Homeಕರ್ನಾಟಕಇತಿಹಾಸ ಮರೆತ 'ಟಿಪ್ಪುವಿನ ಹಿಂದೂ ವೀರಸಂಗಾತಿಗಳು'

ಇತಿಹಾಸ ಮರೆತ ‘ಟಿಪ್ಪುವಿನ ಹಿಂದೂ ವೀರಸಂಗಾತಿಗಳು’

- Advertisement -
- Advertisement -
| ಇಸ್ಮತ್ ಪಜೀರ್ |
ಮೇ 04, 1799 ರಂದು ಕನ್ನಡ ನಾಡಿನ ಅಪ್ರತಿಮ ವೀರ, ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹುತಾತ್ಮನಾದ ದಿನ.

ಟಿಪ್ಪು ಸುಲ್ತಾನನ ಕೊನೆಯ ಯುದ್ಧ ಅರ್ಥಾತ್ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಇಂಚಿಂಚೂ ಬಿಡದೆ ಬ್ರಿಟಿಷ್ ಮತ್ತು ಫ್ರೆಂಚ್ ಇತಿಹಾಸಕಾರರು ಪ್ರತಿಯೊಂದನ್ನೂ ದಾಖಲಿಸಿದ್ದಾರೆ. ಟಿಪ್ಪುವಿನ ಬಗ್ಗೆ ಅತ್ಯಂತ ಮಹತ್ವದ ಚಾರಿತ್ರಿಕ ಕಾದಂಬರಿ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಬರೆದ ಭಗವಾನ್ ಶ್ಯಾಮದಾಸ್ ಗಿದ್ವಾನಿ ಅದಕ್ಕಾಗಿ ಅತೀ ಹೆಚ್ಚು ಅಧ್ಯಯನ ನಡೆಸಿದ್ದು ಫ್ರೆಂಚ್ ಮತ್ತು ಬ್ರಿಟಿಷ್ ಇತಿಹಾಸ ಗ್ರಂಥಗಳನ್ನಾಗಿದೆ. ಗಿದ್ವಾನಿ ಬರೆದಿದ್ದು ಒಂದು ಚಾರಿತ್ರಿಕ ಕಾದಂಬರಿಯಾದರೂ  ಅವರು ಅದಕ್ಕೆ ಮಸಾಲೆ ತುಂಬಿಸುವ ಕೆಲಸ ಮಾಡಿಲ್ಲ ಎಂಬುವುದಕ್ಕೆ ಅವರು ಬಳಸಿದ ದಾಖಲೆಗಳೇ ಸಾಕ್ಷ್ಯ ಒದಗಿಸುತ್ತವೆ.

ನಮ್ಮಲ್ಲಿ ಒಂದೋ ಟಿಪ್ಪುವನ್ನು ಅತಿಯಾಗಿ ವೈಭವೀಕರಿಸಲಾಗುತ್ತದೆ ಅಥವಾ ಅತಿಯಾಗಿ ದೂಷಿಸಲಾಗುತ್ತದೆ. ಇವೆರಡರ ಮಧ್ಯೆ ಹುದುಗಿರುವ ಸತ್ಯಗಳು ಅನೇಕ ಸಂದರ್ಭಗಳಲ್ಲಿ ಮಸುಕಾಗಿಬಿಡುವ ಸಾಧ್ಯತೆಗಳಿವೆ. ನಾವು ಟಿಪ್ಪುವಿಗೆ ದ್ರೋಹ ಬಗೆದ ಪೂರ್ಣಯ್ಯ ಮತ್ತು ಮೀರ್ ಸಾದಿಖರನ್ನು ಋಣಾತ್ಮಕ ಕಾರಣಗಳಿಗಾಗಿಯಾದರೂ ಆಗಾಗ ನೆನಪಿಸಿಕೊಳ್ಳುತ್ತೇವೆ‌ ಆದರೆ ಟಿಪ್ಪುವಿಗಾಗಿ ಮತ್ತು ನಾಡಿಗಾಗಿ ಹೋರಾಡಿ ವೀರಮರಣವನ್ನಪ್ಪಿದ  ಅದೆಷ್ಟೋ ಮಂದಿಗಳ ಹೆಸರು ಇತಿಹಾಸ ಗರ್ಭದಲ್ಲಿ ಹೂತು ಹೋಗಿವೆ. ಹಾಗೆ ಹುತಾತ್ಮರಾದ ಇಬ್ಬರು ವೀರಯೋಧರ ಕೊನೆಯ ಕ್ಷಣದ ಹೋರಾಟದ ಝಲಕ್ ಗಳನ್ನು ಇಲ್ಲಿ ದಾಖಲಿಸುತ್ತೇನೆ.

