ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಮರು ಪರಿಷ್ಕರಣಾ ಸಮಿತಿಯನ್ನು ಈ ಕೂಡಲೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಮತ್ತು ಹಿಂದಿನ ಪಠ್ಯಕ್ರಮಗಳನ್ನು ಮುಂದುವರೆಸಬೇಕು ಎಂದು ‘ಜಾಗೃತ ನಾಗರಿಕರು, ಕರ್ನಾಟಕ’ ಬುಧವಾರ ನಿರ್ಣಯಗಳನ್ನು ಅಂಗೀಕರಿಸಿದೆ. ಬೆಂಗಳೂರಿನ ಗಾಂಧೀ ಭವನದಲ್ಲಿ
ಆಯೋಜಿಸಲಾಗಿದ್ದ ಈ ಸಭೆಯಲ್ಲಿ, ಶಿಕ್ಷಣ ತಜ್ಞರು, ಪ್ರಾಧ್ಯಪಕರು, ವಿದ್ಯಾರ್ಥಿ ಸಂಘಗಗಳ ಪ್ರತಿನಿಧಿಗಳು, ಸಾಹಿತಿಗಳು, ಹೋರಾಟಗಾರರು ಹಾಗೂ ಶಾಲಾ ಸಂಘಗಳ ಪ್ರತಿನಿಧಿಗಳು ಸೇರಿದಂತೆ ನಾಡಿನ ಹಲವಾರು ಗಣ್ಯರು ಹಾಜರಿದ್ದರು.
“ಪಠ್ಯ ಪುಸ್ತಕ ರಚನೆ, ಪಠ್ಯ ಪುಸ್ತಕ ಪರಿಷ್ಕರಣೆ, ಪರಿಷ್ಕರಣೆಯ ಪರಿಶೀಲನೆ” ಕುರಿತು ಶಿಕ್ಷಣ ತಜ್ಞರೊಂದಿಗೆ ಸಂವಾದ, ಸಮಾಲೋಚನೆ ನಡೆಯಿತು. ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಎಚ್.ಎಸ್. ರಾಘವೇಂದ್ರ ರಾವ್, ರಾಜೇಂದ್ರ ಚೆನ್ನಿ, ವಸುಂಧರಾ ಭೂಪತಿ, ಬಿ.ಟಿ. ಲಲಿತಾ ನಾಯಕ್, ಟಿ.ಆರ್. ಚಂದ್ರಶೇಖರ್, ಪ್ರಜ್ವಲ್ ಶಾಸ್ತ್ರಿ, ವಿ.ಪಿ. ನಿರಂಜನಾರಾಧ್ಯ, ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ, ಬಿ. ರಾಜಶೇಖರಮೂರ್ತಿ, ಬಿ. ಶ್ರೀಪಾದ್ ಭಟ್ ಮತ್ತಿತರರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಮಾಲೋಚನೆ ಸಭೆಯ ನಂತರ ಭಾಗವಹಿಸಿದವರ ಅಭಿಪ್ರಾಯಗಳ ಆಧಾರದಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, “ರೋಹಿತ ಚಕ್ರತೀರ್ಥ ಅಧ್ಯಕ್ಷತೆಯ ಮರು ಪರಿಷ್ಕರಣಾ ಸಮಿತಿಯನ್ನು ಈ ಕೂಡಲೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ಕೊಡಬೇಕು” ಎಂದು ಸಭೆಯು ಅಗ್ರಹಿಸಿದೆ.
ಅಲ್ಲದೆ, ಈ ಹಿಂದಿನ ಪಠ್ಯಕ್ರಮವನ್ನು ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದ್ದು, ಶಿಕ್ಷಣ ತಜ್ಞರು, ಚಿಂತಕರು, ಶಿಕ್ಷಕರು ಜೊತೆಗೂಡಿ ‘ಮಾದರಿ ಪರ್ಯಾಯ ಪಠ್ಯಕ್ರಮ’ವನ್ನು ರೂಪಿಸಬೇಕು ಎಂದು ಸಭೆಯು ನಿರ್ಣಯಿಸಿದೆ.
ಇದನ್ನೂ ಓದಿ: ನಾಗೇಶ್ರವರನ್ನು ನಾಗ್ಪುರದ RSS ದಾರಿ ತಪ್ಪಿಸಿದೆಯೇ? ದೇವನೂರ ಮಹಾದೇವ ಪ್ರಶ್ನೆ
“ವಿದ್ಯಾರ್ಥಿಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಚರ್ಚೆ, ಸಂವಾದ ಹಮ್ಮಿಕೊಳ್ಳಬೇಕು. ಶಿಕ್ಷಣದ ಭಾಗೀದಾರರಾದ ಪೋಷಕರೊಂದಿಗೆ ಸಮಾಲೋಚನೆ ನಡೆಸಬೇಕು. ಅವರಿಗೆ ಈ ವಿವಾದಿತ ಪಠ್ಯಕ್ರಮ ಪರಿಶೀಲನಾ ಸಮಿತಿಯ ಆಯ್ಕೆಗಳ ಅಪಾಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ಸಭೆಯು ನಿರ್ಣಯ ತೆಗೆದುಕೊಂಡಿದೆ.
ಮಕ್ಕಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕ ದೊರಕಿಸಿಕೊಡುವ ಬದಲು ವಿವಾದ ಎಬ್ಬಿಸಿ ಪುಸ್ತಕ ಸಿಗದಂತೆ ಸರಕಾರವೇ ಮಾಡಿರುವುದನ್ನು ಸಮಾಲೋಚನಾ ಸಭೆಯು ಖಂಡಿಸಿದ್ದು, “ನೂರಾರು ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲಾರದ ಸರಕಾರ ಪಠ್ಯ ಪುಸ್ತಕಗಳ ಮುದ್ರಣ,ಮರು ಮುದ್ರಣ ದ ಹೆಸರಿನಲ್ಲಿ ಕೋಟಿ ಗಟ್ಟಲೆ ಜನರ ತೆರಿಗೆ ಹಣವನ್ನು ಅಪವ್ಯಯ ಮಾಡುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದೆ.
Rohit committee must be dismissed with an immediate effect. And new committee should be formed from experts personals including lady, dalit, Obc, minority, and from general.
ರೋಹಿತ್ ಚಕ್ರತೀರ್ಥ ಕಮಿಟಿಯನ್ನು ರದ್ದು ಮಾಡಿ ಮತ್ತು ಶಿಕ್ಷಣ ಸಚಿವರನ್ನು ವಜಾ ಮಾಡಬೇಕು. ಇದು, ಈ ಸರ್ಕಾರ ತಾನೇ ಮಾಡಿಕೊಂಡ ತಪ್ಪಿನ ಚಿಕ್ಕ ಪ್ರಾಯಶ್ಚಿತ್ತ.
Edu sareyada ninrnayawalla
Badalawanay beku rohith ಚಕ್ರವರ್ತಿ cammiti raddaga baradu