Homeನ್ಯಾಯ ಪಥಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

ಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

- Advertisement -
- Advertisement -

ಕರ್ನಾಟಕದ ಮಕ್ಕಳು ಓದುವ ಪಠ್ಯ ತಿದ್ದಿರುವ ವಿಷಯದಲ್ಲಿ ಎಲ್ಲ ಊರುಗಳಿಗಿಂತಲೂ ತಿಪಟೂರು ವ್ಯಗ್ರಗೊಂಡಿದೆ, ಯಾಕೆಂದರೆ ತಿಪಟೂರು ಶಿಕ್ಷಣ ಸಚಿವರಾಗಿರುವ ಬಿ. ಸಿ ನಾಗೇಶರ ಕ್ಷೇತ್ರ. ಇಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಓಬಿಸಿಗಳು ಪ್ರಬಲವಾಗಿದ್ದರೂ ಎರಡು ಸಾವಿರ ಮತಗಳನ್ನು ದಾಟದ ಬ್ರಾಹ್ಮಣ ಸಮುದಾಯದ ನಾಗೇಶರನ್ನು ಶಾಸಕರನ್ನಾಗಿ ತಿಪಟೂರು ಎರಡು ಬಾರಿ ಆರಿಸಿಕೊಂಡಿದೆ. ಆ ದಿಸೆಯಲ್ಲಿ ಇಲ್ಲಿನ ಮತದಾರರು ತಾವೆಷ್ಟು ಜಾತ್ಯತೀತ ಮನಸ್ಸಿನವರು ಎಂದು ಸಾಬೀತುಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ನಾಗೇಶ್ ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸುತ್ತ ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುತ್ತಿದ್ದುದು; ಎಲ್ಲರ ಭುಜದ ಮೇಲೆ ಕೈಹಾಕಿ ಮಾತನಾಡಿಸುತ್ತ ನಾನೂ ನಿಮ್ಮವನು ಎಂಬಂತೆ ನಡೆದುಕೊಂಡಿದ್ದರು. ಇದು ಮೊದಲು ಗೆದ್ದಾಗಿನ ಕತೆ. ಆದರೀಗ ತಾವು ಗೆದ್ದುಬಂದಿರುವುದೇ ಬ್ರಾಹ್ಮಣ್ಯದ ಹಿತ ಕಾಯಲು ಎಂಬಂತೆ ಶಿಕ್ಷಣ ಮಂತ್ರಿಯಾದಂದಿನಿಂದ ನಡೆದುಕೊಂಡು ಬರುತ್ತಿದ್ದಾರೆ. ಅಧಿಕಾರವಿಲ್ಲದಾಗ ವಿನಯವಂತನ ಸೋಗು ಹಾಕಿದ್ದ ನಾಗೇಶ್ ಶಿಕ್ಷಣ ಸಚಿವನೆಂಬ ಆಯುಧ ಸಿಕ್ಕ ಕೂಡಲೇ ಮಕ್ಕಳ ಮೇಲೆ ಕಂಸನಂತೆ ಎಗರಿದ್ದಾರೆ, ಜೊತೆಗೆ ಜನರಿಗೆ ಮತ್ತು ಮಾಧ್ಯಮಕ್ಕೆ ಸುಳ್ಳು ಹೇಳುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಠ್ಯಪರಿಷ್ಕರಣ ಸಮಿತಿ ಅಧ್ಯಕ್ಷನ ಪರ ಇವರು ವಹಿಸುವ ವಕಾಲತ್ತು ಅಪ್ರಭುದ್ದತೆಯಿಂದ ಕೂಡಿದೆ. ಇವೆಲ್ಲದರಿಂದ ಸಹಜವಾಗಿ ತಿಪಟೂರಿನ ಪ್ರಜ್ಞಾವಂತರು ಕೆರಳಿದ್ದಾರೆ.

