Homeಕರ್ನಾಟಕಪುಸ್ತಕ ಮುದ್ರಣಕ್ಕೆ 'ಹಣ' ಕೊಟ್ಟಿದ್ದು ಯೂನಿವರ್ಸಿಟಿ, 'ಐಎಸ್‌ಬಿಎನ್‌' ಹೊರಗಿನವರದ್ದು; ಕಾಸರಗೋಡು ಕೇಂದ್ರೀಯ 'ವಿವಿ'ಯಲ್ಲಿ ಅಧಿಕಾರ ದುರುಪಯೋಗ?

ಪುಸ್ತಕ ಮುದ್ರಣಕ್ಕೆ ‘ಹಣ’ ಕೊಟ್ಟಿದ್ದು ಯೂನಿವರ್ಸಿಟಿ, ‘ಐಎಸ್‌ಬಿಎನ್‌’ ಹೊರಗಿನವರದ್ದು; ಕಾಸರಗೋಡು ಕೇಂದ್ರೀಯ ‘ವಿವಿ’ಯಲ್ಲಿ ಅಧಿಕಾರ ದುರುಪಯೋಗ?

- Advertisement -
- Advertisement -

ಪುಸ್ತಕ ಮುದ್ರಣಕ್ಕೆ ವಿಶ್ವವಿದ್ಯಾಲಯ ಹಣ ಕೊಟ್ಟಿದ್ದು, ‘ಐಎಸ್‌ಬಿಎನ್‌’ ನಂಬರ್ ಮಾತ್ರ ಸಂಸ್ಥೆಗೆ ಸಂಬಂಧ ಇಲ್ಲದವರದ್ದನ್ನು ಬಳಸಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಪುಸ್ತಕ ಮುದ್ರಣದ ಹೊಣೆ ಹೊತ್ತಿದ್ದ ಕೇರಳದ ಕಾಸರಗೋಡಿನ ಕೇಂದ್ರೀಯ ವಿಶ್ವ ವಿದ್ಯಾಲಯ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸೌಮ್ಯಾ ಹೇರಿಕುದ್ರು ಅವರ ಮೇಲೆ ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ.

ಪುಸ್ತಕ ಮುದ್ರಣದಲ್ಲಿ ಭೌತಿಕ ಮತ್ತು ಡಿಜಿಟಲ್ ರೂಪಗಳಲ್ಲಿರಬಹುದಾದ ಪುಸ್ತಕಗಳನ್ನು ಗುರುತಿಸುವಲ್ಲಿ, ಪ್ರಮಾಣೀಕರಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿರುವ ಐ.ಎಸ್.ಬಿ.ಎನ್ ಅನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದಿದೆ.

ಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಮೈಸೂರಿನ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ 21 ಮತ್ತು 22 ಫೆಬ್ರವರಿ, 2024ರಂದು, ‘ಪ್ರಾಚೀನ ಕನ್ನಡ ಸಾಹಿತ್ಯ: ಓದಿನ ಕ್ರಮಗಳು’ ಎನ್ನುವ ಶೀರ್ಷಿಕೆಯಡಿ ಎರಡು ದಿನಗಳ ಅಂತಾರಾಷ್ಟೀಯ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಸೆಮಿನಾರ್ ಮುಗಿದ ಬಳಿಕ ಅಲ್ಲಿ ಮಂಡಿಸಿದ ವಿಚಾರಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಣ ಮಾಡಲಾಗಿದೆ. ಮುದ್ರಣಕ್ಕೆ ಯೂನಿವರ್ಸಿಟಿ ಆಡಳಿತ ಮಂಡಳಿ 30 ಸಾವಿರ ರೂಪಾಯಿ ಹಣ ನೀಡಿದ್ದು, ಕೇರಳ ವಿವಿಯ ಕನ್ನಡ ವಿಭಾಗ ಪ್ರಕಟಿಸಿರುವ ಪುಸ್ತಕದ ಬಾರ್ ಕೋಡ್ ಸೌಮ್ಯ ಅವರ ಪತಿ ಪ್ರದೀಪ್ ಕುಮಾರ್ ಶೆಟ್ಟಿಯವರ ಹೆಸರಿನಲ್ಲಿದೆ. ಇದು ಅಧಿಕಾರ ಹಾಗೂ ಯೂನಿವರ್ಸಿಟಿ ಹಣದ ದುರುಪಯೋಗ ಎಂದು ಕೆಲವರು ಆರೋಪ ಮಾಡಿದ್ದಾರೆ.

