Homeನ್ಯಾಯ ಪಥಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

ಪಠ್ಯ ಪರಿಷ್ಕರಣೆ ವಿವಾದ; ಎಚ್ಚೆತ್ತುಕೊಂಡ ತಿಪಟೂರು!

- Advertisement -
- Advertisement -

ಕರ್ನಾಟಕದ ಮಕ್ಕಳು ಓದುವ ಪಠ್ಯ ತಿದ್ದಿರುವ ವಿಷಯದಲ್ಲಿ ಎಲ್ಲ ಊರುಗಳಿಗಿಂತಲೂ ತಿಪಟೂರು ವ್ಯಗ್ರಗೊಂಡಿದೆ, ಯಾಕೆಂದರೆ ತಿಪಟೂರು ಶಿಕ್ಷಣ ಸಚಿವರಾಗಿರುವ ಬಿ. ಸಿ ನಾಗೇಶರ ಕ್ಷೇತ್ರ. ಇಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಓಬಿಸಿಗಳು ಪ್ರಬಲವಾಗಿದ್ದರೂ ಎರಡು ಸಾವಿರ ಮತಗಳನ್ನು ದಾಟದ ಬ್ರಾಹ್ಮಣ ಸಮುದಾಯದ ನಾಗೇಶರನ್ನು ಶಾಸಕರನ್ನಾಗಿ ತಿಪಟೂರು ಎರಡು ಬಾರಿ ಆರಿಸಿಕೊಂಡಿದೆ. ಆ ದಿಸೆಯಲ್ಲಿ ಇಲ್ಲಿನ ಮತದಾರರು ತಾವೆಷ್ಟು ಜಾತ್ಯತೀತ ಮನಸ್ಸಿನವರು ಎಂದು ಸಾಬೀತುಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ನಾಗೇಶ್ ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸುತ್ತ ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುತ್ತಿದ್ದುದು; ಎಲ್ಲರ ಭುಜದ ಮೇಲೆ ಕೈಹಾಕಿ ಮಾತನಾಡಿಸುತ್ತ ನಾನೂ ನಿಮ್ಮವನು ಎಂಬಂತೆ ನಡೆದುಕೊಂಡಿದ್ದರು. ಇದು ಮೊದಲು ಗೆದ್ದಾಗಿನ ಕತೆ. ಆದರೀಗ ತಾವು ಗೆದ್ದುಬಂದಿರುವುದೇ ಬ್ರಾಹ್ಮಣ್ಯದ ಹಿತ ಕಾಯಲು ಎಂಬಂತೆ ಶಿಕ್ಷಣ ಮಂತ್ರಿಯಾದಂದಿನಿಂದ ನಡೆದುಕೊಂಡು ಬರುತ್ತಿದ್ದಾರೆ. ಅಧಿಕಾರವಿಲ್ಲದಾಗ ವಿನಯವಂತನ ಸೋಗು ಹಾಕಿದ್ದ ನಾಗೇಶ್ ಶಿಕ್ಷಣ ಸಚಿವನೆಂಬ ಆಯುಧ ಸಿಕ್ಕ ಕೂಡಲೇ ಮಕ್ಕಳ ಮೇಲೆ ಕಂಸನಂತೆ ಎಗರಿದ್ದಾರೆ, ಜೊತೆಗೆ ಜನರಿಗೆ ಮತ್ತು ಮಾಧ್ಯಮಕ್ಕೆ ಸುಳ್ಳು ಹೇಳುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಠ್ಯಪರಿಷ್ಕರಣ ಸಮಿತಿ ಅಧ್ಯಕ್ಷನ ಪರ ಇವರು ವಹಿಸುವ ವಕಾಲತ್ತು ಅಪ್ರಭುದ್ದತೆಯಿಂದ ಕೂಡಿದೆ. ಇವೆಲ್ಲದರಿಂದ ಸಹಜವಾಗಿ ತಿಪಟೂರಿನ ಪ್ರಜ್ಞಾವಂತರು ಕೆರಳಿದ್ದಾರೆ.

