Homeಮುಖಪುಟ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ': ಮಂದೀಪ್ ಪುನಿಯಾ

‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ

ಅಧಿಕಾರಸ್ಥರಿಂದ ಕಿರುಕುಳಕ್ಕೊಳಗಾದ ಜನರ ಬಗ್ಗೆ ವರದಿ ಮಾಡಲು ಹಿಂತಿರುಗುತ್ತಿದ್ದೇನೆ ಎಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಪತ್ರಕರ್ತ ಮಂದೀಪ್ ಪುನಿಯಾ ತಿಳಿಸಿದ್ದಾರೆ.

- Advertisement -
- Advertisement -

ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸ್ಥಳದಲ್ಲಿ ಪೊಲೀಸರಿಂದ ಬಂಧಿತರಾಗಿ, ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾದ ಪತ್ರಕರ್ತ ಮಂದೀಪ್ ಪುನಿಯಾ, ಬಂಧನದಲ್ಲಿದ್ದಾಗ ಅನುಭವಿಸಿದ ಕ್ರೂರ ಹಿಂಸೆಯಿಂದ ತಾನು ವಿಚಲಿತನಾಗಿಲ್ಲ ಮತ್ತು “ಅಧಿಕಾರಸ್ಥರಿಂದ ಕಿರುಕುಳಕ್ಕೊಳಗಾದ ಜನರ ಬಗ್ಗೆ ವರದಿ ಮಾಡಲು ಹಿಂತಿರುಗುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಗುರುವಾರ ಎನ್‌ಡಿಟಿವಿ ಪುನಿಯಾರ ಜೊತೆ ನಡೆಸಿದ ಸಂದರ್ಶನದ ವಿಡಿಯೋ ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಒಂದು ಮಿಲಿಯನ್‌ಗೂ (10 ಲಕ್ಷಕ್ಕೂ) ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು ಪುನಿಯಾ ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಜೈಲಿನ ಒಳಗೆ ಭೇಟಿಯಾದ ಅಮಾಯಕ ರೈತರ ಸುತ್ತ ಒಂದು ಸ್ಟೋರಿ ಬರೆಯಲು ಅವರು ತಮ್ಮ ದೇಹದ ಮೇಲೆ “ಟಿಪ್ಪಣಿಗಳನ್ನು” ಬರೆದುಕೊಂಡು ಹೊರ ಬಂದಿದ್ದಾರೆ.

ದಿ ಕಾರವಾನ್ ನಿಯತಕಾಲಿಕೆಗೆ ಮತ್ತು ಇತರ ಕೆಲವು ಮಾಧ್ಯಮ ಸಂಸ್ಥೆಗಳಿಗೆ ವರದಿ/ಸ್ಟೋರಿ ನೀಡುವ 43 ವರ್ಷದ ಸ್ವತಂತ್ರ ಪತ್ರಕರ್ತ ಪುನಿಯಾ, ತನ್ನನ್ನು ಶನಿವಾರ ಹೇಗೆ ಬಂಧಿಸಲಾಯಿತು, ತನ್ನ ಮೇಲೆ ಹೇಗೆ ಹಲ್ಲೆ ನಡೆಸಲಾಯಿತು ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಸುಳ್ಳು ಆರೋಪ ಹೇಗೆ ಹೊರಿಸಲಾಗಿತು ಎಂಬುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಹಸ್ತಕ್ಷೇಪವಲ್ಲ, ಮನುಷ್ಯರಿಗಾಗಿ ಮನುಷ್ಯ ನಿಲ್ಲುವ ಮಾನವೀಯತೆ: ಸೋನಾಕ್ಷಿ ಸಿನ್ಹಾ

“ನಾನು ಸಿಂಘುವಿನಲ್ಲಿನ ರೈತರ ಪ್ರತಿಭಟನಾ ಶಿಬಿರದಲ್ಲಿ ಬ್ಯಾರಿಕೇಡ್‌ಗಳ ಪಕ್ಕದಲ್ಲಿ ನಿಂತಿದ್ದೆ. ನನ್ನ ವರದಿಗಾಗಿ ನಾನು ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದೆ. ಕೆಲವು ವಲಸೆ ಕಾರ್ಮಿಕರು ಹಾದುಹೋಗಲು ಪ್ರಯತ್ನಿಸುತ್ತಿದ್ದರು. ಆದರೆ ಪೊಲೀಸರು ನಿರಂತರವಾಗಿ ಅವರನ್ನು ನಿಂದಿಸುತ್ತಿದ್ದರು. ಹಾಗಾಗಿ, ನಾನು ವಲಸೆ ಕಾರ್ಮಿಕರು ಎದುರಿಸುತ್ತಿದ್ದ ಸಮಸ್ಯೆಗಳನ್ನು ರೆಕಾರ್ಡ್ ಮಾಡುತ್ತಿದ್ದೆ….’

