Homeಅಂತರಾಷ್ಟ್ರೀಯತೆರೆಸಾ ಮೇಗೆ 'Exit' ಎಂದ ಬ್ರಿಟನ್

ತೆರೆಸಾ ಮೇಗೆ ‘Exit’ ಎಂದ ಬ್ರಿಟನ್

2016ರ ನಿರ್ಧಾರವನ್ನೇ ತಲೆಕೆಳಗು ಮಾಡುವ ಸಾಧ್ಯತೆ ಇರುವ ಎರಡನೇ ಜನಮತಗಣನೆ ಇತ್ಯಾದಿಯಾಗಿ ಹಲವು ಸಾಧ್ಯತೆಗಳು ಎದುರಾಗಲಿವೆ

- Advertisement -
- Advertisement -

| ಡಾ.ಸ್ವಾತಿ ಶುಕ್ಲಾ |

ಬ್ರೆಕ್ಸಿಟ್ ಒಪ್ಪಂದವೊಂದನ್ನು ಸಾಧಿಸಲು ವಿಫಲರಾದ ಬಳಿಕ ಯುಕೆ ಪ್ರಧಾನಿ ತೆರೆಸಾ ಮೇ ಅವರು, ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮತ್ತು ಬ್ರಿಟನ್‌ನ ಪ್ರಧಾನಿಯಾಗಿ ತನ್ನ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತಾನು ಜೂನ್ 7ರಂದು ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ತ್ಯಜಿಸುವುದಾಗಿ ಅವರು ತನ್ನ ಘೋಷಣೆಯಲ್ಲಿ ತಿಳಿಸಿದ್ದಾರೆ. 

ಬ್ರೆಕ್ಸಿಟ್ (Brexit)
ಬ್ರೆಕ್ಸಿಟ್- (ಬ್ರಿಟನ್ ಮತ್ತು ಎಕ್ಸಿಟ್ ಎಂಬ ಎರಡು ಪದಗಳ ಸಂಕ್ಷೇಪ) ಎಂಬುದು ಯುಕೆಯ ಯುರೋಪಿಯನ್ ಯೂನಿಯನ್ (ಐರೋಪ್ಯ ಒಕ್ಕೂಟ)ನಲ್ಲಿ ಮುಂದುವರಿಯಬೇಕೆ, ಹೊರಬರಬೇಕೆ ಎಂಬುದನ್ನು ನಿರ್ಧರಿಸಲು 23 ಜೂನ್ 2016ರಲ್ಲಿ ನಡೆದ ಜನಮತಗಣನೆ.

ಈ ಜನಮತಗಣನೆಯಲ್ಲಿ 71.8 ಶೇಕಡಾ ಮತದಾರರು, ಎಂದರೆ ಸುಮಾರು ಮೂರು ಕೋಟಿ ಮತದಾರರು ಮತ ಚಲಾಯಿಸಿದ್ದು, ಹೊರಬರುವ ತೀರ್ಮಾನ 51.9 ಶೇಕಡಾ- 48.1 ಶೇಕಡಾ ನಿಕಟ ಅಂತರದಿಂದ ಜಯಿಸಿತ್ತು. ಆದರೆ, ಈ ಜನಮತಗಣನೆ ನಡೆದು ಹೆಚ್ಚುಕಡಿಮೆ ಮೂರು ವರ್ಷಗಳ ನಂತರವೂ ತಾನು 1973ರಲ್ಲಿ ಸೇರಿದ್ದ ಐರೋಪ್ಯ ಒಕ್ಕೂಟದಿಂದ ಹೊರಬರುವುದು ಹೇಗೆ ಎಂಬುದು ಬಿಡಿ, ಹೊರಬರಬೇಕೋ ಬೇಡವೋ ಎಂಬ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲು ಬ್ರಿಟನ್ ವಿಫಲವಾಗಿದೆ.

