Homeನಿಜವೋ ಸುಳ್ಳೋಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

ಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

- Advertisement -
- Advertisement -

ಇಲ್ಲಿ ತಾಯಿ ಮತ್ತು ಬಾಲಕ ಇರುವ ಫೋಟೊ ನೋಡಿ. ಅದರಲ್ಲಿರುವ ಬಾಲಕ ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಅಬ್ದುಲ್ ಕಲಾಂ ಅಂತ ಒಂದು ವಾದ ತೇಲಿ ಬಂತು. ನಂತರ ಇದೇ ಫೋಟೊ ಹಾಕಿದ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ‘ದೇಶಕ್ಕೆ ಇವತ್ತು ಅಪದ್ಭಾವಂತನಾಗಿ ಬಂದಿದ್ದು ಇದೇ ಬಾಲಕ.. ಇದು ಮೋದಿಯ ಬಾಲ್ಯದ ಫೋಟೋ ಎಂದು ಪ್ರಚಾರ ಮಾಡಿದ್ದವು.

ಈ ಫೋಟೊದಲ್ಲಿರುವುದು ಬಾಲ ಮೋದಿಯೋ ಅಥವಾ ಬಾಲ ಕಲಾಂರೋ ಎನ್ನುವುದಂತೂ ಆರೋಗ್ಯಕರ ಮನಸ್ಸುಗಳಿಗೆ ಗಂಭೀರ ವಿಷಯವಂತೂ ಅಲ್ಲವೇ ಅಲ್ಲ. ನಮ್ಮ ತಂಡಕ್ಕೂ ಅದೇ ಅಭಿಪ್ರಾಯವಿದ್ದರೂ, ಇಂತಹ ಸಣ್ಣ ವಿಷಯಗಳ ಹಿಂದಿನ ಸತ್ಯಾಸತ್ಯತೆ ತಿಳಿಸುವುದು ನಮ್ಮ ಜವಾಬ್ದಾರಿ. ಅದೆಲ್ಲಕ್ಕಿಂತ ಮುಖ್ಯವಾಗಿ ಫೇಕ್ ಸುದ್ದಿಗಳ ಈ ಕಾಲದಲ್ಲಿ ಸಾಮಾನ್ಯ ಕುಟುಂಬವೊಂದರ ಗ್ರೂಪ್ ಫೋಟೊವನ್ನೂ ಹೇಗೆ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಜನರ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶ. ಜನಸಾಮಾನ್ಯರ ಖಾಸಗಿ ಬದುಕಿನ ಫೋಟೊಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅಸಹ್ಯ ಚಾಳಿಯನ್ನು ತೋರಿಸಲು ಇದನ್ನು ಪ್ರಕಟಿಸುತ್ತಿದ್ದೇವೆ.

ಇಲ್ಲಿ ಮಹಿಳೆಯಬ್ಬರು ಬಾಲಕನ ಜೊತೆ ಇರುವ ಫೋಟೊ ಗಮನಿಸಿ. ಕಳೆದ ವಾರದಿಂದಲೂ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ಈ ಫೋಟೊ ಬಳಸಿ, ತಾಯಿ ಹಿರಾಬೆನ್ ಜೊತೆಗೆ ಬಾಲಕ ಮೋದಿ ಎಂದು ಪ್ರಚಾರ ಮಾಡಿದ್ದಾರೆ. ಇದರಿಂದ ದೇಶಕ್ಕೇನೂ ನಷ್ಟವಿಲ್ಲ ಅಂತ ಅನಿಸಬಹುದು. ಆದರೆ ಫೇಸ್‍ಬುಕ್ ಬಳಕೆದಾರರೊಬ್ಬರು ಈ ಫೋಟೊ ಹಾಕಿ, ಅದರ ಮೇಲೆ ಹಿಂದಿಯಲ್ದಿ, ‘ 132 ಕೋಟಿ ಜನರನ್ನು ಶಾಕ್ ಮಾಡಿದ್ದು ಇದೇ ಬಾಲಕ…’ ಎಂಬ ಸಾಲು ಲಗತ್ತಿಸಿ, ‘ಜೈದೇವ್, ತಾಯಿಯೊಂದಿಗೆ ನರೇಂದ್ರ ಮೋದಿಯ ಬಾಲ್ಯದ ಫೋಟೋ’ ಎಂದು ಪೋಸ್ಟ್ ಹಾಕಿದ್ದರು. ಸಾವಿರಾರು ಟ್ವೀಟರ್ ಮತ್ತು ವ್ಯಾಟ್ಸಾಪ್ ಬಳಕೆದಾರರು ಇದೇ ಸಂದೇಶದೊಂದಿಗೆ ಈ ಫೋಟೊವನ್ನು ಶೇರ್ ಮಾಡಿದರು, ಮಾಡುತ್ತಲೇ ಇದ್ದಾರೆ.

