Homeಥೂತ್ತೇರಿನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ

ನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರವನ್ನ ಯುದ್ಧಮಾಡಿ ಗೆದ್ದಂತೆ ಬಿಂಬಿಸುತ್ತಿರುವ ಜಾಲತಾಣದ ಜನಿವಾರಿಗಳು 370ನೇ ವಿಧಿಯನ್ನು ನೆಹರು ಮಾಡಿದ ನೀಚ ಕೆಲಸವೆಂದು ಬಿಂಬಿಸುತ್ತಿವೆಯಲ್ಲಾ. ಅಂದು ನೆಹರೂ, ಹರಿಸಿಂಗ್ ಮುಂದಿಟ್ಟ 370ರ ಸವಲತ್ತನ್ನು ಒಪ್ಪದಿದ್ದರೆ, ಕಾಶ್ಮೀರ ಪಾಕಿಸ್ತಾನದ ಪಾಲಾಗುತ್ತಿತ್ತು ಎಂಬುದನ್ನು ಈ ಮಂದಮತಿಗಳಿಗೆ ಹೇಳುವರಾರು. ಈ ನೀಚರಿಗೆ ಮನವರಿಕೆ ಮಾಡಿಕೊಡುವ ಸಂಗತಿಗಳಾವು ಎಂದರೆ, 17 ವರ್ಷ ಜೈಲಿನಲ್ಲಿದ್ದ ನೆಹರು, ಪ್ರಧಾನಿಯಾಗಿಯೂ 17 ವರ್ಷ ಆಡಳಿತ ನಡೆಸಿದರು. ಆ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಪೂರ್ಣಗೊಂಡು ಕೈಗಾರಿಕೆ, ಆಣೆಕಟ್ಟು, ಕೃಷಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿ ಹಾಕಿದರು. ಜೊತೆಗೆ ಪ್ರಜಾಪ್ರಭುತ್ವ ಕಾಲೂರಿತು. ಅವರ ಅವಧಿಯಲ್ಲಿ ಆಗ ಲಡ್ಡಿಡಿದ ಲಾಠಿ ಬೀಸಿಕೊಂಡು ಅರೆಹೊಟ್ಟೆಯಲ್ಲೇ ಬದುಕಿದ್ದ ಬಡಜೀವಿಗಳು ಇಂದು ಭಾರತದ ಪ್ರಗತಿಯಲ್ಲಿ ಸ್ಫೋಟಿಸಿದ ಹೊಸ ಆವಿಷ್ಕಾರಗಳ ಫಲವಾದ ಜಾಲತಾಣದಲ್ಲಿ ಮುತ್ತಿಕೊಂಡು ಎಷ್ಟೇ ಮಸಲತ್ತು ನಡೆಸಿದರೂ ಪ್ರಜಾಪ್ರಭುತ್ವವಾದಿ ನಾಯಕರ ಹೆಸರನ್ನ ಅಳಿಸಲಾರವು. ಆದರೂ, ಅಂತಹ ಕೆಲಸವನ್ನ ನಿಲ್ಲಿಸಲಾರವಂತಲ್ಲಾ ಥೂತ್ತೇರಿ.

ಯಡಿಯೂರಪ್ಪನವರನ್ನು ಯಡ್ಡಿ ಎಂದು ಬರೆದವನು ಲಂಕೇಶರ ಮೆಚ್ಚಿನ ವರದಿಗಾರನಾಗಿದ್ದ ತ್ಯಾಗರಾಜ್. ನಿಜವಾಗಿ ಯಡ್ಡಿ ಎಂದರೆ ಸ್ತ್ರೀಲಿಂಗದ ಸಂಬೋಧನೆ. ಆದ್ದರಿಂದ ಯಡೂರಪ್ಪನನ್ನ ಯಡ್ಡ ಎನ್ನಬೇಕು. ಈ ಯಡ್ಡನ ಅವಧಿಯಲ್ಲಿ ಮುಗಿಲೇ ಕುಸಿದುಕೊಂಡು ಜಲಪ್ರಳಯವಾಗಿದೆ. ಇಂತಹ ಸಮಯದಲ್ಲಿ ಯಡ್ಡನ ಜಿಲ್ಲೆಯಾದ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜನಾನುರಾಗಿ ಅಧಿಕಾರಿಯ ಎತ್ತಂಗಡಿಯಾಗಿದೆಯಲ್ಲಾ. ಹಳ್ಳಿ ತಿರುಗುತ್ತಾ ಜನರ ಕಷ್ಟಸುಖ ಕೇಳುತ್ತ ನೆರವು ನೀಡುತ್ತಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಯಡ್ಡನ ಸೇಡೇ ಕಾರಣವಂತಲ್ಲಾ. ಸೇಡಿಗೆ ತುತ್ತಾದವನು ಯಾವ ಕಾಲವನ್ನ ಪರಿಗಣಿಸುವುದಿಲ್ಲ. ಅವನ ಸೇಡಿನ ಕಾಲವನ್ನಷ್ಟೇ ಪರಿಗಣಿಸುತ್ತಾನೆ. ಜನರ ಬದುಕಿನ ಬಗ್ಗೆ ಕಾಳಜಿಯಿದ್ದವನಾರು ಈ ಯಡ್ಡನ ಕೃತ್ಯ ಎಸಗಲಾರ. ಹಿಂದೊಮ್ಮೆ ಚಿಕ್ಕಮಗಳೂರು ಜಿಲ್ಲೆ ರಕ್ಷಣಾಧಿಕಾರಿಯಾಗಿದ್ದ ಮಧುಕರ ಶೆಟ್ಟರನ್ನು ಕುಮಾರಣ್ಣನ ಸರಕಾರ ಕರ್ನಾಟಕದ ಸಮಸ್ಯೆಯಂತಿದ್ದ ರಾಜ್ಯಪಾಲನ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿತ್ತು. ಅಂತ ಕುಮಾರಣ್ಣನ ಸರಕಾರ ಹೋಗಿ ಯಡ್ಡನ ಸರಕಾರ ಬಂದಿರೋದು, ಊದುವುದನ್ನ ಬಿಸಾಕಿ ಬಡಿಯುವುದನ್ನ ಹೆಗಲಿಗೆ ನೇತಾಕಿಕೊಂಡಂತಾಗಿದೆಯಲ್ಲಾ, ಥೂತ್ತೇರಿ!

