Homeಮುಖಪುಟಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಕೊರೊನಾ ಭಯಕ್ಕೆ ಸ್ವತಃ ಸಂಬಂಧಿಕರು ಕೂಡಾ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿದ್ದರೆ ಅವೆಲ್ಲವನ್ನೂ ಮೀರಿ, ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ ಇಲ್ಲಿ.

- Advertisement -
- Advertisement -

ರಾಜ್ಯದಲ್ಲಿ ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ಪೀಡಿತ ವೃದ್ದ ಮಹಿಳೆಯ ಶವ ಸಂಸ್ಕಾರ ಮಾಡದಂತೆ ತಡೆದ ಮಂಗಳೂರಿನ ಶಾಸಕರ ನಡೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದು ಪಕ್ಷಾತೀತವಾಗಿ ಖಂಡಿಸಿತು. ಆದರೆ ಈಗ ಅಂತಹ ಘಟನೆಗಳು ಸಾಮಾನ್ಯವಾಗಿವೆ. ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಜನರು ಮೃತ ಶವಗಳಿಂದಲೂ ಕೊರೊನಾ ಹರಡಬಹುದು ಎಂಬ ಮೂಢನಂಬಿಕೆಗೆ ಒಳಗಾಗಿ ತಮ್ಮ ಪ್ರದೇಶದ ಬಳಿ ಅಂತ್ಯ ಸಂಸ್ಕಾರಕ್ಕೆ  ಅವಕಾಶ ಕೊಡದ ಘಟನೆಗಳು ಜರುಗುತ್ತಿವೆ. ಮೃತ ವ್ಯಕ್ತಿಯ ಕುಟುಂಬಸ್ಥರೇ ಶವ ಸಂಸ್ಕಾರಕ್ಕೆ ಹೆದರುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಕೊರೊನಾ ಸೋಂಕಿತ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರೂ ಮೃತದೇಹದೊಂದಿಗೆ ನಡೆಯುತ್ತಿರುವ ಅಮಾನವೀಯ ರೀತಿ ಇನ್ನೂ ಕಡಿಮೆಯಾಗಿಲ್ಲ. ಮಾನವನೊಬ್ಬ ತನ್ನ ಸಾವಿನಲ್ಲೂ ಘನತೆಯನ್ನು ಪಡೆಯದಿದ್ದರೆ ನಮ್ಮ ವ್ಯವಸ್ಥೆ ನಮ್ಮನ್ನು ಎಂತಹ ಅಧಃಪತನಕ್ಕೆ ತಲುಪಿಸಿದೆ ನೋಡಿ. ಜನ ಹೀಗೆ ಮಾಡುವುದಕ್ಕೆ ಹೆಚ್ಚಿನ ಕಾರಣ ಮಾಧ್ಯಮಗಳು ಸೃಷ್ಟಿಸಿರುವ ಆರ್ಭಟ ಎಂದರೂ ತಪ್ಪಿಲ್ಲ.

ಕೇವಲ ಕೊರೊನಾದಿಂದ ಮೃತಪಟ್ಟವರು ಮಾತ್ರವಲ್ಲ, ಸಾಮಾನ್ಯವಾಗಿ ಸತ್ತಾಗಲೂ ಜನರು ಮೃತದೇಹದತ್ತ ಸುಳಿಯುತ್ತಿಲ್ಲ. ಹಾಸನದಲ್ಲಿ ತನ್ನ ಪತಿಯ ಶವದ ಮುಂದೆ ನಿಂತು ವೃದ್ದೆ ಪತ್ನಿ ಕಣ್ಣೀರು ಹಾಕಿದಾಗಲೂ ಸ್ವತಃ ಮೃತಪಟ್ಟವರ ಸಂಬಂಧಿಕರೂ ಮುಟ್ಟಲು ತಯಾರಿರಲಿಲ್ಲ. ಹಾವೇರಿಯಲ್ಲಿ ಕೂಡಾ ಇಂತಹದ್ದೆ ಘಟನೆ ನಡೆಯಿತು, ಅಧಿಕಾರಿಗಳು ಪಿಪಿಇ ಕಿಟ್ ಕೊಡುತ್ತೇವೆ ಬಂದು ಶವಸಂಸ್ಕಾರ ನಡೆಸಿಯೆಂದರೂ ಶವದ ಅಂತಿಮ ದರ್ಶನಕ್ಕೂ ಸಂಬಂಧಪಟ್ಟವರು ಬಂದಿಲ್ಲ.

