Homeಮುಖಪುಟಭಗತ್ ಸಿಂಗ್‌ ಮತ್ತು ಆತನ ಸಂಗಾತಿಗಳ ಚಿಂತನೆಗಳ ನೆನಪು

ಭಗತ್ ಸಿಂಗ್‌ ಮತ್ತು ಆತನ ಸಂಗಾತಿಗಳ ಚಿಂತನೆಗಳ ನೆನಪು

ಇಂದು ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಹುತಾತ್ಮ ದಿನ. ಈ ಮೂವರ ಅದಮ್ಯ ಚೇತನಕ್ಕೆ ನಾವು ಗೌರವಿಸಿ , ಆದರ್ಶವಾಗಿ ಸ್ವೀಕರಿಸೋಣ. ಈ ಮಹಾತ್ಮರು ಹುಟ್ಟಿದ ನೆಲದಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಅಲ್ಲವೇ?

- Advertisement -
- Advertisement -

“ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಚಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.”

ಇಂತಹ ಕೋರಿಕೆಯ ಮಾತುಗಳು ಬ್ರಿಟೀಷ್ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೇಳಿರುವ ಕ್ರಾಂತಿಕಾರಿ ವೀರ ಯಾರು ಗೊತ್ತಾ?

ಭಗತ್ ಸಿಂಗ್…!!

ಭಾರತದ ಇತಿಹಾಸದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನವೇ ಭಗತ್ ಸಿಂಗ್. ಕೇವಲ 23 ವಯಸ್ಸಿನಲ್ಲಿ ದೇಶಕ್ಕಾಗಿ ನೇಣುಗಂಬ ಏರಿದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ ಭಗತ್ ಸಿಂಗ್ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ. ಭಗತ ‌ಸಿಂಗ್ ನ ಆದರ್ಶಗಳನ್ನು ಕೇವಲ ಹುತಾತ್ಮ ‌ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತಗೊಳಿಸುವ ಬದಲು ಆತನು ಪ್ರತಿಪಾದಿಸಿದ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳಬೇಕಿದೆ.

“ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದು ನುಡಿದ ಭಗತ್‍ಸಿಂಗ್‍ ಮಾತಿನಂತೆ  ಭಗತ್ ಸಿಂಗ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಆತನ ವಿಚಾರ, ಆದರ್ಶ ಸಿದ್ಧಾಂತ, ಕ್ರಾಂತಿಯ ಕಿಡಿಗಳು ಇಂದಿಗೂ ಜೀವಂತವಾಗಿವೆ. ಭಗತ್ ಸಿಂಗ್ ನನ್ನು ನಾವು ಕೇವಲ ‘ದೇಶಪ್ರೇಮಿ’ ‘ಹುತಾತ್ಮ’ ಎಂದು ಬಿಂಬಿಸುವ ಮೂಲಕ ಆರಾಧನೆವಷ್ಟೇ ಮಾಡುವುದಲ್ಲ. ಭಗತ್ ಸಿಂಗ್ ಎಂದರೆ ಅದೊಂದು ಕ್ರಾಂತಿಯ ಚಿಲುಮೆ, ಅಮೋಘ ಶಕ್ತಿ ಎಂದು ಅರಿಯಬೇಕು. ಭಗತ್ ಸಿಂಗ್‌ನ ಉನ್ನತ ಧ್ಯೇಯ ಮತ್ತು ಆದರ್ಶ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ. ಆತನ ಕ್ರಾಂತಿಕಾರಿ ಚಿಂತನೆಗಳನ್ನು ಮನಗಂಡು ನಾವೆಲ್ಲರೂ ಮುನ್ನಡೆಯಬೇಕಿದೆ.

