Homeಕರ್ನಾಟಕಮಹಿಳೆಯ ತೆಂಗು, ಅಡಿಕೆ ತೋಟ ನಾಶ : ಬಲಾಢ್ಯ ವ್ಯಕ್ತಿಗಳ ಕೈವಾಡದಿಂದ ಕಮರಿದ ಬದುಕು

ಮಹಿಳೆಯ ತೆಂಗು, ಅಡಿಕೆ ತೋಟ ನಾಶ : ಬಲಾಢ್ಯ ವ್ಯಕ್ತಿಗಳ ಕೈವಾಡದಿಂದ ಕಮರಿದ ಬದುಕು

- Advertisement -
- Advertisement -

ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿ ದ್ವೇಷ ಮತ್ತು ಬಲಾಢ್ಯರ ಕೈವಾಡಕ್ಕೆ ತಿಪ್ಪೂರಿನ ಸಿದ್ದಮ್ಮನ ತೆಂಗು, ಅಡಿಕೆ ಮರಗಳು ಬಲಿಯಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಶಾಸಕರು ಮತ್ತು ತಹಶೀಲ್ದಾರ್ ಮೇಲೆ ಒತ್ತಡ ತಂದು ನೂರಕ್ಕೂ ಹೆಚ್ಚು ಫಲಭರಿತ ಅಡಿಕೆ ಮತ್ತು 25 ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ.  ತಿಪ್ಪೂರುಪಾಳ್ಯದ ಬಲಾಢ್ಯ ವ್ಯಕ್ತಿಯೇ ಇಡೀ ಘಟನೆಗೆ ಕಾರಣ ಎಂದು ಎಲ್ಲರೂ ಬೊಟ್ಟುಮಾಡುತ್ತಿದ್ದಾರೆ. ಆ ವ್ಯಕ್ತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಆ ವ್ಯಕ್ತಿಯ ಕೈವಾಡವಿಲ್ಲದೆ ಯಾವುದೂ ನಡೆಯುವುದಿಲ್ಲ. ಹೀಗಾಗಿ ಆ ವ್ಯಕ್ತಿಯ ಹೆಸರನ್ನು ಹೇಳಲು ಎಲ್ಲರಿಂದಲೂ ಹಿಂಜರಿಕೆ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದ ಸರ್ವೇ ನಂಬರ್ 113ರಲ್ಲಿ 5 ಎಕರೆ 11 ಗುಂಟೆ ಜಮೀನು ಇದೆ. ಈ ಕೋಡಿಕೆಂಪಮ್ಮ ದೇವಿಗೆ ನಾಯಕ ಸಮುದಾಯದವರು ಪೂಜಾರರು. ಹಾಗಾಗಿ ಈ ಇನಾಂತಿ ಭೂಮಿಯನ್ನು ಪೂಜಾರಿ ಕುಟುಂಬಗಳೇ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಹೀಗಿರುವಾಗ ಪೂಜಾರಿ ಕುಟುಂಬದ ಅಣ್ಣತಮ್ಮಂದಿರ ನಡುವೆ ದಾಯಾದಿ ಕಲಹ ನಡೆಯುತ್ತದೆ. ಈ ಪ್ರಕರಣ ಪೊಲೀಸ್ ಮತ್ತು ಕೋರ್ಟ್ ಮೆಟ್ಟಿಲೇರುತ್ತದೆ. ಇದೇ ಕಾರಣಕ್ಕೆ ಕಳೆದ ಮೂರು ದಶಕಗಳಿಂದಲೂ ಕೋಡಿಕೆಂಪಮ್ಮ ದೇವಿಯ ಜಾತ್ರೆಯ ನಡೆದಿರಲಿಲ್ಲ.

ಆ ನಂತರ 2005ರ ಸುಮಾರಿನಲ್ಲಿ ಗ್ರಾಮಸ್ಥರು ಮಧ್ಯಸ್ಥಿಕೆ ವಹಿಸಿ ಕೋಡಿಕೆಂಪಮ್ಮ ದೇವಿ ಜಾತ್ರೆ ನಡೆಸಲು ಪೂಜಾರಿ ಕುಟುಂಬಗಳ ನಡುವೆ ಸಂಧಾನ ಮಾಡಿದರು. ಸಂಧಾನ ಯಶಸ್ವಿಯಾಗಿ ಆಗಿನಿಂದ ವರ್ಷವರ್ಷ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಕೆಂಪಮ್ಮದೇವಿಗೆ ಸೇರಿದ ಭೂಮಿಯನ್ನು ಸಾಗುವಳಿ ಮಾಡುತ್ತ ಬರುತ್ತಿದ್ದು ಕಾಲ ಕಳೆದಂತೆ 5 ಎಕರೆ 11 ಗುಂಟೆಯಲ್ಲೂ 16 ಕುಟುಂಬಗಳು ಅಡಿಕೆ ಮತ್ತು ತೆಂಗಿನ ತೋಟ ಬೆಳೆಸಿದರು. ಫಲವತ್ತಾದ ಭೂಮಿಯಾದ್ದರಿಂದ ತೆಂಗು ಮತ್ತು ಅಡಿಕೆ ಫಸಲು ಹುಲುಸಾಗಿ ಬೆಳೆಯಿತು.