ಆದ್ದರಿಂದ ಜಾಗೃತ ತಿಪಟೂರು ಎಂಬ ವೇದಿಕೆ ನಿರ್ಮಿಸಿಕೊಂಡು ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿಯ ಸಹಯೋಗದಿಂದ ಒಂದು ವಾರ ಕಾಲ ತಿಪಟೂರಿನ ಹಳ್ಳಿಗಳಿಗೆ ಜಾಥಾ ಮಾಡಿದರು. ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಗಳನ್ನ ಹಳ್ಳಿಗಳಿಗೆ ತಲುಪಿಸಿದ ನಂತರ ಅಂತಿಮವಾಗಿ ಕಳೆದ ಭಾನುವಾರ ತಿಪಟೂರಿನಲ್ಲಿ ಪ್ರತಿಭಟನಾ ಜಾಥಾ ಮತ್ತು ಸಭೆ ಏರ್ಪಡಿಸಿದ್ದರು. ಮಂಡ್ಯದಿಂದ ಬಂದಿದ್ದ ಡಾ.ರವೀಂದ್ರ ಅವರು ತಿಪಟೂರಿನ ನಡುರಸ್ತೆಯಲ್ಲಿ ಜೋರು ದನಿಯಲ್ಲಿ “ಪುರಾಣಗಳನ್ನ ಸೃಷ್ಟಿಸಿಕೊಂಡು ಅವುಗಳನ್ನೇ ಸಾಮಾನ್ಯರ ಮೇಲೆ ಹೇರುತ್ತ ಸಾವಿರಾರು ವರ್ಷದಿಂದ ಮುಗ್ಧ ಮನಸ್ಸುಗಳನ್ನು ವಂಚಿಸಿದ್ದು ಸಾಕು. ಈ ಕೆಲಸ ಇನ್ನ ಮುಂದೆ ನಡೆಯುವುದಿಲ್ಲ. ಸುತ್ತಿಬಳಸಿ ಮಾತನಾಡುವ ಅಗತ್ಯವಿಲ್ಲ. ನಾಗೇಶ್ ಒಬ್ಬ ಬ್ರಾಹ್ಮಣ. ಅವರು ನೇಮಿಸಿದ ಪಠ್ಯಪರಿಷ್ಕರಣ ಸಮಿತಿಯಲ್ಲಿ ಒಂಭತ್ತು ಜನ ಬ್ರಾಹ್ಮಣರಿದ್ದಾರೆ. ನಿಮ್ಮ ಜಾತಿಹಿಡಿದು ಮಾತನಾಡದೆ ಬೇರೆ ದಾರಿಯಿಲ್ಲ ಎಂದರು. ಇನ್ನ ವೇದಿಕೆಯಲ್ಲಿ ಮಾತನಾಡಿದ ಕೋಟಗಾನಹಳ್ಳಿ ರಾಮಯ್ಯ “ಆರೆಸ್ಸೆಸ್ ಸಂಘಟನೆಯೇ ಒಂದು ದೇಶದ್ರೋಹಿ ಸಂಘಟನೆ. ಅದರಿಂದ ಸಮಾನತೆ ಸಾಧ್ಯವಿಲ್ಲ; ದೇಶಕಟ್ಟುವ ಕೆಲಸಬಿಟ್ಟು ಜನಿವಾರದ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಮನುಧರ್ಮದ ಗ್ರಂಥ ಸುಟ್ಟಂತೆ ನಾವು ಈ ಸರಕಾರ ರೂಪಿಸಿದ ವಿಕೃತ ಪಠ್ಯಪುಸ್ತಕ (ಪರಿಷ್ಕರಣೆ ಮಾಡಿರುವ) ಸುಡೋಣ. ನಮ್ಮ ಮೈಸೂರು ಅರಸರ ಫೋಟೊ ಬದಲು ಶಿವಾಜಿ ಫೋಟೊ ತೋರಿಸುತ್ತಾರೆ.

