Homeನ್ಯಾಯ ಪಥಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

ಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

- Advertisement -
- Advertisement -

ಕರ್ನಾಟಕದ ಮಕ್ಕಳು ಓದುವ ಪಠ್ಯ ತಿದ್ದಿರುವ ವಿಷಯದಲ್ಲಿ ಎಲ್ಲ ಊರುಗಳಿಗಿಂತಲೂ ತಿಪಟೂರು ವ್ಯಗ್ರಗೊಂಡಿದೆ, ಯಾಕೆಂದರೆ ತಿಪಟೂರು ಶಿಕ್ಷಣ ಸಚಿವರಾಗಿರುವ ಬಿ. ಸಿ ನಾಗೇಶರ ಕ್ಷೇತ್ರ. ಇಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಓಬಿಸಿಗಳು ಪ್ರಬಲವಾಗಿದ್ದರೂ ಎರಡು ಸಾವಿರ ಮತಗಳನ್ನು ದಾಟದ ಬ್ರಾಹ್ಮಣ ಸಮುದಾಯದ ನಾಗೇಶರನ್ನು ಶಾಸಕರನ್ನಾಗಿ ತಿಪಟೂರು ಎರಡು ಬಾರಿ ಆರಿಸಿಕೊಂಡಿದೆ. ಆ ದಿಸೆಯಲ್ಲಿ ಇಲ್ಲಿನ ಮತದಾರರು ತಾವೆಷ್ಟು ಜಾತ್ಯತೀತ ಮನಸ್ಸಿನವರು ಎಂದು ಸಾಬೀತುಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ನಾಗೇಶ್ ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸುತ್ತ ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುತ್ತಿದ್ದುದು; ಎಲ್ಲರ ಭುಜದ ಮೇಲೆ ಕೈಹಾಕಿ ಮಾತನಾಡಿಸುತ್ತ ನಾನೂ ನಿಮ್ಮವನು ಎಂಬಂತೆ ನಡೆದುಕೊಂಡಿದ್ದರು. ಇದು ಮೊದಲು ಗೆದ್ದಾಗಿನ ಕತೆ. ಆದರೀಗ ತಾವು ಗೆದ್ದುಬಂದಿರುವುದೇ ಬ್ರಾಹ್ಮಣ್ಯದ ಹಿತ ಕಾಯಲು ಎಂಬಂತೆ ಶಿಕ್ಷಣ ಮಂತ್ರಿಯಾದಂದಿನಿಂದ ನಡೆದುಕೊಂಡು ಬರುತ್ತಿದ್ದಾರೆ. ಅಧಿಕಾರವಿಲ್ಲದಾಗ ವಿನಯವಂತನ ಸೋಗು ಹಾಕಿದ್ದ ನಾಗೇಶ್ ಶಿಕ್ಷಣ ಸಚಿವನೆಂಬ ಆಯುಧ ಸಿಕ್ಕ ಕೂಡಲೇ ಮಕ್ಕಳ ಮೇಲೆ ಕಂಸನಂತೆ ಎಗರಿದ್ದಾರೆ, ಜೊತೆಗೆ ಜನರಿಗೆ ಮತ್ತು ಮಾಧ್ಯಮಕ್ಕೆ ಸುಳ್ಳು ಹೇಳುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಠ್ಯಪರಿಷ್ಕರಣ ಸಮಿತಿ ಅಧ್ಯಕ್ಷನ ಪರ ಇವರು ವಹಿಸುವ ವಕಾಲತ್ತು ಅಪ್ರಭುದ್ದತೆಯಿಂದ ಕೂಡಿದೆ. ಇವೆಲ್ಲದರಿಂದ ಸಹಜವಾಗಿ ತಿಪಟೂರಿನ ಪ್ರಜ್ಞಾವಂತರು ಕೆರಳಿದ್ದಾರೆ.