ಈ ಮಧ್ಯೆ ಜಮೀನು ಯಾರಿಗೆ ಸೇರಬೇಕು ಎನ್ನುವ ವಿವಾದದ ಕುರಿತು ಗುಬ್ಬಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿತು. ತಹಶೀಲ್ದಾರ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಗ್ರಾಮ ಲೆಕ್ಕಿಗ ಮತ್ತು ಕಂದಾಯ ಅಧಿಕಾರಿಗಳಿಗೆ ಕೋಡಿಕೆಂಪಮ್ಮ ದೇವಾಲಯದ ಬಳಿ ಇರುವ ತೆಂಗು ಮತ್ತು ಅಡಿಕೆ ಗಿಡಗಳನ್ನು ಕಡಿಸುವಂತೆ ಸೂಚನೆ ನೀಡಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂದು ತಿಳಿದುಬಂದಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌: ಗುಬ್ಬಿಯಲ್ಲೊಂದು ಮನಕಲಕುವ ಕರಾಳ ಘಟನೆ.. ವಿಡಿಯೋ ನೋಡಿ.

Posted by Naanu Gauri on Sunday, March 8, 2020

ತಿಪ್ಪೂರುಪಾಳ್ಯದ  ಆ ಬಲಾಢ್ಯ ವ್ಯಕ್ತಿ ತೆರೆಮರೆಯಲ್ಲಿ ಇದೆಲ್ಲವನ್ನೂ ನಿಯಂತ್ರಿಸುತ್ತಿದ್ದು ಜೆಡಿಎಸ್ ಮತ್ತು ಬಿಜೆಪಿಯ ಸಹಾಯದಿಂದ ತಹಶೀಲ್ದಾರ್ ಮೇಲೆ ಒತ್ತಡ ಹಾಕಿಸಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡರು ಈ ಪ್ರಕರಣದ ಹಿಂದೆ ಬಲವಾಗಿ ನಿಂತುಕೊಂಡಿದ್ದಾರೆ ಎಂಬ ಆರೋಪವಿದೆ. ಬಲಾಢ್ಯ ಜಾತಿಗಳು ನಡೆಸಿರುವ ಕೂಟಕ್ಕೆ ಸಿದ್ದಮ್ಮ ಅವರ ಬದುಕು ಕಳಾಹೀನವಾಗಿದೆ. ಹೋದ ಮರಗಳನ್ನು ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಾಯಕ ಸಮುದಾಯಕ್ಕೆ ಸೇರಿರುವ ಸಿದ್ದಮ್ಮ ಬಲಾಢ್ಯರು ಹೆಣೆದ ಜಾಲಕ್ಕೆ ಬಿದ್ದಿದ್ಧಾರೆ.

ಕೋಡಿ ಕೆಂಪಮ್ಮ ದೇವಿಗೆ ಬಹುತೇಕ ಲಿಂಗಾಯತರು ನಡೆದುಕೊಳ್ಳುತ್ತಾರೆ. ಒಕ್ಕಲಿಗರು, ತಿಗಳರು ಮತ್ತು ದಲಿತ ಸಮುದಾಯವೂ ನಡೆದುಕೊಳ್ಳುತ್ತದೆ. ಈ ಚಿತಾವಣೆಯನ್ನು ನೋಡಿದರೆ ಬಲಾಢ್ಯ ಜಾತಿಗಳು ಇಡೀ ದೇವಾಲಯದ ಉಸ್ತುವಾರಿಯನ್ನು ತಮ್ಮ ತೆಕ್ಕೆಗೆ ತೆದುಕೊಂಡು ಫಲವತ್ತಾದ ಭೂಮಿಯನ್ನು ತಮ್ಮ ವಶಕ್ಕೆ ಪಡೆಯುವ ಹುನ್ನಾರ ನಡೆಸಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಿಪ್ಪೂರುಪಾಳ್ಯದ ಆ ಬಲಾಢ್ಯ ವ್ಯಕ್ತಿ ದೇವಾಲಯದ ಆಡಳಿತವನ್ನು ಹಿಡಿಯವ ಭಾಗದ ಸಂಚು ಇದಾಗಿದೆ.

