Homeಕರ್ನಾಟಕಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

- Advertisement -
- Advertisement -

’ಹೊಸ ಧರ್ಮಗಳ ಉದಯ’ ಎಂಬ ಪಾಠದಲ್ಲಿ ’ವೈದಿಕ ಧರ್ಮದಲ್ಲಿನ ದಬ್ಬಾಳಿಕೆಯಿಂದ ಬೇಸತ್ತು ಭಾರತದಲ್ಲಿ ಶೋಷಿತ ಜಾತಿಗಳಿಗೆ ಸೇರಿದವರು ಹೊಸ ಧರ್ಮಗಳಿಗೆ ಸೇರಿದರು’ ಎಂದಿದೆ ಎಂಬ ಕಾರಣಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದರ ಕುರಿತು ಹುಯಿಲೆದ್ದಿತ್ತು. ನಂತರ ಟಿಪ್ಪು ಸುಲ್ತಾನರ ಕುರಿತ ಪಾಠಗಳನ್ನು ಬದಲಿಸುತ್ತೇವೆ ಎಂದರು. ಆನಂತರ ಎಡಪಂಥೀಯರ ಕೆಲವು ಪಠ್ಯಗಳಿದ್ದವು ಎಂದೂ ಹೇಳಿದರು. (ಅಂತಹ ಎಡಪಂಥೀಯರಾದ ಡಾ.ಜಿ.ರಾಮಕೃಷ್ಣ ಅವರು ಬರೆದದ್ದು ಇನ್ನೊಬ್ಬ ಎಡಪಂಥೀಯ ಭಗತ್ ಸಿಂಗ್ ಬಗೆಗೆ ಆಗಿತ್ತು). ಆದರೆ ಮಾಡಿದ್ದು ಮಾತ್ರ ಬೇರೆ. ಈ ಪಠ್ಯಪುಸ್ತಕ ಪರಿಷ್ಕರಣವಾದಿಗಳು ತೆಗೆದ ಹಲವು ಪಾಠಗಳು ಈಗಾಗಲೇ ಚರ್ಚೆಗೆ ಒಳಗಾಗಿವೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳಹೋಗುವುದಿಲ್ಲ. ಸೇರಿಸಿರುವ ಸಂಗತಿಗಳು ನಿಸ್ಸಂದೇಹವಾಗಿ ಅಪಾಯಕಾರಿಯಾದುದಾಗಿವೆ.

ಬಿಜೆಪಿ ಮತ್ತು ಅದರ ಪರಿವಾರವು ನಾರಾಯಣಗುರುಗಳನ್ನು, ಕುವೆಂಪು ಅವರನ್ನು, ಬಾಬಾಸಾಹೇಬ್ ಅಂಬೇಡ್ಕರರನ್ನು, ಮಹಾತ್ಮಾ ಗಾಂಧಿಯವರನ್ನು ತಮ್ಮ ಚಿಂತನೆಯ ಶತ್ರುಗಳೆಂದು ಸಹಜವಾಗಿಯೇ ಭಾವಿಸಿದ್ದಾರೆ. ಹೊರಗೆ ಹೇಳಲಾಗದ್ದನ್ನು ತಮ್ಮ ಶಾಖೆಗಳಲ್ಲಿ ಹೇಳಿಕೊಳ್ಳುತ್ತಾರೆ. ಶಾಖೆಗಳಲ್ಲಿ ಗೋಡ್ಸೆಯ ’ಆರಾಧನೆ’ ಇರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಪಾರ ಪ್ರಮಾಣದ ಸುಳ್ಳುಗಳನ್ನು ಅಲ್ಲಿ ಬಿತ್ತರಿಸಲಾಗುತ್ತದೆ. ಅಂತಹ ಸುಳ್ಳುಗಳನ್ನು ಬೇರೆಬೇರೆ ಪ್ರಮಾಣದಲ್ಲಿ ಸಮಾಜದಲ್ಲೂ ಹರಡಲಾಗಿದೆ. ನಿಧಾನಕ್ಕೆ ಅವುಗಳಿಗೆ ಮಾನ್ಯತೆ ಸಿಕ್ಕಂತೆಲ್ಲಾ ಬಹಿರಂಗವಾಗಿಯೂ ಮಾತನಾಡತೊಡಗುತ್ತಾರೆ. ಇದು ಅವರು ಬಳಸುತ್ತಾ ಬಂದಿರುವ ವಿಧಾನ Modus operandi.