ಶಾಹಿದ್ ಭಗತ್ ಸಿಂಗ್, 28ನೆಯ ಸೆಪ್ಟೆಂಬರ್ 1907ರಂದು ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಮೂರನೆಯ ಮಗನಾಗಿ. ಜನಿಸಿದನು. ದೇಶಪ್ರೇಮದ ಹಿನ್ನೆಲೆಯುಳ್ಳ ಕ್ರಾಂತಿಕಾರಿ ವಿಚಾರಧಾರೆಯ ಕುಟುಂಬದಲ್ಲಿ ಹುಟ್ಟಿದ ಭಗತನಿಗೆ ಹುಟ್ಟುತ್ತಲೇ ದೇಶಪ್ರೇಮದ ಕಿಚ್ಚು ಮೊಳಕೆಯೊಡೆಯಿತು. ಅದು 1919ರ ವೇಳೆ ಜಲಿಯಾನ್ ವಾಲ್ ಬಾಗದಲ್ಲಿ ಸಂಭವಿಸಿದ ಹತ್ಯಾಕಾಂಡ ಭಗತ್ ಸಿಂಗ್ ನಿಗೆ ಅತಿಯಾಗಿ ಕಾಡಿತ್ತು.
ಅಂದಿನ ಆ ಘಟನೆ ಭಗತ್ ಸಿಂಗ್ ನನ್ನು ಒಬ್ಬ ಅಪ್ರತಿಮ ಹೋರಾಟದ ನಾಯಕನಾಗಿ ರೂಪಿಸಿದ್ದು. ಮುಂದೆ ಬ್ರಿಟೀಷ್ ರಿಗೆ ಸಿಂಹಸ್ವಪ್ನವಾಗಿ, ಭವಿಷ್ಯ ಭಾರತದ ದಾರ್ಶನಿಕತೆಗಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ಭಗತ್ ಸಿಂಗ್ ಮಿಡಿದಿರುವುದು ಸ್ಪಷ್ಟವಾಗಿ ತೋರುತ್ತದೆ.

ಭಾರತದ ಸ್ವಾತಂತ್ರ್ಯ ಚಳುವಳಿಗೆ ಬ್ರಿಟೀಷರ ವಿರುದ್ಧ ಸಮರ ಸಾರಿರುವ ಭಗತ್‍ಸಿಂಗ್, ಮತ್ತು ಆತನ ಸಂಗಾತಿಗಳಾದ ರಾಜಗುರು ಸುಖದೇವ್ ಮೊದಲಿಗರು. ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ಸಾಮ್ರಾಜ್ಯದ ವಿರುದ್ಧ ಹೋರಾಡಲಿಲ್ಲ.ಶಾಂತಿ ಮತ್ತು ಸೌಹಾರ್ದತೆಗಾಗಿ ಹೋರಾಡಿದ ಭಗತ್ ಸಿಂಗ್ “ಭಾರತದ ನೆಲದಲ್ಲಿ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ ಸಮಾಜವಾದಿ ಗಣತಂತ್ರವನ್ನು ಸ್ಥಾಪಿಸುವವರೆಗೂ ನಮ್ಮ ಅವಿರತ ಹೋರಾಟ ದಿಟ್ಟತನದಿಂದ, ದೃಢತೆಯಿಂದ ಮತ್ತು ಅಪರಿಮಿತ ವಿಶ್ವಾಸದಿಂದ ನಡೆಯುತ್ತದೆ” ಎಂದು ಹೇಳುವ ಮೂಲಕ ಮೌಲಿಕ ಚಿಂತನೆಗಳು ಮಂಡಿಸಿದನು.

ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆ ಬಯಸಿದ ಭಗತ್ ಸಿಂಗ್ ಕ್ರಾಂತಿ ಎಂದರೆ ಕ್ರಿಯೆ , ಹಾಗೂ ಪವಿತ್ರವಾದದ್ದು ಎಂದು ತಿಳಿದಿದನು. ಸಂಘಟಿತರಾಗಿ, ವ್ಯವಸ್ಥಿತವಾದ ಕಾರ್ಯ ಯೋಜನೆಯ ಮೂಲಕ ಉದ್ದೇಶಪೂರ್ವಕವಾಗಿ ಬದಲಾವಣೆ ತರುವುದನ್ನು ಕ್ರಾಂತಿ ಎನ್ನಲಾಗುತ್ತದೆ ಎಂದು ಹೇಳಿದನು. ಕ್ರಾಂತಿಕಾರಿಗಳು ಸಂಪೂರ್ಣ ಕ್ರಾಂತಿಗಾಗಿ ಹೋರಾಡುತ್ತೇವೆ ಆದರೆ ಸಂಪ್ರದಾಯವಾದಿಗಳು ಕ್ರಾಂತಿಕಾರಿ ಶಕ್ತಿಯನ್ನು ಭಂಗಗೊಳಿಸಿ ಹೋರಾಟವನ್ನು ವಿಫಲಗೊಳಿಸುತ್ತಾರೆ. ಹಾಗಾಗಿ ಇಂತಹ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ನಾವು ಗೊಂದಲಕ್ಕೆ ಒಳಗಾಗದೇ ಧ್ಯೇಯವನ್ನು ಸಾಧಿಸಬೇಕು ಎಂದು ಎಚ್ಚರಿಸುತ್ತಾನೆ.

ಇನ್ನೂ ಭಗತ್ ಸಿಂಗ್ ಒಬ್ಬ ನಾಸ್ತಿಕವಾದಿಯೇ? ಎಂಬುದು ನಾವು ತಿಳಿದುಕೊಳ್ಳಬೇಕಿದೆ. ನಾನು ಆಸ್ತಿಕ ಹಾಗೂ ನಾಸ್ತಿಕ ಎಂಬ ಎರಡು ಗುಂಪಿಗೂ ಸೇರಿದವನಲ್ಲ. ನಾನು ಸರ್ವವ್ಯಾಪಿ, ಸರ್ವಶಕ್ತ, ಸ್ವರ್ವಾಂತರ್ಯಾಮಿ, ಸರ್ವಗ್ರಾಹಿ ದೇವರ ಅಸ್ತಿತ್ವವನ್ನೆ ನಿರಾಕರಿಸುತ್ತೇನೆಂದು ಹೇಳುತ್ತಾನೆ. ಮನುಷ್ಯ ಜೀವನದಲ್ಲಿ ದೇವರ ಶಿಕ್ಷೆ ಅಥವಾ ಉಡುಗೊರೆಯ ಬಗ್ಗೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ನಮಗೆ ಬದುಕು ಮತ್ತು ಸಾವು ಭೌತಿಕ ನೆಲೆಯಲ್ಲಿ ಮಾತ್ರವೇ ಪ್ರಸ್ತುತ ಎನಿಸುತ್ತದೆ. “ದೇವರ ಸಾಮ್ರಾಜ್ಯದಲ್ಲಿ ಎಲ್ಲವೂ ಸೌಖ್ಯವಿದೆಯೇ?” ಎಂದು ಪ್ರಶ್ನಿಸುತ್ತಾ ನಾನು ನಾಸ್ತಿಕವಾದಿ ಹಾಗೂ ವಾಸ್ತವವಾದಿಯೂ ಹೌದು ಎನ್ನುವ ನಿರ್ಧಾರಕ್ಕೆ ಬರುತ್ತಾನೆ.

“ನಾನು ನನ್ನ ಅಂತಿಮ ಕ್ಷಣಗಳು ಎದುರಾದಾಗ ನಾನು ದೇವರನ್ನು ನಂಬಲು ಆರಂಭಿಸಿದರೆ ನನ್ನ ನೈತಿಕ ಅಧಃಪತನ ಹಾಗೂ ಅವಮಾನದ ಸಂಕೇತವಾಗುತ್ತದೆ. ಇಂತಹ ಕ್ಷುಲ್ಲಕ ಸ್ವಾರ್ಥ ಉದ್ದೇಶಗಳಿಗೆ ನಾನು ದೇವರಿಗೆ ಪ್ರಾರ್ಥಿಸಲಾರೆ” ಎಂದು ಹೇಳುವ ಭಗತ್ ಸಿಂಗ್ ತಾನು ನಂಬಿರುವ ಸಿದ್ಧಾಂತಕ್ಕೆ ಅಂತಿಮವರೆಗೂ ಬದ್ಧನಾಗಿರುವುದು ಇಲ್ಲಿ ಗಮನಿಸಬಹುದು.

