Homeಮುಖಪುಟಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ - ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

- Advertisement -
- Advertisement -

ಎಂಬತ್ತರ ದಶಕದಲ್ಲಿ ದ್ವಾರಕೀಶ ಅವರು ʻಎಲ್ಲಿದೆಯೋ ನ್ಯಾಯಾ, ಅಣ್ಣಾ, ಎಲ್ಲಿದೆಯೋ ನ್ಯಾಯಾʼ ಅಂತ ಹಾಡಿದರು. ಆ ಹಾಡು ಬರೆದ ಚಿರಂತನ ಕವಿ ಚಿ.ಉದಯಶಂಕರ ಅವರು ʻಬಡವನು ನ್ಯಾಯವ ಕೇಳುವುದೇ ಅನ್ಯಾಯʼ ಅನ್ನುವ ಅಂತಿಮ ಸತ್ಯವೊಂದನ್ನು ದ್ವಾರಕೀಶ ಅವರ ಬಾಯಿಯಲ್ಲಿ ಹೇಳಿಸಿದರು.

ಆ ಹಾಡು ಈಗ ನೆನಪಾಗಲಿಕ್ಕೆ ಕಾರಣ ಏನಂದರ ನಾವು ನಮ್ಮ ದೇಶದ ಲಕ್ಷಾಂತರ ಕಾರ್ಮಿಕರನ್ನು ಸಾವಿರಾರು ಕಿಲೊಮಿಟರ್ ನಡಕೊಂಡು ಹೋಗಲಿಕ್ಕೆ ಬಿಟ್ಟು ಮನಿಯೊಳಗ ನೆಟ್ ಫ್ಲಿಕ್ಸ ನೋಡಾಕ ಹತ್ತೇವಿ.

ಅವರು ನಮ್ಮನ್ನ ನ್ಯಾಯ ಎಲ್ಲಿದೆ ಅಂತ ಕೇಳಾಕ ಒಲ್ಲರು, ಹಂಗ ಏನರ ಕೇಳಿದರ ಅದಕ್ಕ ಉತ್ತರ ಕೊಡಾಕ ನಮ್ಮ ಕಡೆ ಆಗವಲ್ಲದು. ಅವರ ಸಂಕಟಕ್ಕ ಮರುಗೋದು ಬಿಟ್ಟು, ನಾವು “ಅವರು ಯಾಕ ತಮ್ಮ ರಾಜ್ಯ ಬಿಟ್ಟು ಇಲ್ಲಿಗೆ ಬರಾಕ ಹೋದರು?”, “ಅವರ ರಾಜ್ಯದ ಸರಕಾರಗಳು ಅವರಿಗೆ ಕೆಲಸ ಕೊಡಲಿಕ್ಕೆ ಯಾಕ ಆಗಲಿಲ್ಲ?”, ಇಲ್ಲಿಗೆ ಬಂದು ಐದು- ಹತ್ತು ಸಾವಿರ ರುಪಾಯಿ ಗಳಿಸೋರು ಅವರು, ಅವರಿಗೆ ಅಷ್ಟೂ ಕೊಡಾಕ ಆಗಲಿಲ್ಲೇನು ಅಲ್ಲಿನ ಸರಕಾರದವರಿಗೆ ಅಂತ ಪಾಟಿ ಸವಾಲು ಮಾಡಾಕ ಹತ್ತೇವಿ.

ʻಹಂಗಾರ ಅವರಿಗೆ ಅನ್ಯಾಯ ಆಗೇತೋ ಇಲ್ಲವೋ?ʼ ಅಂತ ಕೇಳಿದರೆ. ʻಹೌದುʼ ಅಂತ ನಾಚಿಕೋತನ ಹೇಳತೇವಿ. ಹಂಗಾರ ಈ ಅನ್ಯಾಯ ಆಗಲಾರದಂಗ ಏನು ಮಾಡಬಹುದಿತ್ತು ಅಂತ ಕೇಳಿದರ ಯಾರ ಹತ್ತರನೂ ಉತ್ತರ ಇಲ್ಲ.

ಆ ಉತ್ತರದ ಸಾಧ್ಯತೆಗಳನ್ನ ಇಲ್ಲಿ ನೋಡೋಣ.