ಇಯು, ಎಂದು ಗುರುತಿಸಲ್ಪಡುವ ಐರೋಪ್ಯ ಒಕ್ಕೂಟವು 28 ಐರೋಪ್ಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಸಹಭಾಗಿತ್ವವಾಗಿದೆ. ಎರಡನೇ ಮಹಾಯುದ್ಧದ ಬಳಿಕ- ಪರಸ್ಪರ ವಾಣಿಜ್ಯ, ವ್ಯಾಪಾರ ಇರುವ ದೇಶಗಳ ನಡುವೆ ಯುದ್ಧದ ಸಂಭವ ಕಡಿಮೆ ಎಂಬ ನೆಲೆಯಲ್ಲಿ ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಹುಟ್ಟಿಕೊಂಡ ಪರಿಕಲ್ಪನೆಯಿದು. ಅಲ್ಲಿಂದ ಅದೀಗ ‘ಏಕ ಮಾರುಕಟ್ಟೆ’ಯಾಗುವ ತನಕ ಬೆಳೆದಿದೆ. ಎಷ್ಟರ ಮಟ್ಟಿಗೆ ಎಂದರೆ, ಸರಕು ಮತ್ತು ಜನರು ಒಂದೇ ದೇಶ ಎಂಬಷ್ಟರ ಮಟ್ಟಿಗೆ ಈ ದೇಶಗಳಲ್ಲಿ ಸಂಚರಿಸಬಹುದು. ಅದಕ್ಕೆ ಸ್ವಂತ ಕರೆನ್ಸಿಯಾದ ಯುರೋ ಇದ್ದು, ಅದನ್ನು 19 ದೇಶಗಳು ಬಳಸುತ್ತಿವೆ. ಅದಕ್ಕೆ ಸ್ವಂತ ಸಂಸತ್ತು ಕೂಡಾ ಇದ್ದು, ಅದು ಪರಿಸರ, ಸಾರಿಗೆ, ಗ್ರಾಹಕರ ಹಕ್ಕುಗಳು, ಅಷ್ಟೇ ಏಕೆ ಮೊಬೈಲ್ ಫೋನ್ ದರ ನಿಗದಿಯ ವರೆಗೆ ವ್ಯಾಪಕ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಿದೆ.

ಹೊರ ಬರುವ ಪ್ರಕ್ರಿಯೆ ಆರಂಭಿಸಿದ ಬಳಿಕ ಯುಕೆ, 29 ಮಾರ್ಚ್ 2019ರಲ್ಲಿ ಹೊರಬರಬೇಕಾಗಿತ್ತು. ಆದರೆ ಹೊರಬರುವಿಕೆ ಕುರಿತು ಐರೋಪ್ಯ ಒಕ್ಕೂಟ ಮತ್ತು ಯುಕೆ ನಡುವೆ ಮಾಡಲಾಗಿದ್ದ ಒಪ್ಪಂದವನ್ನು ಸಂಸದರು ಮೂರು ಬಾರಿ ತಿರಸ್ಕರಿಸಿದ್ದಾರೆ. ಈ ಒಪ್ಪಂದದ ಮುಖ್ಯ ಅಂಶವೆಂದರೆ, ಉದ್ದಿಮೆಗಳು ಹಾಗೂ ವ್ಯಕ್ತಿಗಳು ಆದಷ್ಟು ಸರಾಗವಾಗಿ ಐರೋಪ್ಯ ಒಕ್ಕೂಟದಿಂದ ಹೊರಬರುವುದನ್ನು ಖಾತರಿಪಡಿಸುವುದು ಮತ್ತು ಶಾಶ್ವತವಾದ ವಾಣಿಜ್ಯ ಸಂಬಂಧವನ್ನು ರೂಪಿಸಿಕೊಳ್ಳಲು ಎರಡೂ ಕಡೆಗಳವರಿಗೆ ಕಾಲಾವಕಾಶ ನೀಡುವುದು. ಇದೀಗ ಐರೋಪ್ಯ ಒಕ್ಕೂಟವು ಆರು ತಿಂಗಳುಗಳ ವಿಸ್ತರಣೆ ನೀಡಿ, 31 ಅಕ್ಟೋಬರ್ 2019ರ ತನಕ ಕಾಲಾವಕಾಶ ಒದಗಿಸಿದೆ.