ಆದ್ದರಿಂದ ಜಾಗೃತ ತಿಪಟೂರು ಎಂಬ ವೇದಿಕೆ ನಿರ್ಮಿಸಿಕೊಂಡು ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿಯ ಸಹಯೋಗದಿಂದ ಒಂದು ವಾರ ಕಾಲ ತಿಪಟೂರಿನ ಹಳ್ಳಿಗಳಿಗೆ ಜಾಥಾ ಮಾಡಿದರು. ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಗಳನ್ನ ಹಳ್ಳಿಗಳಿಗೆ ತಲುಪಿಸಿದ ನಂತರ ಅಂತಿಮವಾಗಿ ಕಳೆದ ಭಾನುವಾರ ತಿಪಟೂರಿನಲ್ಲಿ ಪ್ರತಿಭಟನಾ ಜಾಥಾ ಮತ್ತು ಸಭೆ ಏರ್ಪಡಿಸಿದ್ದರು. ಮಂಡ್ಯದಿಂದ ಬಂದಿದ್ದ ಡಾ.ರವೀಂದ್ರ ಅವರು ತಿಪಟೂರಿನ ನಡುರಸ್ತೆಯಲ್ಲಿ ಜೋರು ದನಿಯಲ್ಲಿ “ಪುರಾಣಗಳನ್ನ ಸೃಷ್ಟಿಸಿಕೊಂಡು ಅವುಗಳನ್ನೇ ಸಾಮಾನ್ಯರ ಮೇಲೆ ಹೇರುತ್ತ ಸಾವಿರಾರು ವರ್ಷದಿಂದ ಮುಗ್ಧ ಮನಸ್ಸುಗಳನ್ನು ವಂಚಿಸಿದ್ದು ಸಾಕು. ಈ ಕೆಲಸ ಇನ್ನ ಮುಂದೆ ನಡೆಯುವುದಿಲ್ಲ. ಸುತ್ತಿಬಳಸಿ ಮಾತನಾಡುವ ಅಗತ್ಯವಿಲ್ಲ. ನಾಗೇಶ್ ಒಬ್ಬ ಬ್ರಾಹ್ಮಣ. ಅವರು ನೇಮಿಸಿದ ಪಠ್ಯಪರಿಷ್ಕರಣ ಸಮಿತಿಯಲ್ಲಿ ಒಂಭತ್ತು ಜನ ಬ್ರಾಹ್ಮಣರಿದ್ದಾರೆ. ನಿಮ್ಮ ಜಾತಿಹಿಡಿದು ಮಾತನಾಡದೆ ಬೇರೆ ದಾರಿಯಿಲ್ಲ ಎಂದರು. ಇನ್ನ ವೇದಿಕೆಯಲ್ಲಿ ಮಾತನಾಡಿದ ಕೋಟಗಾನಹಳ್ಳಿ ರಾಮಯ್ಯ “ಆರೆಸ್ಸೆಸ್ ಸಂಘಟನೆಯೇ ಒಂದು ದೇಶದ್ರೋಹಿ ಸಂಘಟನೆ. ಅದರಿಂದ ಸಮಾನತೆ ಸಾಧ್ಯವಿಲ್ಲ; ದೇಶಕಟ್ಟುವ ಕೆಲಸಬಿಟ್ಟು ಜನಿವಾರದ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಮನುಧರ್ಮದ ಗ್ರಂಥ ಸುಟ್ಟಂತೆ ನಾವು ಈ ಸರಕಾರ ರೂಪಿಸಿದ ವಿಕೃತ ಪಠ್ಯಪುಸ್ತಕ (ಪರಿಷ್ಕರಣೆ ಮಾಡಿರುವ) ಸುಡೋಣ. ನಮ್ಮ ಮೈಸೂರು ಅರಸರ ಫೋಟೊ ಬದಲು ಶಿವಾಜಿ ಫೋಟೊ ತೋರಿಸುತ್ತಾರೆ.

