Homeಮುಖಪುಟಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ - ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

- Advertisement -
- Advertisement -

ಎಂಬತ್ತರ ದಶಕದಲ್ಲಿ ದ್ವಾರಕೀಶ ಅವರು ʻಎಲ್ಲಿದೆಯೋ ನ್ಯಾಯಾ, ಅಣ್ಣಾ, ಎಲ್ಲಿದೆಯೋ ನ್ಯಾಯಾʼ ಅಂತ ಹಾಡಿದರು. ಆ ಹಾಡು ಬರೆದ ಚಿರಂತನ ಕವಿ ಚಿ.ಉದಯಶಂಕರ ಅವರು ʻಬಡವನು ನ್ಯಾಯವ ಕೇಳುವುದೇ ಅನ್ಯಾಯʼ ಅನ್ನುವ ಅಂತಿಮ ಸತ್ಯವೊಂದನ್ನು ದ್ವಾರಕೀಶ ಅವರ ಬಾಯಿಯಲ್ಲಿ ಹೇಳಿಸಿದರು.

ಆ ಹಾಡು ಈಗ ನೆನಪಾಗಲಿಕ್ಕೆ ಕಾರಣ ಏನಂದರ ನಾವು ನಮ್ಮ ದೇಶದ ಲಕ್ಷಾಂತರ ಕಾರ್ಮಿಕರನ್ನು ಸಾವಿರಾರು ಕಿಲೊಮಿಟರ್ ನಡಕೊಂಡು ಹೋಗಲಿಕ್ಕೆ ಬಿಟ್ಟು ಮನಿಯೊಳಗ ನೆಟ್ ಫ್ಲಿಕ್ಸ ನೋಡಾಕ ಹತ್ತೇವಿ.

ಅವರು ನಮ್ಮನ್ನ ನ್ಯಾಯ ಎಲ್ಲಿದೆ ಅಂತ ಕೇಳಾಕ ಒಲ್ಲರು, ಹಂಗ ಏನರ ಕೇಳಿದರ ಅದಕ್ಕ ಉತ್ತರ ಕೊಡಾಕ ನಮ್ಮ ಕಡೆ ಆಗವಲ್ಲದು. ಅವರ ಸಂಕಟಕ್ಕ ಮರುಗೋದು ಬಿಟ್ಟು, ನಾವು “ಅವರು ಯಾಕ ತಮ್ಮ ರಾಜ್ಯ ಬಿಟ್ಟು ಇಲ್ಲಿಗೆ ಬರಾಕ ಹೋದರು?”, “ಅವರ ರಾಜ್ಯದ ಸರಕಾರಗಳು ಅವರಿಗೆ ಕೆಲಸ ಕೊಡಲಿಕ್ಕೆ ಯಾಕ ಆಗಲಿಲ್ಲ?”, ಇಲ್ಲಿಗೆ ಬಂದು ಐದು- ಹತ್ತು ಸಾವಿರ ರುಪಾಯಿ ಗಳಿಸೋರು ಅವರು, ಅವರಿಗೆ ಅಷ್ಟೂ ಕೊಡಾಕ ಆಗಲಿಲ್ಲೇನು ಅಲ್ಲಿನ ಸರಕಾರದವರಿಗೆ ಅಂತ ಪಾಟಿ ಸವಾಲು ಮಾಡಾಕ ಹತ್ತೇವಿ.

ʻಹಂಗಾರ ಅವರಿಗೆ ಅನ್ಯಾಯ ಆಗೇತೋ ಇಲ್ಲವೋ?ʼ ಅಂತ ಕೇಳಿದರೆ. ʻಹೌದುʼ ಅಂತ ನಾಚಿಕೋತನ ಹೇಳತೇವಿ. ಹಂಗಾರ ಈ ಅನ್ಯಾಯ ಆಗಲಾರದಂಗ ಏನು ಮಾಡಬಹುದಿತ್ತು ಅಂತ ಕೇಳಿದರ ಯಾರ ಹತ್ತರನೂ ಉತ್ತರ ಇಲ್ಲ.

ಆ ಉತ್ತರದ ಸಾಧ್ಯತೆಗಳನ್ನ ಇಲ್ಲಿ ನೋಡೋಣ.

