Homeಅಂತರಾಷ್ಟ್ರೀಯಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

- Advertisement -
- Advertisement -

ಈಗ ಫ್ರೆಂಚ್ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಮೋದಿಯವರ ಅಸಮರ್ಥತೆಯ ಕುರಿತು ಟೀಕೆ ಬಂದಿದೆ. ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಮೂರು ದಿನದ ಹಿಂದೆ ಆಸ್ಟ್ರೇಲಿಯಾದ ಪತ್ರಿಕೆಯೊಂದು, ‘ಮೋದಿ ಭಾರತವನ್ನು ವೈರಲ್ ವಿನಾಶದ ಕಡೆ ಒಯ್ಯುತ್ತಿದ್ದಾರೆ’ ಎಂದು ಬರೆದಾಗ, ನಮ್ಮ ವಿದೇಶಾಂಗ ಇಲಾಖೆಯು ಇದಕ್ಕೆ ಆಕ್ಷೇಪಿಸಿ, ‘ಮೋದಿ ಸರಿಯಾದ ದಾರಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಬೋಧನೆ ಮಾಡಿತ್ತು. ಆದರೆ, ಈ ಅಸಹಜ ಆಕ್ಷೇಪವನ್ನು ನಿರ್ಲಕ್ಷಿಸಿದ ವಿದೇಶಿ ಮಾಧ್ಯಮಗಳು ಮೋದಿ ವೈಫಲ್ಯ ಕುರಿತು ಬರೆಯುವುದನ್ನು ಮುಂದುವರೆಸಿವೆ.

ಕಳೆದ ವಾರ ದಿ ಗಾರ್ಡಿಯನ್ ಪತ್ರಿಕೆ ಮೋದಿ ವೈಫಲ್ಯವೇ 2ನೆ ಅಲೆಗೆ ಕಾರಣ ಎಂದು ಸಂಪಾದಕೀಯ ಬರೆದಿತ್ತು. ವಾಷಿಂಗ್ಟನ್ ಪೋಸ್ಟ್ ಒಂದು ಪುಟದ ಲೇಖನದಲ್ಲಿ ಮೋದಿಯ ಅಸಮರ್ಥ ಆಡಳಿತವನ್ನು ಮತ್ತು ಭಾರತದ ಕೋವಿಡ್ ದುರಂತವನ್ನು ವಿವರಿಸಿತ್ತು.
ಬುಧವಾರ ಫ್ರೆಂಚ್ ಪತ್ರಿಕೆ ‘ಲೆ ಮಾಂಡೆ’, ಮೋದಿಯವರ ದುರಂಹಕಾರ ಮತ್ತು ವಾಕ್ಚಾತುರ್ಯ ಭಾರತದಲ್ಲಿ ಕೋವಿಡ್ 2ನೇ ಅಲೆ ಸಂಭವಿಸಲು ಮತ್ತು ತೀವ್ರವಾಗಲು ಕಾರಣವಾಗಿದೆ’ ಎಂದು ಟೀಕಿಸಿದೆ.

ಆಸ್ಪತ್ರೆಗಳ ಎದುರು ಆಂಬ್ಯುಲೆನ್ಸ್‌ಗಳ ಸಾಲುಗಳು, ಅನಾರೋಗ್ಯ ಪೀಡಿತರ ಸಂಬಂಧಿಕರು ಆಮ್ಲಜನಕಕ್ಕಾಗಿ ಗೋಗರೆಯುವುದು ಮತ್ತು ಸಾಮೂಹಿಕ ಶವಸಂಸ್ಕಾರಗಳು ಸುಳ್ಳಾಗುವುದಿಲ್ಲ. ಅವು ಕಣ್ಣಿಗೆ ರಾಚುತ್ತಿವೆ ಎಂದು ಸಂಪಾದಕೀಯ ಹೇಳಿದೆ.

“ನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ, ಶ್ರೀಮಂತರಿಂದ ಬಡವರವರೆಗೆ, ಈ ‘ಹತ್ಯಾಕಾಂಡ’ವು ಯಾರನ್ನೂ ಬಿಡುತ್ತಿಲ್ಲ. ಫೆಬ್ರವರಿ ತನಕ ಕ್ಷೀಣಿಸುತ್ತಾ ಬಂದ ಹೊಸ ಸೋಂಕಿನ ರೇಖೆಯು (curve) ಈಗ ಬಹುತೇಕ ಲಂಬವಾಗಿದೆ” ಎಂದು ಲೆ ಮಾಂಡೆ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.