ಮೇಯ ದಾಖಲೆ
ಐರೋಪ್ಯ ಒಕ್ಕೂಟದ ಜೊತೆ ಯಾವ ರೀತಿಯ ಭವಿಷ್ಯದ ಸಂಬಂಧವನ್ನು ಒಪ್ಪಲು ಸಿದ್ಧರಿದ್ದೀರಿ ಎಂಬ ಕುರಿತು ತಮ್ಮದೇ ಪಕ್ಷದೊಳಗಿನ ಬ್ರೆಕ್ಸಿಟ್ ಬೆಂಬಲಿಗರ ಜೊತೆ ಮೂರು ವರ್ಷಗಳ ಕಠಿಣ ಚೌಕಾಸಿಯ ಬಳಿಕ ಮೇ ಅವರ ನಿರ್ಗಮನವಾಗುತ್ತಿದೆ. 2017ರ ಸಾರ್ವತ್ರಿಕ ಚುನಾವಣೆಯಲ್ಲಿ ‘ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸದೃಢ ಮತ್ತು ಸ್ಥಿರ ನಾಯಕತ್ವ’ದ ಭರವಸೆ ನೀಡುವ ದುರಂತಕಾರಿ ಎಂದು ಬಣ್ಣಿಸಲಾಗುವ ಪ್ರಚಾರದ ನೇತೃತ್ವ ವಹಿಸಿದ್ದ ಮೇ ಅವರು ಬಹುಮತ ಕಳೆದುಕೊಂಡ ಬಳಿಕ ಈ ಕೆಲಸ ಇನ್ನಷ್ಟು ಕಠಿಣವಾಯಿತು.

ನಂತರ ರೂಪಿಸಿದ ಹತ್ತು ಅಂಶಗಳ ‘ಹೊಸ ಬ್ರೆಕ್ಸಿಟ್ ಒಪ್ಪಂದ’ವು ಪ್ರತಿಪಕ್ಷಗಳು ಬಿಡಿ, ಅವರದ್ದೇ ಟೋರಿ (ಕನ್ಸರ್ವೇಟಿವ್) ಪಕ್ಷದ ಸಾಮಾನ್ಯ ಸಂಸದರು ಮಾತ್ರವಲ್ಲ, ಅವರದ್ದೇ ಸಂಪುಟದ ಕೆಲವು ಸದಸ್ಯರನ್ನೂ ಕೆಂಡಾಮಂಡಲಗೊಳಿಸಿದ ಬಳಿಕ ಅವರ ಗತಿ ಖಚಿತವಾಗಿತ್ತು. ಹೌಸ್ ಆಫ್ ಕಾಮನ್ಸ್ (ಕೆಳಮನೆ) ನಾಯಕಿ ಆಂಡ್ರಿಯಾ ಲೀಡ್‌ಸಂ ಅವರು ಈ ಬ್ರೆಕ್ಸಿಟ್ ಮಸೂದೆಯನ್ನು ಮಂಡಿಸುವುದಕ್ಕೆ ಬದಲಾಗಿ ಬುಧವಾರ ರಾಜೀನಾಮೆಯನ್ನೇ ನೀಡಿದ್ದರು.

ಅವರ ಮಾಜಿ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಅವರು ಮುಂದಿನ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿದ್ದು, ಒಂದು ಡಜನಿಗೂ ಹೆಚ್ಚು ಹಿರಿಯ ಟೋರಿ ನಾಯಕರು ಈ ಪದಕ್ಕಾಗಿ ಹೊಂಚುತ್ತಿದ್ದಾರೆ.

ಬ್ರಿಟನ್‌ಗೆ ಮುಂದೇನು ಕಾದಿದೆ?

