Homeಕರ್ನಾಟಕಮಹಿಳೆಯ ತೆಂಗು, ಅಡಿಕೆ ತೋಟ ನಾಶ : ಬಲಾಢ್ಯ ವ್ಯಕ್ತಿಗಳ ಕೈವಾಡದಿಂದ ಕಮರಿದ ಬದುಕು

ಮಹಿಳೆಯ ತೆಂಗು, ಅಡಿಕೆ ತೋಟ ನಾಶ : ಬಲಾಢ್ಯ ವ್ಯಕ್ತಿಗಳ ಕೈವಾಡದಿಂದ ಕಮರಿದ ಬದುಕು

- Advertisement -
- Advertisement -

ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿ ದ್ವೇಷ ಮತ್ತು ಬಲಾಢ್ಯರ ಕೈವಾಡಕ್ಕೆ ತಿಪ್ಪೂರಿನ ಸಿದ್ದಮ್ಮನ ತೆಂಗು, ಅಡಿಕೆ ಮರಗಳು ಬಲಿಯಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಶಾಸಕರು ಮತ್ತು ತಹಶೀಲ್ದಾರ್ ಮೇಲೆ ಒತ್ತಡ ತಂದು ನೂರಕ್ಕೂ ಹೆಚ್ಚು ಫಲಭರಿತ ಅಡಿಕೆ ಮತ್ತು 25 ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ.  ತಿಪ್ಪೂರುಪಾಳ್ಯದ ಬಲಾಢ್ಯ ವ್ಯಕ್ತಿಯೇ ಇಡೀ ಘಟನೆಗೆ ಕಾರಣ ಎಂದು ಎಲ್ಲರೂ ಬೊಟ್ಟುಮಾಡುತ್ತಿದ್ದಾರೆ. ಆ ವ್ಯಕ್ತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಆ ವ್ಯಕ್ತಿಯ ಕೈವಾಡವಿಲ್ಲದೆ ಯಾವುದೂ ನಡೆಯುವುದಿಲ್ಲ. ಹೀಗಾಗಿ ಆ ವ್ಯಕ್ತಿಯ ಹೆಸರನ್ನು ಹೇಳಲು ಎಲ್ಲರಿಂದಲೂ ಹಿಂಜರಿಕೆ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದ ಸರ್ವೇ ನಂಬರ್ 113ರಲ್ಲಿ 5 ಎಕರೆ 11 ಗುಂಟೆ ಜಮೀನು ಇದೆ. ಈ ಕೋಡಿಕೆಂಪಮ್ಮ ದೇವಿಗೆ ನಾಯಕ ಸಮುದಾಯದವರು ಪೂಜಾರರು. ಹಾಗಾಗಿ ಈ ಇನಾಂತಿ ಭೂಮಿಯನ್ನು ಪೂಜಾರಿ ಕುಟುಂಬಗಳೇ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಹೀಗಿರುವಾಗ ಪೂಜಾರಿ ಕುಟುಂಬದ ಅಣ್ಣತಮ್ಮಂದಿರ ನಡುವೆ ದಾಯಾದಿ ಕಲಹ ನಡೆಯುತ್ತದೆ. ಈ ಪ್ರಕರಣ ಪೊಲೀಸ್ ಮತ್ತು ಕೋರ್ಟ್ ಮೆಟ್ಟಿಲೇರುತ್ತದೆ. ಇದೇ ಕಾರಣಕ್ಕೆ ಕಳೆದ ಮೂರು ದಶಕಗಳಿಂದಲೂ ಕೋಡಿಕೆಂಪಮ್ಮ ದೇವಿಯ ಜಾತ್ರೆಯ ನಡೆದಿರಲಿಲ್ಲ.

ಆ ನಂತರ 2005ರ ಸುಮಾರಿನಲ್ಲಿ ಗ್ರಾಮಸ್ಥರು ಮಧ್ಯಸ್ಥಿಕೆ ವಹಿಸಿ ಕೋಡಿಕೆಂಪಮ್ಮ ದೇವಿ ಜಾತ್ರೆ ನಡೆಸಲು ಪೂಜಾರಿ ಕುಟುಂಬಗಳ ನಡುವೆ ಸಂಧಾನ ಮಾಡಿದರು. ಸಂಧಾನ ಯಶಸ್ವಿಯಾಗಿ ಆಗಿನಿಂದ ವರ್ಷವರ್ಷ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಕೆಂಪಮ್ಮದೇವಿಗೆ ಸೇರಿದ ಭೂಮಿಯನ್ನು ಸಾಗುವಳಿ ಮಾಡುತ್ತ ಬರುತ್ತಿದ್ದು ಕಾಲ ಕಳೆದಂತೆ 5 ಎಕರೆ 11 ಗುಂಟೆಯಲ್ಲೂ 16 ಕುಟುಂಬಗಳು ಅಡಿಕೆ ಮತ್ತು ತೆಂಗಿನ ತೋಟ ಬೆಳೆಸಿದರು. ಫಲವತ್ತಾದ ಭೂಮಿಯಾದ್ದರಿಂದ ತೆಂಗು ಮತ್ತು ಅಡಿಕೆ ಫಸಲು ಹುಲುಸಾಗಿ ಬೆಳೆಯಿತು.