ಮೊದಲನೆಯದು ʻಅನ್ನ ಭಾಗ್ಯʼ ಅನ್ನೋ ಹೆಸರಿನ ಯೋಜನೆ. ಆ ಹೆಸರಿನ ಬದಲಿಗೆ ʻಹಕ್ಕಿನ ಅನ್ನʼ ಅಂತ ಇಡಬಹುದಾಗಿತ್ತು. ಇದು ಕೇಂದ್ರ ಕೊಡುವ ಸಬ್ಸಿಡಿ ಜೊತೆಗೆ ರಾಜ್ಯದ ಸಬ್ಸಿಡಿಯನ್ನೂ ಸೇರಿಸಿ ಬಡವರಿಗೆ ಅಕ್ಕಿ-ಗೋಧಿ ಕೊಡುವ ಯೋಜನೆ. ಇದು ಪರ-ವಿರೋಧ ದನಿಗಳನ್ನು ಎಬ್ಬಿಸಿತು. ಇದು ಕಷ್ಟಪಟ್ಟ ದುಡಿಯುವವರ ಕೈಯಿಂದ ಹಣ ಕಸಿದು ಬಡವರಿಗೆ ತಿನ್ನಿಸಿ ಅವರನ್ನು ಆಲಸಿಯಾಗಿಸಿತು ಅಂತ ಕೆಲವರು ಭೀಕರವಾಗಿ ವಿರೋಧಿಸಿದರು. ಇನ್ನು ಕೆಲವರು ಬಡವರ ಕಷ್ಟಕಾಲಕ್ಕೆ ಆಯಿತು ಅಂತ ಸ್ವಾಗತಿಸಿದರು.

ʻಇದು ಅಪೂರ್ಣವಾಯಿತು, ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದಿತ್ತು. ಇದರಲ್ಲಿನ ಬ್ರಷ್ಟಾಚಾರದ ಅವಕಾಶಗಳನ್ನು ಕಮ್ಮಿ ಮಾಡಬೇಕಾಗಿತ್ತುʼ ಅಂತ ಇನ್ನು ಕೆಲವರು ಸೃಜನಾತ್ಮಕ ಟೀಕೆ ಮಾಡಿದರು, ಸಲಹೆ ನೀಡಿದರು.

ಇಂಥದ್ದರಲ್ಲಿ ಒಂದು ಒಳ್ಳೆಯ ಐಡಿಯಾ ಅಂದರೆ ಫುಡ್ ಬಾಸ್ಕೆಟ್ ಅಥವಾ ʻಊಟದ ಬುಟ್ಟಿʼ. ಹಿಂಗಂದರ, ಬರೇ ಅಕ್ಕಿ, ಗೋಧಿ, ಕೊಡೋದಲ್ಲ, ಕಾಳು-ಬೇಳೆ- ಎಣ್ಣೆ- ಹಾಲಿನ ಪದಾರ್ಥ, ಸಕ್ಕರೆ- ಉಪ್ಪು- ಮಸಾಲೆ ಸಾಮಾನು, – ಸೋಪು, ಹಣ್ಣು- ತರಕಾರಿ ಸಹಿತ ಸೇರಿಸಿ ಬಡವರಿಗೆ ಕೊಡೋದು. ಕೆಲವು ದೇಶಗಳಲ್ಲಂತೂ ಇದನ್ನು ಎಲ್ಲರಿಗೂ ಕೊಡತಾರ. ಬ್ಯಾಡಾ ಅಂದವರು ಬಿಡಬಹುದು. ಗ್ಯಾಸಿನ ಸಬ್ಸಿಡಿ ಇದ್ದಂಗ.

ಇದು ಐವತ್ತು ವರ್ಷಗಳಿಂದ ಕ್ಯೂಬಾ ದೇಶದಲ್ಲಿ ನಡೆದುಕೊಂಡು ಬಂದದ. ಭಾರತಕ್ಕಿಂತ ಕಮ್ಮಿ ತಲಾ ಆದಾಯ ಇರುವ ದೇಶಗಳಲ್ಲಿ ಸಹಿತ ಇಂತಹ ಅನೇಕ ಯೋಜನೆಗಳು ಯಶಸ್ವಿಯಾಗಿ ನಡೆದುಕೊಂಡು ಬಂದಾವು.

