Homeಮುಖಪುಟಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ; ತುಮಕೂರಿನಲ್ಲಿ ಸಿಕ್ಕಿಕೊಂಡ ವಲಸೆ ಕಾರ್ಮಿಕರ ಗೋಳು

ಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ; ತುಮಕೂರಿನಲ್ಲಿ ಸಿಕ್ಕಿಕೊಂಡ ವಲಸೆ ಕಾರ್ಮಿಕರ ಗೋಳು

- Advertisement -
- Advertisement -

ಮಟಮಟ ಮಧ್ಯಾಹ್ನದ ಉರಿ ಬಿಸಿಲು. ಸೂರ್ಯ ನೆತ್ತಿಯ ಮೇಲಿದ್ದ. ಕೆಲಸ ಕಳೆದುಕೊಂಡ ಆ ಹುಡುಗರು ಮೂತಿಗೆ ಕರವಸ್ತ್ರಗಳನ್ನು ಬಿಗಿದು ಬೆನ್ನಿಗೆ ಚೀಲಗಳನ್ನು ತಗಲುಹಾಕಿಕೊಂಡು ಹೆಜ್ಜೆ ಹಾಕುತ್ತ ಬರುತ್ತಿದ್ದರು. ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಆ ಹುಡುಗರು ನಿಧಾನವಾಗಿ ನಡೆದು ಹೋಗುತ್ತಿದ್ದರು. ನಾವು ಬರುತ್ತಿದ್ದ ಕಾರನ್ನು ನಿಲ್ಲಿಸಿ ವಿಚಾರಿಸಿದಾಗ ಮಾಲಿಕ ರಾಮು ಆ ಕಾರ್ಮಿಕರನ್ನು ನಿರ್ದಯವಾಗಿ ರೂಮುಗಳಿಂದ ಹೊರಹಾಕಿದ್ದ. ಊಟವನ್ನೂ ಕೊಡದೆ ಕೆಲಸವಿಲ್ಲ ನಡೀರಿ ಎಂದು ಹೇಳಿಕಳಿಸಿದ್ದ. ಆ ವಲಸೆ ಕಾರ್ಮಿಕರ ಮುಖದಲ್ಲಿ ತಮ್ಮ ಊರುಗಳಿಗೆ ಸೇರುವ ಧಾವಂತವಿತ್ತು. ಮಾಲಿಕನ ಧೋರಣೆಗೆ ಬೇಸರವಿತ್ತು. ಆತಂಕದ ಗೆರೆಗಳು ಅವರ ಮುಖದಲ್ಲಿ ಎದ್ದುಕಾಣುತ್ತಿದ್ದವು.

ಹೌದು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ತುಮಕೂರು ತಾಲೂಕು ಮಲ್ಲಸಂದ್ರಕ್ಕೂ ಮೊದಲೇ ಬಲಭಾಗದಲ್ಲಿ ಸಿಗುವ ಗಜೇಂದ್ರ ಹಾರ್ಡ್ ವೇರ್ ನಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಅವರು. 12 ಜನರಿದ್ದ ಆ ಬಿಹಾರಿ ಕಾರ್ಮಿಕರು ಕಳೆದ ಒಂದು ವರ್ಷದಿಂದ ‘ಅಡಕೆಪಟ್ಟೆ ತಟ್ಟೆ’ ತಯಾರು ಮಾಡುತ್ತಿದ್ದರು. ಅಲ್ಲಿಗೆ ಹೋಗಿ ನೋಡಿದರೆ ಪಾಳುಬಿದ್ದ ಗೋಡೋನ್ ಬಳಿಯೇ ಕೆಲಸ. ಮಾಲಿಕ ರಾಮು ಹೃದರಾಬಾದ್ ನವನು. ಇಲ್ಲಿಯವರೆಗೂ ಕಾರ್ಮಿಕರಿಂದ ದುಡಿಸಿಕೊಂಡಿದ್ದ ಮಾಲಿಕ ಮೇ 12ರಂದು ರಾತ್ರಿ ಎಲ್ಲರಿಗೂ ಸಂಬಳ ನೀಡಿ ರೂಮುಗಳಿಂದ ಹೊರಹಾಕಿದ್ದಾನೆ.