ಇಂಟರ್ನ್ಯಾಶನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್ (ISBN) ಅನ್ನು ಭಾರತ ಸರಕಾರದ ಅಧೀನದಲ್ಲಿ ಬರುವ ನವದೆಹಲಿಯ ರಾಜಾರಾಮ ಮೋಹನ್ ರಾಯ್ ನ್ಯಾಶನಲ್ ಏಜೆನ್ಸಿ ಪುಸ್ತಕ ಪ್ರಕಾಶಕರಿಗೆ ನೀಡುತ್ತದೆ. ಪುಸ್ತಕಗಳನ್ನು ವರ್ಗೀಕರಿಸುವಲ್ಲಿ, ಗುರುತಿಸುವಲ್ಲಿ, ಅದರ ಪ್ರಕಾಶಕರನ್ನು ನಿರ್ಧರಿಸುವಲ್ಲಿ ಈ ಬಾರ್ ಕೋಡ್ ಬಹಳ ಮುಖ್ಯವಾಗಿದೆ.

ಈ ಬಗ್ಗೆ ‘ನಾನುಗೌರಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಕೇಂದ್ರೀಯ ವಿಶ್ವ ವಿದ್ಯಾಲಯ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸೌಮ್ಯಾ ಹೇರಿಕುದ್ರು, ಪುಸ್ತಕ ಮುದ್ರಣಕ್ಕೆ ವಿವಿ ‘ಹಣ’ ಕೊಟ್ಟಿದ್ದು ನಿಜ. ಆದರೆ, ಪುಸ್ತಕವನ್ನು ಮಾರಾಟ ಮಾಡಲಾಗುವುದಿಲ್ಲ. ಉಚಿತವಾಗಿ ವಿತರಣೆ ಮಾಡುತ್ತೇವೆ;  ಐಎಸ್‌ಬಿಎನ್‌ ಸಂಖ್ಯೆಯ ಯಾವುದನ್ನಾದರೂ ಬಳಸಬಹುದು ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

“ಪುಸ್ತಕ ಮುದ್ರಣಕ್ಕೆ ವಿಶ್ವವಿದ್ಯಾಲಯದ ಹಣ ಬಳಸಿರುವುದು ನಿಜ.. ‘ಪ್ರಾಚೀನ ಕನ್ನಡ ಸಾಹಿತ್ಯ: ಓದಿನ ಕ್ರಮಗಳು’ ಎನ್ನುವ ಶೀರ್ಷಿಕೆಯಡಿ ಅಂತಾರಾಷ್ಟೀಯ ವಿಚಾರ ಸಂಕಿರಣ ನಡೆದಿದೆ. ಅದನ್ನು ಪುಸ್ತಕ ರೂಪದಲ್ಲಿ ತರುವುದಕ್ಕೆ ಆಡಳಿತ ಮಂಡಳಿ ಹಣ ನೀಡಿದೆ. ಈ ಪುಸ್ತಕವನ್ನು ನಾವು ಮಾರಾಟ ಮಾಡುವುದಿಲ್ಲ, ಪುಸ್ತಕಗಳನ್ನು ಉಚಿತ ಪ್ರತಿಯಾಗಿ ನೀಡಬಹುದು. ಅಂಗಡಿಗಳಲ್ಲಿ ಮಾರಾಟ ಮಾಡುವಂತಿಲ್ಲ. ಇದಕ್ಕೆ, ‘ಐಎಸ್‌ಬಿಎನ್‌’ ಹಾಕಿಯೇ ಮುದ್ರಣ ಮಾಡಬೇಕು ಎಂದಿರಲಿಲ್ಲ. ಆದರೆ, ವಿಭಾಗದ ಪ್ರತಿಷ್ಠೆಗಾಗಿ ಇದನ್ನು ಹೊರಗಿನ ಪ್ರಕಾಶಕರಿಗೂ ಕೊಡಬಹುದು. ಖಾಸಗಿಯವರ ಐಎಸ್‌ಬಿಎನ್‌ ನಂಬರ್ ಪಡೆದು ಬಳಸಿಕೊಳ್ಳಬಹುದು” ಎಂದು ಹೇಳಿದರು.

