Homeನಿಜವೋ ಸುಳ್ಳೋಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

ಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

- Advertisement -
- Advertisement -

ಇಲ್ಲಿ ತಾಯಿ ಮತ್ತು ಬಾಲಕ ಇರುವ ಫೋಟೊ ನೋಡಿ. ಅದರಲ್ಲಿರುವ ಬಾಲಕ ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಅಬ್ದುಲ್ ಕಲಾಂ ಅಂತ ಒಂದು ವಾದ ತೇಲಿ ಬಂತು. ನಂತರ ಇದೇ ಫೋಟೊ ಹಾಕಿದ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ‘ದೇಶಕ್ಕೆ ಇವತ್ತು ಅಪದ್ಭಾವಂತನಾಗಿ ಬಂದಿದ್ದು ಇದೇ ಬಾಲಕ.. ಇದು ಮೋದಿಯ ಬಾಲ್ಯದ ಫೋಟೋ ಎಂದು ಪ್ರಚಾರ ಮಾಡಿದ್ದವು.

ಈ ಫೋಟೊದಲ್ಲಿರುವುದು ಬಾಲ ಮೋದಿಯೋ ಅಥವಾ ಬಾಲ ಕಲಾಂರೋ ಎನ್ನುವುದಂತೂ ಆರೋಗ್ಯಕರ ಮನಸ್ಸುಗಳಿಗೆ ಗಂಭೀರ ವಿಷಯವಂತೂ ಅಲ್ಲವೇ ಅಲ್ಲ. ನಮ್ಮ ತಂಡಕ್ಕೂ ಅದೇ ಅಭಿಪ್ರಾಯವಿದ್ದರೂ, ಇಂತಹ ಸಣ್ಣ ವಿಷಯಗಳ ಹಿಂದಿನ ಸತ್ಯಾಸತ್ಯತೆ ತಿಳಿಸುವುದು ನಮ್ಮ ಜವಾಬ್ದಾರಿ. ಅದೆಲ್ಲಕ್ಕಿಂತ ಮುಖ್ಯವಾಗಿ ಫೇಕ್ ಸುದ್ದಿಗಳ ಈ ಕಾಲದಲ್ಲಿ ಸಾಮಾನ್ಯ ಕುಟುಂಬವೊಂದರ ಗ್ರೂಪ್ ಫೋಟೊವನ್ನೂ ಹೇಗೆ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಜನರ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶ. ಜನಸಾಮಾನ್ಯರ ಖಾಸಗಿ ಬದುಕಿನ ಫೋಟೊಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅಸಹ್ಯ ಚಾಳಿಯನ್ನು ತೋರಿಸಲು ಇದನ್ನು ಪ್ರಕಟಿಸುತ್ತಿದ್ದೇವೆ.

ಇಲ್ಲಿ ಮಹಿಳೆಯಬ್ಬರು ಬಾಲಕನ ಜೊತೆ ಇರುವ ಫೋಟೊ ಗಮನಿಸಿ. ಕಳೆದ ವಾರದಿಂದಲೂ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ಈ ಫೋಟೊ ಬಳಸಿ, ತಾಯಿ ಹಿರಾಬೆನ್ ಜೊತೆಗೆ ಬಾಲಕ ಮೋದಿ ಎಂದು ಪ್ರಚಾರ ಮಾಡಿದ್ದಾರೆ. ಇದರಿಂದ ದೇಶಕ್ಕೇನೂ ನಷ್ಟವಿಲ್ಲ ಅಂತ ಅನಿಸಬಹುದು. ಆದರೆ ಫೇಸ್‍ಬುಕ್ ಬಳಕೆದಾರರೊಬ್ಬರು ಈ ಫೋಟೊ ಹಾಕಿ, ಅದರ ಮೇಲೆ ಹಿಂದಿಯಲ್ದಿ, ‘ 132 ಕೋಟಿ ಜನರನ್ನು ಶಾಕ್ ಮಾಡಿದ್ದು ಇದೇ ಬಾಲಕ…’ ಎಂಬ ಸಾಲು ಲಗತ್ತಿಸಿ, ‘ಜೈದೇವ್, ತಾಯಿಯೊಂದಿಗೆ ನರೇಂದ್ರ ಮೋದಿಯ ಬಾಲ್ಯದ ಫೋಟೋ’ ಎಂದು ಪೋಸ್ಟ್ ಹಾಕಿದ್ದರು. ಸಾವಿರಾರು ಟ್ವೀಟರ್ ಮತ್ತು ವ್ಯಾಟ್ಸಾಪ್ ಬಳಕೆದಾರರು ಇದೇ ಸಂದೇಶದೊಂದಿಗೆ ಈ ಫೋಟೊವನ್ನು ಶೇರ್ ಮಾಡಿದರು, ಮಾಡುತ್ತಲೇ ಇದ್ದಾರೆ.