ಇದರಾಚೆಗೂ ಹಲವಾರು ಅಪ್ಪಟ ಮನುಷ್ಯರ, ಮಾನವೀಯತೆಯ ಕತೆಗಳೂ ಹೇಳಲಿಕ್ಕಿದೆ. ಕೊರೊನಾ ಭಯಕ್ಕೆ ಸ್ವತಃ ಸಂಬಂಧಿಕರು ಕೂಡಾ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿದ್ದರೆ ಅವೆಲ್ಲವನ್ನೂ ಮೀರಿ ಇಲ್ಲಿ ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಜನ ಹೆದರುತ್ತಿರುವುದನ್ನು ಅರಿತ ಬೀದರ್‌ನ ಮಹ್ಮದ್ ಮಜೀದ್ ಬಿಲಾಲ್ ಹಾಗೂ ಸ್ನೇಹಿತರು ಆರೋಗ್ಯ ಇಲಾಖೆ ಮತ್ತು ನಗರಸಭೆಯ ಪರವಾನಿಗೆ ಪಡೆದು ಇದುವರೆಗೂ ಕೋವಿಡ್‌ನಿಂದ ಮೃತಪಟ್ಟ ಮೂವರ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಮೊದಲು ಸಹ ಅವರು ಹತ್ತಾರು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿ ಸಾಮಾಜಿಕ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ತಮ್ಮ ಫೋನ್ ನಂಬರ್‌ ಅನ್ನು ಸಾರ್ವಜನಿಕವಾಗಿ ಪ್ರಕಟಿಸಿ ಅಂತ್ಯ ಸಂಸ್ಕಾರಕ್ಕೆ ಸಹಾಯ ಬೇಕಿದ್ದರೆ ತಿಳಿಸಿ ಎಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಅಪರಿಚಿತರಾಗಿರುವ ಜೀವಂತ ಮನುಷ್ಯರನ್ನೇ ಮುಟ್ಟಲು ಭಯಪಡುವ ಈ ಸಂಧರ್ಭದಲ್ಲಿ ಅನಾಥ ಶವವನ್ನು ಕೂಡಾ ಅಂತ್ಯಸಂಸ್ಕಾರ ಮಾಡುವ ಚೆನ್ನಪಟ್ಟಣದ ಮಹಿಳೆ ಆಶಾರಂತವರೂ ನಮ್ಮ ನಡುವೆಯಿದ್ದಾರೆ. ಕಳೆದ ಮೂರು ವರ್ಷದಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿರುವ ಇವರು ಕೊರೊನಾ ಕಾಲದಲ್ಲಿಯೂ ಇನ್ನೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಕೃಪೆ: ಪ್ರಜಾವಾಣಿ

ಮೈಸೂರಿನ ಆರೋಗ್ಯ ಇಲಾಖೆಯ ಚಾಲಕರಾದ ನಾಗರಾಜ್ ಕೂಡಾ ಕೊರೊನಾದಿಂದ ಮೃತಪಟ್ಟವನ್ನು ಘನತೆಯಿಂದ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಸಾವಿರಾರು ಶವ ಸಾಗಿಸಿರುವ ಅವರು ಮೃತಪಟ್ಟವರನ್ನು ಮುಟ್ಟಲಾಗದ ಇಂದಿನ ಸ್ಥಿತಿಗೆ ಮರುಗುತ್ತಾರೆ.

ಪಿಎಫ್‌ಐ ಸಂಘಟನೆ ರಾಜ್ಯಾದ್ಯಂತ ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರಕ್ಕೆಂದೆ ತಂಡವನ್ನೇ ಕಟ್ಟಿದೆ. ಒಂದು ಫೋನ್ ಮಾಡಿದರೆ ಸಾಕು ತಮ್ಮದೇ ಖರ್ಚಿನಲ್ಲಿ ನಿಸ್ವಾರ್ಥವಾಗಿ ಅವರವರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇದುವರೆಗೂ ಹತ್ತಾರು ಶವಗಳ ಅಂತ್ಯಸಂಸ್ಕಾರದಲ್ಲಿ ಇವರ ಪಾಲಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ಮಾಡಲು ಯಾರು ಮುಂದೆ ಬಾರದಿದ್ದಾಗ ಮಾಗಡಿ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳು ಪಿಎಫ್‌ಐ ಪದಾಧಿಕಾರಿಗಳಿಗೆ ಪತ್ರ ಬರೆದು ಶವಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದಾರೆ.

