Homeಕರ್ನಾಟಕಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

- Advertisement -
- Advertisement -

’ಹೊಸ ಧರ್ಮಗಳ ಉದಯ’ ಎಂಬ ಪಾಠದಲ್ಲಿ ’ವೈದಿಕ ಧರ್ಮದಲ್ಲಿನ ದಬ್ಬಾಳಿಕೆಯಿಂದ ಬೇಸತ್ತು ಭಾರತದಲ್ಲಿ ಶೋಷಿತ ಜಾತಿಗಳಿಗೆ ಸೇರಿದವರು ಹೊಸ ಧರ್ಮಗಳಿಗೆ ಸೇರಿದರು’ ಎಂದಿದೆ ಎಂಬ ಕಾರಣಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದರ ಕುರಿತು ಹುಯಿಲೆದ್ದಿತ್ತು. ನಂತರ ಟಿಪ್ಪು ಸುಲ್ತಾನರ ಕುರಿತ ಪಾಠಗಳನ್ನು ಬದಲಿಸುತ್ತೇವೆ ಎಂದರು. ಆನಂತರ ಎಡಪಂಥೀಯರ ಕೆಲವು ಪಠ್ಯಗಳಿದ್ದವು ಎಂದೂ ಹೇಳಿದರು. (ಅಂತಹ ಎಡಪಂಥೀಯರಾದ ಡಾ.ಜಿ.ರಾಮಕೃಷ್ಣ ಅವರು ಬರೆದದ್ದು ಇನ್ನೊಬ್ಬ ಎಡಪಂಥೀಯ ಭಗತ್ ಸಿಂಗ್ ಬಗೆಗೆ ಆಗಿತ್ತು). ಆದರೆ ಮಾಡಿದ್ದು ಮಾತ್ರ ಬೇರೆ. ಈ ಪಠ್ಯಪುಸ್ತಕ ಪರಿಷ್ಕರಣವಾದಿಗಳು ತೆಗೆದ ಹಲವು ಪಾಠಗಳು ಈಗಾಗಲೇ ಚರ್ಚೆಗೆ ಒಳಗಾಗಿವೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳಹೋಗುವುದಿಲ್ಲ. ಸೇರಿಸಿರುವ ಸಂಗತಿಗಳು ನಿಸ್ಸಂದೇಹವಾಗಿ ಅಪಾಯಕಾರಿಯಾದುದಾಗಿವೆ.

ಬಿಜೆಪಿ ಮತ್ತು ಅದರ ಪರಿವಾರವು ನಾರಾಯಣಗುರುಗಳನ್ನು, ಕುವೆಂಪು ಅವರನ್ನು, ಬಾಬಾಸಾಹೇಬ್ ಅಂಬೇಡ್ಕರರನ್ನು, ಮಹಾತ್ಮಾ ಗಾಂಧಿಯವರನ್ನು ತಮ್ಮ ಚಿಂತನೆಯ ಶತ್ರುಗಳೆಂದು ಸಹಜವಾಗಿಯೇ ಭಾವಿಸಿದ್ದಾರೆ. ಹೊರಗೆ ಹೇಳಲಾಗದ್ದನ್ನು ತಮ್ಮ ಶಾಖೆಗಳಲ್ಲಿ ಹೇಳಿಕೊಳ್ಳುತ್ತಾರೆ. ಶಾಖೆಗಳಲ್ಲಿ ಗೋಡ್ಸೆಯ ’ಆರಾಧನೆ’ ಇರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಪಾರ ಪ್ರಮಾಣದ ಸುಳ್ಳುಗಳನ್ನು ಅಲ್ಲಿ ಬಿತ್ತರಿಸಲಾಗುತ್ತದೆ. ಅಂತಹ ಸುಳ್ಳುಗಳನ್ನು ಬೇರೆಬೇರೆ ಪ್ರಮಾಣದಲ್ಲಿ ಸಮಾಜದಲ್ಲೂ ಹರಡಲಾಗಿದೆ. ನಿಧಾನಕ್ಕೆ ಅವುಗಳಿಗೆ ಮಾನ್ಯತೆ ಸಿಕ್ಕಂತೆಲ್ಲಾ ಬಹಿರಂಗವಾಗಿಯೂ ಮಾತನಾಡತೊಡಗುತ್ತಾರೆ. ಇದು ಅವರು ಬಳಸುತ್ತಾ ಬಂದಿರುವ ವಿಧಾನ Modus operandi.