ಮೇ ಅವರ ನಿರ್ಗಮನದ ಬಳಿಕ ಹೊಸ ನಾಯಕತ್ವದಲ್ಲಿ ಬ್ರೆಕ್ಸಿಟ್ ಬಿಕ್ಕಟ್ಟು ತೀವ್ರವಾಗಲಿದ್ದು, ಹೊಸ ನಾಯಕತ್ವದಲ್ಲಿ ಐರೋಪ್ಯ ಒಕ್ಕೂಟದ ಜೊತೆ ಸಂಘರ್ಷದ ಸಾಧ್ಯತೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ, ಸಾರ್ವತ್ರಿಕ ಚುನಾವಣೆ ನಡೆದು ಜೆರೆಮಿ ಕೋರ್ಬಿನ್ ನೇತೃತ್ವದ ಲೇಬರ್ ಪಕ್ಷದ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯೂ ಇದೆ. ಹಾಗಾದಲ್ಲಿ ಬ್ರಿಟನ್‌ಗೆ ಕ್ರಮಬದ್ಧವಾದ ಹಿಂತೆಗೆತ ಒಪ್ಪಂದ, ಒಪ್ಪಂದ ರಹಿತ ಹಿಂತೆಗೆತ, ಚುನಾವಣೆ, ಅಥವಾ ಐರೋಪ್ಯ ಒಕ್ಕೂಟದಿಂದ ಹೊರಬರುವ 2016ರ ನಿರ್ಧಾರವನ್ನೇ ತಲೆಕೆಳಗು ಮಾಡುವ ಸಾಧ್ಯತೆ ಇರುವ ಎರಡನೇ ಜನಮತಗಣನೆ ಇತ್ಯಾದಿಯಾಗಿ ಹಲವು ಸಾಧ್ಯತೆಗಳು ಎದುರಾಗಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತೆರೆಸಾ ಮೇ ಗೆ Exit ಎಂದ ಬ್ರಿಟನ್ – ಲೇಖನ ಓದಿ ನನಗೆ ಮೆಚ್ಚುಗೆ ಆಯಿತು. ಲೇಖಕರು ಸರಳವಾಗಿ EU ಬಗ್ಗೆ ಮತ್ತು ಬ್ರಿಟನ್ ನ Exit ತೊಳಲಾಟದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿವರಗಳಿಗೆ ಧಕ್ಕೆ ಆಗದಂತೆ ವಿವರಿಸಿದ್ದಾರೆ. ಧನ್ಯವಾದಗಳು.

  2. ಸಂಪಾದಕರಲ್ಲಿ ನಮ್ಮ ನಮಸ್ಕಾರಗಳು,

    ತಮ್ಮ ಅಂಕಣದಲ್ಲಿ ಬಂದಂತಹ ಬರಹಗಳು ತುಂಬಾ ಅರ್ಥಪೂರ್ಣವಾಗಿರುತ್ತದೆ ಮತ್ತು ತುಂಬಾ ಚೆನ್ನಾಗಿ ಮೂಡಿಬಂದಿರುತ್ತದೆ ಮತ್ತೊಮ್ಮೆ ತಮಗೆ ಹೃದಯ ಪೂರಕವಾಗಿ ಅಭಿನಂದನೆಗಳು.🙏✍

  3. ಸಂಪಾದಕರಲ್ಲಿ ಸವಿನಯ ಪ್ರಾರ್ಥನೆಗಳು, ಕೇಂದ್ರ ಸರ್ಕಾರದವರು ತಮಗೆ ಸ್ಪಂದಿಸದಿದ್ದರೆ, ಇ ಡಿ ಪ್ರಕರಣದಲ್ಲಿ ದಾಖಲಿಸುತ್ತಾರೆ ಯಾಕೆ? ಮತ್ತು ತಮ್ಮಲ್ಲಿರುವ ಸಮಾಜ ಸೇವಕರಲ್ಲಿ ಇಲ್ಲಿಯವರೆಗೂ ಯಾವ ವ್ಯಕ್ತಿಯೂ ಕೂಡಾ ತನಿಖೆಗೆ ವಹಿಸಿಕೊಟ್ಟಿಲ್ಲಾ ಈ ರೀತಿ ಮಾಡುವುದು ಸರಿಯೇ ಇದು ನಮ್ಮ ಪ್ರಶ್ನೆಯಾಗಿದೆ ದಯಮಾಡಿ ಉತ್ತರಿಸಿರಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...