ಅಂತಹದ್ದರಲ್ಲಿ ಒಂದು ಅಂಶ 10ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ಇದೆ. ಅದರ ’ಅಂತಿಮ’ ಪಿಡಿಎಫ್ ಪ್ರತಿ ಈಗ ಲಭ್ಯವಿದ್ದು, ಅದೀಗ ಎಲ್ಲೆಲ್ಲೂ ಓಡಾಡುತ್ತಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ವಿವಿಧ ಭಾಷಾವಾರು ಪ್ರಾಂತಗಳ ಹಕ್ಕುಗಳು ಸಾಮಾನ್ಯವಾಗಿ ಬಿಜೆಪಿ ಮತ್ತದರ ಪರಿವಾರಕ್ಕೆ ಯಾವಾಗಲೂ ಅಪಥ್ಯ. ಅದನ್ನು ಹೊಸಕುವ ಕಾರಣಕ್ಕೇ ಜಿಎಸ್‌ಟಿ ಮಾತ್ರವಲ್ಲದೇ ಹಲವು ರೀತಿಯ ನೀತಿಗಳನ್ನು ಬಿಜೆಪಿ ಜಾರಿಗೆ ತಂದಿರುವುದನ್ನು ನಾವು ನೋಡುತ್ತೇವೆ. ಮೊದಲು ಚಿಂತನೆಯನ್ನು ಹರಿಯಬಿಡಬೇಕು, ನಂತರ ಸಾರ್ವಜನಿಕ ಮಾನ್ಯತೆ ಪಡೆದುಕೊಳ್ಳುವುದು ಮತ್ತು ಅಂತಿಮವಾಗಿ ಅದನ್ನೇ ಅಧಿಕೃತ ಸರ್ಕಾರಿ ನೀತಿ ಮಾಡುವುದು ಗುರಿ. ಈಗಾಗಲೇ ರಾಜ್ಯಗಳ ಹಕ್ಕುಗಳನ್ನು ಸಾಕಷ್ಟು ಕಿತ್ತುಕೊಂಡಿದ್ದರೂ, ರಾಜ್ಯಗಳ ಅಸ್ಮಿತೆಯನ್ನು ಅಳಿಸುವುದು ಸುಲಭವಲ್ಲ. ಅದನ್ನು ಮಾಡಲು ಈಗ ಪಠ್ಯಪುಸ್ತಕವನ್ನೂ ಬಳಸಿಕೊಂಡಿರುವುದು ಎದ್ದು ಕಾಣುತ್ತದೆ. ಕರ್ನಾಟಕತ್ವ ಅಥವಾ ಪ್ರಾದೇಶಿಕ ಚಿಂತನೆಯ ವಿರುದ್ಧ ಎಳೆಯ ಮಕ್ಕಳಲ್ಲೇ ಅಭಿಪ್ರಾಯ ಮೂಡಿಸುವುದು ಅವರ ಉದ್ದೇಶವಾಗಿದೆ. ಅದರ ಭಾಗವಾಗಿ 10ನೇ ತರಗತಿಯ ಸಮಾಜಶಾಸ್ತ್ರ ಪುಸ್ತಕದ ರಾಜ್ಯಶಾಸ್ತ್ರ ಅಧ್ಯಾಯ 6ರಲ್ಲಿ (ಪುಟ ಸಂಖ್ಯೆ 56) ಹೀಗೆ ಹೇಳಲಾಗುತ್ತದೆ.

’ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಢವಾಗಿ ಪ್ರೀತಿಸಿ, ಕೇವಲ ಆ ಭಾಗದ ಬಗ್ಗೆಯೇ ಅತಿಯಾದ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯಬಹುದು. ಭಾರತದಂತಹ ವಿಶಾಲ ರಾಷ್ಟ್ರ ಸಹಜವಾಗಿ ಹಲವಾರು ಪ್ರಾದೇಶಿಕ ವಿಭಿನ್ನತೆಯನ್ನು ಹೊಂದಿದ ದೇಶ. ಒಂದು ನಿರ್ದಿಷ್ಟ ಹಂತದವರೆಗೆ ಈ ಪ್ರಾದೇಶಿಕವಾದ ಸಹನೆಗೆ ಯೋಗ್ಯ ಎನಿಸುತ್ತದೆ. ತಮ್ಮದೇ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸಲು ಈ ಭಾವನೆ ಪ್ರೇರಣೆ ನೀಡುತ್ತದೆ. ಆದರೆ ಈ ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸುತ್ತದೆ. ಆದುದರಿಂದ ಆಯಾಯಾ ಪ್ರದೇಶದ ಜನಸಮುದಾಯ ತಮ್ಮದೇ ಪ್ರಾದೇಶಿಕ ಮನೋಭಾವ ಹೊಂದುವ ಜೊತೆಜೊತೆಗೇ ಸಮಗ್ರ ದೇಶದ ಪ್ರಗತಿಯ ಬಗೆಗೂ ಚಿಂತನೆ ಹರಿಸುವಿಕೆ ಅತ್ಯಗತ್ಯ.

ಆಯಾ ಪ್ರದೇಶಗಳ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಕಟ್ಟುಪಾಡುಗಳು, ಆರ್ಥಿಕ ವಿಚಾರಗಳು, ಸಾಂಸ್ಕೃತಿಕ ವಿಭಿನ್ನತೆಗಳು ಹಾಗೂ ಭೌಗೋಳಿಕ ಪರಿಸರ-ಅಲ್ಲಿನ ಜನಸಮುದಾಯದಲ್ಲಿ ಪ್ರಾದೇಶಿಕವಾದವನ್ನು ಸಹಜವಾಗಿ ಬೆಳೆಸುತ್ತದೆ. ಅತಿಯಾದ ಭಾಷಾಭಿಮಾನವೂ ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿನ ತೆಲಂಗಾಣದ ಭಾಗದ ಪ್ರಾದೇಶಿಕವಾದ ಹೋರಾಟವನ್ನು ಗಮನಿಸಬಹುದು. ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡಾ ದೇಶದ ಅಭಿವೃದ್ಧಿ(ಗೆ) ತೊಡಕಾಗುವ ಸಾಧ್ಯತೆಗಳಿವೆ.’

ಮೇಲ್ನೋಟಕ್ಕೆ ’ಅತಿಯಾದ’ ಪ್ರಾದೇಶಿಕ ಮನೋಭಾವದ ಕುರಿತು ಹೇಳುತ್ತಿದ್ದಾರೆ ಎನಿಸಿದರೂ, ಅಂತಹ ಅತಿಯ ಅಪಾಯವನ್ನು ವಿವರಿಸಲು ಅವರು ಮುಂದಿಡುತ್ತಿರುವ ಉದಾಹರಣೆ ತೆಲಂಗಾಣದ್ದಾಗಿದೆ. ಅದನ್ನು ಪ್ರಸ್ತಾಪಿಸುವ ಹಿಂದಿನ ವಾಕ್ಯದಲ್ಲಿ ’ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ’ ಎಂದು ಹೇಳಲಾಗಿದೆ. ಒಂದು ವೇಳೆ ವಾದಕ್ಕಾಗಿ ತೆಲಂಗಾಣ ಹೋರಾಟದಲ್ಲಿ ಅತಿ ಇತ್ತು ಎಂದು ಒಪ್ಪಿಕೊಂಡರೂ, ಅದರಲ್ಲಿ ’ದೇಶದ ಏಕತೆಗೆ ಧಕ್ಕೆ ಉಂಟಾಗುವ’ ಯಾವ ಅಂಶವಿತ್ತು? ಅವರು ಕೇಳುತ್ತಿದ್ದದ್ದು ಮತ್ತು ಪಡೆದುಕೊಂಡಿದ್ದು ಪ್ರತ್ಯೇಕ ರಾಜ್ಯವನ್ನು ಮಾತ್ರ.

