Homeಕರೋನಾ ತಲ್ಲಣಕೋವಿಡ್ ಸಂದರ್ಭದಲ್ಲಿ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಕಾಣೆಯಾದರೆ?

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಕಾಣೆಯಾದರೆ?

- Advertisement -
- Advertisement -

2019 ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸದರಾದ ನಂತರ ಆಗಾಗ ವಿವಾದಾತ್ಮಕ ಭಾಷಣಗಳು ಮತ್ತು ಟೀಕೆಗಳಲ್ಲಿ ನಿರತರಾಗಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವನಾಯಕ ತೇಜಸ್ವಿ ಸೂರ್ಯ ಎಲ್ಲಿದ್ದಾರೆ? ಈ ಕೋವಿಡ್ ಎರಡನೇ ಅಲೆಯಲ್ಲಿ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ಯುವ ವಿಭಾಗ ಏನು ಮಾಡುತ್ತಿದೆ ಎಂದು ಬೆಂಗಳೂರು ದಕ್ಷಿಣದ ಮತದಾರರು ಪ್ರಶ್ನೆ ಮಾಡುತ್ತಿದ್ದಾರೆ.

ಬಂಗಾಳ-ತಮಿಳುನಾಡು ಚುನಾವಣಾ ಪ್ರಚಾರಗಳಿಂದ ಮಾಯವಾದ ಅವರು, ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗಾಗಿ ಕೆಲಸ ಮಾಡುತ್ತಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಏನೋ ವಿವಾದಾತ್ಮಕ ಹೇಳಿಕೆ ನೀಡಿ ಹೆಡ್‌ಲೈನ್‌ಗಳಲ್ಲಿ ಮಿಂಚುತ್ತಿದ್ದ ಅವರು ಈಗ ಹೆಡ್‌ಲೈನ್‌ಗಳಲ್ಲೂ ಇಲ್ಲ ಎಂದು ದಿ ಪ್ರಿಂಟ್ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರ ಕುರಿತು ಪ್ರಶ್ನೆ ಮಾಡಿದೆ.

ಎರಡನೇ ಕೋವಿಡ್ ಅಲೆಯಲ್ಲಿ ದೇಶವು ಹಿಮ್ಮೆಟ್ಟುತ್ತಿರುವಾಗ, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಎಎಪಿ ಯುವ ಶಾಸಕ ದಿಲೀಪ್ ಕೆ. ಪಾಂಡೆ ಅವರು ಈಗ ಹೀರೊಗಳಾಗಿ ಹೊರಹೊಮ್ಮಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಸಹಾಯಕ್ಕಾಗಿ ಅಪಾರ ಸಂಖ್ಯೆಯ ಜನರು ಈ ಜೋಡಿಯನ್ನು ಸಂಪರ್ಕಿಸುತ್ತಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ಯುವ ಘಟಕಗಳು ಜನರ ನೆರವಿಗೆ ನಿಂತಿರುವಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಕಾಣಿಸುತ್ತಲೇ ಇಲ್ಲವಲ್ಲ ಎಂಬ ಮಾತಿಗೆ, ‘ಸೋಷಿಯಲ್ ಮೀಡಿಯಾ ನೋಡಿ, ನಾನು ತುಂಬ ಆಕ್ಟಿವ್ ಆಗಿದ್ದೇನೆ’ ಎಂದು ಸೂರ್ಯ ಸಮರ್ಥಿಸಿಕೊಳ್ಳುತ್ತಾರಂತೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಬೆಂಗಳೂರು ದಕ್ಷಿಣ ನಿವಾಸಿ, ಫ್ರೀ ಲ್ಯಾನ್ಸ್ ಪತ್ರಕರ್ತ ಡೇನಿಯಲ್ ಕ್ರಿಸ್ಟೋಫರ್, “ಸೂರ್ಯ ಇಲ್ಲಿನ ಸಂಸದರು ಎಂಬುದಕ್ಕಿಂತ ತಾನು ರಾಷ್ಟ್ರೀಯ ನಾಯಕ ಎಂಬ ಗರ್ವದಲ್ಲಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗಳಿಗೆ ಪ್ರಚಾರ ಮಾಡಲು ಕಳಿಸಿದ ನಂತರ ಅಂತಹ ಭಾವನೆ ಅವರಲ್ಲಿ ತೀವ್ರವಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ದುರಂತ ಸಂಭವಿಸುವಾಗ ಸಂಸದ ಮಹಾಶಯರು ಎಲ್ಲಿದ್ದಾರೋ ಗೊತ್ತಿಲ್ಲ” ಎಂದರು.