ಭಗತ್ ಸಿಂಗ್ ಹುತಾತ್ಮನಾಗಿ 89 ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಭಗತ್ ಸಿಂಗ್ ನನ್ನು ನಾವು ಕೇವಲ ಹುತಾತ್ಮ ದೇಶಭಕ್ತ ಎಂದೇ ಬಿಂಬಿಸಿದ್ದೇವೆ. “ಸಮಾಜವನ್ನು ನೂತನ ನೆಲೆಯಲ್ಲಿ,. ಹೆಚ್ಚು ಸಮರ್ಥವಾದ ನೆಲೆಯಲ್ಲಿ, ಪ್ರಸಕ್ತ ಆಡಳಿತ ವ್ಯವಸ್ಥೆ ಮತ್ತು ಪ್ರಭುತ್ವವನ್ನು ಕೊನೆಗೊಳಿಸಿ ವ್ಯವಸ್ಥಿತವಾಗಿ ನವ ಸಮಾಜವನ್ನು ನಿರ್ಮಿಸುವುದು ಕ್ರಾಂತಿಯ ಸ್ವರೂಪ” ಎಂದು ಹೇಳಿದ ಭಗತ್ ಸಿಂಗ್ ಚಿಂತನೆಗಳು ಇಲ್ಲವಾಗುತ್ತಿವೆ. ಆತನ ಮೂಲ ತ್ವತ್ವಾದರ್ಶ ಸಿದ್ಧಾಂತಗಳು ಮೂಲೆಗುಂಪು ಮಾಡುವ ಹುನ್ನಾರದಿಂದ ಕೇವಲ ದೇಶಭಕ್ತಿಯ ಚೌಕಟ್ಟಿನಲ್ಲಿ ಪೂಜಿಸುತ್ತಿರುವುದು ವಿಪರ್ಯಾಸವೇ ಸರಿ.

ಸಾಮಾಜಿಕ ವಿಚಾರಗಳನ್ನು ಸೇರಿದಂತೆ ಇನ್ನಿತರ ಮಹನೀಯರು ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಅನುಭವಾತ್ಮಕವಾಗಿ  ಅರ್ಥೈಸಿಕೊಳ್ಳಲು ಭಗತ್ ಸಿಂಗ್ ಇಷ್ಟಪಡುತ್ತಿದ್ದನು. ಹಾಗಾಗಿ “ಎಲ್ಲ ವಿಚಾರಗಳ ಅಧ್ಯಯನ ನಡೆಸಲು ಸೆರೆಮನೆಯೇ ಸೂಕ್ತ ತಾಣ ಎಂದು ನನಗೆ ಭಾಸವಾಗುತ್ತದೆ. ಯಾವುದೇ ವ್ಯಕ್ತಿ ಸ್ವತಃ ನೋವು ಅನುಭವಿಸಿದಲ್ಲಿ ಮಾತ್ರ‌ ಸ್ವಯಂ ಅಧ್ಯಯನ ಅತ್ಯುನ್ನತ ಹಂತ ಕಾಣಲು ಸಾಧ್ಯ” ಎಂದಾದರು. ತನ್ನ ಅಂತಿಮ ಕ್ಷಣಗಳವರೆಗೂ ಓದುವ ಹವ್ಯಾಸ ಮೈಗೂಡಿಸಿಕೊಂಡ ಭಗತ್ ಸಿಂಗ್ ಒಬ್ಬ ಉತ್ತಮ ಓದುಗ, ಬರಹಗಾರ ಕೂಡ ಹೌದು.

‘ಈ ಸಾವು ಸಹ ಬಹಳ ಸುಂದರವಾಗಿರುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ ‘ ನೋವಿನ ಹೋರಾಟದ ಬದುಕಿನ ಸಂದರ್ಭದಲ್ಲಿ ಸಾವು ಆದರ್ಶಮಯವಾಗಿ ಜೀವಂತಿಕೆ ಪಡೆಯುವುದು ಎಂದು ನುಡಿದ ಭಗತರು ಅಪ್ರತಿಮ ಧೈರ್ಯಶಾಲಿ ಆಗಿದ್ದರು.

