ಈಗ ಫ್ರೆಂಚ್ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಮೋದಿಯವರ ಅಸಮರ್ಥತೆಯ ಕುರಿತು ಟೀಕೆ ಬಂದಿದೆ. ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಮೂರು ದಿನದ ಹಿಂದೆ ಆಸ್ಟ್ರೇಲಿಯಾದ ಪತ್ರಿಕೆಯೊಂದು, ‘ಮೋದಿ ಭಾರತವನ್ನು ವೈರಲ್ ವಿನಾಶದ ಕಡೆ ಒಯ್ಯುತ್ತಿದ್ದಾರೆ’ ಎಂದು ಬರೆದಾಗ, ನಮ್ಮ ವಿದೇಶಾಂಗ ಇಲಾಖೆಯು ಇದಕ್ಕೆ ಆಕ್ಷೇಪಿಸಿ, ‘ಮೋದಿ ಸರಿಯಾದ ದಾರಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಬೋಧನೆ ಮಾಡಿತ್ತು. ಆದರೆ, ಈ ಅಸಹಜ ಆಕ್ಷೇಪವನ್ನು ನಿರ್ಲಕ್ಷಿಸಿದ ವಿದೇಶಿ ಮಾಧ್ಯಮಗಳು ಮೋದಿ ವೈಫಲ್ಯ ಕುರಿತು ಬರೆಯುವುದನ್ನು ಮುಂದುವರೆಸಿವೆ.
ಕಳೆದ ವಾರ ದಿ ಗಾರ್ಡಿಯನ್ ಪತ್ರಿಕೆ ಮೋದಿ ವೈಫಲ್ಯವೇ 2ನೆ ಅಲೆಗೆ ಕಾರಣ ಎಂದು ಸಂಪಾದಕೀಯ ಬರೆದಿತ್ತು. ವಾಷಿಂಗ್ಟನ್ ಪೋಸ್ಟ್ ಒಂದು ಪುಟದ ಲೇಖನದಲ್ಲಿ ಮೋದಿಯ ಅಸಮರ್ಥ ಆಡಳಿತವನ್ನು ಮತ್ತು ಭಾರತದ ಕೋವಿಡ್ ದುರಂತವನ್ನು ವಿವರಿಸಿತ್ತು.
ಬುಧವಾರ ಫ್ರೆಂಚ್ ಪತ್ರಿಕೆ ‘ಲೆ ಮಾಂಡೆ’, ಮೋದಿಯವರ ದುರಂಹಕಾರ ಮತ್ತು ವಾಕ್ಚಾತುರ್ಯ ಭಾರತದಲ್ಲಿ ಕೋವಿಡ್ 2ನೇ ಅಲೆ ಸಂಭವಿಸಲು ಮತ್ತು ತೀವ್ರವಾಗಲು ಕಾರಣವಾಗಿದೆ’ ಎಂದು ಟೀಕಿಸಿದೆ.
EDITO. « Le drame indien illustre les ravages du populisme, partout où des marchands d’illusions prospérant sur les inégalités parviennent à vendre aux électeurs leurs promesses de salut fondées en réalité sur le nationalisme et l’ignorance. » https://t.co/JLkzWa6bxk
— Le Monde (@lemondefr) April 27, 2021
ಆಸ್ಪತ್ರೆಗಳ ಎದುರು ಆಂಬ್ಯುಲೆನ್ಸ್ಗಳ ಸಾಲುಗಳು, ಅನಾರೋಗ್ಯ ಪೀಡಿತರ ಸಂಬಂಧಿಕರು ಆಮ್ಲಜನಕಕ್ಕಾಗಿ ಗೋಗರೆಯುವುದು ಮತ್ತು ಸಾಮೂಹಿಕ ಶವಸಂಸ್ಕಾರಗಳು ಸುಳ್ಳಾಗುವುದಿಲ್ಲ. ಅವು ಕಣ್ಣಿಗೆ ರಾಚುತ್ತಿವೆ ಎಂದು ಸಂಪಾದಕೀಯ ಹೇಳಿದೆ.
“ನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ, ಶ್ರೀಮಂತರಿಂದ ಬಡವರವರೆಗೆ, ಈ ‘ಹತ್ಯಾಕಾಂಡ’ವು ಯಾರನ್ನೂ ಬಿಡುತ್ತಿಲ್ಲ. ಫೆಬ್ರವರಿ ತನಕ ಕ್ಷೀಣಿಸುತ್ತಾ ಬಂದ ಹೊಸ ಸೋಂಕಿನ ರೇಖೆಯು (curve) ಈಗ ಬಹುತೇಕ ಲಂಬವಾಗಿದೆ” ಎಂದು ಲೆ ಮಾಂಡೆ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
“ವೈರಸ್ ಮತ್ತು ಅದರ ರೂಪಾಂತರಗಳ ಅನಿರೀಕ್ಷಿತ ದಾಳಿ ಎಂಬ ಏಕಮಾತ್ರ ಹೇಳಿಕೆಯಿಂದ ಈ ನಿರ್ವಹಣಾ ವೈಫಲ್ಯವನ್ನು ವಿವರಿಸಲಾಗುವುದಿಲ್ಲ. ನರೇಂದ್ರ ಮೋದಿಯವರ ಮುಂಗಾಣುವಿಕೆ-ದೂರದರ್ಶಿತ್ವದ (ಪ್ರಿಡಿಕ್ಸನ್) ಕೊರತೆ, ದುರಹಂಕಾರ ಮತ್ತು ಮಾತಿನ ಮೋಡಿ-ಇವೆಲ್ಲವೂ ಇಂದಿನ ಸ್ಥಿತಿಗೆ ಕಾರಣವಾಗಿವೆ. ಹೀಗಾಗಿ ಈಗ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಅಂತಾರಾಷ್ಟ್ರೀಯ ಸಹಕಾರ-ಸಂಪನ್ಮೂಲಗಳ ಅಗತ್ಯ ಬಿದ್ದಿದೆ” ಎಂದು ಸಂಪಾದಕೀಯ ವಿಮರ್ಶಿಸಿದೆ.
ಪ್ರಧಾನ ಮಂತ್ರಿ ಮೋದಿಯವರು ಕಳೆದ ವರ್ಷ ಮೊದಲ ಕೋವಿಡ್ ಅಲೆಯ ಆರಂಭದಲ್ಲಿ, ಯಾವುದೇ ಸಿದ್ಧತೆಯಿಲ್ಲದೇ ಏಕಾಏಕಿ ಕ್ರೂರ ಲಾಕ್ ಡೌನ್ ವಿಧಿಸುವ ಮೂಲಕ, ಲಕ್ಷಾಂತರ ವಲಸೆ ಕಾರ್ಮಿಕರ ಬದುಕುಗಳನ್ನು ಮೂರಾಬಟ್ಟೆ ಮಾಡಿದರು. 2021ರ ಆರಂಭದಲ್ಲಿ ಕೋವಿಡ್ ಕುರಿತು ಅವರು ಚಿಂತಿಸಲೇ ಇಲ್ಲ’ ಎಂದು ಸಂಪಾದಕೀಯ ಟೀಕಿಸಿದೆ,
“ಆರೋಗ್ಯ ತಜ್ಞರ ಸಲಹೆ ನಿರ್ಲಕ್ಷಿಸಿ ರಾಷ್ಟ್ರೀಯತಾವಾದಿ ಉಪದೇಶಗಳಿಗೆ ಆದ್ಯತೆ ನೀಡುತ್ತ, ಜನರನ್ನು ರಕ್ಷಿಸುವುದಕ್ಕಿಂತ ಸ್ವಯಂ ಸಂಭ್ರಮಕ್ಕೆ ಹೆಚ್ಚು ಒಲವು ತೋರುತ್ತ ಬಂದ ಮೋದಿ ಅವರು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು” ಎಂದು ಪತ್ರಿಕೆ ಹೇಳಿದೆ. ಚುನಾವಣಾ ಪ್ರಚಾರ ಮತ್ತು ಕುಂಭಮೇಳವನ್ನು ಉಲ್ಲೇಖಿಸಿ, ‘ಇದು ಗಂಗಾ ನೀರನ್ನು (ನದಿಪ್ರದೇಶವನ್ನು) ಸಾಂಕ್ರಾಮಿಕದ ಬೃಹತ್ ತಾಣವನ್ನಾಗಿ ಪರಿವರ್ತಿಸಿತು’ ಎಂದು ಪತ್ರಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಪಾದಕೀಯವು ಮೋದಿಯವರ ಹೆಚ್ಚು ಪ್ರಚಾರ ಪಡೆದ ಲಸಿಕೆ ಕಾರ್ಯತಂತ್ರವನ್ನು ಒಡೆದು ಹಾಕಿದೆ. ಲಸಿಕೆ ರಾಜತಾಂತ್ರಿಕತೆಯು ತಮ್ಮ ಮಹತ್ವಾಕಾಂಕ್ಷೆಗಳಿಗೆ ಅಧೀನವಾಗಿದೆ ಎಂದು ನಂಬಿದ ಮೋದಿ, ದೇಶದ ಉತ್ಪಾದನಾ ಸಾಮರ್ಥ್ಯದ ವಾಸ್ತವತೆಯನ್ನು ಕಡೆಗಣಿಸಿದರು ಎಂದು ಪತ್ರಿಕೆಯ ಸಂಪಾದಕೀಯ ತಿಳಿಸಿದೆ.
ಸೋಮವಾರ, ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು, ಸಾಂಕ್ರಾಮಿಕ ನಿರ್ವಹಣೆಯಲ್ಲಿ ಭಾರತೀಯ ನಾಯಕತ್ವದ-ಮೋದಿಯವರ- ವೈಫಲ್ಯ ಟೀಕಿಸಿದ ಆಸ್ಟ್ರೇಲಿಯಾದ ಪತ್ರಿಕೆಗೆ ಪತ್ರವೊಂದನ್ನು ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ, ವಿದೇಶಿ ಪ್ರಕಟಣೆಗಳಲ್ಲಿ ನಕಾರಾತ್ಮಕ ಸುದ್ದಿಗಳು ಬಂದಾಗ ಹೀಗೆ ಆಕ್ಷೇಪ ಸಲ್ಲಿಸಲಾಗುತ್ತಿತ್ತು.