ಮೊದಲನೆಯದು ʻಅನ್ನ ಭಾಗ್ಯʼ ಅನ್ನೋ ಹೆಸರಿನ ಯೋಜನೆ. ಆ ಹೆಸರಿನ ಬದಲಿಗೆ ʻಹಕ್ಕಿನ ಅನ್ನʼ ಅಂತ ಇಡಬಹುದಾಗಿತ್ತು. ಇದು ಕೇಂದ್ರ ಕೊಡುವ ಸಬ್ಸಿಡಿ ಜೊತೆಗೆ ರಾಜ್ಯದ ಸಬ್ಸಿಡಿಯನ್ನೂ ಸೇರಿಸಿ ಬಡವರಿಗೆ ಅಕ್ಕಿ-ಗೋಧಿ ಕೊಡುವ ಯೋಜನೆ. ಇದು ಪರ-ವಿರೋಧ ದನಿಗಳನ್ನು ಎಬ್ಬಿಸಿತು. ಇದು ಕಷ್ಟಪಟ್ಟ ದುಡಿಯುವವರ ಕೈಯಿಂದ ಹಣ ಕಸಿದು ಬಡವರಿಗೆ ತಿನ್ನಿಸಿ ಅವರನ್ನು ಆಲಸಿಯಾಗಿಸಿತು ಅಂತ ಕೆಲವರು ಭೀಕರವಾಗಿ ವಿರೋಧಿಸಿದರು. ಇನ್ನು ಕೆಲವರು ಬಡವರ ಕಷ್ಟಕಾಲಕ್ಕೆ ಆಯಿತು ಅಂತ ಸ್ವಾಗತಿಸಿದರು.

ʻಇದು ಅಪೂರ್ಣವಾಯಿತು, ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದಿತ್ತು. ಇದರಲ್ಲಿನ ಬ್ರಷ್ಟಾಚಾರದ ಅವಕಾಶಗಳನ್ನು ಕಮ್ಮಿ ಮಾಡಬೇಕಾಗಿತ್ತುʼ ಅಂತ ಇನ್ನು ಕೆಲವರು ಸೃಜನಾತ್ಮಕ ಟೀಕೆ ಮಾಡಿದರು, ಸಲಹೆ ನೀಡಿದರು.

ಇಂಥದ್ದರಲ್ಲಿ ಒಂದು ಒಳ್ಳೆಯ ಐಡಿಯಾ ಅಂದರೆ ಫುಡ್ ಬಾಸ್ಕೆಟ್ ಅಥವಾ ʻಊಟದ ಬುಟ್ಟಿʼ. ಹಿಂಗಂದರ, ಬರೇ ಅಕ್ಕಿ, ಗೋಧಿ, ಕೊಡೋದಲ್ಲ, ಕಾಳು-ಬೇಳೆ- ಎಣ್ಣೆ- ಹಾಲಿನ ಪದಾರ್ಥ, ಸಕ್ಕರೆ- ಉಪ್ಪು- ಮಸಾಲೆ ಸಾಮಾನು, – ಸೋಪು, ಹಣ್ಣು- ತರಕಾರಿ ಸಹಿತ ಸೇರಿಸಿ ಬಡವರಿಗೆ ಕೊಡೋದು. ಕೆಲವು ದೇಶಗಳಲ್ಲಂತೂ ಇದನ್ನು ಎಲ್ಲರಿಗೂ ಕೊಡತಾರ. ಬ್ಯಾಡಾ ಅಂದವರು ಬಿಡಬಹುದು. ಗ್ಯಾಸಿನ ಸಬ್ಸಿಡಿ ಇದ್ದಂಗ.

ಇದು ಐವತ್ತು ವರ್ಷಗಳಿಂದ ಕ್ಯೂಬಾ ದೇಶದಲ್ಲಿ ನಡೆದುಕೊಂಡು ಬಂದದ. ಭಾರತಕ್ಕಿಂತ ಕಮ್ಮಿ ತಲಾ ಆದಾಯ ಇರುವ ದೇಶಗಳಲ್ಲಿ ಸಹಿತ ಇಂತಹ ಅನೇಕ ಯೋಜನೆಗಳು ಯಶಸ್ವಿಯಾಗಿ ನಡೆದುಕೊಂಡು ಬಂದಾವು.

