Homeಮುಖಪುಟಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ - ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

- Advertisement -
- Advertisement -

ಎಂಬತ್ತರ ದಶಕದಲ್ಲಿ ದ್ವಾರಕೀಶ ಅವರು ʻಎಲ್ಲಿದೆಯೋ ನ್ಯಾಯಾ, ಅಣ್ಣಾ, ಎಲ್ಲಿದೆಯೋ ನ್ಯಾಯಾʼ ಅಂತ ಹಾಡಿದರು. ಆ ಹಾಡು ಬರೆದ ಚಿರಂತನ ಕವಿ ಚಿ.ಉದಯಶಂಕರ ಅವರು ʻಬಡವನು ನ್ಯಾಯವ ಕೇಳುವುದೇ ಅನ್ಯಾಯʼ ಅನ್ನುವ ಅಂತಿಮ ಸತ್ಯವೊಂದನ್ನು ದ್ವಾರಕೀಶ ಅವರ ಬಾಯಿಯಲ್ಲಿ ಹೇಳಿಸಿದರು.

ಆ ಹಾಡು ಈಗ ನೆನಪಾಗಲಿಕ್ಕೆ ಕಾರಣ ಏನಂದರ ನಾವು ನಮ್ಮ ದೇಶದ ಲಕ್ಷಾಂತರ ಕಾರ್ಮಿಕರನ್ನು ಸಾವಿರಾರು ಕಿಲೊಮಿಟರ್ ನಡಕೊಂಡು ಹೋಗಲಿಕ್ಕೆ ಬಿಟ್ಟು ಮನಿಯೊಳಗ ನೆಟ್ ಫ್ಲಿಕ್ಸ ನೋಡಾಕ ಹತ್ತೇವಿ.

ಅವರು ನಮ್ಮನ್ನ ನ್ಯಾಯ ಎಲ್ಲಿದೆ ಅಂತ ಕೇಳಾಕ ಒಲ್ಲರು, ಹಂಗ ಏನರ ಕೇಳಿದರ ಅದಕ್ಕ ಉತ್ತರ ಕೊಡಾಕ ನಮ್ಮ ಕಡೆ ಆಗವಲ್ಲದು. ಅವರ ಸಂಕಟಕ್ಕ ಮರುಗೋದು ಬಿಟ್ಟು, ನಾವು “ಅವರು ಯಾಕ ತಮ್ಮ ರಾಜ್ಯ ಬಿಟ್ಟು ಇಲ್ಲಿಗೆ ಬರಾಕ ಹೋದರು?”, “ಅವರ ರಾಜ್ಯದ ಸರಕಾರಗಳು ಅವರಿಗೆ ಕೆಲಸ ಕೊಡಲಿಕ್ಕೆ ಯಾಕ ಆಗಲಿಲ್ಲ?”, ಇಲ್ಲಿಗೆ ಬಂದು ಐದು- ಹತ್ತು ಸಾವಿರ ರುಪಾಯಿ ಗಳಿಸೋರು ಅವರು, ಅವರಿಗೆ ಅಷ್ಟೂ ಕೊಡಾಕ ಆಗಲಿಲ್ಲೇನು ಅಲ್ಲಿನ ಸರಕಾರದವರಿಗೆ ಅಂತ ಪಾಟಿ ಸವಾಲು ಮಾಡಾಕ ಹತ್ತೇವಿ.

ʻಹಂಗಾರ ಅವರಿಗೆ ಅನ್ಯಾಯ ಆಗೇತೋ ಇಲ್ಲವೋ?ʼ ಅಂತ ಕೇಳಿದರೆ. ʻಹೌದುʼ ಅಂತ ನಾಚಿಕೋತನ ಹೇಳತೇವಿ. ಹಂಗಾರ ಈ ಅನ್ಯಾಯ ಆಗಲಾರದಂಗ ಏನು ಮಾಡಬಹುದಿತ್ತು ಅಂತ ಕೇಳಿದರ ಯಾರ ಹತ್ತರನೂ ಉತ್ತರ ಇಲ್ಲ.

ಆ ಉತ್ತರದ ಸಾಧ್ಯತೆಗಳನ್ನ ಇಲ್ಲಿ ನೋಡೋಣ.