ಆಮ್ ಆದ್ಮಿ ಪಕ್ಷದ ಬಳ್ಳಾರಿ ಜಿಲ್ಲೆಯ ಸಂಚಾಲಕ ವಿ. ಬಿ. ಮಲ್ಲಪ್ಪ, ‘ತೇಜಸ್ವಿ ಸೂರ್ಯ ಎಂದೂ ರಾಜ್ಯದ ಪರ ಸಂಸತ್ತಿನಲ್ಲಿ ಮಾತನಾಡಿದ್ದೇ ಇಲ್ಲ. ಅಲ್ಲೂ ಟಿಪ್ಪು ಬಗ್ಗೆ ಸುಳ್ಳು ಹೇಳಿದ ಮನುಷ್ಯ. ಅವರು ಜನರ ಪರವಾಗಿ ಕೆಲಸ ಮಾಡದಿರುವಾಗ ಆತ ಇದ್ದರೆಷ್ಟು ಕಾಣೆಯಾದರೆಷ್ಟು? ಆದರೆ ಆತನ ನಂಜು ಜನಕ್ಕೆ ತಾಗದಿರಲಿ’ ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಾರೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣಾ ಪ್ರಚಾರಗಳಲ್ಲಿ ಎಂಪಿ ಸೂರ್ಯ ಅಷ್ಟೇನೂ ಕಾಣಲಿಲ್ಲ. ಬಂಗಾಳ ಚುನಾವಣೆ ಘೋಷಣೆಗೆ ಮುನ್ನ ಅಲ್ಲಿ ಯುವ ರ‍್ಯಾಲಿ ಮಾಡಿದಾಗ ಗಲಾಟೆ ನಡೆಯಿತು. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡ ಸೂರ್ಯ ಪೂರ್ವ ನಿರ್ದೇಶನದಂತೆ ಅಲ್ಲಿ ಸೇರಿದ್ದ ತಮ್ಮ ಕಾರ್ಯಕರ್ತರ ಗುಂಪಿನೊಂದಿಗೆ, ‘ಬಂಗಾಳದಲ್ಲಿ ಸೂರ್ಯರ ರ‍್ಯಾಲಿ ಮೇಲೆ ದಾಳಿ ಮಾಡಿಸಿದ ಮಮತಾರಿಗೆ ಧಿಕ್ಕಾರ’ ಎಂದು ಗುಂಪು ಕಟ್ಟಿಕೊಂಡು ಪಾದಯಾತ್ರೆ ಮಾಡಿದ್ದರು.

ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ತಮ್ಮ ಆಘಾದವಾದ ಕೋವಿಡ್ ಪರಿಹಾರ ಕಾರ್ಯಗಳೊಂದಿಗೆ ಜನರನ್ನು ತಲುಪಿದರು. ಸಂಕಷ್ಟದ ಸಮಯದಲ್ಲಿ ಅವರು ಸಾವಿರಾರು ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಅವರನ್ನು ಮಾಧ್ಯಮಗಳು ಗುರುತಿಸಿ ಪ್ರೋತ್ಸಾಹಿಸಿದ್ದವರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವೈಫಲ್ಯತೆಗಳನ್ನು ಕರಾರುವಾಕ್ಕಾಗಿ ತೋರಿಸುತ್ತಿದ್ದರೆ, ಆಮ್‌ಆದ್ಮಿಯ ಯುವಜನರು ದೆಹಲಿಯ ಜನರಿಗೆ ನೆರವು ನೀಡುತ್ತಲಿದ್ದರೆ ಬಿಜೆಪಿ ಯುವ ಘಟಕ ಮಾತ್ರ ಸೀನ್‌ನಲ್ಲೇ ಇಲ್ಲ! ಸೂರ್ಯ ಮೋಡದ ಮರೆಯಲ್ಲಿ ಎಲ್ಲೋ ಸೇಫಾಗಿದ್ದಾರೆ ಎಂದು ಅವರ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ದಿ ಪ್ರಿಂಟ್ ಪ್ರಕಾರ, ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ! ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ (ಬಿಜೆವೈಎಂ) ಚಟುವಟಿಕೆಗಳನ್ನು ಪ್ರಸಾರ ಮಾಡಲು ಅವರು ಸ್ವತಃ ವೃತ್ತಿಪರರು ಮತ್ತು ವೈದ್ಯರೊಂದಿಗೆ ನಡೆಸುವ ಸಂದರ್ಶನಗಳನ್ನು ಪೋಸ್ಟ್ ಮಾಡುತ್ತಿದ್ದಾರೆ!