‘ಆ ಸಮಯದಲ್ಲಿ, ಪೊಲೀಸರು ಮೊದಲು ನನ್ನ ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ಪತ್ರಕರ್ತ ಧರ್ಮೇಂದ್ರ ಸಿಂಗ್ ಅವರನ್ನು ಎಳೆದರು. ನಾನು ಪ್ರತಿಭಟಿಸಿದಾಗ, ಅವರಲ್ಲಿ ಒಬ್ಬರು ‘ಇದು ಮಂದೀಪ್ ಪುನಿಯಾ. ಅವನನ್ನೂ ಕರೆದುಕೊಂಡು ಹೋಗು’ ಎಂದು ಕೂಗಿದರು. ಅವರು ನನ್ನನ್ನು ಕೋಲು/ಲಾಠಿಗಳಿಂದ ಹೊಡೆಯುತ್ತಿದ್ದರು ಮತ್ತು ನನ್ನನ್ನು ನಿಂದಿಸಿದರು….’
“ನನ್ನನ್ನು ಟೆಂಟ್ ಒಂದಕ್ಕೆ ಕರೆದೊಯ್ಯಲಾಯಿತು ಮತ್ತು ಅಲ್ಲಿಯೂ ಹೊಡೆದರು. ಅವರು ನನ್ನ ಸಣ್ಣ ಕನ್ನಡಿರಹಿತ ಕ್ಯಾಮೆರಾ ಮತ್ತು ನನ್ನ ಸ್ಯಾಮ್‌ಸಂಗ್ ಫೋನ್ ಅನ್ನು ಒಡೆದು ಹಾಕಿದರು. ಅವರು ನನ್ನ ಗುರುತಿನ ಚೀಟಿಗಳನ್ನು ಎಸೆದರು” ಎಂದು ಪುನಿಯಾ ಹೇಳಿದ್ದಾರೆ.

ನಂತರ ಅವರು ನನ್ನನ್ನು ಬಿಳಿ ಸ್ಕಾರ್ಪಿಯೋದಲ್ಲಿ ಕೂರಿಸಿ ಮೂರು ನಾಲ್ಕು ಪೊಲೀಸ್ ಠಾಣೆಗಳಿಗೆ ಕರೆದೊಯ್ದರು. ನಂತರ ಮುಂಜಾನೆ 2 ರ ಸುಮಾರಿಗೆ ನನ್ನನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಯಿತು. ಪೊಲೀಸರು, ‘ಈ ಪ್ರಕರಣ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡಿದೆ. ದಯವಿಟ್ಟು ಅದನ್ನು ನೋಡಿಕೊಳ್ಳಿ’ ಎಂದು ಹೇಳುವ ಮೂಲಕ ವೈದ್ಯರ ಮೇಲೆ ಪ್ರಭಾವ ಬೀರಲು ಸಹ ಪ್ರಯತ್ನಿಸಿದರು. ಆದರೆ ನನ್ನ ಮೇಲಾದ ಎಲ್ಲಾ ಗಾಯಗಳನ್ನು ಪರೀಕ್ಷಿಸುತ್ತೇನೆ ಎಂದು ವೈದ್ಯರು ಹೇಳಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ, ನಂತರ ನನ್ನನ್ನು ಮುಂಜಾನೆ 3 ರ ಸುಮಾರಿಗೆ ಲಾಕಪ್‌ಗೆ ಹಾಕಿದರು….