ನಾಯಕ ಸಮುದಾಯಕ್ಕ ಸೇರಿದ 16 ಕುಟುಂಬಗಳು ಈ 5 ಎಕರೆ 11 ಗುಂಟೆ ಜಮೀನನ್ನು ಮೊದಲಿಂದಲೂ ಮಾಡಿಕೊಂಡು ಬರುತ್ತಿವೆ. ಆರಂಭದಲ್ಲಿ ಸದರಿ ಭೂಮಿಯಲ್ಲಿ ಮರಾವಳಿ ಬೆಳೆಸಬಾರದು ಎಂದು ನಿರ್ಧಾರ ಆಗಿದ್ದರೂ, ಕಾಲಕಳೆದಂತೆ ತೆಂಗು ಮತ್ತು ಅಡಿಕೆ ಸಸಿಗಳನ್ನು ಇಟ್ಟು ಬೆಳೆಸಿದರು. ಹಲವು ಬಾರಿ ಫಸಲನ್ನು ಕೊಯ್ದುಕೊಂಡರು. ದೇವಾಲಯದ  ಸಮೀಪವೇ ಇರುವ ಜಮೀನಿನಲ್ಲಿ ತೋಟವಿದ್ದರೂ ಜನರೂ ಕೂಡ ಕಳೆದ 15 ವರ್ಷಗಳಿಂದ ಜಾತ್ರೆಯನ್ನು ಮಾಡಿಕೊಂಡು ಬಂದಿದ್ದಾರೆ.

ಆದರೆ ಈಗ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡರ ಒತ್ತಡಕ್ಕೆ ಒಳಗಾಗಿರುವ ತಹಶೀಲ್ದಾರ್ ಮಮತ ಏಕಾಏಕಿ ಆದೇಶ ಹೊರಡಿಸಿ ತೆಂಗು, ಅಡಿಕೆ ಮರಗಳಿಗೆ ಕೊಡಲಿಪಟ್ಟು ಬಿದ್ದಿದೆ. ಹೆಚ್ಚು ಜನರು ಜಾತ್ರೆಗೆ ಸೇರುವ (ಲಿಂಗಾಯತ, ಒಕ್ಕಲಿಗರು) ಹಿನ್ನೆಲೆಯಲ್ಲಿ ಅಲ್ಲಿಗೆ ಹೆಚ್ಚು ವಾಹನಗಳು ಬರುತ್ತವೆ. ಹಾಗಾಗಿ ವಿಶಾಲ ಜಾಗ ಬೇಕು ಎಂಬ ನೆಪ ಒಡ್ಡಿ ತೋಟ ಕಡಿದಿದ್ದಾರೆ. ತೋಟವನ್ನು ಕಡಿಯುವುದಾದರೆ 5 ಎಕರೆ 11 ಗುಂಟೆಯಲ್ಲಿರುವ ಎಲ್ಲವನ್ನೂ ಕತ್ತರಿಸಿ ಹಾಕಲಿ. ಮಳೆಗಾಲದಲ್ಲಿ ಬೇಕಾದರೆ ಆ ಕುಟುಂಬಗಳು ಆ ಭೂಮಿಯಲ್ಲಿ ಮಾಡಿಕೊಂಡು ತಿನ್ನಲಿ ಎನ್ನುತ್ತಾರೆ ಕೆಲವರು.

ಇಡೀ ಪ್ರಕರಣವನ್ನು ಗಮನಿಸಿದರೆ ಬಲಾಢ್ಯ ಜಾತಿಗಳು ಕೋಡಿಕೆಂಪಮ್ಮ ದೇವಾಲಯ ಮತ್ತು ಇನಾಂತಿ ಜಮೀನಿನ ಮೇಲೆ ಕಣ್ಣಿಟ್ಟಿವೆ. ದೇವಾಲಯವನ್ನು ಅಭಿವೃದ್ಧಿಪಡಿಸಿ ರಿಯಲ್ ಎಸ್ಟೇಟ್ ದಂಧೆ ಮಾಡುವ ಹುನ್ನಾರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಾಯಕ ಸಮುದಾಯ ತೋಟಗಾರಿಕೆ ಬೆಳೆಯಲ್ಲಿ ಲಾಭ ಮಾಡಿಕೊಂಡು ಆರ್ಥಿಕವಾಗಿ ಸಬಲರಾದರೆ ತಮ್ಮ ಹಿಡಿತ ತಪ್ಪಿಹೋಗುತ್ತದೆ ಎಂಬ ಕಾರಣಕ್ಕೆ ಪಿತೂರಿ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದೆ ಕೆಲವರು ತಿಳಿಸಿದ್ದಾರೆ.

ಈಗ ಸಿದ್ದಮ್ಮ ತನಗೆ ನ್ಯಾಯಬೇಕು ಎಂದು ಧರಣಿ ಕೂತಿದ್ದಾಳೆ: ಹತ್ತಾರು ಜನ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಹೋರಾಟವನ್ನು ತುಮಕೂರಿನವರೆಗೂ ಒಯ್ಯುವುದಾಗಿ ಆಕೆ ಶಪಥ ಮಾಡಿದ್ದಾಳೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...