ಸಮಕಾಲೀನ ಭಾರತದಲ್ಲಿ ಭಗತ್ ಸಿಂಗ್ ಕೇವಲ ಆರಾಧನೆಗಾಗಿ ಉಳಿದಿದ್ದಾನೆ, ಹೊರತು ಅವನು ಪ್ರತಿಪಾದಿಸಿದ ಸಿದ್ಧಾಂತ ಮಾತ್ರ ಉಸಿರಾಡಲು ನಲುಗುತ್ತಿದೆ. ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ಒದ್ದಾಡುತ್ತಿವೆ.
ನಾನು ಈ ನೆಲದ ಅಸ್ಮಿತೆಯ ಉಳಿವಿಗಾಗಿ ಹೋರಾಡಿದ ನನ್ನನ್ನು ಗುಂಡಿಕ್ಕಿ ಕೊಲ್ಲಲು ವಿನಂತಿಸಿದ ಭಾರತದ ಏಕೈಕ ದೇಶಪ್ರೇಮಿ ಭಗತ್ ಸಿಂಗ್ ನನ್ನು ‘ಭಾರತ ರತ್ನ’ ನೀಡಲು ಅರ್ಹತೆ ಅಳೆಯುತ್ತಾರೆ.

ಭಗತ್ ‌ಸಿಂಗ್, ರಾಜಗುರು ಹಾಗೂ ಸುಖದೇವ್ ಸೇರಿದಂತೆ ಅಸಂಖ್ಯಾತ ಸಂಗಾತಿಗಳನ್ನು ನಾವು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಆದರೆ ಇಂದಿನ ಯುವ ‌‌ಸಮುದಾಯವನ್ನು ಒಗ್ಗೂಡಿಸಿ ಕ್ರಾಂತಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯ ಇರುವುದು ಭಗತ್ ಸಿಂಗ್ ಚಿಂತನೆಗಳಲ್ಲಿ ಮಾತ್ರ. ಅಂದಿನ ‘ರಿಯಲ್ ಹೀರೋ’ ಗಳೇ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ. ಕಿರಿಯ ವಯಸ್ಸಲ್ಲೇ ಭಾರತದ ಭವಿಷ್ಯಕ್ಕಾಗಿ ಗಲ್ಲುಶಿಕ್ಷೆಗೆ ಗುರಿಯಾದ ಭಗತ್ ಸಿಂಗ್ ಮಾನವ ‌ಸಮಾಜಕ್ಕೆ ಆದಷ್ಟು ಹೆಚ್ಚಿನ ಸೇವೆ ಮಾಡಲು ಬಯಸಿದನು. ಭಗತ್ ಸಿಂಗ್ ಧೋರಣೆಯನ್ನು ನಮ್ಮೆಲ್ಲರ ಮನಸ್ಸಿನ ಮೇಲೆ ಅಚ್ಚಳಿಯದೆ ಪ್ರಭಾವ ಬೀರಿವೆ. ಇನ್ನೂ ನಾವು ಬಯಸಿದ ಭವಿಷ್ಯ ಭಾರತಕ್ಕೆ ಭಗತ್ ಸಿಂಗ್ ಆದರ್ಶ, ಚಿಂತನೆಗಳು ಮುನ್ನೆಲೆಗೆ ತರಲು ಪ್ರಯತ್ನಿಸೋಣ, ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿ ನಮ್ಮದಾಗಿಸೋಣ.‌

ಇಂದು ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಹುತಾತ್ಮ ದಿನ. ಈ ಮೂವರ ಅದಮ್ಯ ಚೇತನಕ್ಕೆ ನಾವು ಗೌರವಿಸಿ , ಆದರ್ಶವಾಗಿ ಸ್ವೀಕರಿಸೋಣ. ಈ ಮಹಾತ್ಮರು ಹುಟ್ಟಿದ ನೆಲದಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....