ಆದರೆ ಕೋವಿಡ್ ದುರಂತದ ಮಧ್ಯೆ ವಿರೋಧ ಪಕ್ಷದ ಯುವ ನಾಯಕರ ಜನಪರ ಚಟುವಟಿಕೆಗಳನ್ನು ನೋಡಿದಾಗ ಸೂರ್ಯ ತಮ್ಮೊಂದಿಗೆ ಯುವ ಬಿಜೆಪಿಯನ್ನೂ ಜನರಿಂದ ದೂರ ಒಯ್ದಿದ್ದಾರೆ ಎನಿಸುತ್ತದೆ.

ದಿ ಪ್ರಿಂಟ್ ಜೊತೆ ಮಾತನಾಡಿದ ಸೂರ್ಯ, ತಮ್ಮನ್ನು ಪ್ರಶ್ನಿಸುವವರು, ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮತ್ತು ಬಿಜೆವೈಎಂನ ಹ್ಯಾಂಡಲ್‌ಗಳನ್ನು ಚೆಕ್ ಮಾಡಬೇಕು ಎಂದು ಹೇಳಿದರು.

ಜನತೆಗೆ ಈಗ ಬೇಕಾಗಿರುವುದು ಜನರ ಸಂಕಷ್ಟಗಳಿಗೆ ನೆರವಾಗುವ ಕೆಲಸವೇ ಹೊರತು ಸೋಷಿಯಲ್ ಮೀಡಿಯಾ ಮೂಲಕ ಉಪದೇಶವಲ್ಲ ಅಲ್ಲವೇ? ಆದರೆ ಸೂರ್ಯ ತಮ್ಮ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಗಿದ್ದು ಪ್ರಚೋದನಾಕಾರಿ ಸಾಮಾಜಿಕ ಜಾಲತಾಣಗಳ ಸಂದೇಶಗಳು ಮತ್ತು ಭಾಷಣಗಳಿಂದಲೇ ಅಲ್ಲವೇ?

ತಮಿಳುನಾಡು ಪ್ರಚಾರದಲ್ಲಿ ಅವರು ಡಿಎಂಕೆ ಹಿಂದೂತ್ವ ವಿರೋಧಿ ಪಕ್ಷ ಎಂದು ಏನೆಲ್ಲಾ ಹೇಳುತ್ತ ಪೆರಿಯಾರ್ ನೆಲದಲ್ಲಿ ಹಾಸ್ಯಾಸ್ಪದರಾದರು. ಮತ್ತೆ ಅಲ್ಲಿ ಅವರು ಕಾಣಿಸಿಕೊಳ್ಳಲೇ ಇಲ್ಲ. ಹೋಟೆಲ್ ಒಂದರಲ್ಲಿ ತಿಂದು ಬಿಲ್ ಕಟ್ಟಿದೆ ಎಂದು ಅವರು ಹಾಕಿಕೊಂಡ ಪೋಸ್ಟ್ ಕೂಡ ಅವರಿಗೆ ತಿರುಗುಬಾಣವಾಗಿತ್ತು. ಹೋಟೆಲ್ ಮಾಲೀಕರು ಫೇಸ್‌ಬುಕ್‌ನಲ್ಲಿ ತಣ್ಣಗೆ ಸೂರ್ಯನಿಗೆ ತಿರುಗೇಟು ನೀಡಿದ್ದರು.

ದಿಢೀರ್ ಪ್ರಮೋಷನ್: ಪಕ್ಷದಲ್ಲಿ ಅಸಮಾಧಾನ?

