Homeಕರ್ನಾಟಕಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

- Advertisement -
- Advertisement -

ಕೊರೊನಾ ಬಗ್ಗೆ ಇರುವ ಹಾಗೂ ಹರಡುತ್ತಿರುವ ಸುಳ್ಳು ಸುದ್ದಿಗಳಾಚೆಗೆ ಕರ್ನಾಟಕದ ಕೊರೊನಾ ಸೋಂಕಿನಿಂದ ಗುಣಮುಖರಾದ ಮೊದಲ ವ್ಯಕ್ತಿ ವೆಂಕಟ್ ಪಿ.ಕೆ. ಅವರು ತನ್ನ ಮನದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಜೊತೆಗೆ ಕೊರೊನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳ ಬಗ್ಗೆ ಕೂಡಾ ಜಾಗೃತರಾಗುವಂತೆ ಹೇಳಿ ಸೋಂಕು ಬಂದರೂ ಭಯಪಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಅವರೇ ಹೇಳಿಕೊಂಡಿರುವಂತೆ ವೆಂಕಟ್ ಪಿ.ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ. ಕೊರೊನಾ ವೈರಸ್ ಸೋಂಕಿದ್ದರಿಂದ ಇವರು ರಾಜಿವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಕೆಲವು ದಿನಗಳಿದ್ದ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

ಹಲವಾರು ಜನ ಇವರೊಂದಿಗೆ, ನಿಮಗೆ ಹೇಗೆ ಕೊರೊನಾ ಬಂತು ಎಂದು ಕೇಳಿದ್ದರಿಂದ ಹಾಗೂ ಸೋಂಕಿನ ಬಗ್ಗೆ ಹಲವಾರು ತಪ್ಪು ಅಭಿಪ್ರಾಯಗಳು ಇರುವುದರಿಂದ ಈ ವಿಡಿಯೊ ಮಾಡುತ್ತಿದ್ದೇನೆ ಎಂದು ವೆಂಕಟ್ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

“ನಾನು ಮಾರ್ಚ್ ಮೊದಲ ವಾರದಲ್ಲಿ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದೆ. ನಾನು ಆದಷ್ಟು ಜಾಗರೂಕನಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಸೋಂಕಿರುವವರು ಬಳಸಿದ ಬಾತ್‌ರೂಮಿನಿಂದ, ಸೆಕ್ಯೂರಿಟಿಗಾಗಿ ಬಳಸುವ ಬೆರಳಚ್ಚು ಸ್ಕಾನ್‌ನಿಂದ ಅಥವಾ ಸೋಂಕಿರುವವರು ಉಸಿರಾಡಿದ ಗಾಳಿ ಕುಡಿದಿದ್ದರಿಂದಲೂ ಇದು ನನಗೆ ಬಂದಿರಬಹುದು” ಎಂದು ವೆಂಕಟ್ ಹೇಳುತ್ತಾರೆ.

ವೆಂಕಟ್ ಹೇಳುವಂತೆ “ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವಾಗಲೆ ನನಗೆ ಜ್ವರ ಶುರುವಾಗಿತ್ತು. ನಾನು ಮೊದಲಿಗೆ ಸಾಧಾರಣ ಜ್ವರ ಆಗಿರಬಹುದು ಎಂದು ಭಾವಿಸಿ ಕೆಲವು ಮಾತ್ರೆಗಳನ್ನು ತೆಗೆದುಕೊಂಡೆ. ನಾನು ವಾಪಾಸು ಬಂದು ಏರ್‌ಪೋರ್ಟಿನಲ್ಲಿ ನನ್ನ ಜ್ವರದ ಬಗ್ಗೆ ಹೇಳಿದೆ. ಏರ್‌ಪೋರ್ಟಿನ ಡಾಕ್ಟರುಗಳ ಕೈಯ್ಯಲ್ಲಿ ಸಾಕಷ್ಟು ವೈದ್ಯಕೀಯ ಸಲಕರಣೆಗಳು ಇರಲಿಲ್ಲ, ಯಾಕೆಂದರೆ ಅವರಿನ್ನೂ ಅದರ ತಯಾರಿಯಲ್ಲಿದ್ದರು.” ಎನ್ನುತ್ತಾರೆ.

“ಅಲ್ಲಿಂದ ಕ್ಲಿಯರೆನ್ಸ್ ಪಡೆದು ಮನೆಗೆ ಬಂದೆನಾದರೂ ನನ್ನ ಹೆಂಡತಿಯೊಂದಿಗೆ ನನಗೆ ಏನೋ ಆಗುತ್ತಿದೆ, ನನ್ನಿಂದ ಅಂತರದಲ್ಲಿರುವಂತೆ ಹೇಳಿ ನನ್ನ ಮನೆಯ ಮಹಡಿಗೆ ಹೋದೆ. ನಂತರ ನಾನು ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾದೆ. ಪರೀಕ್ಷೆಗೊಳಗಾದ ಮರುದಿನ ಮಧ್ಯಾನ್ಹ ನನ್ನಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗುವಂತೆ ಆಸ್ಪತ್ರೆಯಿಂದ ಫೋನ್ ಬಂತು. ನಾನು ತಕ್ಷಣವೇ ಮನೆಯಿಂದ ಹೊರಟು ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾದೆ” ಎಂದು ವೆಂಕಟ್ ಹೇಳುತ್ತರೆ.