ಅಷ್ಟೇ ಅಲ್ಲದೇ, ಈ ದೇಶದಲ್ಲಿ ಇರುವ ವಿಭಿನ್ನತೆಗಳು ’ಸಹಜವಾಗಿ’ ಪ್ರಾದೇಶಿಕವಾದವನ್ನು ಬೆಳೆಸುತ್ತವೆ ಎಂದು ಈ ಪಠ್ಯದಲ್ಲಿ ಹೇಳಲಾಗುತ್ತದೆ. ಒಂದೆಡೆ ಪ್ರಾದೇಶಿಕವಾದವು ಈ ದೇಶವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಎಂದು ಪಾಠದ ಆರಂಭದಲ್ಲೇ ಹೇಳಲಾಗಿದೆ; ನಂತರ ಅದನ್ನು ದೇಶದ ಏಕತೆಗೆ ಧಕ್ಕೆ ಎನ್ನಲಾಗುತ್ತದೆ; ಜೊತೆಜೊತೆಗೇ ವಿಭಿನ್ನತೆಗಳು ’ಸಹಜವಾಗಿ’ ಇಂತಹ ಒಂದು ಸವಾಲನ್ನು ದೇಶದ ಮುಂದೊಡ್ಡುತ್ತವೆ ಎಂದು ಬಿಂಬಿಸಲಾಗಿದೆ.

ರಾಷ್ಟ್ರೀಯವಾದದ ಕುರಿತು, ಇಡೀ ದೇಶದ ಸಮಗ್ರ ಅಭಿವೃದ್ಧಿಯ ಕುರಿತು ಯಾರಿಗೆ ಪಾಠ ಹೇಳಲಾಗುತ್ತದೆ? ಯಾರು ದೊಡ್ಡ ಪ್ರಮಾಣದ ಸಂಪನ್ಮೂಲ ಸೃಷ್ಟಿಸಿ, ಒಕ್ಕೂಟ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಕೊಡುಗೆ ನೀಡುತ್ತಾ ಇಡೀ ದೇಶದ ಅಭಿವೃದ್ಧಿಗೂ ಕಾರಣರಾಗುತ್ತಿದ್ದಾರೋ ಅವರಿಗೆ. ಅಂದರೆ ತಮಿಳುನಾಡು, ಕರ್ನಾಟಕದಂತಹ ರಾಜ್ಯಗಳಿಗೆ. ಇದನ್ನು ಕರ್ನಾಟಕದ ಶಾಲಾ ಪಠ್ಯಗಳಲ್ಲೇ ತುರುಕುವ ಧಾರ್ಷ್ಟ್ಯವನ್ನು ಪ್ರದರ್ಶಿಸಲು ಸಾಧ್ಯವಾಗಿರುವುದು ಈ ನಾಡಿನ ದುರಂತ.

ಅಂದರೆ ಪಠ್ಯಪುಸ್ತಕ ಪರಿಷ್ಕರಣೆಯೆಂಬುದು ಒಂದು ಬಹುಮುಖಿ ದಾಳಿಯಾಗಿದೆ. ಇದನ್ನು ಹಿಮ್ಮೆಟ್ಟಿಸಲು ಪಣ ತೊಟ್ಟಿರುವವರೂ ಈ ಬಹುಮುಖಿ ಆಯಾಮವನ್ನು ಅರಿತುಕೊಂಡು ತಿರುಗೇಟು ನೀಡುವುದು ಅತ್ಯಗತ್ಯವಾದುದಾಗಿದೆ.


ಇದನ್ನೂ ಓದಿ: ಪಠ್ಯಪುಸ್ತಕ ಮತ್ತು ಮತೀಯವಾದ; ಬ್ರಾಹ್ಮಣವಾದಿ ಮೌಲ್ಯಗಳನ್ನು ಹೇರುವ, ಉಳಿದವರನ್ನು ದಮನಕ್ಕೆ ಗುರಿಮಾಡುವ ಹಾದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...