ಭಾರತೀಯ ರಾಯಭಾರಿ ಕಚೇರಿಯು, ಆಸ್ಟ್ರೇಲಿಯಾ ಪತ್ರಿಕೆಯ ಲೇಖನವನ್ನು “ಆಧಾರರಹಿತ, ದುರುದ್ದೇಶಪೂರಿತ ಮತ್ತು ಅಪಪ್ರಚಾರ” ಎಂದು ವಿವರಿಸಿತ್ತು. ಈಗ ಫ್ರೆಂಚ್ ಪತ್ರಿಕೆ ಸಂಪಾದಕೀಯಕ್ಕೂ ಭಾರತ ಆಕ್ಷೇಪ ಸಲ್ಲಿಸುವುದೇ?
ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು
ಇಸ್ವಗುರುವಿನ ಕ್ಯಾತಿ ವಿದೇಶಗಳಿಗೂ ತಲುಪಿದೆ.
ಯಾರೋ ಒಬ್ಬರು ಅದ್ಭುತವಾಗಿ ಹೇಳಿದ್ದಾರೆ.
ಕೊರೋನಾದಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಒಂದು ವೇಳೆ ಬಿಜೆಪಿ ರಕ್ಷಿಸುತ್ತಿದ್ದರೆ ಮಧ್ಯಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಒಂದು ವೇಳೆ ಕಾಂಗ್ರೆಸ್ ರಕ್ಷಿಸುತ್ತಿದ್ದರೆ ಇದು ಛತ್ತೀಸಗಡದಲ್ಲಿ ಹರಡುತ್ತಿರಲಿಲ್ಲ. ಶಿವಸೇನೆ ಯೋಗ್ಯ ಅನ್ನುವುದಾದರೆ ಮಹಾರಾಷ್ಟ್ರ ದಲ್ಲಿ ಹರಡುತ್ತಿರಲಿಲ್ಲ. ಕೇಜ್ರಿವಾಲ ಯೋಗ್ಯನಾಗಿದ್ದರೆ ದೆಹಲಿಯಲ್ಲಿ ಹರಡುತ್ತಿರಲಿಲ್ಲ. ಯೋಗಿ ಯೋಗ್ಯನೆಂದರೆ ಉತ್ತರ ಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಮೋದಿಯವರು ಶಕ್ತಿವಂತನೆನ್ನುವುದಾದರೆ ಭಾರತದಲ್ಲಿ ಹರಡುತ್ತಿರಲಿಲ್ಲ. ಹೀಗಾಗಿ ಕೊರೋನಾ ಯಾರ ಕಾರಣದಿಂದಲೂ, ಯಾವ ಪಕ್ಷದ ಕಾರಣದಿಂದಲೂ ಹರಡುತ್ತಿಲ್ಲ.
ಹಣದಿಂದ ಇದನ್ನು ನಿರ್ಮೂಲನೆ ಮಾಡುವುದಾಗಿದ್ದರೆ ಅಮೇರಿಕದಲ್ಲಿ ಹರಡುತ್ತಿರಲಿಲ್ಲ. ವೈದ್ಯರು ಮತ್ತು ಔಷಧದಿಂದ ಇದನ್ನು ಗುಣಪಡಿಸಬಹುದಾಗಿದ್ದರೆ ಸ್ವೀಡನ್, ಫ್ರಾನ್ಸ್, ಬೆಲ್ಜಿಯಂ, ಇಟಲಿಯಲ್ಲಿ ತಡೆಯಬಹುದಾಗಿತ್ತು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.
ಹೀಗಾಗಿ ಇದಕ್ಕೆ ಯಾವುದ್ಯಾವುದೋ ಕಾರಣ ಹೇಳಿ ಯಾರ ಯಾರನ್ನೋ ತೆಗಳುವುದಕ್ಕಿಂತ.. ಸುಮ್ಮನೆ ಮನೆಯಲ್ಲಿರಿ. ಹೊರಬರಲು ಸಕಾರಣವಿದ್ದರೆ ಮಾಸ್ಕ ಧರಿಸಿರಿ ಮತ್ತು ಸೈನಿಟೈಜರ ಬಳಸಿ.. ಸುರಕ್ಷಿತರಾಗಿ ಇರಿ.. ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮದೇ ಜವಾಬ್ದಾರಿ ಆಗಿರಲಿ.
ಮನೆಯಲ್ಲಿರಿ.. ಬದುಕಿದರೆ ಬದುಕು ಇದೆ.
ಈ ಕ್ಷಣ ಗೆಲ್ಲುವ ವಿಶ್ವಾಸವಿದೆ.
Nice suggestion, nobody save from covid-19, but ourselves protect from the covid-19.
Positive thinking, physical exersie and balanced food with humanity action needed for the time.