Homeಮುಖಪುಟರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

ರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

- Advertisement -
- Advertisement -

(ಇದು ಹೊಸ ಬರಹದಲ್ಲಿದೆ, ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

ನಿಜದ ಪ್ರಜಾಪ್ರಬುತ್ವ ಎಂಬುದು ನಿದಾನ ಪ್ರಕ್ರಿಯೆ. ಅದು ಎಡವುತ್ತದೆ, ತೆವಳುತ್ತದೆ, ಕುಂಟುತ್ತದೆ. ನೇರವಾಗಿ ಸಾಗುವುದು ಪ್ರಜಾಪ್ರಬುತ್ವ ಎನಿಸಿಕೊಳ್ಳುವುದಿಲ್ಲ.
ಪ್ರಜಾಪ್ರಬುತ್ವ ಸಮಾಜದಲ್ಲಿ (ಅದು ತನ್ನ ಮೌಲ್ಯ ಕಳೆದುಕೊಂಡಿದ್ದರೂ ಸಹ) ಒಂದು ಹೋರಾಟ ಮತ್ತೊಂದು ಹೋರಾಟಕ್ಕೆ ಇದು ಮಗದೊಂದಕ್ಕೆ ಸ್ಪೂರ್ತಿಯಾಗುತ್ತಾ ಹೋಗುತ್ತದೆ. ಇದು ಪ್ರಜಾಪ್ರಬುತ್ವದ ಅಡಿಪಾಯವನ್ನು ಶಿಥಿಲಗೊಳಿಸದಂತೆ ಕಾಪಾಡುತ್ತದೆ.

ಇತ್ತೀಚಿನ ಉದಾಹರಣೆ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಕೃಶಿ ಬಿಕ್ಕಟ್ಟಿಗೆ ಕಾರಣವಾದ ರಾಜ್ಯ ಸರಕಾರದ ನೀತಿಗಳ ವಿರುದ್ದ ರೂಪುಗೊಂಡ aikss (all india kisan sangharsh samiti) ಸಂಘಟನೆ.

ಮಾರ್ಚ್ 2018ರಲ್ಲಿ ಭೂರಹಿತ ಕೂಲಿ ಕಾರ್ಮಿಕರ ಹೋರಾಟ ಸಂಘಟಿಸಿದ್ದ aikssನ ಸಾವಿರಾರು ಕೂಲಿ ಕಾರ್ಮಿಕರು ನಾಸಿಕ್ ನಿಂದ ಮುಂಬೈವರೆಗಿನ 750 ಕಿ. ಮೀ. ನ ಆ ಆಭೂತಪೂರ್ವ ಕಾಲ್ನಡಿಗೆ ಹೊಸ ಇತಿಹಾಸವನ್ನೇ ಬರೆಯಿತು. ‘ಜನರಿಂದ ಜನರಿಗಾಗಿ’ ರೂಪುಗೊಂಡಿದ್ದ ಆ ಹೋರಾಟ ಫ್ಯಾಸಿಸ್ಟ್ ಕಾಲದಲ್ಲಿಯೂ ಸಹ ನೂರಾರು ನದಿಗಳು ಸೇರಿಕೊಳ್ಳುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿತು.

ನಾಸಿಕ್ ನಿಂದ ಮುಂಬೈವರೆಗಿನ ರೈತರ ಬಹುದೊಡ್ಡ ಪಾದಯಾತ್ರೆ

ಇದರಿಂದಾಗಿ ಸ್ಪೂರ್ತಿ ಪಡೆದ ದೆಹಲಿ ರೈತ ಹೋರಾಟ ಮತ್ತೊಂದು ಚಾರಿತ್ರಿಕ ಘಟನೆಯಾಗಿದೆ. ಇದು ಮುಂದಿನ ರಚನಾತ್ಮಕ ಸಂಘಟನೆಗೆ ಚಿಮ್ಮು ಹಲಗೆಯಾಗಿದೆ.
ಪ್ರಜಾಪ್ರಬುತ್ವದಲ್ಲಿ ‘ಹೋರಾಟ ಮತ್ತು ಸಂಘಟನೆ’ ಬಿತ್ತಿದ ಬೀಜಗಳನ್ನು ರಚನಾತ್ಮಕ ಕಾರ್ಯಯೋಜನೆಗಳು ಗಿಡವಾಗಿ ಬೆಳೆಸುತ್ತವೆ. ಅದು ಕೊಂಬೆಗಳಾಗಿ ಟಿಸಿಲೊಡೆಯುತ್ತದೆ. ಇದು ಪ್ರಜಾಪ್ರಬುತ್ವದ ಆತ್ಮದಂತೆ.

ಪ್ರತಿಕ್ರಿಯೆ ಮತ್ತು ಕ್ರಿಯಾತ್ಮಕ ಎರಡೂ ಪೂರಕವಾಗಿ ಸಂಘಟಿತವಾಗುವುದರಿಂದಲೇ ಪ್ರಜಾಪ್ರಬುತ್ವವು ಉಸಿರಾಡುತ್ತದೆ.

