Homeಮುಖಪುಟಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಕೊರೊನಾ ಭಯಕ್ಕೆ ಸ್ವತಃ ಸಂಬಂಧಿಕರು ಕೂಡಾ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿದ್ದರೆ ಅವೆಲ್ಲವನ್ನೂ ಮೀರಿ, ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ ಇಲ್ಲಿ.

- Advertisement -
- Advertisement -

ರಾಜ್ಯದಲ್ಲಿ ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ಪೀಡಿತ ವೃದ್ದ ಮಹಿಳೆಯ ಶವ ಸಂಸ್ಕಾರ ಮಾಡದಂತೆ ತಡೆದ ಮಂಗಳೂರಿನ ಶಾಸಕರ ನಡೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದು ಪಕ್ಷಾತೀತವಾಗಿ ಖಂಡಿಸಿತು. ಆದರೆ ಈಗ ಅಂತಹ ಘಟನೆಗಳು ಸಾಮಾನ್ಯವಾಗಿವೆ. ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಜನರು ಮೃತ ಶವಗಳಿಂದಲೂ ಕೊರೊನಾ ಹರಡಬಹುದು ಎಂಬ ಮೂಢನಂಬಿಕೆಗೆ ಒಳಗಾಗಿ ತಮ್ಮ ಪ್ರದೇಶದ ಬಳಿ ಅಂತ್ಯ ಸಂಸ್ಕಾರಕ್ಕೆ  ಅವಕಾಶ ಕೊಡದ ಘಟನೆಗಳು ಜರುಗುತ್ತಿವೆ. ಮೃತ ವ್ಯಕ್ತಿಯ ಕುಟುಂಬಸ್ಥರೇ ಶವ ಸಂಸ್ಕಾರಕ್ಕೆ ಹೆದರುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಕೊರೊನಾ ಸೋಂಕಿತ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರೂ ಮೃತದೇಹದೊಂದಿಗೆ ನಡೆಯುತ್ತಿರುವ ಅಮಾನವೀಯ ರೀತಿ ಇನ್ನೂ ಕಡಿಮೆಯಾಗಿಲ್ಲ. ಮಾನವನೊಬ್ಬ ತನ್ನ ಸಾವಿನಲ್ಲೂ ಘನತೆಯನ್ನು ಪಡೆಯದಿದ್ದರೆ ನಮ್ಮ ವ್ಯವಸ್ಥೆ ನಮ್ಮನ್ನು ಎಂತಹ ಅಧಃಪತನಕ್ಕೆ ತಲುಪಿಸಿದೆ ನೋಡಿ. ಜನ ಹೀಗೆ ಮಾಡುವುದಕ್ಕೆ ಹೆಚ್ಚಿನ ಕಾರಣ ಮಾಧ್ಯಮಗಳು ಸೃಷ್ಟಿಸಿರುವ ಆರ್ಭಟ ಎಂದರೂ ತಪ್ಪಿಲ್ಲ.

ಕೇವಲ ಕೊರೊನಾದಿಂದ ಮೃತಪಟ್ಟವರು ಮಾತ್ರವಲ್ಲ, ಸಾಮಾನ್ಯವಾಗಿ ಸತ್ತಾಗಲೂ ಜನರು ಮೃತದೇಹದತ್ತ ಸುಳಿಯುತ್ತಿಲ್ಲ. ಹಾಸನದಲ್ಲಿ ತನ್ನ ಪತಿಯ ಶವದ ಮುಂದೆ ನಿಂತು ವೃದ್ದೆ ಪತ್ನಿ ಕಣ್ಣೀರು ಹಾಕಿದಾಗಲೂ ಸ್ವತಃ ಮೃತಪಟ್ಟವರ ಸಂಬಂಧಿಕರೂ ಮುಟ್ಟಲು ತಯಾರಿರಲಿಲ್ಲ. ಹಾವೇರಿಯಲ್ಲಿ ಕೂಡಾ ಇಂತಹದ್ದೆ ಘಟನೆ ನಡೆಯಿತು, ಅಧಿಕಾರಿಗಳು ಪಿಪಿಇ ಕಿಟ್ ಕೊಡುತ್ತೇವೆ ಬಂದು ಶವಸಂಸ್ಕಾರ ನಡೆಸಿಯೆಂದರೂ ಶವದ ಅಂತಿಮ ದರ್ಶನಕ್ಕೂ ಸಂಬಂಧಪಟ್ಟವರು ಬಂದಿಲ್ಲ.