ಮರಾಠರಿಂದ ಕರ್ನಾಟಕದ ಮೇಲೆ ನಡೆದ ದಾಳಿಗಳ ಇತಿಹಾಸ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಇತಿಹಾಸ ತಿರುಚುತ್ತಾ ಅಂಬೇಡ್ಕರ್, ಗಾಂಧಿ, ಕುವೆಂಪು ಅವರಿಗೆ ಅಗೌರವ ತೋರಿದ್ದಾರೆ. ಇವರು ತಿರುಚಿರುವ ಪಠ್ಯವನ್ನು ಸುಡುವುದು ನಮ್ಮ ಕರ್ತವ್ಯ ಎಂದರು.

ಇನ್ನ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರ ಮುನಿ ಸ್ವಾಮೀಜಿ, “ಈ ಸರಕಾರ ಪಠ್ಯಪುಸ್ತಕಗಳ ವಿಷಯದಲ್ಲಿ ಅಕ್ಷರಗಳಿಗೆ ಬಣ್ಣ ಬಳಿಯತೊಡಗಿದೆ. ನಾವು ಕೇಳುತ್ತಿರುವುದು ಪಠ್ಯವನ್ನ ಸರಿಯಾಗಿ ರೂಪಿಸಿ ಎಂದು. ತಾವೇ ಬದಲಾಯಿಸಿದ ಪಠ್ಯದಲ್ಲಿನ ತಪ್ಪು ಕೃತ್ಯಗಳನ್ನ ಒಪ್ಪಿಕೊಂಡರೂ, ಹಿಂತೆಗೆದುಕೊಳ್ಳದೆ ಸರಕಾರ ಕಾಲ ದೂಡುತ್ತಿದೆ, ಹಠಕ್ಕೆ ಬಿದ್ದಿದೆ. ಶಿಕ್ಷಣ ಸಚಿವ ಮಾಡುವುದೆಲ್ಲವನ್ನು ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಮಕ್ಕಳ ಭವಿಷ್ಯದ ವಿಷಯದಲ್ಲಿ ಹೀಗೆ ಹಠ ಹಿಡಿಯುವುದು ಸರಿಯಲ್ಲ ಎಂದರು. ಇನ್ನು ಅಲ್ಲಮಪ್ರಭು ಮಠದ ತಿಪ್ಪೇರುದ್ರಸ್ವಾಮಿಗಳು, “ನಿಮಗೆ ಅಂಬೇಡ್ಕರ್ ವಿಷಯ ತೆಗೆದರೆ ಭಯವಾಗುವುದೇಕೆ? ಅದಕ್ಕೆ ಇರಬೇಕು ’ಸಂವಿಧಾನ ಶಿಲ್ಪಿ ಗುಣವಾಚಕ ತೆಗೆದಿದ್ದೀರಿ. ಬಸವನಿಗೆ ಉಪನಯನ ಮಾಡಿ ಜನಿವಾರ ಹಾಕಿಬಿಟ್ಟಿದ್ದೀರಿ. ಮುಖ್ಯಮಂತ್ರಿಗಳಿಗೆ ಇದು ಅಘಾತ ನೀಡಬೇಕಿತ್ತು. ಒಂದು ನಾಯಿ ಸಿನಿಮಾ ನೋಡಿ ಗಳಗಳನೆ ಅತ್ತ ನಿಮ್ಮ ಕಣ್ಮುಂದೆ ಶರಣರ ಹತ್ಯಾಕಾಂಡದ ದೃಶ್ಯ ಮೂಡಬೇಕಿತ್ತು. ಸಾಕಿದ ನಾಯಿ ಸಾವಿಗೆ ದುಃಖ ಪಡುವುದು ಮಾನವೀಯ ಲಕ್ಷಣ. ಅದನ್ನು ನಾವು ಆಡಿಕೊಳ್ಳುವುದಿಲ್ಲ. ಆದರೆ ನಿಮ್ಮದು ತೋರಿಕೆಯ ಗುಣ ಎಂಬ ಅನುಮಾನ ಮೂಡಬಾರದು” ಎಂದರು. ಜಿ.ಬಿ ಪಾಟೀಲರು ಮಾತನಾಡಿ, “ನಾಗೇಶ್‌ರಂತಹ ಜಾತಿವಾದಿಗಳು ರಾಜಕಾರಣದಲ್ಲಿರಬಾರದು. ಅದರಲ್ಲೂ ಶಿಕ್ಷಣ ಸಚಿವರಾದರೆ ಏನು ಮಾಡಬಲ್ಲರೆಂಬುದಕ್ಕೆ ಈಗಿನ ಘಟನೆಯೇ ಸಾಕ್ಷಿ. ಇಂತವರನ್ನ ಮನೆಗೆ ಕಳಿಸುವ ಶಕ್ತಿ ತಿಪಟೂರಿನ ಜನರಿಗೆ ಮಾತ್ರ ಇದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಇವರು ನಿರ್ಗಮಿಸುವಂತೆ ಮಾಡಿ. ಏಕೆಂದರೆ ವೈದ್ಯ ದಾರಿ ತಪ್ಪಿದರೆ ರೋಗಿ ಕತೆ ಮುಗಿದಂತೆಯೇ. ಹಾಗೆಯೇ ಮಕ್ಕಳಿಗೆ ಸಂಕುಚಿತ ಮನೋಭಾವ ಬೆಳೆಸುವ ವಿಷ ಉಣಿಸಿದರೆ ಅದರ ಪರಿಣಾಮ ಈ ಸಮಾಜದ ಮೇಲಾಗುತ್ತದೆ. ಆದ್ದರಿಂದ ನಾಗೇಶರಿಗೆ ಅಧಿಕಾರದಿಂದ ಗೌರವದ ನಿರ್ಗಮನ ಹೇಳಿ” ಎಂದರು.