ಜಲಪ್ರಳಯದೆದುರು ಏಕಾಂಗಿ ವೀರನಾಗಿ ಈಜುತ್ತಿರುವ ಎಡೂರಪ್ಪನವರು ಕಷ್ಟಪಟ್ಟು ಸೈರಣಿಯನ್ನ ಕಾಪಾಡಿಕೊಂಡು ಬರುತ್ತಿದ್ದಾರಂತಲ್ಲಾ. ಗೃಹ ಸಚಿವರು ಮತ್ತು ಹಣಕಾಸಿನ ಸಚಿವರು ಬಂದುಹೋದರೂ, ಬಿಡಿಗಾಸಿನ ನೆರವಿನ ಆಶ್ವಾಸನೆಯೂ ಬಾರದಿರುವಾಗ ನಮ್ಮ ರಾಘವೇಂದ್ರ ಮಠದ ಜಗದ್ಗುರುಗಳು “ಹೆದರಬೇಡಿ ಚಾತುರ್ಮಾಸ ಮುಗಿಸಿ ಪ್ರತ್ಯಕ್ಷನಾಗುತ್ತೇನೆ, ಅಷ್ಟರವರೆಗೂ ಯಾರೂ ಮುಳುಗಬೇಡಿ. ಅಕಸ್ಮಾತ್ ಮುಳುಗಿದರೂ ತೇಲುತ್ತಿರಿ, ನಾನು ಬರುತ್ತೇನೆ” ಎಂದು ಆಶ್ವಾಸನೆ ಕೊಟ್ಟಿದ್ದಾರಲ್ಲಾ. ಸಾವುಗಳ ಸಂದರ್ಭದಲ್ಲಿ ಹಾಸ್ಯ ಮಾಡುವುದು ಅಮಾನವೀಯವಾದರೂ ಇಲ್ಲೊಂದು ಪ್ರಕರಣ ನೋಡಿ ಹೇಗೆ ಸುಮ್ಮನಿರುವುದು. ಕೇವಲ ಒಂದೂವರೆ ಅಡಿ ಮೊಳಕಾಲುದ್ದ ನೀರಿನಲ್ಲಿ ಬೋಟಿನಲ್ಲಿ ಹುಟ್ಟು ಹಾಕುತ್ತಾ ಆ ಬೋಟನ್ನ ಎಳೆಸಿಕೊಂಡು ಬಂದು ಟಿವಿಗಳ ಕಡೆ ನೋಡಿ “ಸಾಕ” ಎಂದು ಕೇಳಿದ ಹೊನ್ನಾಳಿ ರೇಣುಕಾಚಾರಿ ಇಡೀ ನಾಡಿನಲ್ಲಿ ನಗೆಯುಕ್ಕಿಸಿದ್ದಾನಲ್ಲಾ. ಅಂದು ಯಡ್ಡಿಯನ್ನ ಬ್ಲಾಕ್‍ಮೇಲ್ ಮಾಡಿ ಮಂತ್ರಿಯಾಗಿದ್ದ ರೇಣುಕಾಚಾರಿ ಇಂದು ಮೊಣಕಾಲುದ್ದ ನೀರಿನಲ್ಲಿ ಹುಟ್ಟುಹಾಕಿ ದೋಣಿ ನಡಿಸಿ ಅದನ್ನ ಮಂತ್ರಿಗಿರಿ ಯೋಗ್ಯತೆಗೆ ಸರ್ಟಿಫಿಕೇಟ್ ಮಾಡಿಕೊಳ್ಳಲಿದ್ದಾನಂತಲ್ಲಾ, ಥೂತ್ತೇರಿ!