ಮೊದಲನೆಯದು ʻಅನ್ನ ಭಾಗ್ಯʼ ಅನ್ನೋ ಹೆಸರಿನ ಯೋಜನೆ. ಆ ಹೆಸರಿನ ಬದಲಿಗೆ ʻಹಕ್ಕಿನ ಅನ್ನʼ ಅಂತ ಇಡಬಹುದಾಗಿತ್ತು. ಇದು ಕೇಂದ್ರ ಕೊಡುವ ಸಬ್ಸಿಡಿ ಜೊತೆಗೆ ರಾಜ್ಯದ ಸಬ್ಸಿಡಿಯನ್ನೂ ಸೇರಿಸಿ ಬಡವರಿಗೆ ಅಕ್ಕಿ-ಗೋಧಿ ಕೊಡುವ ಯೋಜನೆ. ಇದು ಪರ-ವಿರೋಧ ದನಿಗಳನ್ನು ಎಬ್ಬಿಸಿತು. ಇದು ಕಷ್ಟಪಟ್ಟ ದುಡಿಯುವವರ ಕೈಯಿಂದ ಹಣ ಕಸಿದು ಬಡವರಿಗೆ ತಿನ್ನಿಸಿ ಅವರನ್ನು ಆಲಸಿಯಾಗಿಸಿತು ಅಂತ ಕೆಲವರು ಭೀಕರವಾಗಿ ವಿರೋಧಿಸಿದರು. ಇನ್ನು ಕೆಲವರು ಬಡವರ ಕಷ್ಟಕಾಲಕ್ಕೆ ಆಯಿತು ಅಂತ ಸ್ವಾಗತಿಸಿದರು.

ʻಇದು ಅಪೂರ್ಣವಾಯಿತು, ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದಿತ್ತು. ಇದರಲ್ಲಿನ ಬ್ರಷ್ಟಾಚಾರದ ಅವಕಾಶಗಳನ್ನು ಕಮ್ಮಿ ಮಾಡಬೇಕಾಗಿತ್ತುʼ ಅಂತ ಇನ್ನು ಕೆಲವರು ಸೃಜನಾತ್ಮಕ ಟೀಕೆ ಮಾಡಿದರು, ಸಲಹೆ ನೀಡಿದರು.

ಇಂಥದ್ದರಲ್ಲಿ ಒಂದು ಒಳ್ಳೆಯ ಐಡಿಯಾ ಅಂದರೆ ಫುಡ್ ಬಾಸ್ಕೆಟ್ ಅಥವಾ ʻಊಟದ ಬುಟ್ಟಿʼ. ಹಿಂಗಂದರ, ಬರೇ ಅಕ್ಕಿ, ಗೋಧಿ, ಕೊಡೋದಲ್ಲ, ಕಾಳು-ಬೇಳೆ- ಎಣ್ಣೆ- ಹಾಲಿನ ಪದಾರ್ಥ, ಸಕ್ಕರೆ- ಉಪ್ಪು- ಮಸಾಲೆ ಸಾಮಾನು, – ಸೋಪು, ಹಣ್ಣು- ತರಕಾರಿ ಸಹಿತ ಸೇರಿಸಿ ಬಡವರಿಗೆ ಕೊಡೋದು. ಕೆಲವು ದೇಶಗಳಲ್ಲಂತೂ ಇದನ್ನು ಎಲ್ಲರಿಗೂ ಕೊಡತಾರ. ಬ್ಯಾಡಾ ಅಂದವರು ಬಿಡಬಹುದು. ಗ್ಯಾಸಿನ ಸಬ್ಸಿಡಿ ಇದ್ದಂಗ.

ಇದು ಐವತ್ತು ವರ್ಷಗಳಿಂದ ಕ್ಯೂಬಾ ದೇಶದಲ್ಲಿ ನಡೆದುಕೊಂಡು ಬಂದದ. ಭಾರತಕ್ಕಿಂತ ಕಮ್ಮಿ ತಲಾ ಆದಾಯ ಇರುವ ದೇಶಗಳಲ್ಲಿ ಸಹಿತ ಇಂತಹ ಅನೇಕ ಯೋಜನೆಗಳು ಯಶಸ್ವಿಯಾಗಿ ನಡೆದುಕೊಂಡು ಬಂದಾವು.

