Homeನಿಜವೋ ಸುಳ್ಳೋಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

ಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

- Advertisement -
- Advertisement -

ಇಲ್ಲಿ ತಾಯಿ ಮತ್ತು ಬಾಲಕ ಇರುವ ಫೋಟೊ ನೋಡಿ. ಅದರಲ್ಲಿರುವ ಬಾಲಕ ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಅಬ್ದುಲ್ ಕಲಾಂ ಅಂತ ಒಂದು ವಾದ ತೇಲಿ ಬಂತು. ನಂತರ ಇದೇ ಫೋಟೊ ಹಾಕಿದ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ‘ದೇಶಕ್ಕೆ ಇವತ್ತು ಅಪದ್ಭಾವಂತನಾಗಿ ಬಂದಿದ್ದು ಇದೇ ಬಾಲಕ.. ಇದು ಮೋದಿಯ ಬಾಲ್ಯದ ಫೋಟೋ ಎಂದು ಪ್ರಚಾರ ಮಾಡಿದ್ದವು.

ಈ ಫೋಟೊದಲ್ಲಿರುವುದು ಬಾಲ ಮೋದಿಯೋ ಅಥವಾ ಬಾಲ ಕಲಾಂರೋ ಎನ್ನುವುದಂತೂ ಆರೋಗ್ಯಕರ ಮನಸ್ಸುಗಳಿಗೆ ಗಂಭೀರ ವಿಷಯವಂತೂ ಅಲ್ಲವೇ ಅಲ್ಲ. ನಮ್ಮ ತಂಡಕ್ಕೂ ಅದೇ ಅಭಿಪ್ರಾಯವಿದ್ದರೂ, ಇಂತಹ ಸಣ್ಣ ವಿಷಯಗಳ ಹಿಂದಿನ ಸತ್ಯಾಸತ್ಯತೆ ತಿಳಿಸುವುದು ನಮ್ಮ ಜವಾಬ್ದಾರಿ. ಅದೆಲ್ಲಕ್ಕಿಂತ ಮುಖ್ಯವಾಗಿ ಫೇಕ್ ಸುದ್ದಿಗಳ ಈ ಕಾಲದಲ್ಲಿ ಸಾಮಾನ್ಯ ಕುಟುಂಬವೊಂದರ ಗ್ರೂಪ್ ಫೋಟೊವನ್ನೂ ಹೇಗೆ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಜನರ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶ. ಜನಸಾಮಾನ್ಯರ ಖಾಸಗಿ ಬದುಕಿನ ಫೋಟೊಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅಸಹ್ಯ ಚಾಳಿಯನ್ನು ತೋರಿಸಲು ಇದನ್ನು ಪ್ರಕಟಿಸುತ್ತಿದ್ದೇವೆ.

ಇಲ್ಲಿ ಮಹಿಳೆಯಬ್ಬರು ಬಾಲಕನ ಜೊತೆ ಇರುವ ಫೋಟೊ ಗಮನಿಸಿ. ಕಳೆದ ವಾರದಿಂದಲೂ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ಈ ಫೋಟೊ ಬಳಸಿ, ತಾಯಿ ಹಿರಾಬೆನ್ ಜೊತೆಗೆ ಬಾಲಕ ಮೋದಿ ಎಂದು ಪ್ರಚಾರ ಮಾಡಿದ್ದಾರೆ. ಇದರಿಂದ ದೇಶಕ್ಕೇನೂ ನಷ್ಟವಿಲ್ಲ ಅಂತ ಅನಿಸಬಹುದು. ಆದರೆ ಫೇಸ್‍ಬುಕ್ ಬಳಕೆದಾರರೊಬ್ಬರು ಈ ಫೋಟೊ ಹಾಕಿ, ಅದರ ಮೇಲೆ ಹಿಂದಿಯಲ್ದಿ, ‘ 132 ಕೋಟಿ ಜನರನ್ನು ಶಾಕ್ ಮಾಡಿದ್ದು ಇದೇ ಬಾಲಕ…’ ಎಂಬ ಸಾಲು ಲಗತ್ತಿಸಿ, ‘ಜೈದೇವ್, ತಾಯಿಯೊಂದಿಗೆ ನರೇಂದ್ರ ಮೋದಿಯ ಬಾಲ್ಯದ ಫೋಟೋ’ ಎಂದು ಪೋಸ್ಟ್ ಹಾಕಿದ್ದರು. ಸಾವಿರಾರು ಟ್ವೀಟರ್ ಮತ್ತು ವ್ಯಾಟ್ಸಾಪ್ ಬಳಕೆದಾರರು ಇದೇ ಸಂದೇಶದೊಂದಿಗೆ ಈ ಫೋಟೊವನ್ನು ಶೇರ್ ಮಾಡಿದರು, ಮಾಡುತ್ತಲೇ ಇದ್ದಾರೆ.