ಅಂತಹದ್ದರಲ್ಲಿ ಒಂದು ಅಂಶ 10ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ಇದೆ. ಅದರ ’ಅಂತಿಮ’ ಪಿಡಿಎಫ್ ಪ್ರತಿ ಈಗ ಲಭ್ಯವಿದ್ದು, ಅದೀಗ ಎಲ್ಲೆಲ್ಲೂ ಓಡಾಡುತ್ತಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ವಿವಿಧ ಭಾಷಾವಾರು ಪ್ರಾಂತಗಳ ಹಕ್ಕುಗಳು ಸಾಮಾನ್ಯವಾಗಿ ಬಿಜೆಪಿ ಮತ್ತದರ ಪರಿವಾರಕ್ಕೆ ಯಾವಾಗಲೂ ಅಪಥ್ಯ. ಅದನ್ನು ಹೊಸಕುವ ಕಾರಣಕ್ಕೇ ಜಿಎಸ್‌ಟಿ ಮಾತ್ರವಲ್ಲದೇ ಹಲವು ರೀತಿಯ ನೀತಿಗಳನ್ನು ಬಿಜೆಪಿ ಜಾರಿಗೆ ತಂದಿರುವುದನ್ನು ನಾವು ನೋಡುತ್ತೇವೆ. ಮೊದಲು ಚಿಂತನೆಯನ್ನು ಹರಿಯಬಿಡಬೇಕು, ನಂತರ ಸಾರ್ವಜನಿಕ ಮಾನ್ಯತೆ ಪಡೆದುಕೊಳ್ಳುವುದು ಮತ್ತು ಅಂತಿಮವಾಗಿ ಅದನ್ನೇ ಅಧಿಕೃತ ಸರ್ಕಾರಿ ನೀತಿ ಮಾಡುವುದು ಗುರಿ. ಈಗಾಗಲೇ ರಾಜ್ಯಗಳ ಹಕ್ಕುಗಳನ್ನು ಸಾಕಷ್ಟು ಕಿತ್ತುಕೊಂಡಿದ್ದರೂ, ರಾಜ್ಯಗಳ ಅಸ್ಮಿತೆಯನ್ನು ಅಳಿಸುವುದು ಸುಲಭವಲ್ಲ. ಅದನ್ನು ಮಾಡಲು ಈಗ ಪಠ್ಯಪುಸ್ತಕವನ್ನೂ ಬಳಸಿಕೊಂಡಿರುವುದು ಎದ್ದು ಕಾಣುತ್ತದೆ. ಕರ್ನಾಟಕತ್ವ ಅಥವಾ ಪ್ರಾದೇಶಿಕ ಚಿಂತನೆಯ ವಿರುದ್ಧ ಎಳೆಯ ಮಕ್ಕಳಲ್ಲೇ ಅಭಿಪ್ರಾಯ ಮೂಡಿಸುವುದು ಅವರ ಉದ್ದೇಶವಾಗಿದೆ. ಅದರ ಭಾಗವಾಗಿ 10ನೇ ತರಗತಿಯ ಸಮಾಜಶಾಸ್ತ್ರ ಪುಸ್ತಕದ ರಾಜ್ಯಶಾಸ್ತ್ರ ಅಧ್ಯಾಯ 6ರಲ್ಲಿ (ಪುಟ ಸಂಖ್ಯೆ 56) ಹೀಗೆ ಹೇಳಲಾಗುತ್ತದೆ.

’ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಢವಾಗಿ ಪ್ರೀತಿಸಿ, ಕೇವಲ ಆ ಭಾಗದ ಬಗ್ಗೆಯೇ ಅತಿಯಾದ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯಬಹುದು. ಭಾರತದಂತಹ ವಿಶಾಲ ರಾಷ್ಟ್ರ ಸಹಜವಾಗಿ ಹಲವಾರು ಪ್ರಾದೇಶಿಕ ವಿಭಿನ್ನತೆಯನ್ನು ಹೊಂದಿದ ದೇಶ. ಒಂದು ನಿರ್ದಿಷ್ಟ ಹಂತದವರೆಗೆ ಈ ಪ್ರಾದೇಶಿಕವಾದ ಸಹನೆಗೆ ಯೋಗ್ಯ ಎನಿಸುತ್ತದೆ. ತಮ್ಮದೇ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸಲು ಈ ಭಾವನೆ ಪ್ರೇರಣೆ ನೀಡುತ್ತದೆ. ಆದರೆ ಈ ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸುತ್ತದೆ. ಆದುದರಿಂದ ಆಯಾಯಾ ಪ್ರದೇಶದ ಜನಸಮುದಾಯ ತಮ್ಮದೇ ಪ್ರಾದೇಶಿಕ ಮನೋಭಾವ ಹೊಂದುವ ಜೊತೆಜೊತೆಗೇ ಸಮಗ್ರ ದೇಶದ ಪ್ರಗತಿಯ ಬಗೆಗೂ ಚಿಂತನೆ ಹರಿಸುವಿಕೆ ಅತ್ಯಗತ್ಯ.

ಆಯಾ ಪ್ರದೇಶಗಳ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಕಟ್ಟುಪಾಡುಗಳು, ಆರ್ಥಿಕ ವಿಚಾರಗಳು, ಸಾಂಸ್ಕೃತಿಕ ವಿಭಿನ್ನತೆಗಳು ಹಾಗೂ ಭೌಗೋಳಿಕ ಪರಿಸರ-ಅಲ್ಲಿನ ಜನಸಮುದಾಯದಲ್ಲಿ ಪ್ರಾದೇಶಿಕವಾದವನ್ನು ಸಹಜವಾಗಿ ಬೆಳೆಸುತ್ತದೆ. ಅತಿಯಾದ ಭಾಷಾಭಿಮಾನವೂ ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿನ ತೆಲಂಗಾಣದ ಭಾಗದ ಪ್ರಾದೇಶಿಕವಾದ ಹೋರಾಟವನ್ನು ಗಮನಿಸಬಹುದು. ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡಾ ದೇಶದ ಅಭಿವೃದ್ಧಿ(ಗೆ) ತೊಡಕಾಗುವ ಸಾಧ್ಯತೆಗಳಿವೆ.’

ಮೇಲ್ನೋಟಕ್ಕೆ ’ಅತಿಯಾದ’ ಪ್ರಾದೇಶಿಕ ಮನೋಭಾವದ ಕುರಿತು ಹೇಳುತ್ತಿದ್ದಾರೆ ಎನಿಸಿದರೂ, ಅಂತಹ ಅತಿಯ ಅಪಾಯವನ್ನು ವಿವರಿಸಲು ಅವರು ಮುಂದಿಡುತ್ತಿರುವ ಉದಾಹರಣೆ ತೆಲಂಗಾಣದ್ದಾಗಿದೆ. ಅದನ್ನು ಪ್ರಸ್ತಾಪಿಸುವ ಹಿಂದಿನ ವಾಕ್ಯದಲ್ಲಿ ’ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ’ ಎಂದು ಹೇಳಲಾಗಿದೆ. ಒಂದು ವೇಳೆ ವಾದಕ್ಕಾಗಿ ತೆಲಂಗಾಣ ಹೋರಾಟದಲ್ಲಿ ಅತಿ ಇತ್ತು ಎಂದು ಒಪ್ಪಿಕೊಂಡರೂ, ಅದರಲ್ಲಿ ’ದೇಶದ ಏಕತೆಗೆ ಧಕ್ಕೆ ಉಂಟಾಗುವ’ ಯಾವ ಅಂಶವಿತ್ತು? ಅವರು ಕೇಳುತ್ತಿದ್ದದ್ದು ಮತ್ತು ಪಡೆದುಕೊಂಡಿದ್ದು ಪ್ರತ್ಯೇಕ ರಾಜ್ಯವನ್ನು ಮಾತ್ರ.