ಈ ಪ್ರಕ್ರಿಯೆ ಎಶ್ಚೇ ಹಿನ್ನಡೆ ಅನುಬವಿಸಿದರೂ ಸಹ ಇವೆರಡರ ಕಾರಣದಿಂದ ಕನಿಶ್ಟ ಅಬಿವ್ಯಕ್ತಿ ಸ್ವಾತಂತ್ರ್ಯವಂತೂ ಖಾತರಿಯಾಗಿರುತ್ತದೆ. ಇಂದು ಬೀದಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವಶ್ಟು ಸ್ವಾತಂತ್ರವಿದೆ ಎಂದರೆ ಅದಕ್ಕೆ ಈ ಹೋರಾಟಗಳು ಕಾರಣ. ಇದರ ಮೇಲೆ ಮುಂದಿನ ಬವಿಶ್ಯವನ್ನು ಕಟ್ಟಬೇಕಿರುವುದು ಪ್ರಜ್ಞಾವಂತರ ಜವಬ್ದಾರಿ.

ಪ್ರಜಾಪ್ರಬುತ್ವದ ಈ ಆಯಾಮಗಳು, ಕೈ ದೀವಿಗೆಗಳು ಮತ್ತು ಆದಾರಸ್ತಂಬಗಳು ಒಂದೆಡೆಯಾದರೆ ‘ಚುನಾವಣಾ ಪ್ರಜಾಪ್ರಬುತ್ವ’ ಮತ್ತೊಂದು ಮಗ್ಗಲು. ಅದಿಕಾರ ರಾಜಕಾರಣ ಮಹತ್ವದ ಕಾರಣಕ್ಕೆ ಇದರ ಗೆಲುವು ಸೋಲುಗಳು ಮುಖ್ಯವಾಗುತ್ತದೆ.

ಆದರೆ ಬಿಜೆಪಿಯಂತಹ ಸರ್ವಾದಿಕಾರಿ ಪಕ್ಷವು ಅದಿಕಾರದ ಹಿಂದೆ ಬಿದ್ದಾಗ ಮಿಕ್ಕಿದೆಲ್ಲವನ್ನು ಬಿಟ್ಟು ಕೇವಲ ಚುನಾವಣಾ ರಾಜಕಾರಣವನ್ನು ಪ್ರಜಾಪ್ರಬುತ್ವದ ಮೌಲ್ಯಮಾಪನವಾಗಿಸಿಬಿಡುತ್ತದೆ. ಇದೊಂದು ಬೋನು.

680 ರೈತರು ಪ್ರಾಣಬಿಟ್ಟರೂ ತಲೆ ಕೆಡಿಸಿಕೊಳ್ಳದ ಸರ್ವಾದಿಕಾರಿಗಳು ಚುನಾವಣೆಗೋಸ್ಕರ ನಿರ್ದಾರ ತೆಗೆದುಕೊಳ್ಳುವಂತಹ ಒತ್ತಡಕ್ಕೆ ಒಳಗಾಗುತ್ತಾರೆ.

ಆದರೆ ನಿರಂತರ ಹೋರಾಟಗಳು ಇಂತಹ ನಿರಂಕುಶ ಪ್ರಬುತ್ವವನ್ನು ಬಗ್ಗಿಸಿ ಚುನಾವಣಾ ಗಿಮಿಕ್ ಮಾಡುವ ಅನಿವಾರ್ಯತೆಯನ್ನು ಸೃಶ್ಟಿ ಮಾಡುತ್ತವೆ ಎಂಬುದೇ ಪ್ರಜಾಪ್ರಬುತ್ವದ ಹಿರಿಮೆ. ಇಲ್ಲಿ ದೆಹಲಿ ರೈತ ಹೋರಾಟದ ಗೆಲುವಿದೆ.

ಆದರೆ ಭಾರತದಂತಹ ದುರ್ಬಲ ಪ್ರಜಾಪ್ರಬುತ್ವದಲ್ಲಿ ಮುನ್ನಡೆಯು ಈ ರೀತಿಯ ಪ್ಯಾಕೇಜ್ ಗಳ ರೀತಿಯಿರುತ್ತದೆ.

ಪ್ರಜಾಪ್ರಬುತ್ವವು ಡೈನಮಿಕ್ ಆಗಿರುವಂತೆ ಎಚ್ಚರ ವಹಿಸುವುದು ನಮ್ಮ ಹೊಣೆಗಾರಿಕೆ. ಅದು ಎರಡು ಹೆಜ್ಜೆ ಮುಂದೆ, ಮೂರು ಹೆಜ್ಜೆ ಹಿಂದೆ ರೀತಿ ಆಗಿದ್ದರೂ ಪರವಾಗಿಲ್ಲ, ಚಲನಶೀಲವಾಗಿರಬೇಕು. ಇದನ್ನು ದೆಹಲಿ ರೈತ ಹೋರಾಟ ಸಾದಿಸಿದೆ

ನಾನು ಎಡ ಚಳುವಳಿಯಲ್ಲಿದ್ದಾಗ ನಾವೆಲ್ಲ ಹಾಡುತ್ತಿದ್ದ ಸಾಲುಗಳು ಈಗಲೂ ಬೀಜ ವಾಕ್ಯಗಳು

“ಎಲ್ಲಿಂದ ಬಂದಿರಿ ಎಂದು ಕೇಳುತೀರಿ ನೀವು
ಜನರ ನಡುವಿಂದ ಬಂದೆವು ಎಂದು ಹೇಳುತೇವೆ ನಾವು
ಎಲ್ಲಿಗೆ ಹೋಗುವಿರಿ ಎಂದು ಕೇಳುವಿರಿ ನೀವು
ಮರಳಿ ಜನರ ಬಳಿಗೆ ಎಂದು ಹೇಳುತೇವೆ ನಾವು”

  • ಶ್ರೀಪಾದ್ ಭಟ್

ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...