ನಿಜಕ್ಕೂ ಇದು ಬಾಲಕ ಮೋದಿ ಮತ್ತು ತಾಯಿಯ ಫೋಟೊವೇ?
ಈ ಕುರಿತು ಅಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದಾಗ, ಫೋಟೊದಲ್ಲಿರುವ ಬಾಲಕ ಮೋದಿ ಅಲ್ಲ ಎಂಬುದು ಖಾತ್ರಿಯಾಗಿತು. ಜೊತೆಗೆ ಇನ್ನಷ್ಟು ವಿಚಿತ್ರ ಸಂಗತಿಗಳು ಹೊರಬಂದವು. ಇದೇ ಫೋಟೊವನ್ನು ಪ್ರಕಟಿಸಿ ಹಲವಾರು ಮಾಧ್ಯಮಗಳು ತಪ್ಪು ಎಸಗಿದ್ದವು. ಮೇ8, 2016ರಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ಒಂದು ಬರಹದಲ್ಲಿ ಇದೇ ಫೋಟೊ ಹಾಕಿ, ‘ಐಶಿಯಮ್ಮ ಜೈನಿಲುಬುದ್ದಿನ್, ಕಲಾಂ ತಾಯಿ’ ಎಂದು ಕ್ಯಾಪ್ಸನ್ ನೀಡಲಾಗಿತ್ತು.

ಶೋಧ ಮುಂದುವರೆಸಿದಾಗ, ಮೇಲೆ ಬಳಸಿದ ಆ ಎರಡು ಫೋಟೊಗಳು ಒಂದೇ ಎಂಬುದು ಪಕ್ಕಾ ಆಗಿತು. ಆದರೆ, ಒಂದು ಗ್ರೂಪ್ ಫೋಟೊದಿಂದ ಕತ್ತರಿಸಿ ಈ ಅರೆಬರೆ ಫೋಟೊವನ್ನು ಬಳಸಲಾಗಿತ್ತು.

ಈ ಫೋಟೊದ ಮೂಲ ಯಾವುದು?
2013ರ ಆಗಸ್ಟ್ ನಲ್ಲಿ ಈ ಫೋಟೊವನ್ನು ಬ್ಲಾಗ್ ಒಂದರಲ್ಲಿ ಬಳಸಲಾಗಿತ್ತು. ಜುಲೈ 2018ರಲ್ಲಿ ಕಲಾಂರ ಜಯಂತಿಯಂದು ಜಾಗೃಣ್ ಸಮೂಹ ಎಂಬ ಶೈಕ್ಷಣಿಕ ಸಂಸ್ಥೆಯ ಜಾಗೃಣ್ ಪೋರ್ಟಲ್‍ನಲ್ಲ್ಲಿ ಇದೇ ಫೋಟೊ ಬಳಸಿ, ತಾಯಿಯೊಂದಿಗೆ ಬಾಲಕ ಕಲಾಂ ಎಂದು ಬರೆಯಲಾಗಿತ್ತು.