ಅಷ್ಟೇ ಅಲ್ಲದೇ, ಈ ದೇಶದಲ್ಲಿ ಇರುವ ವಿಭಿನ್ನತೆಗಳು ’ಸಹಜವಾಗಿ’ ಪ್ರಾದೇಶಿಕವಾದವನ್ನು ಬೆಳೆಸುತ್ತವೆ ಎಂದು ಈ ಪಠ್ಯದಲ್ಲಿ ಹೇಳಲಾಗುತ್ತದೆ. ಒಂದೆಡೆ ಪ್ರಾದೇಶಿಕವಾದವು ಈ ದೇಶವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಎಂದು ಪಾಠದ ಆರಂಭದಲ್ಲೇ ಹೇಳಲಾಗಿದೆ; ನಂತರ ಅದನ್ನು ದೇಶದ ಏಕತೆಗೆ ಧಕ್ಕೆ ಎನ್ನಲಾಗುತ್ತದೆ; ಜೊತೆಜೊತೆಗೇ ವಿಭಿನ್ನತೆಗಳು ’ಸಹಜವಾಗಿ’ ಇಂತಹ ಒಂದು ಸವಾಲನ್ನು ದೇಶದ ಮುಂದೊಡ್ಡುತ್ತವೆ ಎಂದು ಬಿಂಬಿಸಲಾಗಿದೆ.

ರಾಷ್ಟ್ರೀಯವಾದದ ಕುರಿತು, ಇಡೀ ದೇಶದ ಸಮಗ್ರ ಅಭಿವೃದ್ಧಿಯ ಕುರಿತು ಯಾರಿಗೆ ಪಾಠ ಹೇಳಲಾಗುತ್ತದೆ? ಯಾರು ದೊಡ್ಡ ಪ್ರಮಾಣದ ಸಂಪನ್ಮೂಲ ಸೃಷ್ಟಿಸಿ, ಒಕ್ಕೂಟ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಕೊಡುಗೆ ನೀಡುತ್ತಾ ಇಡೀ ದೇಶದ ಅಭಿವೃದ್ಧಿಗೂ ಕಾರಣರಾಗುತ್ತಿದ್ದಾರೋ ಅವರಿಗೆ. ಅಂದರೆ ತಮಿಳುನಾಡು, ಕರ್ನಾಟಕದಂತಹ ರಾಜ್ಯಗಳಿಗೆ. ಇದನ್ನು ಕರ್ನಾಟಕದ ಶಾಲಾ ಪಠ್ಯಗಳಲ್ಲೇ ತುರುಕುವ ಧಾರ್ಷ್ಟ್ಯವನ್ನು ಪ್ರದರ್ಶಿಸಲು ಸಾಧ್ಯವಾಗಿರುವುದು ಈ ನಾಡಿನ ದುರಂತ.

ಅಂದರೆ ಪಠ್ಯಪುಸ್ತಕ ಪರಿಷ್ಕರಣೆಯೆಂಬುದು ಒಂದು ಬಹುಮುಖಿ ದಾಳಿಯಾಗಿದೆ. ಇದನ್ನು ಹಿಮ್ಮೆಟ್ಟಿಸಲು ಪಣ ತೊಟ್ಟಿರುವವರೂ ಈ ಬಹುಮುಖಿ ಆಯಾಮವನ್ನು ಅರಿತುಕೊಂಡು ತಿರುಗೇಟು ನೀಡುವುದು ಅತ್ಯಗತ್ಯವಾದುದಾಗಿದೆ.


ಇದನ್ನೂ ಓದಿ: ಪಠ್ಯಪುಸ್ತಕ ಮತ್ತು ಮತೀಯವಾದ; ಬ್ರಾಹ್ಮಣವಾದಿ ಮೌಲ್ಯಗಳನ್ನು ಹೇರುವ, ಉಳಿದವರನ್ನು ದಮನಕ್ಕೆ ಗುರಿಮಾಡುವ ಹಾದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...