“ಕೇಂದ್ರೀಯ ವಿಶ್ವವಿದ್ಯಾಲಯದ ಸಂಬಂಧಪಟ್ಟವರಿಂದ ಅನುಮತಿ ಪಡೆದ ಪುಸ್ತಕ ಮುದ್ರಣ ಮಾಡಿದ್ದೇವೆ, ನಮ್ಮ ಗ್ರಂಥಾಲಯ ವಿಭಾಗ ಕೆಲವೊಮ್ಮೆ ನಮಗೆ ಐಎಸ್‌ಬಿನ್‌ ನಂಬರ್ ಕೊಡುತ್ತದೆ, ಒಂದು ವೇಳೆ ಖಾಲಿ ಆಗಿದ್ದರೆ ನಾವು ಬೇರೆಯವರಿಂದ ಪಡೆದುಕೊಳ್ಳಬಹುದು. ಇದು ಮಾರಾಟ ಮಾಡುವಂತಹ ಪುಸ್ತಕ ಅಲ್ಲ” ಎಂದರು.

ನಿಮ್ಮದೇ (ಪತಿ ಒಡೆತನದ) ಪ್ರಕಾಶನದ ಐಎಸ್‌ಬಿಎನ್‌ ನಂಬರ್ ಬಳಸಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಪ್ರಕಾಶನದ ಐಎಸ್‌ಬಿಎನ್‌ ಬಳಸಿಕೊಂಡು ಅದರಿಂದ ನಾನು ಲಾಭ ಮಾಡುತ್ತಿಲ್ಲ. ಅದನ್ನು ಮಾರಾಟ ಮಾಡುವುದಾಗಲಿ ಅಥವಾ ದುರ್ಬಳಕೆ ಮಾಡಿಕೊಂಡಿಲ್ಲ. ಪುಸ್ತಕಕ್ಕೆ ಮಸಿ ಬಳಿಯುವ ಕೆಲಸವನ್ನೂ ಮಾಡಿಲ್ಲ. ವಿಚಾರ ಸಂಕಿರಣ ಈಗಾಗಲೇ ನಡೆದುಹೋಗಿದೆ, ಅಲ್ಲಿ ಬಂದು ಮೌಖಿಕವಾಗಿ ಮಾತನಾಡಿರುವ ವಿಷಯಗಳು ಹಾಗೇ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಸಂಪೂನ್ಮೂಲ ವ್ಯಕ್ತಿಗಳ ಭಾಷಣಗಳನ್ನು ದಾಖಲಿಸಲಾಗಿದೆ. ಮುದ್ರಣ ಮಾಡಲೇಬೇಕು ಎಂಬ ಒತ್ತಡವೂ ನಮಗೆ ಇರಲಿಲ್ಲ. ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗ ಆಗಲಿ ಎಂಬ ಕಾರಣಕ್ಕೆ ನಾನೇ ಮುತುವರ್ಜಿ ವಹಿಸಿ ಪುಸ್ತಕ ಮುದ್ರಿಸಲು ನಿರ್ಧರಿಸಿದೆ” ಎಂದು ವಿವರಿಸಿದರು.