ಈ ಮಧ್ಯೆ ಜಮೀನು ಯಾರಿಗೆ ಸೇರಬೇಕು ಎನ್ನುವ ವಿವಾದದ ಕುರಿತು ಗುಬ್ಬಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿತು. ತಹಶೀಲ್ದಾರ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಗ್ರಾಮ ಲೆಕ್ಕಿಗ ಮತ್ತು ಕಂದಾಯ ಅಧಿಕಾರಿಗಳಿಗೆ ಕೋಡಿಕೆಂಪಮ್ಮ ದೇವಾಲಯದ ಬಳಿ ಇರುವ ತೆಂಗು ಮತ್ತು ಅಡಿಕೆ ಗಿಡಗಳನ್ನು ಕಡಿಸುವಂತೆ ಸೂಚನೆ ನೀಡಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂದು ತಿಳಿದುಬಂದಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌: ಗುಬ್ಬಿಯಲ್ಲೊಂದು ಮನಕಲಕುವ ಕರಾಳ ಘಟನೆ.. ವಿಡಿಯೋ ನೋಡಿ.

Posted by Naanu Gauri on Sunday, March 8, 2020

ತಿಪ್ಪೂರುಪಾಳ್ಯದ  ಆ ಬಲಾಢ್ಯ ವ್ಯಕ್ತಿ ತೆರೆಮರೆಯಲ್ಲಿ ಇದೆಲ್ಲವನ್ನೂ ನಿಯಂತ್ರಿಸುತ್ತಿದ್ದು ಜೆಡಿಎಸ್ ಮತ್ತು ಬಿಜೆಪಿಯ ಸಹಾಯದಿಂದ ತಹಶೀಲ್ದಾರ್ ಮೇಲೆ ಒತ್ತಡ ಹಾಕಿಸಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡರು ಈ ಪ್ರಕರಣದ ಹಿಂದೆ ಬಲವಾಗಿ ನಿಂತುಕೊಂಡಿದ್ದಾರೆ ಎಂಬ ಆರೋಪವಿದೆ. ಬಲಾಢ್ಯ ಜಾತಿಗಳು ನಡೆಸಿರುವ ಕೂಟಕ್ಕೆ ಸಿದ್ದಮ್ಮ ಅವರ ಬದುಕು ಕಳಾಹೀನವಾಗಿದೆ. ಹೋದ ಮರಗಳನ್ನು ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಾಯಕ ಸಮುದಾಯಕ್ಕೆ ಸೇರಿರುವ ಸಿದ್ದಮ್ಮ ಬಲಾಢ್ಯರು ಹೆಣೆದ ಜಾಲಕ್ಕೆ ಬಿದ್ದಿದ್ಧಾರೆ.

ಕೋಡಿ ಕೆಂಪಮ್ಮ ದೇವಿಗೆ ಬಹುತೇಕ ಲಿಂಗಾಯತರು ನಡೆದುಕೊಳ್ಳುತ್ತಾರೆ. ಒಕ್ಕಲಿಗರು, ತಿಗಳರು ಮತ್ತು ದಲಿತ ಸಮುದಾಯವೂ ನಡೆದುಕೊಳ್ಳುತ್ತದೆ. ಈ ಚಿತಾವಣೆಯನ್ನು ನೋಡಿದರೆ ಬಲಾಢ್ಯ ಜಾತಿಗಳು ಇಡೀ ದೇವಾಲಯದ ಉಸ್ತುವಾರಿಯನ್ನು ತಮ್ಮ ತೆಕ್ಕೆಗೆ ತೆದುಕೊಂಡು ಫಲವತ್ತಾದ ಭೂಮಿಯನ್ನು ತಮ್ಮ ವಶಕ್ಕೆ ಪಡೆಯುವ ಹುನ್ನಾರ ನಡೆಸಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಿಪ್ಪೂರುಪಾಳ್ಯದ ಆ ಬಲಾಢ್ಯ ವ್ಯಕ್ತಿ ದೇವಾಲಯದ ಆಡಳಿತವನ್ನು ಹಿಡಿಯವ ಭಾಗದ ಸಂಚು ಇದಾಗಿದೆ.

