ನೇಣುಗಂಬಕ್ಕೆ ಏರಬೇಕಾದಾಕೆಯನ್ನು ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು ತಾಲಿಬಾನಿ ಬಿಜೆಪಿಯಾಗಿದ್ದು, ಮಾಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನು ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನು ಜಾಹೀರುಪಡಿಸಿದೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ದ ಶುಕ್ರವಾರ ಕಿಡಿಕಾರಿದೆ.
ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ, “ಆರೆಸ್ಸೆಸ್,ಬಿಜೆಪಿ ಮತ್ತು ತಾಲಿಬಾನಿಗೆ ಬಹಳ ನೆಂಟಸ್ತಿಕೆಯಿದೆ. ಕಠ್ಮಂಡು ವಿಮಾನ ಅಪಹರಣ ಪ್ರಕರಣದಲ್ಲಿ, ಅಮೃತಸರದಲ್ಲಿ ಲ್ಯಾಂಡ್ ಆಗಿದ್ದ ವಿಮಾನವನ್ನು ತಾಲಿಬಾನಿಗಳಿಗೆ ಅನುಕೂಲವಾಗಲೆಂದು ಕಂದಹಾರ್ಗೆ ಕಳಿಸಿಕೊಟ್ಟು, ಮೂವರು ತಾಲಿಬಾನ್ ಉಗ್ರರನ್ನು ರಾಜಮರ್ಯಾದೆಯಲ್ಲಿ ಬಿಟ್ಟು ಕಳಿಸಿದ್ದು ತಾಲಿಬಾನಿ ಬಿಜೆಪಿಯಾಗಿದೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ನಿರ್ಮಾಣ ಹಂತದಲ್ಲೆ ಕುಸಿದ ‘ನಮೋ’ ಕಾಲೇಜ್; ‘ಬ್ರಾಂಡ್ನೇಮ್ ಎಫೆಕ್ಟ್? – ಮಾಜಿ ಐಎಎಸ್ ಪ್ರಶ್ನೆ!
“ತಾಲಿಬಾನ್ ಮತ್ತು ಬಿಜೆಪಿ ಒಂದೇ ದಾರಿಯ ಪಯಣಿಗರಲ್ಲವೇ. ಹಾಗಾಗಿ, ಮಾಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನು ಸಂಸದೆ ಮಾಡಿದೆ. ಈ ಮೂಲಕ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ” ಎಂದು ಕಾಂಗ್ರೆಸ್ ಹೇಳಿದೆ.
“ನೇಣುಗಂಬಕ್ಕೆ ಏರಬೇಕಾದಾಕೆಯನ್ನು ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು ತಾಲಿಬಾನಿ ಬಿಜೆಪಿಯಾಗಿದೆ. ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ!” ಎಂದು ಕಾಂಗ್ರೆಸ್ ಹೇಳಿದೆ.