“ವಿಭಾಗದ ಪ್ರಚಾರಕ್ಕಾಗಿ ನಾವು ಪುಸ್ತಕ ಮುದ್ರಣ ಮಾಡಿದ್ದೇವೆ, ಯಾರೋ ತಲೆಕೆಟ್ಟವರು ಹೇಳಿದ್ದಕ್ಕೆ ನೀವು ಸಣ್ಣಪುಟ್ಟ ವಿಚಾರಗಳಿಗೆ ಕರೆ ಮಾಡಬಾರದು. ಅದಕ್ಕೆ ನನಗೆ ಸಮಯ ಇಲ್ಲ” ಎಂದು ಅವರು ಹೇಳಿದರು.

ಪುಸ್ತಕ ಮುದ್ರಣದ ಬಗ್ಗೆ ಇರುವ ಕೆಲ ಗೊಂದಲಗಳಿಗೆ ಅವರಿಂದ ಸ್ಪಷ್ಟನೆ ಪಡೆದುಕೊಳ್ಳಲು ಯತ್ನಿಸಲಾಗಿದ್ದು, ಈ ಬಗ್ಗೆ ಡಾ. ಸೌಮ್ಯಾ ಹೇರಿಕುದ್ರು ಅವರನ್ನು ನೇರವಾಗಿ ಪ್ರಶ್ನಿಸಲಾಯಿತು.

ನಾನುಗೌರಿ ಪ್ರಶ್ನೆ: ಈ ಪುಸ್ತಕ ಮುದ್ರಣಕ್ಕೆ ಹಣ ಕೊಟ್ಟಿರುವುದು ವಿಶ್ವವಿದ್ಯಾಲಯ ಅಲ್ಲವೇ?

ಡಾ.ಸೌಮ್ಯ: ಹೌದು

ನಾನುಗೌರಿ ಪ್ರಶ್ನೆ: ಪುಸ್ತಕದಲ್ಲಿರುವ ಐಎಸ್‌ಬಿಎನ್‌ ನಂಬರ್ ವಿವಿಗೆ ಸಂಬಂಧಪಟ್ಟವರದ್ದಲ್ಲ ಅಲ್ಲವೇ?

ಡಾ.ಸೌಮ್ಯ: ಗಂಡ ಅಥವಾ ಯಾರಾದರೂ ಐಎಸ್‌ಬಿಎನ್‌ ನಂಬರ್ ಕೊಡಬಹುದು , ನಾನೇ ಬಳಸಿದ್ದೇನೆ.

ಹೊರಗಿನವರ ಐಎಸ್‌ಬಿಎನ್‌ ನಂಬರ್ ಬಳಿಸಿದರೂ ಪ್ರಶ್ನಿಸದ ವಿವಿ?