ಯಾದಗಿರಿಯಲ್ಲಿ ಕೊರೊನಾ ಮೃತದೇಹವನ್ನು ನೆಲದ ಮೇಲೆ ಮಲಗಿಸಿ ಎಳೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿರುವಂತಹ ಘಟನೆ ನಡೆದಿರುವಾಗ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ಶವ ಸಂಸ್ಕಾರ ನಮಗೆ ಮಾದರಿಯಾಗಬೇಕು. ಮಂಗಳೂರಿನಲ್ಲಿ ಜಿಲ್ಲಾಡಳಿತ ಕೊರೊನಾ ಮೃತದೇಹಗಳ ಶವಸಂಸ್ಕಾರಕ್ಕೆಂದೆ ನಿಸ್ವಾರ್ಥ ಸ್ವಯಂಸೇವಕರ ತಂಡವನ್ನು ತರಬೇತಿ ನೀಡಿ ಸಜ್ಜುಗೊಳಿಸಿದೆ. ಈ ತಂಡವು ಮೃತಪಟ್ಟವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಿದೆ.

ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ಎಂಬ ಮಾರ್ಗಸೂಚಿಗಳನ್ನು ಕೊಟ್ಟಿರುವಾಗ ಜನರು ಮೃತದೇವನ್ನು ಸಂಸ್ಕಾರ ಮಾಡಲು ಹೆದರುವುದರಲ್ಲಿ ಯಾವುದೇ ಅರ್ಥವಿಲ್ಲ.

ಮೃತದೇಹದೊಂದಿಗೆ ನಡೆಯುತ್ತಿರುವ ಈ ಅಮಾನವೀಯ ನಡೆಗೆ ಕೇವಲ ಜನರನ್ನು ದೂರಿದರೆ ಪ್ರಯೋಜನವಿಲ್ಲ. ಏಕೆಂದರೆ ಕೊರೊನಾ ಓಡಿಸಲು ತಟ್ಟೆ ದೀಪ ಇತ್ಯಾದಿಗಳನ್ನು ಬಡಿಯಲು ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡಿದ ಸರ್ಕಾರ ಹಾಗೂ ಮಾಧ್ಯಮಗಳು ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂದು ಮತ್ತು ಹೇಗೆ ಸಂಸ್ಕಾರ ಮಾಡಬೇಕು ಎಂಬುದನ್ನು ಪ್ರಚಾರ ಮಾಡಲೇ ಇಲ್ಲ.

ಒಟ್ಟಿನಲ್ಲಿ ಕುಬ್ಜನಾಗಿರುವ ಮನುಷ್ಯನನ್ನು ಕೊರೊನಾ ಸಾಂಕ್ರಮಿಕ ರೋಗ ಮತ್ತಷ್ಟು ಕುಬ್ಜನನ್ನಾಗಿಸಿದೆ. ಇದು ನಿಜವಾಗಿಯೂ ಮನುಷ್ಯರು ಮತ್ತಷ್ಟು ವಿಶಾದ ದೃಷ್ಟಿಯಿಂದ, ಮಾನವೀಯತೆಯಿಂದ ವರ್ತಿಸಲು ಕಲಿಯುವುದಕ್ಕೆ ಸದಾವಕಾಶವಾಗಿತ್ತು. ಆದರೆ ಅದನ್ನು ಹೆಚ್ಚಿನವರು ಮಾಡದಿದ್ದರೂ ಕೆಲವರಾದರೂ ನಿಸ್ವಾರ್ಥವಾಗಿ ಮಾಡುತ್ತಾ ನಮಗೆಲ್ಲ ಮಾದರಿಯಾಗಿದ್ದಾರೆ.


ಓದಿ:


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...