ಹಾಗಾಗಿ ಆ ಯುವ ವಲಸೆ ಕಾರ್ಮಿಕರು ಅನಿವಾರ್ಯವಾಗಿ ಏನೂ ತೋಚದೆ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆ ಕಾರ್ಮಿಕರಿಗೆ ಪಿಎಫ್, ಇಲ್ಲ, ಸಂಬಳ ಚೀಟಿಯೂ ನೀಡಿಲ್ಲ. ಒಂದು ವರ್ಷ ನಿರಂತರವಾಗಿ ಪ್ರತಿನಿತ್ಯ 12 ಗಂಟೆ ದುಡಿಸಿಕೊಂಡು ಅವರನ್ನು ಅಡಕೆಪಟ್ಟೆ ತಟ್ಟೆ ತಯಾರಿಕೆ ಫ್ಯಾಕ್ಟರಿಯಿಂದ ಮಾಲಿಕ ಹೊರಹಾಕಿದ್ದ. ಬೀದಿಗೆ ಬಿದ್ದ ಕಾರ್ಮಿಕರು ತಮ್ಮ ಊರಾದ ಬಿಹಾರದ ಮಾಧವ್ ಪುರ್ ಮಲಾಟುಲಕ್ಕೆ ತೆರಳುತ್ತಿದ್ದರು. ನಾವು ತಡೆದಿದ್ದಕ್ಕಾಗಿ ಮರದ ನೆರಳಲ್ಲಿ ಸ್ವಲ್ಪಕಾಲ ವಿಶ್ರಮಿಸಿದರು. ಬಿಹಾರದ 12 ಮಂದಿ ವಲಸೆ ಕಾರ್ಮಿಕರು ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ ಹಿರಿಯರೊಬ್ಬರು ಮಾತ್ರ ತಾಂತ್ರಿಕ ತೊಂದರೆ ಆಗಿ ನೋಂದಣಿ ಮಾಡಿಸಿರಲಿಲ್ಲ. ನೋಂದಣಿ ಮಾಡಿಸಿದವರಿರೂ ಇನ್ನೂ ಮೆಸೇಜ್ ಬಂದಿರಲಿಲ್ಲ.

ಇದನ್ನು ಮಾಲಿಕ ರಾಮುಗೆ ಹೇಳಿದರೆ ‘ನಾನೇನು ಮಾಡಲು ಸಾಧ್ಯವಿಲ್ಲ. ನಿಮ್ಮ ಊರಿಗೆ ತೆರಳಿ ಎಂದು ಬ್ಯಾಗ್ ಗಳನ್ನು ಹೊರ ಎಸೆದು ರೂಮುಗಳಿಗೆ ಬೀಗಹಾಕಿದ್ದಾನೆ. ಇದರಿಂದ ನೊಂದ ಆ ಯುವ ವಲಸೆ ಕಾರ್ಮಿಕರು ತುಮಕೂರಿನತ್ತ ಸಾಗುತ್ತಿದ್ದರು. ಅವರನ್ನು ತಡೆದು ನಿಲ್ಲಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸಾಮಾಕಿ ಕಾರ್ಯಕರ್ತ ತಾಜುದ್ದೀನ್ ಷರೀಫ್ ಮತ್ತು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಸಮಸ್ಯೆ ಏನೆಂಬುದನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಲಸೆ ಕಾರ್ಮಿಕ ಪ್ಯಾರೆಲಾಲ್, ಗಜೇಂದ್ರ ಹಾರ್ಡ್ ವೇರ್ ಮಾಲಿಕ ರಾಮು ಸಂಬಳ ನೀಡಿ, ನಿಮಗೆ ಇನ್ನು ಕೆಲಸವಿಲ್ಲ. ಇಲ್ಲಿಂದ ಹೊರಡಿ ಎಂದು ಫ್ಯಾಕ್ಟರಿಯಿಂದ ಹೊರಹಾಕಿದರು. ಶೀಟ್ ಡ್ಯಾಮೇಜ್ ಮಾಡಿದ್ದಕ್ಕಾಗಿ 12 ಸಾವಿರ ರೂಪಾಯಿ ಹಿಡಿದುಕೊಂಡಿದ್ದಾರೆ. ಊಟ ಕೊಟ್ಟಿಲ್ಲ. ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಸಿದ್ದೇವೆ. ಅಲ್ಲಿಂದ ಖಚಿತ ಮಾಹಿತಿ ಬಂದ ಮೇಲೆ ಊರಿಗೆ ತೆರಳುತ್ತೇವೆ. ಅಲ್ಲಿಯ ವರೆಗೂ ಇಲ್ಲಿರಲು ಅವಕಾಶ ಕೊಡಿ ಎಂದು ಮನವಿ ಮಾಡಿದೆವು. ಆದರೆ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೊರಹಾಕಿದರು ಎಂದು ಅಳಲುತೋಡಿಕೊಂಡರು.