ದಿ. ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡದೇ ಸೊಷಿಯಲ್ ಮೀಡಿಯಾದಲ್ಲಿ, ಟಿವಿ ಚರ್ಚೆಗಳಲ್ಲಿ ಅಸಂಬದ್ಧವಾಗಿ ವಾದ ಮಾಡುತ್ತಿದ್ದ ತೇಜಸ್ವಿ ಸೂರ್ಯ ಬಿಜೆಪಿಯ ಕೂಗುಮಾರಿ ನಾಯಕರಿಗೆ ಇಷ್ಟವಾದ ಕಾರಣ ಟಿಕೆಟ್ ಅವರಿಗೇ ಸಿಕ್ಕಿತು. ಆಗಲೇ ಅವರ ವಿರುದ್ಧ ಅಸಮಾಧಾನ ಹೊರಬಿದ್ದಿತ್ತು. ಆದರೆ ಗೆದ್ದ ನಂತರ ಅದು ತಣ್ಣಗಾಗಿತು.

ತನ್ನ ಕ್ಷೇತ್ರದ ವ್ಯಾಪ್ತಿಗೆ ಬರದ ಯಲಹಂಕದಲ್ಲಿ ನಡೆದ ಏರೋ-ಶೋದಲ್ಲಿ ಹಾಜರಾಗಿ ರಕ್ಷಣಾ ಜೆಟ್ ಒಂದರಲ್ಲಿ ಮಜಾ ಮಾಡಿದ್ದು ಅವರ ಪಕ್ಷದ ಹಿರಿಯರಲ್ಲೇ ಅಸಮಾಧಾನ ಮೂಡಿಸಿದ್ದನ್ನು ನಾನುಗೌರಿ.ಕಾಂನಲ್ಲಿ ಬರೆದಿದ್ದೆವು.

ಬಂಗಾಳ ಮತ್ತು ತಮಿಳುನಾಡು ಚುನಾವಣಾ ಪ್ರಚಾರಗಳಿಗೆ ಆತನನ್ನು ಕಳಿಸಿದ್ದು ಹಲವರಲ್ಲಿ ಮತ್ತೆ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕಾರಣಕ್ಕೇ ಪಕ್ಷವು ಸುಮ್ಮನಿರಲು ಹೇಳಿದೆಯೇ ಎಂಬ ಪ್ರಿಂಟ್ ಪ್ರಶ್ನೆಗೆ ಆ ಆರೋಪಗಳಲ್ಲಿ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ. “ಇಂದಿನವರೆಗೂ, ನಾನು ಹೇಳಿದ್ದು ಸರಿ ಅಥವಾ ತಪ್ಪು ಎಂದು ಪಕ್ಷವು ಒಮ್ಮೆಯೂ ಹೇಳಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಶಾಸಕಾಂಗೀಯ ಕಾರ್ಯಗಳಲ್ಲಿ ನಿರತನಾಗಿದ್ದೇನೆ. ಅಲ್ಲದೆ, ಪಕ್ಷದಲ್ಲಿ ಮಾತನಾಡಲು ಮತ್ತು ಬದಲಾವಣೆಗಳ ಮೇಲೆ ಪರಿಣಾಮ ಬೀರಲು ನನಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ, ಆದ್ದರಿಂದ ನಾನು ಹೊರಗಡೆ ಕಡಿಮೆ ಮಾತನಾಡಬೇಕಾಗಿದೆ” ಎಂದಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಮಾತನಾಡುವಾಗ, ಎರಡನೇ ಅಲೆಯು ವಿಶ್ವದ ಇತರ ಭಾಗಗಳನ್ನು ತೀವ್ರವಾಗಿ ಕಾಡಿದೆ ಎಂದು ಸೂರ್ಯ ಹೇಳಿದರು.

ಏಪ್ರಿಲ್ 18 ರಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿರ್ದೇಶನದ ಮೇರೆಗೆ ಸೂರ್ಯ ಮುಖ್ಯಸ್ಥರಾಗಿರುವ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಎಲ್ಲಾ ರಾಜ್ಯ ಘಟಕಗಳು ಮತ್ತು ಮೋರ್ಚಾಗಳನ್ನು “ಯಾವುದೇ ವಿಳಂಬವಿಲ್ಲದೆ ಕೊರೊನಾದ ವಿರುದ್ಧ ತಮ್ಮ ಅಭಿಯಾನ ಮತ್ತು ಉಪಕ್ರಮಗಳನ್ನು ತಕ್ಷಣ ಪ್ರಾರಂಭಿಸಬೇಕು” ಎಂದು ಸೂಚಿಸಲಾಗಿದೆ.
ಬಿಜೆವೈಎಂ ಸಾಮಾಜಿಕ ಮಾಧ್ಯಮದಲ್ಲಿ #BJYMDoctorHelpline ಅನ್ನು ಬುಧವಾರ ಪ್ರಾರಂಭಿಸಿದಾಗಲೂ, ಅದನ್ನು ಉದ್ಘಾಟಿಸಿದವರು ನಡ್ಡಾರವರೇ ಹೊರತು ಸೂರ್ಯ ಅಲ್ಲ.