ಮೀರ್ ಸಾದಿಖ್ ಮತ್ತು ಆತನ ರಾಜದ್ರೋಹಿ ಬಂಟರು ಮೈಸೂರಿನ ಸೈನಿಕರಿಗೆ ” ಸುಲ್ತಾನರು ಬ್ರಿಟಿಷರೊಂದಿಗೆ ಸಂಧಾನ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ” ಎಂದು ಸುಳ್ಳು ಹೇಳಿ ಅವರನ್ನು ಯುದ್ಧದಿಂದ ಹಿಂದೆ ಸರಿಸಿದರು.

ಅದಾಗಲೇ ಟಿಪ್ಪುವಿಗೆ ಮೀರ್ ಸಾದಿಖನ ರಾಜದ್ರೋಹದ ವರ್ತಮಾನ ಸಿಕ್ಕಿತ್ತು. ಮೀರ್ ಸಾದಿಖ ಬ್ರಿಟೀಷರು ಟಿಪ್ಪುವಿನ  ಕೋಟೆಯೊಳಗಡೆ ಸುಲಭವಾಗಿ ನುಸುಳಿ ಬರಲು ಅನುವಾಗುವಂತೆ ಮಾಡಿಕೊಟ್ಟಿದ್ದ.(ಕೋಟೆಯೆಂದರೆ ಒಂದು ‍ಚಿಕ್ಕ ಆವರಣ ಗೋಡೆಯಲ್ಲ, ಅದು ಬೃಹತ್ ವಿಸ್ತೀರ್ಣದ ಆವರಣ ಕೋಟೆ) ಬ್ರಿಟೀಷರು ಕೋಟೆಯೊಳಗೆ ನುಗ್ಗಿ ಬರುವ ಹೊತ್ತಿಗೆ ಟಿಪ್ಪುವಿನ ಸನಿಹ ಇದ್ದದ್ದು ಆತನ ವೈದ್ಯ ರಾಜಾ ಖಾನ್ ಮತ್ತು ಓರ್ವ ಯುವ ಯೋಧ ಮಾತ್ರ. ಇದ್ದಕ್ಕಿದ್ದಂತೆ ಟಿಪ್ಪುವಿನ ಸನಿಹಕ್ಕೆ ತಲಪಿದ ಕೆಲವು ಬ್ರಿಟಿಷ್ ಯೋಧರು ಟಿಪ್ಪುವನ್ನು ನೇರವಾಗಿ ಕೊಚ್ಚಿ ಕೊಲ್ಲಬಯಸಿದ್ದರು. ಅವರು ಇನ್ನೇನು ಟಿಪ್ಪುವಿನ ಮೇಲೆರಗಬೇಕು ಎನ್ನುವಷ್ಟರಲ್ಲಿ ಮೈಸೂರಿನ ಆ ವೀರ ಯುವ ಯೋಧ ಮಿಂಚಿನ ವೇಗದಲ್ಲಿ ತಲವಾರು ಬೀಸಿ ಇಬ್ಬರು ಬ್ರಿಟಿಷ್ ಸೈನಿಕರ ರುಂಡ ಚೆಂಡಾಡಿಯೇ ಬಿಟ್ಟ. ಅಲ್ಲಿಗೆ ಬಂದಿದ್ದ ಉಳಿದ ಬ್ರಿಟಿಷ್ ಸೈನಿಕರು ಆ ಇಬ್ಬರನ್ನು ಅಲ್ಲೇ ಬಿಟ್ಟು ಓಟಕಿತ್ತರು. ಶಹಭಾಸ್ ಮಗನೇ, ಇಂದು ನನ್ನ ಇಡೀ ಸೈನ್ಯವೆಂದರೆ ನೀನೇ.. ನಿನ್ನ ಹೆಸರೇನು ಮಗನೇ ಎಂದು ಟಿಪ್ಪು ಪ್ರಶ್ನಿಸಿದ. ಅಷ್ಟರಲ್ಲಿ ದೂರದಿಂದ ಹಾರಿ ಬಂದ ಗುಂಡೊಂದು ಆ ವೀರಯೋಧನ ಎದೆ ಸೀಳಿತು. ಟಿಪ್ಪು ಉರುಳಿ ಬಿದ್ದ ಯೋಧನನ್ನು ತಬ್ಬಿಕೊಂಡ. ಆತ ಟಿಪ್ಪುವಿನ ಬಾಹುಗಳಲ್ಲೇ ಹುತಾತ್ಮನಾದ. ಆ ವೀರಯೋಧ ಟಿಪ್ಪುವಿಗೆ ದ್ರೋಹ ಬಗೆದಿದ್ದ ಅಂಚೆಮಂತ್ರಿ ಶ್ಯಾಮಯ್ಯನ ಮಗ.

