Homeಮುಖಪುಟಪ್ರಣಯ್‌ ಕೊಲೆಗಾರ, ಅಮೃತಾಳ ತಂದೆ ಮಾರುತಿರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಪ್ರಣಯ್‌ ಕೊಲೆಗಾರ, ಅಮೃತಾಳ ತಂದೆ ಮಾರುತಿರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಅಂತರ್ಜಾತಿ ವಿವಾಹ: ಪ್ರಣಯ್‌ ಹತ್ಯೆ, ಒಂಟಿಯಾದ ಅಮೃತ, ಆರೋಪಿಯಾದ ಆಕೆಯ ತಂದೆ ಆತ್ಮಹತ್ಯೆ, ದೇಶದ ಜಡ್ಡಗಟ್ಟಿದ ಜಾಸ್ತಿ ವ್ಯವಸ್ಥೆ... ಒಂದಕ್ಕೊಂದು ಸೇರಿಕೊಂಡ ಗೋಜಲುಗಳು

- Advertisement -
- Advertisement -

ಅಮೃತಾ- ಪ್ರಣಯ್‌ ಅಂತರ್ಜಾತಿ ವಿವಾಹದ ಕಾರಣಕ್ಕೆ ತೆಲಂಗಾಣವಲ್ಲದೇ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಣಯ್ ಹತ್ಯೆಯ ಮುಖ್ಯ ಆರೋಪಿಯಾಗಿದ್ದ ಅಮೃತಾಳ ತಂದೆ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಷ್ಟಕ್ಕೆ ಕೆಲವರು ನ್ಯಾಯ ಸಿಕ್ಕಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ದೇಶದ ಜಾತಿ ವ್ಯವಸ್ಥೆ ಅಷ್ಟು ಸುಲಭವಲ್ಲ ಎಂಬುದು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ.

ಕಳೆದ ವರ್ಷ ತೆಲಂಗಾಣದ ನಲ್ಗೋಂಡ ಜಿಲ್ಲೆಯ ಮಿರ್ಯಾಲಗೂಡದಲ್ಲಿ ತಳಸಮುದಾಯ ಹುಡುಗ ಪ್ರಣಯ್ ಮತ್ತು ಮೇಲ್ಜಾತಿಯ ಹುಡುಗಿ ಅಮೃತ ಪ್ರೀತಿಸಿದ್ದರು. ಪ್ರಣಯಪಕ್ಷಿಗಳಿಂತಿದ್ದ ಈ ಮುದ್ದಾದ ಜೋಡಿ ಮದುವೆಯಾದ ಕಾರಣಕ್ಕೆ ಅಮೃತರವರ ತಂದೆ ಮಾರುತಿ ರಾವ್ ಸಿಟ್ಟಿನಿಂದ ಅವರನ್ನು ದೂರ ಇಟ್ಟು ಬೆದರಿಕೆ ಹಾಕಿದ್ದರು.


ಇದನ್ನೂ ಓದಿ : ಪ್ರೀತಿ ಕೊಂದ ಜಾತಿ… ಜಾತಿಯನ್ನು ಕೊಲ್ಲುವುದು ಯಾವಾಗ?


ನಂತರ ಗರ್ಭಿಣಿ ಸಂದರ್ಭದಲ್ಲಿ ಅಮೃತಳನ್ನು ಆಸ್ಫತ್ರೆಗೆ ಕರೆದುಕೊಂಡು ಬಂದ ಪ್ರಣಯ್‌ನನ್ನು ಅಮೃತಾಳ ತಂದೆ ಮಾರುತಿರಾವ್ ಮತ್ತು ಆತನ ಗೂಂಡಾಗಳು 2018 ಸೆಪ್ಟೆಂಬರ್ 14ರಂದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಇಡೀ ದೇಶ ಬೆಚ್ಚಿ ಬೀಳುವಂತಹ ಜಾತಿ ದುರಹಾಂಕಾರದ ಹತ್ಯೆ ಇದಾಗಿತ್ತು. ಇದಕ್ಕೆ ಜಾತಿಧರ್ಮ ನೋಡದೇ ಹಲವಾರು ಜನ ಈ ದುಷ್ಕೃತ್ಯವನ್ನು ಖಂಡಿಸಿದ್ದರು.