ಅದರಲ್ಲಿ ಕೆಲವು ನೋಡೋಣ. ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ – ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

ಕ್ಯೂಬಾದಾಗ ಎಲ್ಲಾರಿಗೂ ಕೊಡತಾರ. ಆದರ ಬ್ಯಾರೆ ದೇಶಗಳೊಳಗ ಬಡವರಿಗಷ್ಟ ಕೊಡತಾರ.

ನಾವು ಯಾಕ ಕೊಡಲಿಕ್ಕೆ ಆಗಲೊಲ್ಲದು?

ಯಾಕಂದರ ಕೇಂದ್ರ ನಮಗ ರೊಕ್ಕ ಕೊಡೋದಿಲ್ಲ, ಅಕ್ಕಿ ಕೊಡತೇತಿ. ಪ್ರತಿ ತಿಂಗಳ, ಪ್ರತಿ ಮನುಷಾನ ಲೆಕ್ಕದಲೆ, 27 ರೂಪಾಯಿ ಕೊಡತೆತಿ. ಅದನ್ನ ಒಂದು ಕೇಜಿ ಅಕ್ಕಿಯ ರೂಪದಾಗ ಕೊಡತೇತಿ. ಅದ ರೊಕ್ಕ ನಮಗ ಕೊಟ್ಟರ ನಾವು ಏನಾದರೂ ತೊಗೋಬಹುದು.

ಕರ್ನಾಟಕದಾಗ ಸರಬರಾಜು ಆಗೋ ಅಕ್ಕಿ ಛತ್ತೀಸಘಡ, ಜಾರಖಂಡಿನಿಂದ ಬರತೇತಿ. ಗೋಧಿ ಪಂಜಾಬು- ಹರಿಯಾಣಾ- ಮಹಾರಾಷ್ಟ್ರ ದಿಂದ ಬರತೇತಿ.

ಸುಮಾರು ಎರಡು – ಮೂರು ಸಾವಿರ ಕಿಲೋಮಿಟರು ದೂರದಿಂದ ಅಕ್ಕಿ ಸಾಗಣೆ ಮಾಡೋ ಖರ್ಚನ್ನ ರಾಜ್ಯ ಸರಕಾರ ಹೊರತೇತಿ. ಅದರ ಬದಲಿಗೆ ಅದ 27 ರೂಪಾಯಿ ರಾಜ್ಯಕ್ಕ ಕೊಟ್ಟರ, ನಮ್ಮ ರೈತರು ಬೆಳದ ಅಕ್ಕಿ ನಾವು ಖರೀದಿಸಿ ರೊಕ್ಕ ಉಳಿಸಬಹುದು, ಕಿರಿಕಿರಿ ಇರಲಾರದೇ ಹಂಚಬಹುದು.

ವಿಕೇಂದ್ರಿಕೃತ ವ್ಯವಸ್ಥೆ ಜಾರಿ ಆದರ ಉತ್ತರ ಕರ್ನಾಟಕದಾಗ ಜೋಳ, ದಕ್ಷಿಣದಾಗ ರಾಗಿ, ಕರಾವಳಿಯೊಳಗ ಕೆಂಪು ಅಕ್ಕಿ ಖರೀದಿಸಿ, ಅಲ್ಲಲ್ಲೇ ಹಂಚಬಹುದು.

ಅದಕ್ಕ ಒಮ್ಮೆ ಹಿಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರು ದೂರದರ್ಶನದಾಗ ಫೋನು ಇನ್ನು ಕಾರ್ಯಕ್ರಮ ನಡೆಸಿದಾಗ ಕಾರ್ಯಕರ್ತರೊಬ್ಬರು ಇದು ಅನ್ನ ಭಾಗ್ಯ ಅಲ್ಲ, ಸರಿಯಾಗಿ ಜಾರಿಮಾಡಿದರೆ ಅದು ರೈತ ಭಾಗ್ಯ. ಸರಕಾರ ರೈತರಿಂದ ಜೋಳ -ಕಾಳು ಖರೀದಿಸಿದರೆ ರೈತರಿಗೆ- ಗೃಹಿಣಿಯರಿಗೆ ಇಬ್ಬರಿಗೂ ಅನುಕೂಲ ಅಂತ ಹೇಳಿದ್ದರು. ಮುಖ್ಯಮಂತ್ರಿಗಳಿಗೆ ಐಡಿಯಾ ಇಷ್ಟ ಆತು, ಖರೆ, ಆದರಿ ವಿಧಾನಸೌಧದ ಪಟ್ಟ ಭದ್ರ ಕಪಾಟುಗಳಲ್ಲಿ ಆ ಫೈಲು ಥಂಡಿ ಹಿಡೀತು.