ಮೀರ್ ಸಾದಿಖನ ಕೊರಳ್ ಕೊಯ್ದ ವೀರಯೋಧ ಶೇಖರ:
ಕೋಟೆಯ ತುಂಬಾ ಹಾಲಾಹಲವೆದ್ದಿತ್ತು. ಒಂದೆಡೆ ಯುದ್ಧದಲ್ಲಿ ಗಾಯಗೊಂಡ ವೀರಯೋಧ ಶೇಖರ ಮರಣಶಯ್ಯೆಯಲ್ಲಿದ್ದ. ಅಲ್ಲಿಗೆ ದ್ರೋಹಿ ಮೀರ್ ಸಾದಿಖ ದ್ರೋಹಿಗಳು ಮತ್ತು ಬ್ರಿಟಿಷ್ ಸೈನಿಕರೊಂದಿಗೆ ಬಂದ. ಯೋಧ ಶೇಖರನ್ನುದ್ದೇಶಿಸಿ ಮೀರ್ ಸಾದಿಖ ಪ್ರಶ್ನಿಸಿದ “ಸುಲ್ತಾನರೆಲ್ಲಿ”?
ಆತ ನೆಲದಲ್ಲಿ ಬಿದ್ದಲ್ಲಿಂದಲೇ ಕೈ ಸನ್ನೆಮಾಡಿ ಮೀರ್ ಸಾದಿಕನನ್ನು ಬಳಿ ಕರೆದ. ಶೇಖರ್ ಸುಲ್ತಾನರ ಸಂದೇಶ ನನ್ನ ಜೇಬಲ್ಲಿದೆ ತೆಗೆಯಿರಿ ಎಂದ. ಮೀರ್ ಸಾಧಿಕ್ ಶೇಖರನ ಜೇಬಿಗೆ ಕೈ ಹಾಕಲು ಬಾಗಿದ. ಆತ ತಡಮಾಡದೇ ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಖಡ್ಗದಿಂದ ದ್ರೋಹಿ ಮೀರ್ ಸಾದಿಖನ ಕೊರಳು ಕೊಯ್ದೇ ಬಿಟ್ಟ. ಮೀರ್ ಸಾದಿಕ್ ನಾಯಿಯಂತೆ ಸತ್ತು ಬಿದ್ದರೆ ವೀರಯೋಧ ಶೇಖರ್ ನೆಮ್ಮದಿಯಿಂದ ಕೊನೆಯುಸಿರೆಳೆದ.
ಇಂತಹ ಇನ್ನೂ ಅನೇಕ ಹಿಂದೂ ಯೋಧರು  ಕೊನೆಯುಸಿರಿನವರೆಗೂ ಹೋರಾಡಿ ರಣರಂಗದಲ್ಲಿ ವೀರಮರಣವನ್ನಪ್ಪಿದ್ದಾರೆ. ಸಂಘ ಪರಿವಾರ ಅಪಪ್ರಚಾರ ಮಾಡುತ್ತಿರುವಂತೆ ಆತ ‘ಹಿಂದೂ ವಿರೋಧಿ, ಮತಾಂಧ, ದೇವಾಲಯ ಭಂಜಕ, ಮತಾಂತರಿ ಟಿಪ್ಪು’ವೇ ಆಗಿದ್ದರೆ, ಅದು ಸಾಧ್ಯವಿರುತ್ತಿರಲಿಲ್ಲ. ಇಂತಹ ವೀರಯೋಧರ ಸಾಹಸಗಳು ಇತಿಹಾಸದ  ಪುಟಗಳಿಂದ ಮಾಸಿಹೋಗಿರುವುದು ಇತಿಹಾಸದ ಕ್ರೂರ ವ್ಯಂಗ್ಯವೇ ಸರಿ.

ಆಧಾರ : ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...