ಇದರಾಚೆಗೂ ಹಲವಾರು ಅಪ್ಪಟ ಮನುಷ್ಯರ, ಮಾನವೀಯತೆಯ ಕತೆಗಳೂ ಹೇಳಲಿಕ್ಕಿದೆ. ಕೊರೊನಾ ಭಯಕ್ಕೆ ಸ್ವತಃ ಸಂಬಂಧಿಕರು ಕೂಡಾ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿದ್ದರೆ ಅವೆಲ್ಲವನ್ನೂ ಮೀರಿ ಇಲ್ಲಿ ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಜನ ಹೆದರುತ್ತಿರುವುದನ್ನು ಅರಿತ ಬೀದರ್‌ನ ಮಹ್ಮದ್ ಮಜೀದ್ ಬಿಲಾಲ್ ಹಾಗೂ ಸ್ನೇಹಿತರು ಆರೋಗ್ಯ ಇಲಾಖೆ ಮತ್ತು ನಗರಸಭೆಯ ಪರವಾನಿಗೆ ಪಡೆದು ಇದುವರೆಗೂ ಕೋವಿಡ್‌ನಿಂದ ಮೃತಪಟ್ಟ ಮೂವರ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಮೊದಲು ಸಹ ಅವರು ಹತ್ತಾರು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿ ಸಾಮಾಜಿಕ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ತಮ್ಮ ಫೋನ್ ನಂಬರ್‌ ಅನ್ನು ಸಾರ್ವಜನಿಕವಾಗಿ ಪ್ರಕಟಿಸಿ ಅಂತ್ಯ ಸಂಸ್ಕಾರಕ್ಕೆ ಸಹಾಯ ಬೇಕಿದ್ದರೆ ತಿಳಿಸಿ ಎಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಅಪರಿಚಿತರಾಗಿರುವ ಜೀವಂತ ಮನುಷ್ಯರನ್ನೇ ಮುಟ್ಟಲು ಭಯಪಡುವ ಈ ಸಂಧರ್ಭದಲ್ಲಿ ಅನಾಥ ಶವವನ್ನು ಕೂಡಾ ಅಂತ್ಯಸಂಸ್ಕಾರ ಮಾಡುವ ಚೆನ್ನಪಟ್ಟಣದ ಮಹಿಳೆ ಆಶಾರಂತವರೂ ನಮ್ಮ ನಡುವೆಯಿದ್ದಾರೆ. ಕಳೆದ ಮೂರು ವರ್ಷದಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿರುವ ಇವರು ಕೊರೊನಾ ಕಾಲದಲ್ಲಿಯೂ ಇನ್ನೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಕೃಪೆ: ಪ್ರಜಾವಾಣಿ

ಮೈಸೂರಿನ ಆರೋಗ್ಯ ಇಲಾಖೆಯ ಚಾಲಕರಾದ ನಾಗರಾಜ್ ಕೂಡಾ ಕೊರೊನಾದಿಂದ ಮೃತಪಟ್ಟವನ್ನು ಘನತೆಯಿಂದ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಸಾವಿರಾರು ಶವ ಸಾಗಿಸಿರುವ ಅವರು ಮೃತಪಟ್ಟವರನ್ನು ಮುಟ್ಟಲಾಗದ ಇಂದಿನ ಸ್ಥಿತಿಗೆ ಮರುಗುತ್ತಾರೆ.

ಪಿಎಫ್‌ಐ ಸಂಘಟನೆ ರಾಜ್ಯಾದ್ಯಂತ ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರಕ್ಕೆಂದೆ ತಂಡವನ್ನೇ ಕಟ್ಟಿದೆ. ಒಂದು ಫೋನ್ ಮಾಡಿದರೆ ಸಾಕು ತಮ್ಮದೇ ಖರ್ಚಿನಲ್ಲಿ ನಿಸ್ವಾರ್ಥವಾಗಿ ಅವರವರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇದುವರೆಗೂ ಹತ್ತಾರು ಶವಗಳ ಅಂತ್ಯಸಂಸ್ಕಾರದಲ್ಲಿ ಇವರ ಪಾಲಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ಮಾಡಲು ಯಾರು ಮುಂದೆ ಬಾರದಿದ್ದಾಗ ಮಾಗಡಿ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳು ಪಿಎಫ್‌ಐ ಪದಾಧಿಕಾರಿಗಳಿಗೆ ಪತ್ರ ಬರೆದು ಶವಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದಾರೆ.