ಅದರಲ್ಲಿ ಕೆಲವು ನೋಡೋಣ. ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ – ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

ಕ್ಯೂಬಾದಾಗ ಎಲ್ಲಾರಿಗೂ ಕೊಡತಾರ. ಆದರ ಬ್ಯಾರೆ ದೇಶಗಳೊಳಗ ಬಡವರಿಗಷ್ಟ ಕೊಡತಾರ.

ನಾವು ಯಾಕ ಕೊಡಲಿಕ್ಕೆ ಆಗಲೊಲ್ಲದು?

ಯಾಕಂದರ ಕೇಂದ್ರ ನಮಗ ರೊಕ್ಕ ಕೊಡೋದಿಲ್ಲ, ಅಕ್ಕಿ ಕೊಡತೇತಿ. ಪ್ರತಿ ತಿಂಗಳ, ಪ್ರತಿ ಮನುಷಾನ ಲೆಕ್ಕದಲೆ, 27 ರೂಪಾಯಿ ಕೊಡತೆತಿ. ಅದನ್ನ ಒಂದು ಕೇಜಿ ಅಕ್ಕಿಯ ರೂಪದಾಗ ಕೊಡತೇತಿ. ಅದ ರೊಕ್ಕ ನಮಗ ಕೊಟ್ಟರ ನಾವು ಏನಾದರೂ ತೊಗೋಬಹುದು.

ಕರ್ನಾಟಕದಾಗ ಸರಬರಾಜು ಆಗೋ ಅಕ್ಕಿ ಛತ್ತೀಸಘಡ, ಜಾರಖಂಡಿನಿಂದ ಬರತೇತಿ. ಗೋಧಿ ಪಂಜಾಬು- ಹರಿಯಾಣಾ- ಮಹಾರಾಷ್ಟ್ರ ದಿಂದ ಬರತೇತಿ.

ಸುಮಾರು ಎರಡು – ಮೂರು ಸಾವಿರ ಕಿಲೋಮಿಟರು ದೂರದಿಂದ ಅಕ್ಕಿ ಸಾಗಣೆ ಮಾಡೋ ಖರ್ಚನ್ನ ರಾಜ್ಯ ಸರಕಾರ ಹೊರತೇತಿ. ಅದರ ಬದಲಿಗೆ ಅದ 27 ರೂಪಾಯಿ ರಾಜ್ಯಕ್ಕ ಕೊಟ್ಟರ, ನಮ್ಮ ರೈತರು ಬೆಳದ ಅಕ್ಕಿ ನಾವು ಖರೀದಿಸಿ ರೊಕ್ಕ ಉಳಿಸಬಹುದು, ಕಿರಿಕಿರಿ ಇರಲಾರದೇ ಹಂಚಬಹುದು.

ವಿಕೇಂದ್ರಿಕೃತ ವ್ಯವಸ್ಥೆ ಜಾರಿ ಆದರ ಉತ್ತರ ಕರ್ನಾಟಕದಾಗ ಜೋಳ, ದಕ್ಷಿಣದಾಗ ರಾಗಿ, ಕರಾವಳಿಯೊಳಗ ಕೆಂಪು ಅಕ್ಕಿ ಖರೀದಿಸಿ, ಅಲ್ಲಲ್ಲೇ ಹಂಚಬಹುದು.

ಅದಕ್ಕ ಒಮ್ಮೆ ಹಿಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರು ದೂರದರ್ಶನದಾಗ ಫೋನು ಇನ್ನು ಕಾರ್ಯಕ್ರಮ ನಡೆಸಿದಾಗ ಕಾರ್ಯಕರ್ತರೊಬ್ಬರು ಇದು ಅನ್ನ ಭಾಗ್ಯ ಅಲ್ಲ, ಸರಿಯಾಗಿ ಜಾರಿಮಾಡಿದರೆ ಅದು ರೈತ ಭಾಗ್ಯ. ಸರಕಾರ ರೈತರಿಂದ ಜೋಳ -ಕಾಳು ಖರೀದಿಸಿದರೆ ರೈತರಿಗೆ- ಗೃಹಿಣಿಯರಿಗೆ ಇಬ್ಬರಿಗೂ ಅನುಕೂಲ ಅಂತ ಹೇಳಿದ್ದರು. ಮುಖ್ಯಮಂತ್ರಿಗಳಿಗೆ ಐಡಿಯಾ ಇಷ್ಟ ಆತು, ಖರೆ, ಆದರಿ ವಿಧಾನಸೌಧದ ಪಟ್ಟ ಭದ್ರ ಕಪಾಟುಗಳಲ್ಲಿ ಆ ಫೈಲು ಥಂಡಿ ಹಿಡೀತು.