ಕೇರಳ ಕೇಂದ್ರೀಯ ವಿವಿಯಲ್ಲಿ ಹೀಗೆ ವಿಭಾಗದ ಮುಖ್ಯಸ್ಥರ ಕುಟುಂಬದವರು ನಡೆಸುವ ಪ್ರಕಾಶನ ಸಂಸ್ಥೆಗೆ 30ಸಾವಿರ ಹಣ ನೀಡಿ, ವಿವಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಸಂಪ್ರದಾಯವಿದೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಆಡಳಿತ ಸಂಸ್ಥೆಯ ಮುಖ್ಯಸ್ಥರ ಮೌನದ ಬಗ್ಗೆಯೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಈ ನಕಲಿ ಐಎಸ್‌ಬಿಎನ್‌ ನಂಬರಿನ ಪುಸ್ತಕದ ಪ್ರಕಟಣೆಯ ಬಗ್ಗೆ ಕನ್ನಡ ವಿಭಾಗದ ಇತರ ಪ್ರಾಧ್ಯಾಪಕರು, ಲೇಖನ ಆಯ್ಕೆ ಮತ್ತು ಪುಸ್ತಕ ಸಂಪಾದನಾ ಮಂಡಳಿ ಸದಸ್ಯರು, ವಿವಿಯ ಅಕಾಡೆಮಿಕ್ ಇಲಾಖೆ ಸಹ ಮೌನವಾಗಿದೆ. ಐಎಸ್‌ಬಿಎನ್‌ ನಕಲಿ ಆಗಿರುವ ಕಾರಣ ಈ ಪುಸ್ತಕದಲ್ಲಿ ಪ್ರಕಟಗೊಂಡ ಲೇಖನಗಳಿಗೆ ಅಕಾಡೆಮಿಕ್ ಮಾನ್ಯತೆ ಇದೆಯೇ, ಇಲ್ಲವೇ ಎಂಬ ಗೊಂದಲ ಪ್ರಬಂಧ ಮಂಡಿಸಿದವರಲ್ಲಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಹಣ ಖರ್ಚು ಮಾಡಿಕೊಂಡು ಬಂದು, ಶ್ರಮ ವಹಿಸಿ ಲೇಖನ ಮಂಡಿಸಿದ ಸಂಶೋಧಕರು ಈಗ ನಕಲಿ ಐಎಸ್‌ಬಿಎನ್‌ ಸುಳಿಗೆ ಸಿಲುಕಿದ್ದಾರೆ.

ವಿಚಾರ ಸಂಕಿರಣದ ಸಂಯೋಜಕರೂ ಆಗಿದ್ದ ಸೌಮ್ಯ ಅವರು ವಿಭಾಗದ ಸಂಶೋಧನಾರ್ಥಿಗಳು, ಪ್ರಾಧ್ಯಾಪಕರು ಮಂಡಿಸಿದ ಯಾವುದೇ ಪ್ರಬಂಧಗಳನ್ನು ಪುಸ್ತಕದಲ್ಲಿ ಪ್ರಕಟಿಸದೆ, ಸೆಮಿನಾರ್‌ನಲ್ಲಿ ಪ್ರಬಂಧ ಮಂಡಿಸಿದ್ದ ತಮ್ಮ ಸ್ವಜಾತಿಯವರೊಬ್ಬರಿಗೆ ‘ಉತ್ತಮ ಪ್ರಬಂಧ’ವೆಂಬ ಬಹುಮಾನವನ್ನು ನೀಡಿ, ಆ ಲೇಖನ ಪುಸ್ತಕದಲ್ಲಿ ಪ್ರಕಟವಾಗುವಂತೆ, ಅದರ ಕೆಲವು ಸಾಲುಗಳು ಪುಸ್ತಕದ ಹಿಂಪುಟದಲ್ಲಿ ಅಚ್ಚಾಗುವಂತೆಯೂ ನೋಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಐಎಸ್‌ಬಿಎನ್‌ ನಿಯಮಗಳು ಹೇಳುವುದೇನು?

ಅಂತರರಾಷ್ಟ್ರೀಯ ಪ್ರಮಾಣಿತ ಪುಸ್ತಕ ಸಂಖ್ಯೆ (ಐಎಸ್‌ಬಿಎನ್‌) ಅನ್ನು ಪ್ರಾಥಮಿಕವಾಗಿ ಪುಸ್ತಕದ ಪ್ರಕಾಶಕರಿಗೆ ನಿಗದಿಪಡಿಸಲಾಗುತ್ತದೆ. ಅದು ನಿರ್ದಿಷ್ಟ ಪ್ರಕಟಣೆಯನ್ನು ಮಾತ್ರವಲ್ಲದೆ ಆ ಪ್ರಕಟಣೆಯ ಪ್ರಕಾಶಕರನ್ನು ಸಹ ಗುರುತಿಸುತ್ತದೆ. ಸಾಮಾನ್ಯವಾಗಿ, ಐಎಸ್‌ಬಿಎನ್‌ಗಳನ್ನು ಪ್ರಕಾಶಕರು ಅಥವಾ ಘಟಕಗಳ ನಡುವೆ ವರ್ಗಾಯಿಸಲಾಗುವುದಿಲ್ಲ. ಪುಸ್ತಕದ ಪ್ರಕಾಶಕರು ಬದಲಾದರೆ, ಹೊಸ ಪ್ರಕಾಶಕರು ತಮ್ಮದೇ ಆದ ಐಎಸ್‌ಬಿಎನ್‌ ಅನ್ನು ಪ್ರಕಟಣೆಗೆ ಪಡೆದುಕೊಳ್ಳಬೇಕು.