ಆದ್ದರಿಂದ ಜಾಗೃತ ತಿಪಟೂರು ಎಂಬ ವೇದಿಕೆ ನಿರ್ಮಿಸಿಕೊಂಡು ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿಯ ಸಹಯೋಗದಿಂದ ಒಂದು ವಾರ ಕಾಲ ತಿಪಟೂರಿನ ಹಳ್ಳಿಗಳಿಗೆ ಜಾಥಾ ಮಾಡಿದರು. ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಗಳನ್ನ ಹಳ್ಳಿಗಳಿಗೆ ತಲುಪಿಸಿದ ನಂತರ ಅಂತಿಮವಾಗಿ ಕಳೆದ ಭಾನುವಾರ ತಿಪಟೂರಿನಲ್ಲಿ ಪ್ರತಿಭಟನಾ ಜಾಥಾ ಮತ್ತು ಸಭೆ ಏರ್ಪಡಿಸಿದ್ದರು. ಮಂಡ್ಯದಿಂದ ಬಂದಿದ್ದ ಡಾ.ರವೀಂದ್ರ ಅವರು ತಿಪಟೂರಿನ ನಡುರಸ್ತೆಯಲ್ಲಿ ಜೋರು ದನಿಯಲ್ಲಿ “ಪುರಾಣಗಳನ್ನ ಸೃಷ್ಟಿಸಿಕೊಂಡು ಅವುಗಳನ್ನೇ ಸಾಮಾನ್ಯರ ಮೇಲೆ ಹೇರುತ್ತ ಸಾವಿರಾರು ವರ್ಷದಿಂದ ಮುಗ್ಧ ಮನಸ್ಸುಗಳನ್ನು ವಂಚಿಸಿದ್ದು ಸಾಕು. ಈ ಕೆಲಸ ಇನ್ನ ಮುಂದೆ ನಡೆಯುವುದಿಲ್ಲ. ಸುತ್ತಿಬಳಸಿ ಮಾತನಾಡುವ ಅಗತ್ಯವಿಲ್ಲ. ನಾಗೇಶ್ ಒಬ್ಬ ಬ್ರಾಹ್ಮಣ. ಅವರು ನೇಮಿಸಿದ ಪಠ್ಯಪರಿಷ್ಕರಣ ಸಮಿತಿಯಲ್ಲಿ ಒಂಭತ್ತು ಜನ ಬ್ರಾಹ್ಮಣರಿದ್ದಾರೆ. ನಿಮ್ಮ ಜಾತಿಹಿಡಿದು ಮಾತನಾಡದೆ ಬೇರೆ ದಾರಿಯಿಲ್ಲ ಎಂದರು. ಇನ್ನ ವೇದಿಕೆಯಲ್ಲಿ ಮಾತನಾಡಿದ ಕೋಟಗಾನಹಳ್ಳಿ ರಾಮಯ್ಯ “ಆರೆಸ್ಸೆಸ್ ಸಂಘಟನೆಯೇ ಒಂದು ದೇಶದ್ರೋಹಿ ಸಂಘಟನೆ. ಅದರಿಂದ ಸಮಾನತೆ ಸಾಧ್ಯವಿಲ್ಲ; ದೇಶಕಟ್ಟುವ ಕೆಲಸಬಿಟ್ಟು ಜನಿವಾರದ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಮನುಧರ್ಮದ ಗ್ರಂಥ ಸುಟ್ಟಂತೆ ನಾವು ಈ ಸರಕಾರ ರೂಪಿಸಿದ ವಿಕೃತ ಪಠ್ಯಪುಸ್ತಕ (ಪರಿಷ್ಕರಣೆ ಮಾಡಿರುವ) ಸುಡೋಣ. ನಮ್ಮ ಮೈಸೂರು ಅರಸರ ಫೋಟೊ ಬದಲು ಶಿವಾಜಿ ಫೋಟೊ ತೋರಿಸುತ್ತಾರೆ.