ಇನ್ನ ಸರಕಾರದವರು ಎಷ್ಟು ದಡ್ಡರು ಅಂದರ ಅವರು ಒಂದೇ ತಪ್ಪನ್ನ ಎರಡೆರಡು ಸರತೆ ಮಾಡತಾರು. ಉದಾಹರಣೆಗೆ ತೊಗರಿ ಕಾಳಿನ ಬೆಲೆ ಕುಸಿದರೆ ರೈತರಿಂದ ಖರೀದಿ ಮಾಡತಾರು. ಈ ವರ್ಷ 55 ರೂಪಾಯಿಗೆ ಒಂದು ಕೇಜಿಯಂತೆ ಖರೀದಿ ಮಾಡಿದಾರು. ಆರು ತಿಂಗಳ ಬಿಟ್ಟು ಮಿಲ್ಲು ಮಾಲಿಕರು ಹಾಗೂ ಮಧ್ಯವರ್ತಿಗಳಿಂದ ಸರಕಾರಿ ಹಾಸ್ಟೆಲ್ಲುಗಳ ಹುಡುಗರ ಸಲುವಾಗಿ 90 ರೂಪಾಯಿಗೆ ತೊಗರಿ ಬೇಳೆ ಖರೀದಿ ಮಾಡತಾರು. ರೈತರಿಂದ ಖರೀದಿ ಮಾಡಿದ ತೊಗರಿ ಕಾಳನ್ನೇ ಮಿಲ್ಲಿನಲ್ಲಿ ಒಡೆದು ಹಾಕಿಸಿ ಹಾಸ್ಟೆಲ್ಲಿಗೆ ಪೂರೈಸೋವಷ್ಟು ಕನಿಷ್ಟ ಸಾಮಾನ್ಯ ಜ್ಞಾನ ಅವರಿಗೆ ಇಲ್ಲ.

ಮೂರನೇಯದು ಇಂದಿರಾ ಕ್ಯಾಂಟೀನು. ಮೊದಲನೆಯದು ಅದರ ಹೆಸರ ಹಿಂದಿನ ರಾಜಕೀಯ. ಕಾಂಗ್ರೆಸ್ಸಿನವರು ಇಂದಿರಮ್ಮಾ ಕ್ಯಾಂಟಿನ ಅಂತ ಮಾಡಿದ್ದರ ಅದರ ಇಂದಿರಾ ತಗದು ಅಮ್ಮಾ ಅಂತ ಭಾಜಪ ದವರು ಮುಂದು ವರೆಸಬಹುದಿತ್ತು. ಇಲ್ಲಾ ಅಂದರ ಅನ್ನಪೂರ್ಣಾ ಅಡುಗೆ ಮನೆ ಅಂತಾದರೂ ಇವರು ಬದಲಾಯಿಸಬೇಕಾಗಿತ್ತು. ಅಥವಾ ಅದ ಕೆಲಸಾ ಕಾಂಗ್ರೆಸ್ಸಿನವರು ಮಾಡಬೇಕಿತ್ತು. ಅದುನೂ ಆಗಲಿಲ್ಲ.

ಎರಡನೇಯದ್ದು ಅವಕ್ಕೆ ರಾಜ್ಯ ಖಜಾನೆಯಿಂದ ಹಣ ಹೊಂದಿಸೋ ಕೆಲಸ ಸಿದ್ರಾಮಯ್ಯನವರು ಮಾಡಲಿಲ್ಲ. ಅವರು ಮಾಡಿದ್ದು ಎರಡು ತಪ್ಪು. ಅವನ್ನು ನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಯವರು ನಡೆಸಬೇಕು ಅನ್ನೋ ನಿಯಮ ಮಾಡಿದ್ದು. ಎರಡನೇಯದ್ದು ಗುತ್ತಿಗೆದಾರರ ಕೈಯೊಳಗ ಕೊಟ್ಟಿದ್ದು.