ನಿಜಕ್ಕೂ ಇದು ಬಾಲಕ ಮೋದಿ ಮತ್ತು ತಾಯಿಯ ಫೋಟೊವೇ?
ಈ ಕುರಿತು ಅಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದಾಗ, ಫೋಟೊದಲ್ಲಿರುವ ಬಾಲಕ ಮೋದಿ ಅಲ್ಲ ಎಂಬುದು ಖಾತ್ರಿಯಾಗಿತು. ಜೊತೆಗೆ ಇನ್ನಷ್ಟು ವಿಚಿತ್ರ ಸಂಗತಿಗಳು ಹೊರಬಂದವು. ಇದೇ ಫೋಟೊವನ್ನು ಪ್ರಕಟಿಸಿ ಹಲವಾರು ಮಾಧ್ಯಮಗಳು ತಪ್ಪು ಎಸಗಿದ್ದವು. ಮೇ8, 2016ರಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ಒಂದು ಬರಹದಲ್ಲಿ ಇದೇ ಫೋಟೊ ಹಾಕಿ, ‘ಐಶಿಯಮ್ಮ ಜೈನಿಲುಬುದ್ದಿನ್, ಕಲಾಂ ತಾಯಿ’ ಎಂದು ಕ್ಯಾಪ್ಸನ್ ನೀಡಲಾಗಿತ್ತು.

ಶೋಧ ಮುಂದುವರೆಸಿದಾಗ, ಮೇಲೆ ಬಳಸಿದ ಆ ಎರಡು ಫೋಟೊಗಳು ಒಂದೇ ಎಂಬುದು ಪಕ್ಕಾ ಆಗಿತು. ಆದರೆ, ಒಂದು ಗ್ರೂಪ್ ಫೋಟೊದಿಂದ ಕತ್ತರಿಸಿ ಈ ಅರೆಬರೆ ಫೋಟೊವನ್ನು ಬಳಸಲಾಗಿತ್ತು.

ಈ ಫೋಟೊದ ಮೂಲ ಯಾವುದು?
2013ರ ಆಗಸ್ಟ್ ನಲ್ಲಿ ಈ ಫೋಟೊವನ್ನು ಬ್ಲಾಗ್ ಒಂದರಲ್ಲಿ ಬಳಸಲಾಗಿತ್ತು. ಜುಲೈ 2018ರಲ್ಲಿ ಕಲಾಂರ ಜಯಂತಿಯಂದು ಜಾಗೃಣ್ ಸಮೂಹ ಎಂಬ ಶೈಕ್ಷಣಿಕ ಸಂಸ್ಥೆಯ ಜಾಗೃಣ್ ಪೋರ್ಟಲ್‍ನಲ್ಲ್ಲಿ ಇದೇ ಫೋಟೊ ಬಳಸಿ, ತಾಯಿಯೊಂದಿಗೆ ಬಾಲಕ ಕಲಾಂ ಎಂದು ಬರೆಯಲಾಗಿತ್ತು.