ಮರಾಠರಿಂದ ಕರ್ನಾಟಕದ ಮೇಲೆ ನಡೆದ ದಾಳಿಗಳ ಇತಿಹಾಸ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಇತಿಹಾಸ ತಿರುಚುತ್ತಾ ಅಂಬೇಡ್ಕರ್, ಗಾಂಧಿ, ಕುವೆಂಪು ಅವರಿಗೆ ಅಗೌರವ ತೋರಿದ್ದಾರೆ. ಇವರು ತಿರುಚಿರುವ ಪಠ್ಯವನ್ನು ಸುಡುವುದು ನಮ್ಮ ಕರ್ತವ್ಯ ಎಂದರು.

ಇನ್ನ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರ ಮುನಿ ಸ್ವಾಮೀಜಿ, “ಈ ಸರಕಾರ ಪಠ್ಯಪುಸ್ತಕಗಳ ವಿಷಯದಲ್ಲಿ ಅಕ್ಷರಗಳಿಗೆ ಬಣ್ಣ ಬಳಿಯತೊಡಗಿದೆ. ನಾವು ಕೇಳುತ್ತಿರುವುದು ಪಠ್ಯವನ್ನ ಸರಿಯಾಗಿ ರೂಪಿಸಿ ಎಂದು. ತಾವೇ ಬದಲಾಯಿಸಿದ ಪಠ್ಯದಲ್ಲಿನ ತಪ್ಪು ಕೃತ್ಯಗಳನ್ನ ಒಪ್ಪಿಕೊಂಡರೂ, ಹಿಂತೆಗೆದುಕೊಳ್ಳದೆ ಸರಕಾರ ಕಾಲ ದೂಡುತ್ತಿದೆ, ಹಠಕ್ಕೆ ಬಿದ್ದಿದೆ. ಶಿಕ್ಷಣ ಸಚಿವ ಮಾಡುವುದೆಲ್ಲವನ್ನು ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಮಕ್ಕಳ ಭವಿಷ್ಯದ ವಿಷಯದಲ್ಲಿ ಹೀಗೆ ಹಠ ಹಿಡಿಯುವುದು ಸರಿಯಲ್ಲ ಎಂದರು. ಇನ್ನು ಅಲ್ಲಮಪ್ರಭು ಮಠದ ತಿಪ್ಪೇರುದ್ರಸ್ವಾಮಿಗಳು, “ನಿಮಗೆ ಅಂಬೇಡ್ಕರ್ ವಿಷಯ ತೆಗೆದರೆ ಭಯವಾಗುವುದೇಕೆ? ಅದಕ್ಕೆ ಇರಬೇಕು ’ಸಂವಿಧಾನ ಶಿಲ್ಪಿ ಗುಣವಾಚಕ ತೆಗೆದಿದ್ದೀರಿ. ಬಸವನಿಗೆ ಉಪನಯನ ಮಾಡಿ ಜನಿವಾರ ಹಾಕಿಬಿಟ್ಟಿದ್ದೀರಿ. ಮುಖ್ಯಮಂತ್ರಿಗಳಿಗೆ ಇದು ಅಘಾತ ನೀಡಬೇಕಿತ್ತು. ಒಂದು ನಾಯಿ ಸಿನಿಮಾ ನೋಡಿ ಗಳಗಳನೆ ಅತ್ತ ನಿಮ್ಮ ಕಣ್ಮುಂದೆ ಶರಣರ ಹತ್ಯಾಕಾಂಡದ ದೃಶ್ಯ ಮೂಡಬೇಕಿತ್ತು. ಸಾಕಿದ ನಾಯಿ ಸಾವಿಗೆ ದುಃಖ ಪಡುವುದು ಮಾನವೀಯ ಲಕ್ಷಣ. ಅದನ್ನು ನಾವು ಆಡಿಕೊಳ್ಳುವುದಿಲ್ಲ. ಆದರೆ ನಿಮ್ಮದು ತೋರಿಕೆಯ ಗುಣ ಎಂಬ ಅನುಮಾನ ಮೂಡಬಾರದು” ಎಂದರು. ಜಿ.ಬಿ ಪಾಟೀಲರು ಮಾತನಾಡಿ, “ನಾಗೇಶ್‌ರಂತಹ ಜಾತಿವಾದಿಗಳು ರಾಜಕಾರಣದಲ್ಲಿರಬಾರದು. ಅದರಲ್ಲೂ ಶಿಕ್ಷಣ ಸಚಿವರಾದರೆ ಏನು ಮಾಡಬಲ್ಲರೆಂಬುದಕ್ಕೆ ಈಗಿನ ಘಟನೆಯೇ ಸಾಕ್ಷಿ. ಇಂತವರನ್ನ ಮನೆಗೆ ಕಳಿಸುವ ಶಕ್ತಿ ತಿಪಟೂರಿನ ಜನರಿಗೆ ಮಾತ್ರ ಇದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಇವರು ನಿರ್ಗಮಿಸುವಂತೆ ಮಾಡಿ. ಏಕೆಂದರೆ ವೈದ್ಯ ದಾರಿ ತಪ್ಪಿದರೆ ರೋಗಿ ಕತೆ ಮುಗಿದಂತೆಯೇ. ಹಾಗೆಯೇ ಮಕ್ಕಳಿಗೆ ಸಂಕುಚಿತ ಮನೋಭಾವ ಬೆಳೆಸುವ ವಿಷ ಉಣಿಸಿದರೆ ಅದರ ಪರಿಣಾಮ ಈ ಸಮಾಜದ ಮೇಲಾಗುತ್ತದೆ. ಆದ್ದರಿಂದ ನಾಗೇಶರಿಗೆ ಅಧಿಕಾರದಿಂದ ಗೌರವದ ನಿರ್ಗಮನ ಹೇಳಿ” ಎಂದರು.

