜನರಿದ್ದಾರೆ. ಆ ಕಾರಣಕ್ಕಾಗಿಯೇ ಆಧುನಿಕ ಭಾರತೀಯರಿಂದ ಹೀಗೆ ನಿಂದನೆಗೊಳಗಾಗುತ್ತಾರೆ.

ಇಂತಹ ಘಟನೆಗಳು ಖಾಸಗಿ ಕ್ಷೇತ್ರದ ತುಂಬಾ ಹಬ್ಬಿಕೊಂಡಿದೆ. ಭಾರತದ ಸುಪ್ರಿಂ ಕೋರ್ಟಿನ 31 ನ್ಯಾಯಾಧೀಶರಲ್ಲಿ ಒಬ್ಬರು ಮಾತ್ರ ದಲಿತರಿದ್ದಾರೆ. ಇಬ್ಬರು ಹಿಂದುಳಿದ ವರ್ಗದವರಿದ್ದಾರೆ. ಒಬ್ಬ ಆದಿವಾಸಿಯೂ ಇಲ್ಲ. ಪ್ರಮುಖ ಮಾಧ್ಯಮ ರಂಗದಲ್ಲಿ ಒಬ್ಬರೂ ದಲಿತ ಸಂಪಾದಕರಿಲ್ಲ. ನಾವು ಕಾಲಿಡಲು ಇರುವ ಸ್ಥಳಾವಕಾಶವೆಂದರೆ ಸರ್ಕಾರಿ ಕ್ಷೇತ್ರ ಒಂದೇ. ಏಕೆಂದರೆ ಅಲ್ಲಿ ಮೀಸಲಾತಿ ಇದೆ.

ನವ ದೆಹಲಿಯಲ್ಲಿ ಬೆಳೆದು ದೊಡ್ಡವಳಾಗಿರುವ ನಾನು ನನ್ನ ಸ್ವಂತ ಅನುಭವದಿಂದ ಮೀಸಲಾತಿಯ ಪ್ರಾಮುಖ್ಯತೆಯನ್ನು ಹೇಳಬಲ್ಲೆ. ಶಿಕ್ಷಣ ಪಡೆಯುವುದಿರಲಿ ಅಥವಾ ಮೀಸಲಾತಿ ಸೌಲಭ್ಯಗಳನ್ನು ಗಳಿಸುಕೊಳ್ಳುವುದು ಒತ್ತಟ್ಟಿಗಿರಲಿ, ಕೋಟಿಗಟ್ಟಲೆ ದಲಿತ ಮತ್ತು ಹಿಂದುಳಿದ ಜಾತಿಗಳ ಜನರು ಸವರ್ಣೀಯ ಮೇಲ್ಜಾತಿ ಜನರೆದುರು ಮಾತನಾಡಲೂ ಸಹ ಹೆದರುತ್ತಾರೆ.

ಮಿಸ್ ರಣಾವತ್, ನೀವು ಎಂದಾದರೂ ನಿಮ್ಮ ಮನೆಯ ಚರಂಡಿಯನ್ನು ಸ್ವಚ್ಚಗೊಳಿಸುವವರ ಜಾತಿ ಕೇಳಿದ್ದೀರಾ? ನಾನು ಹೇಳುತ್ತೇನೆ ಕೇಳಿ, ಅವರೆಲ್ಲರೂ ದಲಿತರೇ. ತಮ್ಮನ್ನು ತಾವು ಮೇಲ್ಜಾತಿ ಎಂದುಕೊಳ್ಳುವವರು ನಿನಗಾಗಿ ಈ ಕೆಲಸವನ್ನು ಏಕೆ ಮಾಡುವುದಿಲ್ಲ. ಆ ಅಮಾನವೀಯ ಕೆಲಸಗಳಲ್ಲಿ ಏಕೆ ಬದುಕಿ ಸಾಯುವುದಿಲ್ಲ? ನಮ್ಮ ಸಮಾಜದ ಇಂತಹ ನೈಜತೆಗಳನ್ನು ತಿಳಿಯುವುದು ಕಷ್ಟಸಾಧ್ಯ.