ತಿಪಟೂರಿಗೂ ಪ್ರತಿಭಟನೆಗೂ ಬಹಳ ದೂರ. ಇದೊಂತರದ ಸಂತೃಪ್ತ ಊರು. ಜನ ತಮ್ಮಷ್ಟಕ್ಕೆ ತಾವಿರುವುದನ್ನು ಬಹಳ ಹಿಂದಿನಿಂದಲೂ ಕಲಿತಿದ್ದಾರೆ. ಇಂತಲ್ಲಿ ನಾಗೇಶರಂಥವರು ಬೆಳೆಯುವುದು ಸಹಜ. ಆದ್ದರಿಂದ ಇಲ್ಲಿ ಎಚ್ಚೆತ್ತುಕೊಂಡ ಯುವ ಜನರಾದ ಶಶಿಧರ, ಶ್ರೀಕಾಂತ ಮುಂತಾದವರೆಲ್ಲಾ ಸೇರಿ ಹೋರಾಟ ರೂಪಿಸಿದರು. ಇದಕ್ಕೆ ಒತ್ತಾಸೆಯಾಗಿ ಮಂಜುನಾಥ ಅದ್ದೆ, ಮುಕುಂದರಾಜ್, ಗಂಗಾಧರಯ್ಯ ಇನ್ನು ಹಲವು ಜನರ ಬೆಂಬಲದಿಂದ ಒಂದು ಅಪರೂಪದ ಪ್ರತಿಭಟನಾ ಜಾಥಾ ನಡೆಯಿತು. ಇಂತದೇ ಜಾಥಾ ನಡೆಸಿದ ರವೀಶ್ ಬಸಪ್ಪ ಚಿಕ್ಕಮಗಳೂರಿಂದ ಬಂದಿದ್ದರೆ, ರೈತನಾಯಕ ಕೆ.ಟಿ ಗಂಗಾಧರ್ ಶಿವಮೊಗ್ಗದಿಂದ ಆಗಮಿಸಿದ್ದರು. ಬೆಳವಂಗಲದ ಪ್ರಭಾರ ದನಿ ಮೆರವಣಿಗೆಯಲ್ಲಿ ಮೊಳಗಿದ್ದೊಂದು ವಿಶೇಷ. ಸದ್ಯಕ್ಕೆ ಶಶಿಧರರ ಟೀಮು ತಿಪಟೂರು ಮತ್ತೆ ಮಲಗದಂತೆ ನೋಡಿಕೊಳ್ಳಬೇಕಿದೆ. ಏಕೆಂದರೆ ನಾಗೇಶ ಈ ಪ್ರತಿಭಟನೆಗೆ ಕೇರ್ ಮಾಡಿದಂತೆ ಕಾಣುವುದಿಲ್ಲ.