ತಿಪಟೂರಿಗೂ ಪ್ರತಿಭಟನೆಗೂ ಬಹಳ ದೂರ. ಇದೊಂತರದ ಸಂತೃಪ್ತ ಊರು. ಜನ ತಮ್ಮಷ್ಟಕ್ಕೆ ತಾವಿರುವುದನ್ನು ಬಹಳ ಹಿಂದಿನಿಂದಲೂ ಕಲಿತಿದ್ದಾರೆ. ಇಂತಲ್ಲಿ ನಾಗೇಶರಂಥವರು ಬೆಳೆಯುವುದು ಸಹಜ. ಆದ್ದರಿಂದ ಇಲ್ಲಿ ಎಚ್ಚೆತ್ತುಕೊಂಡ ಯುವ ಜನರಾದ ಶಶಿಧರ, ಶ್ರೀಕಾಂತ ಮುಂತಾದವರೆಲ್ಲಾ ಸೇರಿ ಹೋರಾಟ ರೂಪಿಸಿದರು. ಇದಕ್ಕೆ ಒತ್ತಾಸೆಯಾಗಿ ಮಂಜುನಾಥ ಅದ್ದೆ, ಮುಕುಂದರಾಜ್, ಗಂಗಾಧರಯ್ಯ ಇನ್ನು ಹಲವು ಜನರ ಬೆಂಬಲದಿಂದ ಒಂದು ಅಪರೂಪದ ಪ್ರತಿಭಟನಾ ಜಾಥಾ ನಡೆಯಿತು. ಇಂತದೇ ಜಾಥಾ ನಡೆಸಿದ ರವೀಶ್ ಬಸಪ್ಪ ಚಿಕ್ಕಮಗಳೂರಿಂದ ಬಂದಿದ್ದರೆ, ರೈತನಾಯಕ ಕೆ.ಟಿ ಗಂಗಾಧರ್ ಶಿವಮೊಗ್ಗದಿಂದ ಆಗಮಿಸಿದ್ದರು. ಬೆಳವಂಗಲದ ಪ್ರಭಾರ ದನಿ ಮೆರವಣಿಗೆಯಲ್ಲಿ ಮೊಳಗಿದ್ದೊಂದು ವಿಶೇಷ. ಸದ್ಯಕ್ಕೆ ಶಶಿಧರರ ಟೀಮು ತಿಪಟೂರು ಮತ್ತೆ ಮಲಗದಂತೆ ನೋಡಿಕೊಳ್ಳಬೇಕಿದೆ. ಏಕೆಂದರೆ ನಾಗೇಶ ಈ ಪ್ರತಿಭಟನೆಗೆ ಕೇರ್ ಮಾಡಿದಂತೆ ಕಾಣುವುದಿಲ್ಲ.

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...