ಇನ್ನ ಸರಕಾರದವರು ಎಷ್ಟು ದಡ್ಡರು ಅಂದರ ಅವರು ಒಂದೇ ತಪ್ಪನ್ನ ಎರಡೆರಡು ಸರತೆ ಮಾಡತಾರು. ಉದಾಹರಣೆಗೆ ತೊಗರಿ ಕಾಳಿನ ಬೆಲೆ ಕುಸಿದರೆ ರೈತರಿಂದ ಖರೀದಿ ಮಾಡತಾರು. ಈ ವರ್ಷ 55 ರೂಪಾಯಿಗೆ ಒಂದು ಕೇಜಿಯಂತೆ ಖರೀದಿ ಮಾಡಿದಾರು. ಆರು ತಿಂಗಳ ಬಿಟ್ಟು ಮಿಲ್ಲು ಮಾಲಿಕರು ಹಾಗೂ ಮಧ್ಯವರ್ತಿಗಳಿಂದ ಸರಕಾರಿ ಹಾಸ್ಟೆಲ್ಲುಗಳ ಹುಡುಗರ ಸಲುವಾಗಿ 90 ರೂಪಾಯಿಗೆ ತೊಗರಿ ಬೇಳೆ ಖರೀದಿ ಮಾಡತಾರು. ರೈತರಿಂದ ಖರೀದಿ ಮಾಡಿದ ತೊಗರಿ ಕಾಳನ್ನೇ ಮಿಲ್ಲಿನಲ್ಲಿ ಒಡೆದು ಹಾಕಿಸಿ ಹಾಸ್ಟೆಲ್ಲಿಗೆ ಪೂರೈಸೋವಷ್ಟು ಕನಿಷ್ಟ ಸಾಮಾನ್ಯ ಜ್ಞಾನ ಅವರಿಗೆ ಇಲ್ಲ.

ಮೂರನೇಯದು ಇಂದಿರಾ ಕ್ಯಾಂಟೀನು. ಮೊದಲನೆಯದು ಅದರ ಹೆಸರ ಹಿಂದಿನ ರಾಜಕೀಯ. ಕಾಂಗ್ರೆಸ್ಸಿನವರು ಇಂದಿರಮ್ಮಾ ಕ್ಯಾಂಟಿನ ಅಂತ ಮಾಡಿದ್ದರ ಅದರ ಇಂದಿರಾ ತಗದು ಅಮ್ಮಾ ಅಂತ ಭಾಜಪ ದವರು ಮುಂದು ವರೆಸಬಹುದಿತ್ತು. ಇಲ್ಲಾ ಅಂದರ ಅನ್ನಪೂರ್ಣಾ ಅಡುಗೆ ಮನೆ ಅಂತಾದರೂ ಇವರು ಬದಲಾಯಿಸಬೇಕಾಗಿತ್ತು. ಅಥವಾ ಅದ ಕೆಲಸಾ ಕಾಂಗ್ರೆಸ್ಸಿನವರು ಮಾಡಬೇಕಿತ್ತು. ಅದುನೂ ಆಗಲಿಲ್ಲ.

ಎರಡನೇಯದ್ದು ಅವಕ್ಕೆ ರಾಜ್ಯ ಖಜಾನೆಯಿಂದ ಹಣ ಹೊಂದಿಸೋ ಕೆಲಸ ಸಿದ್ರಾಮಯ್ಯನವರು ಮಾಡಲಿಲ್ಲ. ಅವರು ಮಾಡಿದ್ದು ಎರಡು ತಪ್ಪು. ಅವನ್ನು ನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಯವರು ನಡೆಸಬೇಕು ಅನ್ನೋ ನಿಯಮ ಮಾಡಿದ್ದು. ಎರಡನೇಯದ್ದು ಗುತ್ತಿಗೆದಾರರ ಕೈಯೊಳಗ ಕೊಟ್ಟಿದ್ದು.