ಮರಾಠರಿಂದ ಕರ್ನಾಟಕದ ಮೇಲೆ ನಡೆದ ದಾಳಿಗಳ ಇತಿಹಾಸ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಇತಿಹಾಸ ತಿರುಚುತ್ತಾ ಅಂಬೇಡ್ಕರ್, ಗಾಂಧಿ, ಕುವೆಂಪು ಅವರಿಗೆ ಅಗೌರವ ತೋರಿದ್ದಾರೆ. ಇವರು ತಿರುಚಿರುವ ಪಠ್ಯವನ್ನು ಸುಡುವುದು ನಮ್ಮ ಕರ್ತವ್ಯ ಎಂದರು.

ಇನ್ನ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರ ಮುನಿ ಸ್ವಾಮೀಜಿ, “ಈ ಸರಕಾರ ಪಠ್ಯಪುಸ್ತಕಗಳ ವಿಷಯದಲ್ಲಿ ಅಕ್ಷರಗಳಿಗೆ ಬಣ್ಣ ಬಳಿಯತೊಡಗಿದೆ. ನಾವು ಕೇಳುತ್ತಿರುವುದು ಪಠ್ಯವನ್ನ ಸರಿಯಾಗಿ ರೂಪಿಸಿ ಎಂದು. ತಾವೇ ಬದಲಾಯಿಸಿದ ಪಠ್ಯದಲ್ಲಿನ ತಪ್ಪು ಕೃತ್ಯಗಳನ್ನ ಒಪ್ಪಿಕೊಂಡರೂ, ಹಿಂತೆಗೆದುಕೊಳ್ಳದೆ ಸರಕಾರ ಕಾಲ ದೂಡುತ್ತಿದೆ, ಹಠಕ್ಕೆ ಬಿದ್ದಿದೆ. ಶಿಕ್ಷಣ ಸಚಿವ ಮಾಡುವುದೆಲ್ಲವನ್ನು ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಮಕ್ಕಳ ಭವಿಷ್ಯದ ವಿಷಯದಲ್ಲಿ ಹೀಗೆ ಹಠ ಹಿಡಿಯುವುದು ಸರಿಯಲ್ಲ ಎಂದರು. ಇನ್ನು ಅಲ್ಲಮಪ್ರಭು ಮಠದ ತಿಪ್ಪೇರುದ್ರಸ್ವಾಮಿಗಳು, “ನಿಮಗೆ ಅಂಬೇಡ್ಕರ್ ವಿಷಯ ತೆಗೆದರೆ ಭಯವಾಗುವುದೇಕೆ? ಅದಕ್ಕೆ ಇರಬೇಕು ’ಸಂವಿಧಾನ ಶಿಲ್ಪಿ ಗುಣವಾಚಕ ತೆಗೆದಿದ್ದೀರಿ. ಬಸವನಿಗೆ ಉಪನಯನ ಮಾಡಿ ಜನಿವಾರ ಹಾಕಿಬಿಟ್ಟಿದ್ದೀರಿ. ಮುಖ್ಯಮಂತ್ರಿಗಳಿಗೆ ಇದು ಅಘಾತ ನೀಡಬೇಕಿತ್ತು. ಒಂದು ನಾಯಿ ಸಿನಿಮಾ ನೋಡಿ ಗಳಗಳನೆ ಅತ್ತ ನಿಮ್ಮ ಕಣ್ಮುಂದೆ ಶರಣರ ಹತ್ಯಾಕಾಂಡದ ದೃಶ್ಯ ಮೂಡಬೇಕಿತ್ತು. ಸಾಕಿದ ನಾಯಿ ಸಾವಿಗೆ ದುಃಖ ಪಡುವುದು ಮಾನವೀಯ ಲಕ್ಷಣ. ಅದನ್ನು ನಾವು ಆಡಿಕೊಳ್ಳುವುದಿಲ್ಲ. ಆದರೆ ನಿಮ್ಮದು ತೋರಿಕೆಯ ಗುಣ ಎಂಬ ಅನುಮಾನ ಮೂಡಬಾರದು” ಎಂದರು. ಜಿ.ಬಿ ಪಾಟೀಲರು ಮಾತನಾಡಿ, “ನಾಗೇಶ್‌ರಂತಹ ಜಾತಿವಾದಿಗಳು ರಾಜಕಾರಣದಲ್ಲಿರಬಾರದು. ಅದರಲ್ಲೂ ಶಿಕ್ಷಣ ಸಚಿವರಾದರೆ ಏನು ಮಾಡಬಲ್ಲರೆಂಬುದಕ್ಕೆ ಈಗಿನ ಘಟನೆಯೇ ಸಾಕ್ಷಿ. ಇಂತವರನ್ನ ಮನೆಗೆ ಕಳಿಸುವ ಶಕ್ತಿ ತಿಪಟೂರಿನ ಜನರಿಗೆ ಮಾತ್ರ ಇದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಇವರು ನಿರ್ಗಮಿಸುವಂತೆ ಮಾಡಿ. ಏಕೆಂದರೆ ವೈದ್ಯ ದಾರಿ ತಪ್ಪಿದರೆ ರೋಗಿ ಕತೆ ಮುಗಿದಂತೆಯೇ. ಹಾಗೆಯೇ ಮಕ್ಕಳಿಗೆ ಸಂಕುಚಿತ ಮನೋಭಾವ ಬೆಳೆಸುವ ವಿಷ ಉಣಿಸಿದರೆ ಅದರ ಪರಿಣಾಮ ಈ ಸಮಾಜದ ಮೇಲಾಗುತ್ತದೆ. ಆದ್ದರಿಂದ ನಾಗೇಶರಿಗೆ ಅಧಿಕಾರದಿಂದ ಗೌರವದ ನಿರ್ಗಮನ ಹೇಳಿ” ಎಂದರು.