ಪೊಲೀಸರ ಹೇಳಿಕೆಗಳನ್ನು ತೆಗೆದುಕೊಳ್ಳಲು ನಾನು ದಿನವಿಡೀ ಅವರೊಂದಿಗೆ ಮಾತನಾಡುತ್ತಿದ್ದ ಕಾರಣ ಪೊಲೀಸರಿಗೆ ನನ್ನ ಹೆಸರು ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ಒಂದು ದಿನದ ಹಿಂದೆ ನಾನು ರೈತರ ಮೇಲೆ ಕಲ್ಲು ಎಸೆದ ಬಗ್ಗೆ ವರದಿ ಮಾಡಿದ್ದೆ. ರೈತರ ಮೇಲೆ ಹಲ್ಲೆ ನಡೆಸಿದ ಜನರು ಬಿಜೆಪಿಗೆ ಹೇಗೆ ಸಂಪರ್ಕ ಹೊಂದಿದ್ದಾರೆಂದು ನಾನು ವರದಿ ಮಾಡಿದ್ದೆ ” ಎಂದು ಪುನಿಯಾ ಹೇಳಿದ್ದಾರೆ.

ಹೆಚ್ಚಾಗಿ ರೈತರೇ ಆಗಿದ್ದ ಇತರ ಕೈದಿಗಳಿಂದ ನನಗೆ ಜೈಲಿನಲ್ಲಿ ಆತ್ಮೀಯ ಸ್ವಾಗತ ದೊರೆಯಿತು. “ಎಲ್ಲರೂ ನನ್ನನ್ನು ಜೈಲಿನಲ್ಲಿ ಚೆನ್ನಾಗಿ ನಡೆಸಿಕೊಂಡರು. ಎಲ್ಲ ಖೈದಿಗಳು ನನ್ನನ್ನು ಮತ್ತು ನನ್ನ ಹೆಸರನ್ನು ಆಗಲೇ ತಿಳಿದಿದ್ದರೆಂದು ತೋರುತ್ತದೆ. ಪೊಲೀಸರು ನನ್ನನ್ನು ಹೊಡೆದಿದ್ದಾರೆಂದು ಅವರಿಗೆ ತಿಳಿದಿತ್ತು” ಎಂದು ಅವರು ಹೇಳಿದರು.

“ಒಳಗೆ ಹೋಗುವಾಗ, ವ್ಯವಸ್ಥೆಯ ಬಲಿಪಶು ಎಂದು ನಾನು ಭಾವಿಸಿದೆ. ಆದರೆ ಜೈಲಿನಲ್ಲಿರುವ ಈ ಜನರು ಹೇಗೆ ದೊಡ್ಡ ಬಲಿಪಶುಗಳಾಗಿದ್ದಾರೆಂದು ನಾನು ನೋಡಿದೆ. ಪೊಲೀಸರ ಹೊಡೆತಗಳಿಂದ ಆ ರೈತರ ಕಾಲುಗಳು ನೀಲಿ ಬಣ್ಣಕ್ಕೆ ತಿರುಗಿದ್ದವು, ಹೊರಗೆ ಕಾಣಿಸದ ಮೂಗೇಟುಗಳಿಂದ ಅವರು ಬಳಲುತ್ತಿದ್ದರು. ಅಧಿಕಾರದಲ್ಲಿರುವವರಿಂದ ಕಿರುಕ್ಕೊಳಗಾದ ಜನರ ಕುರಿತು ವರದಿ ಮಾಡುವುದು ಎಷ್ಟು ಮುಖ್ಯ ಎಂದು ನನಗೆ ಅರ್ಥವಾಯಿತು, ಏಕೆಂದರೆ ಅಧಿಕಾರದಲ್ಲಿರುವ ಜನರು ಸತ್ಯ ಹೊರಬರಲು ಬಯಸುವುದಿಲ್ಲ” ಎಂದು ಪುನಿಯಾ ಅಭಿಪ್ರಾಯಪಟ್ಟಿದ್ದಾರೆ.

“ಅದಕ್ಕಾಗಿಯೇ ನಾನು ಒಂದು ಪೆನ್ನಿನ ವ್ಯವಸ್ಥೆ ಮಾಡಿಕೊಂಡು, ನನ್ನ ದೇಹದ ಮೇಲೆ ಟಿಪ್ಪಣಿಗಳನ್ನು ಬರೆದುಕೊಳ್ಳಲು ಪ್ರಾರಂಭಿಸಿದೆ. ನಾನು ರೈತರ ಹೆಸರುಗಳು ಮತ್ತು ಅವರ ಕತೆಗಳನ್ನು ಕೇಳಿಸಿಕೊಂಡೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಗ್ರಾಮದವರಾದ ಗುರುದ್ವಾರದ 70 ವರ್ಷದ ಧಾರ್ಮಿಕ ವ್ಯಕ್ತಿಯನ್ನು (ಅರ್ಚಕ) ಸಹ ನಾನು ಭೇಟಿಯಾದೆ. ಪ್ರತಿಭಟನೆಯಲ್ಲಿ ಅವರು ರೈತರಿಗೆ ಆಹಾರವನ್ನು ನೀಡುತ್ತಿದ್ದ ಕಾರಣ ಅವರನ್ನು ಬಂಧಿಸಲಾಯಿತು” ಎಂದು ಅವರು ಹೇಳಿದರು.