ಅವನ್ನು ತಮಿಳುನಾಡಿನ ರೀತಿ ಮಹಿಳಾ ಸ್ವಸಹಾಯ ಸಂಘಗಳ ಕೈಗೆ ಕೊಟ್ಟಿದ್ದರ ಅವು ಚಂದಾಗಿ ನಡೆಸಿಕೊಂಡು ಬರತಿದ್ದರು. ಏಳು ವರ್ಷದ ಹಿಂದೆ ಸುರುವಾದ ಈ ಬಡವರ ಅಡುಗೆ ಮನೆಗಳು ಇಲ್ಲಿಯವರೆಗೆ 25 ಕೋಟಿ ಇಡ್ಲಿ, 30 ಕೋಟಿ ಚಪಾತಿ ಹಾಗೂ 20 ಕೋಟಿ ಪ್ಲೇಟು ಅನ್ನ ತಯಾರಿಸಿದ್ದಾವು. ಅವುಗಳ ಬೆಲೆ ಬದಲಾಗಿಲ್ಲ. ಈ ಲಾಕ್ ಡೌನ್ ಸಮಯದಾಗೂನು ಕೆಲಸ ಮಾಡಿದಾವು. ಬಡವರ ಪ್ರಾಣ ಕಾದವು.

ಆದರ ನಮ್ಮಲ್ಲೆ ಹಂಗ ಆಗಲಿಲ್ಲ. ಬಡವರು ಉಪವಾಸ ಬಿದ್ದರು. ಪ್ರವಾಸಿ ಕಾರ್ಮಿಕರು ಯಾವುದೋ ಸಂಘ ಸಂಸ್ಥೆಗಳು ಕೊಡೋ ಆಹಾರಕ್ಕ ಕಾಯ್ದು ಕೊಂಡು ದಿನಗಟ್ಟಲೇ ಇದ್ದರು. ಏನೂ ಸಿಗಲಾರದಾಗ ತಮ್ಮ ಹಣೆಬರಹಕ್ಕೆ ಬೈದುಕೊಂಡು ಸುಮ್ಮನೇ ಕಣ್ಣೀರು ಕುಡಿದು ಕುಂತರು.

ಇಂದಿರಾ ಕ್ಯಾಂಟೀನು ತಗದರ ಗದ್ದಲ ಆಗತೇತಿ ಅಂತ ಮುಚಿಕೊಂಡು ಕೂತರು. ಸಾರಾಯಿ ದುಕಾನು ತೆಗೆದು ಅಲ್ಲಿನ ಜನ ಜಂಗುಳಿ – ನೂಕು ನುಗ್ಗಲು ನೋಡಿ ಮುಸಿ ಮುಸಿ ನಕ್ಕ ನಮ್ಮ ಸರಕಾರ ಇಂದಿರಾ ಕ್ಯಾಂಟಿನ ತೆರೆಯಲಿಲ್ಲ. ಬಡವರಿಗೆ ಅನ್ನಕ್ಕಿಂತಲೂ ಎಣ್ಣೆ ಬೇಕು ಅಂತ ನಕ್ಕರು ಅಷ್ಟ.

ಇವೆಲ್ಲಾ ನಮ್ಮ ರೈತರ ಪರವಾಗಿ, ಮಹಿಳೆಯರ ಪರವಾಗಿ ಮಾತಾಡುವ ಪುಡಾರಿ ನಾಯಕರಿಗೆ ಕಾಣೋದಿಲ್ಲ. ಜನ ಜಾಗೃತಿ ಹೊರತು ಪ್ರಜಾಸತ್ತೆಗೆ ಬೇರೆ ಔಷಧಿ ಇಲ್ಲ ಅಂತ ಬೆಂಜಮಿನ್ ಫ್ರ‍್ಯಾಂಕ್ಲಿನ್ ಹೇಳಿದಂಗ, ನಮಗನ ತಿಳೀಲಿಲ್ಲಾ ಅಂದರ ನಮ್ಮ ನಾಯಕರಿಗೆ ಹೆಂಗ ತಿಳೀಬೇಕು?


ಇದನ್ನೂ ಓದಿ: ದಿನಕ್ಕೆ ಕೇವಲ ಒಂದೇ ಹೊತ್ತು ಊಟ : ಅಹಮದಾಬಾದ್‌ನ ಹಲವರ ಪರಿಸ್ಥಿತಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...