ಹೆಸರು ಹೇಳಲು ಇಚ್ಛಿಸದ ಬಿಜೆಪಿಯ ಪ್ರಮುಖ ಕಾರ್ಯಕರ್ತರೊಬ್ಬರು, ಕೋವಿಡ್ ಸಂದರ್ಭದಲ್ಲಿ ತಮ್ಮ ಪಕ್ಷ ಮತ್ತು ಯುವ ವಿಭಾಗವು ಈ ಲೆಕ್ಕದಲ್ಲಿ ಪ್ರತಿಪಕ್ಷಗಳ ಎದುರು ಸೋತಿದೆ ಎಂದು ಪ್ರಿಂಟ್ ಎದುರು ಒಪ್ಪಿಕೊಂಡಿದ್ದಾರೆ.

“ನಾವು ನಮ್ಮ ಕಲ್ಯಾಣ ಕಾರ್ಯಕ್ರಮಗಳನ್ನು ಮೊದಲೇ ಪ್ರಾರಂಭಿಸಬೇಕಾಗಿತ್ತು. ಪ್ರತಿಪಕ್ಷಗಳು, ವಿಶೇಷವಾಗಿ ಯುವ ಕಾಂಗ್ರೆಸ್‌ನ ಶ್ರೀನಿವಾಸ್, ಮೊದಲೇ ಸಹಾಯ ಮಾಡಲು ಪ್ರಾರಂಭಿಸಿದರು ಮತ್ತು ಅದರಿಂದ ಅವರು ಜನರ ಒಲವು ಗಳಿಸಿದರು” ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ನಾಯಕರೊಬ್ಬರು ಪ್ರಿಂಟ್ ಜೊತೆ ಮಾತನಾಡಿ, ಸೂರ್ಯ ಅವರು ಮಾಧ್ಯಮಗಳಲ್ಲಿ ಹೆಸರಾಗಿರಬಹುದು. ಆದರೆ ಪಶ್ಚಿಮ ಬಂಗಾಳದ ಜನರಿಗೆ, ಅವರು ವಿಷಯವೇ ಅಲ್ಲ. ಅವರು ಅಕ್ಟೋಬರ್‌ನಲ್ಲಿ ದೊಡ್ಡ ರ‍್ಯಾಲಿ ನಡೆಸಿದ್ದರು, ಅವರು ಯುವ ವಿಭಾಗದ ಅಧ್ಯಕ್ಷರಾಗಿದ್ದರಿಂದ ಅದು ಮುಖ್ಯವಾಗಿತ್ತು. ಈ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ, ಅವರು ಬಂದು ಕೆಲವು ಸಣ್ಣ ಕಾರ್ನರ್ ಮೀಟಿಂಗ್‌ಗಳನ್ನು ಮಾಡಿದರು, ಅದರಿಂದ ಏನೋನೂ ಉಪಯೋಗವಿಲ್ಲ’ ಎಂದಿದ್ದಾರೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಅಸ್ಸಾಮಿನಲ್ಲಿ ತೇಜಸ್ವಿ ಸೂರ್ಯ ಮಾಡಿದ ಭಾಷಣಗಳು ಬಿಜೆಪಿಯ ಭವಿಷ್ಯವನ್ನು ಘಾಸಿಗೊಳಿಸುತ್ತವೆ ಎಂದು ಪಕ್ಷದ ಅನೇಕ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ದಿ ಪ್ರಿಂಟ್ ಬರೆದಿದೆ.

“ಅವರು ತಮಿಳುನಾಡಿನಲ್ಲಿ ಸ್ಟಾರ್ ಪ್ರಚಾರಕರಾಗಿದ್ದರು. ಆದರೆ ಅವರ ರ‍್ಯಾಲಿಗಳಿಗೆ ಹೆಚ್ಚಿನ ಜನರೇ ಇರಲಿಲ್ಲ’ ಎಂದು ತಮಿಳುನಾಡಿನ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...