ಯಾದಗಿರಿಯಲ್ಲಿ ಕೊರೊನಾ ಮೃತದೇಹವನ್ನು ನೆಲದ ಮೇಲೆ ಮಲಗಿಸಿ ಎಳೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿರುವಂತಹ ಘಟನೆ ನಡೆದಿರುವಾಗ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ಶವ ಸಂಸ್ಕಾರ ನಮಗೆ ಮಾದರಿಯಾಗಬೇಕು. ಮಂಗಳೂರಿನಲ್ಲಿ ಜಿಲ್ಲಾಡಳಿತ ಕೊರೊನಾ ಮೃತದೇಹಗಳ ಶವಸಂಸ್ಕಾರಕ್ಕೆಂದೆ ನಿಸ್ವಾರ್ಥ ಸ್ವಯಂಸೇವಕರ ತಂಡವನ್ನು ತರಬೇತಿ ನೀಡಿ ಸಜ್ಜುಗೊಳಿಸಿದೆ. ಈ ತಂಡವು ಮೃತಪಟ್ಟವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಿದೆ.

ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ಎಂಬ ಮಾರ್ಗಸೂಚಿಗಳನ್ನು ಕೊಟ್ಟಿರುವಾಗ ಜನರು ಮೃತದೇವನ್ನು ಸಂಸ್ಕಾರ ಮಾಡಲು ಹೆದರುವುದರಲ್ಲಿ ಯಾವುದೇ ಅರ್ಥವಿಲ್ಲ.

ಮೃತದೇಹದೊಂದಿಗೆ ನಡೆಯುತ್ತಿರುವ ಈ ಅಮಾನವೀಯ ನಡೆಗೆ ಕೇವಲ ಜನರನ್ನು ದೂರಿದರೆ ಪ್ರಯೋಜನವಿಲ್ಲ. ಏಕೆಂದರೆ ಕೊರೊನಾ ಓಡಿಸಲು ತಟ್ಟೆ ದೀಪ ಇತ್ಯಾದಿಗಳನ್ನು ಬಡಿಯಲು ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡಿದ ಸರ್ಕಾರ ಹಾಗೂ ಮಾಧ್ಯಮಗಳು ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂದು ಮತ್ತು ಹೇಗೆ ಸಂಸ್ಕಾರ ಮಾಡಬೇಕು ಎಂಬುದನ್ನು ಪ್ರಚಾರ ಮಾಡಲೇ ಇಲ್ಲ.

ಒಟ್ಟಿನಲ್ಲಿ ಕುಬ್ಜನಾಗಿರುವ ಮನುಷ್ಯನನ್ನು ಕೊರೊನಾ ಸಾಂಕ್ರಮಿಕ ರೋಗ ಮತ್ತಷ್ಟು ಕುಬ್ಜನನ್ನಾಗಿಸಿದೆ. ಇದು ನಿಜವಾಗಿಯೂ ಮನುಷ್ಯರು ಮತ್ತಷ್ಟು ವಿಶಾದ ದೃಷ್ಟಿಯಿಂದ, ಮಾನವೀಯತೆಯಿಂದ ವರ್ತಿಸಲು ಕಲಿಯುವುದಕ್ಕೆ ಸದಾವಕಾಶವಾಗಿತ್ತು. ಆದರೆ ಅದನ್ನು ಹೆಚ್ಚಿನವರು ಮಾಡದಿದ್ದರೂ ಕೆಲವರಾದರೂ ನಿಸ್ವಾರ್ಥವಾಗಿ ಮಾಡುತ್ತಾ ನಮಗೆಲ್ಲ ಮಾದರಿಯಾಗಿದ್ದಾರೆ.


ಓದಿ:


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...