ಮುನಿರತ್ನನ ಮಹತ್ವಾಕಾಂಕ್ಷೆಯ ಕುರುಕ್ಷೇತ್ರ ಬಿಡುಗಡೆಯಾಗಿದೆ. ಪರಿಣಾಮ ಮಂಡ್ಯ, ಮದ್ದೂರು, ಮಳವಳ್ಳಿ, ರಾಮನಗರದಲ್ಲಿ ಡಿ ಬಾಸ್ ದರ್ಶನ್ ಕಟೌಟುಗಳನ್ನು ಹಗಲುರಾತ್ರಿ ನಮ್ಮ ಪೊಲೀಸರು ಕಾಯ್ದರಂತಲ್ಲಾ! ಯಾಕೆಂದು ವಿಚಾರಿಸಿದರೆ, ಕುಮಾರಣ್ಣನ ಅಭಿಮಾನಿಗಳು ಡಿ.ಬಾಸ್‍ನ ಕಟೌಟುಗಳನ್ನು ಪುಡಿಮಾಡಿಯಾರೆಂಬ ಮುನ್ನೆಚ್ಚರಿಕೆಯಾಗಿತ್ತು. ಮಂಡ್ಯದ ಚುನಾವಣಾ ಅಖಾಡಕ್ಕೆ ಕುಮಾರಣ್ಣ ಮಗ ನಿಖಿಲ್‍ನನ್ನ ನಿಲ್ಲಿಸಿದ್ದರು. ಎದುರಾಳಿ ಸುಮಲತಾ ಪರವಾಗಿ ದರ್ಶನ್ ಬಂದಿದ್ದರು. ಆಗ ಸಿಟ್ಟಾದ ಕುಮಾರಣ್ಣ `ಯೆಂತದದು ಡಿಬಾಸ್, ಸಿನುಮಾದಲ್ಲಿ ಡಿಬಾಸಾಗಬವುದು, ಜನಗಳ ಮಧ್ಯೆ ಡಿಬಾಸಾಗಕ್ಕಾಗಲ್ಲ’ ಎಂದು ಮೂದಲಿಸಿದ್ದರು. ಈ ಮಾತಿನ ಪರಿಣಾಮ ಏನಾಗಿದೆಯೆಂದರೆ ಕುಮಾರಣ್ಣನ ಅಭಿಮಾನಿಗಳಿರುವ ಕಡೆ ದರ್ಶನ್, ಯಶ್ ನಟಿಸಿರುವ ಚಿತ್ರಗಳ ಹಾಡನ್ನು ಕೇಳಲು ಅಡ್ಡಿಯಾಗಿದೆಯಂತಲ್ಲಾ. ಕನ್ನಡ ಚಿತ್ರರಂಗ ಮತ್ತು ಸಿನಿಮಾರಂಗ ಜೊತೆಯಾಗಿಯೇ ಹೆಜ್ಜೆ ಹಾಕಿದ ಇತಿಹಾಸ ನಮ್ಮದು. ರಾಜಕಾರಣಿಗಳು, ಅದರಲ್ಲೂ ಮುಖ್ಯಮಂತ್ರಿಯಾದವರು ನಾಲ್ಕು ದಿಕ್ಕನ್ನು ಯೋಚಿಸಿ ಮಾತನಾಡಬೇಕು. ಇಲ್ಲವಾದರೆ ಜಾತ್ಯತೀತರ ಅಭಿಮಾನಿಗಳು ಫ್ಯಾಸಿಸ್ಟ್ ಪುರೋಹಿತರಾಗುವ ಅಪಾಯವಿದೆಯಂತಲ್ಲಾ, ಥೂತ್ತೇರಿ!