ಕೊನೆಗೆ ಆಲ್ಟ್ ನ್ಯೂಸ್ ಕಲಾಂರ ಸಮೀಪದ ಸಂಬಂಧಿಕ ಅಜ್ಜನ ಕಡೆಯವರು, ಹಾಗೆಯೇ ಕಲಾಂ ಇಂಟರ್‍ನ್ಯಾಷನಲ್ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿಯೂ ಆಗಿರುವ ಶೇಖ ಸಲೀಮರನ್ನು ಸಂಪರ್ಕಿಸಿದಾಗ, ‘ಇದರಲ್ಲಿರುವುದು ಕಲಾಂ ಅಥವಾ ತಾಯಿ ಅಲ್ಲವೇ ಅಲ್ಲ, ಕಲಾಂ ಆ ವಯಸ್ಸಿನವರು ಆಗಿರುವ ಸಂದರ್ಭದಲ್ಲಿನ ಯಾವ ಫೋಟೊವೂ ಲಭ್ಯ ಇಲ್ಲ. ಆ ಸಂದರ್ಭದಲ್ಲಿ ಕಲಾಂ ತಾವು ಫೋಟೊ ತೆಗಿಸಿಕೊಳ್ಳಲು ಹಿಂಜರಿಯುತ್ತಿದ್ದ ಮುಗ್ಧ ಆಗಿದ್ದರು. ‘ಹೌಸ್ ಆಫ್ ಕಲಾಂ’ನಲ್ಲಿ ಇರುವ ಫೋಟೊಗಳ ಪೈಕಿ ಕಲಾಂರ ಚಿಕ್ಕಂದಿನ ಫೋಟೊ ಎಂದರೆ ಅವರು ಕಾಲೇಜು ಸೇರುವಾಗ ತೆಗೆಸಿದ್ದು’ ಎಂದು ಸತ್ಯದ ಅನಾವರಣ ಮಾಡಿದರು..

ಯುವಕ ಕಲಾಂ ಫೋಟೊ

ಅಂದರೆ ಯಾವುದೋ ಒಂದು ಅಪರಿಚಿತ ಸಾಮಾನ್ಯ ಕುಟುಂಬದ ಗ್ರೂಪ್ ಫೋಟೊ ಈ ತಂತ್ರಜ್ಷಾನ ಕಾಲದಲ್ಲಿ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸಲು ಈ ಬರಹವನ್ನು ನಾನುಗೌರಿ.ಕಾಮ್ ಪ್ರಕಟಿಸುತ್ತಿದೆ.

ಇಲ್ಲಿ ಇಂಡಿಯಾಟುಡೇ ಕಣ್ತಪ್ಪನಿಂದ, ಜಾಗೃಣ ಸಂಸ್ಥೆ ಅಜ್ಞಾನದಿಂದ ತಪ್ಪು ಮಾಡಿರಬಹುದು, ಆದರೆ ಇದು ಬಾಲಕ ಮೋದಿ ಎಂದು ಹಬ್ಬಿಸಿರುವುದರ ಜನರನ್ನು ಕ್ಷಮಿಸಲಾಗದು. ‘ಇದೇ ಬಾಲಕ ನೋಡಿ 130 ಕೋಟಿ ಗೆದ್ದಿರುವುದು’ ಎಂದು ಹಾಕುವಾಗ ನಿಜವಾದ ಬಾಲಕ ಮೊದಿಯ ಫೋಟೊ ಹಾಕಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ.

ಪಾಪ, ಮೋದಿಯವರೆ ಅವರ ಬಾಲ್ಯದ ಕುರಿತು ಕನಫ್ಯೂಸ್ ಮಡುತ್ತ ಬಂದಿದ್ದಾರಲ್ಲ? ಭಕ್ತರೇ ಮೋದಿಯ ಬಾಲ್ಯದ ಫೋಟೊ ಸಿಗಲ್ಲ, ಆದರೆ ಯಾವುದೋ ಮಗುವಿನ, ಕುಟುಂಬದ ಫೋಟೊ ಬಳಸಬೇಡಿ. ಅಷ್ಟಾದರೂ ಸೂಕ್ಷ್ಮ ಕಲಿಯಿರಿ.
(ಆಧಾರ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...