ತಿಪಟೂರಿಗೂ ಪ್ರತಿಭಟನೆಗೂ ಬಹಳ ದೂರ. ಇದೊಂತರದ ಸಂತೃಪ್ತ ಊರು. ಜನ ತಮ್ಮಷ್ಟಕ್ಕೆ ತಾವಿರುವುದನ್ನು ಬಹಳ ಹಿಂದಿನಿಂದಲೂ ಕಲಿತಿದ್ದಾರೆ. ಇಂತಲ್ಲಿ ನಾಗೇಶರಂಥವರು ಬೆಳೆಯುವುದು ಸಹಜ. ಆದ್ದರಿಂದ ಇಲ್ಲಿ ಎಚ್ಚೆತ್ತುಕೊಂಡ ಯುವ ಜನರಾದ ಶಶಿಧರ, ಶ್ರೀಕಾಂತ ಮುಂತಾದವರೆಲ್ಲಾ ಸೇರಿ ಹೋರಾಟ ರೂಪಿಸಿದರು. ಇದಕ್ಕೆ ಒತ್ತಾಸೆಯಾಗಿ ಮಂಜುನಾಥ ಅದ್ದೆ, ಮುಕುಂದರಾಜ್, ಗಂಗಾಧರಯ್ಯ ಇನ್ನು ಹಲವು ಜನರ ಬೆಂಬಲದಿಂದ ಒಂದು ಅಪರೂಪದ ಪ್ರತಿಭಟನಾ ಜಾಥಾ ನಡೆಯಿತು. ಇಂತದೇ ಜಾಥಾ ನಡೆಸಿದ ರವೀಶ್ ಬಸಪ್ಪ ಚಿಕ್ಕಮಗಳೂರಿಂದ ಬಂದಿದ್ದರೆ, ರೈತನಾಯಕ ಕೆ.ಟಿ ಗಂಗಾಧರ್ ಶಿವಮೊಗ್ಗದಿಂದ ಆಗಮಿಸಿದ್ದರು. ಬೆಳವಂಗಲದ ಪ್ರಭಾರ ದನಿ ಮೆರವಣಿಗೆಯಲ್ಲಿ ಮೊಳಗಿದ್ದೊಂದು ವಿಶೇಷ. ಸದ್ಯಕ್ಕೆ ಶಶಿಧರರ ಟೀಮು ತಿಪಟೂರು ಮತ್ತೆ ಮಲಗದಂತೆ ನೋಡಿಕೊಳ್ಳಬೇಕಿದೆ. ಏಕೆಂದರೆ ನಾಗೇಶ ಈ ಪ್ರತಿಭಟನೆಗೆ ಕೇರ್ ಮಾಡಿದಂತೆ ಕಾಣುವುದಿಲ್ಲ.