ಕೊನೆಗೆ ಆಲ್ಟ್ ನ್ಯೂಸ್ ಕಲಾಂರ ಸಮೀಪದ ಸಂಬಂಧಿಕ ಅಜ್ಜನ ಕಡೆಯವರು, ಹಾಗೆಯೇ ಕಲಾಂ ಇಂಟರ್‍ನ್ಯಾಷನಲ್ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿಯೂ ಆಗಿರುವ ಶೇಖ ಸಲೀಮರನ್ನು ಸಂಪರ್ಕಿಸಿದಾಗ, ‘ಇದರಲ್ಲಿರುವುದು ಕಲಾಂ ಅಥವಾ ತಾಯಿ ಅಲ್ಲವೇ ಅಲ್ಲ, ಕಲಾಂ ಆ ವಯಸ್ಸಿನವರು ಆಗಿರುವ ಸಂದರ್ಭದಲ್ಲಿನ ಯಾವ ಫೋಟೊವೂ ಲಭ್ಯ ಇಲ್ಲ. ಆ ಸಂದರ್ಭದಲ್ಲಿ ಕಲಾಂ ತಾವು ಫೋಟೊ ತೆಗಿಸಿಕೊಳ್ಳಲು ಹಿಂಜರಿಯುತ್ತಿದ್ದ ಮುಗ್ಧ ಆಗಿದ್ದರು. ‘ಹೌಸ್ ಆಫ್ ಕಲಾಂ’ನಲ್ಲಿ ಇರುವ ಫೋಟೊಗಳ ಪೈಕಿ ಕಲಾಂರ ಚಿಕ್ಕಂದಿನ ಫೋಟೊ ಎಂದರೆ ಅವರು ಕಾಲೇಜು ಸೇರುವಾಗ ತೆಗೆಸಿದ್ದು’ ಎಂದು ಸತ್ಯದ ಅನಾವರಣ ಮಾಡಿದರು..

ಯುವಕ ಕಲಾಂ ಫೋಟೊ

ಅಂದರೆ ಯಾವುದೋ ಒಂದು ಅಪರಿಚಿತ ಸಾಮಾನ್ಯ ಕುಟುಂಬದ ಗ್ರೂಪ್ ಫೋಟೊ ಈ ತಂತ್ರಜ್ಷಾನ ಕಾಲದಲ್ಲಿ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸಲು ಈ ಬರಹವನ್ನು ನಾನುಗೌರಿ.ಕಾಮ್ ಪ್ರಕಟಿಸುತ್ತಿದೆ.

ಇಲ್ಲಿ ಇಂಡಿಯಾಟುಡೇ ಕಣ್ತಪ್ಪನಿಂದ, ಜಾಗೃಣ ಸಂಸ್ಥೆ ಅಜ್ಞಾನದಿಂದ ತಪ್ಪು ಮಾಡಿರಬಹುದು, ಆದರೆ ಇದು ಬಾಲಕ ಮೋದಿ ಎಂದು ಹಬ್ಬಿಸಿರುವುದರ ಜನರನ್ನು ಕ್ಷಮಿಸಲಾಗದು. ‘ಇದೇ ಬಾಲಕ ನೋಡಿ 130 ಕೋಟಿ ಗೆದ್ದಿರುವುದು’ ಎಂದು ಹಾಕುವಾಗ ನಿಜವಾದ ಬಾಲಕ ಮೊದಿಯ ಫೋಟೊ ಹಾಕಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ.

ಪಾಪ, ಮೋದಿಯವರೆ ಅವರ ಬಾಲ್ಯದ ಕುರಿತು ಕನಫ್ಯೂಸ್ ಮಡುತ್ತ ಬಂದಿದ್ದಾರಲ್ಲ? ಭಕ್ತರೇ ಮೋದಿಯ ಬಾಲ್ಯದ ಫೋಟೊ ಸಿಗಲ್ಲ, ಆದರೆ ಯಾವುದೋ ಮಗುವಿನ, ಕುಟುಂಬದ ಫೋಟೊ ಬಳಸಬೇಡಿ. ಅಷ್ಟಾದರೂ ಸೂಕ್ಷ್ಮ ಕಲಿಯಿರಿ.
(ಆಧಾರ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...