ಹಳ್ಳಿಕಡೆ ನಾಟಕ ಆಡಲು ತೀರ್ಮಾನ ಮಾಡಿದಾಗ ನಾನೇ ಕೌರವ, ನೀನೇ ಕಿಸ್ಣ, ಅವುನೇ ಅರ್ಜುನ, ಯಾರ ತಂಟಿಗೂ ಹೋಗದಂಗಿರೋ ಇವುನೇ ಧರ್ಮರಾಯ ಎಂದು ಪಾತ್ರ ಹಂಚಿಕೊಂಡು ಪ್ರಾಕ್ಟಿಸ್ ಶುರುಮಾಡಿದಂತೆ, ನಮ್ಮ ಮುನಿರತ್ನನ ಕುರುಕ್ಷೇತ್ರ ಕಂಗೊಳಿಸಿದೆಯಲ್ಲಾ. ಮುಖ್ಯವಾಗಿ ಶ್ರಮಜೀವಿಯಲ್ಲದ ಸೋಮಾರಿ ದೇಹಾಕೃತಿಯ ಕೃಷ್ಣ, ಮುನಿರತ್ನನ ಕುರುಕ್ಷೇತ್ರದಲ್ಲಿ ಬ್ಲೋ ಹೊಡೆಸಿಕೊಂಡಂತೆ ಊದಿಕೊಂಡಿದ್ದಾನಲ್ಲಾ. ನೋಡಿದಕೂಡಲೇ ನಗೆಯುಕ್ಕಿಸುವ ಈ ಭಗವಂತ ರವಿಚಂದ್ರನಂತೆ! ಈ ಕೃಷ್ಣನ ಕುರಿತು ಯೋಚಿಸುವಾಗ ಮುನಿರತ್ನನ ರಾಜಕಾರಣದ ವರಸೆ ಅರಿವಾಗತೊಡಗಿತು. ರಾಜರಾಜೇಶ್ವರಿನಗರದಲ್ಲಿ ಚುನಾವಣೆಗೆ ನಿಂತಿದ್ದಾಗ ವಿಪರೀತ ಅಕ್ರಮವೆಸಗಿದ ಆಪಾದನೆಯಲ್ಲಿ ಚುನಾವಣೆ ಮುಂದೆಹೋಯ್ತು. ನಂತರದ ಚುನಾವಣೆಯಲ್ಲಿ ಜೆಡಿಎಸ್‍ನವರು ಈತನೆದುರು ಕಾಂಡೇಟ್ ಹಾಕಿದ್ದರು. ಆದರೆ ಮುನಿರತ್ನ ಮಂಡ್ಯದಲ್ಲಿ ಕುಮಾರಣ್ಣನ ಜೊತೆ ಕಾಣಿಸಿಕೊಂಡರು. ಅದಾದ ನಂತರ ಕುಮಾರಣ್ಣನನ್ನ ಇಳಿಸುವ ಸಂಚಿನ ಟೀಮಿನ ಮೂಂಚೂಣಿಯಲ್ಲಿ ಕಾಣಿಸಿಕೊಂಡರು. ವಾಸ್ತವದಲ್ಲಿ ಮುನಿರತ್ನನೇ ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ ಮಾಡಬಹುದಿತ್ತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. According to kumarsway and devegowda and neharu done lot of thing my dear come and ask our narth karnataka people what neharu did if sharada patel is not there where we would be, writing black letter is easy understand the inner pain why such words comes,

  2. Neharu paravaagi vakalattu vahiskondu matadta iddiralla. Nijavaglu Nehru ge Harisingh nanta ondu praantada raajana sharattugalige hediyante oppikollabekada anivaaryate ittenri? Indian military use madkollalikke aagta ilvenri? Sardar Patel Nijamara aadalita dallidda hyderabad na hengri India ge sersidru? Yuddha viraamada avashyakate itta? UNO ge tegedukond hogbekada avashyakate itta? Ulida kshetradalli Nehru madiro saadhanegalanna oppikoltene. Swatantrya bandanta sandarbha, abhivraddhi ge jasti scope irutte, abhivraddhi aagide aa time alli illa anta alla. Aadre Nehru kelavondu history kshamisalaarada tappugalannu madiddare annodu ashte satya.

  3. ವಿವೇಕಾನಂದ ಅವರೇ,
    ತಾವು ಹೇಳಿರುವಂತೆ ರಾಜಾ ಹರಿಸಿಂಗ್ ಅವರು article 370 ಯನ್ನು ಅಳವಡಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಭಾರತದಲ್ಲಿ ವಿಲೀನಗೊಳಿಸಲಿಲ್ಲ. ಬದಲಾಗಿ ಅವರು ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕೆಂದಿದ್ದರು. ಆದರೆ ಪಾಕಿಸ್ತಾನ ಬುಡಕಟ್ಟು ಜನರನ್ನು ಬಳಸಿಕೊಂಡು ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. (ಆಗಲೇ ಪಿಒಕೆ ಹುಟ್ಟಿದ್ದು.) ಆಗ ರಾಜಾ ಹರಿಸಿಂಗರು ಭಾರತದಲ್ಲಿ ವಿಲೀನವಾಗಲು ಸಮ್ಮತಿಸಿ ಪತ್ರವನ್ನು ಕೊಟ್ಟರು. ಇದು ಐತಿಹಾಸಿಕ ಸತ್ಯ.

  4. Vivekanand,Please read “My days with Nehru “& “Reminiscences of the Nehru age” by M O Mathai,Nehru’s PA for many years.You will come to know the real face of Nehru

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...