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಸ್ಮಾನ್ ಹಾದಿ ಹತ್ಯೆ : ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದ ಬಾಂಗ್ಲಾ ಪೊಲೀಸರು

ಬಾಂಗ್ಲಾದೇಶದ ರಾಜಕೀಯ ಕಾರ್ಯಕರ್ತ ಉಸ್ಮಾನ್ ಹಾದಿ ಹತ್ಯೆಯ ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸರು (ಡಿಎಂಪಿ) ತಿಳಿಸಿದ್ದಾರೆ ಎಂದು ದಿ ಡೈಲಿ...

ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿಎಂ ಸಿದ್ದರಾಮಯ್ಯ

ನರೇಗಾ ಯೋಜನೆಗೆ ಮರುನಾಮಕರಣದ ಮೂಲಕ ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಭಾರತ್...

ವಿದ್ಯಾರ್ಥಿಗಳ ಪ್ರತಿಭಟನೆ: ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದ ಜಮ್ಮು-ಕಾಶ್ಮೀರ ಪೊಲೀಸರು

ಸರ್ಕಾರ ಮೀಸಲಾತಿ ನೀತಿಯನ್ನು ತರ್ಕಬದ್ಧಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಜೆ & ಕೆ ವಿದ್ಯಾರ್ಥಿಗಳು ಪ್ರತಿಭಟನೆ ಘೋಷಿಸುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಂಸದ ಮತ್ತು ಪೀಪಲ್ಸ್...

ಆರ್‌ಎಸ್‌ಎಸ್‌-ಬಿಜೆಪಿ ಸಂಘಟನಾ ಶಕ್ತಿ ಶ್ಲಾಘಿಸಿದ ದಿಗ್ವಿಜಯ ಸಿಂಗ್‌ಗೆ ಶಶಿ ತರೂರ್‌ ಬೆಂಬಲ : ಪವನ್‌ ಖೇರಾ ತಿರುಗೇಟು

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರ್‌ಎಸ್‌ಎಸ್‌ನ ಸಂಘಟನಾ ಶಕ್ತಿಯನ್ನು ಶ್ಲಾಘಿಸಿ ಹೇಳಿಕೆ ನೀಡಿರುವುದು ಪಕ್ಷದೊಳಗೆ ಮುಜುಗರ, ಅಸಮಾಧಾನ ಮತ್ತು ಅಪಸ್ವರಕ್ಕೆ ಕಾರಣವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್‌...

ಕೋಗಿಲು ಬಳಿ ಒತ್ತುವರಿ ತೆರವು: ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಹೈಕಮಾಂಡ್: ಪರಿಹಾರ ಕ್ರಮ ಜಾರಿಗೆ ತರುವಂತೆ ಸಿಎಂ, ಡಿಸಿಎಂಗೆ ಒತ್ತಾಯ 

ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣ ಇದೀಗ ಕಾಂಗ್ರೆಸ್ ಪಕ್ಷದೊಳಗೆ ಬಿರುಕಿಗೂ ಕಾರಣವಾಗಿದೆ. ಮನೆಗಳ ತೆರವು ವಿಚಾರ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷಕ್ಕೆ ಅಹಿತಕರವಾಗಿ ಪರಿಣಮಿಸುತ್ತಿದ್ದಂತೆಯೇ...

ಛತ್ತೀಸ್‌ಗಢ : ಹಿಂಸಾಚಾರಕ್ಕೆ ತಿರುಗಿದ ಕಲ್ಲಿದ್ದಲು ಗಣಿ ವಿರೋಧಿ ಹೋರಾಟ : ಹಲವು ಪೊಲೀಸರಿಗೆ ಗಾಯ, ವಾಹನಗಳಿಗೆ ಬೆಂಕಿ

ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ವಿರೋಧಿಸಿ ಶನಿವಾರ (ಡಿ.27) ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ ಮತ್ತು...