ಆ ಸಂದರ್ಭದಲ್ಲಿ ನೊಂದು ಬೆಂದು ಒಂಟಿಯಾದ ಅಮೃತಾ ಏನು ಮಾಡಬೇಕು? ತುಂಬು ಗರ್ಭಿಣಿಯಾದ ಅವಳು ತನ್ನ ಗಂಡನನ್ನು ತನ್ನ ಕಣ್ಣಾರೆ ಕೊಂದ ಅಪ್ಪನ ಮನೆಗೆ ಹೋಗಬೇಕೆ? ಇಲ್ಲ ತನ್ನ ಗಂಡನಿಲ್ಲದಿದ್ದರೂ ಗಂಡನ ಮನೆಯಲ್ಲಿ ಇರಬೇಕೆ ಎಂಬುದರ ಕುರಿತು ಗೊಂದಲಗೊಂಡಳು. ಆದರೆ ಕೊನೆಗೆ ತನ್ನ ಅಪ್ಪನ ವಿರುದ್ಧ ದೂರು ನೀಡಿ ತನ್ನ ಗಂಡನ ಮನೆಯಲ್ಲಿಯೇ ಉಳಿದುಕೊಂಡಳು. ಪ್ರಣಯ್‌ನ ತಂದೆ ತಾಯಿಯರು ಸಹ ಮಗ ಬಲಿಯಾದರೂ ಸೊಸೆ ಅಮೃತಾಳನ್ನು ಮನೆ ಮಗಳಂತೆ ನೋಡಿಕೊಳ್ಳಲು ಆರಂಭಿಸಿದರು. ಅಮೃತಾಗೆ ಮುದ್ದಾದ ಗಂಡು ಮಗು ಹುಟ್ಟಿದೆ. ಆ ಮಗುವಿಗೆ ನಿಹಾನ್‌ ಎಂದು ಹೆಸರಿಡಲಾಗಿದೆ.

ಈಗ ಒಂದೂವರೆ ವರ್ಷದ ಬಳಿಕ ಆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್‌ ಆತ್ಮಹತ್ಯೆ ಮಾಡಿಕೊಳ್ಳುವಾಗ ಬರೆದ ಪತ್ರದಲ್ಲಿ “ಗಿರಿಜಾ (ಹೆಂಡತಿ) ಕ್ಷಮಿಸು, ಅಮೃತ(ಮಗಳು) ಅಮ್ಮನ ಹತ್ತಿರ ಬಾ’ ಎಂದು ಮನವಿ ಮಾಡಿದ್ದಾನೆ.

ಈಗ ಬಹಳಷ್ಟು ಜಾತಿವಾದಿಗಳು ಅಮೃತಾ ಮೇಲೆ ಮುಗಿಬಿದ್ದಿದ್ದಾರೆ. ನಿನ್ನಿಂದಾಗಿ ನಮ್ಮ ಸಮದಾಯದ ಮಾನ ಮರ್ಯಾದೆ ಹಾಳಾಗಿದ್ದಲ್ಲದೇ ನಿನ್ನ ಅಪ್ಪನ ಸಾವಿಗೂ ನೀನೇ ಕಾರಣಳಾಗಿದ್ದೀಯ. ನಿನ್ನ ತಾಯಿ ಒಂಟಿಯಾಗಲು ನೀನೇ ಕಾರಣಳಾಗಿದ್ದೀಯ.. ಈಗಲಾದರೂ ನಿನ್ನ ತವರು ಮನೆಗೆ ಬಂದು ನಿನ್ನ ಒಬ್ಬಂಟಿ ತಾಯಿಯನ್ನು ನೋಡಿಕೊ ಎಂದು ಉಪದೇಶಗಳನ್ನು ನೀಡುತ್ತಿದ್ದಾರೆ.

ನಿನ್ನ ತಂದೆ ಪಶ್ಚಾತಾಪಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ನಿನಗೆ ಪಶ್ಚಾತಾಪವಿಲ್ಲ ನೋಡು ಎಂದು ಹಂಗಿಸುತ್ತಿದ್ದಾರೆ. ಒಟ್ಟಿನಲ್ಲಿ ತನ್ನ ಮಗಳನ್ನೇ ಕೊಂದ ಕೊಲೆಗಡುಕ, ಜಾತಿ ಕ್ರಿಮಿ ಮಾರುತಿರಾವ್‌ ಮೇಲೆ ಅನುಕಂಪ ತೋರಿಸುತ್ತಾ, ಸಂತ್ರಸ್ತೆಯಾದ ಅಮೃತಾಳನ್ನೇ ವಿಲನ್‌ ಮಾಡಲು ನೋಡುತ್ತಿದ್ದಾರೆ.