ವಿಡಿಯೋ ನೋಡಿ

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು

Posted by Naanu Gauri on Thursday, April 2, 2020

“ಜ್ವರವು ಮುಂಜಾನೆ 102 ಡಿಗ್ರಿ ಹಾಗೂ ಹಗಲು ಹೊತ್ತು 100 ಡಿಗ್ರಿ ಆಗಿರುತ್ತಿತ್ತು. ನನಗೆ ಮೊದಲಿಗೆ ಅನಿಸಿದ್ದು ನನ್ನ ದೇಶಕ್ಕೆ ಕಟ್ಟಿದ್ದ ತೆರಿಗೆ ಸಾರ್ಥಕ ಆಗಿದೆ ಎಂದು. ಯಾಕೆಂದರೆ ಅಷ್ಟೊಂದು ಸೇವಾ ಮನೋಭಾವದ ವೈದ್ಯರು ಅಲ್ಲಿದ್ದರು. ಸಾಮಾನ್ಯಾಗಿ ಆಂಟಿಬಯಾಟಿಕ್ಸ್ ಕೊಡುತ್ತಿದ್ದರು. ಸುಸ್ತಾದಾಗ ಐವಿ ಕೇಳಿ ಐವಿಯನ್ನು ಹಾಕುತ್ತಿದ್ದೆ. ಎರಡು ವಾರಗಳವರೆಗೂ ಜ್ವರ ಇತ್ತು. ಸಾಮಾನ್ಯವಾಗಿ ನನಗೆ ಇಷ್ಟು ದಿನದ ಜ್ವರದ ಅನುಭವವೇ ಆಗಿರಲಿಲ್ಲ. ಎರಡು ವಾರಗಳ ನಂತರ ನನ್ನ ಜ್ವರ ನಿಂತಿತು. ಜ್ವರ ಬಿಟ್ಟು ಐದು ಪರೀಕ್ಷೆಗಳು ನಡೆಸಿದ ನಂತರ ಕೊರೊನಾ ನೆಗೆಟಿವ್ ಆಗಿರುವುದು ತಿಳಿದು ಬಂತು” ಎಂದು ಅವರು ಹೇಳುತ್ತಾರೆ.

ಸ್ವತಃ ವೆಂಕಟ್ ಕೊರೊನವನ್ನು ತಡೆಯಬಹುದಾಗಿದೆ ಎಂದು ಧೈರ್ಯ ತುಂಬುತ್ತಾರೆ. “ಸೋಂಕಿನ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹರಡುತ್ತಿವೆ. ಇದನ್ನು ಮೂರು ದಾರಿಯಲ್ಲಿ ತಡೆಗಟ್ಟಬಹುದಾಗಿದೆ. ಮೊದಲನೆಯದಾಗಿ ಮುಖಕ್ಕೆ ಮಾಸ್ಕ್ ಹಾಕುವುದರ ಮೂಲಕ ಇನ್ನೊಬ್ಬರಿಗೆ ರೋಗ ಹರಡದಿರುವಂತೆ ಮಾಡಬಹುದು. ಎರಡನೆಯದಾಗಿ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಹಾಗೂ ನಿಮ್ಮ ಮುಖವನ್ನು ಕೈ ತೊಳೆಯದೆ ಮುಟ್ಟದಿರಿ. ಮೂರನೆಯದಾಗಿ ನಿಮ್ಮ ವಸ್ತುಗಳನ್ನು ಪ್ರತ್ಯೇಕವಾಗಿ ಇಟ್ಟು ಬಿಡಿ” ಎಂದು ವೆಂಕಟ್ ಹೇಳುತ್ತಾರೆ.

ಈ ರೋಗವು ತಡೆಗಟ್ಟುವಂತದ್ದಾಗಿದೆ ಎನ್ನುವ ವೆಂಕಟ್, “ನೀವು ಅದರಿಂದ ಹೊರಗೆ ಬರಬಹುದಾಗಿದೆ. ಸೋಂಕಿತರಿಗೆ ನನ್ನ ಶುಭ ಹಾರೈಕೆ ಇರುತ್ತದೆ. ಭಯದಿಂದ ದೂರವಿರಿ, ಇದು ನಿಮಗೆ ಬರದೇ ಇರಲಿ, ಒಂದು ವೇಳೆ ಬಂದರೂ ಅದನ್ನು ತಡೆಗಟ್ಟಬಹುದಾಗಿದೆ” ಎಂದು ಅವರ ತನ್ನ ವಿಡಿಯೊದಲ್ಲಿ ಧೈರ್ಯ ಹೇಳುತ್ತಾರೆ.

ವೆಂಕಟ್‌ರವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹಾಕಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು ಬಹಳಷ್ಟು ಜನ ಷೇರ್‌ ಮಾಡಿದ್ದಾರೆ. ಹಾಗೆಯೇ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ: ಕೊರೊನ ಸಾಂಕ್ರಾಮಿಕ ಬಿಕ್ಕಟ್ಟಿನ ಬೆಂಕಿಗೆ ಪುಳ್ಳೆಯಿಟ್ಟ ವೈಜ್ಞಾನಿಕ ಮನೋಭಾವದ ಅಭಾವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...