ಪ್ರಕಾಶಕರನ್ನು ಐಎಸ್‌ಬಿಎನ್‌ನ ಮಾಲೀಕರೆಂದು ಪರಿಗಣಿಸಲಾಗುತ್ತದೆ, ಅದರ ನಿಯೋಜನೆ ಮತ್ತು ಬಳಕೆಗೆ ಜವಾಬ್ದಾರರಾಗಿರುತ್ತಾರೆ. ಇದು ಪ್ರಕಟಣೆಯ ಹಣಕಾಸಿನ ಜವಾಬ್ದಾರಿಯನ್ನು ಒಳಗೊಂಡಿದೆ.

ಐಎಸ್‌ಬಿಎನ್‌ ನಿರ್ದಿಷ್ಟ ಪುಸ್ತಕಕ್ಕೆ ಅದರ ಸ್ವರೂಪ, ಆವೃತ್ತಿ ಮತ್ತು ಪ್ರಕಾಶಕರನ್ನು ಒಳಗೊಂಡಂತೆ ವಿಶಿಷ್ಟ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪುಸ್ತಕದ ವಿಷಯ, ಸ್ವರೂಪ, ಬೈಂಡಿಂಗ್ ಅಥವಾ ಪ್ರಕಾಶಕರಲ್ಲಿನ ಬದಲಾವಣೆಗಳಿಗೆ ಹೊಸ ಐಎಸ್‌ಬಿಎನ್‌ ಅಗತ್ಯವಿದೆ. ಒಮ್ಮೆ ಐಎಸ್‌ಬಿಎನ್‌ ಅನ್ನು ನಿಯೋಜಿಸಿದ ನಂತರ, ಅದನ್ನು ಮರುಬಳಕೆ ಮಾಡಲಾಗುವುದಿಲ್ಲ.

ಐಎಸ್‌ಬಿಎನ್‌ ಏಜೆನ್ಸಿಯಲ್ಲಿ ನೋಂದಾಯಿಸಲಾದ ಪ್ರಕಾಶಕರ ಹೆಸರನ್ನು ಪುಸ್ತಕದ ವಿವರಗಳು ಮತ್ತು ಮುದ್ರೆಯಲ್ಲಿ ನಿಖರವಾಗಿ ಪ್ರತಿಬಿಂಬಿಸಬೇಕು.

ಜಂಟಿ ಪ್ರಕಟಣೆಗಳು: ಜಂಟಿ ಪ್ರಕಟಣೆಗಳ ಸಂದರ್ಭದಲ್ಲಿ, ಎರಡೂ ಪ್ರಕಾಶಕರು ತಮ್ಮ ಐಎಸ್‌ಬಿಎನ್‌ ಗಳನ್ನು ಪುಸ್ತಕದಲ್ಲಿ ಸೇರಿಸಿಕೊಳ್ಳಬಹುದು. ಆದರೆ, ಯಾವ ಐಎಸ್‌ಬಿಎನ್‌ ಯಾವ ಪ್ರಕಾಶಕರಿಗೆ ಸೇರಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸಲು ಶಿಫಾರಸು ಮಾಡಲಾಗಿದೆ.

ಆರ್‌ಎಸ್‌ಎಸ್ ಸಂಬಂಧಿತ ಶಿಕ್ಷಣ ಸಮ್ಮೇಳನವನ್ನು ಟೀಕಿಸಿದ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...