“ನಾನು ಖಂಡಿತವಾಗಿಯೂ ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗುತ್ತೇನೆ. ಏಕೆಂದರೆ ಅಧಿಕಾರದಲ್ಲಿರುವವರಿಂದ ಕಿರುಕುಳಕ್ಕೊಳಗಾಗುತ್ತಿರುವ ಈ ಜನರ ಬಗ್ಗೆ ವರದಿ ಮಾಡುವುದು ಬಹಳ ಮುಖ್ಯ. ನಾನು ಹಿಂತಿರುಗಿ ರೈತರ ಪ್ರತಿಭಟನೆಯ ಬಗ್ಗೆ ಅಗತ್ಯವಿರುವ ಸೂಕ್ಷ್ಮತೆಯೊಂದಿಗೆ ವರದಿ ಮಾಡುತ್ತೇನೆ” ಎಂದು ಪುನಿಯಾ ಹೇಳಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಶನಿವಾರ ಮಂದೀಪ್ ಪುನಿಯಾ ಬಂಧನದ ಸಮಯದಲ್ಲೇ, ದೆಹಲಿಯ ಹೊರವಲಯದಲ್ಲಿ ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಎರಡು ತಿಂಗಳ ಕಾಲ ನಡೆದ ರೈತರ ಪ್ರತಿಭಟನೆಯ ಮೇಲೆ ಪೊಲೀಸ್ ದಬ್ಬಾಳಿಕೆಯೂ ನಡೆಯುತ್ತಿತ್ತು.

ಜನವರಿ 26ರ ಘಟನೆಗಳ ನಂತರ ಪೊಲೀಸ್ ಅಧಿಕಾರಿಗಳು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ರಸ್ತೆಗಳನ್ನು ಅಗೆದಿದ್ದಾರೆ, ಮೊಳೆಗಳನ್ನು ನೆಟ್ಟಿದ್ದಾರೆ ಮತ್ತು ರೈತರ ಆಂದೋಲನವನ್ನು ಉಸಿರುಗಟ್ಟಿಸಲು ಬಹು-ಪದರಗಳ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಶಿಬಿರಗಳನ್ನು ತಲುಪದಂತೆ ಪತ್ರಕರ್ತರನ್ನು ತಡೆಯಲಾಗಿದೆ. ಈ ಕುರಿತು ಜಗತ್ತಿನಾದ್ಯಂತ ಖಂಡನೆಗಳು ವ್ಯಕ್ತವಾಗಿವೆ.


ಇದನ್ನೂ ಓದಿ: ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ 2021 ರ "ಬಟ್ಟೆ ಚೀಲ ಹಗರಣ"ಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ...

‘ಯುದ್ಧ ಸೃಷ್ಟಿಸಿದ್ದು ನೀವೇ’: ಹಾರ್ಮುಜ್ ಅಡ್ಡಿಗೆ ಅಮೆರಿಕವನ್ನು ದೂಷಿಸಿದ ಚೀನಾ, ಟ್ರಂಪ್ ಅವರ ‘ಧೈರ್ಯದ ಕೊರತೆ’ ಹೇಳಿಕೆಗೆ ತಿರುಗೇಟು

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು "ಧೈರ್ಯ" ಹೊಂದಿಲ್ಲ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಚೀನಾ ಬಲವಾಗಿ ವಿರೋಧಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ...

ಮೂರನೇ ಅತ್ಯಾಚಾರ ಪ್ರಕರಣ: ಸ್ವ-ಘೋಷಿತ ‘ದೇವಮಾನವ’ ಖರತ್‌ಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಾಸಿಕ್ ನ್ಯಾಯಾಲಯ

ನಾಸಿಕ್: ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಸೋಮವಾರ ಏಪ್ರಿಲ್...

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...