ಪಕ್ಕದಲ್ಲಿಯೇ ಇದ್ದ ಫ್ಯಾಕ್ಟರಿಗೆ ಮಾಲಿಕರನ್ನು ಕಾಣಲು ಹೋದೆವು. ಆಗ ನಮ್ಮ ಎದುರಿಗೇ ಕಾರೊಂದು ಬಂತು. ನಿಲ್ಲಿಸಿ “ಇಲ್ಲಿ ಗಜೇಂದ್ರ ಹಾರ್ಡ್ ವೇರ್ ಇದೆಯಂತೆ ಎಲ್ಲಿ? ಅದರ ಮಾಲಿಕ ರಾಮು. ಅವರನ್ನು ಭೇಟಿ ಮಾಡಬೇಕೆಂದು ಕಾರಿನಲ್ಲಿದ್ದವರನ್ನು ಕೇಳಿದೆವು. ಆ ಹೆಸರಿನ ಮಾಲಿಕರೂ ಇಲ್ಲ. ಫ್ಯಾಕ್ಟರಿಯೂ ಇಲ್ಲ ಎಂದು ಹೇಳಿ ಹೋದರು. ಸ್ಥಳಕ್ಕೆ ಹೋದರೆ ಅಡಕೆಪಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಳೆಯ ಗೋಡನ್ ನಲ್ಲಿ ಅಡಕೆಪಟ್ಟೆಗಳನ್ನು ಸಂಗ್ರಹಿಸಿಡಲಾಗಿತ್ತು. ಅದೇ ಅಡಕೆಪಟ್ಟೆ ತಟ್ಟೆ ತಯಾರಿಸುವ ಜಾಗವೆಂದು ತಿಳಿಯಿತು. ಅಲ್ಲಿದ್ದವರನ್ನು ವಿಚಾರಿಸಿದರೆ ವಿನಯ್ ಎಂಬಾತ ಮೊದಲು ದರ್ಪದಿಂದಲೇ ಮಾತನಾಡಿದ. ನಾವು ಜೋರು ಮಾಡುತ್ತಿದ್ದಂತೆ ನಾನು ಈ ನೆಲದ ಮಾಲಿಕ. ಬಾಡಿಗೆಗೆ ನೀಡಿದ್ದೇನೆ. ರಾಮು ಎಂಬುವರು ಫ್ಯಾಕ್ಟರಿ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು..

ಮಾಲೀಕ ರಾಮು

ನಂತರ ರಾಮುಗೆ ಪೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಮತ್ತೆ ವಲಸೆ ಕಾರ್ಮಿಕರ ಬಳಿ ಹೋಗಿ ಮಾತುಕತೆ ನಡೆಸಿದೆವೆ. ಅರ್ಧ ಗಂಟೆ ಬಳಿಕ ಮಾಲಿಕ ರಾಮ ಅಲ್ಲಿಗೆ ಬಂದು ಮಳ್ಳನಂತೆ ಮಾತುಕತೆ ಆಲಿಸುತ್ತಿದ್ದ. ಈ ನಡುವೆ ನಾನು ಕಾರ್ಮಿಕರನ್ನು ಕಳಿಸಿಲ್ಲ ಎಂದು ರಾಮು ಸುಳ್ಳು ಹೇಳಿದ. ಅಷ್ಟೊತ್ತಿಗಾಗಲೇ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಆಗಿತ್ತು. ಸಾಮಾಜಿಕ ಕಾರ್ಯಕರ್ತರು ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. ಮಾಲೀಕ ಮಾತ್ರ ಒಂದಕ್ಕೂ ಉತ್ತರಿಸದೆ ಮೌನ ವಹಿಸಿದ್ದ. ಆದರೆ ಜಮೀನಿನ ಮಾಲೀಕ ವಿನಯ್ ‘ಸರ್ ಇರಲು ಕಾರ್ಮಿಕರಿಗೆ ಅವಕಾಶ ಕೊಡುತ್ತೇನೆ. ಕುಡಿಯಲು ನೀರು ಒದಗಿಸುತ್ತೇನೆ. ಊಟದ ವ್ಯವಸ್ಥೆ ಆಗೋಲ್ಲ’ ಅಂದ್ರು ಒಂದು ತೀರ್ಮಾನಕ್ಕೆ ಬಂದು ಕಾರ್ಮಿಕರಿಗೆ ಅಲ್ಲೇ ಇರಲು ವ್ಯವಸ್ಥೆ ಮಾಡಲಾಯಿತು.

ಆದರೂ ವಲಸೆ ಕಾರ್ಮಿಕರಲ್ಲಿ ಆತಂಕವಿತ್ತು. ಭದ್ರತೆಯ ಕೊರತೆ ಇತ್ತು. ಊಟದ ಸಮಸ್ಯೆ ಇತ್ತು. ಮಾಲೀಕರು ಏನು ಮಾಡುತ್ತಾರೋ ಎಂಬ ಭಯವಿತ್ತು. ಇದರ ನಡುವೆ ಊರಿಗೆ ಹೋಗುವ ಕಾತರವೂ ಇತ್ತು.  ಮನಸ್ಸು ಇಬ್ಬಂದಿಯಾಗಿತ್ತು. ಇರುವುದೋ, ಹೋಗುವುದೋ ಎಂಬ ಪ್ರಶ್ನೆ ಎದುರಾಗಿತ್ತು. ಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ವ್ಯವಸ್ಥೆ ಏನು ಎಂಬ ಪ್ರಶ್ನೆಗಳು ಅವರ ಮನದಲ್ಲಿ ಮೂಡಿದ್ದವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...