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...

ತೆಲಂಗಾಣ| ಕೆಸಿಆರ್‌ ಮನೆ ಮುಂದೆ ದಲಿತ ಮುಖಂಡರಿಂದ ಪ್ರತಿಭಟನೆ; ಬಿಆರ್‌ಎಸ್‌ ಕಾರ್ಯಕರ್ತರಿಂದ ನೀರು-ಅರಿಶಿನ ಬಳಸಿ ರಸ್ತೆ ಶುದ್ಧೀಕರಣ

ತೆಲಂಗಾಣದ ಸಿದ್ಧಾಪೇಟೆ ಜಿಲ್ಲೆಯ ಎರ್ರವಳ್ಳಿಯಲ್ಲಿರುವ ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಫಾರ್ಮ್ ಹೌಸ್ ಬಳಿ ದಲಿತ ಮುಖಂಡರು ಮತ್ತು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ನಂತರ, ಬಿಆರ್‌ಎಸ್ ನಾಯಕರು ನಡೆಸಿದ...

ಉದ್ಯಮಿಗಳಾದ ನಂದನ್ ನಿಲೇಕಣಿ- ನಿಖಿಲ್ ಕಾಮತ್, ನಟ ಶಿವರಾಜ್‌ಕುಮಾರ್ ಅವರಿಗೂ ಎಸ್‌ಐಆರ್ ನೋಟಿಸ್‌

ಇನ್ಫೋಸಿಸ್ ಸಹ-ಸಂಸ್ಥಾಪಕ, ಕೇಂದ್ರ ಸರ್ಕಾರದ 'ಪರೀಕ್ಷಾ ಸುಧಾರಣಾ ಉನ್ನತ ಮಟ್ಟದ ಕಾರ್ಯಪಡೆ' ಮುಕ್ಯಸ್ಥ ನಂದನ್ ನಿಲೇಕಣಿ ಹಾಗೂ ಅವರ ಇಡೀ ಕುಟುಂಬವು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಚುನಾವಣಾ...

ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯಾಗಾರದಲ್ಲಿ ಬರೀ ಹಿಂದಿ ಮಾತು : ಆಕ್ಷೇಪ ವ್ಯಕ್ತಪಡಿಸಿ ಹೊರನಡೆದ ಕೇರಳದ ಶಾಸಕರು

ರಾಷ್ಟ್ರೀಯ ಮಹಿಳಾ ಆಯೋಗ (NCW) ಮಂಗಳವಾರ (ಸೆ.8) ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ, ಬಹುಪಾಲು ಸೆಷನ್‌ಗಳನ್ನು ಹಿಂದಿ ಭಾಷೆಯಲ್ಲೇ ನಡೆಸಲಾಗುತ್ತಿದೆ ಮತ್ತು ಹಿಂದಿ ಮಾತನಾಡದ ರಾಜ್ಯಗಳ ಭಾಗವಹಿಸುವಿಕೆಗೆ ಕರಾರುವಕ್ಕಾಗಿ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆರೋಪಿಸಿ,...

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...