ಅದರಲ್ಲಿ ಕೆಲವು ನೋಡೋಣ. ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ – ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

ಕ್ಯೂಬಾದಾಗ ಎಲ್ಲಾರಿಗೂ ಕೊಡತಾರ. ಆದರ ಬ್ಯಾರೆ ದೇಶಗಳೊಳಗ ಬಡವರಿಗಷ್ಟ ಕೊಡತಾರ.

ನಾವು ಯಾಕ ಕೊಡಲಿಕ್ಕೆ ಆಗಲೊಲ್ಲದು?

ಯಾಕಂದರ ಕೇಂದ್ರ ನಮಗ ರೊಕ್ಕ ಕೊಡೋದಿಲ್ಲ, ಅಕ್ಕಿ ಕೊಡತೇತಿ. ಪ್ರತಿ ತಿಂಗಳ, ಪ್ರತಿ ಮನುಷಾನ ಲೆಕ್ಕದಲೆ, 27 ರೂಪಾಯಿ ಕೊಡತೆತಿ. ಅದನ್ನ ಒಂದು ಕೇಜಿ ಅಕ್ಕಿಯ ರೂಪದಾಗ ಕೊಡತೇತಿ. ಅದ ರೊಕ್ಕ ನಮಗ ಕೊಟ್ಟರ ನಾವು ಏನಾದರೂ ತೊಗೋಬಹುದು.

ಕರ್ನಾಟಕದಾಗ ಸರಬರಾಜು ಆಗೋ ಅಕ್ಕಿ ಛತ್ತೀಸಘಡ, ಜಾರಖಂಡಿನಿಂದ ಬರತೇತಿ. ಗೋಧಿ ಪಂಜಾಬು- ಹರಿಯಾಣಾ- ಮಹಾರಾಷ್ಟ್ರ ದಿಂದ ಬರತೇತಿ.

ಸುಮಾರು ಎರಡು – ಮೂರು ಸಾವಿರ ಕಿಲೋಮಿಟರು ದೂರದಿಂದ ಅಕ್ಕಿ ಸಾಗಣೆ ಮಾಡೋ ಖರ್ಚನ್ನ ರಾಜ್ಯ ಸರಕಾರ ಹೊರತೇತಿ. ಅದರ ಬದಲಿಗೆ ಅದ 27 ರೂಪಾಯಿ ರಾಜ್ಯಕ್ಕ ಕೊಟ್ಟರ, ನಮ್ಮ ರೈತರು ಬೆಳದ ಅಕ್ಕಿ ನಾವು ಖರೀದಿಸಿ ರೊಕ್ಕ ಉಳಿಸಬಹುದು, ಕಿರಿಕಿರಿ ಇರಲಾರದೇ ಹಂಚಬಹುದು.

ವಿಕೇಂದ್ರಿಕೃತ ವ್ಯವಸ್ಥೆ ಜಾರಿ ಆದರ ಉತ್ತರ ಕರ್ನಾಟಕದಾಗ ಜೋಳ, ದಕ್ಷಿಣದಾಗ ರಾಗಿ, ಕರಾವಳಿಯೊಳಗ ಕೆಂಪು ಅಕ್ಕಿ ಖರೀದಿಸಿ, ಅಲ್ಲಲ್ಲೇ ಹಂಚಬಹುದು.

ಅದಕ್ಕ ಒಮ್ಮೆ ಹಿಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರು ದೂರದರ್ಶನದಾಗ ಫೋನು ಇನ್ನು ಕಾರ್ಯಕ್ರಮ ನಡೆಸಿದಾಗ ಕಾರ್ಯಕರ್ತರೊಬ್ಬರು ಇದು ಅನ್ನ ಭಾಗ್ಯ ಅಲ್ಲ, ಸರಿಯಾಗಿ ಜಾರಿಮಾಡಿದರೆ ಅದು ರೈತ ಭಾಗ್ಯ. ಸರಕಾರ ರೈತರಿಂದ ಜೋಳ -ಕಾಳು ಖರೀದಿಸಿದರೆ ರೈತರಿಗೆ- ಗೃಹಿಣಿಯರಿಗೆ ಇಬ್ಬರಿಗೂ ಅನುಕೂಲ ಅಂತ ಹೇಳಿದ್ದರು. ಮುಖ್ಯಮಂತ್ರಿಗಳಿಗೆ ಐಡಿಯಾ ಇಷ್ಟ ಆತು, ಖರೆ, ಆದರಿ ವಿಧಾನಸೌಧದ ಪಟ್ಟ ಭದ್ರ ಕಪಾಟುಗಳಲ್ಲಿ ಆ ಫೈಲು ಥಂಡಿ ಹಿಡೀತು.