ತ್ರಿಪುರಾ: ಮಸೀದಿಗೆ ಮದ್ಯದ ಬಾಟಲಿಗಳನ್ನು ಇಟ್ಟು ಬೆಂಕಿ ಹಚ್ಚಲು ಯತ್ನ: ಬಜರಂಗದಳ ಧ್ವಜ ಕಟ್ಟಿದ ದುಷ್ಕರ್ಮಿಗಳು

ತ್ರಿಪುರಾದ ಧಲೈ ಜಿಲ್ಲೆಯ ಮಸೀದಿಯನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ, ಇದನ್ನು ಸ್ಥಳೀಯ ಮುಸ್ಲಿಂ ಸಮುದಾಯವನ್ನು ಬೆದರಿಸುವ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ನಿವಾಸಿಗಳು ಮತ್ತು ಮಸೀದಿ ಅಧಿಕಾರಿಗಳು ಹೇಳಿದ್ದಾರೆ.  ಮನು-ಚೌಮಾನು ರಸ್ತೆಯಲ್ಲಿರುವ...

‘ಇಸ್ರೇಲ್ ಗಾಝಾಗೆ ಪಾಠ ಕಲಿಸಿದಂತೆ ಬಾಂಗ್ಲಾದೇಶಕ್ಕೂ ಕಲಿಸಬೇಕು’ : ನರಮೇಧ, ಜನಾಂಗೀಯ ಹತ್ಯೆಗೆ ಹಪಹಪಿಸಿದ ಬಿಜೆಪಿ ನಾಯಕ

"ಇಸ್ರೇಲ್ ಗಾಝಾಗೆ ಕಲಿಸಿದಂತೆ ಬಾಂಗ್ಲಾದೇಶಕ್ಕೂ ಪಾಠ ಕಲಿಸಬೇಕು" ಎಂದು ಬಿಜೆಪಿ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೀಡಿದ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ಡಿಸೆಂಬರ್...

“ನನಗೆ ಏನೂ ಆಗುವುದಿಲ್ಲ”: ಅತ್ಯಾಚಾರ ಮಾಡಿ ಸಂತ್ರಸ್ತೆಗೆ ಧಮ್ಕಿ ಹಾಕಿದ ಬಿಜೆಪಿ ಕೌನ್ಸಿಲರ್ ಪತಿ 

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಬಿಜೆಪಿ ಕೌನ್ಸಿಲರ್ ಒಬ್ಬರ ಪತಿ ಮಹಿಳೆಯೊಬ್ಬರ ಮೇಲೆ ಚಾಕು ತೋರಿಸಿ ಅತ್ಯಾಚಾರ ಎಸಗಿ, ಅದರ ವಿಡಿಯೋ ಮಾಡಿ, ನಂತರ ಅದನ್ನು ತೋರಿಸಿ ಪದೇ ಪದೇ ಲೈಂಗಿಕ ಸಂಬಂಧ ಹೊಂದುವಂತೆ...

ಅರಾವಳಿ ಬೆಟ್ಟಗಳ ಹೊಸ ವ್ಯಾಖ್ಯಾನಕ್ಕೆ ದೇಶದಾದ್ಯಂತ ತೀವ್ರ ವಿರೋಧ : ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ಅರಾವಳಿ ಬೆಟ್ಟಗಳ ಹೊಸ ವ್ಯಾಖ್ಯಾನದಿಂದ ಪರಿಸರದ ಮೇಲಾಗುವ ಹಾನಿಯ ಕುರಿತು ದೇಶದ ಜನರು ತೀವ್ರ ಆತಂಕ ಮತ್ತು ಕಳವಳ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಸುಪ್ರೀಂ ಕೋರ್ಟ್‌ ಈ ಕುರಿತು ಸ್ವಯಂ ಪ್ರೇರಿತ (Suo Motu...