“ವೈರಸ್ ಮತ್ತು ಅದರ ರೂಪಾಂತರಗಳ ಅನಿರೀಕ್ಷಿತ ದಾಳಿ ಎಂಬ ಏಕಮಾತ್ರ ಹೇಳಿಕೆಯಿಂದ ಈ ನಿರ್ವಹಣಾ ವೈಫಲ್ಯವನ್ನು ವಿವರಿಸಲಾಗುವುದಿಲ್ಲ. ನರೇಂದ್ರ ಮೋದಿಯವರ ಮುಂಗಾಣುವಿಕೆ-ದೂರದರ್ಶಿತ್ವದ (ಪ್ರಿಡಿಕ್ಸನ್) ಕೊರತೆ, ದುರಹಂಕಾರ ಮತ್ತು ಮಾತಿನ ಮೋಡಿ-ಇವೆಲ್ಲವೂ ಇಂದಿನ ಸ್ಥಿತಿಗೆ ಕಾರಣವಾಗಿವೆ. ಹೀಗಾಗಿ ಈಗ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಅಂತಾರಾಷ್ಟ್ರೀಯ ಸಹಕಾರ-ಸಂಪನ್ಮೂಲಗಳ ಅಗತ್ಯ ಬಿದ್ದಿದೆ” ಎಂದು ಸಂಪಾದಕೀಯ ವಿಮರ್ಶಿಸಿದೆ.

ಪ್ರಧಾನ ಮಂತ್ರಿ ಮೋದಿಯವರು ಕಳೆದ ವರ್ಷ ಮೊದಲ ಕೋವಿಡ್ ಅಲೆಯ ಆರಂಭದಲ್ಲಿ, ಯಾವುದೇ ಸಿದ್ಧತೆಯಿಲ್ಲದೇ ಏಕಾಏಕಿ ಕ್ರೂರ ಲಾಕ್ ಡೌನ್ ವಿಧಿಸುವ ಮೂಲಕ, ಲಕ್ಷಾಂತರ ವಲಸೆ ಕಾರ್ಮಿಕರ ಬದುಕುಗಳನ್ನು ಮೂರಾಬಟ್ಟೆ ಮಾಡಿದರು. 2021ರ ಆರಂಭದಲ್ಲಿ ಕೋವಿಡ್ ಕುರಿತು ಅವರು ಚಿಂತಿಸಲೇ ಇಲ್ಲ’ ಎಂದು ಸಂಪಾದಕೀಯ ಟೀಕಿಸಿದೆ,

“ಆರೋಗ್ಯ ತಜ್ಞರ ಸಲಹೆ ನಿರ್ಲಕ್ಷಿಸಿ ರಾಷ್ಟ್ರೀಯತಾವಾದಿ ಉಪದೇಶಗಳಿಗೆ ಆದ್ಯತೆ ನೀಡುತ್ತ, ಜನರನ್ನು ರಕ್ಷಿಸುವುದಕ್ಕಿಂತ ಸ್ವಯಂ ಸಂಭ್ರಮಕ್ಕೆ ಹೆಚ್ಚು ಒಲವು ತೋರುತ್ತ ಬಂದ ಮೋದಿ ಅವರು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು” ಎಂದು ಪತ್ರಿಕೆ ಹೇಳಿದೆ. ಚುನಾವಣಾ ಪ್ರಚಾರ ಮತ್ತು ಕುಂಭಮೇಳವನ್ನು ಉಲ್ಲೇಖಿಸಿ, ‘ಇದು ಗಂಗಾ ನೀರನ್ನು (ನದಿಪ್ರದೇಶವನ್ನು) ಸಾಂಕ್ರಾಮಿಕದ ಬೃಹತ್ ತಾಣವನ್ನಾಗಿ ಪರಿವರ್ತಿಸಿತು’ ಎಂದು ಪತ್ರಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಪಾದಕೀಯವು ಮೋದಿಯವರ ಹೆಚ್ಚು ಪ್ರಚಾರ ಪಡೆದ ಲಸಿಕೆ ಕಾರ್ಯತಂತ್ರವನ್ನು ಒಡೆದು ಹಾಕಿದೆ. ಲಸಿಕೆ ರಾಜತಾಂತ್ರಿಕತೆಯು ತಮ್ಮ ಮಹತ್ವಾಕಾಂಕ್ಷೆಗಳಿಗೆ ಅಧೀನವಾಗಿದೆ ಎಂದು ನಂಬಿದ ಮೋದಿ, ದೇಶದ ಉತ್ಪಾದನಾ ಸಾಮರ್ಥ್ಯದ ವಾಸ್ತವತೆಯನ್ನು ಕಡೆಗಣಿಸಿದರು ಎಂದು ಪತ್ರಿಕೆಯ ಸಂಪಾದಕೀಯ ತಿಳಿಸಿದೆ.

ಸೋಮವಾರ, ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು, ಸಾಂಕ್ರಾಮಿಕ ನಿರ್ವಹಣೆಯಲ್ಲಿ ಭಾರತೀಯ ನಾಯಕತ್ವದ-ಮೋದಿಯವರ- ವೈಫಲ್ಯ ಟೀಕಿಸಿದ ಆಸ್ಟ್ರೇಲಿಯಾದ ಪತ್ರಿಕೆಗೆ ಪತ್ರವೊಂದನ್ನು ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ, ವಿದೇಶಿ ಪ್ರಕಟಣೆಗಳಲ್ಲಿ ನಕಾರಾತ್ಮಕ ಸುದ್ದಿಗಳು ಬಂದಾಗ ಹೀಗೆ ಆಕ್ಷೇಪ ಸಲ್ಲಿಸಲಾಗುತ್ತಿತ್ತು.