ನಿಜಕ್ಕೂ ಇದು ಬಾಲಕ ಮೋದಿ ಮತ್ತು ತಾಯಿಯ ಫೋಟೊವೇ?
ಈ ಕುರಿತು ಅಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದಾಗ, ಫೋಟೊದಲ್ಲಿರುವ ಬಾಲಕ ಮೋದಿ ಅಲ್ಲ ಎಂಬುದು ಖಾತ್ರಿಯಾಗಿತು. ಜೊತೆಗೆ ಇನ್ನಷ್ಟು ವಿಚಿತ್ರ ಸಂಗತಿಗಳು ಹೊರಬಂದವು. ಇದೇ ಫೋಟೊವನ್ನು ಪ್ರಕಟಿಸಿ ಹಲವಾರು ಮಾಧ್ಯಮಗಳು ತಪ್ಪು ಎಸಗಿದ್ದವು. ಮೇ8, 2016ರಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ಒಂದು ಬರಹದಲ್ಲಿ ಇದೇ ಫೋಟೊ ಹಾಕಿ, ‘ಐಶಿಯಮ್ಮ ಜೈನಿಲುಬುದ್ದಿನ್, ಕಲಾಂ ತಾಯಿ’ ಎಂದು ಕ್ಯಾಪ್ಸನ್ ನೀಡಲಾಗಿತ್ತು.

ಶೋಧ ಮುಂದುವರೆಸಿದಾಗ, ಮೇಲೆ ಬಳಸಿದ ಆ ಎರಡು ಫೋಟೊಗಳು ಒಂದೇ ಎಂಬುದು ಪಕ್ಕಾ ಆಗಿತು. ಆದರೆ, ಒಂದು ಗ್ರೂಪ್ ಫೋಟೊದಿಂದ ಕತ್ತರಿಸಿ ಈ ಅರೆಬರೆ ಫೋಟೊವನ್ನು ಬಳಸಲಾಗಿತ್ತು.

ಈ ಫೋಟೊದ ಮೂಲ ಯಾವುದು?
2013ರ ಆಗಸ್ಟ್ ನಲ್ಲಿ ಈ ಫೋಟೊವನ್ನು ಬ್ಲಾಗ್ ಒಂದರಲ್ಲಿ ಬಳಸಲಾಗಿತ್ತು. ಜುಲೈ 2018ರಲ್ಲಿ ಕಲಾಂರ ಜಯಂತಿಯಂದು ಜಾಗೃಣ್ ಸಮೂಹ ಎಂಬ ಶೈಕ್ಷಣಿಕ ಸಂಸ್ಥೆಯ ಜಾಗೃಣ್ ಪೋರ್ಟಲ್‍ನಲ್ಲ್ಲಿ ಇದೇ ಫೋಟೊ ಬಳಸಿ, ತಾಯಿಯೊಂದಿಗೆ ಬಾಲಕ ಕಲಾಂ ಎಂದು ಬರೆಯಲಾಗಿತ್ತು.