ಇನ್ನ ಸರಕಾರದವರು ಎಷ್ಟು ದಡ್ಡರು ಅಂದರ ಅವರು ಒಂದೇ ತಪ್ಪನ್ನ ಎರಡೆರಡು ಸರತೆ ಮಾಡತಾರು. ಉದಾಹರಣೆಗೆ ತೊಗರಿ ಕಾಳಿನ ಬೆಲೆ ಕುಸಿದರೆ ರೈತರಿಂದ ಖರೀದಿ ಮಾಡತಾರು. ಈ ವರ್ಷ 55 ರೂಪಾಯಿಗೆ ಒಂದು ಕೇಜಿಯಂತೆ ಖರೀದಿ ಮಾಡಿದಾರು. ಆರು ತಿಂಗಳ ಬಿಟ್ಟು ಮಿಲ್ಲು ಮಾಲಿಕರು ಹಾಗೂ ಮಧ್ಯವರ್ತಿಗಳಿಂದ ಸರಕಾರಿ ಹಾಸ್ಟೆಲ್ಲುಗಳ ಹುಡುಗರ ಸಲುವಾಗಿ 90 ರೂಪಾಯಿಗೆ ತೊಗರಿ ಬೇಳೆ ಖರೀದಿ ಮಾಡತಾರು. ರೈತರಿಂದ ಖರೀದಿ ಮಾಡಿದ ತೊಗರಿ ಕಾಳನ್ನೇ ಮಿಲ್ಲಿನಲ್ಲಿ ಒಡೆದು ಹಾಕಿಸಿ ಹಾಸ್ಟೆಲ್ಲಿಗೆ ಪೂರೈಸೋವಷ್ಟು ಕನಿಷ್ಟ ಸಾಮಾನ್ಯ ಜ್ಞಾನ ಅವರಿಗೆ ಇಲ್ಲ.

ಮೂರನೇಯದು ಇಂದಿರಾ ಕ್ಯಾಂಟೀನು. ಮೊದಲನೆಯದು ಅದರ ಹೆಸರ ಹಿಂದಿನ ರಾಜಕೀಯ. ಕಾಂಗ್ರೆಸ್ಸಿನವರು ಇಂದಿರಮ್ಮಾ ಕ್ಯಾಂಟಿನ ಅಂತ ಮಾಡಿದ್ದರ ಅದರ ಇಂದಿರಾ ತಗದು ಅಮ್ಮಾ ಅಂತ ಭಾಜಪ ದವರು ಮುಂದು ವರೆಸಬಹುದಿತ್ತು. ಇಲ್ಲಾ ಅಂದರ ಅನ್ನಪೂರ್ಣಾ ಅಡುಗೆ ಮನೆ ಅಂತಾದರೂ ಇವರು ಬದಲಾಯಿಸಬೇಕಾಗಿತ್ತು. ಅಥವಾ ಅದ ಕೆಲಸಾ ಕಾಂಗ್ರೆಸ್ಸಿನವರು ಮಾಡಬೇಕಿತ್ತು. ಅದುನೂ ಆಗಲಿಲ್ಲ.

ಎರಡನೇಯದ್ದು ಅವಕ್ಕೆ ರಾಜ್ಯ ಖಜಾನೆಯಿಂದ ಹಣ ಹೊಂದಿಸೋ ಕೆಲಸ ಸಿದ್ರಾಮಯ್ಯನವರು ಮಾಡಲಿಲ್ಲ. ಅವರು ಮಾಡಿದ್ದು ಎರಡು ತಪ್ಪು. ಅವನ್ನು ನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಯವರು ನಡೆಸಬೇಕು ಅನ್ನೋ ನಿಯಮ ಮಾಡಿದ್ದು. ಎರಡನೇಯದ್ದು ಗುತ್ತಿಗೆದಾರರ ಕೈಯೊಳಗ ಕೊಟ್ಟಿದ್ದು.