ಅವನ್ನು ತಮಿಳುನಾಡಿನ ರೀತಿ ಮಹಿಳಾ ಸ್ವಸಹಾಯ ಸಂಘಗಳ ಕೈಗೆ ಕೊಟ್ಟಿದ್ದರ ಅವು ಚಂದಾಗಿ ನಡೆಸಿಕೊಂಡು ಬರತಿದ್ದರು. ಏಳು ವರ್ಷದ ಹಿಂದೆ ಸುರುವಾದ ಈ ಬಡವರ ಅಡುಗೆ ಮನೆಗಳು ಇಲ್ಲಿಯವರೆಗೆ 25 ಕೋಟಿ ಇಡ್ಲಿ, 30 ಕೋಟಿ ಚಪಾತಿ ಹಾಗೂ 20 ಕೋಟಿ ಪ್ಲೇಟು ಅನ್ನ ತಯಾರಿಸಿದ್ದಾವು. ಅವುಗಳ ಬೆಲೆ ಬದಲಾಗಿಲ್ಲ. ಈ ಲಾಕ್ ಡೌನ್ ಸಮಯದಾಗೂನು ಕೆಲಸ ಮಾಡಿದಾವು. ಬಡವರ ಪ್ರಾಣ ಕಾದವು.

ಆದರ ನಮ್ಮಲ್ಲೆ ಹಂಗ ಆಗಲಿಲ್ಲ. ಬಡವರು ಉಪವಾಸ ಬಿದ್ದರು. ಪ್ರವಾಸಿ ಕಾರ್ಮಿಕರು ಯಾವುದೋ ಸಂಘ ಸಂಸ್ಥೆಗಳು ಕೊಡೋ ಆಹಾರಕ್ಕ ಕಾಯ್ದು ಕೊಂಡು ದಿನಗಟ್ಟಲೇ ಇದ್ದರು. ಏನೂ ಸಿಗಲಾರದಾಗ ತಮ್ಮ ಹಣೆಬರಹಕ್ಕೆ ಬೈದುಕೊಂಡು ಸುಮ್ಮನೇ ಕಣ್ಣೀರು ಕುಡಿದು ಕುಂತರು.

ಇಂದಿರಾ ಕ್ಯಾಂಟೀನು ತಗದರ ಗದ್ದಲ ಆಗತೇತಿ ಅಂತ ಮುಚಿಕೊಂಡು ಕೂತರು. ಸಾರಾಯಿ ದುಕಾನು ತೆಗೆದು ಅಲ್ಲಿನ ಜನ ಜಂಗುಳಿ – ನೂಕು ನುಗ್ಗಲು ನೋಡಿ ಮುಸಿ ಮುಸಿ ನಕ್ಕ ನಮ್ಮ ಸರಕಾರ ಇಂದಿರಾ ಕ್ಯಾಂಟಿನ ತೆರೆಯಲಿಲ್ಲ. ಬಡವರಿಗೆ ಅನ್ನಕ್ಕಿಂತಲೂ ಎಣ್ಣೆ ಬೇಕು ಅಂತ ನಕ್ಕರು ಅಷ್ಟ.

ಇವೆಲ್ಲಾ ನಮ್ಮ ರೈತರ ಪರವಾಗಿ, ಮಹಿಳೆಯರ ಪರವಾಗಿ ಮಾತಾಡುವ ಪುಡಾರಿ ನಾಯಕರಿಗೆ ಕಾಣೋದಿಲ್ಲ. ಜನ ಜಾಗೃತಿ ಹೊರತು ಪ್ರಜಾಸತ್ತೆಗೆ ಬೇರೆ ಔಷಧಿ ಇಲ್ಲ ಅಂತ ಬೆಂಜಮಿನ್ ಫ್ರ‍್ಯಾಂಕ್ಲಿನ್ ಹೇಳಿದಂಗ, ನಮಗನ ತಿಳೀಲಿಲ್ಲಾ ಅಂದರ ನಮ್ಮ ನಾಯಕರಿಗೆ ಹೆಂಗ ತಿಳೀಬೇಕು?


ಇದನ್ನೂ ಓದಿ: ದಿನಕ್ಕೆ ಕೇವಲ ಒಂದೇ ಹೊತ್ತು ಊಟ : ಅಹಮದಾಬಾದ್‌ನ ಹಲವರ ಪರಿಸ್ಥಿತಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...