ನಾಯಕ ಸಮುದಾಯಕ್ಕ ಸೇರಿದ 16 ಕುಟುಂಬಗಳು ಈ 5 ಎಕರೆ 11 ಗುಂಟೆ ಜಮೀನನ್ನು ಮೊದಲಿಂದಲೂ ಮಾಡಿಕೊಂಡು ಬರುತ್ತಿವೆ. ಆರಂಭದಲ್ಲಿ ಸದರಿ ಭೂಮಿಯಲ್ಲಿ ಮರಾವಳಿ ಬೆಳೆಸಬಾರದು ಎಂದು ನಿರ್ಧಾರ ಆಗಿದ್ದರೂ, ಕಾಲಕಳೆದಂತೆ ತೆಂಗು ಮತ್ತು ಅಡಿಕೆ ಸಸಿಗಳನ್ನು ಇಟ್ಟು ಬೆಳೆಸಿದರು. ಹಲವು ಬಾರಿ ಫಸಲನ್ನು ಕೊಯ್ದುಕೊಂಡರು. ದೇವಾಲಯದ  ಸಮೀಪವೇ ಇರುವ ಜಮೀನಿನಲ್ಲಿ ತೋಟವಿದ್ದರೂ ಜನರೂ ಕೂಡ ಕಳೆದ 15 ವರ್ಷಗಳಿಂದ ಜಾತ್ರೆಯನ್ನು ಮಾಡಿಕೊಂಡು ಬಂದಿದ್ದಾರೆ.

ಆದರೆ ಈಗ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡರ ಒತ್ತಡಕ್ಕೆ ಒಳಗಾಗಿರುವ ತಹಶೀಲ್ದಾರ್ ಮಮತ ಏಕಾಏಕಿ ಆದೇಶ ಹೊರಡಿಸಿ ತೆಂಗು, ಅಡಿಕೆ ಮರಗಳಿಗೆ ಕೊಡಲಿಪಟ್ಟು ಬಿದ್ದಿದೆ. ಹೆಚ್ಚು ಜನರು ಜಾತ್ರೆಗೆ ಸೇರುವ (ಲಿಂಗಾಯತ, ಒಕ್ಕಲಿಗರು) ಹಿನ್ನೆಲೆಯಲ್ಲಿ ಅಲ್ಲಿಗೆ ಹೆಚ್ಚು ವಾಹನಗಳು ಬರುತ್ತವೆ. ಹಾಗಾಗಿ ವಿಶಾಲ ಜಾಗ ಬೇಕು ಎಂಬ ನೆಪ ಒಡ್ಡಿ ತೋಟ ಕಡಿದಿದ್ದಾರೆ. ತೋಟವನ್ನು ಕಡಿಯುವುದಾದರೆ 5 ಎಕರೆ 11 ಗುಂಟೆಯಲ್ಲಿರುವ ಎಲ್ಲವನ್ನೂ ಕತ್ತರಿಸಿ ಹಾಕಲಿ. ಮಳೆಗಾಲದಲ್ಲಿ ಬೇಕಾದರೆ ಆ ಕುಟುಂಬಗಳು ಆ ಭೂಮಿಯಲ್ಲಿ ಮಾಡಿಕೊಂಡು ತಿನ್ನಲಿ ಎನ್ನುತ್ತಾರೆ ಕೆಲವರು.

ಇಡೀ ಪ್ರಕರಣವನ್ನು ಗಮನಿಸಿದರೆ ಬಲಾಢ್ಯ ಜಾತಿಗಳು ಕೋಡಿಕೆಂಪಮ್ಮ ದೇವಾಲಯ ಮತ್ತು ಇನಾಂತಿ ಜಮೀನಿನ ಮೇಲೆ ಕಣ್ಣಿಟ್ಟಿವೆ. ದೇವಾಲಯವನ್ನು ಅಭಿವೃದ್ಧಿಪಡಿಸಿ ರಿಯಲ್ ಎಸ್ಟೇಟ್ ದಂಧೆ ಮಾಡುವ ಹುನ್ನಾರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಾಯಕ ಸಮುದಾಯ ತೋಟಗಾರಿಕೆ ಬೆಳೆಯಲ್ಲಿ ಲಾಭ ಮಾಡಿಕೊಂಡು ಆರ್ಥಿಕವಾಗಿ ಸಬಲರಾದರೆ ತಮ್ಮ ಹಿಡಿತ ತಪ್ಪಿಹೋಗುತ್ತದೆ ಎಂಬ ಕಾರಣಕ್ಕೆ ಪಿತೂರಿ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದೆ ಕೆಲವರು ತಿಳಿಸಿದ್ದಾರೆ.

ಈಗ ಸಿದ್ದಮ್ಮ ತನಗೆ ನ್ಯಾಯಬೇಕು ಎಂದು ಧರಣಿ ಕೂತಿದ್ದಾಳೆ: ಹತ್ತಾರು ಜನ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಹೋರಾಟವನ್ನು ತುಮಕೂರಿನವರೆಗೂ ಒಯ್ಯುವುದಾಗಿ ಆಕೆ ಶಪಥ ಮಾಡಿದ್ದಾಳೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...