ವಾಸ್ತವವೇನು

ಅಮೃತಾ ದೂರು ನೀಡಿದ ನಂತರ ಮಾರುತಿರಾವ್ ಮತ್ತು ಆತನ ಸಹಚರರ ಮೇಲೆ ಬಲವಾದ ಕೇಸುಗಳು ಬಿದ್ದಿದ್ದು ಕೋರ್ಟ್‍ಗೆ ಅಲೆಯುತ್ತಿದ್ದ. ಇತ್ತಿಚೆಗೆ ಅಮೃತಾಳನ್ನು ತನ್ನ ಮನೆಗೆ ಬಂದರೆ ಆಸ್ತಿಯೆಲ್ಲ ಬರೆದುಕೊಡುವುದಾಗಿ ಹೇಳಿ ಬೆದರಿಕೆ ಹಾಕಿಸಿದರು ಅಮೃತಾ ಜಗ್ಗದೇ ಮತ್ತೆ ಈ ಬೆದರಿಕೆಯ ವಿಚಾರದ ಕುರಿತು ಪೋಲೀಸರಿಗೆ ದೂರು ನೀಡಿದ್ದಳು. ಮಾರುತಿರಾವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು ಸಾಕಷ್ಟು ಆಸ್ತಿ ಮಾಡಿದ್ದಾನೆ. ಈ ಕುರಿತು ಆತ ಮತ್ತು ಆತನ ಸಹೋದರ ಶ್ರವಣ್ ನಡುವೆ ಜಗಳ ಸಹ ನಡೆಯುತ್ತಿತ್ತು.

ಮಾರುತಿರಾವ್‌ ಸಹೋದರ ಶ್ರವಣ್‌ ಕೂಡ ಕೊಲೆ ಆರೋಪಿಯಾಗಿದ್ದ. ಹಾಗಾಗಿ ಆತ ಪದೇ ಪದೇ ಕೊಲೆ ಕೇಸಿನಲ್ಲಿ ನಾನು ಅಲೆಯುತ್ತಿದ್ದೇನೆ. ನಿನಗಿದ್ದ ಒಬ್ಬಳೇ ಮಗಳು ಸಹ ನಿನ್ನ ಜೊತೆಗಿಲ್ಲ ಮಾತ್ರವಲ್ಲದೇ ನಿನ್ನ ವಿರುದ್ಧವೇ ದೂರು ನೀಡುತ್ತಿದ್ದಾಳೆ. ಹಾಗಾಗಿ ಆಕೆಯನ್ನು ಮುಗಿಸಿಬಿಡು, ನಿನ್ನ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಬರೆದುಕೊಂಡು ಎಂದು ದುಂಬಾಲು ಬಿದ್ದಿದ್ದ ಎಂಬ ಸತ್ಯಗಳು ಒಂದೊಂದೇ ಹೊರಬರುತ್ತಿವೆ.

ಇದೆಲ್ಲವೂ ಅಮೃತಾಳ ಗಮನಕ್ಕೆ ಬಂದಿತ್ತು. ಹಾಗಾಗಿಯೇ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಕೆ “ನನ್ನ ತಂದೆ ಮಾರುತಿರಾವ್ ಹೆದರಿಕೆಯ ವ್ಯಕ್ತಿಯಲ್ಲ. ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಳ್ಳುವವರಾಗಿದ್ದರೆ ಈ ಹಿಂದೆಯೇ ಮಾಡಿಕೊಳ್ಳುತ್ತಿದ್ದರು. ನಮ್ಮ ಚಿಕ್ಕಪ್ಪ ಶ್ರವಣ್ ಜೊತೆ ನಮ್ಮ ತಂದೆಗೆ ಹಲವಾರು ಭಾರಿ ಆಸ್ತಿ ಜಗಳ ಆಗಿದೆ ಎಂದು ಕೇಳಿದ್ದೆ, ಈ ಆತ್ಮಹತ್ಯೆಗೆ ಇದೇ ಕಾರಣವು ಇರಬಹುದು” ಎಂಬ ಸಂದೇಹ ವ್ಯಕ್ತಪಡಿಸಿದ್ದಾಳೆ.

ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಕೊಂದುಕೊಳ್ಳುವ ಮತ್ತು ಇನ್ನೊಬ್ಬರನ್ನು ಕೊಲ್ಲವ ಯಾವುದೇ ಹಕ್ಕು ಇಲ್ಲ. ನ್ಯಾಯಾಲಯದ ಮೂಲಕ ನಮ್ಮ ತಂದೆಗೆ ಯಾವುದೇ ರೀತಿಯ ಶಿಕ್ಷೆ ಆಗಿದ್ದರೂ ಸಹ ನಾನು ಸ್ವಾಗತಿಸುತ್ತಿದ್ದೆ. ಆದರೆ ಈ ಆತ್ಮಹತ್ಯೆ ಮಾಡಿಕೊಂಡಿರುವ ವೀಚಾರ ನೋವನ್ನು ತಂದಿದೆ. ಗಂಡ ತೀರಿಕೊಂಡರೆ ಆ ಹೆಂಡತಿಯ ಸ್ಥಿತಿ ಹೇಗಿರುತ್ತದೆ ಎಂದು ನನಗೆ ಒಂದೂವರೆ ವರ್ಷದಿಂದ ಅನುಭವವಾಗಿದೆ. ಹಾಗಾಗಿಯೇ ನಮ್ಮ ತಾಯಿಯನ್ನು ಮಾತಾಡಿಸಲು ಹೋಗಿದ್ದೆ. ಆದರೆ ಅಲ್ಲಿನ ನಮ್ಮ ಕುಟುಂಬಸ್ಥರು ನನಗೆ ಅನುಮತಿ ನೀಡಲಿಲ್ಲ. ಮಗನನ್ನು ಕಳೆದುಕೊಂಡ ನನ್ನ ಅತ್ತೆ-ಮಾವನನ್ನು ನಾನು ಬಿಟ್ಟುಹೋಗಲು ಸಾಧ್ಯವಿಲ್ಲ. ಆದರೆ ನನ್ನ ತಾಯಿಯು ನನ್ನ ಜೊತೆ ಬಂದರೆ ನಾನೇ ನೋಡಿಕೊಳ್ಳುತ್ತೇನೆ. ನನಗೆ ಮಾರುತಿರಾವ್‍ನ ಯಾವ ಆಸ್ತಿಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾಳೆ.


ಇದನ್ನೂ ಓದಿ: ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು


ಆ ಮೂಲಕ ಜಾತಿಗಿಂತ ಮಾನವೀಯತೆ ಮತ್ತು ಮನುಷ್ಯ ಸಂಬಂಧಗಳು ಮುಖ್ಯ ಎಂದು ಸಾರಿದ್ದಾಳೆ. ಆಕೆ ಪ್ರಬುದ್ಧವಾಗಿ ನಡೆದುಕೊಂಡಿದ್ದಾಳೆ. ಆದರೆ ಆಕೆಯ ಕುಟುಂಬ ಮಾತ್ರ ಇನ್ನು ಜಾತಿಗ್ರಸ್ಥ ಮನಸ್ಥಿತಿಯಿಂದ ಹೊರಬಂದಿಲ್ಲ. ಇದು ಈ ದೇಶದ ದುಸ್ಥಿತಿಯಾಗಿದೆ. ಹಾಗಾಗಿಯೇ ಜಸ್ಟೀಸ್ ಫಾರ್‌ ಪ್ರಣಯ್‌ ಎಂಬ ಅಭಿಯಾನದ ಮೂಲಕ ಅಮೃತಾ ತನ್ನ ಹೋರಾಟವನ್ನು ಮುಂದುವರೆಸಿದ್ದಾಳೆ. ಸಮಾಜ ಈ ಸಂದರ್ಭದಲ್ಲಿ ಆಕೆಯ ಪರ ನಿಲ್ಲಬೇಕೆ ಹೊರತು ಜಾತಿವಾದಿ ಆಕೆಯ ತಂದೆಯ ಪರವಲ್ಲ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...