ಅವನ್ನು ತಮಿಳುನಾಡಿನ ರೀತಿ ಮಹಿಳಾ ಸ್ವಸಹಾಯ ಸಂಘಗಳ ಕೈಗೆ ಕೊಟ್ಟಿದ್ದರ ಅವು ಚಂದಾಗಿ ನಡೆಸಿಕೊಂಡು ಬರತಿದ್ದರು. ಏಳು ವರ್ಷದ ಹಿಂದೆ ಸುರುವಾದ ಈ ಬಡವರ ಅಡುಗೆ ಮನೆಗಳು ಇಲ್ಲಿಯವರೆಗೆ 25 ಕೋಟಿ ಇಡ್ಲಿ, 30 ಕೋಟಿ ಚಪಾತಿ ಹಾಗೂ 20 ಕೋಟಿ ಪ್ಲೇಟು ಅನ್ನ ತಯಾರಿಸಿದ್ದಾವು. ಅವುಗಳ ಬೆಲೆ ಬದಲಾಗಿಲ್ಲ. ಈ ಲಾಕ್ ಡೌನ್ ಸಮಯದಾಗೂನು ಕೆಲಸ ಮಾಡಿದಾವು. ಬಡವರ ಪ್ರಾಣ ಕಾದವು.

ಆದರ ನಮ್ಮಲ್ಲೆ ಹಂಗ ಆಗಲಿಲ್ಲ. ಬಡವರು ಉಪವಾಸ ಬಿದ್ದರು. ಪ್ರವಾಸಿ ಕಾರ್ಮಿಕರು ಯಾವುದೋ ಸಂಘ ಸಂಸ್ಥೆಗಳು ಕೊಡೋ ಆಹಾರಕ್ಕ ಕಾಯ್ದು ಕೊಂಡು ದಿನಗಟ್ಟಲೇ ಇದ್ದರು. ಏನೂ ಸಿಗಲಾರದಾಗ ತಮ್ಮ ಹಣೆಬರಹಕ್ಕೆ ಬೈದುಕೊಂಡು ಸುಮ್ಮನೇ ಕಣ್ಣೀರು ಕುಡಿದು ಕುಂತರು.

ಇಂದಿರಾ ಕ್ಯಾಂಟೀನು ತಗದರ ಗದ್ದಲ ಆಗತೇತಿ ಅಂತ ಮುಚಿಕೊಂಡು ಕೂತರು. ಸಾರಾಯಿ ದುಕಾನು ತೆಗೆದು ಅಲ್ಲಿನ ಜನ ಜಂಗುಳಿ – ನೂಕು ನುಗ್ಗಲು ನೋಡಿ ಮುಸಿ ಮುಸಿ ನಕ್ಕ ನಮ್ಮ ಸರಕಾರ ಇಂದಿರಾ ಕ್ಯಾಂಟಿನ ತೆರೆಯಲಿಲ್ಲ. ಬಡವರಿಗೆ ಅನ್ನಕ್ಕಿಂತಲೂ ಎಣ್ಣೆ ಬೇಕು ಅಂತ ನಕ್ಕರು ಅಷ್ಟ.

ಇವೆಲ್ಲಾ ನಮ್ಮ ರೈತರ ಪರವಾಗಿ, ಮಹಿಳೆಯರ ಪರವಾಗಿ ಮಾತಾಡುವ ಪುಡಾರಿ ನಾಯಕರಿಗೆ ಕಾಣೋದಿಲ್ಲ. ಜನ ಜಾಗೃತಿ ಹೊರತು ಪ್ರಜಾಸತ್ತೆಗೆ ಬೇರೆ ಔಷಧಿ ಇಲ್ಲ ಅಂತ ಬೆಂಜಮಿನ್ ಫ್ರ‍್ಯಾಂಕ್ಲಿನ್ ಹೇಳಿದಂಗ, ನಮಗನ ತಿಳೀಲಿಲ್ಲಾ ಅಂದರ ನಮ್ಮ ನಾಯಕರಿಗೆ ಹೆಂಗ ತಿಳೀಬೇಕು?


ಇದನ್ನೂ ಓದಿ: ದಿನಕ್ಕೆ ಕೇವಲ ಒಂದೇ ಹೊತ್ತು ಊಟ : ಅಹಮದಾಬಾದ್‌ನ ಹಲವರ ಪರಿಸ್ಥಿತಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...