ಭಾರತೀಯ ರಾಯಭಾರಿ ಕಚೇರಿಯು, ಆಸ್ಟ್ರೇಲಿಯಾ ಪತ್ರಿಕೆಯ ಲೇಖನವನ್ನು “ಆಧಾರರಹಿತ, ದುರುದ್ದೇಶಪೂರಿತ ಮತ್ತು ಅಪಪ್ರಚಾರ” ಎಂದು ವಿವರಿಸಿತ್ತು. ಈಗ ಫ್ರೆಂಚ್ ಪತ್ರಿಕೆ ಸಂಪಾದಕೀಯಕ್ಕೂ ಭಾರತ ಆಕ್ಷೇಪ ಸಲ್ಲಿಸುವುದೇ?


ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಯಾರೋ ಒಬ್ಬರು ಅದ್ಭುತವಾಗಿ ಹೇಳಿದ್ದಾರೆ.

    ಕೊರೋನಾದಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಒಂದು ವೇಳೆ ಬಿಜೆಪಿ ರಕ್ಷಿಸುತ್ತಿದ್ದರೆ ಮಧ್ಯಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಒಂದು ವೇಳೆ ಕಾಂಗ್ರೆಸ್ ರಕ್ಷಿಸುತ್ತಿದ್ದರೆ ಇದು ಛತ್ತೀಸಗಡದಲ್ಲಿ ಹರಡುತ್ತಿರಲಿಲ್ಲ. ಶಿವಸೇನೆ ಯೋಗ್ಯ ಅನ್ನುವುದಾದರೆ ಮಹಾರಾಷ್ಟ್ರ ದಲ್ಲಿ ಹರಡುತ್ತಿರಲಿಲ್ಲ. ಕೇಜ್ರಿವಾಲ ಯೋಗ್ಯನಾಗಿದ್ದರೆ ದೆಹಲಿಯಲ್ಲಿ ಹರಡುತ್ತಿರಲಿಲ್ಲ. ಯೋಗಿ ಯೋಗ್ಯನೆಂದರೆ ಉತ್ತರ ಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಮೋದಿಯವರು ಶಕ್ತಿವಂತನೆನ್ನುವುದಾದರೆ ಭಾರತದಲ್ಲಿ ಹರಡುತ್ತಿರಲಿಲ್ಲ. ಹೀಗಾಗಿ ಕೊರೋನಾ ಯಾರ ಕಾರಣದಿಂದಲೂ, ಯಾವ ಪಕ್ಷದ ಕಾರಣದಿಂದಲೂ ಹರಡುತ್ತಿಲ್ಲ.

    ಹಣದಿಂದ ಇದನ್ನು ನಿರ್ಮೂಲನೆ ಮಾಡುವುದಾಗಿದ್ದರೆ ಅಮೇರಿಕದಲ್ಲಿ ಹರಡುತ್ತಿರಲಿಲ್ಲ. ವೈದ್ಯರು ಮತ್ತು ಔಷಧದಿಂದ ಇದನ್ನು ಗುಣಪಡಿಸಬಹುದಾಗಿದ್ದರೆ ಸ್ವೀಡನ್, ಫ್ರಾನ್ಸ್, ಬೆಲ್ಜಿಯಂ, ಇಟಲಿಯಲ್ಲಿ ತಡೆಯಬಹುದಾಗಿತ್ತು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.

    ಹೀಗಾಗಿ ಇದಕ್ಕೆ ಯಾವುದ್ಯಾವುದೋ ಕಾರಣ ಹೇಳಿ ಯಾರ ಯಾರನ್ನೋ ತೆಗಳುವುದಕ್ಕಿಂತ.. ಸುಮ್ಮನೆ ಮನೆಯಲ್ಲಿರಿ. ಹೊರಬರಲು ಸಕಾರಣವಿದ್ದರೆ ಮಾಸ್ಕ ಧರಿಸಿರಿ ಮತ್ತು ಸೈನಿಟೈಜರ ಬಳಸಿ.. ಸುರಕ್ಷಿತರಾಗಿ ಇರಿ.. ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮದೇ ಜವಾಬ್ದಾರಿ ಆಗಿರಲಿ.

    ಮನೆಯಲ್ಲಿರಿ.. ಬದುಕಿದರೆ ಬದುಕು ಇದೆ.

    ಈ ಕ್ಷಣ ಗೆಲ್ಲುವ ವಿಶ್ವಾಸವಿದೆ.

  2. Nice suggestion, nobody save from covid-19, but ourselves protect from the covid-19.
    Positive thinking, physical exersie and balanced food with humanity action needed for the time.

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...