ಕೊನೆಗೆ ಆಲ್ಟ್ ನ್ಯೂಸ್ ಕಲಾಂರ ಸಮೀಪದ ಸಂಬಂಧಿಕ ಅಜ್ಜನ ಕಡೆಯವರು, ಹಾಗೆಯೇ ಕಲಾಂ ಇಂಟರ್‍ನ್ಯಾಷನಲ್ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿಯೂ ಆಗಿರುವ ಶೇಖ ಸಲೀಮರನ್ನು ಸಂಪರ್ಕಿಸಿದಾಗ, ‘ಇದರಲ್ಲಿರುವುದು ಕಲಾಂ ಅಥವಾ ತಾಯಿ ಅಲ್ಲವೇ ಅಲ್ಲ, ಕಲಾಂ ಆ ವಯಸ್ಸಿನವರು ಆಗಿರುವ ಸಂದರ್ಭದಲ್ಲಿನ ಯಾವ ಫೋಟೊವೂ ಲಭ್ಯ ಇಲ್ಲ. ಆ ಸಂದರ್ಭದಲ್ಲಿ ಕಲಾಂ ತಾವು ಫೋಟೊ ತೆಗಿಸಿಕೊಳ್ಳಲು ಹಿಂಜರಿಯುತ್ತಿದ್ದ ಮುಗ್ಧ ಆಗಿದ್ದರು. ‘ಹೌಸ್ ಆಫ್ ಕಲಾಂ’ನಲ್ಲಿ ಇರುವ ಫೋಟೊಗಳ ಪೈಕಿ ಕಲಾಂರ ಚಿಕ್ಕಂದಿನ ಫೋಟೊ ಎಂದರೆ ಅವರು ಕಾಲೇಜು ಸೇರುವಾಗ ತೆಗೆಸಿದ್ದು’ ಎಂದು ಸತ್ಯದ ಅನಾವರಣ ಮಾಡಿದರು..

ಯುವಕ ಕಲಾಂ ಫೋಟೊ

ಅಂದರೆ ಯಾವುದೋ ಒಂದು ಅಪರಿಚಿತ ಸಾಮಾನ್ಯ ಕುಟುಂಬದ ಗ್ರೂಪ್ ಫೋಟೊ ಈ ತಂತ್ರಜ್ಷಾನ ಕಾಲದಲ್ಲಿ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸಲು ಈ ಬರಹವನ್ನು ನಾನುಗೌರಿ.ಕಾಮ್ ಪ್ರಕಟಿಸುತ್ತಿದೆ.

ಇಲ್ಲಿ ಇಂಡಿಯಾಟುಡೇ ಕಣ್ತಪ್ಪನಿಂದ, ಜಾಗೃಣ ಸಂಸ್ಥೆ ಅಜ್ಞಾನದಿಂದ ತಪ್ಪು ಮಾಡಿರಬಹುದು, ಆದರೆ ಇದು ಬಾಲಕ ಮೋದಿ ಎಂದು ಹಬ್ಬಿಸಿರುವುದರ ಜನರನ್ನು ಕ್ಷಮಿಸಲಾಗದು. ‘ಇದೇ ಬಾಲಕ ನೋಡಿ 130 ಕೋಟಿ ಗೆದ್ದಿರುವುದು’ ಎಂದು ಹಾಕುವಾಗ ನಿಜವಾದ ಬಾಲಕ ಮೊದಿಯ ಫೋಟೊ ಹಾಕಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ.

ಪಾಪ, ಮೋದಿಯವರೆ ಅವರ ಬಾಲ್ಯದ ಕುರಿತು ಕನಫ್ಯೂಸ್ ಮಡುತ್ತ ಬಂದಿದ್ದಾರಲ್ಲ? ಭಕ್ತರೇ ಮೋದಿಯ ಬಾಲ್ಯದ ಫೋಟೊ ಸಿಗಲ್ಲ, ಆದರೆ ಯಾವುದೋ ಮಗುವಿನ, ಕುಟುಂಬದ ಫೋಟೊ ಬಳಸಬೇಡಿ. ಅಷ್ಟಾದರೂ ಸೂಕ್ಷ್ಮ ಕಲಿಯಿರಿ.
(ಆಧಾರ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...