ಇದನ್ನೂ ಓದಿ: ಕಂಗನಾ, ಪದ್ಮಶ್ರೀ ಮತ್ತು ತುಕ್ಡೇಗ್ಯಾಂಗ್


ಈಗಲೂ ನಿನಗೆ ಮನವರಿಕೆಯಾಗದಿದ್ದರೆ, ಯಾವುದಾದರೂ ದಿನ ಪತ್ರಿಕೆಯನ್ನು ಆಯ್ದುಕೋ. ನಾನು ಖಾತರಿ ನೀಡುತ್ತೇನೆ. ನಿನಗೆ ಒಂದಾದರೂ ಜಾತಿಯಾಧಾರಿತ ದೌರ್ಜನ್ಯದ ವರದಿ ಸಿಗುತ್ತದೆ. ಜಾತಿ ಕಾರಣಕ್ಕೆ ಕೊಲೆಯಾಗುತ್ತವೆ. ಅದರಲ್ಲಿ ಕೆಲವು ’ಸಾಂಸ್ಥಿಕ ಕೊಲೆಗಳು’. ವಿದ್ಯಾರ್ಥಿಗಳಾದ ರೋಹಿತ್ ವೇಮುಲಾ ಹಾಗೂ ಪಾಯಲ್ ತಾಡ್ವಿ ಇಬ್ಬರನ್ನೂ ಜಾತೀಯ ಸಮಾಜ ಆತ್ಮಹತ್ಯೆಗೆ ದೂಡಿತು. ನಾನು ಇವರ ಹೆಸರಿನೊಂದಿಗೆ ಇನ್ನಷ್ಟು ಸೇರಿಸುವ ಹಾದಿಯಲ್ಲಿದ್ದೇನೆ. ಆಧುನಿಕ ಭಾರತೀಯರು ನಮ್ಮನ್ನು ಕೀಳಾಗಿ ನೋಡುವ ಹಾಗೂ ಕಿರುಕುಳ ನೀಡುವ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಅದಾಗ್ಯೂ ಇಂತಹ ಧಮನಗಳನ್ನು ಮೀರಿ ಬೆಳೆದಾಗಲೂ ಸಮಾಜ ನಮ್ಮಿಂದ ಆ ಯಶಸ್ಸನ್ನು ಕಿತ್ತುಕೊಳ್ಳಲು ಸಂಚು ರೂಪಿಸುತ್ತಲೇ ಇರುತ್ತದೆ.

ಕಂಗನಾ
Image Courtesy: News Click

ಇತ್ತೀಚೆಗೆ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ‘Waiting for VISA’ ವನ್ನು ಓದಿದೆ. ಅದರಲ್ಲಿ ಕೇವಲ ಜಾತಿಯ ಕಾರಣಕ್ಕೆ ಅವರ ಪದವಿಗಳು, ಅವರ ಅರ್ಹತೆ, ಅವರ ಶಿಕ್ಷಣ, ಅವರ ಸಾಮರ್ಥ್ಯ ಎಲ್ಲವನ್ನೂ ಗುಡಿಸಿ ಹಾಕಲಾಗಿತ್ತು. ಆ ಖಚಿತ ಅನುಭವಗಳೇ ಸಂವಿಧಾನದಲ್ಲಿ ಮೀಸಲಾತಿಯನ್ನು ಪ್ರತಿಷ್ಠಾಪಿಸಿತು. ಹಾಗಿಲ್ಲದಿದ್ದರೆ ತಳಸಮುದಾಯದವರು ಎಂದಿಗೂ ಮುನ್ನಡೆಯಲು ಸಾಧ್ಯವಾಗುತ್ತಿರಲಿಲ್ಲ. ನಾನು ಇಷ್ಟು ದೂರ ಇಲ್ಲಿಯವರೆಗೂ ಬಂದಿರುವುದಕ್ಕೆ ಕಾರಣ ಮೀಸಲಾತಿಯಾಗಿದೆ. ಅವರಿದ್ದಿದ್ದಕ್ಕೆ ನಾವಿಂದು ಬದುಕಿದ್ದೇವೆ.

ಸಮಾಜ ಹೇಳುತ್ತದೆ, ನನ್ನ ಸಮುದಾಯದವರಿಗೆ ಕನಸು ಕಾಣುವ ಹಕ್ಕಿಲ್ಲವೆಂದು. ಅದಾಗ್ಯೂ ನಾವು ಶಿಕ್ಷಣ ಪಡೆದು ಒಳ್ಳೆಯ ಜೀವನ ಕಟ್ಟಿಕೊಂಡರೆ ’ಆಧುನಿಕ’ ಭಾರತೀಯರು ನಮ್ಮ ಅವನತಿಗೆ ಹವಣಿಸುತ್ತಿರುತ್ತಾರೆ. ನಾನೊಬ್ಬಳು ಬಲಿಪಶು, ಈ ಸತ್ಯ ನುಡಿಯಲು ನನಗೆ ಭಯವಿಲ್ಲ. ಏಕೆಂದರೆ ಆ ಶಕ್ತಿಯನ್ನು ನಾನು ಬಾಬಾಸಾಹೇಬರ ಸಂವಿಧಾನದಿಂದ ಪಡೆದಿದ್ದೇನೆ.

ಮೀಸಲಾತಿಯು ಕೊನೆಗೊಳ್ಳಬೇಕೆಂದರೆ, ನಿನ್ನ ಮತ್ತು ನಿನ್ನಂತಹ ಮೇಲ್ಜಾತಿಯೆಂದು ಕರೆಯಲ್ಪಡುವವರ ಬದಲಾವಣೆಯಿಂದ ಮಾತ್ರ. ನಿನಗೆ ತಲುಪಿರುವ ಎಲ್ಲಾ ಪ್ರತಿಕ್ರಿಯೆಗಳು ನಿನಗಿದರ ಬಗ್ಗೆ ಯೋಚಿಸಲು ಸಹಾಯ ಮಾಡುತ್ತವೆ ಎಂದು ಭಾವಿಸುತ್ತೇನೆ.

ಇಂತಿ ನಿನ್ನ
ಮೀನಾ ಕೊತ್ವಾಲ್, (ದೆಹಲಿ ಮೂಲದ ಸ್ವತಂತ್ರ ಪತ್ರಕರ್ತೆ)

ಕನ್ನಡಾನುವಾದ : ಸಹನ ಎಸ್, ಸಂಜನ ಎಸ್. ಮೌರ್‍ಯ

ಕೃಪೆ: The Wire


ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...